ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ
ಚಂಡೀಗಢದಲ್ಲಿ ನಡೆದ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ರಾಷ್ಟ್ರೀಯ ಚಿಂತನ ಶಿಬಿರದ 2 ನೇ ದಿನದಂದು ರಾಜ್ಯ-ಕೇಂದ್ರಗಳ ಕುರಿತು ಕೇಂದ್ರೀಕೃತ ಚರ್ಚೆಗಳೊಂದಿಗೆ ನೂತನ ದೃಷ್ಟಿಕೋನದಿಂದ ಚಟುವಟಿಕೆಗಳು ಕಾರ್ಯರೂಪಗೊಂಡವು
ತೀವ್ರ ರಾಜ್ಯ-ಕೇಂದ್ರದ ಕುರಿತು ಚರ್ಚೆಗಳ ಮೇಲೆ ಕೇಂದ್ರೀಕೃತವಾದ ಚಿಂತನ ಶಿಬಿರದ 2 ನೇ ದಿನದ ಅಧಿವೇಶನದಲ್ಲಿ ಕೇಂದ್ರ ಸಚಿವರಾದ ಡಾ. ವೀರೇಂದ್ರ ಕುಮಾರ್ ಅವರು ಭಾಗವಹಿಸಿದರು
ರಾಷ್ಟ್ರೀಯ ಚಿಂತನ ಶಿಬಿರದ 2ನೇ ದಿನದ ಚರ್ಚೆಗಳು "ಕ್ಷೇತ್ರ ವಾಸ್ತವಗಳಲ್ಲಿ ಸಮೃದ್ಧಗೊಳಿಸುವುದು ಮತ್ತು ನೆಲೆಗೊಳ್ಳುವುದು" ಎಂದು ಕೇಂದ್ರ ಸಚಿವರಾದ ಶ್ರೀ ಬಿ.ಎಲ್. ವರ್ಮಾ ಅವರು ಹೇಳಿದರು
ರಾಜ್ಯ ಸಚಿವರಾದ ಶ್ರೀ ಬಿ.ಎಲ್. ವರ್ಮಾ ಅವರ ನೇತೃತ್ವದ ಬೆಳಗಿನ ಯೋಗ ಅಧಿವೇಶನವು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳೊಂದಿಗೆ ದಿನವಿಡೀ ವಿಷಯಾಧಾರಿತ ಚರ್ಚೆಗಳಿಗೆ ವೇದಿಕೆಯನ್ನು ಸಿದ್ಧಪಡಿಸಿತು
ವಿದ್ಯಾರ್ಥಿವೇತನ ಸುಧಾರಣೆ, ವ್ಯಸನ(ನಶೆ) ಮುಕ್ತ ಭಾರತ, ಶ್ರಮದಲ್ಲಿ ಘನತೆ, ಘನತೆಯೊಂದಿಗೆ ವಯಸ್ಸಾಗುವುದು ಮತ್ತು ದಿವ್ಯಾಂಗ ಮಕ್ಕಳಿಗೆ ಆರಂಭಿಕ ಹಸ್ತಕ್ಷೇಪದ ಕುರಿತು ಐದು ಪ್ರಮುಖ ಗುಂಪುಗಳು ತೊಡಗಿಸಿಕೊಂಡವು
ವಿಷಯಾಧಾರಿತ ಚರ್ಚೆಗಳು ಸಮುದಾಯ ತೊಡಗಿಸಿಕೊಳ್ಳುವಿಕೆ ಮತ್ತು ಸಾರ್ವಜನಿಕ-ಖಾಸಗಿ-ಜನರ ಪಾಲುದಾರಿಕೆಗಳ ಮೇಲೆ ಕೇಂದ್ರೀಕರಿಸಿದವು
ಪ್ರಕಟಣಾ ದಿನಾಂಕ:
25 APR 2026 6:51PM by PIB Bengaluru
