ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ
ಶ್ರೀ ಸತ್ಯಸಾಯಿಯವರ 100ನೇ ವರ್ಷಾಚರಣೆ ಆಚರಿಸುವ ನಿಟ್ಟಿನಲ್ಲಿ ರಾಷ್ಟ್ರವ್ಯಾಪಿ "ಫಿಟ್ ಇಂಡಿಯಾ ಸಂಡೇಸ್ ಆನ್ ಸೈಕಲ್" ಇದರ 80ನೇ ಆವೃತ್ತಿಗೆ ಕೇಂದ್ರ ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವರಾದ ಡಾ. ಮನ್ಸುಖ್ ಮಾಂಡವಿಯಾ ನೇತೃತ್ವ ವಹಿಸಿದ್ದಾರೆ
"ಭಾರತದಲ್ಲಿ 4 ಜನರಲ್ಲಿ ಒಬ್ಬರು ಅಧಿಕ ತೂಕ ಹೊಂದಿದ್ದಾರೆ. ಎಲ್ಲಾ ನಾಗರಿಕರಿಗೆ ಸ್ವಾಸ್ಥ್ಯತೆ ಅತ್ಯಗತ್ಯ": ಡಾ. ಮನ್ಸುಖ್ ಮಾಂಡವಿಯಾ
"ಎಲ್ಲಾ ಭಾರತೀಯರು ತಮ್ಮ ಮೊಬೈಲ್ ಪರದೆಗಳಿಂದ ಒಂದು ಗಂಟೆಯನ್ನು ಆರೋಗ್ಯ ಮೀಸಲಿಟ್ಟು ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಆ ಸಮಯವನ್ನು ತಮ್ಮ ವೈಯಕ್ತಿಕ ಆರೋಗ್ಯಕ್ಕಾಗಿ ಮೀಸಲಿಡಬೇಕೆಂದು ನಾನು ಒತ್ತಾಯಿಸುತ್ತೇನೆ": ಕೇಂದ್ರ ಸಚಿವರಾದ ಡಾ. ಮಾಂಡವಿಯಾ
प्रविष्टि तिथि:
05 JUL 2026 2:44PM by PIB Bengaluru
ಕೇಂದ್ರ ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವರಾದ ಡಾ. ಮನ್ಸುಖ್ ಮಾಂಡವಿಯಾ ಇಂದು ನವದೆಹಲಿಯ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ರಾಷ್ಟ್ರವ್ಯಾಪಿ 80 ನೇ ಆವೃತ್ತಿಯ "ಫಿಟ್ ಇಂಡಿಯಾ ಸಂಡೇಸ್ ಆನ್ ಸೈಕಲ್" ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.
ಆಧ್ಯಾತ್ಮಿಕ ನಾಯಕರಾದ ಶ್ರೀ ಸತ್ಯಸಾಯಿಯವರ 100ನೇ ವರ್ಷಾಚರಣೆಯನ್ನು ಆಚರಿಸುವ ಸಲುವಾಗಿ ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಗಳ ಸಹಯೋಗದೊಂದಿಗೆ ಈ ಆವೃತ್ತಿಯನ್ನು ಆಯೋಜಿಸಲಾಗಿದೆ.
ರಾಷ್ಟ್ರೀಯ ರಾಜಧಾನಿಯಲ್ಲಿ ಜುಂಬಾ ಮತ್ತು ಯೋಗ ಅಭ್ಯಾಸ ಅವಧಿಗಳ ಹೊರತಾಗಿ 9,000ಕ್ಕೂ ಹೆಚ್ಚು ವ್ಯಕ್ತಿಗಳು ಸಮುದಾಯ ಓಟ ಮತ್ತು ಸವಾರಿಯಲ್ಲಿ ಭಾಗವಹಿಸಿದರು. ಬೇರೆಡೆ, ಆರ್ಟ್ ಆಫ್ ಲಿವಿಂಗ್, ಹಾರ್ಟ್ಫುಲ್ನೆಸ್ ಮತ್ತು ಇಶಾ ಫೌಂಡೇಶನ್ ಸಹಯೋಗದೊಂದಿಗೆ ಸೈಕ್ಲಿಂಗ್ ಡ್ರೈವ್ ಅನ್ನು ಆಯೋಜಿಸಲಾಗಿದೆ.
