ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ
ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಆಹಾರ ಕಾರ್ಯದರ್ಶಿಗಳ ಸಮ್ಮೇಳನದಲ್ಲಿ, ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಗೆ ಸಂಬಂಧಿಸಿದ ವಿವಿಧ ವಿಷಯಗಳ ಪರಿಶೀಲನೆ
ಹೊಸ ಶೇಖರಣಾ ನೀತಿಯು 131 ಎಲ್ಎಮ್ಟಿ ಹೆಚ್ಚುವರಿ ಶೇಖರಣಾ ಸಾಮರ್ಥ್ಯವನ್ನು ಪರಿಭಾವಿಸುತ್ತದೆ
ಡಿಸೆಂಬರ್ 2026 ರ ವೇಳೆಗೆ ವಾಹನ ಸ್ಥಳ ಪತ್ತೆ ವ್ಯವಸ್ಥೆಯ (VLTS) ಅನುಷ್ಠಾನವನ್ನು ಪೂರ್ಣಗೊಳಿಸಲು ರಾಜ್ಯಗಳಿಗೆ ಸಲಹೆ
30 ಜುಲೈ 2026 ರಂತೆ ಇ-ಕೆವೈಸಿ (e-KYC) ವ್ಯಾಪ್ತಿಯು 90.64% ರಷ್ಟು ತಲುಪಿದೆ
ಪ್ರಕಟಣಾ ದಿನಾಂಕ:
01 SEP 2026 8:39PM by PIB Bengaluru
ಆಹಾರಧಾನ್ಯಗಳ ಸಂಗ್ರಹಣೆ, ಸಾರ್ವಜನಿಕ ವಿತರಣೆ ಮತ್ತು ಶೇಖರಣೆಗೆ ಸಂಬಂಧಿಸಿದ ಪ್ರಮುಖ ವಿಷಯಗಳನ್ನು ಪರಿಶೀಲಿಸಲು, ಭಾರತ ಸರ್ಕಾರದ ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯ (DFPD) ಕಾರ್ಯದರ್ಶಿ ಶ್ರೀ ಸಂಜೀವ್ ಚೋಪ್ರಾ ಅವರು, 2026 ರ ಸೆಪ್ಟೆಂಬರ್ 1 ರಂದು ನವದೆಹಲಿಯಲ್ಲಿ, ರಾಜ್ಯ ಆಹಾರ ಕಾರ್ಯದರ್ಶಿಗಳ ಸಭೆಯ ಅಧ್ಯಕ್ಷತೆ ವಹಿಸಿದ್ದರು. ವಿವಿಧ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಆಹಾರ ಕಾರ್ಯದರ್ಶಿಗಳು ಮತ್ತು ಭಾರತೀಯ ಆಹಾರ ನಿಗಮದ (FCI) ಅಧಿಕಾರಿಗಳು ಈ ಸಭೆಯಲ್ಲಿ ಭಾಗವಹಿಸಿದ್ದರು.
ಭತ್ತ ಸಂಗ್ರಹಣೆ ಮತ್ತು ಸುಧಾರಿತ ಅಕ್ಕಿ
ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳೊಂದಿಗಿನ ಸುದೀರ್ಘ ಚರ್ಚೆಯ ನಂತರ, ಮುಂಬರುವ 2026-27 ರ ಮುಂಗಾರು ಋತುವಿನ ಬೇಡಿಕೆಗೆ (KMS) ಭತ್ತದ ಸಂಗ್ರಹಣೆಯ ಅಂದಾಜನ್ನು, ಭತ್ತದ ರೂಪದಲ್ಲಿ, 708.64 ಎಲ್ಎಮ್ಟಿ (LMT) ಎಂದು ನಿಗದಿಪಡಿಸಲಾಗಿದೆ.
