ಹಣಕಾಸು ಸಚಿವಾಲಯ

ಮೊದಲನೇ ಭಾರತ-ಯುಕೆ ಹಣಕಾಸು ಮಾರುಕಟ್ಟೆಗಳ ಸಂವಾದದ ಜಂಟಿ ಹೇಳಿಕೆ

Posted On: 09 JUL 2021 9:52AM by PIB Bengaluru

ಭಾರತ ಮತ್ತು ಯುನೈಟೆಡ್ ಕಿಂಗ್‌ಡಮ್ (ಯುಕೆ) ಭಾರತ-ಯುಕೆ ಹಣಕಾಸು ಮಾರುಕಟ್ಟೆಗಳ ಸಂವಾದದ (‘ಸಂವಾದ’) ಉದ್ಘಾಟನಾ ಸಭೆಯನ್ನು ವರ್ಚುವಲ್‌ ಆಗಿ ನಿನ್ನೆ ಸಂಜೆ ನಡೆಸಿತು. ಹಣಕಾಸು ಕ್ಷೇತ್ರದಲ್ಲಿ ದ್ವಿಪಕ್ಷೀಯ ಸಂಬಂಧಗಳನ್ನು ಗಾಢವಾಗಿಸಲು 2020 ಅಕ್ಟೋಬರ್‌ನಲ್ಲಿ 10 ನೇ ಆರ್ಥಿಕ ಮತ್ತು ಆರ್ಥಿಕ ಸಂವಾದದಲ್ಲಿ (ಇಎಫ್‌ಡಿ) ಪ್ರಾರಂಭಿಸಲಾಯಿತು. ಇತ್ತೀಚೆಗೆ ನಡೆದ ಎರಡೂ ದೇಶಗಳ ಪ್ರಧಾನ ಮಂತ್ರಿಗಳ ಸಭೆಯಲ್ಲಿ ಉಭಯ ದೇಶಗಳು ಅಳವಡಿಸಿಕೊಂಡ 2030 ಮಾರ್ಗಸೂಚಿಯ ಪ್ರಮುಖ ಆಧಾರ ಸ್ತಂಭಗಳಲ್ಲಿ ಹಣಕಾಸು ಸಹಕಾರವೂ ಒಂದು ಮತ್ತು ಭಾರತ-ಯುಕೆ ಹಣಕಾಸು ಮಾರುಕಟ್ಟೆ ಸಂವಾದವು ಹಣಕಾಸು ಸಹಕಾರದ ಪ್ರಮುಖ ಅಂಶಗಳಲ್ಲಿ ಒಂದಾಗಿದೆ. ಎರಡು ಸೇವೆಗಳು ಆರ್ಥಿಕತೆಯನ್ನು ನಡೆಸುತ್ತಿರುವುದರಿಂದ, ಭಾರತ ಮತ್ತು ಯುಕೆ ನಡುವೆ ಆರ್ಥಿಕ ಸೇವೆಗಳ ಸಹಕಾರಕ್ಕೆ ಮಹತ್ವದ ಅವಕಾಶವಿದೆ ಎಂದು ಎರಡೂ ಕಡೆಯವರು ಒಪ್ಪಿಕೊಂಡರು.

ಭಾರತೀಯ ಹಣಕಾಸು ಮತ್ತು ಯು.ಕೆ.ಖಜಾನೆ ವಿಭಾಗದ ಹಿರಿಯ ಅಧಿಕಾರಿಗಳು ಸಂವಾದದ ನೇತೃತ್ವ ವಹಿಸಿದ್ದರು, ಭಾರತೀಯ ಮತ್ತು ಯುಕೆ ಸ್ವತಂತ್ರ ನಿಯಂತ್ರಕ ಸಂಸ್ಥೆಗಳಾದ ರಿಸರ್ವ್ ಬ್ಯಾಂಕ್, ಸೆಕ್ಯುರಿಟೀಸ್ ಅಂಡ್ ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ, ಇಂಟರ್ನ್ಯಾಷನಲ್ ಫೈನಾನ್ಷಿಯಲ್ ಸರ್ವೀಸಸ್ ಸೆಂಟರ್ ಪ್ರಾಧಿಕಾರ, ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ, ಬ್ಯಾಂಕ್ ಆಫ್ ಇಂಗ್ಲೆಂಡ್ ಮತ್ತು ಹಣಕಾಸು ನಡವಳಿಕೆ ಪ್ರಾಧಿಕಾರದ ಪ್ರತಿನಿಧಿಗಳೊಂದಿಗೆ ಸಂವಾದವನ್ನು ಮುನ್ನಡೆಸಲಾಯಿತುಭಾರತ ಮತ್ತು ಯುಕೆ ದೇಶದ ಭಾಗವಹಿಸುವವರು ತಮ್ಮ ಜವಾಬ್ದಾರಿಯ ಕ್ಷೇತ್ರಗಳಲ್ಲಿನ ಸಮಸ್ಯೆಗಳ ಕುರಿತು ಅಭಿಪ್ರಾಯಗಳನ್ನು ಹಂಚಿಕೊಂಡರು.

