ರೈಲ್ವೇ ಸಚಿವಾಲಯ

ಆಕ್ಸಿಜನ್ ಎಕ್ಸ್ ಪ್ರೆಸ್ ಗಳು ದಕ್ಷಿಣದ ರಾಜ್ಯಗಳಿಗೆ 10000 ಮೆ.ಟನ್-ಗಳಿಗೂ ಹೆಚ್ಚು ಎಲ್ಎಂಒ ವಿತರಣೆಯನ್ನು ಮಾಡಿವೆ


ಆಕ್ಸಿಜನ್ ಎಕ್ಸ್ ಪ್ರೆಸ್ ಗಳು   24840 ಮೆ.ಟನ್.ಗಿಂತ ಹೆಚ್ಚಿನ  ಆಮ್ಲಜನಕವನ್ನು  ದೇಶಾದ್ಯಂತ  ತಲುಪಿಸಿವೆ

359 ಆಕ್ಸಿಜನ್ ಎಕ್ಸ್ ಪ್ರೆಸ್ ಗಳು ದೇಶಾದ್ಯಂತ  ಆಮ್ಲಜನಕದ ಸಾಗಾಣಿಕೆಯನ್ನು ಪೂರ್ಣಗೊಳಿಸಿವೆ

ಆಕ್ಸಿಜನ್ ಎಕ್ಸ್ ಪ್ರೆಸ್ ಗಳು ಈವರೆಗೆ ಆಮ್ಲಜನಕದ 1463 ಟ್ಯಾಂಕರ್ ಗಳನ್ನು  ಸಾಗಿಸಿ 15 ರಾಜ್ಯಗಳಿಗೆ ಪರಿಹಾರವನ್ನು ನೀಡಿವೆ

ಜಾರ್ಖಂಡ್ನಿಂದ ಅಸ್ಸಾಂಗೆ ಐದನೇ ಆಕ್ಸಿಜನ್ ಎಕ್ಸ್ ಪ್ರೆಸ್ ಗಳು 4 ಟ್ಯಾಂಕರ್ಗಳಲ್ಲಿ 80 ಎಂಟಿ ಆಮ್ಲಜನಕವನ್ನು ಹೊತ್ತು ಸಾಗಿದೆ

ಆಂಧ್ರಪ್ರದೇಶ, ತಮಿಳುನಾಡು ಮತ್ತು ಕರ್ನಾಟಕವು ಆಕ್ಸಿಜನ್ ಎಕ್ಸ್ ಪ್ರೆಸ್ ಗಳಿಂದ ತಲಾ 2500 ಮೆ.ಟನ್ ಆಮ್ಲಜನಕವನ್ನು ಪಡೆದಿವೆ

ಮಹಾರಾಷ್ಟ್ರದಲ್ಲಿ 614 ಮೆ.ಟನ್ ಆಕ್ಸಿಜನ್, ಉತ್ತರಪ್ರದೇಶದಲ್ಲಿ ಸುಮಾರು 3797 ಮೆ.ಟನ್, ಮಧ್ಯಪ್ರದೇಶದಲ್ಲಿ 656 ಮೆ.ಟನ್, ದೆಹಲಿಯಲ್ಲಿ 5826 ಮೆ.ಟನ್, ಹರಿಯಾಣದಲ್ಲಿ 2135 ಮೆ.ಟನ್, ರಾಜಸ್ಥಾನದಲ್ಲಿ 98 ಮೆ.ಟನ್, ಕರ್ನಾಟಕದಲ್ಲಿ 2870 ಮೆ.ಟನ್, ಉತ್ತರಾಖಂಡದಲ್ಲಿ 320 ಮೆ.ಟನ್, 2711 ಮೆ.ಟನ್ ತಮಿಳುನಾಡಿನಲ್ಲಿ, ಆಂಧ್ರಪ್ರದೇಶದಲ್ಲಿ 2528 ಮೆ.ಟನ್, ಪಂಜಾಬ್ನಲ್ಲಿ 225 ಮೆ.ಟನ್, ಕೇರಳದಲ್ಲಿ 513 ಮೆ.ಟನ್, ತೆಲಂಗಾಣದಲ್ಲಿ 2184 ಮೆ.ಟನ್, ಜಾರ್ಖಂಡ್ನಲ್ಲಿ 38 ಮೆ.ಟನ್ ಮತ್ತು ಅಸ್ಸಾಂನಲ್ಲಿ 320 ಮೆ.ಟನ್ ದ್ರವ ವೈದ್ಯಕೀಯ ಆಮ್ಲಜನಕವನ್ನು (ಎಲ್ಎಂಒ) ತಲುಪಿಸಲಾಗಿದೆ

