ಸಿಬ್ಬಂದಿ, ಸಾರ್ವಜನಿಕ ಅಹವಾಲು ಮತ್ತು ಪಿಂಚಣಿ ಸಚಿವಾಲಯ
ಭವಿಷ್ಯಕ್ಕೆ ಸಿದ್ಧ ನಾಗರಿಕ ಸೇವೆಗಳಿಗೆ ನಿರಂತರ ಕಲಿಕೆ ಮತ್ತು ದಕ್ಷತೆ ಆಧರಿಸಿದ ಆಡಳಿತ ಅಗತ್ಯ : ಕರ್ಮಯೋಗಿ ಸಾಧನಾ ಸಪ್ತಾಹ ಉದ್ಘಾಟನಾ ಸಮಾರಂಭದಲ್ಲಿ ಡಾ. ಪಿ. ಕೆ. ಮಿಶ್ರಾ ಅಭಿಮತ
ನಾಗರಿಕ-ಸ್ನೇಹಿ ಆಡಳಿತಕ್ಕಾಗಿ ಕರ್ಮಯೋಗಿ ಸಾಧನಾ ಸಪ್ತಾಹದೊಂದಿಗೆ ವಿಶ್ವದ ಅತಿದೊಡ್ಡ ಸಾಮರ್ಥ್ಯ ನಿರ್ಮಾಣ ಕಾರ್ಯಕ್ರಮ ವಿಸ್ತರಿಸಿದ ಭಾರತ
ಕರ್ಮಯೋಗಿ ಸಾಧನಾ ಸಪ್ತಾಹವು ಏಕೀಕೃತ ಸಾಮರ್ಥ್ಯ ನಿರ್ಮಾಣ ಚೌಕಟ್ಟಿಗೆ ಸಚಿವಾಲಯಗಳು, ರಾಜ್ಯಗಳು ಮತ್ತು ತರಬೇತಿ ಸಂಸ್ಥೆಗಳನ್ನು ಒಗ್ಗೂಡಿಸಿದೆ
ಪ್ರಕಟಣಾ ದಿನಾಂಕ:
02 APR 2026 3:43PM by PIB Bengaluru
ಭಾರತ ಸರ್ಕಾರವು ಇಂದು ಮಿಷನ್ ಕರ್ಮಯೋಗಿ ಅಡಿಯಲ್ಲಿ ರಾಷ್ಟ್ರೀಯ ಕಲಿಕಾ ಉಪಕ್ರಮವಾದ ಕರ್ಮಯೋಗಿ ಸಾಧನಾ ಸಪ್ತಾಹವನ್ನು ಆರಂಭಿಸಿದೆ. ಇದು ದೇಶಾದ್ಯಂತ ಸಾರ್ವಜನಿಕ ಸೇವಕರ ಸಾಮರ್ಥ್ಯಗಳು, ಬದ್ಧತೆ ಮತ್ತು ನಾಗರಿಕ-ಕೇಂದ್ರಿತ ದೂರದೃಷ್ಟಿಯ ಬಲವರ್ಧನೆಗೊಳಿಸುವ ಗುರಿಯನ್ನು ಹೊಂದಿದೆ. ಪ್ರಧಾನಿ ತಮ್ಮ ಸಂದೇಶದಲ್ಲಿ ತಮ್ಮ ಶುಭಾಶಯಗಳನ್ನು ತಿಳಿಸಿದರು ಮತ್ತು ವೇಗವಾಗಿ ಬದಲಾಗುತ್ತಿರುವ ಜಗತ್ತಿನಲ್ಲಿ ಆಡಳಿತವು "ನಾಗರಿಕ ದೇವೋ ಭವ" ಎಂಬ ಮನೋಭಾವದಿಂದ ಮುನ್ನಡೆಯುತ್ತಾ, ವಿಕಸನಗೊಳ್ಳುತ್ತಿರುವ ಅಗತ್ಯಗಳಿಗೆ ಹೊಂದಿಕೆಯಾಗಬೇಕು ಎಂದು ಒತ್ತಿ ಹೇಳಿದರು. ಭಾರತವು 2047ರ ವಿಕಸಿತ ಭಾರತ ಗುರಿಯತ್ತ ಸಾಗುತ್ತಿರುವಾಗ ನಿರಂತರ ಕಲಿಕೆ, ನಿರ್ಧಾರ ತೆಗೆದುಕೊಳ್ಳುವಲ್ಲಿ ತಂತ್ರಜ್ಞಾನ ಮತ್ತು ದತ್ತಾಂಶದ ಹೆಚ್ಚಿನ ಬಳಕೆ ಮತ್ತು ಕರ್ತವ್ಯ ಆಧಾರಿತ ಸಾರ್ವಜನಿಕ ಸೇವೆಯತ್ತ ಬದಲಾವಣೆಗೆ ಅವರು ಕರೆ ನೀಡಿದರು.
