ಪ್ರಧಾನ ಮಂತ್ರಿಯವರ ಕಛೇರಿ

ಮುಂಬಯಿ ಕಟ್ಟಡ ಕುಸಿತದಲ್ಲಿ ಸಂಭವಿಸಿರುವ  ಜೀವ ಹಾನಿಗೆ ಪ್ರಧಾನ ಮಂತ್ರಿ ಸಂತಾಪ.

ಪ್ರಕಟಣಾ ದಿನಾಂಕ: 16 JUL 2019 5:59PM by PIB Bengaluru

ಮುಂಬಯಿ ಕಟ್ಟಡ ಕುಸಿತದಲ್ಲಿ ಸಂಭವಿಸಿರುವ  ಜೀವ ಹಾನಿಗೆ ಪ್ರಧಾನ ಮಂತ್ರಿ ಸಂತಾಪ.

ಮುಂಬಯಿಯ ಡೋಂಗ್ರಿಯಲ್ಲಿ ಕಟ್ಟಡ ಕುಸಿತದಲ್ಲಿ  ಸಂಭವಿಸಿರುವ ಜೀವಹಾನಿಗೆ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.

“ ಮುಂಬಯಿಯ ಡೋಂಗ್ರಿಯಲ್ಲಿ ಕಟ್ಟಡ ಕುಸಿತ ಸಂಭವಿಸಿರುವುದು  ದುಃಖ ತಂದಿದೆ. ಜೀವ ಕಳೆದುಕೊಂಡವರ  ಕುಟುಂಬಗಳಿಗೆ ನನ್ನ ಸಂತಾಪಗಳು, ಗಾಯಾಳುಗಳು ಶೀಘ್ರ ಗುಣಮುಖರಾಗುತ್ತಾರೆ ಎಂದು ನಾನು ಆಶಿಸುತ್ತೇನೆ.  ಮಹಾರಾಷ್ಟ್ರ ಸರಕಾರ, ಎನ್.ಡಿ.ಆರ್. ಎಫ್. ಮತ್ತು ಸ್ಥಳೀಯ ಅಧಿಕಾರಿಗಳು ರಕ್ಷಣಾ ಕಾರ್ಯಾಚರಣೆಯಲ್ಲಿ  ಮತ್ತು ಆವಶ್ಯಕತೆ ಇರುವವರಿಗೆ ಸಹಾಯ ಒದಗಿಸುವಲ್ಲಿ ನಿರತರಾಗಿದ್ದಾರೆ”  ಎಂದು ಪ್ರಧಾನ ಮಂತ್ರಿ ಅವರು ಹೇಳಿದ್ದಾರೆ.


(ಪ್ರಕಟಣೆ ಐ.ಡಿ.: 1579038) ವಿಸಿಟರ್ ಕೌಂಟರ್ : 110
ಪ್ರಕಟಣೆಯನ್ನು ಇದರಲ್ಲಿ ಓದಿ: Assamese , English , हिन्दी , Marathi , Bengali , Punjabi , Tamil