ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ
azadi ka amrit mahotsav

ರಾಷ್ಟ್ರೀಯ ಸಫಾಯಿ ಕರ್ಮಚಾರಿಗಳ ಆಯೋಗದಿಂದ ನೈರ್ಮಲ್ಯ ಮತ್ತು ಕಲ್ಯಾಣ ಸೌಲಭ್ಯಗಳ ಪರಿಶೀಲನೆ


ಎಲ್ಲಾ ಸ್ವಚ್ಛತಾ ಸಿಬ್ಬಂದಿಗೆ ಸುರಕ್ಷಿತ ಕೆಲಸದ ವಾತಾವರಣವನ್ನು ಖಚಿತಪಡಿಸಲು ಕೈಯಿಂದ ಶೌಚಗುಂಡಿಗಳನ್ನು ಸ್ವಚ್ಛಗೊಳಿಸುವ ಪದ್ಧತಿ ಸಂಪೂರ್ಣ ನಿರ್ಮೂಲನೆ ಮತ್ತು ಯಾಂತ್ರೀಕೃತ ಕಾರ್ಯಾಚರಣೆಗಳ ಅಳವಡಿಕೆಯನ್ನು ವೇಗಗೊಳಿಸಲು ಎನ್ ಸಿಎಸ್ ಕೆ  ಸದಸ್ಯ ಕರಮ್ ಸಿಂಗ್ ಕರ್ಮ ಒತ್ತು

प्रविष्टि तिथि: 18 JUL 2026 6:41PM by PIB Bengaluru

ನೈರ್ಮಲ್ಯ ಕಾರ್ಮಿಕರ ಕೆಲಸದ ಪರಿಸ್ಥಿತಿಗಳು, ಸುರಕ್ಷತೆ ಮತ್ತು ಒಟ್ಟಾರೆ ಕಲ್ಯಾಣವನ್ನು ಬಲಪಡಿಸುವ ಪ್ರಮುಖ ಉಪಕ್ರಮವಾಗಿ, ರಾಷ್ಟ್ರೀಯ ಸಫಾಯಿ ಕರ್ಮಚಾರಿಗಳ ಆಯೋಗವು (ಎನ್ ಸಿಎಸ್ ಕೆ ) ನವದೆಹಲಿ ಮುನ್ಸಿಪಲ್ ಕೌನ್ಸಿಲ್ (ಎನ್ ಡಿ ಎಂ ಸಿ) ನಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಸಮಗ್ರ ಪರಿಶೀಲನೆ ನಡೆಸಿತು.

ಎನ್ ಸಿ ಎಸ್ ಕೆ ಸದಸ್ಯರಾದ ಶ್ರೀ ಕರಮ್ ಸಿಂಗ್ ಕರ್ಮ ಅವರ ಅಧ್ಯಕ್ಷತೆಯಲ್ಲಿ ನಡೆದ  ಸಭೆಯಲ್ಲಿ ಎನ್ ಡಿಎಂಸಿ ಕಾರ್ಯದರ್ಶಿ ಶ್ರೀ ರಾಹುಲ್ ಸಿಂಗ್, ಮುಖ್ಯ ಇಂಜಿನಿಯರ್ಗಳು, ನಿರ್ದೇಶಕರು, ಮುಖ್ಯ ಆರೋಗ್ಯ ಅಧಿಕಾರಿ, ಮುಖ್ಯ ವೈದ್ಯಾಧಿಕಾರಿ, ನೈರ್ಮಲ್ಯ ನಿರೀಕ್ಷಕರು, ಹಿರಿಯ ಇಲಾಖಾ ಮುಖ್ಯಸ್ಥರು, ಸಫಾಯಿ ಕರ್ಮಚಾರಿ ಸಂಘಗಳ ಪ್ರತಿನಿಧಿಗಳು, ಹೊರಗುತ್ತಿಗೆ ಸೇವಾ ಪೂರೈಕೆದಾರರ ಅಧಿಕಾರಿಗಳು ಮತ್ತು ವಿವಿಧ ಪುರಸಭೆ ವಲಯಗಳ ನೈರ್ಮಲ್ಯ ಕಾರ್ಮಿಕರು ಭಾಗವಹಿಸಿದ್ದರು.

