ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ

ಐಐಎಸ್ಎಫ್ -2020 ಮೇಳ ಸಮಾರಂಭ ಉದ್ಘಾಟಿಸಿದ ಡಾ.ಹರ್ಷ ವರ್ಧನ್, ಐಐಎಸ್ಎಫ್ -2020 ಒಂದು ವರ್ಚುವಲ್ ಕಾರ್ಯಕ್ರಮ


ಭಾರತಧ ವಿಜ್ಞಾನದ ಮಹತ್ವ ಎತ್ತಿ ಹಿಡಿಯಲು ಮತ್ತು ಪ್ರಸ್ತುತ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ವಿಜ್ಞಾನ ಮತ್ತು ತಂತ್ರಜ್ಞಾನದ ವಿವಿಧ ಅಂಶಗಳ ಕುರಿತು 41 ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು

ಈ ವರ್ಷದ ಕೆಲವು ಹೊಸ ವಿಷಯಗಳು ಭಾರತೀಯ ವಿಜ್ಞಾನದ ಇತಿಹಾಸ, ತತ್ವಶಾಸ್ತ್ರ ಮತ್ತು ವಿಜ್ಞಾನ, ಕೃಷಿ ತಂತ್ರಜ್ಞಾನ, ಶುದ್ಧ ಗಾಳಿ, ಶಕ್ತಿ, ತ್ಯಾಜ್ಯ ಮತ್ತು ನೈರ್ಮಲ್ಯ, ಜೀವವೈವಿಧ್ಯ ಮತ್ತು ವಿಜ್ಞಾನ ರಾಜತಾಂತ್ರಿಕತೆ

Posted On: 17 NOV 2020 8:22PM by PIB Bengaluru

ಐಐಎಸ್‌ಎಫ್‌ನ 6 ನೇ ಆವೃತ್ತಿಯ ವಿವಿಧ ಕಾರ್ಯಕ್ರಮಗಳನ್ನು ನವದೆಹಲಿಯಲ್ಲಿ ಪ್ರಾರಂಭಿಸಲು ಐಐಎಸ್‌ಎಫ್ -2020ರ ಆರಂಭಿಕ ಸಮಾರಂಭವನ್ನು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ, ಭೂ ವಿಜ್ಞಾನ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಹರ್ಷ ವರ್ಧನ್ ಇಂದು ಉದ್ಘಾಟಿಸಿದರು. ಡಾ.ಹರ್ಷ ವರ್ಧನ್ ಮತ್ತು ಮಧ್ಯಪ್ರದೇಶದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಶ್ರೀ ಓಂ ಪ್ರಕಾಶ್ ಸಖ್ಲೆಚಾ ಅವರೊಂದಿಗೆ ಈ ದೊಡ್ಡ ಕಾರ್ಯಕ್ರಮದ ಇ-ಕರಪತ್ರವನ್ನು ಈ ಸಂದರ್ಭದಲ್ಲಿ ಬಿಡುಗಡೆ ಮಾಡಿದರು.  ಐಐಎಸ್ಎಫ್ ವಾರ್ಷಿಕ ಕಾರ್ಯಕ್ರಮವಾಗಿದ್ದು, ಡಿಎಸ್ ಟಿ, ಡಿಬಿಟಿ, ಎಂಒಇಎಫ್, ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಮತ್ತು ಭಾರತ ಸರ್ಕಾರದ ಸಿಎಸ್ಐಆರ್ ಮತ್ತು ವಿಜ್ಞಾನ ಭಾರತಿ (ವಿಭಾ) ಯಿಂದ ಜಂಟಿಯಾಗಿ ಆಯೋಜಿಸಲ್ಪಟ್ಟಿದೆ ಹಾಗು ಹೆಚ್ಚಿನ ಸಂಖ್ಯೆಯ ಇತರ ಸಂಸ್ಥೆಗಳ ಬೆಂಬಲದೊಂದಿಗೆ ಆಯೋಜಿಸಲಾಗಿದೆ.  ಈ ಸಂದರ್ಭದಲ್ಲಿ ಐಐಎಸ್ಎಫ್ -2020 ರ ಜಾಲತಾಣವನ್ನು ಸಹ ಪ್ರಾರಂಭಿಸಲಾಯಿತು. ಎಲ್ಲಾ ಚಟುವಟಿಕೆಗಳು ಮತ್ತು ಭಾಗವಹಿಸುವವರ ನೋಂದಣಿಯನ್ನು ಈ ಜಾಲತಾಣದ ಮೂಲಕ ಮಾಡಲಾಗುತ್ತದೆ. ಐಐಎಸ್ ಎಫ್ ನ ಜಾಲತಾಣ www.scienceindiafest.org ನಲ್ಲಿ ವಿವರವಾದ ಮಾಹಿತಿಯು ಲಭ್ಯವಿದೆ

