ನೀತಿ ಆಯೋಗ
azadi ka amrit mahotsav

ಉದ್ಯಮ-ನೇತೃತ್ವದ ನಾವೀನ್ಯತೆ ಮತ್ತು ನವೋದ್ಯಮ ಸಹಯೋಗವನ್ನು ಬಲಪಡಿಸಲು ‘ಜಿಸಿಸಿ ನಾವೀನ್ಯತೆ ಸಮಾವೇಶ 2026’ ಅನ್ನು ಆಯೋಜಿಸಿದ ಎಐಎಂ ಮತ್ತು ಎಸ್ ಟಿ ಪಿ ಐ

प्रविष्टि तिथि: 30 JUN 2026 12:47PM by PIB Bengaluru

ಸಾಫ್ಟ್ ವೇರ್ ಟೆಕ್ನಾಲಜಿ ಪಾರ್ಕ್ಸ್ ಆಫ್ ಇಂಡಿಯಾ (ಎಸ್ ಟಿ ಪಿ ಐ) ನೊಂದಿಗೆ ಪಾಲುದಾರಿಕೆಯಲ್ಲಿ ಅಟಲ್ ನಾವೀನ್ಯತೆ ಮಿಷನ್ (ಅಐಎಂ), ನೀತಿ (ಎನ್ ಐ ಟಿ ಐ) ಆಯೋಗ, ಬೆಂಗಳೂರಿನಲ್ಲಿ ಜಿಸಿಸಿ ನಾವೀನ್ಯತೆ ಸಮಾವೇಶ 2026 ಅನ್ನು (GCC Conclave on Innovation 2026) ಆಯೋಜಿಸಿದೆ, ಇದು ಜಾಗತಿಕ ಸಾಮರ್ಥ್ಯ ಕೇಂದ್ರ (ಜಿಸಿಸಿ)ದ ನಾಯಕರು, ಸಂಶೋಧನೆ ಮತ್ತು ಅಭಿವೃದ್ಧಿ ಮುಖ್ಯಸ್ಥರು, ನಾವೀನ್ಯತೆ ನಾಯಕರು, ನವೋದ್ಯಮ ಪರಿಸರ ವ್ಯವಸ್ಥೆಯನ್ನು ಸಕ್ರಿಯಗೊಳಿಸುವವರು, ಇನ್ ಕ್ಯುಬೇಟರ್ಗಳು ಮತ್ತು ನೀತಿ ನಿರೂಪಕರನ್ನು ಒಟ್ಟುಗೂಡಿಸಿ ಭಾರತದ ನಾವೀನ್ಯತೆ ಮತ್ತು ಉದ್ಯಮಶೀಲತಾ ಪರಿಸರ ವ್ಯವಸ್ಥೆಯಲ್ಲಿ ಆಳವಾದ ಸಹಯೋಗಕ್ಕಾಗಿ ಮಾರ್ಗಗಳನ್ನು ಅನ್ವೇಷಿಸಲು ಸಹಾಯ ಮಾಡುತ್ತದೆ.

ಈ ಸಮಾವೇಶದಲ್ಲಿ ಇಂಟೆಲ್, ಐಬಿಎಂ, ಬಾಷ್, ಅಮೆಜಾನ್, ಎಸ್ ಎಪಿ, ಥರ್ಮೋ ಫಿಶರ್ ಸೈಂಟಿಫಿಕ್, ಸಿಜಿಐ, ಶೆಲ್, ಮರ್ಸಿಡಿಸ್-ಬೆನ್ಜ್, ಫಿಲಿಪ್ಸ್, ಮೋರ್ಗನ್ ಸ್ಟಾನ್ಲಿ, ಎನ್ವಿಡಿಯಾ, ಸ್ಯಾಮ್ಸಂಗ್, ಸ್ಯಾನ್ಡಿಸ್ಕ್, ವಿಪ್ರೊ, ಯಾಹೂ ಮತ್ತು ಹಲವಾರು ಇತರ ಬಹುರಾಷ್ಟ್ರೀಯ ಉದ್ಯಮಗಳು ಸೇರಿದಂತೆ ಪ್ರಮುಖ ಜಿಸಿಸಿಗಳು ಮತ್ತು ತಂತ್ರಜ್ಞಾನ ಸಂಸ್ಥೆಗಳ ನಾಯಕತ್ವ ಪ್ರತಿನಿಧಿಗಳು ಭಾಗವಹಿಸಿದ್ದರು, ಜೊತೆಗೆ ಅಟಲ್ ಟಿಂಕರಿಂಗ್ ಲ್ಯಾಬ್ಸ್ (ಎಟಿಎಲ್ ಗಳು), ಎಐಎಂ-ಬೆಂಬಲಿತ ಇನ್ಕ್ಯುಬೇಟರ್ಗಳು - ಅಟಲ್ ಇನ್ಕ್ಯುಬೇಷನ್ ಸೆಂಟರ್ಗಳು (ಎಐಸಿಗಳು) ಮತ್ತು ಅಟಲ್ ಕಮ್ಯುನಿಟಿ ಇನ್ನೋವೇಶನ್ ಸೆಂಟರ್ಗಳು (ಎಸಿಐಸಿಗಳು), ಎಸ್ ಟಿಪಿಐ ತಂತ್ರಜ್ಞಾನ ಉದ್ಯಮಶೀಲತಾ ಕೇಂದ್ರಗಳು (ಎಸ್ ಟಿ ಪಿ ಐ ಸೆಂಟರ್ಸ್ ಆಫ್ ಎಂಟರ್ ಪ್ರೆನ್ಯೂರ್ ಶಿಪ್), ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (ಕೆಡಿಇಎಂ) ಮತ್ತು ಪರಿಸರ ವ್ಯವಸ್ಥೆಯ ಪಾಲುದಾರರ ಪ್ರತಿನಿಧಿಗಳು ಭಾಗವಹಿಸಿದ್ದರು.