“ಅಂತ್ಯೋದಯ ಕಾ ಸಂಕಲ್ಪ”, “ಅಮೃತ ಕಾಲ ಕಾ ಪ್ರತಿಬಿಂಬ” – “2047ರಲ್ಲಿ ವಿಕಸಿತ ಭಾರತ” ಕುರಿತ ಮೂರು ದಿನಗಳ ರಾಷ್ಟ್ರೀಯ ಚಿಂತನ ಶಿಬಿರವು ಇಂದು ಚಂಡೀಗಢದಲ್ಲಿ ತನ್ನ ಎರಡನೇ ದಿನಕ್ಕೆ ಕಾಲಿಟ್ಟಿತು. ಸಮುದಾಯಗಳ ತೊಡಗಿಸಿಕೊಳ್ಳುವಿಕೆಯನ್ನು ಬಲಪಡಿಸುವುದು, ಸಾರ್ವಜನಿಕ-ಖಾಸಗಿ-ಜನರ ಪಾಲುದಾರಿಕೆ ಮತ್ತು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸಹಯೋಗದೊಂದಿಗೆ ಸಾಮಾಜಿಕ ನ್ಯಾಯ ಯೋಜನೆಗಳ ಕೊನೆಯ ಹಂತದ ವಿತರಣೆಯ ಮೇಲೆ ರಾಷ್ಟ್ರೀಯ ಚಿಂತನ ಶಿಬಿರದಲ್ಲಿ ತೀವ್ರ ಗಮನ ಹರಿಸಲಾಗಿದೆ. ಸಮಗ್ರ ಮತ್ತು ಜವಾಬ್ದಾರಿಯುತ ಆಡಳಿತದ ಮೇಲಿನ ಉದ್ಘಾಟನಾ ಸಮಾರಂಭದಲ್ಲಿ ಒತ್ತು ನೀಡಲಾಯಿತು., ಇದನ್ನು ಆಧರಿಸಿ, ಚರ್ಚೆಗಳು ದೇಶಾದ್ಯಂತದ ಸಚಿವರು ಮತ್ತು ಹಿರಿಯ ಅಧಿಕಾರಿಗಳನ್ನು ಒಟ್ಟುಗೂಡಿಸಿ ಸಮಯಕ್ಕೆ ಅನುಗುಣವಾಗಿ, ಕಾರ್ಯಗತಗೊಳಿಸಬಹುದಾದ ಪರಿಹಾರಗಳ ಮೇಲೆ ಕೆಲಸ ಮಾಡಲು ಕರೆನೀಡಲಾಯಿತು.
ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ಹಿರಿಯ ಅಧಿಕಾರಿಗಳು, ರಾಜ್ಯ/ಕೇಂದ್ರಾಡಳಿತ ಪ್ರತಿನಿಧಿಗಳು ಮತ್ತು ಇತರ ಪ್ರತಿನಿಧಿಗಳು ಜಂಟಿ ಯೋಗ ಅಧಿವೇಶನದೊಂದಿಗೆ ದಿನವು ಪ್ರಾರಂಭವಾಯಿತು, ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಸಚಿವರಾದ ಶ್ರೀ ಬಿ.ಎಲ್. ವರ್ಮಾ ಮತ್ತು ಗಣ್ಯರೊಂದಿಗೆ ಅಧಿವೇಶನದಲ್ಲಿ ಭಾಗವಹಿಸಿದರು. ಕಾರ್ಯಕ್ರಮವು ದಿನದ ಕಾರ್ಯಕಲಾಪಗಳಿಗೆ ಕ್ಷೇಮ-ಆಧಾರಿತ ಮತ್ತು ಭಾಗವಹಿಸುವಿಕೆಯ ಸ್ವರವನ್ನು ನಿಗದಿಪಡಿಸಿತು ಮತ್ತು ಸಾಮಾಜಿಕ ನ್ಯಾಯ ವಿತರಣೆಯಲ್ಲಿ ಸಮಗ್ರ, ವ್ಯಕ್ತಿ-ಕೇಂದ್ರಿತ ವಿಧಾನಗಳಿಗೆ ಸಚಿವಾಲಯದ ಬದ್ಧತೆಯನ್ನು ಒತ್ತಿಹೇಳಿತು.
