ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ
azadi ka amrit mahotsav

ಜೂನ್ 9 ರಂದು ಜಿನೀವಾದಲ್ಲಿ ನಡೆದ 114ನೇ ಅಂತಾರಾಷ್ಟ್ರೀಯ ಕಾರ್ಮಿಕ ಸಮ್ಮೇಳನದಲ್ಲಿ ಭಾರತೀಯ ನಿಯೋಗದ ನೇತೃತ್ವವನ್ನು ಕೇಂದ್ರ ರಾಜ್ಯ ಸಚಿವರಾದ ಶೋಭಾ ಕರಂದ್ಲಾಜೆ ವಹಿಸಿದ್ದರು

प्रविष्टि तिथि: 10 JUN 2026 10:00AM by PIB Bengaluru

ಭಾರತ ಸರ್ಕಾರದ ಕಾರ್ಮಿಕ ಮತ್ತು ಉದ್ಯೋಗ ಹಾಗೂ ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಕೇಂದ್ರ ಸಹಾಯಕ ಸಚಿವರಾದ ಸುಶ್ರೀ ಶೋಭಾ ಕರಂದ್ಲಾಜೆ ಅವರು ಸ್ವಿಟ್ಜರ್‌ಲ್ಯಾಂಡ್‌ನ ಜಿನೆವಾದಲ್ಲಿ ನಡೆದ 114ನೇ ಅಂತಾರಾಷ್ಟ್ರೀಯ ಕಾರ್ಮಿಕ ಸಮ್ಮೇಳನದಲ್ಲಿ (ಐ ಎಲ್‌ ಸಿ) ಭಾರತೀಯ ನಿಯೋಗದ ನೇತೃತ್ವ ವಹಿಸಿದ್ದರು. ಈ ಸಂದರ್ಭದಲ್ಲಿ ಅವರು ಸಮಗ್ರ ಬೆಳವಣಿಗೆ, ಲಿಂಗ ಸಮಾನತೆ ಮತ್ತು ಸಾಮಾಜಿಕ ಸಂವಾದಕ್ಕೆ ಭಾರತದ ಬದ್ಧತೆಯನ್ನು ಒತ್ತಿಹೇಳಿದರು. ಅವರ ಈ ಭೇಟಿಯು ಪ್ರಮುಖ ಚರ್ಚೆಗಳಲ್ಲಿನ ಭಾಗವಹಿಸುವಿಕೆ ಮತ್ತು 2026ರ ಜೂನ್ 9 ರಂದು ನಡೆದ ಉನ್ನತ ಮಟ್ಟದ ದ್ವಿಪಕ್ಷೀಯ ಸರಣಿ ಸಭೆಗಳೊಂದಿಗೆ ಬಲವಾದ, ಸಂಘಟಿತ ರಾಜತಾಂತ್ರಿಕ ಉಪಸ್ಥಿತಿಯನ್ನು ಪ್ರತಿಬಿಂಬಿಸಿತು.

ಜಿನೆವಾದಲ್ಲಿ ನಡೆದ 114ನೇ ಅಂತಾರಾಷ್ಟ್ರೀಯ ಕಾರ್ಮಿಕ ಸಮ್ಮೇಳನದ ಸಂದರ್ಭದಲ್ಲಿ, ಕೇಂದ್ರ ಸಚಿವರು ನೇಪಾಳದ ಯುವಜನ, ಕಾರ್ಮಿಕ ಮತ್ತು ಉದ್ಯೋಗ ಸಚಿವರಾದ ಶ್ರೀ ರಾಮ್ ಜೀ ಯಾದವ್ ಅವರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಿದರು. ನೇಪಾಳವು ಭಾರತದ ಡಿಜಿಟಲ್ ಪೋರ್ಟಲ್ ಗಳನ್ನು ಶ್ಲಾಘಿಸಿತು. ಭಾರತವು ತನ್ನ "ನೆರೆಹೊರೆಗೆ ಆದ್ಯತೆ"  ನೀತಿಯಡಿ ನೇಪಾಳವು ಭಾರತದ ಪ್ರಮುಖ ಪಾಲುದಾರ ದೇಶವಾಗಿ ಮುಂದುವರಿದಿದೆ ಎಂದು ಉಲ್ಲೇಖಿಸಿತು. ಕೌಶಲ್ಯ ಅಭಿವೃದ್ಧಿ, ಕಾರ್ಮಿಕರ ಸಂಚಾರ ಮತ್ತು ಡಿಜಿಟಲ್ ತಂತ್ರಜ್ಞಾನವನ್ನು ಹಂಚಿಕೊಳ್ಳುವ ಕ್ಷೇತ್ರಗಳಲ್ಲಿ ಸಹಕಾರವನ್ನು ಹೆಚ್ಚಿಸುವ ಕುರಿತು ಉಭಯ ಸಚಿವರು ಚರ್ಚಿಸಿದರು. ಈ ಚರ್ಚೆಯು ಉಭಯ ದೇಶಗಳ ಕಾರ್ಮಿಕರ ಕಲ್ಯಾಣ ಮತ್ತು ಅವಕಾಶಗಳನ್ನು ಹೆಚ್ಚಿಸುವ ಹಾಗೂ ದೀರ್ಘಕಾಲದ ಭ್ರಾತೃತ್ವದ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುವ ಹಂಚಿಕೊಂಡ ಬದ್ಧತೆಯನ್ನು ಪುನರುಚ್ಚರಿಸಿತು.

