ಸಿಬ್ಬಂದಿ, ಸಾರ್ವಜನಿಕ ಅಹವಾಲು ಮತ್ತು ಪಿಂಚಣಿ ಸಚಿವಾಲಯ

ಫಲಾಯನಗೈದ ಆರ್ಥಿಕ ಅಪರಾಧಿಗಳು ಮತ್ತು ಆಸ್ತಿಗಳ ಸವಾಲು ಎದುರಿಸಲು ಬಲಿಷ್ಠ ಮತ್ತು ಸಂಘಟಿತ ಅಂತಾರಾಷ್ಟ್ರೀಯ ಸಹಕಾರಕ್ಕೆ ಭಾರತ ಕರೆ


ಭ್ರಷ್ಟಾಚಾರ ನಿಗ್ರಹ ಮತ್ತು ನಿಯಂತ್ರಣಕ್ಕೆ ಅಂತಾರಾಷ್ಟ್ರೀಯ ಸಹಕಾರ ಬಲವರ್ಧನೆ ಕ್ರಮಗಳು ಮತ್ತು ಸವಾಲುಗಳ ಕುರಿತು ವಿಶ್ವಸಂಸ್ಥೆಯ ಮಹಾಸಭೆಯ ವಿಶೇಷ ಅಧಿವೇಶನ ಉದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವ ಡಾ. ಜಿತೇಂದ್ರ ಸಿಂಗ್

Posted On: 05 JUN 2021 7:00PM by PIB Bengaluru

          ರಾಷ್ಟ್ರೀಯ ವ್ಯಾಪ್ತಿಗಳನ್ನು ದಾಟಿ ಫಲಾಯನಗೈದ ಆರ್ಥಿಕ ಅಪರಾಧಿಗಳು ಮತ್ತು ಆಸ್ತಿಗಳಿಗೆ ಸಂಬಂಧಿಸಿದಂತೆ ಎದುರಾಗುತ್ತಿರುವ ಗಂಭೀರ ಸವಾಲುಗಳನ್ನು ವಿಶ್ವ ಸದ್ಯ ಎದುರಿಸುತ್ತಿದೆ ಎಂಬ ಅಂಶವನ್ನು ಭಾರತ ಇಂದು  ಸ್ಪಷ್ಟವಾಗಿ ಮಂಡಿಸಿದೆ. ಭಾರತದ ಆರ್ಥಿಕ ಅಪರಾಧಿಗಳ ಕಾಯ್ದೆ 2018 ಪ್ರಕಾರ ಪ್ರಾಧಿಕಾರಗಳಿಗೆ  ಶಿಕ್ಷೆಯ ಆಧಾರವಿಲ್ಲದೆ ಆಸ್ತಿ ಜಪ್ತಿ ಮತ್ತು ಅಪರಾಧ ಪ್ರಕರಣಗಳಲ್ಲಿ ಮುಂದುವರಿಯಲು ಅವಕಾಶ ನೀಡುತ್ತದೆ ಮತ್ತು ಫಲಾಯನಗೈದ ಆರ್ಥಿಕ ಅಪರಾಧಿಗಳು ಅಂದರೆ ಭಾರತದ ಯಾವುದೇ ನ್ಯಾಯಾಲಯದಿಂದ ನಿರ್ದಿಷ್ಟ ಅಪರಾಧದಡಿ ಬಂಧನ ವಾರಂಟ್ ಎದುರಿಸುತ್ತಿರುವವರು ಮತ್ತು ಯಾರು ಕ್ರಿಮಿನಲ್ ಪ್ರಾಸಿಕ್ಯೂಶನ್ ಅಥವಾ ನ್ಯಾಯಾಂಗ ಪ್ರಕ್ರಿಯೆಯಿಂದ ತಪ್ಪಿಸಿಕೊಳ್ಳಲು ದೇಶವನ್ನು ತೊರೆದಿದ್ದಾರೋ ಅಂತಹವರ ಆಸ್ತಿ-ಪಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಅಧಿಕಾರವಿದೆ. 