Posted On: 04 JUN 2021 2:31PM by PIB Bengaluru

ಎಲ್ಲಾ ಅಡೆತಡೆಗಳನ್ನು ನಿವಾರಿಸಿ ಹೊಸ ಪರಿಹಾರಗಳನ್ನು ಕಂಡುಕೊಳ್ಳುತ್ತಿರುವ ಭಾರತೀಯ ರೈಲ್ವೆಯು ದೇಶಾದ್ಯಂತ ವಿವಿಧ ರಾಜ್ಯಗಳಿಗೆ  ದ್ರವ ವೈದ್ಯಕೀಯ ಆಮ್ಲಜನಕವನ್ನು (ಎಲ್ಎಂಒ) ತಲುಪಿಸುವ ಮೂಲಕ ಪರಿಹಾರವನ್ನು ತಲುಪಿಸುವ ಕಾರ್ಯವನ್ನು ಮುಂದುವರಿಸಿದೆ ಇಲ್ಲಿಯವರೆಗೆ, ಭಾರತೀಯ ರೈಲ್ವೆಯು 1463 ಕ್ಕೂ ಹೆಚ್ಚು ಟ್ಯಾಂಕರ್ಗಳಲ್ಲಿ 24840 ಮೆಟ್ರಿಕ್ ಟನ್ಗಿಂತ ಹೆಚ್ಚಿನ  ಆಮ್ಲಜನಕವನ್ನು ದೇಶದ ವಿವಿಧ ರಾಜ್ಯಗಳಿಗೆ ತಲುಪಿಸಿವೆ.

359 ಆಕ್ಸಿಜನ್ ಎಕ್ಸ್ ಪ್ರೆಸ್ ಗಳು ಈವರೆಗೆ ತಮ್ಮ ಪ್ರಯಾಣವನ್ನು ಪೂರ್ಣಗೊಳಿಸಿವೆ ಮತ್ತು ವಿವಿಧ ರಾಜ್ಯಗಳಿಗೆ ಪರಿಹಾರವನ್ನು ನೀಡಿವೆ ಎನ್ನುವುದನ್ನು ಗಮನಿಸಬಹುದು.

ವರದಿ ಬಿಡುಗಡೆಯ ಸಮಯದವರೆಗೆ, 6 ಲೋಡ್ ಆಕ್ಸಿಜನ್ ಎಕ್ಸ್ ಪ್ರೆಸ್ ಗಳು 30 ಟ್ಯಾಂಕರ್ ಗಳಲ್ಲಿ 587 ಮೆ.ಟನ್ ಗಿಂತ ಹೆಚ್ಚಿನ ಎಲ್ಎಂಒನೊಂದಿಗೆ ಮಾರ್ಗದಲ್ಲಿವೆ.

ಆಕ್ಸಿಜನ್ ಎಕ್ಸ್ ಪ್ರೆಸ್ ಗಳು  ದಕ್ಷಿಣದ ರಾಜ್ಯಗಳಿಗೆ 10000 ಮೆ.ಟನ್ನಿಗಿಂತಲೂ ಹೆಚ್ಚು ಎಲ್ಎಂಒಅನ್ನು ವಿತರಣೆ ಮಾಡಿವೆ.