ಮಿಷನ್ ಕರ್ಮಯೋಗಿಯ ಐದು ವರ್ಷ ಪೂರ್ಣಗೊಳಿಸಿರುವ ಅಂಗವಾಗಿ 2026ರ ಏಪ್ರಿಲ್ 2 ರಿಂದ ಏಪ್ರಿಲ್ 8 ರವರೆಗೆ ಆಯೋಜಿಸಲಾಗಿರುವ ಕರ್ಮಯೋಗಿ ಸಾಧನಾ ಸಪ್ತಾಹವನ್ನು ನವದೆಹಲಿಯ ಡಾ. ಅಂಬೇಡ್ಕರ್ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ಉದ್ಘಾಟಿಸಲಾಯಿತು, ಇದು ರಾಷ್ಟ್ರವ್ಯಾಪಿ ಸಾಮರ್ಥ್ಯವರ್ಧನೆ ಪ್ರಯತ್ನವಾಗಿ ಕಲ್ಪಿಸಲಾಗಿರುವ ಈ ಉಪಕ್ರಮವು ಸಚಿವಾಲಯಗಳು, ರಾಜ್ಯಗಳು ಮತ್ತು ನಾಗರಿಕ ಸೇವೆಗಳ ತರಬೇತಿ ಸಂಸ್ಥೆಗಳನ್ನು ಹಂಚಿಕೆಯ ಕಲಿಕೆಯ ಚೌಕಟ್ಟಿನಡಿಯಲ್ಲಿ ಒಗ್ಗೂಡಿಸುತ್ತದೆ. ಈ ಕಾರ್ಯಕ್ರಮವು ತಂತ್ರಜ್ಞಾನ, ಸಂಪ್ರದಾಯ ಮತ್ತು ಸ್ಪಷ್ಟ ಫಲಿತಾಂಶಗಳು ಎಂಬ ಮೂರು ಸ್ತಂಭಗಳ ಸುತ್ತ ರಚನೆಯಾಗಿದೆ ಮತ್ತು ಭವಿಷ್ಯಕ್ಕೆ ಸಿದ್ಧವಾಗಿರುವ ಆಡಳಿತ ಪರಿಸರ ವ್ಯವಸ್ಥೆಯನ್ನು ಬಲಪಡಿಸಲು ಕಾರ್ಯಾಗಾರಗಳು, ಮಾಸ್ಟರ್ ಕ್ಲಾಸ್ಗಳು ಮತ್ತು ಸಾಂಸ್ಥಿಕ ಚರ್ಚೆಗಳಂತಹ ಕೇಂದ್ರೀಕೃತ ಒಳಗೊಳ್ಳುವಿಕೆ ಸೇರಿದೆ.
ಪ್ರಧಾನಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಡಾ. ಪಿ. ಕೆ. ಮಿಶ್ರಾ ಮಾತನಾಡಿ, ಸಾಧನಾ ಸಪ್ತಾಹವು ಸಮರ್ಥ, ನಿಷ್ಠ ಮತ್ತು ಜನಸ್ನೇಹಿ ನಾಗರಿಕ ಸೇವೆಯತ್ತ ಬದಲಾವಣೆಯನ್ನು ಬಲಪಡಿಸುತ್ತದೆ ಎಂದು ಹೇಳಿದರು. ಸೀಮಿತ, ನಿಯಮ ಆಧಾರಿತ ತರಬೇತಿಯಿಂದ ನಿರಂತರ, ಯಾವುದೇ ಸಮಯದಲ್ಲಿ-ಎಲ್ಲಿಯಾದರೂ ಕಲಿಕೆಯಿಂದ ಸಾಮರ್ಥ್ಯ ವೃದ್ಧಿಯಾಗಲಿದೆ. ಇದನ್ನು ಐಜಿಒಟಿಯಂತಹ ವೇದಿಕೆಗಳಿಂದ ಸಕ್ರಿಯಗೊಳಿಸಲಾಗಿದೆ ಎಂದು ಅವರು ಉಲ್ಲೇಖಿಸಿದರು. ನಿಯಮ ಆಧಾರಿತದಿಂದ ಜವಾಬ್ದಾರಿ ಆಧಾರಿತ ಆಡಳಿತಕ್ಕೆ ಪರಿವರ್ತನೆ ಅಗತ್ಯತೆಯನ್ನು ಪ್ರತಿಪಾದಿಸಿದ ಅವರು, ಅಲ್ಲಿ ಸಾಮರ್ಥ್ಯಗಳು, ನಡವಳಿಕೆ ಮತ್ತು ಸೇವಾ ದೂರದೃಷ್ಟಿಯು ಪ್ರಮುಖ ಕೇಂದ್ರ ಬಿಂದುವಾಗಿದೆ ಎಂದರು. ದೇಶಾದ್ಯಂತ ತರಬೇತಿ ಸಂಸ್ಥೆಗಳ ಏಕೀಕರಣವನ್ನು ಉಲ್ಲೇಖಿಸುತ್ತಾ, ಸಾಮರ್ಥ್ಯಸೃಷ್ಟಿ ಆಯೋಗವು ಪೂರಕ ವ್ಯವಸ್ಥೆಗೆ ಸುಸಂಬದ್ಧತೆ ಮತ್ತು ಪ್ರಮಾಣವನ್ನು ತಂದಿದೆ ಎಂದು ಅವರು ಹೇಳಿದರು. ತಾಂತ್ರಿಕ ಅಡಚಣೆ, ಹವಾಮಾನ ಬದಲಾವಣೆ, ನಗರೀಕರಣ ಮತ್ತು ಜಾಗತಿಕ ಅನಿಶ್ಚಿತತೆಗಳಿಗೆ ಪ್ರತಿಕ್ರಿಯಿಸಲು ಇಂದು ಆಡಳಿತಕ್ಕೆ ಹೊಸ ಸಾಮರ್ಥ್ಯಗಳು ಬೇಕಾಗುತ್ತವೆ ಎಂದು ಅವರು ಒತ್ತಿ ಹೇಳಿದರು, ನಿರಂತರ ಕಲಿಕೆಯು ನಾವೀನ್ಯತೆ, ಹೊಂದಿಕೊಳ್ಳುವಿಕೆ ಮತ್ತು ವೃತ್ತಿಪರತೆಯನ್ನು ಬಲಪಡಿಸುತ್ತದೆ, ಆದರೆ ಮನಸ್ಥಿತಿ ಮತ್ತು ಸಹಾನುಭೂತಿ ಪರಿಣಾಮಕಾರಿ ಸಾರ್ವಜನಿಕ ಸೇವೆಗೆ ನಿರ್ಣಾಯಕವಾಗಿದೆ ಎಂದು ಹೇಳಿದರು.
ಸಾಮರ್ಥ್ಯ ಸೃಷ್ಟಿ ಆಯೋಗದ ಅಧ್ಯಕ್ಷರಾದ ಶ್ರೀಮತಿ ಎಸ್. ರಾಧಾ ಚೌಹಾಣ್, ಈ ಸಂದರ್ಭವು ಮಿಷನ್ ಕರ್ಮಯೋಗಿಯ ಪ್ರಯಾಣದಲ್ಲಿ ಒಂದು ಮೈಲಿಗಲ್ಲು ಮತ್ತು ಪ್ರತಿಬಿಂಬದ ಕ್ಷಣವಾಗಿದೆ ಎಂದು ಹೇಳಿದರು. ಸಾರ್ವಜನಿಕ ಸೇವೆಯಲ್ಲಿ ಜ್ಞಾನ, ಕೌಶಲ್ಯ ಮತ್ತು ಮೌಲ್ಯಗಳನ್ನು ಸಂಯೋಜಿಸುವ ಮೂಲಕ ಸಾಮರ್ಥ್ಯ ವೃದ್ಧಿಗೆ ಮಿಷನ್ ಒಂದು ವಿಶಿಷ್ಟ ಮಾದರಿಯಾಗಿ ಹೊರಹೊಮ್ಮಿದೆ ಎಂದು ಅವರು ಹೇಳಿದರು. ಕರ್ಮಯೋಗಿಯ ಪರಿಕಲ್ಪನೆಯು ಬುದ್ಧಿವಂತಿಕೆಯನ್ನು ಕ್ರಿಯೆಯೊಂದಿಗೆ ಸಂಯೋಜಿಸುವ ಮತ್ತು ಸಹಾನುಭೂತಿ ಮತ್ತು ಸಂದರ್ಭೋಚಿತ ತಿಳಿವಳಿಕೆಯೊಂದಿಗೆ ಆಡಳಿತವನ್ನು ನೀಡುವ ಸಾರ್ವಜನಿಕ ಸೇವಕನನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ವಿವರಿಸಿದರು. ಸಾಧನಾ ಸಪ್ತಾಹವು ಅಧಿಕಾರಿಗಳಿಗೆ ತಮ್ಮ ಸೇವೆಯ ಮೂಲ ಉದ್ದೇಶದೊಂದಿಗೆ ಮರುಸಂಪರ್ಕಿಸಲು ಮತ್ತು ತಂತ್ರಜ್ಞಾನ, ಸಂಪ್ರದಾಯ ಮತ್ತು ಸ್ಪಷ್ಟ ಫಲಿತಾಂಶಗಳ ವಿಷಯಗಳಿಂದ ರೂಪಿಸಲ್ಪಟ್ಟ ನಾಗರಿಕ ಸ್ನೇಹಿ ಆಡಳಿತಕ್ಕೆ ತಮ್ಮ ಬದ್ಧತೆಯನ್ನು ಸಾರಲು ಅವಕಾಶವನ್ನು ಒದಗಿಸುತ್ತದೆ ಎಂದು ಅವರು ಹೇಳಿದರು.
