ರೈಲ್ವೇ ಸಚಿವಾಲಯ
ಒಡಿಶಾದಲ್ಲಿ ₹90,000 ಕೋಟಿ ರೈಲು ಮೂಲಸೌಕರ್ಯ ಯೋಜನೆಗಳು ಕಾರ್ಯರೂಪಕ್ಕೆ ಬರುವುದರೊಂದಿಗೆ ರೈಲ್ವೆ ಸಾಮರ್ಥ್ಯ ಮತ್ತು ಜಾರಿಯ ವೇಗದಲ್ಲಿ ಅಭೂತಪೂರ್ವ ವಿಸ್ತರಣೆಗೆ ಸಾಕ್ಷಿ: ಶ್ರೀ ಅಶ್ವಿನಿ ವೈಷ್ಣವ್
ಸಕಾಲಿಕ ಪೂರ್ಣಗೊಳಿಸುವಿಕೆ ಮತ್ತು ಪ್ರಯಾಣಿಕರ ಸೌಕರ್ಯ ಹೆಚ್ಚಿಸುವತ್ತ ಗಮನಹರಿಸಿ ಭುವನೇಶ್ವರ ನಿಲ್ದಾಣದ ಪುನರಾಭಿವೃದ್ಧಿ ಪರಿಶೀಲಿಸಿದ ರೈಲ್ವೆ ಸಚಿವರು
ದಾಖಲೆಯ ₹10,928 ಕೋಟಿ ಬಜೆಟ್ ಹಂಚಿಕೆ ತ್ವರಿತ ಅನುಷ್ಠಾನ ಒತ್ತು; ಅಮೃತ ಭಾರತ ಯೋಜನೆಯಡಿ 59 ನಿಲ್ದಾಣಗಳು ಆಧುನೀಕರಣ ಹಂತಕ್ಕೆ ಪ್ರವೇಶ
ಒಡಿಶಾ ರೈಲು ಜಾಲ ವಿಸ್ತರಣೆಯು ಎಲ್ಲಾ 30 ಜಿಲ್ಲೆಗಳನ್ನು ಒಳಗೊಂಡ ಬೆಳವಣಿಗೆ ಗುರಿ: ಕೇಂದ್ರ ಸಚಿವರಾದ ಶ್ರೀ ವೈಷ್ಣವ್
ಸಾಮರ್ಥ್ಯವನ್ನು ಮರು ವ್ಯಾಖ್ಯಾನಿಸಲು ಕರಾವಳಿ ಮೆಗಾ ಕಾರಿಡಾರ್: ಬಾಲಸೋರ್-ಬೆರ್ಹಾಂಪುರ್ 4-ಲೈನ್ ಯೋಜನೆಯು ಹೈ-ಸ್ಪೀಡ್ ಸರಕು ಸಾಗಣೆ ಮತ್ತು ಪ್ರಯಾಣಿಕರ ಸಂಚಾರ ಸಮರ್ಪಕ ಬಳಕೆಗೆ ಸಿದ್ಧ
ಪ್ರಕಟಣಾ ದಿನಾಂಕ:
19 APR 2026 8:28PM by PIB Bengaluru
ಭುವನೇಶ್ವರದಲ್ಲಿ ಭಾರತದ ಮೊದಲ ಮುಂದುವರಿದ 3D ಗ್ಲಾಸ್ ಸೆಮಿಕಂಡಕ್ಟರ್ ಪ್ಯಾಕೇಜಿಂಗ್ ಘಟಕದ ಶಿಲಾನ್ಯಾಸ ಸಮಾರಂಭದಲ್ಲಿ, ಕೇಂದ್ರ ಸಚಿವರಾದ ಅಶ್ವಿನಿ ವೈಷ್ಣವ್ ಅವರು ಒಡಿಶಾದಲ್ಲಿ ರೈಲ್ವೆ ಮೂಲಸೌಕರ್ಯದ ಕ್ಷಿಪ್ರ ಪರಿವರ್ತನೆಯನ್ನು ಒತ್ತಿ ಹೇಳಿದರು. ರಾಜ್ಯಾದ್ಯಂತ ಸಂಪರ್ಕ ಮತ್ತು ಸಾಮರ್ಥ್ಯ ವರ್ಧನೆಯ ಮೇಲೆ ಸರ್ಕಾರದ ಹೆಚ್ಚಿನ ಗಮನ ಹರಿಸುತ್ತಿದೆ ಎಂದು ಪ್ರತಿಪಾದಿಸಿದರು.
₹90,000 ಕೋಟಿ ಮೌಲ್ಯದ ರೈಲ್ವೆ ಯೋಜನೆಗಳ ಜಾರಿ
₹90,000 ಕೋಟಿಗೂ ಅಧಿಕ ಮೌಲ್ಯದ ರೈಲ್ವೆ ಯೋಜನೆಗಳು ಒಡಿಶಾದಲ್ಲಿ ಪ್ರಸ್ತುತ ಜಾರಿಗೊಳ್ಳುತ್ತಿವೆ ಎಂದು ಶ್ರೀ ವೈಷ್ಣವ್ ಮಾಹಿತಿ ನೀಡಿದರು, ಇದು ರೈಲು ಜಾಲದ ಅಭೂತಪೂರ್ವ ವಿಸ್ತರಣೆಯನ್ನು ಸೂಚಿಸುತ್ತದೆ.