          ಭ್ರಷ್ಟಾಚಾರದ ವಿರುದ್ಧ ಕ್ರಮಗಳು ಮತ್ತು ಸವಾಲುಗಳ ಕುರಿತಂತೆ ವಿಶ್ವ ಸಂಸ್ಥೆಯ ಮಹಾಸಭೆಯ(ಯುಎನ್ ಜಿಎ)ಯ ವಿಶೇಷ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವ ಡಾ. ಜಿತೇಂದ್ರ ಸಿಂಗ್ ಅವರು, ದೇಶೀಯ ಕಾನೂನು ವ್ಯವಸ್ಥೆ ಮತ್ತು ಅಂತಾರಾಷ್ಟ್ರೀಯ ನಿಬಂಧನೆಗಳಿಗೆ ಅನುಗುಣವಾಗಿ ಅಂತಹ ವ್ಯಕ್ತಿಗಳು ಮತ್ತು ಆಸ್ತಿಗಳನ್ನು ವಾಪಸ್ ಗಾಗಿ ಬಲಿಷ್ಠ ಮತ್ತು ಸಂಘಟಿತ ಅಂತಾರಾಷ್ಟ್ರೀಯ ಸಹಕಾರ ಅಗತ್ಯವಿದೆ ಎಂದು ಕರೆ ನೀಡಿದರು. ಆರೋಪಿಗಳು ವಿದೇಶಗಳಲ್ಲಿ ಆಶ್ರಯ ಪಡೆಯುತ್ತಿದ್ದಾರೆ ಮತ್ತು ಅಪರಾಧದ ಪ್ರಕ್ರಿಯೆಯಿಂದ ತಪ್ಪಿಸಿಕೊಂಡು ನಾನಾ ರಾಷ್ಟ್ರಗಳು ಮತ್ತು ವ್ಯಾಪ್ತಿಗಳಲ್ಲಿ ಸಂಕೀರ್ಣ ಕಾನೂನು ವ್ಯವಸ್ಥೆಗಳನ್ನು ಸೃಷ್ಟಿಸುತ್ತಿದ್ದಾರೆ, ಈ ವಿಚಾರದಲ್ಲಿ ಅಂತಾರಾಷ್ಟ್ರೀಯ ಸಹಕಾರದ ದೌರ್ಬಲ್ಯಗಳು ಮತ್ತು ಕೊರತೆಗಳನ್ನು ಅಪರಾಧಿಗಳು ಸಂಪೂರ್ಣವಾಗಿ ದುರ್ಬಳಕೆ ಮಾಡಿಕೊಂಡು ತಮ್ಮಅನುಕೂಲಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂದರು.

ಭ್ರಷ್ಟಾಚಾರವನ್ನು ನಿಗ್ರಹಿಸುವುದು ಮತ್ತು ನಿಯಂತ್ರಿಸುವ ಕುರಿತು ವಿಶ್ವಸಂಸ್ಥೆಯ ರಾಜಕೀಯ ಘೋಷಣೆಯನ್ನು ಅನುಮೋದಿಸುವ ಮೂಲಕ ಎಲ್ಲ ಹಂತಗಳಲ್ಲಿ ಪ್ರಯತ್ನಗಳನ್ನು ತೀವ್ರಗೊಳಿಸುವುದು, ಸುಸ್ಥಿರ ರಾಜಕೀಯ ಬದ್ಧತೆ ಮತ್ತು ನಿರ್ಣಾಯಕ ಕ್ರಿಯೆಗಳಿಂದಾಗಿ ಸರಿಯಾದ ದಿಕ್ಕಿನಲ್ಲಿ ಹೋರಾಟವನ್ನು ಮುನ್ನಡೆಸಿಕೊಂಡು ಹೋಗುವ ಎಲ್ಲ ದೇಶಗಳಿಗೆ ಭಾರತ ತನ್ನ ಮೆಚ್ಚುಗೆಯನ್ನು ವ್ಯಕ್ತಪಡಿಸಿತು.           ಭಾರತ ಸಾಧ್ಯವಾದಷ್ಟು ಮಟ್ಟಿಗೆ ಕಾನೂನು ನೆರವನ್ನು ಒದಗಿಸುತ್ತಿದೆ ಮತ್ತು ತನ್ನ ದೇಶೀಯ ಕಾನೂನುಗಳನ್ನು ಬಲವರ್ಧನೆಗೊಳಿಸಿರುವುದೇ ಅಲ್ಲದೆ, ಅಂತಾರಾಷ್ಟ್ರೀಯ ಸಂಸ್ಥೆಗಳು ಮತ್ತು ಒಪ್ಪಂದ ಮಾಡಿಕೊಳ್ಳುವ ರಾಜ್ಯಗಳ ನಡುವೆ ಅಂತಾರಾಷ್ಟ್ರೀಯ ಸಹಕಾರದ ವ್ಯಾಪ್ತಿಯನ್ನು ವಿಸ್ತರಿಸಿದೆ ಎಂದು ಅವರು ಹೇಳಿದರು.

