ಗೃಹ ವ್ಯವಹಾರಗಳ ಸಚಿವಾಲಯ
ಗುಜರಾತ್ ನ ಭುಜ್ ನಲ್ಲಿ ಗಡಿ ಸಂಬಂಧಿತ ವಿಷಯಗಳ ಕುರಿತು ನಡೆದ ಸಭೆಯ ಅಧ್ಯಕ್ಷತೆಯನ್ನು ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ವಹಿಸಿದ್ದರು
ಗಡಿಪ್ರದೇಶದಲ್ಲಿ ಬೇಲಿ, ಕಡಲ ಭದ್ರತೆ ಮತ್ತು ರಾಜ್ಯ ಸರ್ಕಾರದ ದೃಢ ರಾಜಕೀಯ ಸಂಕಲ್ಪವು ಗುಜರಾತ್ ನ ಭದ್ರತಾ ಚೌಕಟ್ಟಿನಲ್ಲಿ ಗಮನಾರ್ಹ ಪರಿವರ್ತನೆಯನ್ನು ತಂದಿದೆ
ರಾಜ್ಯದೊಳಗೆ ಒಳನುಸುಳುವಿಕೆ ಮತ್ತು ಗಡಿಯಾಚೆಗಿನ ಕಳ್ಳಸಾಗಣೆ ಸಂಪೂರ್ಣವಾಗಿ ನಿಂತುಹೋಗಿದೆ
ಗಡಿಪ್ರದೇಶಗಳ ಜಿಲ್ಲೆಗಳಲ್ಲಿ ಸಂಭವಿಸುತ್ತಿರುವ ಜನಸಂಖ್ಯಾ ಬದಲಾವಣೆಗಳನ್ನು ಜಿಲ್ಲಾ ನ್ಯಾಯಾಧೀಶರು ಮೇಲ್ವಿಚಾರಣೆ ಮಾಡಬೇಕು ಮತ್ತು ನಿಯಮಿತವಾಗಿ ವರದಿ ಮಾಡಬೇಕು
ಕೈಗಾರಿಕಾ ಘಟಕಗಳ ಸ್ಥಾಪನೆಯಿಂದಾಗಿ ಗಡಿ ಪ್ರದೇಶಗಳಲ್ಲಿ ಹಿಮ್ಮುಖ ವಲಸೆ ನಡೆಯುತ್ತಿರುವುದು ಸ್ವಾಗತಾರ್ಹ ಬೆಳವಣಿಗೆ
ಸ್ಥಳೀಯ ಆಡಳಿತಗಳು ಪ್ರತಿ ಗಡಿಪ್ರದೇಶದ ಜಿಲ್ಲೆಯ ನಿರ್ದಿಷ್ಟ ಸವಾಲುಗಳು ಮತ್ತು ಅವಶ್ಯಕತೆಗಳಿಗಾಗಿ ಎಸ್.ಒ.ಪಿ ಗಳನ್ನು ರೂಪಿಸಬೇಕು, ಅಸ್ತಿತ್ವದಲ್ಲಿರುವ ಒಳನುಸುಳುವವರ ಗುರುತಿಸುವಿಕೆ ಮತ್ತು ಡ್ರೋನ್ಗಳು ಮತ್ತು ಮಾದಕವಸ್ತುಗಳಿಗೆ ಸಂಬಂಧಿಸಿದ ಬೆದರಿಕೆಗಳನ್ನು ಖಚಿತಪಡಿಸಿಕೊಳ್ಳಬೇಕು
ಪೊಲೀಸ್ ಠಾಣೆಗಳಿಂದ ಪಟ್ವಾರಿಯವರೆಗೆ, ಪ್ರದೇಶದಿಂದ ಈಗಾಗಲೇ ನೆಲೆಸಿರುವ ಒಳನುಸುಳುವವರನ್ನು ವಾಪಸ್ ಕಳುಹಿಸುವುದನ್ನು ಖಚಿತಪಡಿಸಿಕೊಳ್ಳಲು ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕು
ಅಂತರರಾಷ್ಟ್ರೀಯ ಗಡಿಯ 0 ಕಿಮೀ ರಿಂದ 15 ಕಿಮೀ ವ್ಯಾಪ್ತಿಯೊಳಗಿನ ಎಲ್ಲಾ ಅನಧಿಕೃತ ಅತಿಕ್ರಮಣಗಳನ್ನು ಶೂನ್ಯ ಸಹಿಷ್ಣುತೆ ನೀತಿಯೊಂದಿಗೆ ನಿರ್ಮೂಲನೆ ಮಾಡಬೇಕು; ಗಡಿ ಪ್ರದೇಶಗಳಲ್ಲಿನ ಮೂಲಭೂತವಾದದ ಕೇಂದ್ರಗಳ ಮೇಲೆ ತೀವ್ರ ನಿಗಾ ಇಡಬೇಕು