"ಸಮುದಾಯ ತೊಡಗಿಸಿಕೊಳ್ಳುವಿಕೆಯನ್ನು ಸದುಪಯೋಗಪಡಿಸಿಕೊಳ್ಳುವುದು ಮತ್ತು ವರ್ಧಿತ ಸಾಮಾಜಿಕ ನ್ಯಾಯ ವಿತರಣೆಗಾಗಿ ಸಾರ್ವಜನಿಕ-ಖಾಸಗಿ-ಜನರ ಸಹಭಾಗಿತ್ವಗಳನ್ನು (ಪಿ.ಪಿ.ಪಿ.ಪಿ) ಅನ್ವೇಷಿಸುವುದು ವಿಷಯಾಧಾರಿತ ಉಪಹಾರ ಕೂಟದಲ್ಲಿ ಪಿ.ಪಿ.ಪಿ.ಪಿ. ಮಾದರಿಯ ಕುರಿತು, ಸ್ಥಳೀಯ ಸಮುದಾಯಗಳು, ನಾಗರಿಕ ಸಮಾಜ ಸಂಸ್ಥೆಗಳು ಮತ್ತು ಖಾಸಗಿ ವಲಯದ ಸಂಸ್ಥೆಗಳು ಅತ್ಯಂತ ಅಂಚಿನಲ್ಲಿರುವವರನ್ನು ತಲುಪಲು ಸರ್ಕಾರಿ ಪ್ರಯತ್ನಗಳಿಗೆ ಹೇಗೆ ಪೂರಕವಾಗಬಹುದು ಎಂಬುದನ್ನು ಭಾಗವಹಿಸಿದವರು ಚರ್ಚಿಸಿದರು. ವ್ಯಸನ ಮುಕ್ತಿ, ಹಿರಿಯ ನಾಗರಿಕರ ಆರೈಕೆ, ವಿದ್ಯಾರ್ಥಿವೇತನ ವಿತರಣೆ, ನೈರ್ಮಲ್ಯ ಕಾರ್ಮಿಕರಿಗೆ ಬೆಂಬಲ ಮತ್ತು ದುರ್ಬಲ ಗುಂಪುಗಳ ಪುನರ್ವಸತಿ ಕಾರ್ಯವನ್ನು ಬಲಪಡಿಸುವ ಪ್ರಾಯೋಗಿಕ ಪಿ.ಪಿ.ಪಿ.ಪಿ. ಮಾದರಿಗಳನ್ನು ವಿನಿಮಯ ಕೇಂದ್ರಗಳು ವಿಶೇಷ ಹೈಲೈಟ್ ಮಾಡಿದವು.
2 ನೇ ದಿನದ ಅಧಿವೇಶನದಲ್ಲಿ, ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವರಾದ ಡಾ. ವೀರೇಂದ್ರ ಕುಮಾರ್ ಅವರು ವಿವಿಧ ಕಾರ್ಯಕಲಾಪಗಳಲ್ಲಿ ಭಾಗವಹಿಸಿದರು ಮತ್ತು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳೊಂದಿಗೆ ವಿಷಯಾಧಾರಿತ ಚರ್ಚೆಗಳನ್ನು ನಿಕಟವಾಗಿ ಅನುಸರಿಸಿದರು. ಶಿಬಿರದ ಒಟ್ಟಾರೆ ಉದ್ದೇಶಗಳನ್ನು ನೆನಪಿಸಿಕೊಂಡ ಅವರು, ಸಾಮಾಜಿಕ ವಲಯದಲ್ಲಿ 2047 ರ ವಿಕಸಿತ ಭಾರತದ ದೃಷ್ಟಿಕೋನವು ಸರದಿಯಲ್ಲಿರುವ ಕೊನೆಯ ವ್ಯಕ್ತಿಗೆ ಘನತೆ, ಪ್ರವೇಶಸಾಧ್ಯತೆ ಮತ್ತು ನಿರಂತರತೆಯ ಮೂರು ಸ್ತಂಭಗಳ ಮೇಲೆ ನಿಂತಿರಬೇಕು ಎಂದು ಪುನರುಚ್ಚರಿಸಿದರು ಮತ್ತು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳೊಂದಿಗಿನ ಚರ್ಚೆಗಳು ಕಲ್ಯಾಣದಿಂದ ಸಬಲೀಕರಣದತ್ತ ಸಾಗುವ ಗುರಿಯನ್ನು ಹೊಂದಿವೆ ಎಂದು ಅವರು ಹೇಳಿದರು.