ಸಿಬ್ಬಂದಿ ಮತ್ತು ತರಬೇತಿ ಇಲಾಖೆಯ ಕಾರ್ಯದರ್ಶಿ ಶ್ರೀಮತಿ ರಚನಾ ಶಾ, ಮಿಷನ್ ಕರ್ಮಯೋಗಿ ಕಳೆದ ಐದು ವರ್ಷಗಳಲ್ಲಿ ಸಾಮರ್ಥ್ಯ ವೃದ್ಧಿಯಲ್ಲಿ ಮೂಲಭೂತ ಪರಿವರ್ತನೆಯನ್ನು ತಂದಿದೆ ಎಂದು ಹೇಳಿದರು. ಹಂತವಾರು ತರಬೇತಿಯಿಂದ ನಿರಂತರ ಹುದ್ದೆ ಆಧಾರಿತ ಸಾಮರ್ಥ್ಯ ಚೌಕಟ್ಟಿನತ್ತ ಬದಲಾವಣೆಯನ್ನು ಅವರು ಪ್ರಮುಖವಾಗಿ ಪ್ರಸ್ತಾಪಿಸಿದರು, ಅದು ಈಗ ಪ್ರಮಾಣದಲ್ಲಿ ಮುಂಚೂಣಿಯ ಕೆಲಸಗಾರರನ್ನು ಒಳಗೊಂಡಿದೆ. 1.5 ಕೋಟಿಗೂ ಅಧಿಕ ಕಲಿಯುವವರು iGOT ವೇದಿಕೆಯಲ್ಲಿ ನೋಂದಾಯಿಸಿಕೊಂಡಿದ್ದಾರೆ, 8 ಕೋಟಿಗೂ ಅಧಿಕ ಕೋರ್ಸ್ ಪೂರ್ಣಗೊಳಿಸುವಿಕೆಗಳು ಮತ್ತು 4,600 ಕ್ಕೂ ಅಧಿಕ ಕೋರ್ಸ್ಗಳು ಬಹು ಭಾಷೆಗಳಲ್ಲಿ ಲಭ್ಯವಿದೆ ಎಂದು ಅವರು ಮಾಹಿತಿ ನೀಡಿದರು. 13೦ಕ್ಕೂ ಅಧಿಕ ಸಾಮರ್ಥ್ಯ ವೃದ್ಧಿ ಯೋಜನೆಗಳನ್ನು ಅಭಿವೃದ್ಧಿಪಡಿಸಲಾಗಿದೆ ಮತ್ತು ಕಲಿಕೆಯನ್ನು ಕಾರ್ಯಕ್ಷಮತೆ ಮೌಲ್ಯಮಾಪನ ವ್ಯವಸ್ಥೆಗಳೊಂದಿಗೆ ಸಂಯೋಜಿಸಲಾಗಿದೆ ಎಂದು ಅವರು ಹೇಳಿದರು. ವೈಯಕ್ತಿಕ ಕಲಿಕೆಯನ್ನು ಉತ್ತೇಜಿಸಲು ಮತ್ತು ತರಬೇತಿ ವಿತರಣೆಯನ್ನು ಹೆಚ್ಚಿಸಲು ಕೃತಕ ಬುದ್ಧಿಮತ್ತೆ ಆಧರಿಸಿದ ಸಾಧನಗಳ ಬಳಕೆಯು ಹೆಚ್ಚುತ್ತಿದ್ದು, ಅದು ಆಡಳಿತದಲ್ಲಿ ನಿರಂತರ ಕಲಿಕೆಯ ನಿರಂತರ ಸಂಸ್ಕೃತಿಗೆ ಕೊಡುಗೆ ನೀಡುತ್ತದೆ ಎಂದು ಹೇಳಿದರು.