ಈ ಪ್ರಮಾಣದ ಹೂಡಿಕೆಯು ರಾಜ್ಯದಲ್ಲಿ ಪ್ರಯಾಣಿಕ ಮತ್ತು ಸರಕು ಸಾಗಣೆ ಮೂಲಸೌಕರ್ಯ ಎರಡನ್ನೂ ಬಲಪಡಿಸುವ ಕೇಂದ್ರದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ಪ್ರಮುಖವಾಗಿ ಪ್ರಸ್ತಾಪ ಮಾಡಿದರು.
ಒಡಿಶಾಗೆ ಭೇಟಿ ನೀಡಿದ ಸಂದರ್ಭದಲ್ಲಿ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರು ಭುವನೇಶ್ವರ ರೈಲು ನಿಲ್ದಾಣದ ನಡೆಯುತ್ತಿರುವ ಮರು ಅಭಿವೃದ್ಧಿ ಕಾಮಗಾರಿಯನ್ನು ಪರಿಶೀಲಿಸಿದರು. ಸಕಾಲಿಕ ಪೂರ್ಣಗೊಳಿಸುವಿಕೆ ಮತ್ತು ಉತ್ತಮ ಗುಣಮಟ್ಟದ ಅನುಷ್ಠಾನದ ಮಹತ್ವವನ್ನು ಒತ್ತಿ ಹೇಳಿದರು. ನವೀಕರಿಸಿದ ನಿಲ್ದಾಣವು ಆಧುನಿಕ ಸೌಕರ್ಯಗಳೊಂದಿಗೆ ಪ್ರಯಾಣಿಕರಿಗೆ ವರ್ಧಿತ ಸೌಕರ್ಯವನ್ನು ನೀಡುತ್ತದೆ ಎಂದ ಅವರು, ಇದು ವಿಕಸಿಸುತ್ತಿರುವ ಪ್ರಯಾಣಿಕರ ನಿರೀಕ್ಷೆಗಳಿಗೆ ಅನುಗುಣವಾಗಿ ನಿಲ್ದಾಣಗಳನ್ನು ವಿಶ್ವ ದರ್ಜೆಯ ಮೂಲಸೌಕರ್ಯ ಕೇಂದ್ರಗಳಾಗಿ ಪರಿವರ್ತಿಸುವ ಭಾರತೀಯ ರೈಲ್ವೆಯ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.
ದಾಖಲೆ ಬಜೆಟ್ ಹಂಚಿಕೆ ಮತ್ತು ನಿಲ್ದಾಣ ಮರುಅಭಿವೃದ್ಧಿ ಚಾಲನೆ
ಒಡಿಶಾ ₹10,928 ಕೋಟಿಗಳ ದಾಖಲೆಯ ರೈಲ್ವೆ ಬಜೆಟ್ ಹಂಚಿಕೆಯನ್ನು ಪಡೆದಿದೆ ಎಂದು ಸಚಿವರು ಹೇಳಿದರು. ಇದು ಹಿಂದಿನ ಹಂಚಿಕೆಗಳಿಗಿಂತ ಗಮನಾರ್ಹವಾಗಿ ಹೆಚ್ಚಾಗಿದ್ದು, ಇದು ಯೋಜನೆಗಳನ್ನು ವೇಗವಾಗಿ ಜಾರಿಗೊಳಿಸಲು ಅನುವು ಮಾಡಿಕೊಡುತ್ತದೆ. ಅಮೃತ್ ಭಾರತ್ ನಿಲ್ದಾಣ ಯೋಜನೆಯಡಿಯಲ್ಲಿ 59 ರೈಲು ನಿಲ್ದಾಣಗಳನ್ನು ಪುನರಾಭಿವೃದ್ಧಿ ಮಾಡಲಾಗುತ್ತಿದೆ ಎಂದು ಅವರು ಉಲ್ಲೇಖಿಸಿದರು, ಇದು ನಿಲ್ದಾಣಗಳನ್ನು ವರ್ಧಿತ ಸೌಲಭ್ಯಗಳೊಂದಿಗೆ ಆಧುನಿಕ, ಪ್ರಯಾಣಿಕ ಸ್ನೇಹಿ ಕೇಂದ್ರಗಳಾಗಿ ಪರಿವರ್ತಿಸುವ ಗುರಿಯನ್ನು ಹೊಂದಿದೆ.