ಚಿಂತನ ಶಿಬಿರದ ಪ್ರಕ್ರಿಯೆಯ ರೂಪರೇಷೆಯಲ್ಲಿ, ಇಲಾಖೆಯ ಕಾರ್ಯದರ್ಶಿ ಶ್ರೀ ಸುಧಾಂಶ್ ಪಂತ್ ಅವರು ಹತ್ತು ಪ್ರಮುಖ ವಿಷಯಗಳನ್ನು ಗುರುತಿಸಿದ್ದಾರೆ ಎಂದು ತಿಳಿಸಿದರು - ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯಿಂದ ಏಳು ಮತ್ತು ಅಂಗವಿಕಲ ವ್ಯಕ್ತಿಗಳ ಸಬಲೀಕರಣ ಇಲಾಖೆಯಿಂದ . ಭಾಗವಹಿಸುವವರನ್ನು ಐದು ವಿಷಯಾಧಾರಿತ ಗುಂಪುಗಳಾಗಿ ವಿಂಗಡಿಸಲಾಯಿತು, ಸಾಮಾನ್ಯ ಚರ್ಚೆಗಳ ಬದಲಿಗೆ ಪ್ರಮುಖ ನೀತಿ ಸಮಸ್ಯೆಗಳು, ಅನುಷ್ಠಾನದ ಅಂತರಗಳು, ಉತ್ತಮ ಅಭ್ಯಾಸಗಳು ಮತ್ತು ಸ್ಪಷ್ಟ ಕ್ರಿಯಾ ಅಂಶಗಳನ್ನು ಸಮಯೋಚಿತವಾಗಿ ಸೆರೆಹಿಡಿಯುವ ಸಂಕ್ಷಿಪ್ತ ಪ್ರಸ್ತುತಿಗಳ ಕಡೆಗೆ ಕೆಲಸ ಮಾಡಲು - ಇದರಲ್ಲಿ ಪ್ರತಿಯೊಂದಕ್ಕೂ ಪ್ರಮುಖ ಸಂಯೋಜಕರು ಮತ್ತು ವರದಿಗಾರರು ಮಾರ್ಗದರ್ಶನ ನೀಡಿದರು
2 ನೇ ದಿನದ ನಡುವಿನ ಅಧಿವೇಶನದಲ್ಲಿ, ಐದು ವಿಷಯಾಧಾರಿತ ಗುಂಪುಗಳು 2047ರ ವಿಕಸಿತ ಭಾರತದ ಚೌಕಟ್ಟಿನ ಅಡಿಯಲ್ಲಿ ತಮ್ಮ ಮೊದಲ ಪರಿಕಲ್ಪನೆ(ಥೀಮ್)ಯೊಂದಿಗೆ ತೊಡಗಿಸಿಕೊಂಡವು.
ತಂಡ I "ಶಿಕ್ಷಣದಿಂದ ಸಮೃದ್ಧಿ: ವಿದ್ಯಾರ್ಥಿವೇತನ ವಿತರಣೆ ಮತ್ತು ಶೈಕ್ಷಣಿಕ ಪ್ರವೇಶವನ್ನು ಬಲಪಡಿಸುವುದು", ಸಕಾಲಿಕ ಮತ್ತು ತಡೆರಹಿತ ವಿದ್ಯಾರ್ಥಿವೇತನ ಪ್ರವೇಶ, ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಸ್ಥಿರವಾದ ಅನುಷ್ಠಾನ, ವೇಗವಾದ ಪರಿಶೀಲನೆ ಮತ್ತು ವಿತರಣೆ, ಸುಧಾರಿತ ಕುಂದುಕೊರತೆ ಪರಿಹಾರ ಮತ್ತು ವಿದ್ಯಾರ್ಥಿಗಳ ಯೋಗಕ್ಷೇಮಕ್ಕೆ ಗಮನ" ಕುರಿತು ಚರ್ಚಿಸಿತು.