ಸಭೆಯನ್ನುದ್ದೇಶಿಸಿ ಮಾತನಾಡಿದ ಡಾ.ಹರ್ಷ ವರ್ಧನ್, ಈ ವರ್ಷದ ಉತ್ಸವದ ವಿಷಯವೇನೆಂದರೆ ‘ವಿಜ್ಞಾನಕ್ಕಾಗಿ ಆತ್ಮನಿರ್ಭರ ಭಾರತ ಮತ್ತು ಜಾಗತಿಕ ಕಲ್ಯಾಣ’".  “ಈ ವರ್ಷ, ಐಐಎಸ್ಎಫ್ ಮೇಳವು ವಿಶ್ವಪ್ರಸಿದ್ಧ ಭಾರತೀಯ ಗಣಿತಜ್ಞ ಶ್ರೀನಿವಾಸ ರಾಮಾನುಜನ್ ಅವರ ಜನ್ಮದಿನ 22 ಡಿಸೆಂಬರ್ 2020 ರಂದು ಪ್ರಾರಂಭವಾಗುತ್ತದೆ  ಮತ್ತು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ಜನ್ಮ ದಿನ  ಡಿಸೆಂಬರ್ 25, 2020 ರಂದು ಮುಕ್ತಾಯಗೊಳ್ಳುತ್ತದೆ,” " ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ (ಸಿಎಸ್ಐಆರ್) ಮೆಗಾ ಸೈನ್ಸ್ ಫೆಸ್ಟಿವಲ್ ಅನ್ನು ಸಂಯೋಜಿಸುತ್ತಿದೆ, ಮತ್ತು ನೋಡಲ್ ಸಂಸ್ಥೆ ಸಿಎಸ್ಐಆರ್- ರಾಷ್ಟ್ರೀಯ ವಿಜ್ಞಾನ, ತಂತ್ರಜ್ಞಾನ ಮತ್ತು ಅಭಿವೃದ್ಧಿ ಅಧ್ಯಯನ ಸಂಸ್ಥೆ (ಎನ್ಐಎಸ್ ಟಿ ಎಡಿಎಸ್), ನವದೆಹಲಿ" ಎಂದು ಅವರು ಹೇಳಿದರು. "ಇದನ್ನು ವರ್ಚುವಲ್ ಪ್ಲಾಟ್‌ಫಾರ್ಮ್  ನಲ್ಲಿ ಆಯೋಜಿಸಲಾಗುತ್ತಿದೆ, ಇದು ದೇಶದ ಮೂಲೆ ಮೂಲೆಯಿಂದ ವಿಜ್ಞಾನವನ್ನು ಪ್ರೀತಿಸುವ ಜನರನ್ನು ಒಂದೇ ಕ್ಲಿಕ್‌ನಲ್ಲಿ ಸಂಪರ್ಕಿಸಲು ಸಹಾಯಕವಾಗುತ್ತದೆ. ಇದರಿಂದಾಗಿ ಡಿಜಿಟಲ್ ನ  ಬಳಕೆಯು ಹೆಚ್ಚಾಗುತ್ತದೆ” ಎಂದು ಸಚಿವರು ಹೇಳಿದರು.