ಚರ್ಚೆಯಲ್ಲಿ, ಶ್ರೀ ಕರಮ್ ಸಿಂಗ್ ಕರ್ಮ ಅವರು ಸಾರ್ವಜನಿಕ ಆರೋಗ್ಯ ಮತ್ತು ಇಂಜಿನಿಯರಿಂಗ್ ಇಲಾಖೆಗಳ ಸಮಗ್ರ ಕಾರ್ಯಾಚರಣೆಯ ಸ್ವರೂಪವನ್ನು ಮೌಲ್ಯಮಾಪನ ಮಾಡಿದರು. ಎಲ್ಲಾ ಸ್ವಚ್ಛತಾ ಸಿಬ್ಬಂದಿಗೆ ಸುರಕ್ಷಿತ ಕೆಲಸದ ವಾತಾವರಣವನ್ನು ಒದಗಿಸಲು ಕೈಯಿಂದ ಶೌಚಗುಂಡಿಗಳನ್ನು ಸ್ವಚ್ಛಗೊಳಿಸುವ ಪದ್ಧತಿ ಸಂಪೂರ್ಣ ನಿರ್ಮೂಲನೆಯನ್ನು ಖಾತ್ರಿಪಡಿಸುವುದು ಮತ್ತು ಯಾಂತ್ರೀಕೃತ ಕಾರ್ಯಾಚರಣೆಗಳ ಅಳವಡಿಕೆಯನ್ನು ವೇಗಗೊಳಿಸುವುದಕ್ಕೆ ವಿಶೇಷ ಒತ್ತು ನೀಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ವರ್ಮಾ, "ಸಫಾಯಿ ಕರ್ಮಚಾರಿಗಳು ನಮ್ಮ ನಗರಗಳ ನಿಜವಾದ ಪಾಲಕರು. ನಮ್ಮ ರಸ್ತೆಗಳು, ಸಾರ್ವಜನಿಕ ಸ್ಥಳಗಳು ಮತ್ತು ನೆರೆಹೊರೆಯ ಪ್ರದೇಶಗಳು ಸ್ವಚ್ಛವಾಗಿ, ಆರೋಗ್ಯಕರವಾಗಿ ಮತ್ತು ಆಕರ್ಷಕವಾಗಿ ಇರುವುದನ್ನು ಖಚಿತಪಡಿಸಿಕೊಳ್ಳಲು ಅವರು ನಮ್ಮೆಲ್ಲರಿಗಿಂತ ಮುಂಚಿತವಾಗಿ, ಮುಂಜಾನೆಯೇ ತಮ್ಮ ಮನೆಗಳನ್ನು ತೊರೆದು ಕೆಲಸವನ್ನು ಪ್ರಾರಂಭಿಸುತ್ತಾರೆ. ಅವರ ದಣಿವರಿಯದ ಸಮರ್ಪಣಾ ಮನೋಭಾವವು ನಗರ ಜೀವನದ ಬುನಾದಿಯಾಗಿದ್ದು, ಅವರಿಗೆ ಅತ್ಯುನ್ನತ ಗೌರವ ಮತ್ತು ಮನ್ನಣೆ ಸಿಗಬೇಕು. ಅವರ ಕಲ್ಯಾಣ, ಘನತೆ ಮತ್ತು ಕೆಲಸದ ಪರಿಸ್ಥಿತಿಗಳನ್ನು ರಕ್ಷಿಸುವುದು ಪ್ರತಿಯೊಂದು ನಾಗರಿಕ ಸಂಸ್ಥೆಯ ಹಾಗೂ ನಮ್ಮೆಲ್ಲರ ಸಾಮೂಹಿಕ ಜವಾಬ್ದಾರಿಯಾಗಿದೆ," ಎಂದರು.

ಸಭೆಯು ನೌಕರರ ಸಂಘದ ಮುಖಂಡರು ಮತ್ತು ತಳಮಟ್ಟದ ನೈರ್ಮಲ್ಯ ಸಿಬ್ಬಂದಿ ಎತ್ತಿ ತೋರಿಸಿದ ಕುಂದುಕೊರತೆಗಳು ಮತ್ತು ವ್ಯವಸ್ಥೆಯ ಸಮಸ್ಯೆಗಳನ್ನು ನೇರವಾಗಿ ಆಲಿಸಲು ಮತ್ತು ಭವಿಷ್ಯದ ಸ್ಪಷ್ಟ ಕ್ರಿಯಾ ಯೋಜನೆಗಾಗಿ ಚರ್ಚಿಸಲು ಒಂದು ಸಂವಾದಾತ್ಮಕ ವೇದಿಕೆಯಾಗಿ ಕಾರ್ಯನಿರ್ವಹಿಸಿತು.