ತಂಡ II "ವ್ಯಸನ(ನಶೆ) ಮುಕ್ತ ಭಾರತ: ವ್ಯಸನ ನಿವಾರಣೆ ಮತ್ತು ಪುನರ್ವಸತಿ ಪರಿಸರ ವ್ಯವಸ್ಥೆಗಳನ್ನು ಬಲಪಡಿಸುವುದು", ಚಿಕಿತ್ಸೆ ಮತ್ತು ಪುನರ್ವಸತಿ ಸೌಲಭ್ಯಗಳ ವಿಸ್ತರಣೆ, ಡಿಜಿಟಲ್ ಮೇಲ್ವಿಚಾರಣೆ, ಅಂತರ-ವಲಯ ಸಮನ್ವಯ ಮತ್ತು ಸಮುದಾಯ ಆಧಾರಿತ ಸಂಪರ್ಕವನ್ನು ಪರಿಶೀಲಿಸುವುದು.
ತಂಡ III "ಶ್ರಮದ ಘನತೆ: ಕಾರ್ಮಿಕರಲ್ಲಿ ಘನತೆ" ಕುರಿತು ಚರ್ಚಿಸಿತು, “ಮ್ಯಾನ್ಹೋಲ್”ನಿಂದ ಯಂತ್ರ-ರಂಧ್ರ ವ್ಯವಸ್ಥೆಗಳಿಗೆ ಪರಿವರ್ತನೆ, ಮಿಷನ್ ಶೂನ್ಯ ನೈರ್ಮಲ್ಯ-ಸಂಬಂಧಿತ ಸಾವುಗಳು ಮತ್ತು ನೈರ್ಮಲ್ಯ ಕಾರ್ಮಿಕರಿಗೆ ಸುರಕ್ಷತೆ, ಘನತೆ ಮತ್ತು ಸಾಮಾಜಿಕ ಭದ್ರತೆಯನ್ನು ಖಾತರಿಪಡಿಸುವ ಬಗ್ಗೆ ಒತ್ತು ನೀಡಿತು.
ತಂಡ IV "ಗೌರವದೊಂದಿಗೆ ವೃದ್ಧಾಪ್ಯ: ಭಾರತದಲ್ಲಿ ಸಮಗ್ರ ವಿಧಾನ ಮತ್ತು ಮೂಲಸೌಕರ್ಯ ಬೆಂಬಲ ವ್ಯವಸ್ಥೆಗಳೊಂದಿಗೆ ಸ್ಥಳದಲ್ಲಿ ವೃದ್ಧಾಪ್ಯ", ವೃದ್ಧರ ಆರೈಕೆ ಮೂಲಸೌಕರ್ಯ, ಸಾಮಾಜಿಕ ಮತ್ತು ಆರ್ಥಿಕ ಭದ್ರತೆ ಮತ್ತು ಛತ್ರಿ ಯೋಜನೆಗಳು ಮತ್ತು ಕಾನೂನು ಚೌಕಟ್ಟುಗಳ ಉತ್ತಮ ಬಳಕೆಯನ್ನು ಕೇಂದ್ರೀಕರಿಸಿತು.
ತಂಡ V "ಸ್ವಾವಲಬನೆ ಕಡೆಗೆ ಚೊಚ್ಚಲ ಹೆಜ್ಜೆ : ಆರಂಭಿಕ ಹಸ್ತಕ್ಷೇಪ" ಎಂಬ ವಿಷಯದ ಕುರಿತು ಭಾಷಣ ಮಾಡಿತು. ಅಂಗವಿಕಲ ಮಕ್ಕಳ ಆರಂಭಿಕ ಗುರುತಿಸುವಿಕೆ ಮತ್ತು ಹಸ್ತಕ್ಷೇಪ ಮತ್ತು ಅಭಿವೃದ್ಧಿ ಸವಾಲುಗಳು ಮತ್ತು ಸಮುದಾಯ ಮಟ್ಟದಲ್ಲಿ ಸೇವೆಗಳ ಒಮ್ಮುಖದ ಮೇಲೆ ಕೇಂದ್ರೀಕರಿಸಲಾಯಿತು.