ಭಾರತದ ನಾವೀನ್ಯತೆ ಪರಿಸರ ವ್ಯವಸ್ಥೆ ಮತ್ತು ಜಿಸಿಸಿಗಳ ನಡುವೆ ಬಲವಾದ ಸಂಪರ್ಕವನ್ನು ಸೃಷ್ಟಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. 

ಭಾರತದ ನಾವೀನ್ಯತೆ ಪರಿಸರ ವ್ಯವಸ್ಥೆ ಮತ್ತು ಜಿಸಿಸಿಗಳ ನಡುವೆ ಬಲವಾದ ಸಂಪರ್ಕವನ್ನು ಸೃಷ್ಟಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಅಟಲ್ ಟಿಂಕರಿಂಗ್ ಲ್ಯಾಬ್ಸ್ (ಎಟಿಎಲ್) ಮೂಲಕ ಶಾಲಾ ಮಟ್ಟದ ನಾವೀನ್ಯತೆ, ಎಐಸಿಗಳು ಮತ್ತು ಎಸಿಐಸಿಗಳ ಮೂಲಕ ನವೋದ್ಯಮ ಇನ್ಕ್ಯುಬೇಶನ್, ಹಾಗೂ ಮುಂಬರುವ ಕೈಗಾರಿಕಾ ವೇಗವರ್ಧಕ (ಇಂಡಸ್ಟ್ರಿಯಲ್ ಆಕ್ಸಿಲರೇಟರ್) ಉಪಕ್ರಮವಾದ ಎಎಸಿಇಎಸ್ಎಸ್ (ಅಟಲ್ ಆಕ್ಸಿಲರೇಶನ್ ಸೆಂಟರ್ಸ್ ಫಾರ್ ಸ್ಕೇಲ್-ಅಪ್ ಆಫ್ ಸ್ಟಾರ್ಟ್ಅಪ್ಸ್) ಮೂಲಕ ನವೋದ್ಯಮಗಳ ಬೆಳವಣಿಗೆಯನ್ನು ಉತ್ತೇಜಿಸುವ ಎಐಎಂನ ನಾವೀನ್ಯತೆ ಜೀವನಚಕ್ರದಾದ್ಯಂತ ಸಹಯೋಗದ ಅವಕಾಶಗಳನ್ನು ಅನ್ವೇಷಿಸುವುದು ಇದರ ಮುಖ್ಯ ಉದ್ದೇಶವಾಗಿದೆ.

