ಗೃಹ ವ್ಯವಹಾರಗಳ ಸಚಿವಾಲಯ

ಮಾರಿಷಸ್ ಗಣರಾಜ್ಯದ ಮಾಜಿ ಅಧ್ಯಕ್ಷರು ಮತ್ತು ಮಾಜಿ ಪ್ರಧಾನಿ ಸರ್ ಅನಿರುದ್ ಜಗನ್ನಾಥ್ ಅವರ ನಿಧನಕ್ಕೆ ಗೌರವದ ಸಂಕೇತವಾಗಿ ನಾಳೆ ಒಂದು ದಿನದ ರಾಷ್ಟ್ರೀಯ ಶೋಕಾಚರಣೆ

Posted On: 04 JUN 2021 7:35PM by PIB Bengaluru

ಮಾರಿಷಸ್ ಗಣರಾಜ್ಯದ ಮಾಜಿ ಅಧ್ಯಕ್ಷ ಮತ್ತು ಮಾಜಿ ಪ್ರಧಾನಿ ಸರ್ ಅನಿರುದ್ ಜಗನ್ನಾಥ್ ನಿಧನರಾಗಿದ್ದಾರೆ. ಅಗಲಿದ ಗಣ್ಯರಿಗೆ ಗೌರವ ಸೂಚಕವಾಗಿ, ಭಾರತದಾದ್ಯಂತ ನಾಳೆ ಒಂದು ದಿನದ ರಾಷ್ಟ್ರೀಯ ಶೋಕಾಚರಣೆ ಆಚರಿಸಲು ಭಾರತ ಸರಕಾರ ನಿರ್ಧರಿಸಿದೆ.

ಶೋಕಾಚರಣೆಯ ದಿನದಂದು ರಾಷ್ಟ್ರಧ್ವಜವನ್ನು ಒಳಗೊಂಡ ಎಲ್ಲಾ ಕಟ್ಟಡಗಳ ಮೇಲೆ ತ್ರಿವರ್ಣ ಧ್ವಜವನ್ನು ಅರ್ಧಸ್ತಂಭ ಮಟ್ಟದಲ್ಲಿ ಹಾರಿಸಲಾಗುವುದು. ಅಂದು ಯಾವುದೇ ಸರಕಾರಿ ಮನರಂಜನೆ ಕಾರ್ಯಕ್ರಮಗಳು ಇರುವುದಿಲ್ಲ.

***



(Release ID: 1724576) Visitor Counter : 146