ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav

ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ ಅವರ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಮಿತಿಯು ಎರಡು ರಾಜ್ಯಗಳಿಗೆ 1,043.23 ಕೋಟಿ ರೂ.ಗಳ ಹೆಚ್ಚುವರಿ ಕೇಂದ್ರ ನೆರವು ನೀಡಲು ಅನುಮೋದನೆ ನೀಡಿದೆ.


ರಾಜಸ್ಥಾನ ಮತ್ತು ನಾಗಾಲ್ಯಾಂಡ್ 2021-22 ರಲ್ಲಿ ಸಂಭವಿಸಿದ ಬರಕ್ಕೆ ಈ ನಿಧಿಯನ್ನು ಪಡೆಯಲಿವೆ

प्रविष्टि तिथि: 16 JUN 2022 2:55PM by PIB Bengaluru

ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ ಅವರ ಅಧ್ಯಕ್ಷತೆಯಲ್ಲಿನ ಉನ್ನತ ಮಟ್ಟದ ಸಮಿತಿ (ಎಚ್ಎಲ್ ಸಿ) 2021-22ರಲ್ಲಿ ಬರದಿಂದ ಬಾಧಿತವಾದ ಎರಡು ರಾಜ್ಯಗಳಿಗೆ ರಾಷ್ಟ್ರೀಯ ವಿಪತ್ತು ಸ್ಪಂದನಾ ನಿಧಿ (ಎನ್ ಡಿ ಆರ್ ಎಫ್) ಅಡಿಯಲ್ಲಿ ಹೆಚ್ಚುವರಿ ಕೇಂದ್ರದ ನೆರವನ್ನು ಅನುಮೋದಿಸಿದೆ.

ಎನ್.ಡಿ.ಆರ್.ಎಫ್.ನಿಂದ ಎರಡು ರಾಜ್ಯಗಳಿಗೆ 1,043.23 ಕೋಟಿ ರೂ.ಗಳ ಹೆಚ್ಚುವರಿ ಕೇಂದ್ರ ನೆರವನ್ನು ಎಚ್.ಎಲ್.ಸಿ. ಅನುಮೋದಿಸಿತು:

ರಾಜಸ್ಥಾನಕ್ಕೆ 1,003.95 ಕೋಟಿ ರೂ.

ನಾಗಾಲ್ಯಾಂಡ್ ಗೆ 39.28 ಕೋಟಿ ರೂ.

ಈ ಹೆಚ್ಚುವರಿ ನೆರವು ಈಗಾಗಲೇ ರಾಜ್ಯಗಳ ವಶದಲ್ಲಿರುವ ರಾಜ್ಯ ವಿಪತ್ತು ಸ್ಪಂದನಾ ನಿಧಿಯಲ್ಲಿ (ಎಸ್.ಡಿ.ಆರ್.ಎಫ್.) ಕೇಂದ್ರವು ರಾಜ್ಯಗಳಿಗೆ ಬಿಡುಗಡೆ ಮಾಡುವ ಹಣಕ್ಕಿಂತ ಹೆಚ್ಚಾಗಿದೆ. 2021-22ರ ಆರ್ಥಿಕ ವರ್ಷದಲ್ಲಿ. ಕೇಂದ್ರ ಸರ್ಕಾರವು 28 ರಾಜ್ಯಗಳಿಗೆ ಎಸ್ ಡಿಆರ್ ಎಫ್ ನಲ್ಲಿ 17,747.20 ಕೋಟಿ ರೂ.ಗಳನ್ನು ಮತ್ತು 11 ರಾಜ್ಯಗಳಿಗೆ 7,342.30 ಕೋಟಿ ರೂ.ಗಳನ್ನು ಎನ್ ಡಿ ಆರ್ ಎಫ್ ನಿಂದ ಬಿಡುಗಡೆ ಮಾಡಿದೆ.

 

****


(रिलीज़ आईडी: 1834703) आगंतुक पटल : 184
इस विज्ञप्ति को इन भाषाओं में पढ़ें: Punjabi , English , Urdu , हिन्दी , Tamil