ಸಾಫ್ಟ್ವೇರ್ ಟೆಕ್ನಾಲಜಿ ಪಾರ್ಕ್ಸ್ ಆಫ್ ಇಂಡಿಯಾ (ಎಸ್‌ ಟಿ ಪಿ ಐ) ಮಹಾನಿರ್ದೇಶಕರಾದ ಶ್ರೀ ಅರವಿಂದ್ ಕುಮಾರ್ ಅವರು, ಭಾರತದ ತಂತ್ರಜ್ಞಾನ ಮತ್ತು ನಾವೀನ್ಯತೆ ಪರಿಸರ ವ್ಯವಸ್ಥೆಯನ್ನು ಉತ್ತೇಜಿಸುವಲ್ಲಿ ಎಸ್ ಟಿಪಿಐನ ಪ್ರಮುಖ ಪಾತ್ರವನ್ನು ಒತ್ತಿಹೇಳಿದರು. ಈ ಜಿಸಿಸಿ ಸಮಾವೇಶವು ತಳಮಟ್ಟದಿಂದ ಜಾಗತಿಕ ಮಾರುಕಟ್ಟೆಗೆ ನಾವೀನ್ಯತೆಯನ್ನು ಕೊಂಡೊಯ್ಯಲು ಒಂದು ಪ್ರಮುಖ ವೇದಿಕೆಯನ್ನು ಸೃಷ್ಟಿಸುತ್ತದೆ ಎಂದು ಹೇಳಿದರು

"ಸುಮಾರು 100 ಶತಕೋಟಿಯುಎಸ್ ಡಾಲರ್ ಆದಾಯವನ್ನು ಗಳಿಸುವ 2,100 ಕ್ಕೂ ಹೆಚ್ಚು ಕೇಂದ್ರಗಳನ್ನು ಹೊಂದಿರುವ ಭಾರತದ ಜಿಸಿಸಿ ಪರಿಸರ ವ್ಯವಸ್ಥೆಯು, ಜಾಗತಿಕ ಮಹತ್ವಾಕಾಂಕ್ಷೆಯು ಭಾರತೀಯ ಪ್ರತಿಭೆಯನ್ನು ಭೇಟಿಯಾದಾಗ ಏನಾಗಬಹುದು ಎಂಬುದಕ್ಕೆ ಸಾಕ್ಷಿಯಾಗಿದೆ. ಎಸ್ ಟಿ ಪಿ ಐ 1991 ರಿಂದಲೂ ಈ ಪ್ರಯಾಣದ ತಳಹದಿಯ ಸಕ್ರಿಯಗೊಳಿಸುವ ಸಾಧನವಾಗಿದ್ದು, ತಂತ್ರಜ್ಞಾನ ಮೂಲಸೌಕರ್ಯ, ನೀತಿ ಚೌಕಟ್ಟು ಮತ್ತು ಪರಿಸರ ವ್ಯವಸ್ಥೆಯ ಸಂಪರ್ಕವನ್ನು ನಿರ್ಮಿಸಿದೆ. ಇದು ಭಾರತವನ್ನು ಜಾಗತಿಕ ಸಾಮರ್ಥ್ಯ ಅಭಿವೃದ್ಧಿಯ ಪ್ರಮುಖ ತಾಣವನ್ನಾಗಿ ಮಾಡಿದೆ. ಇಂದು, ನಾವು ಈ ಸಹಭಾಗಿತ್ವವನ್ನು ಅದರ ಮುಂದಿನ ತಾರ್ಕಿತ ಹಂತಕ್ಕೆ ಕೊಂಡೊಯ್ಯುತ್ತಿದ್ದೇವೆ: ದೇಶಾದ್ಯಂತ ಇರುವ ಎಸ್ ಟಿಪಿಐನ ತಂತ್ರಜ್ಞಾನ ಪಾರ್ಕ್ ಗಳು, ಉದ್ಯಮಶೀಲತಾ ಕೇಂದ್ರಗಳು ಮತ್ತು ಡಿಜಿಟಲ್ ಮೂಲಸೌಕರ್ಯಗಳ ಜಾಲವನ್ನು ಶಾಲೆಗಳು, ಇನ್ಕ್ಯುಬೇಟರ್ಗಳು ಮತ್ತು ವೇಗವರ್ಧಕ ಕಾರ್ಯಕ್ರಮಗಳಾದ್ಯಂತ ಇರುವ ಎಐಎಂನ ನಾವೀನ್ಯತೆ ಪ್ರಕ್ರಿಯೆಯೊಂದಿಗೆ ನೇರವಾಗಿ ಜೋಡಿಸುತ್ತಿದ್ದೇವೆ. ಈ ಒಮ್ಮುಖದ ಮೂಲಕ, ಜಿಸಿಸಿಗಳು ಭಾರತೀಯ ನವೋದ್ಯಮಗಳೊಂದಿಗೆ ಜೊತೆಯಾಗಿ ನಾವೀನ್ಯತೆಯನ್ನು ಮಾಡಲು, ಮುಂಚೂಣಿ ತಂತ್ರಜ್ಞಾನಗಳನ್ನು ಮೌಲ್ಯೀಕರಿಸಲು ಮತ್ತು ಭಾರತದ ನಾವೀನ್ಯತೆ ಆರ್ಥಿಕತೆಯನ್ನು ರೂಪಿಸುವಲ್ಲಿ ಸಕ್ರಿಯ ಪಾತ್ರ ವಹಿಸಲು ಸರ್ಕಾರಿ ಬೆಂಬಲಿತ ವೇದಿಕೆಯನ್ನು ಪಡೆಯಲಿವೆ. ಈ ಮಿಷನ್ ನಲ್ಲಿ ಪಾಲುದಾರರಾಗಿ ಮುಂದೆ ಬರಲು ಇಲ್ಲಿ ನೆರೆದಿರುವ ಪ್ರತಿಯೊಂದು ಜಿಸಿಸಿಗೆ ನಾನು ಆಹ್ವಾನ ನೀಡುತ್ತೇನೆ — ನಾವೆಲ್ಲರೂ ಒಟ್ಟಾಗಿ ಜಾಗತಿಕವಾಗಿ ಸ್ಪರ್ಧಾತ್ಮಕ ಉದ್ಯಮಗಳನ್ನು ನಿರ್ಮಿಸಬಹುದು ಮತ್ತು 'ವಿಕಸಿತ ಭಾರತ 2047' ಕಡೆಗೆ ಭಾರತದ ಮುನ್ನಡೆಯನ್ನು ವೇಗಗೊಳಿಸಬಹುದು."

"ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಆಗಾಗ್ಗೆ ಒತ್ತಿಹೇಳುವಂತೆ, 'ಜೈ ಅನುಸಂಧಾನ' ಅಭಿವೃದ್ಧಿ ಹೊಂದಿದ ಭಾರತದ ಪ್ರೇರಕ ಶಕ್ತಿಯಾಗಬೇಕು. ಕಳೆದ ದಶಕದಲ್ಲಿ, ಅಟಲ್ ಇನ್ನೋವೇಶನ್ ಮಿಷನ್ 10,000 ಕ್ಕೂ ಹೆಚ್ಚು ಸ್ಥಾಪಿತ ಅಟಲ್ ಟಿಂಕರಿಂಗ್ ಲ್ಯಾಬ್ ಗಳಲ್ಲಿನ ಯುವ ಸಂಶೋಧಕರಿಂದ ಹಿಡಿದು, 100 ಕ್ಕೂ ಹೆಚ್ಚು ಇನ್ಕ್ಯುಬೇಟರ್ಗಳ ಮೂಲಕ ಬೆಂಬಲಿತವಾಗಿರುವ ಸ್ಟಾರ್ಟ್ಅಪ್ ಗಳು ಮತ್ತು ತಳಮಟ್ಟದ ನಾವೀನ್ಯತೆಕಾರರವರೆಗೆ ಭಾರತದ ನಾವೀನ್ಯತೆ ಸರಣಿಯನ್ನು ನಿರ್ಮಿಸುವ ಮೂಲಕ ಈ ದೃಷ್ಟಿಕೋನಕ್ಕಾಗಿ ಕೆಲಸ ಮಾಡಿದೆ. ಇಂದು, ಜಿಸಿಸಿಗಳು ತಂತ್ರಜ್ಞಾನ, ಇಂಜಿನಿಯರಿಂಗ್ ಮತ್ತು ಉತ್ಪನ್ನ ನಾವೀನ್ಯತೆಗಾಗಿ ಭಾರತವನ್ನು ಜಾಗತಿಕ ಕೇಂದ್ರವನ್ನಾಗಿ ಸ್ಥಾಪಿಸಿವೆ. ಈ ಸಾಮರ್ಥ್ಯಗಳನ್ನು ಒಟ್ಟಿಗೆ ತರುವ ಮೂಲಕ, ನಾವು ಪ್ರತಿಭೆಯನ್ನು ಪೋಷಿಸಬಹುದು, ಉದ್ಯಮಶೀಲತೆಯನ್ನು ವೇಗಗೊಳಿಸಬಹುದು, ಉದ್ಯಮದ ಅಳವಡಿಕೆಯನ್ನು ಸಕ್ರಿಯಗೊಳಿಸಬಹುದು ಮತ್ತು ವಿಕಸಿತ ಭಾರತ 2047ರ ದೃಷ್ಟಿಕೋನಕ್ಕೆ ಕೊಡುಗೆ ನೀಡುವ ಜಾಗತಿಕವಾಗಿ ಸ್ಪರ್ಧಾತ್ಮಕ ಉದ್ಯಮಗಳನ್ನು ನಿರ್ಮಿಸಬಹುದು."