ಉಭಯ ಸರ್ಕಾರಗಳು ಚರ್ಚೆಯನ್ನು ನಾಲ್ಕು ವಿಷಯಗಳನ್ನು ಕೇಂದ್ರೀಕರಿಸಿ ಪ್ರಾರಂಭಿಸಿದವು   (1)ಗಿಫ್ಟ್ (ಗುಜರಾತ್ ಇಂಟರ್ನ್ಯಾಷನಲ್ ಫೈನಾನ್ಸ್ ಟೆಕ್-ಸಿಟಿ) ನಗರ - -  ಭಾರತದ ಪ್ರಮುಖ ಅಂತರರಾಷ್ಟ್ರೀಯ ಹಣಕಾಸು ಕೇಂದ್ರ,  (2) ಬ್ಯಾಂಕಿಂಗ್ ಮತ್ತು ಪಾವತಿಗಳು, (3) ವಿಮೆ, ಮತ್ತು (4) ) ಬಂಡವಾಳ ಮಾರುಕಟ್ಟೆಗಳು.   ಸರ್ಕಾರಗಳು ನಡೆಸಿದ ಚರ್ಚೆಯ ನಂತರ ಖಾಸಗಿ ವಲಯದ ಪಾಲುದಾರರನ್ನು ಚರ್ಚೆಗೆ ಆಹ್ವಾನಿಸಲಾಯಿತು. ಸಿಟಿ ಆಫ್ ಲಂಡನ್ ಕಾರ್ಪೊರೇಶನ್‌ನ ಕ್ಯಾಪಿಟಲ್ ಮಾರ್ಕೆಟ್ಸ್ ವರ್ಕಿಂಗ್ ಗ್ರೂಪ್ ಭಾರತೀಯ ಕಾರ್ಪೊರೇಟ್ ಬಾಂಡ್ ಮಾರುಕಟ್ಟೆಯಲ್ಲಿ ತಮ್ಮ ಕೆಲಸವನ್ನು ಪ್ರಸ್ತುತಪಡಿಸಿತು, ಮತ್ತು ಭಾರತ-ಯುಕೆ ಹಣಕಾಸು ಸಹಭಾಗಿತ್ವವು ಯುಕೆ-ಇಂಡಿಯಾ ಹಣಕಾಸು ಸೇವೆಗಳ ಸಂಬಂಧದ ಕುರಿತು ತಮ್ಮ ಶಿಫಾರಸುಗಳನ್ನು ಮಂಡಿಸಿತು.

ಸಭೆಯಲ್ಲಿ, ಭಾರತ ಮತ್ತು ಯುಕೆ ದೇಶಗಳ ಭಾಗವಹಿಸುವವರು ಯುಕೆ-ಇಂಡಿಯಾ ಗಿಫ್ಟ್ ಸಿಟಿ ಪಾಲುದಾರಿಕೆಯ ಪ್ರಗತಿಯ ಬಗ್ಗೆ ಚರ್ಚಿಸಿದರು. ಕೇಂದ್ರದಲ್ಲಿ ಹೆಚ್ಚಿದ ಯುಕೆ ಉದ್ಯಮದ ಉಪಸ್ಥಿತಿಯನ್ನು ಬೆಂಬಲಿಸುವ ಉದ್ದೇಶದಿಂದ ಸುಸ್ಥಿರ ಹಣಕಾಸು ಮತ್ತು ಫಿನ್‌ಟೆಕ್ ಸೇರಿದಂತೆ ಹೆಚ್ಚಿನ ಸಹಯೋಗಕ್ಕಾಗಿ ಎರಡೂ ಕಡೆಯವರು ಒಪ್ಪಿಕೊಂಡರು.

