ಸಂಪುಟ

ಅಂಚೆ ಇಲಾಖೆಯ ಗ್ರಾಮೀಣ ದಾಕ್ ಸೇವಕರ ವೇತನ ಮತ್ತು ಭತ್ಯೆ ಪರಿಷ್ಕರಣೆಗೆ ಸಂಪುಟ ಅನುಮೋದನೆ

Posted On: 06 JUN 2018 3:16PM by PIB Bengaluru

ಅಂಚೆ ಇಲಾಖೆಯ ಗ್ರಾಮೀಣ ದಾಕ್ ಸೇವಕರ ವೇತನ ಮತ್ತು ಭತ್ಯೆ ಪರಿಷ್ಕರಣೆಗೆ ಸಂಪುಟ ಅನುಮೋದನೆ 
 

 ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಂಪುಟ ಸಭೆಯಲ್ಲಿ ಅಂಚೆ ಇಲಾಖೆಯ ಗ್ರಾಮೀಣ ದಾಕ್ ಸೇವಕರ(ಜಿಡಿಎಸ್) ವೇತನ ಮತ್ತು ಭತ್ಯೆ ಪರಿಷ್ಕರಣೆಗೆ ಅನುಮೋದನೆ ನೀಡಿತು. ಈ ವೇತನ ಪರಷ್ಕರಣೆಯಿಂದಾಗಿ ಒಟ್ಟಾರೆ 2018-19ನೇ ಸಾಲಿನಲ್ಲಿ ರೂ. 1257.75 ಕೋಟಿ ಆರ್ಥಿಕ ಹೊರೆ ಬೀಳಲಿದೆ.(ಇದರಲ್ಲಿ ರೂ.  860.95 ಕೋಟಿ ಮರುಪಾವತಿಸುವ ವೆಚ್ಚ ಮತ್ತು ರೂ.  396.80 ಕೋಟಿ ಪಾವತಿಸುವ ವೆಚ್ಚ ಸೇರಿದೆ).

 

          ಈ ವೇತನ ಪರಿಷ್ಕರಣೆಯಿಂದಾಗಿ 3.07 ಲಕ್ಷ ಗ್ರಾಮೀಣ ದಾಕ್ ಸೇವಕರಿಗೆ ಪ್ರಯೋಜನವಾಗಲಿದೆ.

 

ವಿವರಗಳು :

 

1. ಸಮಯಾಧಾರಿತ ನಿರಂತರ ಸೇವಾ ಭತ್ಯೆ(ಟಿ ಆರ್ ಸಿ ಎ) ವ್ಯವಸ್ಥೆ ಮತ್ತು ಸ್ಲ್ಯಾಬ್ ಗಳನ್ನು ಏಕರೂಪಗೊಳಿಸಲಾಗಿದೆ. ಒಟ್ಟಾರೆ ಗ್ರಾಮೀಣ ದಕ್ಸೇವಕರನ್ನು ಎರಡು ವಿಭಾಗಗಳಾಗಿ ವಿಂಗಡಿಸಲಾಗಿದೆ. ಉದಾಹರಣೆಗೆ ಶಾಖಾ ಅಂಚೆ ಮುಖ್ಯಸ್ಥರು(ಬಿಪಿಎಂ) ಮತ್ತು ಶಾಖಾ ಅಂಚೆ ಮುಖ್ಯಸ್ಥರನ್ನುಹೊರತುಪಡಿಸಿದಂತೆ ಸಹಾಯಕ ಶಾಖಾ ಅಂಚೆ ಮುಖ್ಯಸ್ಥರು(ಎಬಿಪಿಎಂಎಸ್)

 

2. ಪ್ರಸ್ತುತ 11 ಟಿ ಆರ್ ಸಿ ಎ ಸ್ಲ್ಯಾಬ್ ಗಳಿದ್ದು, ಅವು ಕೇವಲ ಮೂರು ಸ್ಲ್ಯಾಬ್ ಗಳಲ್ಲಿ ವಿಲೀನಗೊಳ್ಳಲಿವೆ. ಬಿಪಿಎಂ ಹಾಗೂ ಬಿಪಿಎಂಯೇತರ ವಿಭಾಗಗಳಲ್ಲಿ ತಲಾ ಎರಡು ಹಂತಗಳಾಗಲಿವೆ.