ದೀರ್ಘಕಾಲದ ಸೇವೆಯ ಸಮಸ್ಯೆಗಳನ್ನು ಪರಿಹರಿಸಲು ಆಯೋಗದ ಸದಸ್ಯರು ಪ್ರಮುಖ ಆಡಳಿತಾತ್ಮಕ ನಿರ್ದೇಶನಗಳನ್ನು ನೀಡಿದರು. ನವದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ನ ಸಾರ್ವಜನಿಕ ಆರೋಗ್ಯ ಇಲಾಖೆಯ ಅಡಿಯಲ್ಲಿ ತಾತ್ಕಾಲಿಕ ಮಸ್ಟರ್ ರೋಲ್ (ಟಿ ಎಂ ಆರ್) ಸಫಾಯಿ ಕರ್ಮಚಾರಿಗಳ ನೇಮಕಾತಿ ಪ್ರಕ್ರಿಯೆಯನ್ನು ಪ್ರಾರಂಭಿಸಲು ತಕ್ಷಣದ ಸೂಚನೆಗಳನ್ನು ನೀಡಲಾಯಿತು. ಮಲೇರಿಯಾ ಇಲಾಖೆಯ ಬಾಕಿ ಉಳಿದಿರುವ 28 ನೌಕರರ ಸೇವೆಗಳನ್ನು ಒಂದು ತಿಂಗಳ ಕಟ್ಟುನಿಟ್ಟಿನ ಗಡುವಿನೊಳಗೆ ಖಾಯಂಗೊಳಿಸಲು ಆದೇಶಿಸಲಾಯಿತು. ಇದಲ್ಲದೆ, ಎಲ್ಲಾ ಉದ್ಯೋಗ ಒಪ್ಪಂದಗಳು, ನೌಕರರ ರಾಜ್ಯ ವಿಮೆ (ಇಎಸ್ ಐ) ಮತ್ತು ನೌಕರರ ಭವಿಷ್ಯ ನಿಧಿ (ಇಪಿಎಫ್) ಅನುಸರಣೆ ದಾಖಲೆಗಳನ್ನು ಸಲ್ಲಿಸಲು ಗುತ್ತಿಗೆದಾರರು ಮತ್ತು ಬಾಹ್ಯ ಏಜೆನ್ಸಿಗಳಿಗೆ ಕಟ್ಟುನಿಟ್ಟಿನ ಆದೇಶಗಳನ್ನು ನೀಡಲಾಯಿತು. *ಯಾಂತ್ರೀಕರಣ ಮತ್ತು ಸುರಕ್ಷತೆ:* ಮನುಷ್ಯರ ಆರೋಗ್ಯಕ್ಕೆ ಯಾವುದೇ ಅಪಾಯ ಉಂಟಾಗದಂತೆ ತಡೆಯಲು ಒಳಚರಂಡಿ ಮತ್ತು ಆಳವಾದ ಚರಂಡಿ ಸ್ವಚ್ಛಗೊಳಿಸುವಿಕೆಯನ್ನು ಸಂಪೂರ್ಣವಾಗಿ ಯಾಂತ್ರೀಕೃತಗೊಳಿಸಲು ನಿರ್ದೇಶಿಸಲಾಯಿತು.

ದೇಶಾದ್ಯಂತ ಕಾರ್ಮಿಕ ಕಲ್ಯಾಣ ಕ್ರಮಗಳಲ್ಲಿ ಯಾವುದೇ ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಶ್ರೀ ಕರಮ್ ಸಿಂಗ್ ಕರ್ಮ ಅವರು ಒತ್ತಿಹೇಳಿದರು. ಪ್ರತಿಯೊಬ್ಬ ಹೊರಗುತ್ತಿಗೆ ಕಾರ್ಮಿಕನಿಗೆ ಶಾಸನಬದ್ಧ ಸಾಮಾಜಿಕ ಭದ್ರತಾ ಸೌಲಭ್ಯಗಳು ಸಕಾಲದಲ್ಲಿ ಸಿಗುವಂತೆ ನೋಡಿಕೊಳ್ಳಲು ಗುತ್ತಿಗೆದಾರರ ಕಾರ್ಯನಿರ್ವಹಣೆಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುವಂತೆ ಅವರು ನಿರ್ದೇಶನ ನೀಡಿದರು.

ಎನ್ ಡಿಎಂಸಿ ಕಾರ್ಯದರ್ಶಿ ಶ್ರೀ ರಾಹುಲ್ ಸಿಂಗ್ ಅವರು, ರಾಜಧಾನಿಯನ್ನು ಸ್ವಚ್ಛವಾಗಿಡುವ ಜೊತೆಗೆ ತನ್ನ ಅಗತ್ಯ ಕಾರ್ಯಪಡೆಯ ಜೀವನಮಟ್ಟ ಮತ್ತು ಸುರಕ್ಷತೆಯನ್ನು ಹೆಚ್ಚಿಸಲು ಉನ್ನತ ಮಟ್ಟದ ಉಸ್ತುವಾರಿ ಮತ್ತು ತಾಂತ್ರಿಕ ವ್ಯವಸ್ಥೆಗಳನ್ನು ಅಳವಡಿಸಿಕೊಳ್ಳಲು ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದರು.

 

*****


(रिलीज़ आईडी: 2286448) आगंतुक पटल : 11
इस विज्ञप्ति को इन भाषाओं में पढ़ें: English , Urdu , हिन्दी , Gujarati , Tamil