ದಕ್ಷಿಣ ರಾಜ್ಯಗಳಲ್ಲಿ ಆಂಧ್ರಪ್ರದೇಶ, ತಮಿಳುನಾಡು ಮತ್ತು ಕರ್ನಾಟಕವು ಆಕ್ಸಿಜನ್ ಎಕ್ಸ್ಪ್ರೆಸ್ಗಳಿಂದ ತಲಾ 2500 ಮೆ.ಟನ್ ಗಿಂತ ಹೆಚ್ಚು ದ್ರವ ವೈದ್ಯಕೀಯ ಆಮ್ಲಜನಕವನ್ನು (ಎಲ್ಎಂಒ) ಪಡೆದಿವೆ.

4 ಟ್ಯಾಂಕರ್ಗಳಲ್ಲಿ 80 ಎಂಟಿ ದ್ರವ ವೈದ್ಯಕೀಯ ಆಮ್ಲಜನಕ (ಎಲ್ಎಂಒ)ವನ್ನು ಜಾರ್ಖಂಡ್ನಿಂದ ಅಸ್ಸಾಂಗೆ ಐದನೇ ಆಕ್ಸಿಜನ್ ಎಕ್ಸ್ ಪ್ರೆಸ್  ತೆಗೆದುಕೊಂಡು ಹೋಗುತ್ತಿದೆ.

ಏಪ್ರಿಲ್ 24 ರಂದು ಮಹಾರಾಷ್ಟ್ರದಲ್ಲಿ 126 ಮೆ.ಟನ್  ತಲುಪಿಸುವುದರೊಂದಿಗೆ   ಆಕ್ಸಿಜನ್ ಎಕ್ಸ್ ಪ್ರೆಸ್ ಗಳು 40 ದಿನಗಳ ಹಿಂದೆಯೇ ತಮ್ಮ ಕಾರ್ಯವನ್ನು ಪ್ರಾರಂಭಿಸಿತು ಎನ್ನುವುದು  ಉಲ್ಲೇಖನಾರ್ಹವಾಗಿದೆ .

ಕೋರಿಕೊಂಡಿರುವ ರಾಜ್ಯಗಳಿಗೆ ಸಾಧ್ಯವಾದಷ್ಟು ಕಡಿಮೆ ಸಮಯದಲ್ಲಿ ಸಾಧ್ಯವಾದಷ್ಟು ಎಲ್ಎಂಒ ತಲುಪಿಸುವುದು ಭಾರತೀಯ ರೈಲ್ವೆಯ ಪ್ರಯತ್ನವಾಗಿದೆ.

ಆಕ್ಸಿಜನ್ ಎಕ್ಸ್ ಪ್ರೆಸ್ ಗಳ ಆಮ್ಲಜನಕ ಪರಿಹಾರವು 15 ರಾಜ್ಯಗಳಾದ ಉತ್ತರಾಖಂಡ್, ಕರ್ನಾಟಕ, ಮಹಾರಾಷ್ಟ್ರ, ಮಧ್ಯಪ್ರದೇಶ, ಆಂಧ್ರಪ್ರದೇಶ, ರಾಜಸ್ಥಾನ, ತಮಿಳುನಾಡು, ಹರಿಯಾಣ, ತೆಲಂಗಾಣ, ಪಂಜಾಬ್, ಕೇರಳ, ದೆಹಲಿ, ಉತ್ತರ ಪ್ರದೇಶ, ಜಾರ್ಖಂಡ್ ಮತ್ತು ಅಸ್ಸಾಂಗೆ ತಲುಪಿದೆ.