 

3. ಸಮಯಾಧಾರಿತ ನಿರಂತರ ಸೇವಾಭತ್ಯೆ(ಟಿ ಆರ್ ಸಿ ಎ) ಪರಿಚಯಿಸುವ ಹೊಸ ಪದ್ಧತಿ ಈ ಕೆಳಗಿನಂತಿರುತ್ತದೆ.

 

ಜಿಡಿಎಸ್ ಗಳಿಗೆ ಉದ್ದೇಶಿತ ಎರಡು ವಿಭಾಗಗಳಲ್ಲಿ ಕೆಲಸದ ಅವಧಿ/ಹಂತ ಆಧರಿಸಿ ನೀಡುವ ಕನಿಷ್ಠ ಟಿ ಆರ್ ಸಿ ಎ

 

 

ಕ್ರ.ಸಂ.

ವಿಭಾಗ

ಕನಿಷ್ಠ ಟಿಆರ್ಸಿಎ 4 ಗಂಟೆಗಳಿಗೆ / 1ನೇ ಹಂತ

ಕನಿಷ್ಠ ಟಿಆರ್ಸಿ

ಗಂಟೆಗಳಿಗೆ 2ನೇಹಂತ

1.

ಬಿಪಿಎಂ

12,000 ರೂ.

14,500 ರೂ.

2.

ಎಬಿಪಿಎಂ / ದಾಕ್ ಸೇವಕರು

10,000 ರೂ.

12,000 ರೂ.

 

 

 

4. ತುಟ್ಟಿ ಭತ್ಯೆ ಪಾವತಿ ಪ್ರತ್ಯೇಕವಾಗಿ ಮುಂದುವರಿಯಲಿದೆ ಮತ್ತು ಅದು ಕೇಂದ್ರ ಸರ್ಕಾರಿ ನೌಕರರಿಗೆ ಪರಿಷ್ಕರಣೆಯಾಗುತ್ತಿರುವಂತೆ ಕಾಲ ಕಾಲಕ್ಕೆ ಪರಿಷ್ಕರಣೆಯಾಗಲಿದೆ.

 

5. ಎಕ್ಸ್ ಗ್ರೇಷಿಯಾ ಬೋನಸ್ ಲೆಕ್ಕಾಚಾರವನ್ನು ಮುಂದುವರಿಸಲು ನಿರ್ಧರಿಸಲಾಗಿದ್ದು, ಆ ಲೆಕ್ಕಾಚಾರದಂತೆ ಹೊಸ ಪದ್ಧತಿ ರಚನೆಯಾಗುವವರೆಗೆ ಮೂಲಟಿ ಆರ್ ಸಿ ಎ ಮತ್ತು ತುಟ್ಟಿಭತ್ಯೆ ಆಧರಿಸಿ 7 ಸಾವಿರ ರೂಪಾಯಿ ಗರಿಷ್ಠ ಮಿತಿ ನಿಗದಿ ಮಾಡಲಾಗಿದೆ.

 

6. 2016ರ ಜನವರಿ 1 ರಿಂದ ಅನುಷ್ಠಾನವಾಗುವ ದಿನಾಂಕದ ವರೆಗೆ ಬಾಕಿಯನ್ನು ಟಿ ಆರ್ ಸಿ ಎ ಮೂಲ ವೇತನ ಹೆಚ್ಚಿಸಿ ಪಾವತಿಸಲುತೀರ್ಮಾನಿಸಲಾಯಿತು. ಬಾಕಿಯನ್ನು ಒಂದೇ ಕಂತಿನಲ್ಲಿ ನೀಡಲಾಗುವುದು.