ಮಕ್ಕಳನ್ನು ತೊಡಗಿಸಿಕೊಳ್ಳಲು ಬೃಹತ್ ಗಾತ್ರದ ಚೆಸ್ ಮತ್ತು ಲುಡೋ ಜೊತೆಗೆ ಕ್ಯಾರಮ್, ಟೇಬಲ್ ಟೆನ್ನಿಸ್, ಫುಟ್ಸಲ್ ಮತ್ತು ಬ್ಯಾಡ್ಮಿಂಟನ್ ಅನ್ನು ಒಳಗೊಂಡ ಮೀಸಲಾದ ಆಟದ ವಲಯವನ್ನು ಸಹ ಈ ಸಂದರ್ಭದಲ್ಲಿ ಆಯೋಜಿಸಲಾಯಿತು.

ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಪರಿಕಲ್ಪನೆಯ 2047ರಲ್ಲಿ ವಿಕಸಿತ ಭಾರತ ದೃಷ್ಟಿಕೋನವನ್ನು ಬಲಪಡಿಸುತ್ತಾ, ಡಾ. ಮಾಂಡವಿಯಾ ಅವರು, "ಯಾವುದೇ ದೇಶವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವೆಂದು ಪರಿಗಣಿಸಲು, ಅದರ ನಾಗರಿಕರಿಗೆ ಅತ್ಯುತ್ತಮ ಆರೋಗ್ಯ ಅತ್ಯಗತ್ಯ, ನಾನು ಎಲ್ಲಾ ಭಾರತೀಯರನ್ನು ತಮ್ಮ ಮೊಬೈಲ್ ಪರದೆಗಳಿಂದ ಕನಿಷ್ಠ ಒಂದು ಗಂಟೆಯನ್ನು ಮೀಸಲಿಡಬೇಕು ಮತ್ತು ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಆ ಸಮಯವನ್ನು ತಮ್ಮ ವೈಯಕ್ತಿಕ ಆರೋಗ್ಯಕ್ಕೆ ಮೀಸಲಿಡಬೇಕೆಂದು ಒತ್ತಾಯಿಸುತ್ತೇನೆ" ಎಂದು ಹೇಳಿದರು.
ಸಭೆಯನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವರು, "ಭಾರತದಲ್ಲಿ 4 ಜನರಲ್ಲಿ ಒಬ್ಬರು ಅಧಿಕ ತೂಕ ಹೊಂದಿದ್ದಾರೆ, ಇಂದು ಎಲ್ಲಾ ನಾಗರಿಕರಿಗೆ ಫಿಟ್ನೆಸ್ ಅತ್ಯಗತ್ಯ" ಎಂದು ಹೇಳಿದರು.
ಸಮುದಾಯ ಪ್ರಾರ್ಥನೆಗಳು ಮತ್ತು ಡಾ. ಮಾಂಡವೀಯ ಅವರಿಂದ ದೀಪ ಬೆಳಗಿಸುವಿಕೆಯೊಂದಿಗೆ ಫಿಟ್ನೆಸ್ ರೈಡ್ ಕಾರ್ಯಕ್ರಮ ಪ್ರಾರಂಭವಾಯಿತು. ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಯ ಅಖಿಲ ಭಾರತ ಅಧ್ಯಕ್ಷರಾದ ಶ್ರೀ ನಿಮಿಷ್ ಗುಲಾಬ್ರಾಯ್ ಪಾಂಡ್ಯ, ಕಾರ್ಯದರ್ಶಿ (ಕ್ರೀಡೆ) ಶ್ರೀ ಹರಿ ರಂಜನ್ ರಾವ್, ಕಾರ್ಯದರ್ಶಿ (ಕಾರ್ಪೊರೇಟ್ ವ್ಯವಹಾರಗಳು) ದೀಪ್ತಿ ಮುಖರ್ಜಿ ಮತ್ತು ಇತರ ಗಣ್ಯರು ಭಾಗವಹಿಸಿದ್ದರು. ಸಮುದಾಯ ಫಿಟ್ನೆಸ್ ರೈಡ್ ಪ್ರಾರಂಭವಾಗುವ ಮೊದಲು ನಶೆ ಮುಕ್ತ ಭಾರತದ ಸಾರ್ವಜನಿಕ ಪ್ರತಿಜ್ಞೆಯ ಕಾರ್ಯಕ್ರಮವನ್ನು ಮಾಡಲಾಯಿತು.