ವರದಿ ಬಿಡುಗಡೆಯ ಸಮಯದವರೆಗೆ, ಮಹಾರಾಷ್ಟ್ರದಲ್ಲಿ 614 ಮೆ.ಟನ್ ಆಕ್ಸಿಜನ್, ಉತ್ತರಪ್ರದೇಶದಲ್ಲಿ ಸುಮಾರು 3797 ಮೆ.ಟನ್, ಮಧ್ಯಪ್ರದೇಶದಲ್ಲಿ 656 ಮೆ.ಟನ್, ದೆಹಲಿಯಲ್ಲಿ 5826 ಮೆ.ಟನ್, ಹರಿಯಾಣದಲ್ಲಿ 2135 ಮೆ.ಟನ್, ರಾಜಸ್ಥಾನದಲ್ಲಿ 98 ಮೆ.ಟನ್, ಕರ್ನಾಟಕದಲ್ಲಿ 2870 ಮೆ.ಟನ್, ಉತ್ತರಾಖಂಡದಲ್ಲಿ 320 ಮೆ.ಟನ್, ತಮಿಳುನಾಡಿನಲ್ಲಿ 2711 ಮೆ.ಟನ್, ಆಂಧ್ರಪ್ರದೇಶದಲ್ಲಿ 2528 ಮೆ.ಟನ್, ಪಂಜಾಬ್ನಲ್ಲಿ 225 ಮೆ.ಟನ್, ಕೇರಳದಲ್ಲಿ 513 ಮೆ.ಟನ್, ತೆಲಂಗಾಣದಲ್ಲಿ 2184 ಮೆ.ಟನ್, ಜಾರ್ಖಂಡ್ನಲ್ಲಿ 38 ಮೆ.ಟನ್ ಮತ್ತು ಅಸ್ಸಾಂನಲ್ಲಿ 320 ಮೆ.ಟನ್ ಆಮ್ಲಜನಕವನ್ನು ತಲುಪಿಸಲಾಗಿದೆ.

ಇಲ್ಲಿಯವರೆಗೆ ಆಕ್ಸಿಜನ್  ಎಕ್ಸ್ ಪ್ರೆಸ್ ಗಳು ದೇಶಾದ್ಯಂತ 15 ರಾಜ್ಯಗಳ ಸುಮಾರು 39 ನಗರಗಳು ಹಾಗೂ  ಪಟ್ಟಣಗಳಲ್ಲಿ ಎಲ್ಎಂಒ ಅನ್ನು ತಲುಪಿಸಿವೆ, ಅವುಗಳೆಂದರೆ ಉತ್ತರ ಪ್ರದೇಶದ ಲಕ್ನೋ, ವಾರಣಾಸಿ, ಕಾನ್ಪುರ್, ಬರೇಲಿ, ಗೋರಖ್ಪುರ ಮತ್ತು ಆಗ್ರಾ; ಮಧ್ಯಪ್ರದೇಶದ ಸಾಗರ್, ಜಬಲ್ಪುರ್, ಕಟ್ನಿ ಮತ್ತು ಭೋಪಾಲ್ ; ಮಹಾರಾಷ್ಟ್ರದ ನಾಗ್ಪುರ, ನಾಸಿಕ್, ಪುಣೆ, ಮುಂಬೈ ಮತ್ತು ಸೋಲಾಪುರ ; ತೆಲಂಗಾಣದ ಹೈದರಾಬಾದ್ ; ಹರಿಯಾಣದ ಫರಿದಾಬಾದ್ ಮತ್ತು ಗುರುಗ್ರಾಮ್; ದೆಹಲಿಯ ದೆಹಲಿ ಕ್ಯಾಂಟ್ ಮತ್ತು ಓಖ್ಲಾ; ರಾಜಸ್ಥಾನದ ಕೋಟಾ ಮತ್ತು ಕನಕ್ಪರಾ; ಕರ್ನಾಟಕದ ಬೆಂಗಳೂರು; ಉತ್ತರಾಖಂಡದ ಡೆಹ್ರಾಡೂನ್; ಆಂಧ್ರಪ್ರದೇಶದ ನೆಲ್ಲೂರು, ಗುಂಟೂರು, ತಡಿಪಾಟ್ರಂ ಮತ್ತು ವಿಶಾಖ ಪಟ್ನಂ; ತಮಿಳುನಾಡಿನ ಚೆನ್ನೈ ಟ್ಯುಟಿಕೋರಿನ್ ಕೊಯಮತ್ತೂರು ಮತ್ತು ಮಧುರೈ; ಪಂಜಾಬ್ ಭಟಿಂಡಾ ಮತ್ತು ಫಿಲ್ಲೌರ್ಅಸ್ಸಾಂನ ಕಮ್ರೂಪ್ ಮತ್ತು ಜಾರ್ಖಂಡ್ ರಾಂಚಿ.