 

7. ಜಿಡಿಎಸ್ ಗಳ ಲಿಖಿತ ಮನವಿಗಳನ್ನಾಧರಿಸಿ ಪ್ರತಿ ವರ್ಷ ಜನವರಿ 1ಕ್ಕೆ ಅಥವಾ ಜುಲೈ 1ಕ್ಕೆ ಅನ್ವಯವಾಗುವಂತೆ  ಶೇ.3ರಷ್ಟು ವೇತನ ಹೆಚ್ಚಳವಾಗಲಿದೆ.

 

8. ಹೊಸದಾಗಿ ಅಪಾಯ ಮತ್ತು ಸಂಕಷ್ಟ ಭತ್ಯೆಗಳನ್ನು ಪರಿಚಯಿಸಲಾಗಿದೆ. ಇದಲ್ಲದೆ ಕಚೇರಿ ನಿರ್ವಹಣಾ ಭತ್ಯೆ, ಜಂಟಿ ಕರ್ತವ್ಯ ಭತ್ಯೆ, ನಗದು ಶುಲ್ಕ,ಬೈಸಿಕಲ್ ನಿರ್ವಹಣಾ ಶುಲ್ಕ, ದೋಣಿ ಶುಲ್ಕ ಮತ್ತು ನಿಗದಿತ ಕಚೇರಿಗೆ ಅಗತ್ಯ ಸಾಮಗ್ರಿ ಖರೀದಿ ವೆಚ್ಚಗಳನ್ನು ಪರಿಷ್ಕರಿಸಲಾಗುವುದು.

 

ಅನುಷ್ಠಾನ ಕಾರ್ಯತಂತ್ರ ಮತ್ತು ಗುರಿ :-

 

          ಈ ವೇತನ ಪರಿಷ್ಕರಣೆಯ ಪರಿಣಾಮ ಗ್ರಾಮೀಣ ದಾಕ್ ಸೇವಕರ ವೇತನ, ಭತ್ಯೆಗಳು ಸುಧಾರಣೆಯಾಗಿ ಅವರು ಗ್ರಾಮೀಣ ಭಾಗದಲ್ಲಿ ಪರಿಣಾಮಕಾರಿಮತ್ತು ಕಡಿಮೆ ಖರ್ಚಿನಲ್ಲಿ ಮೂಲ ಅಂಚೆ ಸೇವೆಗಳನ್ನು ನೀಡಲು ಸಾಧ್ಯವಾಗುತ್ತದೆ. ಉದ್ದೇಶಿತ ವೇತನ ಪರಿಷ್ಕರಣೆಯಿಂದಾಗಿ ಸೇವಕರ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿ ಸುಧಾರಣೆಯಾಗಲಿದೆ.

 

ಪರಿಣಾಮ :-

 

ಗ್ರಾಮಗಳಲ್ಲಿನ ಶಾಖಾ ಅಂಚೆ ಕಚೇರಿಗಳು ಸಂವಹನ ಮತ್ತು ಹಣಕಾಸು ಸೇವೆಗಳನ್ನು ಒದಗಿಸುತ್ತಿದ್ದು, ಅವುಗಳು ಬಹುತೇಕ ಗುಡ್ಡಗಾಡುಪ್ರದೇಶಗಳಲ್ಲಿ ಇರುತ್ತದೆ. ಅಂಚೆ ಮಾಸ್ಟರ್ ಸಾಕಷ್ಟು ಕೆಲಸಗಳನ್ನು ಮಾಡಬೇಕಾಗಿದ್ದು, ಗ್ರಾಹಕರಿಗೆ ಅಗತ್ಯ ಪಾವತಿಗಳನ್ನು ಮಾಡಬೇಕಿದೆ. ಆದ್ದರಿಂದ ಅವರಕೆಲಸದ ಮೇಲೆ ಈಗಾಗಲೇ ಅವರಿಗೆ ಹೊಣೆಗಾರಿಕೆ ಹೊರಿಸಲಾಗಿದೆ. ಹೆಚ್ಚಿನ ವೇತನ ಅವರ ಮೇಲೆ ಇನ್ನಷ್ಟು ಜವಾಬ್ದಾರಿಯನ್ನು ಹೆಚ್ಚಿಸಲಿದೆ. ಅಲ್ಲದೆ ಭಾರತೀಯ ಅಂಚೆ ಪಾವತಿ ಬ್ಯಾಂಕ್ (ಐಪಿಪಿಬಿ) ಆರಂಭವಾಗಿರುವುದರಿಂದ ಸಂಪರ್ಕಜಾಲದಲ್ಲಿ ಗ್ರಾಮೀಣ ಭಾಗದ ಜನತೆಗೆ ಹಣಕಾಸಿನ ಸೇವೆಗಳನ್ನುಒದಗಿಸುವಲ್ಲಿ ಅದು ಅತ್ಯಂತ ಪ್ರಮುಖ ಪಾತ್ರವನ್ನು ವಹಿಸುತ್ತದೆ.