ಪಿಎಮ್ಜಿಕೆಎವೈ (PMGKAY) ಮತ್ತು ಇತರ ಕಲ್ಯಾಣ ಯೋಜನೆಗಳ ಅಡಿಯಲ್ಲಿ ಸುಧಾರಿತ ಅಕ್ಕಿಯ ಅನುಷ್ಠಾನವನ್ನು ಸಹ ಪರಿಶೀಲಿಸಲಾಯಿತು. ಅನುಮೋದಿತ ನೀತಿಯ ಅಡಿಯಲ್ಲಿ, ಸಂಗ್ರಹಿಸಲಾದ ಕಚ್ಚಾ ಅಕ್ಕಿಯು ಪ್ರಸ್ತುತ ಇರುವ 25% ಮಿತಿಯ ಬದಲಿಗೆ 10% ರಷ್ಟು ಮಾತ್ರ ಮುರಿದ ಅಕ್ಕಿ (ಕಿಚಡಿ/ನುಚ್ಚು) ಹೊಂದಿರಲಿದೆ. ಕುಚಲಕ್ಕಿಗೆ ಪ್ರಸ್ತುತ ಇರುವ 16% ಮಿತಿಯ ಬದಲಿಗೆ 5% ರಷ್ಟು ಮುರಿದ ಅಕ್ಕಿಯ ಮಿತಿಯಿರಲಿದೆ.
ಮುಂಗಾರು ಋತುವಿನ ಬೇಡಿಕೆಗೆ ಅನುಗುಣವಾಗಿ (KMS) 2026-27 ರಿಂದ ಸುಧಾರಿತ ಅಕ್ಕಿಯ ಸಂಗ್ರಹಣೆಯು ಪ್ರಾರಂಭವಾಗಲಿದ್ದು, ಸಂಗ್ರಹಣೆ ಮಾಡುವ ರಾಜ್ಯಾದ್ಯಂತ ಹಂತ ಹಂತವಾಗಿ ವಿಸ್ತರಿಸಲಾಗುವುದು. ಮಿಲ್ಲಿಂಗ್ ಸಾಮರ್ಥ್ಯವನ್ನು ಮೌಲ್ಯಮಾಪನ ಮಾಡಲು, ಅಗತ್ಯ ಮೇಲ್ದರ್ಜೆಗೆ ಏರಿಸುವ ಯೋಜನೆಯನ್ನು ರೂಪಿಸಲು ಮತ್ತು ಅನುಷ್ಠಾನಕ್ಕೆ ಹಂತ-ಹಂತದ ರಸ್ತೆ ನಕ್ಷೆಯನ್ನು ಸಿದ್ಧಪಡಿಸಲು ರಾಜ್ಯಗಳಿಗೆ ವಿನಂತಿಸಲಾಯಿತು.
ಮುಂಗಾರು ಋತು 2026-27 ರ ಅವಧಿಯಲ್ಲಿ, ರಾಜ್ಯಗಳಿಂದ 18.85 ಎಲ್ಎಮ್ಟಿ (LMT) ಪ್ರಮಾಣದ ಸಿರಿಧಾನ್ಯಗಳು/ದಪ್ಪ ಧಾನ್ಯಗಳ (coarse grains) ಸಂಗ್ರಹಣೆಯನ್ನು ಅಂದಾಜಿಸಲಾಗಿದೆ.
ಸಿರಿಧಾನ್ಯಗಳು, ಕಿರುಧಾನ್ಯಗಳು ಮತ್ತು ಸಂಗ್ರಹಣಾ ತಂತ್ರಜ್ಞಾನ
ಸಿರಿಧಾನ್ಯಗಳು, ಕಿರುಧಾನ್ಯಗಳು ಮತ್ತು ಸಣ್ಣ ಪ್ರಮಾಣದ ಧಾನ್ಯಗಳ ಸಂಗ್ರಹಣೆ ಮತ್ತು ವಿತರಣಾ ಯೋಜನೆಗಳನ್ನು ಪರಿಶೀಲಿಸಲಾಯಿತು. 2025-26 ರ ಅವಧಿಯಲ್ಲಿ 16.38 ಎಲ್ಎಮ್ಟಿ (LMT) ಸಿರಿಧಾನ್ಯಗಳು ಮತ್ತು ಕಿರುಧಾನ್ಯಗಳನ್ನು ಸಂಗ್ರಹಿಸಲಾಗಿದ್ದು, ಇದು ಕಳೆದ ಐದು ವರ್ಷಗಳಲ್ಲಿ ದಾಖಲಾದ ಗರಿಷ್ಠ ಸಂಗ್ರಹಣೆಯಾಗಿದೆ ಎಂದು ಸಮ್ಮೇಳನದಲ್ಲಿ ತಿಳಿಸಲಾಯಿತು.