ಪ್ರದೇಶದಲ್ಲಿ ಗಡಿಯಾಚೆಗಿನ ಚಟುವಟಿಕೆಯನ್ನು ಹೆಚ್ಚಿಸುವ ಉದ್ದೇಶದಿಂದ ಭಾಗವಹಿಸಿದವರು ಆಯಾ ಬ್ಯಾಂಕಿಂಗ್ ಮತ್ತು ಪಾವತಿಯ ಕುರಿತು ತಾಜಾ ಮಾಹಿತಿಯನ್ನು ಒದಗಿಸಿದರು. ಬ್ಯಾಂಕ್ ಆಫ್ ಇಂಗ್ಲೆಂಡ್ ಸೈಬರ್  ಸ್ಥಿತಿ  ಕುರಿತು ತನ್ನ ಕೆಲಸದ ಬಗ್ಗೆ ಚರ್ಚಿಸಿತು. ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ಸ್ಥಿರತೆಯನ್ನು ಕಾಪಾಡುವಲ್ಲಿ ಬ್ಯಾಂಕಿಂಗ್ ವಲಯವು ವಹಿಸಿರುವ ಪ್ರಮುಖ ಪಾತ್ರವನ್ನು ಎರಡೂ ಕಡೆಯವರು ಗುರುತಿಸಿದರು.

ಭಾಗವಹಿಸಿದವರು ವಿಮಾ ಕ್ಷೇತ್ರಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಚರ್ಚಿಸಿದರು, ಇದರಲ್ಲಿ ಕೋವಿಡ್ -19 ಪರಿಣಾಮದ ಕುರಿತು ದೇಶೀಯ ಮಾಹಿತಿಗಳು, ಭಾರತೀಯ ಮಾರುಕಟ್ಟೆಯಲ್ಲಿ ಯುನೈಟೆಡ್ ಕಿಂಗ್‌ಡಮ್ ಹೂಡಿಕೆಯನ್ನು ಹೆಚ್ಚಿಸಲು ಪ್ರೋತ್ಸಾಹಿಸುವ ಅವಕಾಶಗಳು ಮತ್ತು ಯುಕೆ ಸಾಲ್ವೆನ್ಸಿ II ಕಾಲ್ ಫಾರ್ ಎವಿಡೆನ್ಸ್ ಸೇರಿದ್ದವು.

ಭಾಗವಹಿಸಿದವರು ಬಂಡವಾಳ ಮಾರುಕಟ್ಟೆಗಳ ಸಹಕಾರದ ಸ್ಥಿತಿಗತಿಯನ್ನು ಸಹ ಪರಿಗಣಿಸಿದರು. ಸಗಟು ಮಾರುಕಟ್ಟೆಗಳ ವಿಮರ್ಶೆ ಮತ್ತು ಲಾರ್ಡ್ ಹಿಲ್ ಲಿಸ್ಟಿಂಗ್ ರಿವ್ಯೂ ಸೇರಿದಂತೆ ನಿಯಂತ್ರಕ ಸುಧಾರಣೆಗಳ ಪ್ರಗತಿಯನ್ನು ಯುಕೆ ವಿವರಿಸಿದೆನೇರ ಪಟ್ಟಿಗಳ ನೀತಿಯ ಅನುಷ್ಠಾನದ ಕುರಿತು ಭಾರತದಿಂದ ನವೀಕರಣ ಸೇರಿದಂತೆ ಗಡಿಯಾಚೆಗಿನ ಚಟುವಟಿಕೆಯ ಅವಕಾಶಗಳ ಬಗ್ಗೆ ಫಲಪ್ರದವಾದ ಚರ್ಚೆಯೂ ನಡೆಯಿತು.

ಮುಂದಿನ ತಿಂಗಳುಗಳಲ್ಲಿ ಕ್ಷೇತ್ರಗಳಲ್ಲಿ ದ್ವಿಪಕ್ಷೀಯವಾಗಿ ತೊಡಗಿಸಿಕೊಳ್ಳಲು ಎರಡೂ ಕಡೆಯವರು ಒಪ್ಪಿಕೊಂಡರು, ಮುಂದಿನ ಇಎಫ್‌ಡಿ ಮತ್ತು ಭವಿಷ್ಯದ ಭಾರತ-ಯುಕೆ ಎಫ್‌ಟಿಎಗಾಗಿ ಮಾತುಕತೆಗಳ ಆರಂಭ ,   ಎರಡೂ ವರ್ಷದ ಕೊನೆಯಲ್ಲಿ ನಡೆಯುವ ನಿರೀಕ್ಷೆಯಿದೆ.

