ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಉಪ ರಾಷ್ಟ್ರಪತಿ ಶ್ರೀ ಸಿ. ಪಿ. ರಾಧಾಕೃಷ್ಣನ್ ಅವರ ಆತ್ಮೀಯ ಶುಭಾಶಯಗಳಿಗೆ ಕೃತಜ್ಞತೆ ಸಲ್ಲಿಸಿದ್ದ ಪ್ರಧಾನಮಂತ್ರಿ

प्रविष्टि तिथि: 10 JUN 2026 7:25PM by PIB Bengaluru

ಉಪರಾಷ್ಟ್ರಪತಿ ಶ್ರೀ ಸಿ. ಪಿ. ರಾಧಾಕೃಷ್ಣನ್ ಅವರ ಆತ್ಮೀಯ ಶುಭಾಶಯಗಳಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ಕೃತಜ್ಞತೆ ಸಲ್ಲಿಸಿದರು. ಭಾರತದ ಜನರ ನಂಬಿಕೆ ಮತ್ತು ಆಶೀರ್ವಾದಗಳು ರಾಷ್ಟ್ರದ ಸೇವೆಯಲ್ಲಿ ಹೆಚ್ಚು ಶ್ರಮಿಸಲು ತಮ್ಮನ್ನು ಪ್ರೇರೇಪಿಸುತ್ತವೆ ಎಂದು ಪ್ರಧಾನಮಂತ್ರಿಯವರು ಹೇಳಿದ್ದಾರೆ.

ಶ್ರೀ ಮೋದಿಯವರು ತಮ್ಮ ಎಲ್ಲಾ ಪ್ರಯತ್ನಗಳು ಸಮೃದ್ಧ ಮತ್ತು ನಾಗರಿಕತೆಯ ಪರಂಪರೆಯ ಬಗ್ಗೆ ಹೆಮ್ಮೆಪಡುವ ವಿಕಸಿತ ಭಾರತವನ್ನು ನಿರ್ಮಿಸುವ ಗುರಿಯಿಂದ ಮಾರ್ಗದರ್ಶನ ಪಡೆಯುತ್ತವೆ ಎಂದು ಹೇಳಿದ್ದಾರೆ. ನಮ್ಮ ಸಹ-ಭಾರತೀಯರ ಕನಸುಗಳು ಮತ್ತು ಆಕಾಂಕ್ಷೆಗಳನ್ನು ಈಡೇರಿಸುವಲ್ಲಿ ಯಾವುದೇ ಅವಕಾಶವನ್ನು ಕೈ ಬಿಡುವುದಿಲ್ಲ ಎಂದು ಪ್ರಧಾನಮಂತ್ರಿಯವರು ದೃಢಪಡಿಸಿದರು.

ಪ್ರಧಾನಮಂತ್ರಿಯವರು Xನಲ್ಲಿ ಪೋಸ್ಟ್ ಮಾಡಿ:

"ಉಪರಾಷ್ಟ್ರಪತಿ ಶ್ರೀ ಸಿ.ಪಿ. ರಾಧಾಕೃಷ್ಣನ್ ಜಿ, ನಿಮ್ಮ ಆತ್ಮೀಯ ಶುಭಾಶಯಗಳಿಗೆ ಧನ್ಯವಾದಗಳು.

ಭಾರತದ ಜನರ ನಂಬಿಕೆ ಮತ್ತು ಆಶೀರ್ವಾದಗಳು ರಾಷ್ಟ್ರದ ಸೇವೆಯಲ್ಲಿ ಹೆಚ್ಚು ಶ್ರಮಿಸಲು ನನಗೆ ಇನ್ನೂ ಸ್ಫೂರ್ತಿಯನ್ನು ನೀಡುತ್ತವೆ. ನಮ್ಮ ನಾಗರಿಕತೆಯ ಪರಂಪರೆಯ ಬಗ್ಗೆ ಸಮೃದ್ಧ ಮತ್ತು ಹೆಮ್ಮೆಪಡುವ ವಿಕಸಿತ ಭಾರತವನ್ನು ನಿರ್ಮಿಸುವ ಗುರಿಯತ್ತ ನನ್ನ ಎಲ್ಲಾ ಪ್ರಯತ್ನಗಳು ಮುಂದುವರಿಯುತ್ತವೆ. ನಮ್ಮ ಸಹ-ಭಾರತೀಯರ ಕನಸುಗಳು ಮತ್ತು ಆಕಾಂಕ್ಷೆಗಳನ್ನು ಈಡೇರಿಸುವಲ್ಲಿ ಯಾವುದೇ ಅವಕಾಶವನ್ನು ಕೈ ಬಿಡುವುದಿಲ್ಲ.

@VPIndia

@CPR_VP"

ಕೆನಡಾದ ಪ್ರಧಾನಮಂತ್ರಿಯವರಾದ ಗೌರವಾನ್ವಿತ ಮಾರ್ಕ್ ಕಾರ್ನಿ ಅವರು ಭಾರತದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರಿಗೆ ಭಾರತದ ಅತ್ಯಂತ ದೀರ್ಘಾವಧಿಯ ನಿರಂತರ ಪ್ರಧಾನಿಯಾಗಿ ಆಯ್ಕೆಯಾಗಿದ್ದಕ್ಕಾಗಿ ಅಭಿನಂದನೆಗಳನ್ನು ಸಲ್ಲಿಸಿದರು. ಕೆನಡಾ ಮತ್ತು ಭಾರತ ತಮ್ಮ ಪಾಲುದಾರಿಕೆಯಲ್ಲಿ ಮುಂದುವರೆಯುತ್ತಿರುವ ಈ ಸಂದರ್ಭದಲ್ಲಿ, ಎರಡೂ ರಾಷ್ಟ್ರಗಳ ಜನರಿಗೆ ಹೆಚ್ಚಿನ ಸಮೃದ್ಧಿಯನ್ನು ಒದಗಿಸಲು ತಮ್ಮ ಸಹಯೋಗದ ಪ್ರಯತ್ನಗಳನ್ನು ಮುಂದುವರೆಸುವುದಾಗಿ ಕೆನಡಾದ ಪ್ರಧಾನ ಮಂತ್ರಿಯವರು ಹೇಳಿದರು.