ಸಂಗ್ರಹಣಾ ಕೇಂದ್ರದ ಸ್ಮಾರ್ಟ್-ಅಸೆಸ್ಮೆಂಟ್ ಪೋರ್ಟಲ್ (PCSAP) ಅಡಿಯಲ್ಲಿನ ಪ್ರಗತಿಯನ್ನು ಪರಿಶೀಲಿಸಲಾಯಿತು, ಇದರಲ್ಲಿ ಮುಂಗಾರು ಋತು 2026-27 ರಿಂದ, ಎಐ-ಆಧಾರಿತ (AI-based) ಚಿತ್ರ ಪರಿಶೀಲನೆಯನ್ನು (image validation) ಪರಿಚಯಿಸುವುದು ಸೇರಿದೆ.
ಸಮ್ಮೇಳನವು ಜಂಟಿ ಭೌತಿಕ ಪರಿಶೀಲನೆಯ (JPV) ಪ್ರಗತಿಯನ್ನು ಸಹ ಪರಿಶೀಲಿಸೀತು. ಮುಂಗಾರು ಋತು 2026-27 ರಿಂದ ಪ್ರಾರಂಭವಾಗುವ ಸಂಗ್ರಹಣಾ ಋತುವಿನ ಕೊನೆಯಲ್ಲಿ ಭತ್ತದ ಉದ್ದೇಶಿತ ಆನ್ಲೈನ್ ಭೌತಿಕ ಪರಿಶೀಲನೆಯ ಕುರಿತು ರಾಜ್ಯಗಳೊಂದಿಗೆ ಚರ್ಚಿಸಲಾಯಿತು.
ರಾಜ್ಯಗಳ ಯಶಸ್ವಿ ಉಪಕ್ರಮಗಳು ಮತ್ತು ಅತ್ಯುತ್ತಮ ಅಭ್ಯಾಸಗಳನ್ನು ಸಹ ಗುರುತಿಸಿ ಗೌರವಿಸಲಾಯಿತು:
• ಆಂಧ್ರ ಪ್ರದೇಶ – ಸುಧಾರಿತ ಅಕ್ಕಿ ಯೋಜನೆಯ ಅತ್ಯುತ್ತಮ ಅನುಷ್ಠಾನ
• ಪಂಜಾಬ್ – ಜೆಪಿವಿ (JPV) ಮತ್ತು ಪಿಸಿಎಸ್ಎಪಿ (PCSAP) ನಲ್ಲಿ ಅತ್ಯುತ್ತಮ ಪ್ರದರ್ಶನ
• ಕರ್ನಾಟಕ – ಶ್ರೀ ಅನ್ನ (ಸಿರಿಧಾನ್ಯ) ಸಂಗ್ರಹಣೆಯಲ್ಲಿ ಶ್ರೇಷ್ಠತೆ
• ಛತ್ತೀಸ್ಗಢ – ಭತ್ತ ಸಂಗ್ರಹಣೆಯಲ್ಲಿ ಅಗ್ರಿಸ್ಟ್ಯಾಕ್ (AgriStack) ಅನುಷ್ಠಾನಗೊಳಿಸಿದ ಮೊದಲ ರಾಜ್ಯ
ಶೇಖರಣಾ ಸಾಮರ್ಥ್ಯ ಮತ್ತು ಡಿಪೋ ದರ್ಪಣ್
ಸಂಗ್ರಹಣೆ ಮತ್ತು ವಿತರಣೆಯ ನಡುವೆ ಬೆಳೆಯುತ್ತಿರುವ ಅಸಮಾನತೆ, ಪ್ರಾದೇಶಿಕ ಅಸಮತೋಲನ ಮತ್ತು ಶೇಖರಣಾ ಸಾಮರ್ಥ್ಯದ ಕೊರತೆಯನ್ನು ಬಗೆಹರಿಸಲು ಶ್ರಮಿಸುವ ಹೊಸ ಶೇಖರಣಾ ನೀತಿಯನ್ನು ಸಮ್ಮೇಳನವು ಪರಿಶೀಲಿಸಿತು.
ಈ ನೀತಿಯು ರಾಜ್ಯಗಳಿಂದ 111 ಎಲ್ಎಮ್ಟಿ (LMT) ಮತ್ತು ಎಫ್ಸಿಐ (FCI) ನಿಂದ 20 ಎಲ್ಎಮ್ಟಿ ಸೇರಿದಂತೆ ಒಟ್ಟು 131 ಎಲ್ಎಮ್ಟಿ ಹೆಚ್ಚುವರಿ ಶೇಖರಣಾ ಸಾಮರ್ಥ್ಯದ ಸೃಷ್ಟಿಯನ್ನು ಪರಿಭಾವಿಸುತ್ತದೆ. ಗುರುತಿಸಲಾದ ರಾಜ್ಯಗಳು ಸಮಯಬದ್ಧ ಕ್ರಿಯಾ ಯೋಜನೆಗಳನ್ನು ಸಲ್ಲಿಸಲು ವಿನಂತಿಸಲಾಯಿತು.
ಉಗ್ರಾಣಗಳ ಸ್ವಯಂ-ಮೌಲ್ಯಮಾಪನ ಉಪಕರಣವಾದ ಡಿಪೋ ದರ್ಪಣ್ (Depot Darpan) ಪೋರ್ಟಲ್ನಲ್ಲಿ ತಮ್ಮ ಆಹಾರಧಾನ್ಯ ಶೇಖರಣಾ ಸೌಲಭ್ಯಗಳನ್ನು ಅಳವಡಿಸಿಕೊಳ್ಳಲು, ನಿರ್ದಿಷ್ಟ ಗಡುವಿನೊಳಗೆ ಮೌಲ್ಯಮಾಪನಗಳನ್ನು ಕೈಗೊಳ್ಳಲು ಮತ್ತು ಸಿಡಬ್ಲ್ಯೂಸಿ (CWC), ಎಫ್ಸಿಐ (FCI) ಹಾಗೂ ಡಿಎಫ್ಪಿಡಿ (DFPD) ನಿಂದ ತರಬೇತಿ ಮತ್ತು ಮಾರ್ಗದರ್ಶನ ಬೆಂಬಲವನ್ನು ಪಡೆಯಲು ರಾಜ್ಯಗಳಿಗೆ ಸಲಹೆ ನೀಡಲಾಯಿತು.
ತಂತ್ರಜ್ಞಾನ ಚಾಲಿತ ಆಹಾರಧಾನ್ಯ ಸಂಚಾರ
ಪಿಡಿಎಸ್ ಪೂರೈಕೆ ಸರಪಳಿಯ ಅಡಿಯಲ್ಲಿ ಆಹಾರ ಧಾನ್ಯಗಳನ್ನು ಸಾಗಿಸುವ ವಾಹನಗಳ ಜಿಪಿಎಸ್ ಆಧಾರಿತ ನೈಜ-ಸಮಯದ ಟ್ರ್ಯಾಕಿಂಗ್ಗಾಗಿ ವಾಹನ ಸ್ಥಳ ಟ್ರ್ಯಾಕಿಂಗ್ ವ್ಯವಸ್ಥೆ (ವಿಎಲ್ಟಿಎಸ್) ಅನುಷ್ಠಾನವನ್ನು ಪರಿಶೀಲಿಸಲಾಯಿತು.