ಈ ಗುಂಪು ಚರ್ಚೆಗಳಲ್ಲಿ, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಕ್ಷೇತ್ರ ಮಟ್ಟದ ಅಡಚಣೆಗಳನ್ನು ಹಂಚಿಕೊಂಡವು ಮತ್ತು ಸುಧಾರಿತ ವಿದ್ಯಾರ್ಥಿವೇತನ ಬಿಡುಗಡೆ ವ್ಯವಸ್ಥೆಗಳು, ಸಂಯೋಜಿತ ವ್ಯಸನ ನಿವಾರಣೆ ಮೇಲ್ವಿಚಾರಣಾ ವೇದಿಕೆಗಳು, ಹಿರಿಯ ಆರೈಕೆ ಮಾದರಿಗಳು ಮತ್ತು ಆರಂಭಿಕ ಹಸ್ತಕ್ಷೇಪ ತಂತ್ರಗಳಂತಹ ಪುನರಾವರ್ತಿತ ನಾವೀನ್ಯತೆಗಳನ್ನು ಪ್ರದರ್ಶಿಸಿದವು. ಸಚಿವಾಲಯದ ಮಾರ್ಗಸೂಚಿಗಳು, ಸಮಾವೇಶ್ ಮತ್ತು ಸೇತು ನಂತಹ ಡಿಜಿಟಲ್ ವೇದಿಕೆಗಳ ಮೂಲಕ ಮುಂದುವರಿಯಬಹುದಾದ ನಿರ್ದಿಷ್ಟ, ಪಾಲುದಾರ-ಆಧಾರಿತ ಕ್ರಿಯಾ ಅಂಶಗಳನ್ನು ರೂಪಿಸುವುದರ ಮೇಲೆ ಮತ್ತು ಕೇಂದ್ರ-ರಾಜ್ಯ ಸಮನ್ವಯವನ್ನು ಬಲಪಡಿಸುವುದರ ಮೇಲೆ ಒತ್ತು ನೀಡಲಾಯಿತು.
"ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದಲ್ಲಿ ಕೊನೆಯ ಮೈಲಿ ವಿತರಣೆ ಮತ್ತು ಅನುಷ್ಠಾನ ಕಾರ್ಯವಿಧಾನವನ್ನು ಬಲಪಡಿಸುವುದು" ಕುರಿತು ವಿಷಯಾಧಾರಿತ ಚರ್ಚೆಯು ಸಚಿವರು ಮತ್ತು ಹಿರಿಯ ಅಧಿಕಾರಿಗಳಿಗೆ ಜಿಲ್ಲಾ ಮಟ್ಟದ ವಿತರಣಾ ಸವಾಲುಗಳು, ಪ್ರಕ್ರಿಯೆಗಳ ಸರಳೀಕರಣ ಮತ್ತು ಡೇಟಾ-ಚಾಲಿತ ಮೇಲ್ವಿಚಾರಣೆಯ ಬಗ್ಗೆ ಚಿಂತಿಸಲು ಮತ್ತಷ್ಟು ಅನುವು ಮಾಡಿಕೊಟ್ಟಿತು. ಕೇಂದ್ರ, ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಜವಾಬ್ದಾರಿಗಳನ್ನು ಸ್ಪಷ್ಟವಾಗಿ ನಿರ್ದಿಷ್ಟಪಡಿಸುವ ಸಾಮರಸ್ಯದ ವಿದ್ಯಾರ್ಥಿವೇತನ ವ್ಯವಸ್ಥೆಗಳು, ಸುವ್ಯವಸ್ಥಿತ ವ್ಯಸನ ಮುಕ್ತಿ ಮತ್ತು ಪುನರ್ವಸತಿ ಮಾರ್ಗಗಳು ಮತ್ತು ದೃಢವಾದ ಮೇಲ್ವಿಚಾರಣಾ ಚೌಕಟ್ಟುಗಳ ಅಗತ್ಯವನ್ನು ಚರ್ಚೆಗಳು ಪುನರುಚ್ಚರಿಸಿದವು.