        ಕೊರೊನಾ ನಮ್ಮ ತಾಳ್ಮೆಯನ್ನು ಪರೀಕ್ಷಿಸುತ್ತಿರುವ ಮತ್ತು ದುಃಖವನ್ನು ಸಹಿಸಿಕೊಳ್ಳುವಲ್ಲಿ ನಮ್ಮೆಲ್ಲರ ಮಿತಿಗಳನ್ನು ಪರೀಕ್ಷಿಸುತ್ತಿರುವ ವೇಳೆ ಯುಎನ್ ಜಿಎ ಅಧಿವೇಶನ ನಡೆಯುತ್ತಿದೆ ಎಂದು ಡಾ. ಜಿತೇಂದ್ರ ಸಿಂಗ್ ಹೇಳಿದರು.  ಕಳೆದ ದಿನಗಳಲ್ಲಿ, ಈ ಬಿಕ್ಕಟ್ಟನ್ನು ಎದುರಿಸಲು ಭಾರತವು ಅಸಂಖ್ಯಾತ ಕ್ಷೇತ್ರಗಳ ತಜ್ಞರ ಸಮನ್ವಯ ಸಾಧಸಿದೆ ಮತ್ತು ಸುಸ್ಥಿರ ಕೋವಿಡ್-19 ನಿರ್ವಹಣೆಗೆ ತಜ್ಞರು ಮತ್ತು ವಿಜ್ಞಾನಿಗಳ ಸಲಹೆಗೆ ಆದ್ಯತೆ ನೀಡಲಾಗುತ್ತಿದೆ ಎಂದರು. ಅಲ್ಲದೆ ದೇಶ ಪರೀಕ್ಷೆ, ಪತ್ತೆ, ಚಿಕಿತ್ಸೆ, ಕೋವಿಡ್ ಸೂಕ್ತ ನಡವಳಿಕೆ ಮತ್ತು ಲಸಿಕೆ ನೀಡುವಿಕೆ ಈ ಐದು ಹಂತದ ಕಾರ್ಯತಂತ್ರವನ್ನು ಅನುಷ್ಠಾನಗೊಳಿಸುತ್ತಿದ್ದು, ಇದರಿಂದಾಗಿ ಸಾಂಕ್ರಾಮಿಕ ಹರಡುವುದನ್ನು ನಿಯಂತ್ರಿಸಲು ಸಾಧ್ಯವಾಗುತ್ತಿದೆ ಎಂದು ಹೇಳಿದರು.