 

ಹಿನ್ನೆಲೆ :-

 

          ಗ್ರಾಮೀಣ ಪ್ರದೇಶದಲ್ಲಿ ಪರಿಣಾಮಕಾರಿ ಅಂಚೆ ಸೇವೆಗಳನ್ನು ಒದಗಿಸುವ ಜತೆಗೆ ಮೂಲ ಹಣಕಾಸು ಸೇವೆಗಳನ್ನು ಒದಗಿಸುವ ಅಂಚೆ ಇಲಾಖೆ ಸುಮಾರು 150 ವರ್ಷಗಳ ಹಿಂದೆ ಸ್ಥಾಪನೆಯಾಯಿತು. ಅದಕ್ಕೆ ಪೂರಕವಾಗಿ ಪೂರ್ಣಾವಧಿ ಸಿಬ್ಬಂದಿಯನ್ನು ಬಳಸಿಕೊಳ್ಳಲಾಗದೆ, ಹೆಚ್ಚುವರಿಯಾಗಿ ಈಇಲಾಖೆಯನ್ನು ಸೃಷ್ಟಿಸಲಾಯಿತು. ಒಂದು ಲಕ್ಷದ 29 ಸಾವಿರದ 346 ಹೆಚ್ಚುವರಿ ಅಂಚೆ ಶಾಖೆಗಳನ್ನು ಪ್ರಾಥಮಿಕವಾಗಿ ಗ್ರಾಮೀಣ ದಾಕ್ ಸೇವಕ ಶಾಖೆ ಅಂಚೆಮಾಸ್ಟರ್ ಎಂದು ಗುರುತಿಸಲಾಗಿತ್ತು. ಇದರ ಜತೆಗೆ ಶಾಖೆ, ಉಪಶಾಖೆ ಮತ್ತು ಮುಖ್ಯ ಕೇಂದ್ರ ಕಚೇರಿಗಳಲ್ಲಿ ಕೆಲಸ ಮಾಡಲೂ ಸಹ ಗ್ರಾಮೀಣ ದಾಕ್ ಸೇವಕರನ್ನು ಬಳಸಿಕೊಳ್ಳಲಾಯಿತು. ಈ ಗ್ರಾಮೀಣ ದಾಕ್ ಸೇವಕರು ಪ್ರಮುಖವಾಗಿ ಪಾರ್ಟ್ ಟೈಮ್ ಅಂದರೆ ಅರೆಕಾಲಿಕವಾಗಿ ಪ್ರತಿ ದಿನ 3 ರಿಂದ 5ಗಂಟೆಗಳ ಕಾಲ ಕೆಲಸ ಮಾಡುತ್ತಾರೆ. ಇದು ಅವರಿಗೆ ಮತ್ತು ಅವರ ಕುಟುಂಬದ ಜೀವನೋಪಾಯಕ್ಕೆ ಹೆಚ್ಚುವರಿ ಆದಾಯದ ಮೂಲವಾಗಿದೆ. ದಾಕ್ ಸೇವಕರ ಸೇವಾ ಅವಧಿ 65 ವರ್ಷಗಳ ವರೆಗೆ ಇರುತ್ತದೆ.

 

*********


(Release ID: 1535144)