ಸಭೆಯನ್ನುದ್ದೇಶಿಸಿ ಮಾತನಾಡಿದ ಅಟಲ್ ಇನ್ನೋವೇಶನ್ ಮಿಷನ್ (ಎಐಎಂ) ನೀತಿ ಆಯೋಗದ ಮಿಷನ್ ನಿರ್ದೇಶಕ ದೀಪಕ್ ಬಾಗ್ಲಾ, ಭಾರತದ ನಾವೀನ್ಯತೆ-ನೇತೃತ್ವದ ಬೆಳವಣಿಗೆಯ ಯಶೋಗಾಥೆಯನ್ನು ರೂಪಿಸುವಲ್ಲಿ ಜಿಸಿಸಿಗಳ ನಿರ್ಣಾಯಕ ಪಾತ್ರವನ್ನು ಒತ್ತಿ ಹೇಳಿದರು.

"ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಆಗಾಗ್ಗೆ ಒತ್ತಿ ಹೇಳಿರುವಂತೆ, 'ಜೈ ಅನುಸಂಧಾನ' ಅಭಿವೃದ್ಧಿ ಹೊಂದಿದ ಭಾರತದ ಪ್ರೇರಕ ಶಕ್ತಿಯಾಗಬೇಕು. ಕಳೆದ ದಶಕದಲ್ಲಿ, ಅಟಲ್ ಇನ್ನೋವೇಶನ್ ಮಿಷನ್ ಭಾರತದ ನಾವೀನ್ಯತೆ ಮಾರ್ಗವನ್ನು ನಿರ್ಮಿಸುವ ಮೂಲಕ ಈ ದೃಷ್ಟಿಕೋನದ ಕಡೆಗೆ ಕೆಲಸ ಮಾಡಿದೆ - 10,000+ ಸ್ಥಾಪಿತ ಅಟಲ್ ಟಿಂಕರಿಂಗ್ ಲ್ಯಾಬ್ ಗಳಲ್ಲಿನ ಯುವ ನಾವೀನ್ಯಕಾರರಿಂದ ಹಿಡಿದು 100+ ಇನ್ಕ್ಯುಬೇಟರ್ಗಳ ಮೂಲಕ ಬೆಂಬಲಿತವಾದ ನವೋದ್ಯಮಗಳು ಮತ್ತು ತಳಮಟ್ಟದ ನಾವೀನ್ಯಕಾರರವರೆಗೆ. ಇಂದು, ಜಿಸಿಸಿ ಗಳು ಭಾರತವನ್ನು ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಉತ್ಪನ್ನ ನಾವೀನ್ಯತೆಗೆ ಜಾಗತಿಕ ಕೇಂದ್ರವಾಗಿ ಸ್ಥಾಪಿಸಿವೆ. ಈ ಸಾಮರ್ಥ್ಯಗಳನ್ನು ಒಟ್ಟುಗೂಡಿಸುವ ಮೂಲಕ, ನಾವು ಪ್ರತಿಭೆಯನ್ನು ಪೋಷಿಸಬಹುದು, ಉದ್ಯಮಶೀಲತೆಯನ್ನು ವೇಗಗೊಳಿಸಬಹುದು, ಉದ್ಯಮ ಅಳವಡಿಕೆಯನ್ನು ಸಕ್ರಿಯಗೊಳಿಸಬಹುದು ಮತ್ತು ವಿಕಸಿತ ಭಾರತ 2047ರ ದೃಷ್ಟಿಕೋನಕ್ಕೆ ಕೊಡುಗೆ ನೀಡುವ ಜಾಗತಿಕವಾಗಿ ಸ್ಪರ್ಧಾತ್ಮಕ ಉದ್ಯಮಗಳನ್ನು ನಿರ್ಮಿಸಬಹುದು." ಎಂದು ಹೇಳಿದರು.