ದಿನದ ತಮ್ಮ ಸಮಾರೋಪ ಭಾಷಣದಲ್ಲಿ, ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಸಚಿವರಾದ ಶ್ರೀ ಬಿ.ಎಲ್. ವರ್ಮಾ ಅವರು ಚರ್ಚೆಗಳನ್ನು "ಕ್ಷೇತ್ರ ವಾಸ್ತವಗಳಲ್ಲಿ ಶ್ರೀಮಂತಗೊಳಿಸುವುದು ಮತ್ತು ಆಧಾರವಾಗಿರುವುದು" ಎಂದು ಬಣ್ಣಿಸಿದರು ಮತ್ತು ಭಾಗವಹಿಸುವ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪ್ರಾಮಾಣಿಕ ಒಳಹರಿವು ಮತ್ತು ರಚನಾತ್ಮಕ ಸಲಹೆಗಳಿಗಾಗಿ ಧನ್ಯವಾದಗಳನ್ನು ಅರ್ಪಿಸಿದರು. ರಾಷ್ಟ್ರೀಯ ಚಿಂತನ ಶಿಬಿರವು "ಕೇವಲ ಮೂರು ದಿನಗಳ ಕಾರ್ಯಕ್ರಮವಲ್ಲ, ಆದರೆ ಕೊನೆಯ ಹಂತದ ವಿತರಣೆಯನ್ನು ಬಲಪಡಿಸುವ ಸಾಮೂಹಿಕ ಸಂಕಲ್ಪವಾಗಿದೆ, ಇದರಿಂದಾಗಿ ಪ್ರತಿಯೊಂದು ವಿದ್ಯಾರ್ಥಿವೇತನ, ಹಿರಿಯ ನಾಗರಿಕರಿಗೆ ಪ್ರತಿಯೊಂದು ಬೆಂಬಲ, ನಶೆ (ವ್ಯಸನ) ಮುಕ್ತ ಭಾರತ ಅಡಿಯಲ್ಲಿ ಅಥವಾ ಅಂಗವಿಕಲ ವ್ಯಕ್ತಿಗಳಿಗೆ ಪ್ರತಿಯೊಂದು ಹಸ್ತಕ್ಷೇಪವು ಉದ್ದೇಶಿತ ಫಲಾನುಭವಿಯನ್ನು ಘನತೆಯಿಂದ ಮತ್ತು ವಿಳಂಬವಿಲ್ಲದೆ ತಲುಪುತ್ತದೆ" ಎಂದು ಅವರು ಹೇಳಿದರು ಮತ್ತು ಗುಂಪು ಕೆಲಸದಿಂದ ಹೊರಹೊಮ್ಮುವ ಶಿಫಾರಸುಗಳು ಸಚಿವಾಲಯ ಮತ್ತು ರಾಜ್ಯಗಳು ಆಲೋಚನೆಗಳಿಂದ ಅನುಷ್ಠಾನಕ್ಕೆ ಒಟ್ಟಾಗಿ ಸಾಗಲು ಸಹಾಯ ಮಾಡುತ್ತದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.
ಎರಡನೇ ದಿನದ ಚರ್ಚೆಗಳಿಂದ ಹೊರಹೊಮ್ಮುವ ಶಿಫಾರಸುಗಳನ್ನು ಅಂತಿಮ ದಿನದಂದು ಪರಿಷ್ಕರಿಸಲಾಗುವುದು, ಆಗ ತಂಡ/ಗುಂಪುಗಳು ಅಂತ್ಯೋದಯದಿಂದ ಆತ್ಮನಿರ್ಭಾರತ, ಸಮಾವೇಶ-ಪೆಹಚಾನ್-ಏಕೀಕರಣ, ಅರ್ಥಿಕ ಸಶಕ್ತಿಕರಣ, ಅಂಗವಿಕಲರಿಗೆ ಪ್ರವೇಶಸಾಧ್ಯತೆ ಮತ್ತು ಪ್ರಮಾಣೀಕರಣಕ್ಕೆ ಸಂಬಂಧಿಸಿದ ವಿಷಯಗಳನ್ನುವಿವರವಾಗಿ ಚರ್ಚಿಸುತ್ತವೆ, ಇದರಿಂದಾಗಿ 2047 ರ ವೇಳೆಗೆ ಹೆಚ್ಚು ನ್ಯಾಯಯುತ, ಎಲ್ಲರನ್ನೂ ಒಳಗೊಳ್ಳುವ ಮತ್ತು ಪ್ರವೇಶಿಸಬಹುದಾದ ವಿಕಸಿತ ಭಾರತಕ್ಕೆ ಅಮೂಲ್ಯ ಕೊಡುಗೆ ನೀಡುತ್ತವೆ.















*****
(ಪ್ರಕಟಣೆ ಐ.ಡಿ.: 2255576)
ವಿಸಿಟರ್ ಕೌಂಟರ್ : 11