        ಸಾಂಕ್ರಾಮಿಕ ನೋವಿನ ಜೊತೆಗೆ ಎಲ್ಲ ಹಂತಗಳಲ್ಲಿ ಭ್ರಷ್ಟಾಚಾರದ ವಿರುದ್ಧ ಹೋರಾಡಲು ಅಲ್ಪಾವಧಿ ಮತ್ತು ದೀರ್ಘಾವಧಿಯ ಅನಿರೀಕ್ಷಿತ ಸವಾಲುಗಳನ್ನು ತಂದೊಡ್ಡಿದೆ ಎಂದು ಡಾ. ಜಿತೇಂದ್ರ ಸಿಂಗ್ ಹೇಳಿದರು. ಅಲ್ಲದೆ ಇದು ಸಂಪನ್ಮೂಲಗಳ ವಿತರಣೆಯನ್ನು ಗಣನೀಯವಾಗಿ –ದುರ್ಬಲಗೊಳಿಸುತ್ತದೆ, ನಮ್ಮ ಪುನರ್ ನಿರ್ಮಾಣ ಪ್ರಕ್ರಿಯೆಗಳಿಗೆ ಅಪಾಯವನ್ನುಉಂಟು ಮಾಡುತ್ತಿದೆ, ಆರ್ಥಿಕ ಒತ್ತಡ ವಿಸ್ತರಿಸುತ್ತದೆ ಮತ್ತು ಪ್ರಗತಿಗೆ ವಾಪಸ್ಸಾಗುವುದು ವಿಳಂಬವಾಗುತ್ತಿದೆ ಎಂದು ಹೇಳಿದರು. ಭ್ರಷ್ಟಾಚಾರ ನಿಗ್ರಹ ಮತ್ತು ನಿಯಂತ್ರಣಕ್ಕೆ ಅಂತಾರಾಷ್ಟ್ರೀಯ ಸಹಕಾರ ಬಲವರ್ಧನೆಗೆ ಎಲ್ಲರೂ ಒಗ್ಗೂಡುವುದಕ್ಕೆ ಇದು ಅತ್ಯಂತ ಸೂಕ್ತ ಸಮಯ ಎಂದು ಸಚಿವರು ಹೇಳಿದರು.

        ಭಾರತವು ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಶೂನ್ಯ ಸಹಿಷ್ಣುತೆ ನೀತಿಯನ್ನು ಅನುಸರಿಸುತ್ತಿದೆ ಮತ್ತು ನಮ್ಮ ಪ್ರಧಾನಮಂತ್ರಿಯವರು ಪಾರದರ್ಶಕತೆ ಮತ್ತು ನಾಗರಿಕ ಕೇಂದ್ರಿತ ಆಡಳಿತಕ್ಕೆ ಒತ್ತು ನೀಡಿ ‘ಕನಿಷ್ಠ ಸರ್ಕಾರ – ಗರಿಷ್ಠ ಆಡಳಿತ’ ನೀತಿಯನ್ನು ನೀಡಿದ್ದು, ಅದೇ ಭಾರತ ಸರ್ಕಾರದ ಧ್ಯೇಯವನ್ನಾಗಿ ಅನುಸರಿಸುತ್ತಿದೆ ಎಂದು ಡಾ. ಜಿತೇಂದ್ರ ಸಿಂಗ್ ಹೇಳಿದರು. ನಗರಗಳು ಹಾಗೂ ಪಟ್ಟಣಗಳಾದ್ಯಂತ ಸ್ಥಳೀಯ ಸರ್ಕಾರಗಳೊಂದಿಗೆ ನಿರ್ಧಾರ ಕೈಗೊಳ್ಳುವುದು ಮತ್ತು ಸಮುದಾಯಗಳನ್ನು ವಿಕೇಂದ್ರೀಕರಣಗೊಳಿಸುವ ಉದ್ದೇಶದಿಂದ, ನಾಗರಿಕರ ಜೀವನೋಪಾಯದ ಮೇಲೆ ಪರಿಣಾಮ ಬೀರುವ ಎಲ್ಲ ವಲಯಗಳಲ್ಲಿ ಡಿಜಿಟಲ್ ಉಪಕರಣಗಳನ್ನು ಬಳಸಿ ನವೀನ ಪರಿಹಾರಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಹೇಳಿದರು.