ಪ್ರತಿ ಜಿಲ್ಲೆಯಲ್ಲೂ ಬಿ.ಎಸ್.ಎಫ್., ಕೋಸ್ಟ್ ಗಾರ್ಡ್, ಐ.ಟಿ ಇಲಾಖೆ, ಇಡಿ ಮತ್ತು ಲೀಡ್ ಬ್ಯಾಂಕ್ ಮ್ಯಾನೇಜರ್ ಗಳ ಪ್ರತಿನಿಧಿಗಳನ್ನು ಒಳಗೊಂಡ ಭದ್ರತಾ ಸಮನ್ವಯ ಗುಂಪನ್ನು ರಚಿಸಬೇಕು
ಹವಾಲಾ ವಹಿವಾಟುಗಳು, ಹಣಕಾಸು ವ್ಯವಹಾರಗಳು, ಅನ್ಯರ ಗುಪ್ತ ನಕಲಿ(ಮ್ಯೂಲ್) ಖಾತೆಗಳು, ಪುಟ್ಟಪುಟ್ಟ ಬೆನಾಮಿ/ನಕಲಿ (ಶೆಲ್) ಕಂಪನಿಗಳು, ಅನುಮಾನಾಸ್ಪದ ವಾಹನಗಳು ಮತ್ತು ಜಿ.ಎಸ್.ಟಿ ಸಂಗ್ರಹಗಳ ಬಗ್ಗೆ ಗಡಿ ಜಿಲ್ಲೆಗಳಲ್ಲಿ ಕಟ್ಟುನಿಟ್ಟಿನ ನಿಗಾ ಇಡಬೇಕು; ಆರ್.ಬಿ.ಐ ಜೊತೆ ಐಟಿ ಇಲಾಖೆಯು ಸಮಗ್ರ ಸಮೀಕ್ಷೆ ಚಾಲನೆಯನ್ನು ಪ್ರಾರಂಭಿಸಬೇಕು
ಆದಾಯ ತೆರಿಗೆ, ಹಣ ವರ್ಗಾವಣೆ ಮತ್ತು ಕಸ್ಟಮ್ಸ್ ಗೆ ಸಂಬಂಧಿಸಿದ ಕಾನೂನುಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಜವಾಬ್ದಾರಿ ಡಿಎಂ, ಎಸ್ಪಿ ಮತ್ತು ಐಜಿ (ಗಡಿ ವ್ಯಾಪ್ತಿ) ಮೇಲಿರುತ್ತದೆ
ಪ್ರಕಟಣಾ ದಿನಾಂಕ:
30 MAY 2026 1:39PM by PIB Bengaluru
ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಗುಜರಾತ್ ನ ಭುಜ್ ನಲ್ಲಿ ನಡೆದ ಭದ್ರತಾ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ, ಭಾರತ-ಪಾಕಿಸ್ತಾನ ಗಡಿ (ಐಪಿಬಿ) ಉದ್ದಕ್ಕೂ ಇರುವ ಗುಜರಾತ್ ನ ಗಡಿ ಪ್ರದೇಶ ಮತ್ತು ಕರಾವಳಿ ಜಿಲ್ಲೆಗಳಿಗೆ ಸಂಬಂಧಿಸಿದ ಭದ್ರತೆಗೆ ಸಂಬಂಧಿಸಿದ ವಿಷಯಗಳ ಮೇಲೆ ಕೇಂದ್ರೀಕರಿಸಿ ಮಾತನಾಡಿದರು. ಗುಜರಾತ್ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ, ಗುಜರಾತ್ ಮುಖ್ಯ ಕಾರ್ಯದರ್ಶಿ, ಡಿಜಿಪಿ, ರಾಜ್ಯ ಸರ್ಕಾರಿ ಇತರ ಹಿರಿಯ ಅಧಿಕಾರಿಗಳು, ಕಚ್, ವಾವ್-ಥರಡ್ ಮತ್ತು ಪಠಾಣ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಗಳು ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು. ಹೆಚ್ಚು ಬಲಿಷ್ಠ ಮತ್ತು ಸಮಗ್ರ ಗಡಿ ನಿರ್ವಹಣೆಯನ್ನು ಸಾಧಿಸುವ ಉದ್ದೇಶದಿಂದ, ಭಾರತ-ಪಾಕಿಸ್ತಾನ ಗಡಿಯುದ್ದಕ್ಕೂ ಈ ಗಡಿ ಪ್ರದೇಶಗಳಲ್ಲಿನ ಸವಾಲುಗಳು, ಬೆದರಿಕೆಗಳು ಮತ್ತು ಹೊರಹೊಮ್ಮುತ್ತಿರುವ ಕಾಳಜಿಗಳ ಮೇಲೆ ಸಭೆ ಕೇಂದ್ರೀಕರಿಸಿತು ಮತ್ತು ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರದ - ವಿಶೇಷವಾಗಿ ಡಿ.ಎಂ.ಗಳು ಮತ್ತು ಎಸ್.ಪಿ.ಗಳ - ಸಕ್ರಿಯ ಮತ್ತು ಪರಿಣಾಮಕಾರಿ ಪಾತ್ರವನ್ನು ಸಭೆ ಒತ್ತಿಹೇಳಿತು.

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಸಭೆಯಲ್ಲಿ, ಗಡಿ ಪ್ರದೇಶಗಳ ಬೇಲಿ, ಸಮುದ್ರ ಗಡಿ ಭದ್ರತೆ ಮತ್ತು ರಾಜ್ಯ ಸರ್ಕಾರದ ಬಲವಾದ ರಾಜಕೀಯ ಇಚ್ಛಾಶಕ್ತಿಯು ಗುಜರಾತ್ ನ ಭದ್ರತಾ ಭೂದೃಶ್ಯದಲ್ಲಿ ಗಮನಾರ್ಹ ಪರಿವರ್ತನೆಯನ್ನು ತಂದಿದೆ, ಇದರ ಪರಿಣಾಮವಾಗಿ ರಾಜ್ಯದಲ್ಲಿ ಒಳನುಸುಳುವಿಕೆ ಮತ್ತು ಗಡಿಯಲ್ಲಿ ಕಳ್ಳಸಾಗಣೆ ಸಂಪೂರ್ಣವಾಗಿ ನಿಂತಿದೆ ಎಂದು ಹೇಳಿದರು. ಅಂತರರಾಷ್ಟ್ರೀಯ ಗಡಿಯುದ್ದಕ್ಕೂ 0–15 ಕಿ.ಮೀ. ವ್ಯಾಪ್ತಿಯೊಳಗಿನ ಎಲ್ಲಾ ಅನಧಿಕೃತ ಅತಿಕ್ರಮಣಗಳ ಬಗ್ಗೆ ಶೂನ್ಯ ಸಹಿಷ್ಣುತೆಯ ವಿಧಾನವನ್ನು ಅಳವಡಿಸಿಕೊಳ್ಳಬೇಕು ಮತ್ತು ಅವುಗಳನ್ನು ನಿರ್ಮೂಲನೆ ಮಾಡಲು ಪ್ರಯತ್ನಿಸಬೇಕು. ಗಡಿ ಪ್ರದೇಶಗಳಲ್ಲಿನ ಮೂಲಭೂತೀಕರಣದ ಕೇಂದ್ರಗಳ ಮೇಲೆ ನಿಕಟ ನಿಗಾ ಇಡುವ ಅಗತ್ಯವನ್ನು ಅವರು ಸಭೆಯಲ್ಲಿ ಒತ್ತಿ ಹೇಳಿದರು.