ರೈಲ್ವೆ ಇಲಾಖೆಯು ವಿವಿಧ ಮಾರ್ಗಗಳನ್ನು ಆಮ್ಲಜನಕ ಪೂರೈಕೆ ಸ್ಥಳಗಳೊಂದಿಗೆ ಯೋಜಿಸಿಕೊಂಡಿದೆ ಮತ್ತು ರಾಜ್ಯಗಳ ಯಾವುದೇ ಮುಂದಿನ ಅವಶ್ಯಕತೆಗಳೊಂದಿಗೆ ಸಿದ್ಧವಾಗಿದೆಎಲ್ಎಂಒ ತರಲು ರಾಜ್ಯಗಳು ಭಾರತೀಯ ರೈಲ್ವೆಗೆ ಟ್ಯಾಂಕರ್ ಗಳನ್ನು ಒದಗಿಸುತ್ತವೆ.

ದೇಶದ ಉದ್ದಗಲಕ್ಕೆ ಸಂಚರಿಸುತ್ತಾ  ಭಾರತೀಯ ರೈಲ್ವೆಯು ಪಶ್ಚಿಮದಲ್ಲಿ ಹಪಾ ಮತ್ತು ಮುಂಡ್ರಾ ಮತ್ತು ರೂರ್ಕೆಲಾ, ದುರ್ಗಾಪುರ, ಟಾಟಾನಗರ, ಪೂರ್ವದ ಅಂಗುಲ್ ಮುಂತಾದ ಸ್ಥಳಗಳಿಂದ ಆಮ್ಲಜನಕವನ್ನು ತೆಗೆದುಕೊಂಡು ನಂತರ ಅದನ್ನು ಉತ್ತರಾಖಂಡ, ಕರ್ನಾಟಕ, ಮಹಾರಾಷ್ಟ್ರ, ಮಧ್ಯ ಪ್ರದೇಶ, ಆಂಧ್ರಪ್ರದೇಶ, ತಮಿಳುನಾಡು , ಹರಿಯಾಣ, ತೆಲಂಗಾಣ, ಪಂಜಾಬ್, ಕೇರಳ, ದೆಹಲಿ ಮತ್ತು  ಉತ್ತರ ಪ್ರದೇಶದ ರಾಜ್ಯಗಳಿಗೆ ಕ್ಲಿಷ್ಟಕರವಾದ ಕಾರ್ಯಾಚರಣೆ ಮಾರ್ಗ ಯೋಜನೆಯ ಪರಿಸ್ಥಿತಿಗಳಲ್ಲಿ ತಲುಪಿಸುತ್ತಿದೆ