ಕರ್ಮಯೋಗಿ ಭಾರತದ ಅಧ್ಯಕ್ಷರಾದ ಶ್ರೀ ಸುಬ್ರಮಣಿಯನ್ ರಾಮದೊರೈ ಅವರು, ಸಾಧನಾ ಸಪ್ತಾಹವು ನಾಗರಿಕ ಸೇವೆಗಳಲ್ಲಿ ನಿರಂತರ ಕಲಿಕೆ ಮತ್ತು ಸ್ವಯಂ ಸುಧಾರಣೆಯಡೆಗೆ ಆಳವಾದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು. ಇಂದಿನ ಆಡಳಿತವು ತ್ವರಿತ ತಾಂತ್ರಿಕ ಪರಿವರ್ತನೆ, ನಾಗರಿಕ ಜ್ಞಾನ ಮತ್ತು ನಾಗರಿಕ ಸ್ನೇಹಿ ಫಲಿತಾಂಶಗಳ ಮೇಲೆ ಬಲವಾದ ಗಮನದಿಂದ ರೂಪುಗೊಂಡಿದೆ ಎಂದು ಅವರು ಪ್ರಸ್ತಾಪಿಸಿದರು. ಸಾಮರ್ಥ್ಯ ನಿರ್ಮಾಣವು ನಿರಂತರ, ಸಂದರ್ಭೋಚಿತ ಮತ್ತು ನೈಜ-ಪ್ರಪಂಚದ ಆಡಳಿತದ ಅಗತ್ಯಗಳಿಗೆ ಅನುಗುಣವಾಗಿರಬೇಕು ಎಂದು ಅವರು ಹೇಳಿದರು. ಐಜಿಒಟಿ ವೇದಿಕೆಯಲ್ಲಿ ಪಾಲ್ಗೊಳ್ಳುತ್ತಿರುವವರ ಪ್ರಮಾಣವನ್ನು ಉಲ್ಲೇಖಿಸಿದ ಅವರು ಕೃತಕ ಬುದ್ಧಿಮತ್ತೆ ಮತ್ತು ಉದಯೋನ್ಮುಖ ತಂತ್ರಜ್ಞಾನಗಳಲ್ಲಿ ಸಾಮರ್ಥ್ಯಗಳನ್ನು ಸೃಷ್ಟಿಸಲು ಅಧಿಕಾರಿಗಳನ್ನು ಉತ್ತೇಜಿಸಿದರು. ಮಿಷನ್ ಕರ್ಮಯೋಗಿಯ ಅನುಷ್ಠಾನ ಅಂಗವಾಗಿ ಕರ್ಮಯೋಗಿ ಭಾರತ್, ಸರ್ಕಾರದಾದ್ಯಂತ ನಿರಂತರ, ಸಾಮರ್ಥ್ಯ-ಆಧಾರಿತ ಕಲಿಕೆಯನ್ನು ಸಕ್ರಿಯಗೊಳಿಸುವ ಸ್ಕೇಲೆಬಲ್ ಡಿಜಿಟಲ್ ಪರಿಸರ ವ್ಯವಸ್ಥೆಯಾಗಿ ಐಜಿಒಟಿ ವೇದಿಕೆಯನ್ನು ನಡೆಸುತ್ತಿದೆ ಮತ್ತು ಆಡಳಿತದ ಫಲಿತಾಂಶಗಳಲ್ಲಿ ಕಲಿಕೆಯನ್ನು ಅಳೆಯಬಹುದಾದ ಸುಧಾರಣೆಗಳಾಗಿ ಭಾಷಾಂತರಿಸಲು ಈ ಉಪಕ್ರಮವನ್ನು ವಿನ್ಯಾಸಗೊಳಿಸಲಾಗಿದೆ ಎಂದು ಅವರು ಹೇಳಿದರು.