ಶಾಲಾ ವಿದ್ಯಾರ್ಥಿಗಳಲ್ಲಿ ಕುತೂಹಲವನ್ನು ಬೆಳೆಸುವುದರಿಂದ ಹಿಡಿದು ಜಾಗತಿಕವಾಗಿ ಸ್ಪರ್ಧಾತ್ಮಕ ಉದ್ಯಮಗಳನ್ನು ಸಕ್ರಿಯಗೊಳಿಸುವವರೆಗೆ ತಡೆರಹಿತ ನಾವೀನ್ಯತೆ ನಿರಂತರತೆಯನ್ನು ನಿರ್ಮಿಸುವುದು ಎಐಎಂನ ದೃಷ್ಟಿಕೋನವಾಗಿದೆ ಎಂದು ಅವರು ಒತ್ತಿ ಹೇಳಿದರು ಮತ್ತು ಮಾರ್ಗದರ್ಶನ, ನಾವೀನ್ಯತೆ ಸವಾಲುಗಳು, ಪ್ರಾಯೋಗಿಕ ಯೋಜನೆಗಳು, ಮಾರುಕಟ್ಟೆ ಪ್ರವೇಶ ಮತ್ತು ನವೋದ್ಯಮ-ಉದ್ಯಮ ಪಾಲುದಾರಿಕೆಗಳ ಮೂಲಕ ಎಐಎಂನ ಉಪಕ್ರಮಗಳೊಂದಿಗೆ ಸಕ್ರಿಯವಾಗಿ ತೊಡಗಿಸಿಕೊಳ್ಳಲು ಜಿಸಿಸಿಗಳಿಗೆ ಆಹ್ವಾನ ನೀಡಿದರು.

ಸಮ್ಮೇಳನದಲ್ಲಿ ಮಾತನಾಡಿದ ಎಸ್ ಟಿ ಪಿ ಐ ಬೆಂಗಳೂರು ನಿರ್ದೇಶಕರಾದ ಡಾ. ಸಂಜಯ್ ತ್ಯಾಗಿ ಅವರು, ಭಾರತದ ನವೋದ್ಯಮ ಪರಿಸರ ವ್ಯವಸ್ಥೆ, ಇನ್ ಕ್ಯುಬೇಶನ್ ಮೂಲಸೌಕರ್ಯ ಮತ್ತು ಜಿಸಿಸಿ ಪರಿಸರ ವ್ಯವಸ್ಥೆಯ ನಡುವಿನ ಒಮ್ಮುಖದ ಪ್ರಾಮುಖ್ಯತೆಯನ್ನು ಒತ್ತಿಹೇಳಿದರು.