ಎಲ್ಲಾ ಜಿಲ್ಲೆಗಳಲ್ಲಿ ರೈಲು ಸಂಪರ್ಕ ವಿಸ್ತರಣೆ
ಸಂಪರ್ಕ ಗುರಿಗಳನ್ನು ಪ್ರಮುಖವಾಗಿ ಪ್ರಸ್ತಾಪಿಸಿದ, ಒಡಿಶಾದ ಎಲ್ಲಾ 30 ಜಿಲ್ಲೆಗಳನ್ನು ಯೋಜಿತ ಮಧ್ಯಸ್ಥಿಕೆಗಳ ಮೂಲಕ ರೈಲು ಸಂಪರ್ಕದ ಅಡಿಯಲ್ಲಿ ತರಲಾಗುತ್ತಿದೆ ಎಂದು ಶ್ರೀ ವೈಷ್ಣವ್ ಹೇಳಿದರು. ಇದು ಸಮಗ್ರ ಅಭಿವೃದ್ಧಿ ಮತ್ತು ಮುಖ್ಯವಾಹಿನಿಯ ರೈಲು ಜಾಲದೊಂದಿಗೆ ದೂರದ ಮತ್ತು ಒಳನಾಡಿನ ಪ್ರದೇಶಗಳ ಉತ್ತಮ ಏಕೀಕರಣವನ್ನು ಖಚಿತಪಡಿಸುತ್ತದೆ ಎಂದು ಅವರು ಒತ್ತಿ ಹೇಳಿದರು.
ಕರಾವಳಿ ಮತ್ತು ಪ್ರಾದೇಶಿಕ ಸಂಪರ್ಕ ಬಲಪಡಿಸುವ ಪ್ರಮುಖ ಯೋಜನೆಗಳು
ಕರಾವಳಿ ಪಟ್ಟಿಯ ಉದ್ದಕ್ಕೂ ಸಾಮರ್ಥ್ಯವನ್ನು ಗಮನಾರ್ಹವಾಗಿ ಹೆಚ್ಚಿಸುವ ಬಾಲಸೋರ್ನಿಂದ ಬೆರ್ಹಾಂಪುರ್ವರೆಗಿನ ಪ್ರಸ್ತಾವಿತ ನಾಲ್ಕು-ಮಾರ್ಗದ ಕರಾವಳಿ ರೈಲು ಕಾರಿಡಾರ್ನಂತಹ ಪ್ರಮುಖ ಮೂಲಸೌಕರ್ಯ ಉಪಕ್ರಮಗಳ ಬಗ್ಗೆಯೂ ಸಚಿವರು ಗಮನಸೆಳೆದರು. ಅಂತಹ ಯೋಜನೆಗಳು ಪ್ರಾದೇಶಿಕ ಸರಕು ಸಾಗಾಣೆಯನ್ನು ಸುಧಾರಿಸುತ್ತದೆ, ದಟ್ಟಣೆಯನ್ನು ತಗ್ಗಿಸುತ್ತದೆ ಮತ್ತು ಒಡಿಶಾದಾದ್ಯಂತ ಆರ್ಥಿಕ ಚಟುವಟಿಕೆಯನ್ನು ಹೆಚ್ಚಿಸುತ್ತದೆ ಎಂದು ಅವರು ಉಲ್ಲೇಖಿಸಿದರು.
ರೈಲ್ವೆ ಬೆಳವಣಿಗೆ ಮತ್ತು ಸಂಪರ್ಕ ಉತ್ತೇಜನ
ಈ ಪರಿವರ್ತನಾತ್ಮಕ ರೈಲ್ವೆ ಉಪಕ್ರಮಗಳು ಪ್ರಾದೇಶಿಕ ಸಂಪರ್ಕವನ್ನು ಬಲಪಡಿಸುತ್ತದೆ, ಆರ್ಥಿಕ ಬೆಳವಣಿಗೆಯನ್ನು ಬೆಂಬಲಿಸುತ್ತದೆ ಮತ್ತು ಒಡಿಶಾವನ್ನು ರಾಷ್ಟ್ರೀಯ ಸರಕು ಮತ್ತು ಪ್ರಯಾಣಿಕರ ಜಾಲಗಳೊಂದಿಗೆ ಹೆಚ್ಚು ನಿಕಟವಾಗಿ ಸಂಯೋಜಿಸುತ್ತದೆ ಎಂದು ಶ್ರೀ ವೈಷ್ಣವ್ ತಮ್ಮ ಮಾತು ಪೂರ್ಣಗೊಳಿಸಿದರು. ಸದ್ಯ ನಡೆಯುತ್ತಿರುವ ಹೂಡಿಕೆಗಳು ಮತ್ತು ನೀತಿ ಒತ್ತಡವು ಒಡಿಶಾವನ್ನು ಭಾರತದ ವಿಸ್ತರಿಸುತ್ತಿರುವ ರೈಲ್ವೆ ಮೂಲಸೌಕರ್ಯದ ಪ್ರಮುಖ ಫಲಾನುಭವಿಯಾಗಿ ಇರಿಸಲು ಸಜ್ಜಾಗಿದೆ.
*****
(ಪ್ರಕಟಣೆ ಐ.ಡಿ.: 2253601)
ವಿಸಿಟರ್ ಕೌಂಟರ್ : 11