ಪಿಡಿಎಸ್ (PDS) ಪೂರೈಕೆ ಸರಪಳಿಯಡಿಯಲ್ಲಿ ಆಹಾರಧಾನ್ಯಗಳನ್ನು ಸಾಗಿಸುವ ವಾಹನಗಳ ಜಿಪಿಎಸ್-ಆಧಾರಿತ ನೈಜ-ಸಮಯದ ಟ್ರ್ಯಾಕಿಂಗ್ಗಾಗಿ ವಾಹನ ಸ್ಥಳ ಪತ್ತೆ ವ್ಯವಸ್ಥೆಯ (VLTS) ಅನುಷ್ಠಾನವನ್ನು ಪರಿಶೀಲಿಸಲಾಯಿತು.
ಡಿಸೆಂಬರ್ 2026 ರ ವೇಳೆಗೆ ಅನುಷ್ಠಾನವನ್ನು ಪೂರ್ಣಗೊಳಿಸಲು ರಾಜ್ಯಗಳಿಗೆ ಸಲಹೆ ನೀಡಲಾಯಿತು ಮತ್ತು ಗುರುತಿಸಲಾದ ರಾಜ್ಯಗಳು ಸೆಪ್ಟೆಂಬರ್ 2026 ರ ವೇಳೆಗೆ ಪೂರ್ಣಗೊಳಿಸುವ ಗುರಿಯನ್ನು ಹೊಂದಿವೆ.
ಕೆಎಮ್ಎಸ್ (KMS) ಮತ್ತು ಆರ್ಎಮ್ಎಸ್ (RMS) ಎರಡನ್ನೂ ಬೆಂಬಲಿಸುವ ಸಂಗ್ರಹಣೆ ಹೊಂದುವಿಕೆಯನ್ನು ಗರಿಷ್ಠಗೊಳಿಸುವ ಉಪಕರಣವನ್ನು (Procurement Optimisation Tool) ಪರಿಶೀಲಿಸಲಾಯಿತು. ಈ ಉಪಕರಣವು ಭದ್ರತಾ ತಪಾಸಣೆಗೆ ಒಳಪಟ್ಟಿದ್ದು, ಪಂಜಾಬ್ ಮತ್ತು ಹರಿಯಾಣದಲ್ಲಿ ಅಳವಡಿಸಲಾಗಿದೆ. ಉಳಿದ ರಾಜ್ಯಗಳು ಸೆಪ್ಟೆಂಬರ್ 15, 2026 ರ ವೇಳೆಗೆ ವ್ಯವಸ್ಥೆಯಲ್ಲಿ ಸಂಗ್ರಹಣಾ ಕೇಂದ್ರ, ಮಿಲ್ ಮತ್ತು ಉಗ್ರಾಣದ ದತ್ತಾಂಶವನ್ನು ಸಿದ್ಧಪಡಿಸಲು ಮತ್ತು ನವೀಕರಿಸಲು ವಿನಂತಿಸಲಾಯಿತು.