ಸಾಮರ್ಥ್ಯ ನಿರ್ಮಾಣ ಆಯೋಗದ ಸದಸ್ಯರಾದ (ಆಡಳಿತ) ಡಾ. ಅಲ್ಕಾ ಮಿತ್ತಲ್, ಗ್ರಾಮ ಪಂಚಾಯತ್ಗಳು, ನಗರ ಸ್ಥಳೀಯ ಸಂಸ್ಥೆಗಳು ಮತ್ತು ನಾಗರಿಕ ಕೇಂದ್ರೀತ ಸೇವೆಗಳು ಸೇರಿದಂತೆ ವಲಯಗಳಾದ್ಯಂತ ಮುಂಚೂಣಿಯ ಕಾರ್ಯಕರ್ತರನ್ನು ತಲುಪಲು ಸಾಮರ್ಥ್ಯ ವೃದ್ಧಿ ಪ್ರಯತ್ನಗಳನ್ನು ವಿಸ್ತರಿಸಲಾಗುತ್ತಿದೆ ಎಂದು ಹೇಳಿದರು. ಈ ಕಾರ್ಯಕಾರಿಣಿಗಳು ಸರ್ಕಾರ ಮತ್ತು ನಾಗರಿಕರ ನಡುವಿನ ಪ್ರಾಥಮಿಕ ಸಂಪರ್ಕ ಸಾಧನವನ್ನು ರೂಪಿಸುತ್ತವೆ ಮತ್ತು ಕೇಂದ್ರೀಕೃತ ಸಾಮರ್ಥ್ಯ ವರ್ಧನೆಯ ಅಗತ್ಯವಿರುತ್ತದೆ ಎಂದು ಅವರು ಉಲ್ಲೇಖಿಸಿದರು. ಸಾರ್ವಜನಿಕ ವಲಯದ ಉದ್ಯಮಗಳಿಂದ ನಾಯಕತ್ವ, ಉತ್ತರಾಧಿಕಾರ ಯೋಜನೆ ಮತ್ತು ಪಾಲುದಾರರ ತೊಡಗಿಸಿಕೊಳ್ಳುವಿಕೆಯ ಕುರಿತು ಸೂಕ್ತ ಕೋರ್ಸ್ ಗಳಲ್ಲಿ ಆರು ಲಕ್ಷಕ್ಕೂ ಅಧಿಕ ಸಿಬ್ಬಂದಿಯನ್ನು iGOT ವೇದಿಕೆಯಲ್ಲಿ ಸೇರಿಸಿಕೊಳ್ಳಲಾಗಿದೆ, ಎಲ್ಲಾ ಹಂತಗಳಲ್ಲಿ ಸಿಬ್ಬಂದಿಯನ್ನು ಸಂಬಂಧಿತ ಕೌಶಲ್ಯಗಳೊಂದಿಗೆ ಸಜ್ಜುಗೊಳಿಸುವ ಮತ್ತು ಸೇವಾ ವಿತರಣೆಯನ್ನು ಬಲಪಡಿಸುವ ಗುರಿಯನ್ನು ಹೊಂದಿರುವ ಮುನ್ಸೂಚಕ ನಿರ್ವಹಣೆ ಸೇರಿದಂತೆ AI ಅಪ್ಲಿಕೇಶನ್ಗಳ ಕುರಿತು ಹೊಸ ಮಾದರಿಗಳನ್ನು ಅವರು ಉಲ್ಲೇಖಿಸಿದರು.
ಸಾಮರ್ಥ್ಯ ಸೃಷ್ಟಿ ಆಯೋಗದ ಸದಸ್ಯ (ಮಾನವ ಸಂಪನ್ಮೂಲ) ಡಾ. ಆರ್. ಬಾಲಸುಬ್ರಮಣ್ಯಂ, ಮಿಷನ್ ಕರ್ಮಯೋಗಿ ಸಮಗ್ರ ಸಾಮರ್ಥ್ಯ ಸೃಷ್ಟಿ ಪೂರಕ ವ್ಯವಸ್ಥೆಯಾಗಿ ವಿಕಸನಗೊಂಡಿದೆ ಮತ್ತು ಜಾಗತಿಕವಾಗಿ ಅತಿದೊಡ್ಡ ಬದಲಾವಣೆ ನಿರ್ವಹಣಾ ಉಪಕ್ರಮಗಳಲ್ಲಿ ಒಂದನ್ನು ಪ್ರತಿನಿಧಿಸುತ್ತದೆ ಎಂದು ಹೇಳಿದರು. ಸಾಮರ್ಥ್ಯ ಚೌಕಟ್ಟುಗಳು ಸರ್ಕಾರದಾದ್ಯಂತ ಹಂಚಿಕೆಯ ಭಾಷೆಯನ್ನು ಸೃಷ್ಟಿಸಿವೆ ಮತ್ತು ಕಾರ್ಯಕ್ರಮಗಳು ಪಂಚಾಯತ್ಗಳು ಮತ್ತು ನಗರ ಸ್ಥಳೀಯ ಸಂಸ್ಥೆಗಳು ಸೇರಿದಂತೆ ತಳಮಟ್ಟವನ್ನು ತಲುಪಿವೆ ಎಂದು ಅವರು ಹೇಳಿದರು. ಕೃತಕ ಬುದ್ದಿಮತ್ತೆಯ ಏಕೀಕರಣವು ಸಾಮರ್ಥ್ಯ ನಿರ್ಮಾಣವನ್ನು ವೇಗಗೊಳಿಸುತ್ತಿದೆ ಮತ್ತು ವೇಗವಾಗಿ ಮತ್ತು ಹೆಚ್ಚು ಪರಿಣಾಮಕಾರಿ ಯೋಜನೆ ಮತ್ತು ಕಲಿಕೆಯನ್ನು ಸಕ್ರಿಯಗೊಳಿಸುತ್ತಿದೆ, ನಾಗರಿಕರಿಗೆ ಸೇವಾ ವಿತರಣೆಯನ್ನು ಸುಧಾರಿಸಲು ಎಲ್ಲಾ ಮಧ್ಯಸ್ಥಿಕೆಗಳನ್ನು ಸಂಯೋಜಿಸಲಾಗುತ್ತಿದೆ ಎಂದರು.
