ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಜರ್ಮನಿಯಲ್ಲಿ ಭಾರತೀಯ ಸಮುದಾಯದೊಂದಿಗೆ ಸಂವಾದ ನಡೆಸಿದ ಪ್ರಧಾನಮಂತ್ರಿ

ಪ್ರಕಟಣಾ ದಿನಾಂಕ: 03 MAY 2022 12:01AM by PIB Bengaluru

ಬರ್ಲಿನ್ ನ ಆಮ್ ಪೋಟ್ಸ್ಡಾಮರ್ ಪ್ಲಾಟ್ಸ್ ನ ರಂಗಮಂದಿರದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಾರತೀಯ ಸಮುದಾಯವನ್ನುದ್ದೇಶಿಸಿ ಮಾತನಾಡಿದರು ಮತ್ತು ಸಂವಾದ ನಡೆಸಿದರು.

ವಿದ್ಯಾರ್ಥಿಗಳು, ಸಂಶೋಧಕರು ಮತ್ತು ವೃತ್ತಿಪರರು ಒಳಗೊಂಡಂತೆ ಸುಮಾರು 1600 ಕ್ಕೂ ಹೆಚ್ಚು ಉಜ್ವಲ ಭಾರತೀಯ ಸಮುದಾಯದವರು ಕಾರ್ಯಕ್ರಮದಲ್ಲಿ  ಭಾಗಿಯಾಗಿದ್ದರು.  

ಜರ್ಮನಿಯ ಆರ್ಥಿಕತೆ ಮತ್ತು ಸಮಾಜಕ್ಕೆ ಭಾರತೀಯರ ಕೊಡುಗೆಯನ್ನು ಉಲ್ಲೇಖಿಸಿದ ಪ್ರಧಾನಮಂತ್ರಿ ಅವರು, ಭಾರತದ ಉತ್ಪನ್ನಗಳನ್ನು ಜಾಗತಿಕವಾಗಿ ಉತ್ತೇಜಿಸುವ “ವೋಕಲ್ ಫಾರ್ ಲೋಕಲ್ “ ಉಪಕ್ರಮಕ್ಕೆ ಕೊಡುಗೆ ನೀಡುವಂತೆ ಹುರಿದುಂಬಿಸಿದರು.

***


(ಪ್ರಕಟಣೆ ಐ.ಡಿ.: 1822351) ವಿಸಿಟರ್ ಕೌಂಟರ್ : 200