ಅಂಕಿ ಅಂಶಗಳ ವಿನಿಮಯದಲ್ಲಿ ಹಸ್ತಕ್ಷೇಪದ ಮಧ್ಯಸ್ಥಿಕೆಯನ್ನು ಹೋಗಲಾಡಿಸಲು ರಾಜ್ಯ ಎಸ್ಸಿಎಮ್ಎಸ್ (SCMS) ಮತ್ತು ವಿಎಲ್ಟಿಎಸ್ (VLTS) ಜೊತೆಗೆ ‘ಅನ್ನ ಚಕ್ರ’ ದ ಸಂಯೋಜನೆಯನ್ನು ಸಮ್ಮೇಳನವು ಪರಿಶೀಲಿಸಿತು. ಆರು ರಾಜ್ಯಗಳಿಗೆ ಸಂಯೋಜನೆ ಪೂರ್ಣಗೊಂಡಿದೆ. ಉಳಿದ ರಾಜ್ಯಗಳಿಗೆ ಸೆಪ್ಟೆಂಬರ್ ಮತ್ತು ಡಿಸೆಂಬರ್ 2026 ರ ವೇಳೆಗೆ ಹಂತ ಹಂತವಾಗಿ ಸಂಯೋಜನೆಯನ್ನು ಪೂರ್ಣಗೊಳಿಸಲು ಮತ್ತು ಎಫ್ಪಿಎಸ್ (FPS), ಉಗ್ರಾಣ ಮತ್ತು ಸರಕು ಮಾಸ್ಟರ್ ಅಂಕಿ ಅಂಶಗಳ ಪರಿಶೀಲನೆ ಹಾಗೂ ನವೀಕರಣವನ್ನು ಖಚಿತಪಡಿಸಿಕೊಳ್ಳಲು ಸಲಹೆ ನೀಡಲಾಯಿತು.
ಪಿಡಿಎಸ್ ಸುಧಾರಣೆಗಳು ಮತ್ತು ತಂತ್ರಜ್ಞಾನ ಆಧಾರಿತ ಸೇವೆಗಳು
ಸ್ಮಾರ್ಟ್-ಪಿಡಿಎಸ್ (SMART-PDS), ಸಾರ್ಥಕ್-ಪಿಡಿಎಸ್ (SARTHAK-PDS), ಇ-ಕೆವೈಸಿ (e-KYC) ಮತ್ತು ಮೊಬೈಲ್ ಸಂಖ್ಯೆ ಜೋಡಣೆ, ಹಾಗೆಯೇ ಮೇರಾ ರೇಷನ್ (Mera Ration) ಮತ್ತು ಅನ್ನ ಮಿತ್ರ (Anna Mitra) ಮೊಬೈಲ್ ಆಪ್ಗಳ ಅಡಿಯಲ್ಲಿ ಅಳವಡಿಕೆ ಹಾಗೂ ಮುಂದಿನ ಹಾದಿ ಸೇರಿದಂತೆ ಪಿಡಿಎಸ್ (PDS) ಸುಧಾರಣೆಗಳು ಮತ್ತು ತಂತ್ರಜ್ಞಾನ ಆಧಾರಿತ ಸೇವಾ ವಿತರಣೆಗೆ ಸಂಬಂಧಿಸಿದ ಪ್ರಮುಖ ಉಪಕ್ರಮಗಳನ್ನು ಸಮ್ಮೇಳನವು ಪರಿಶೀಲಿಸಿತು.
ನ್ಯಾಯಬೆಲೆ ಅಂಗಡಿಗಳ (FPS) ವೈಚಾರಿಕೀಕರಣ, ಸಿಬಿಡಿಸಿ (CBDC), ನಿಷ್ಕ್ರಿಯ (silent) ಮತ್ತು ನಕಲಿ ಫಲಾನುಭವಿಗಳ ಗುರುತಿಸುವಿಕೆ, ಕುಂದುಕೊರತೆ ನಿವಾರಣೆ, ರಾಜ್ಯದೊಳಗಿನ ಸಂಚಾರ ಮತ್ತು ಎಫ್ಪಿಎಸ್ ವಿತರಕರ ಲಾಭಾಂಶ, ಹಾಗೂ ಜಾಗೃತಿ ಕಾರ್ಯವಿಧಾನಗಳ ಬಲವರ್ಧನೆ ಕುರಿತು ಚರ್ಚೆಗಳು ನಡೆದವು.