ಉದ್ಘಾಟನಾ ಗೋಷ್ಠಿಯಲ್ಲಿ ಸಾಮರ್ಥ್ಯ ವೃದ್ಧಿಯನ್ನು ಬೃಹತ್ ಪ್ರಮಾಣದಲ್ಲಿ ಬಲಪಡಿಸಲು ಪ್ರಮುಖ ಉಪಕ್ರಮಗಳ ಗುಂಪನ್ನು ಆರಂಭಿಸಲಾಯಿತು. ರಾಷ್ಟ್ರ ನಿರ್ಮಾಣದ ನೀತಿಯನ್ನು ಬಲಪಡಿಸುವ ಮೂಲಕ ನಾಗರಿಕ ಸೇವಕರಲ್ಲಿ ನಿಸ್ವಾರ್ಥ ಸೇವೆ, ದಕ್ಷತೆ ಮತ್ತು ಪ್ರಾಮಾಣಿಕತೆಯ ಮನೋಭಾವವನ್ನು ಪ್ರೇರೇಪಿಸಲು ಸಾಮರ್ಥ್ಯ ಸೃಷ್ಟಿ ಆಯೋಗವು ನಿರ್ಮಿಸಿದ ಕರ್ಮಯೋಗಿ ಗೀತೆಯನ್ನು ಅನಾವರಣಗೊಳಿಸಲಾಯಿತು.
ಕರ್ಮಯೋಗಿ ಕ್ಷಮಾತಾ ಕನೆಕ್ಟ್ ಅನ್ನು ವಿವಿಧ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿರುವ ಕಾರ್ಯಕರ್ತರನ್ನು ಸಬಲೀಕರಣಗೊಳಿಸುವ ಒಂದು ಅಡಿಪಾಯ ಉಪಕ್ರಮವಾಗಿ ಆರಂಭಿಸಲಾಯಿತು. iGOT ಕರ್ಮಯೋಗಿ ವೇದಿಕೆಯ ಮೂಲಕ ಬಹು ಪ್ರಾದೇಶಿಕ ಭಾಷೆಗಳಲ್ಲಿ ವಿತರಿಸಲಾದ ಇದು ಅಧಿಕಾರಿಗಳಿಗೆ ರಾಷ್ಟ್ರೀಯ ಆದ್ಯತೆಗಳು, ತೊಡಗಿಸಿಕೊಳ್ಳುವ ಆಡಳಿತ, ಡಿಜಿಟಲ್ ಸುರಕ್ಷತೆ ಮತ್ತು ಉದಯೋನ್ಮುಖ ತಂತ್ರಜ್ಞಾನಗಳ ಬಗ್ಗೆ ಜ್ಞಾನವನ್ನು ನೀಡುತ್ತದೆ. ಅವರ ಪಾತ್ರಗಳನ್ನು ವಿಕಸಿತ ಭಾರತ್ 2047 ರ ದೂರದೃಷ್ಟಿಯೊಂದಿಗೆ ಸಂಯೋಜಿಸಲಾಗುತ್ತದೆ.