ಗಡಿಪ್ರದೇಶಗಳ ಜಿಲ್ಲೆಗಳಲ್ಲಿನ ಜನಸಂಖ್ಯಾ ಬದಲಾವಣೆಗಳು ಅತ್ಯಂತ ಗಂಭೀರ ಸವಾಲನ್ನು ಒಡ್ಡುತ್ತವೆ ಮತ್ತು ಜಿಲ್ಲಾ ನ್ಯಾಯಾಧೀಶರು ಅಂತಹ ಬೆಳವಣಿಗೆಗಳ ಕಟ್ಟುನಿಟ್ಟಿನ ಮೇಲ್ವಿಚಾರಣೆ ಮತ್ತು ನಿಯಮಿತ ವರದಿಯನ್ನು ಖಚಿತಪಡಿಸಿಕೊಳ್ಳಬೇಕು ಎಂದು ಕೇಂದ್ರ ಸಚಿವರಾದ ಶ್ರೀ ಅಮಿತ್ ಶಾ ಅವರು ಹೇಳಿದರು. ಕೈಗಾರಿಕಾ ಘಟಕಗಳ ಸ್ಥಾಪನೆಯಿಂದಾಗಿ ಗಡಿ ಪ್ರದೇಶಗಳಲ್ಲಿ ನಡೆಯುತ್ತಿರುವ ಹಿಮ್ಮುಖ ವಲಸೆ ಸ್ವಾಗತಾರ್ಹ ಬೆಳವಣಿಗೆಯಾಗಿದೆ ಎಂದು ಅವರು ಹೇಳಿದರು. ಈಗಾಗಲೇ ನೆಲೆಸಿರುವ ಅಕ್ರಮ ನುಸುಳುಕೋರರನ್ನು ಗಡೀಪಾರು ಮಾಡುವುದನ್ನು ಖಚಿತಪಡಿಸಿಕೊಳ್ಳಲು ಪೊಲೀಸ್ ಠಾಣೆಯಿಂದ ಪಟ್ವಾರಿಯವರೆಗೆ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ಅಸ್ತಿತ್ವದಲ್ಲಿರುವ ನುಸುಳುಕೋರರನ್ನು ಗುರುತಿಸುವುದನ್ನು ಖಚಿತಪಡಿಸಿಕೊಳ್ಳಲು ಮತ್ತು ಡ್ರೋನ್ಗಳು ಮತ್ತು ಮಾದಕ ದ್ರವ್ಯಗಳಿಗೆ ಸಂಬಂಧಿಸಿದ ಬೆದರಿಕೆಗಳನ್ನು ಖಚಿತಪಡಿಸಿಕೊಳ್ಳಲು ಸ್ಥಳೀಯ ಆಡಳಿತಗಳು ಪ್ರತಿ ಗಡಿ ಜಿಲ್ಲೆಯ ನಿರ್ದಿಷ್ಟ ಸವಾಲುಗಳು ಮತ್ತು ಅವಶ್ಯಕತೆಗಳಿಗಾಗಿ ಎಸ್.ಒ.ಒಇ.ಗಳನ್ನು ರೂಪಿಸಬೇಕು ಎಂದು ಅವರು ಹೇಳಿದರು.

ಬಿಎಸ್ಎಫ್, ಕೋಸ್ಟ್ ಗಾರ್ಡ್, ಆದಾಯ ತೆರಿಗೆ ಇಲಾಖೆ, ಜಾರಿ ನಿರ್ದೇಶನಾಲಯ (ಇಡಿ) ಮತ್ತು ಲೀಡ್ ಬ್ಯಾಂಕ್ ಮ್ಯಾನೇಜರ್ ಗಳನ್ನು ಒಳಗೊಂಡಂತೆ ಪ್ರತಿ ಜಿಲ್ಲೆಯಲ್ಲಿ ಭದ್ರತಾ ಸಮನ್ವಯ ಗುಂಪುಗಳನ್ನು ರಚಿಸಬೇಕು ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಆದಾಯ ತೆರಿಗೆ, ಹಣ ವರ್ಗಾವಣೆ ವಿರೋಧಿ ಮತ್ತು ಕಸ್ಟಮ್ಸ್ ಕಾನೂನುಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಜವಾಬ್ದಾರಿ ಜಿಲ್ಲಾ ನ್ಯಾಯಾಧೀಶರು (ಡಿಎಂ), ಪೊಲೀಸ್ ವರಿಷ್ಠಾಧಿಕಾರಿ (ಎಸ್ ಪಿ) ಮತ್ತು ಗಡಿ ವ್ಯಾಪ್ತಿಯ ಇನ್ಸ್ಪೆಕ್ಟರ್ ಜನರಲ್ (ಐಜಿ) ಅವರ ಮೇಲಿದೆ ಎಂದು ಅವರು ಹೇಳಿದರು.