ಎಫ್ಪಿಎಸ್ ವಿತರಕರ ಲಾಭಾಂಶಕ್ಕಾಗಿ ಡಿಜಿಟಲ್ ರೂಪಾಯಿ ಆಧಾರಿತ ಡಿಬಿಟಿ
ಈಗಾಗಲೇ ಗುಜರಾತ್, ಪುದುಚೇರಿ, ಮತ್ತು ಚಂಡೀಗಢ ಹಾಗೂ ದಾದ್ರಾ ನಗರ್ ಹವೇಲಿಯಲ್ಲಿ ಉದ್ಘಾಟನೆಗೊಂಡಿರುವ ಎಫ್ಪಿಎಸ್ ವಿತರಕರ ಲಾಭಾಂಶಕ್ಕಾಗಿ ಡಿಜಿಟಲ್ ರೂಪಾಯಿ (₹) ಆಧಾರಿತ ನೇರ ನಗದು ವರ್ಗಾವಣೆ (DBT) ಪ್ರಾಯೋಗಿಕ ಯೋಜನೆಯನ್ನು ಇಡೀ ದೆಹಲಿ ರಾಜ್ಯಕ್ಕೆ ಮತ್ತು ಇನ್ನು ಆರು ರಾಜ್ಯಗಳ — ಆಂಧ್ರ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಮಧ್ಯ ಪ್ರದೇಶ, ಒಡಿಶಾ, ಪಶ್ಚಿಮ ಬಂಗಾಳ ಮತ್ತು ತಮಿಳುನಾಡು — ತಲಾ ಎರಡು ಜಿಲ್ಲೆಗಳಿಗೆ ವಿಸ್ತರಿಸಲಾಗುವುದು.
ಸೆಪ್ಟೆಂಬರ್ 11, 2026 ರಂದು ಗುಜರಾತ್ನ ಗಾಂಧಿನಗರದಲ್ಲಿ ಪರಿಶೀಲನಾ ಕಾರ್ಯಾಗಾರವನ್ನು ನಿಗದಿಪಡಿಸಲಾಗಿದೆ.
ಸಾರ್ಥಕ್-ಪಿಡಿಎಸ್ ಮತ್ತು ನ್ಯಾಯಬೆಲೆ ಅಂಗಡಿಗಳು
ಆಹಾರಧಾನ್ಯಗಳ ರಾಜ್ಯದೊಳಗಿನ ಸಂಚಾರ ಮತ್ತು ಎಫ್ಪಿಎಸ್ ವಿತರಕರ ಲಾಭಾಂಶಕ್ಕಾಗಿ ರಾಜ್ಯಗಳಿಗೆ ನೀಡುವ ನೆರವನ್ನು ಸ್ಮಾರ್ಟ್-ಪಿಡಿಎಸ್ (SMART-PDS) ತಂತ್ರಜ್ಞಾನ ಹಂತದೊಂದಿಗೆ ಸಂಯೋಜಿಸುವ 2026-31 ರ ಛತ್ರಿ ಯೋಜನೆಯಾದ ಸಾರ್ಥಕ್-ಪಿಡಿಎಸ್ (SARTHAK-PDS), ಹಣಕಾಸು ವರ್ಷ 2026-27 ಕ್ಕೆ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಶೇಕಡಾ 100 ರಷ್ಟು ಪ್ರಮುಖ ಮಂಜೂರಾತಿಯನ್ನು ನೀಡಿದೆ.