"ಬೆಂಗಳೂರು ಭಾರತದ ಗ್ಲೋಬಲ್ ಕ್ಯಾಪಬಿಲಿಟಿ ಸೆಂಟರ್ ಗಳ ಅತ್ಯಂತ ಚೈತನ್ಯದಾಯಕ   ನೆಲೆಯಾಗಿದೆ. ಎಸ್ ಟಿಪಿಐ ಬೆಂಗಳೂರು ಮೂರು ದಶಕಗಳಿಗೂ ಹೆಚ್ಚು ಕಾಲ ಈ ಪರಿಸರ ವ್ಯವಸ್ಥೆಯ ಹೃದಯಭಾಗದಲ್ಲಿದೆ — ತಂತ್ರಜ್ಞಾನ ಮೂಲಸೌಕರ್ಯ, ಅನುಸರಣೆ ಬೆಂಬಲ ಮತ್ತು ನೀತಿ ಸಕ್ರಿಯಗೊಳಿಸುವಿಕೆಯನ್ನು ಒದಗಿಸುವ ಮೂಲಕ ಜಿಸಿಸಿಗಳು ಭಾರತದಲ್ಲಿ ತಮ್ಮ ನಾವೀನ್ಯತೆಯ ಹೆಜ್ಜೆಯನ್ನು ವಿಸ್ತರಿಸಲು ಮತ್ತು ಆಳಗೊಳಿಸಲು ಅನುವು ಮಾಡಿಕೊಟ್ಟಿದೆ. ಈ ಸಮಾವೇಶದ ಮೂಲಕ, ಜಿಸಿಸಿಗಳು ಎಐಎಂನ ನಾವೀನ್ಯತೆ ಸರಣಿಯೊಂದಿಗೆ ಸಾರ್ಥಕವಾಗಿ ತೊಡಗಿಸಿಕೊಳ್ಳಲು ನಾವು ರಚನಾತ್ಮಕ ಮತ್ತು ಕಾರ್ಯಸಾಧ್ಯವಾದ ಮಾರ್ಗಗಳನ್ನು ರಚಿಸುತ್ತಿದ್ದೇವೆ: ಅಟಲ್ ಟಿಂಕರಿಂಗ್ ಲ್ಯಾಬ್ ಗಳಲ್ಲಿ ಯುವ ಸಂಶೋಧಕರಿಗೆ ಮಾರ್ಗದರ್ಶನ ನೀಡುವುದು, ಅಟಲ್ ಇನ್ಕ್ಯುಬೇಶನ್ ಸೆಂಟರ್ಗಳಲ್ಲಿ ನವೋದ್ಯಮಗಳೊಂದಿಗೆ ಜೊತೆಯಲ್ಲಿ ರಚಿಸುವುದು ಮತ್ತು ಮುಂಬರುವ ಆಕ್ಸೆಸ್ (ಎ ಎ ಸಿ ಇ ಎಸ್‌ ಎಸ್) ಕೈಗಾರಿಕಾ ವೇಗವರ್ಧಕ ಕಾರ್ಯಕ್ರಮದಲ್ಲಿ ಪಾಲುದಾರರಾಗುವುದು. ಭಾರತದ ಜಿಸಿಸಿ ಪರಿಸರ ವ್ಯವಸ್ಥೆಯು ವೆಚ್ಚ ದಕ್ಷತೆಯ ಕೇಂದ್ರದಿಂದ ತಂತ್ರಜ್ಞಾನ ಅಭಿವೃದ್ಧಿ, ಉತ್ಪನ್ನ ಇಂಜಿನಿಯರಿಂಗ್ ಮತ್ತು ನಾವೀನ್ಯತೆಯ ಜಾಗತಿಕವಾಗಿ ಗುರುತಿಸಲ್ಪಟ್ಟ ಶಕ್ತಿಕೇಂದ್ರವಾಗಿ ವಿಕಸನಗೊಂಡಿದೆ. ಜಿಸಿಸಿಗಳ ಜಾಗತಿಕ ಸಾಮರ್ಥ್ಯಗಳೊಂದಿಗೆ ಎಸ್ ಟಿಪಿಐ ಮತ್ತು ಎಐಎಂನ ಪೂರಕ ಸಾಮರ್ಥ್ಯಗಳನ್ನು ಒಟ್ಟುಗೂಡಿಸುವ ಮೂಲಕ, ನಾವು ತಂತ್ರಜ್ಞಾನ ವಾಣಿಜ್ಯೀಕರಣ, ನವೋದ್ಯಮ ಬೆಳವಣಿಗೆಯ ವಿಸ್ತರಣೆ  ಮತ್ತು ಉದ್ಯಮ-ನೇತೃತ್ವದ ಉದ್ಯಮಶೀಲತೆಗೆ ಹೊಸ ಮಾರ್ಗಗಳನ್ನು ತೆರೆಯಬಹುದು. ಈ ಪರಿಸರ ವ್ಯವಸ್ಥೆಯ ಒಮ್ಮುಖವನ್ನು ಸುಲಭಗೊಳಿಸಲು ಎಸ್ ಟಿಪಿಐ ಬೆಂಗಳೂರು ಸಂಪೂರ್ಣವಾಗಿ ಬದ್ಧವಾಗಿದೆ ಮತ್ತು ಇಂದು ಇಲ್ಲಿ ಮಾಡಿಕೊಳ್ಳಲಾದ ಪಾಲುದಾರಿಕೆಗಳು ಭಾರತವನ್ನು ನಾವೀನ್ಯತೆಯ ನಿರ್ವಿವಾದ ಜಾಗತಿಕ ರಾಜಧಾನಿಯನ್ನಾಗಿ ಇರಿಸಲು ಸಹಾಯ ಮಾಡುತ್ತದೆ ಎಂದು ನನಗೆ ವಿಶ್ವಾಸವಿದೆ."

ಈ ಸಮಾವೇಶವು ನಾಲ್ಕು ಪ್ರಮುಖ ವಿಷಯಗಳ ಕುರಿತು ಕೇಂದ್ರೀಕೃತ ಚರ್ಚೆಗಳನ್ನು ಒಳಗೊಂಡಿತ್ತು:

  • ಅಟಲ್ ಟಿಂಕರಿಂಗ್ ಲ್ಯಾಬ್ಸ್ (ಎಟಿಎಲ್) ಮೂಲಕ ಶಾಲಾ ನಾವೀನ್ಯತೆಯ ಮರುಕಲ್ಪನೆ
  • ಎಐಸಿಗಳು ಮತ್ತು ಎಸಿಐಸಿಗಳ  ಮೂಲಕ ನಾವೀನ್ಯತೆಯಿಂದ ಉದ್ಯಮದ ಕಡೆಗೆ ಪ್ರೇರೇಪಿಸುವುದು
  • ಎಐಎಂನ ಕೈಗಾರಿಕಾ ವೇಗವರ್ಧಕ ಉಪಕ್ರಮದ  ಮೂಲಕ ವ್ಯಾಪಕ ಪ್ರಮಾಣದಲ್ಲಿ ನಾವೀನ್ಯತೆಯನ್ನು ಮುನ್ನಡೆಸುವುದು
  • ಜಂಟಿ ವೇಗವರ್ಧಕ ವೇದಿಕೆಗಳು ಮತ್ತು ಎಸ್ ಟಿಪಿಐ ಉದ್ಯಮಶೀಲತಾ ಕೇಂದ್ರಗಳ ಮೂಲಕ ಉದ್ಯಮ-ನೇತೃತ್ವದ ನಾವೀನ್ಯತೆ

ಮಾರ್ಗದರ್ಶನ, ತಂತ್ರಜ್ಞಾನ ಮೌಲ್ಯೀಕರಣ, ಪ್ರಾಯೋಗಿಕ ನಿಯೋಜನೆಗಳು, ಸವಾಲು ಆಧಾರಿತ ನಾವೀನ್ಯತೆ ಕಾರ್ಯಕ್ರಮಗಳು, ಮಾರುಕಟ್ಟೆ ಪ್ರವೇಶ ಮಾರ್ಗಗಳು ಮತ್ತು ವಲಯ-ಕೇಂದ್ರಿತ ವೇಗವರ್ಧಕ ಕಾರ್ಯಕ್ರಮಗಳ ಸಹ-ರಚನೆಯ ಮೂಲಕ ಎಐಎಂ-ಬೆಂಬಲಿತ ನಾವೀನ್ಯತೆಕಾರರು, ನವೋದ್ಯಮಗಳು ಮತ್ತು ಇನ್ ಕ್ಯುಬೇಟರ್ ಗಳೊಂದಿಗೆ ತೊಡಗಿಸಿಕೊಳ್ಳಲು ಜಿಸಿಸಿಗಳಿಗೆ ಇರುವ ಅವಕಾಶಗಳ ಬಗ್ಗೆ ಭಾಗವಹಿಸಿದವರು  ಚರ್ಚಿಸಿದರು.

ದೇಶಾದ್ಯಂತ ನಾವೀನ್ಯಕಾರರು, ನವೋದ್ಯಮಗಳು, ಉದ್ಯಮಿಗಳು ಮತ್ತು ತಂತ್ರಜ್ಞಾನ ಉದ್ಯಮಗಳನ್ನು ಪೋಷಿಸುವಲ್ಲಿ ತಮ್ಮ ಪೂರಕ ಸಾಮರ್ಥ್ಯಗಳನ್ನು ಬಳಸಿಕೊಳ್ಳಲು ಎಐಎಂ ಮತ್ತು ಎಸ್ ಟಿ ಪಿಐ  ನಡುವಿನ ಸಹಯೋಗದ ಸಂಭಾವ್ಯ ಕ್ಷೇತ್ರಗಳನ್ನು ಸಹ ಸಮಾವೇಶವು ಅನ್ವೇಷಿಸಿತು. ನಾವೀನ್ಯತೆ ಅಳವಡಿಕೆಯನ್ನು ವೇಗಗೊಳಿಸುವ, ಉದ್ಯಮಶೀಲತೆಯನ್ನು ಬೆಳೆಸುವ ಮತ್ತು ಜಾಗತಿಕ ನಾವೀನ್ಯತೆ ಮತ್ತು ತಂತ್ರಜ್ಞಾನ ಕೇಂದ್ರವಾಗಿ ಭಾರತದ ಸ್ಥಾನವನ್ನು ಬಲಪಡಿಸುವ ಗುರಿಯನ್ನು ಹೊಂದಿರುವ ರಚನಾತ್ಮಕ ಸಮಾಲೋಚನೆಗಳು ಮತ್ತು ಸಹಯೋಗದ ಉಪಕ್ರಮಗಳ ಮೂಲಕ ತೊಡಗಿಸಿಕೊಳ್ಳುವುದನ್ನು ಮುಂದುವರಿಸಲು ಪಾಲುದಾರರ ಬದ್ಧತೆಯೊಂದಿಗೆ ಸಮಾವೇಶವು ಮುಕ್ತಾಯವಾಯಿತು.

 

*****


(रिलीज़ आईडी: 2279358) आगंतुक पटल : 9
इस विज्ञप्ति को इन भाषाओं में पढ़ें: English , Gujarati , Urdu , हिन्दी , Telugu