ಗಡಿ ಜಿಲ್ಲೆಗಳಲ್ಲಿ ಹವಾಲಾ ವಹಿವಾಟುಗಳು, ಹಣಕಾಸು ವ್ಯವಹಾರಗಳು, ಮ್ಯೂಲ್ ಖಾತೆಗಳು, ಶೆಲ್ ಕಂಪನಿಗಳು, ಅನುಮಾನಾಸ್ಪದ ವಾಹನಗಳು ಮತ್ತು ಜಿ ಎಸ್ ಟಿ ಸಂಗ್ರಹಗಳ ಮೇಲೆ ಕಟ್ಟುನಿಟ್ಟಿನ ನಿಗಾ ಇಡುವ ಅಗತ್ಯವನ್ನು ಶ್ರೀ ಅಮಿತ್ ಶಾ ಒತ್ತಿ ಹೇಳಿದರು. ಆರ್ಥಿಕ ಅಪರಾಧಗಳನ್ನು ಎದುರಿಸುವ ಏಜೆನ್ಸಿಗಳಿಗೆ ಗಡಿ ಪ್ರದೇಶಗಳ ಬಗ್ಗೆ ಕಟ್ಟುನಿಟ್ಟಾಗಿ ತಿಳಿಸಬೇಕು ಮತ್ತು ಆದಾಯ ತೆರಿಗೆ ಇಲಾಖೆಯು ಆರ್ಬಿಐ ಸಹಯೋಗದೊಂದಿಗೆ ವ್ಯಾಪಕವಾದ ಸಮೀಕ್ಷಾ ಅಭಿಯಾನಗಳನ್ನು ನಡೆಸಬೇಕು ಎಂದು ಅವರು ಹೇಳಿದರು.
ಅಂತರರಾಷ್ಟ್ರೀಯ ಸಮುದ್ರ ಗಡಿ ರೇಖೆ (ಐಎಂಬಿಎಲ್) ಗೆ ಸಾಮೀಪ್ಯವಿರುವುದರಿಂದ, ಕರಾವಳಿ ಭದ್ರತೆಗೆ ಆದ್ಯತೆ ನೀಡುವ ಮತ್ತು ಭಾರತೀಯ ಕರಾವಳಿ ಕಾವಲು ಪಡೆಗಳೊಂದಿಗೆ ಪರಿಣಾಮಕಾರಿ ಸಮನ್ವಯವನ್ನು ಖಚಿತಪಡಿಸಿಕೊಳ್ಳುವ ಅವಶ್ಯಕತೆಯಿದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. 'ವೈಬ್ರಂಟ್ ವಿಲೇಜಸ್' ಉಪಕ್ರಮದ ಜೊತೆಗೆ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡರ ಪ್ರತಿಯೊಂದು ಯೋಜನೆಗಳ ಅನುಷ್ಠಾನಗಳಲ್ಲಿ ಪರಿಪೂರ್ಣತೆ ಹಾಗೂ 100% ಸಾಂದ್ರತೆ (ಸ್ಯಾಚುರೇಶನ್)ಯನ್ನು ಗಡಿಪ್ರದೇಶಗಳ ಹಳ್ಳಿಗಳಲ್ಲಿ ಖಚಿತಪಡಿಸಿಕೊಳ್ಳಬೇಕು ಎಂದು ಅವರು ನಿರ್ದೇಶಿಸಿದರು.
*****
(ಪ್ರಕಟಣೆ ಐ.ಡಿ.: 2266956)
ವಿಸಿಟರ್ ಕೌಂಟರ್ : 8