 “ವಿಜ್ಞಾನದ ಉತ್ಸವಗಳು ವಿಜ್ಞಾನ ಮತ್ತು ತಂತ್ರಜ್ಞಾನದ ಆಕರ್ಷಕ ಪ್ರಪಂಚವನ್ನು ಸಾಮಾನ್ಯ ಮನುಷ್ಯರೊಂದಿಗೆ ಸಂಪರ್ಕಿಸುವ ಸಂದರ್ಭಗಳು” ಎಂದು ಡಾ. ಹರ್ಷವರ್ಧನ್ ಅವರು ವಿವರಿಸಿದರು.  “ಈ ಆಚರಣೆಯ ಸಮಯದಲ್ಲಿ ವಿಜ್ಞಾನಿಗಳು, ಸಂಶೋಧಕರು ಮತ್ತು ಸಂಶೋಧಕರು, ವಿದ್ಯಾರ್ಥಿಗಳು ಮತ್ತು ನಾಗರಿಕರನ್ನು ಎಲ್ಲಾ ಹಂತದ ಸಾಮಾನ್ಯ ವೇದಿಕೆಯಲ್ಲಿ ತಂದು ಪರಸ್ಪರ ವಿನಿಮಯದ ಮೂಲಕ ನಾವು ಪರಸ್ಪರ ಅರ್ಥಮಾಡಿಕೊಳ್ಳುವ ಮತ್ತು ಕಲಿಯುವ ಅವಕಾಶವನ್ನು ತರುತ್ತದೆ ” ಎಂದು ಅವರು ಹೇಳಿದರು. “ಎಸ್‌ಟಿಐ ರಾಷ್ಟ್ರದ ಸಾಮಾಜಿಕ-ಆರ್ಥಿಕ ಅಭಿವೃದ್ಧಿ ಬೆಳವಣಿಗೆಯಲ್ಲಿ ವಿವಿಧ ವಿಧಾನಗಳಿಂದ ಬದಲಾವಣೆಯನ್ನು ತರಬಹುದು. ಇವು ಸಾಮಾನ್ಯ ಜನರ ಜೀವನದ ಗುಣಮಟ್ಟವನ್ನು ಸುಧಾರಿಸಲು ಪರಿಹಾರಗಳನ್ನು ಒದಗಿಸುವುದರಿಂದ ಹಿಡಿದು, ಚಂದ್ರಯಾನ ಮತ್ತು ಮಂಗಲಯಾನನಂತಹ ಕಾರ್ಯಗಳಿಗೆ ಜೀವನೋಪಾಯದ ಆಯ್ಕೆಗಳನ್ನು ಹೆಚ್ಚಿಸುವಂತಹ ವೈವಿಧ್ಯಮಯ ಚಟುವಟಿಕೆಗಳನ್ನು ಒಳಗೊಂಡಿದೆ” ಎಂದು ಅವರು ಗಮನಸೆಳೆದರು.

