ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಅವಿರತ ಪ್ರಯತ್ನ ಮತ್ತು ದೃಢ ಸಂಕಲ್ಪದ ಶಕ್ತಿಯನ್ನು ಪ್ರತಿಬಿಂಬಿಸುವ ಸಂಸ್ಕೃತ ಸುಭಾಷಿತವನ್ನು ಹಂಚಿಕೊಂಡಿರುವ ಪ್ರಧಾನಮಂತ್ರಿ

ಪ್ರಕಟಣಾ ದಿನಾಂಕ: 27 MAY 2026 8:36AM by PIB Bengaluru

ನಿರಂತರ ಪ್ರಯತ್ನ, ಸಹನೆ ಮತ್ತು ದೃಢ ಸಂಕಲ್ಪದ ಮೂಲಕ ಅತಿದೊಡ್ಡ ಗುರಿಗಳನ್ನೂ ನಾವು ಜೀವನದಲ್ಲಿ ಸಾಧಿಸಬಹುದು ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಹೇಳಿದ್ದಾರೆ. ಭಾರತವನ್ನು ಹೊಸ ಎತ್ತರದ ದಿಕ್ಕಿಗೆ ಕೊಂಡೊಯ್ಯುವಲ್ಲಿ ದೇಶದ ಜನರು ಇದೇ ಮನೋಭಾವದಿಂದ ಪ್ರೇರಿತರಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಪ್ರಧಾನಮಂತ್ರಿಗಳು ಈ ಕೆಳಗಿನ ಸಂಸ್ಕೃತ ಸುಭಾಷಿತವನ್ನು ಹಂಚಿಕೊಂಡಿದ್ದಾರೆ —

“यो यमर्थं प्रार्थयते तदर्थं चेह ते क्रमात् ।
अवश्यं स तमाप्नोति न चेदर्थान् निवर्तते ।।”

ಈ ಸುಭಾಷಿತದ ಅರ್ಥವೆಂದರೆ, ಯಾವುದೇ ವ್ಯಕ್ತಿ ನಿರ್ದಿಷ್ಟ ಗುರಿಯನ್ನು ಸಾಧಿಸಲು ಮನಸಾರೆ ಬಯಸಿ, ಅದನ್ನು ತಲುಪಲು ನಿರಂತರ ಹಾಗೂ ಕ್ರಮಬದ್ಧ ಪ್ರಯತ್ನಗಳನ್ನು ಮಾಡಿದರೆ, ಮಧ್ಯದಲ್ಲಿ ಕೈಬಿಡದೆ ತನ್ನ ಮಾರ್ಗದಲ್ಲಿ ಮುಂದುವರಿದರೆ, ಆತ ಖಂಡಿತವಾಗಿಯೂ ತನ್ನ ಗುರಿಯನ್ನು ಸಾಧಿಸುತ್ತಾನೆ.

ಪ್ರಧಾನಮಂತ್ರಿ ಅವರು ಎಕ್ಸ್ ಖಾತೆಯಲ್ಲಿ ಹೀಗೆ ಬರೆದಿದ್ದಾರೆ;

“निरंतर प्रयास, धैर्य और दृढ़ संकल्प के साथ बड़े से बड़े लक्ष्य को हासिल किया जा सकता है। आज देशवासी इसी भावना से भारतवर्ष को नई ऊंचाइयों की ओर ले जा रहे हैं।

यो यमर्थं प्रार्थयते तदर्थं चेह ते क्रमात् ।

अवश्यं स तमाप्नोति न चेदर्थान् निवर्तते ।।”

 

*****


(ಪ್ರಕಟಣೆ ಐ.ಡಿ.: 2265787) ವಿಸಿಟರ್ ಕೌಂಟರ್ : 12