        ಭಾರತ ಈಗಾಗಲೇ ಅತಿ ಹೆಚ್ಚಿನ ಪ್ರಮಾಣದ ಡಿಜಿಟಲ್ ವಹಿವಾಟುಗಳ ಮೂಲಕ ಇಡೀ ಜಗತ್ತಿನಲ್ಲಿ ಡಿಜಿಟಲ್ ವಲಯದ ಪಥದಲ್ಲಿ ಮುಂಚೂಣಿಯಲ್ಲಿದೆ ಎಂದು ಸಚಿವರು ಹೇಳಿದರು. ತಂತ್ರಜ್ಞಾನ ಬಳಕೆಯಿಂದಾಗಿ ಸಹಾಯ ಮಾಡುವ ವೇಗ ಹೆಚ್ಚಾಗಿದೆ ಮತ್ತು ಭಾರತದಲ್ಲಿ ಜನರಿಗೆ ಸವಲತ್ತುಗಳ ವಿತರಣೆಯಲ್ಲಿ ಆಗುತ್ತಿದ್ದ ಸೋರಿಕೆ ತಪ್ಪಿದೆ. ಬಯೋಮೆಟ್ರಿಕ್ ಐಡಿ ಕಾರ್ಡ್ ಗಳ ಜೊತೆಗೆ ಬ್ಯಾಂಕ್ ಖಾತೆ ಮತ್ತು ಮೊಬೈಲ್ ಸಂಖ್ಯೆಗಳನ್ನು ಜೋಡಣೆ ಮಾಡಿರುವುದರಿಂದ ಈ ವ್ಯವಸ್ಥೆಯು ಲಕ್ಷಾಂತರ ನಾಗರಿಕರಿಗೆ ತಕ್ಷಣದ  ನೇರ ನಗದು ಪ್ರಯೋಜನಗಳ ಮೂಲಕ ಸುರಕ್ಷತೆಯನ್ನು ಒದಗಿಸಲಾಗಿದೆ.

          ಗುಡ್ಡಗಾಡು ಪ್ರದೇಶಗಳಲ್ಲಿ ಆರೋಗ್ಯ ರಕ್ಷಣಾ ಅಗತ್ಯಗಳನ್ನು ಪೂರೈಸುವುದರಿಂದ ಹಿಡಿದು ಆರೋಗ್ಯಕ್ಕೆ ಸಂಬಂಧಿಸಿದಂತೆ ದತ್ತಾಂಶ ಆಧರಿತ ಸಾರ್ವಜನಿಕ ನೀತಿ ರೂಪಿಸುವುದು ತಂತ್ರಜ್ಞಾನ ಬಳಕೆ ಹಲವು ಪಾತ್ರಗಳನ್ನು ನಿರ್ವಹಿಸುತ್ತಿದೆ ಮತ್ತು ಬಹುಮುಖ್ಯವಾಗಿ ದೇಶದ ಗುಡ್ಡಗಾಡು ಪ್ರದೇಶಗಳಿಗೆ ನೆರವಾಗುತ್ತಿದೆ ಎಂದು ಸಚಿವರು ಹೇಳಿದರು.

ಡಾ. ಜಿತೇಂದ್ರ ಸಿಂಗ್ ಅವರು ತಮ್ಮ ಭಾಷಣವನ್ನು ಮುಕ್ತಾಯಗೊಳಿಸುತ್ತಾ, ವಿಶೇಷವಾಗಿ ಬಿಕ್ಕಟ್ಟಿನ ಈ ಸಂದರ್ಭದಲ್ಲಿ ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡುವ ಹೋರಾಟಕ್ಕೆ ವೇಗದ ಮತ್ತು ದೃಢ ಬದ್ಧತೆ ವ್ಯಕ್ತವಾಗಬೇಕು ಎಂದು ಆಶಿಸಿದರು ಹಾಗೂ ಅದಕ್ಕಾಗಿ ಭಾರತ ಇತರೆ ರಾಷ್ಟ್ರಗಳು, ನಾಗರಿಕ ಸಮಾಜ ಮತ್ತು ಅಂತಾರಾಷ್ಟ್ರೀಯ ಸಂಸ್ಥೆಗಳ ಜೊತೆಗೂಡಿ ಭ್ರಷ್ಟಾಚಾರ ವಿರೋಧಿ ತತ್ವಗಳನ್ನು ತ್ವರಿತವಾಗಿ ಅನುಷ್ಠಾನಗೊಳಿಸುವ ಕಾರ್ಯಕ್ಕೆ ಸಿದ್ಧವಿದೆ ಎಂದು ತಿಳಿಸಿದರು. 

*****



(Release ID: 1724857) Visitor Counter : 275