ಈ ವರ್ಷದ ಉತ್ಸವದಲ್ಲಿ ನಡೆಯಲಿರುವ ಕಾರ್ಯಕ್ರಮಗಳ ಸಂಖ್ಯೆ 28 ರಿಂದ 41 ಕ್ಕೆ ಏರಿದೆ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು ಮಾಹಿತಿ ನೀಡಿದರು, ಜಗತ್ತು ಎದುರಿಸುತ್ತಿರುವ ಹೊಸ ಸವಾಲುಗಳಿಗೆ ಪರಿಹಾರ ಒದಗಿಸುವಲ್ಲಿ ಎಸ್‌ಟಿಐ ಪಾತ್ರವನ್ನು ಎತ್ತಿ ತೋರಿಸುವ ಹಲವು ಪ್ರಮುಖ ಅಂಶಗಳನ್ನು ಒಳಗೊಂಡಿದೆ ”. " ಹೊಸ ಕಾರ್ಯಕ್ರಮಗಳನ್ನು ಚಿಂತನಶೀಲವಾಗಿ ವಿನ್ಯಾಸಗೊಳಿಸಲಾಗಿದೆ. ಇದು ಎಸ್‌ಟಿಐ ಪ್ರಗತಿಯನ್ನು ಮುಂಚೂಣಿಗೆ ತರುವುದಲ್ಲದೆ ಅದನ್ನು ಇತಿಹಾಸ, ತತ್ವಶಾಸ್ತ್ರ, ಕಲೆ ಮತ್ತು ಶಿಕ್ಷಣದೊಂದಿಗೆ ಸಂಪರ್ಕಿಸುತ್ತದೆ. ಇಂತಹ ಕಾರ್ಯಕ್ರಮಗಳು ಉತ್ಸವಕ್ಕೆ ಮೌಲ್ಯವನ್ನು ಹೆಚ್ಚಿಸುತ್ತವೆ, ಏಕೆಂದರೆ ಇದು ನಮ್ಮ ಪ್ರಾಚೀನ ಗ್ರಂಥಗಳಲ್ಲಿ ವೇದಗಳು ಮತ್ತು ಉಪನಿಷತ್ತುಗಳನ್ನು ಒಳಗೊಂಡಿರುವ ಭಾರತೀಯ ವಿಜ್ಞಾನದ ಶ್ರೀಮಂತ ಸಂಪ್ರದಾಯವನ್ನು ಎತ್ತಿ ತೋರಿಸುತ್ತದೆ. ಪ್ರಾಚೀನ ಭಾರತದ ಶಕ್ತಿಯಾಗಿರುವ ಗಣಿತ, ಖಗೋಳವಿಜ್ಞಾನ, ವಾಸ್ತುಶಿಲ್ಪ, ರಸಾಯನಶಾಸ್ತ್ರ, ಲೋಹಶಾಸ್ತ್ರ ಮತ್ತು ಔಷಧ ಮತ್ತು ಶಸ್ತ್ರಚಿಕಿತ್ಸೆ ಕ್ಷೇತ್ರದಲ್ಲಿ ಉತ್ತಮ ವೈಜ್ಞಾನಿಕ ಆವಿಷ್ಕಾರಗಳು ಮತ್ತು ತಾಂತ್ರಿಕ ಸಾಧನೆಗಳ ಅರಿವಿನ ಮೂಲಕ ಇಂತಹ ಘಟನೆಗಳು ಉತ್ತಮ ವಿಜ್ಞಾನವನ್ನು ಅನುಸರಿಸುವ ಉತ್ಸಾಹವನ್ನು ಉಂಟುಮಾಡುತ್ತವೆ” ಎಂದು ಅವರು ಹೇಳಿದರು. ಈಗಾಗಲೇ ಇರುವ ಘಟನೆಗಳು ವಿಷಯದಲ್ಲಿ ಉತ್ಕೃಷ್ಟವಾಗಿ ಬೆಳೆಯುತ್ತವೆ ಮತ್ತು ಹೊಸ ಕಾರ್ಯಕ್ರಮಗಳು ಉತ್ಸವವನ್ನು ಹೆಚ್ಚು ಸಮಗ್ರವಾಗಿಸುತ್ತವೆ ಎಂದು ಸಚಿವರು ಆಶಾಭಾವನೆ ವ್ಯಕ್ತಪಡಿಸಿದರು.

2015 ರಲ್ಲಿ ಪ್ರಾರಂಭವಾದ ಈ ಕಾರ್ಯಕ್ರಮವು ವಿಜ್ಞಾನ, ತಂತ್ರಜ್ಞಾನ ಮತ್ತು ಆವಿಷ್ಕಾರ (ಎಸ್‌ಟಿಐ) ಗಳ ಸಾಧನೆಗಳನ್ನು ಆಚರಿಸುವ ಬಹುನಿರೀಕ್ಷಿತ ವಾರ್ಷಿಕ ಕಾರ್ಯಕ್ರಮವಾಗಿ ಮಾರ್ಪಟ್ಟಿದೆ ಮತ್ತು ವಿಜ್ಞಾನವು ದೇಶದ ಪ್ರಗತಿಯಲ್ಲಿ ಮುಖ್ಯಪಾತ್ರವಹಿಸಬಹುದು ಎಂಬುದನ್ನು ತೋರಿಸುತ್ತದೆ. ಐಐಎಸ್ಎಫ್ 2020 ಮೇಳವು ಭಾರತ ಮತ್ತು ವಿದೇಶಗಳಿಂದ ಸುಮಾರು ಒಂದು ಲಕ್ಷ ಜನರು ಭಾಗವಹಿಸುವವರನ್ನು ನಿರ್ವಹಿಸುವ ನಿರೀಕ್ಷಿಯನ್ನು ಹೊಂದಿದೆ. ಈ ವರ್ಷ ಕೆಲವು ಹೊಸ ವಿಷಯಗಳನ್ನು ಸೇರಿಸಲಾಗಿದೆ, ಅಂದರೆ ಭಾರತೀಯ ವಿಜ್ಞಾನ, ತತ್ವಶಾಸ್ತ್ರ ಮತ್ತು ವಿಜ್ಞಾನ, ಕೃಷಿ ತಂತ್ರಜ್ಞಾನ, ಶುದ್ಧ ಗಾಳಿ, ಶಕ್ತಿ, ತ್ಯಾಜ್ಯ ಮತ್ತು ನೈರ್ಮಲ್ಯ, ಜೀವವೈವಿಧ್ಯ ಮತ್ತು ವಿಜ್ಞಾನ ರಾಜತಾಂತ್ರಿಕತೆ.