ನೀತಿ ಅಭಿವೃದ್ಧಿಗೆ ಕೊಡುಗೆ ನೀಡುವಲ್ಲಿ ಕಳೆದ ಇಎಫ್‌ಡಿಯ ನಂತರ ಸಾಧಿಸಿದ ಮಹತ್ವದ ಪ್ರಗತಿಯನ್ನು ವಿಶೇಷವಾಗಿ ಜಿಐಎಫ್‌ಟಿ (ಗಿಫ್ಟ್) ಸಿಟಿ ಮತ್ತು ಯುಕೆ ಹಣಕಾಸು ಸೇವೆಗಳ ಪರಿಸರ ವ್ಯವಸ್ಥೆಯ ನಡುವೆ ಹೆಚ್ಚಿನ ಸಂಪರ್ಕವನ್ನು ಉತ್ತೇಜಿಸುವ ಸಹಭಾಗಿತ್ವದ ಪ್ರಯತ್ನಗಳನ್ನು ಗಮನಿಸಿ ಭಾಗವಹಿಸಿದವರು ಭಾರತ-ಯುಕೆ ಹಣಕಾಸು ಸಹಭಾಗಿತ್ವದ (ಐಯುಕೆಎಫ್‌ಪಿ) ನಾಯಕರನ್ನು ಸ್ವಾಗತಿಸಿದರು. ಮುಂದಿನ ಯುಕೆ-ಇಂಡಿಯಾ ಫಿನ್‌ಟೆಕ್ ಜಂಟಿ ಕಾರ್ಯ ಸಮೂಹ ಸಭೆಯಲ್ಲಿ ಪಾಲುದಾರಿಕೆಯ ಫಿನ್‌ಟೆಕ್‌ವರ್ಕ್‌ಸ್ಟ್ರೀಮ್‌ನೊಂದಿಗೆ ಔಪಚಾರಿಕವಾಗಿ ಸಹಕರಿಸಲು ಮತ್ತು ಮುಂದಿನ ಇಎಫ್‌ಡಿ ಮತ್ತು ಗಿಫ್ಟ್ ಸಿಟಿ, ಫಿನ್‌ಟೆಕ್ ಮತ್ತು ಗಡಿಯಾಚೆಗಿನ ವ್ಯಾಪಾರ ಮತ್ತು ಹೂಡಿಕೆಯ ಕುರಿತು ನೀತಿ ದಸ್ತಾವೇಜುಗಳನ್ನು ಪ್ರಾರಂಭಿಸಲು ಎರಡೂ ಕಡೆಯವರು ಎದುರು ನೋಡುತ್ತಿದ್ದಾರೆ.

ಅಂತಿಮವಾಗಿ, ಸಿಟಿ ಆಫ್ ಲಂಡನ್ ಕಾರ್ಪೊರೇಷನ್ ಇಂಡಿಯಾ-ಯುಕೆ ಕ್ಯಾಪಿಟಲ್ ಮಾರ್ಕೆಟ್ಸ್ ವರ್ಕಿಂಗ್ ಗ್ರೂಪ್ ಇತ್ತೀಚೆಗೆ ಪ್ರಕಟಿಸಿದಭಾರತೀಯ ಸಾಲ ಬಂಡವಾಳ ಮಾರುಕಟ್ಟೆಗಳ ಸಾಮರ್ಥ್ಯದ ಅನಾವರಣಕುರಿತು ತನ್ನ ಶಿಫಾರಸುಗಳನ್ನು ಮಂಡಿಸಿತು. ವರದಿಯು ಭಾರತೀಯ ಸಾಲ ಬಂಡವಾಳ ಮಾರುಕಟ್ಟೆಗಳ  ವ್ಯವಸ್ಥೆಯನ್ನು ಹೆಚ್ಚಿಸುವುದರ ಮೇಲೆ ಕೇಂದ್ರೀಕರಿಸಿದೆ, ಜೊತೆಗೆ ಭಾರತೀಯ ಕಂಪನಿಗಳಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಬಂಡವಾಳವನ್ನು ಸಂಗ್ರಹಿಸುವುದು ಸುಲಭವಾಗಿಸುತ್ತದೆಇದರ ಉದ್ದೇಶ ಭಾರತದ ಬೆಳವಣಿಗೆಯ ಸಾಮರ್ಥ್ಯ, ಮೂಲಸೌಕರ್ಯ ಅಗತ್ಯಗಳನ್ನು ಬೆಂಬಲಿಸಲು ಮತ್ತು ದೇಶದ ಸುಸ್ಥಿರ ಇಂಧನ ಸಾಮರ್ಥ್ಯವನ್ನು ಹೆಚ್ಚಿಸುವುದುಪ್ರಾಥಮಿಕ ವಿತರಣೆಗಳು, ದ್ವಿತೀಯ ಮಾರುಕಟ್ಟೆಗಳು, ತೆರಿಗೆ ನಿಯಮಗಳು, ಮಾರುಕಟ್ಟೆ ಪರಿಸರ ವ್ಯವಸ್ಥೆ ಮತ್ತು ಇಎಸ್‌ಜಿಗೆ ಸುಧಾರಣೆಗಳು ಮುಂತಾದ ಕ್ಷೇತ್ರಗಳು ಶಿಫಾರಸುಗಳಲ್ಲಿ ಸೇರಿವೆ.

***



(Release ID: 1734171) Visitor Counter : 256