ಕೇಂದ್ರ ರಾಜ್ಯ ಸಚಿವರಾದ ಸುಶ್ರೀ ಶೋಭಾ ಕರಂದ್ಲಾಜೆ ಅವರು ಅಂಗೋಲಾದ ಸಾರ್ವಜನಿಕ ಆಡಳಿತ, ಕಾರ್ಮಿಕ ಮತ್ತು ಸಾಮಾಜಿಕ ಭದ್ರತೆ ಸಚಿವರಾದ ಶ್ರೀಮತಿ ತೆರೇಸಾ ರೊಡ್ರಿಗಸ್ ಡಿಯಾಸ್ ಅವರೊಂದಿಗೆ ನಡೆಸಿದ ಸಭೆಯಲ್ಲಿ, ಕಾರ್ಮಿಕ ಮತ್ತು ಉದ್ಯೋಗ, ಕೌಶಲ್ಯ ಅಭಿವೃದ್ಧಿ, ವೃತ್ತಿಪರ ತರಬೇತಿ, ಸಾಮಾಜಿಕ ರಕ್ಷಣೆ ಮತ್ತು ಕಾರ್ಯಪಡೆಯ ತರಬೇತಿ ಕ್ಷೇತ್ರಗಳಲ್ಲಿ ಸಹಕಾರವನ್ನು ಬಲಪಡಿಸುವ ಕುರಿತು ಚರ್ಚೆಗಳು ನಡೆದವು. ಉದ್ಯೋಗ ಸೇವೆಗಳು, ಕೌಶಲ್ಯ ವರ್ಧನೆ, ಕಾರ್ಯಪಡೆ ಯೋಜನೆ ಮತ್ತು ಡಿಜಿಟಲ್ ಆಡಳಿತದ ಕ್ಷೇತ್ರದಲ್ಲಿ ಉಭಯ ದೇಶಗಳ ನಡುವಿನ ಸಹಕಾರವನ್ನು ಹೆಚ್ಚಿಸಲು  ಇಬ್ಬರೂ ಸಚಿವರು ಒಪ್ಪಿಕೊಂಡರು. ಭಾರತದ ಡಿಜಿಟಲ್ ಉತ್ಪನ್ನಗಳನ್ನು ಅಂಗೋಲಾ ಶ್ಲಾಘಿಸಿತು ಮತ್ತು ಜ್ಞಾನ ಹಂಚಿಕೆಗೆ ಕೋರಿತು. ಉದ್ಯೋಗ ಸೇವೆಗಳು, ಕಾರ್ಮಿಕರ ನೋಂದಣಿ, ಉದ್ಯೋಗಗಳು ಮತ್ತು ಕೌಶಲ್ಯ ಹೊಂದಾಣಿಕೆಗಾಗಿ ಡಿಜಿಟಲ್ ವೇದಿಕೆಗಳನ್ನು ವಿನ್ಯಾಸಗೊಳಿಸಲು, ಅಭಿವೃದ್ಧಿಪಡಿಸಲು ಮತ್ತು ಕಾರ್ಯಗತಗೊಳಿಸಲು ಅಂಗೋಲಾಗೆ ತಾಂತ್ರಿಕ ನೆರವು ಮತ್ತು ಸಾಮರ್ಥ್ಯ ನಿರ್ಮಾಣದ ಬೆಂಬಲವನ್ನು ಭಾರತವು ನೀಡಿತು.