ಆಮ್ಲಜನಕವು ಸಾಧ್ಯವಾದಷ್ಟು ವೇಗವಾಗಿ ತಲುಪುವುದನ್ನು ಖಚಿತಪಡಿಸಿಕೊಳ್ಳಲು, ರೈಲ್ವೆ ಆಕ್ಸಿಜನ್ ಎಕ್ಸ್ಪ್ರೆಸ್ ಸರಕು ರೈಲುಗಳ ಚಾಲನೆಯಲ್ಲಿ ಹೊಸ ಮಾನದಂಡಗಳನ್ನು ಮತ್ತು ಅಭೂತಪೂರ್ವ ಮಾನದಂಡಗಳನ್ನು ರಚಿಸುತ್ತಿದೆ ನಿರ್ಣಾಯಕ ಸರಕು ರೈಲುಗಳ ಸರಾಸರಿ ವೇಗವು ಹೆಚ್ಚಿನ ಸಂದರ್ಭಗಳಲ್ಲಿ 55ಕ್ಕಿಂತ ಹೆಚ್ಚಿನದಾಗಿದೆ. ಹೆಚ್ಚಿನ ಆದ್ಯತೆಯ ಗ್ರೀನ್ ಕಾರಿಡಾರ್ ನಲ್ಲಿ ಚಾಲನೆಯಲ್ಲಿರುವ, ಹೆಚ್ಚಿನ ತುರ್ತು ಪ್ರಜ್ಞೆಯೊಂದಿಗೆ, ವಿವಿಧ ವಲಯಗಳ ಕಾರ್ಯಾಚರಣಾ ತಂಡಗಳು ಅತ್ಯಂತ ಸವಾಲಿನ ಸಂದರ್ಭಗಳಲ್ಲಿ ಇಪ್ಪತ್ತನಾಲ್ಕು ಘಂಟೆಗಳ ಕಾಲ  ಕೆಲಸ ಮಾಡುತ್ತಿದ್ದು, ಆಮ್ಲಜನಕವು ಸಾಧ್ಯವಾದಷ್ಟು ವೇಗವಾಗಿ ತಲುಪುವುದನ್ನು ಖಚಿತ ಪಡಿಸುತ್ತವೆ. ವಿವಿಧ ವಿಭಾಗಗಳಲ್ಲಿನ ಸಿಬ್ಬಂದಿ ಬದಲಾವಣೆಗಳಿಗಾಗಿ ತಾಂತ್ರಿಕ ನಿಲುಗಡೆಗಳನ್ನು 1 ನಿಮಿಷಕ್ಕೆ ಇಳಿಸಲಾಗಿದೆ.

ಟ್ರ್ಯಾಕ್ಗಳನ್ನು ಮುಕ್ತವಾಗಿ ಇಡಲಾಗುತ್ತದೆ ಮತ್ತು ಆಕ್ಸಿಜನ್ ಎಕ್ಸ್ ಪ್ರೆಸ್ ಗಳು ತಡೆಯಿಲ್ಲದೆ ಸಾಗುವುದನ್ನು ಖಚಿತಪಡಿಸಿಕೊಳ್ಳಲು ಹೆಚ್ಚಿನ ಜಾಗರೂಕತೆಯನ್ನು ವಹಿಸಿಲಾಗುತ್ತಿದೆ.

ಇತರ ಸರಕು ಸಾಗಾಣಿಕೆಯ ವೇಗವು ಕಡಿಮೆಯಾಗಬಾರದು ಎನ್ನುವ ರೀತಿಯಲ್ಲಿ ಇವೆಲ್ಲವನ್ನೂ ಮಾಡಲಾಗುತ್ತದೆ.

ಹೊಸ ಆಕ್ಸಿಜನ್ ಎಕ್ಸ್ ಪ್ರೆಸ್ ಗಳು ಚಲಾಯಿಸುವುದು ಬಹಳ ಕ್ರಿಯಾತ್ಮಕ ಕಾರ್ಯವಾಗಿದ್ದು ಮತ್ತು ಅಂಕಿಅಂಶಗಳು ಸಾರ್ವಕಾಲಿಕವಾಗಿ ಹೊಸದಾಗಿ ಬದಲಾಗುತ್ತಿರುತ್ತವೆ. ಮತ್ತಷ್ಟು ಆಮ್ಲಜನಕ ತುಂಬಿಕೊಂಡ ಆಕ್ಸಿಜನ್ ಎಕ್ಸ್ ಪ್ರೆಸ್ ಗಳು ರಾತ್ರಿಯ ನಂತರ ತಮ್ಮ ಪ್ರಯಾಣವನ್ನು ಪ್ರಾರಂಭಿಸುವ ನಿರೀಕ್ಷೆಯಿದೆ.

***



(Release ID: 1724562) Visitor Counter : 198