ಸಿಎಸ್‌ಐಆರ್ ನ ಡಿಜಿ ಮತ್ತು  ಡಿಎಸ್‌ಐಆರ್ ನ ಕಾರ್ಯದರ್ಶಿಯಾದ  ಡಾಕ್ಟರ್ ಶೇಖರ್ ಸಿ. ಮಾಂಡೆಯವರು ಅವರ ಸ್ವಾಗತ ನುಡಿಗಳಲ್ಲಿ ಕೋವಿಡ್-19 ಸಾಂಕ್ರಾಮಿಕದ ಮಧ್ಯೆ ವಿಜ್ಞಾನವನ್ನು ಸಮಾಜಕ್ಕೆ ಕೊಂಡೊಯ್ಯಲು ಐಐಎಸ್ಎಫ್ ಪ್ರಮುಖ ವೇದಿಕೆಯಾಗಿ ಹೊರಹೊಮ್ಮಿದೆ ಎಂದು ಮುಂಬರುವ ಮೇಳದ ಮಹತ್ವವನ್ನು ಎತ್ತಿ ತೋರಿಸಿದರು.

2015 ರಿಂದ ಐಐಎಸ್ಎಫ್ ಪ್ರಾರಂಭದ ಸಂಕ್ಷಿಪ್ತ ವಿವರವನ್ನು ವಿಜ್ಞಾನಭಾರತಿ ಅಧ್ಯಕ್ಷ ಡಾ.ವಿಜಯ್ ಪಿ.ಭಟ್ಕರ್ ನೀಡಿದರು. ಐಐಎಸ್ಎಫ್ -2020 ರ ಅವಧಿಯಲ್ಲಿ ಆಯೋಜಿಸಬೇಕಾದ ವಿವಿಧ ಕಾರ್ಯಕ್ರಮಗಳನ್ನು ಸಿ.ಎಸ್.ಐ.ಆರ್-ಎನ್ ಐ ಎಸ್ ಟಿ ಎ ಡಿ ಎಸ್ ಮತ್ತು ಸಿ.ಎಸ್.ಐ.ಆರ್- ಎನ್ ಐ ಎಸ್ ಸಿ ಎ ಐ ಆರ್ ನಿರ್ದೇಶಕ ಪ್ರೊ.ರಂಜನಾ ಅಗರ್‍ವಾಲ್  ವಿವರಿಸಿದರು.

ಡಾ.ಅಶುತೋಷ್ ಶರ್ಮಾ ಕಾರ್ಯದರ್ಶಿ ಡಿಎಸ್ಟಿ; ಡಾ.ರಾಜೀವನ್, ಕಾರ್ಯದರ್ಶಿ ಎಂಒಇಎಸ್; ಮತ್ತು ಡಾ.ರೆಣುಸ್ವರೂಪ್, ಕಾರ್ಯದರ್ಶಿ ಡಿಬಿಟಿ; ಶ್ರೀ ಜಯಂತ್ ಸಹಸ್ರಬುಧೆ, ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ, ವಿಬಿಎಚ್‌ಎ; ಡಾ.ವಿಪನ್ ಕುಮ್ ಸಿಎಸ್ಐಆರ್- ಎನ್ ಐ ಎಸ್ ಟಿ ಎ ಡಿ ಎಸ್ ನ ಮುಖ್ಯ ಪಿಎಂಇ ಮತ್ತು ಎಸ್ & ಟಿ ಸಚಿವಾಲಯದ ಅಧೀನದಲ್ಲಿರುವ ವಿವಿಧ ಪ್ರಯೋಗಾಲಯಗಳ ಮುಖ್ಯಸ್ಥರು ಮತ್ತು ನಿರ್ದೇಶಕರು ಐಐಎಸ್ಎಫ್ -2020 ರ ಆರಂಭಿಕ ಸಮಾರಂಭದಲ್ಲಿ ಉಪಸ್ಥಿತರಿದ್ದರು.

****

 



(Release ID: 1673748) Visitor Counter : 250