"ಭಾರತದ ಅತ್ಯಂತ ದೀರ್ಘಾವಧಿಯ ನಿರಂತರ ಪ್ರಧಾನಿಯಾಗಿ ಆಯ್ಕೆಯಾಗಿದ್ದಕ್ಕಾಗಿ ಪ್ರಧಾನಮಂತ್ರಿ @narendramodi ಯವರಿಗೆ ಅಭಿನಂದನೆಗಳು.

ಕೆನಡಾ ಮತ್ತು ಭಾರತ ನಮ್ಮ ಪಾಲುದಾರಿಕೆಯನ್ನು ಮುಂದುವರೆಯುತ್ತಿರುವ ಈ ಸಂದರ್ಭದಲ್ಲಿ, ಉಭಯ ದೇಶದ ಜನರಿಗೆ ಹೆಚ್ಚಿನ ಸಮೃದ್ಧಿಯನ್ನು ಒದಗಿಸಲು ನಮ್ಮ ಕೆಲಸವನ್ನು ಮುಂದುವರಿಸಲು ನಾನು ಎದುರು ನೋಡುತ್ತಿದ್ದೇನೆ."

ಸ್ಪೇನ್ ನ ಪ್ರಧಾನಮಂತ್ರಿ ಗೌರವಾನ್ವಿತ ಪೆಡ್ರೊ ಸ್ಯಾಂಚೆಜ್ ಅವರು ಜೂನ್ 10, 2026ರಂದು ಬರೆದ ಪತ್ರದಲ್ಲಿ ಭಾರತದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರಿಗೆ ಅಭಿನಂದನೆಗಳನ್ನು ಸಲ್ಲಿಸಿದರು. ಈ ಸಾಧನೆಯು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವವೆಂದು ಗುರುತಿಸಲ್ಪಟ್ಟ ಭಾರತದ ಸಾಂಸ್ಥಿಕ ಚೈತನ್ಯದ ಗಮನಾರ್ಹ ಪ್ರತಿಬಿಂಬವಾಗಿದ್ದು, ದೇಶದ ಪ್ರಗತಿ ಮತ್ತು ಸ್ಥಿರತೆಗೆ ಸರ್ಕಾರದ ಬದ್ಧತೆಯಾಗಿದೆ ಎಂದು ಸ್ಪ್ಯಾನಿಷ್ ಪ್ರಧಾನಿಯವರು ಹೇಳಿದ್ದಾರೆ. ಹೆಚ್ಚುವರಿಯಾಗಿ, 2026ರಲ್ಲಿ ಸ್ಪೇನ್ ಹಾಗೂ ಭಾರತದ ದ್ವಿಮುಖ ಸಂಸ್ಕೃತಿ, ಪ್ರವಾಸೋದ್ಯಮ ಮತ್ತು ಕೃತಕ ಬುದ್ಧಿಮತ್ತೆ ವರ್ಷವನ್ನು ಆಚರಿಸಲಾಗುತ್ತಿದ್ದು, ಇದನ್ನು ದ್ವಿಪಕ್ಷೀಯ ಸಂಬಂಧಗಳ ಚೈತನ್ಯದ ಸಂಕೇತವೆಂದು ಪ್ರಧಾನಮಂತ್ರಿ ಸ್ಯಾಂಚೆಜ್ ಅವರು ಎತ್ತಿ ಹಿಡಿದರು.

ಜಪಾನಿನ ಪ್ರಧಾನಮಂತ್ರಿ ಘನತೆವೆತ್ತ ಸನೇ ತಕೈಚಿ ಅವರು ಜೂನ್ 10, 2026ರಂದು ಭಾರತದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರಿಗೆ ಅಭಿನಂದನಾ ಸಂದೇಶವನ್ನು ಕಳುಹಿಸಿದ್ದಾರೆ. ಮೇ 2014ರಲ್ಲಿ ಭಾರತದ ಪ್ರಧಾನ ಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಾಗಿನಿಂದ, ಶ್ರೀ ಮೋದಿಯವರು ಜಪಾನ್ ಹಾಗೂ ಭಾರತದ ಸಂಬಂಧಗಳ ಗಮನಾರ್ಹ ಪ್ರಗತಿಗೆ ಅಮೂಲ್ಯ ಕೊಡುಗೆಗಳನ್ನು ನೀಡಿದ್ದಾರೆ ಎಂದು ತಿಳಿಸಿದರು.

 

*****

 


(रिलीज़ आईडी: 2272104) आगंतुक पटल : 6
इस विज्ञप्ति को इन भाषाओं में पढ़ें: English , Urdu , Marathi , हिन्दी , Assamese , Manipuri , Bengali , Punjabi , Gujarati , Tamil , Telugu , Malayalam