DMGR.jpg)
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಪಾಂಡ್ಯ ಅವರು, "ಪ್ರತಿಯೊಬ್ಬ ಭಾರತೀಯ ನಾಗರಿಕನನ್ನು ಸದೃಢ ಮತ್ತು ಆರೋಗ್ಯವಂತನನ್ನಾಗಿ ಮಾಡುವುದು ಫಿಟ್ ಇಂಡಿಯಾದ ಧ್ಯೇಯವಾಗಿದೆ, ಆದರೆ ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಯ ಧ್ಯೇಯವೆಂದರೆ ಎಲ್ಲರನ್ನೂ ಪ್ರೀತಿಸುವುದು, ಎಲ್ಲರಿಗೂ ಸೇವೆ ಸಲ್ಲಿಸುವುದು. ಎರಡೂ ಸಂಸ್ಥೆಗಳ ಈ ಒಗ್ಗೂಡುವಿಕೆ ಒಂದು ಅತ್ಯುತ್ತಮ ಸಂಯೋಜನೆಯಾಗಿದೆ" ಎಂದು ಹೇಳಿದರು. ಖ್ಯಾತ ನಟ ಶ್ರೀ ನಾಸೀರ್ ಅಬ್ದುಲ್ಲಾ ಕೂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಈ ಆರೋಗ್ಯ ಉಪಕ್ರಮವನ್ನು ಶ್ಲಾಘಿಸಿದರು.
ಡಿಸೆಂಬರ್ 2024 ರಲ್ಲಿ ಡಾ. ಮಾಂಡವೀಯ ಅವರಿಂದ ಪ್ರಾರಂಭವಾದ "ಫಿಟ್ ಇಂಡಿಯಾ ಸಂಡೇಸ್ ಆನ್ ಸೈಕಲ್", ಎಲ್ಲಾ ವಯೋಮಾನದ ನಾಗರಿಕರಿಗೆ "ಫಿಟ್ನೆಸ್ ಕಿ ದೋಸೆ, ಆಧಾ ಘಂಟಾ ರೋಜ್" (ಪ್ರತಿದಿನ 30 ನಿಮಿಷಗಳನ್ನು ಫಿಟ್ ಆಗಲು ಮೀಸಲಿಡಿ) ಮೂಲಕ ಆರೋಗ್ಯಕ್ಕಾಗಿ ಅರ್ಪಿಸಲು ಪ್ರೋತ್ಸಾಹಿಸುವ ಸಾಮೂಹಿಕ ಚಳುವಳಿಯಾಗಿ ಬೆಳೆದಿದೆ. ಇಲ್ಲಿಯವರೆಗೆ, ದೇಶಾದ್ಯಂತ ಸಾವಿರಾರು ಸ್ಥಳಗಳಲ್ಲಿ 30 ಲಕ್ಷಕ್ಕೂ ಹೆಚ್ಚು ಜನರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.

ಕೇಂದ್ರ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ ಈ ಕಾರ್ಯಕ್ರಮವನ್ನು ಭಾರತೀಯ ಸೈಕ್ಲಿಂಗ್ ಫೆಡರೇಶನ್ (ಸಿ.ಎಸ್. ಐ), ಯೋಗಾಸನ ಭಾರತ್, ರಾಹಗಿರಿ ಫೌಂಡೇಶನ್ ಮತ್ತು ಮೈ ಭಾರತ್ ಸಹಯೋಗದೊಂದಿಗೆ ಆಯೋಜಿಸಿದೆ. ಎಸ್.ಎ.ಐ. ಪ್ರಾದೇಶಿಕ ಕೇಂದ್ರಗಳು, ರಾಷ್ಟ್ರೀಯ ಶ್ರೇಷ್ಠತಾ ಕೇಂದ್ರಗಳು , ಎಸ್.ಎ.ಐ. ತರಬೇತಿ ಕೇಂದ್ರಗಳು , ಖೇಲೋ ಇಂಡಿಯಾ ರಾಜ್ಯ ಶ್ರೇಷ್ಠತಾ ಕೇಂದ್ರಗಳು ಮತ್ತು ಖೇಲೋ ಇಂಡಿಯಾ ಕೇಂದ್ರಗಳು ಸೇರಿದಂತೆ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸೈಕ್ಲಿಂಗ್ ಡ್ರೈವ್ ಅನ್ನು ಏಕಕಾಲದಲ್ಲಿ ನಡೆಸಲಾಯಿತು.

*****
(रिलीज़ आईडी: 2281371)
आगंतुक पटल : 31