ಇ-ಕೆವೈಸಿ ಮತ್ತು ಪಡಿತರ ಚೀಟಿ ದತ್ತಾಂಶ
30 ಜುಲೈ 2026 ರಂತೆ ಇ-ಕೆವೈಸಿ (e-KYC) 90.64% ರಷ್ಟಿತ್ತು. ಇ-ಪೋಸ್ (ePOS) ಮೂಲಕ ಇ-ಕೆವೈಸಿ ಆಧಾರಿತ ದತ್ತಾಂಶ ನಕಲು ಮತ್ತು ಮೊಬೈಲ್ ಸಂಖ್ಯೆ ಜೋಡಣೆಗಾಗಿ ಹೊಸ ಪ್ರಮಾಣಿತ ಕಾರ್ಯಾಚರಣೆ ಕಾರ್ಯವಿಧಾನವನ್ನು (SOP) ಹೊರತರಲಾಗಿದೆ. ಇದು ಫಲಾನುಭವಿಗಳಿಗೆ ಆಹಾರಧಾನ್ಯಗಳ ಸುಲಭ ವಿತರಣೆಗೆ ಅನುಕೂಲ ಮಾಡಿಕೊಡುತ್ತದೆ ಎಂದು ಇಲಾಖೆಯು ಪುನರುಚ್ಚರಿಸಿದೆ.
ತಿದ್ದುಪಡಿ ಮಾಡಿದ ಟಿಪಿಡಿಎಸ್ (ನಿಯಂತ್ರಣ) ಆದೇಶ, 2015 ರ ಅಡಿಯಲ್ಲಿ ಹೊರಡಿಸಲಾದ ನಿಷ್ಕ್ರಿಯ ಪಡಿತರ ಚೀಟಿಗಳು ಮತ್ತು ನಕಲಿ ಫಲಾನುಭವಿಗಳಿಗಾಗಿ ಹೊಸ ಎಸ್ಒಪಿಗಳು (SOPs), ತಾತ್ಕಾಲಿಕ ನಿಷ್ಕ್ರಿಯಗೊಳಿಸುವಿಕೆ ಮತ್ತು ನಂತರ ಮೂರು ತಿಂಗಳ ಇ-ಕೆವೈಸಿ ಮರು-ಪರಿಶೀಲನಾ ಕಾಲಾವಕಾಶವನ್ನು ಒದಗಿಸುತ್ತವೆ. ಈ ಸೌಲಭ್ಯವು ಅಕ್ಟೋಬರ್ 1, 2026 ರಿಂದ ಸ್ಮಾರ್ಟ್-ಪಿಡಿಎಸ್ನಲ್ಲಿ (SMART-PDS) ಜಾರಿಗೆ ಬರಲಿದೆ.
ಜಾಗೃತಿ ಕಾರ್ಯವಿಧಾನಗಳ ಬಲವರ್ಧನೆ
ಎನ್ಎಫ್ಎಸ್ಎ (NFSA), 2013ರ ವಿಭಾಗ 29ರ ಪ್ರಕಾರ ಜಾಗೃತಿ ಸಮಿತಿಗಳ ಸಮಯೋಚಿತ ರಚನೆ ಮತ್ತು ನಿರಂತರ ಕಾರ್ಯಾಚರಣೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ನಿಗದಿತ ಸ್ಥಿತಿ ವರದಿಗಳನ್ನು ಸಲ್ಲಿಸಲು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಸಲಹೆ ನೀಡಲಾಯಿತು.
ನ್ಯಾಯಬೆಲೆ ಅಂಗಡಿ ಹಂತದಲ್ಲಿ ಜಾಗೃತಿ ಸಮಿತಿಗಳಿಂದ ಆಹಾರಧಾನ್ಯ ಸ್ವೀಕೃತಿಯ ಸಾಂಖ್ಯಿಕ ಆಧಾರಿತ (ಆಧಾರ್ ಆಧಾರಿತ) ದೃಢೀಕರಣವನ್ನು ಕಾರ್ಯಾಚರಣೆಗೆ ತರಲು ಮತ್ತು ನಾಲ್ಕು ವಾರಗಳ ಒಳಗೆ ಅನುಷ್ಠಾನ ಅನುಸರಣೆ ವರದಿಗಳನ್ನು ಸಲ್ಲಿಸಲು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶನ ನೀಡಲಾಯಿತು.

*****
(ಪ್ರಕಟಣೆ ಐ.ಡಿ.: 2305845)
ವಿಸಿಟರ್ ಕೌಂಟರ್ : 9