ಕೇಂದ್ರ ರಾಜ್ಯ ಸಚಿವರು ಮಾರಿಷಸ್ ನ ಕಾರ್ಮಿಕ ಮತ್ತು ಕೈಗಾರಿಕಾ ಸಂಬಂಧಗಳ ಸಚಿವರಾದ ಶ್ರೀ ಮುಹಮ್ಮದ್ ರೆಜಾ ಕಾಸಮ್ ಉತೀಮ್ ಅವರೊಂದಿಗೆ ನಡೆಸಿದ ದ್ವಿಪಕ್ಷೀಯ ಸಭೆಯಲ್ಲಿ, ಅನ್ಯೋನ್ಯ ಇತಿಹಾಸ, ಸಂಸ್ಕೃತಿ, ಪ್ರಜಾಪ್ರಭುತ್ವದ ಮೌಲ್ಯಗಳು ಮತ್ತು ಆಳವಾದ ಜನರೊಂದಿಗಿನ ಜನರ ಬಾಂಧವ್ಯದಲ್ಲಿ ನೆಲೆಗೊಂಡಿರುವ ಉಭಯ ದೇಶಗಳ ನಡುವಿನ ನಿಕಟ ಮತ್ತು ದೀರ್ಘಕಾಲದ ಸಂಬಂಧವನ್ನು ಶ್ಲಾಘಿಸಿದರು. ಕಾರ್ಮಿಕ ಮತ್ತು ಉದ್ಯೋಗ ವಲಯದಲ್ಲಿ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸುವಲ್ಲಿ ಭಾರತ ಸಾಧಿಸಿರುವ ಗಮನಾರ್ಹ ಪ್ರಗತಿಯನ್ನು ಮಾರಿಷಸ್ ಶ್ಲಾಘಿಸಿತು. ಡಿಜಿಟಲ್ ಉತ್ಪನ್ನಗಳನ್ನು ಅಭಿವೃದ್ಧಿಪಡಿಸುವಲ್ಲಿ ಮಾರಿಷಸ್ ದೇಶಕ್ಕೆ ತನ್ನ ಪರಿಣತಿಯನ್ನು ಹಂಚಿಕೊಳ್ಳಲು ಭಾರತ ಸಿದ್ಧವಾಗಿದೆ ಎಂದು ಪುನರುಚ್ಚರಿಸಿತು ಮತ್ತು ತನ್ನ ನಿರಂತರ ತಾಂತ್ರಿಕ ನೆರವಿನ ಭರವಸೆಯನ್ನು ನೀಡಿತು.

ಸುಶ್ರೀ ಶೋಭಾ ಕರಂದ್ಲಾಜೆ ಅವರು ಜಿನೆವಾದಲ್ಲಿ ಫ್ರಾನ್ಸ್, ಯುಕೆ, ದಕ್ಷಿಣ ಕೊರಿಯಾ, ಅಮೆರಿಕ ಮತ್ತು ಕೆನಡಾದ ಕಾರ್ಮಿಕ ಸಚಿವರನ್ನೂ ಭೇಟಿಯಾಗಿ, ಕೌಶಲ್ಯಗಳ ಪರಸ್ಪರ ಮನ್ನಣೆ ಮತ್ತು ಬೇಡಿಕೆ ಆಧಾರಿತ ಕೌಶಲ್ಯದ ಮೂಲಕ ಭಾರತದಿಂದ ನುರಿತ ಮಾನವಶಕ್ತಿಯ ವಲಸೆಗಾಗಿ ಕಾನೂನುಬದ್ಧ ಮಾರ್ಗಗಳ ಕುರಿತು ಚರ್ಚಿಸಿದರು.

 

*****


(रिलीज़ आईडी: 2271026) आगंतुक पटल : 19
इस विज्ञप्ति को इन भाषाओं में पढ़ें: English , Urdu , Marathi , हिन्दी , Gujarati , Tamil , Malayalam