ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ
ಅಂತರ್ಜಾತೀಯ ವಿವಾಹಗಳಿಗಾಗಿ ಡಾ. ಅಂಬೇಡ್ಕರ್ ಯೋಜನೆಯಡಿ 457 ಫಲಾನುಭವಿಗಳಿಗೆ ₹10.66 ಕೋಟಿ ಆರ್ಥಿಕ ನೆರವು ನೀಡಿದ ಸರ್ಕಾರ
प्रविष्टि तिथि:
12 AUG 2026 2:48PM by PIB Bengaluru
ಯೋಜನೆಗಳ ಅನುಷ್ಠಾನದಲ್ಲಿ ನಕಲನ್ನು ತಪ್ಪಿಸಲು, ಡಾ. ಅಂಬೇಡ್ಕರ್ ಅಂತರ್ಜಾತೀಯ ವಿವಾಹಗಳ ಮೂಲಕ ಸಾಮಾಜಿಕ ಏಕೀಕರಣ ಯೋಜನೆ ಮತ್ತು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ದೌರ್ಜನ್ಯ ಸಂತ್ರಸ್ತರಿಗೆ ಡಾ. ಅಂಬೇಡ್ಕರ್ ರಾಷ್ಟ್ರೀಯ ಪರಿಹಾರ ಯೋಜನೆಯನ್ನು 1955ರ ನಾಗರಿಕ ಹಕ್ಕುಗಳ ರಕ್ಷಣಾ ಕಾಯ್ದೆ ಮತ್ತು 1989ರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯ ಅನುಷ್ಠಾನಕ್ಕಾಗಿ ಕೇಂದ್ರ ಪ್ರಾಯೋಜಿತ ಯೋಜನೆಯೊಂದಿಗೆ ವಿಲೀನಗೊಳಿಸಲಾಗಿದೆ ಎಂದು ಕೇಂದ್ರ ಸರ್ಕಾರವು ರಾಜ್ಯಸಭೆಯಲ್ಲಿ ತಿಳಿಸಿದೆ.
ಈ ಮಾಹಿತಿಯನ್ನು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಸಚಿವರಾದ ಶ್ರೀ ರಾಮದಾಸ್ ಅಠಾವಳೆ ಅವರು ಇಂದು ರಾಜ್ಯಸಭೆಯಲ್ಲಿ ಶ್ರೀ ರಾಘವ್ ಚಡ್ಡಾ ಅವರಿಗೆ ಲಿಖಿತ ಉತ್ತರದಲ್ಲಿ ನೀಡಿದ್ದಾರೆ.
1955ರ ನಾಗರಿಕ ಹಕ್ಕುಗಳ ಸಂರಕ್ಷಣಾ ಕಾಯ್ದೆ ಮತ್ತು 1989ರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯ ಅನುಷ್ಠಾನಕ್ಕಾಗಿ ಕೇಂದ್ರ ಪ್ರಾಯೋಜಿತ ಯೋಜನೆಯಡಿಯಲ್ಲಿ, ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರ್ಕಾರವು ನೆರವನ್ನು ನೀಡುತ್ತಿದ್ದು ಈ ಯೋಜನೆಯನ್ನು ಆಯಾ ರಾಜ್ಯ ಸರ್ಕಾರಗಳು/ಕೇಂದ್ರಾಡಳಿತ ಪ್ರದೇಶಗಳ ಆಡಳಿತಗಳು ಕಾರ್ಯಗತಗೊಳಿಸುತ್ತವೆ ಮತ್ತು ಅದರ ಪರಿಣಾಮಕಾರಿ ಅನುಷ್ಠಾನದ ಜವಾಬ್ದಾರಿ ಅವುಗಳ ಮೇಲಿದೆ ಎಂದು ಸಚಿವರು ತಿಳಿಸಿದರು.

ಡಾ. ಅಂಬೇಡ್ಕರ್ ಫೌಂಡೇಶನ್ ಈ ವಿಲೀನಕ್ಕೆ ಮೊದಲು ನಡೆಸಲಾದ ಅಂತರ್ಜಾತಿ ವಿವಾಹಗಳ ಮೂಲಕ ಸಾಮಾಜಿಕ ಏಕೀಕರಣಕ್ಕಾಗಿ ಡಾ. ಅಂಬೇಡ್ಕರ್ ಯೋಜನೆಗೆ ಸಂಬಂಧಿಸಿದ ಬಾಕಿ ಇರುವ ಪ್ರಕರಣಗಳನ್ನು ಪ್ರಕ್ರಿಯೆಗೊಳಿಸುವುದನ್ನು ಮತ್ತು ಹಣಕಾಸಿನ ನೆರವು ನೀಡುವುದನ್ನು ಮುಂದುವರೆಸಿದೆ. ಅದರಂತೆ, 457 ಫಲಾನುಭವಿಗಳಿಗೆ ₹10.66 ಕೋಟಿ ಮೊತ್ತದ ಆರ್ಥಿಕ ಸಹಾಯವನ್ನು ಬಿಡುಗಡೆ ಮಾಡಲಾಗಿದೆ.
ವರ್ಷವಾರು ವಿವರಗಳು ಇಂತಿವೆ; 2023-24ರಲ್ಲಿ 68 ಫಲಾನುಭವಿಗಳು, 2024-25ರಲ್ಲಿ 11 ಫಲಾನುಭವಿಗಳು ಮತ್ತು 2025-26ರಲ್ಲಿ 378 ಫಲಾನುಭವಿಗಳು ಹಣಕಾಸಿನ ನೆರವನ್ನು ಪಡೆದಿದ್ದಾರೆ ಎಂದು ತೋರಿಸುತ್ತವೆ, ಇದು ಮೂರು ವರ್ಷಗಳ ಅವಧಿಯಲ್ಲಿ ಒಟ್ಟು ಫಲಾನುಭವಿಗಳ ಸಂಖ್ಯೆಯನ್ನು 457 ಕ್ಕೆ ಹೆಚ್ಚಿಸಿದೆ.
*****
(रिलीज़ आईडी: 2298326)
आगंतुक पटल : 24