ಕರ್ಮಯೋಗಿ ಕರ್ತವ್ಯ ಕಾರ್ಯಕ್ರಮವು ಸೇವಾ ಭಾವವನ್ನು ಉತ್ತೇಜಿಸುವ ಮೂಲಕ ಸಾರ್ವಜನಿಕ ಸೇವಾ ನೀತಿಯನ್ನು ಪರಿವರ್ತಿಸುವ ಗುರಿಯನ್ನು ಹೊಂದಿದೆ. ವಿಶೇಷವಾಗಿ ತಳಮಟ್ಟದಲ್ಲಿ ಸುಮಾರು 1.3 ಕೋಟಿ ಅಧಿಕಾರಿಗಳನ್ನು ಗುರಿಯಾಗಿಟ್ಟುಕೊಂಡು, ಇದು ಡಿಜಿಟಲ್ ಕಲಿಕೆ, ವೈಯಕ್ತಿಕ ತರಬೇತಿ ಮತ್ತು ಗುಂಪು ಚರ್ಚೆಗಳ ಸಂಯೋಜಿತ ವಿಧಾನವನ್ನು ಅಳವಡಿಸಿಕೊಂಡಿದ್ದು, ಇದು ಪ್ರತಿ ಸ್ಪಂದನೆ ಮತ್ತು ಹೊಣೆಗಾರಿಕೆಯನ್ನು ಬೆಳೆಸುತ್ತದೆ.
ಕಲಿಕೆಯನ್ನು ನೈಜ-ಪ್ರಪಂಚದ ಅನ್ವಯದೊಂದಿಗೆ ಜೋಡಿಸಲು iGOT ಕರ್ಮಯೋಗಿಯಲ್ಲಿ ನವೀನ ಟ್ರಸ್ಟ್-ಆಧಾರಿತ ಪೀರ್ ಅಸೆಸ್ಮೆಂಟ್ ಫ್ರೇಮ್ವರ್ಕ್ ಅನ್ನು ಪರಿಚಯಿಸಲಾಯಿತು. ಇದು ಪೀರ್ ಮತ್ತು ಮೇಲ್ವಿಚಾರಣಾ ವಿಮರ್ಶೆಯ ಮೂಲಕ ಕೌಶಲ್ಯಗಳ ಮೌಲ್ಯೀಕರಣವನ್ನು ಸಕ್ರಿಯಗೊಳಿಸುತ್ತದೆ, ಫಲಿತಾಂಶ ಆಧರಿತ ಸಾಮರ್ಥ್ಯ ಸೃಷ್ಟಿಯನ್ನು ಉತ್ತೇಜಿಸುತ್ತದೆ.
ಅಮೃತ್ ಜ್ಞಾನ್ ಕೋಶ್ (AGK) ಗಾಗಿ AI- ಆಧರಿಸಿದ ಕೇಸ್ ಸ್ಟಡಿ ಸೂಟ್ ಅನ್ನು ಸಿವಿಕ್ ಇನ್ನೋವೇಶನ್ ಫೌಂಡೇಶನ್ (Civis) ನೊಂದಿಗೆ ಅಭಿವೃದ್ಧಿಪಡಿಸಲಾಗಿದೆ, ಇದು ಪ್ರಕರಣ ಆಧಾರಿತ ಕಲಿಕೆ ಮತ್ತು ಪಠ್ಯಕ್ರಮ ಏಕೀಕರಣವನ್ನು ಬೆಂಬಲಿಸಲು ಕೇಸ್ ಸ್ಟಡಿ ವಿಶ್ಲೇಷಕ ಮತ್ತು ಕೇಸ್ಕನೆಕ್ಟ್ನಂತಹ ಸಾಧನಗಳನ್ನು ಒಳಗೊಂಡಿದೆ. ಈ ಉಪಕ್ರಮಗಳು ಒಟ್ಟಾರೆ ಕೊನೆಯ ಹಂತದ ಸೇವಾ ವಿತರಣೆಯನ್ನು ಬಲಪಡಿಸುವುದು, ಹೊಣೆಗಾರಿಕೆಯನ್ನು ಸುಧಾರಿಸುವುದು ಮತ್ತು ಆಡಳಿತದ ಫಲಿತಾಂಶಗಳೊಂದಿಗೆ ಸಾಮರ್ಥ್ಯ ಸೃಷ್ಟಿ ಜೋಡಿಸುವುದು ಗುರಿಯನ್ನು ಹೊಂದಿವೆ.
ಐದು ವರ್ಷಗಳನ್ನು ಪೂರ್ಣಗೊಳಿಸುವ ಮಿಷನ್ ಕರ್ಮಯೋಗಿ, ನಿಯಮ-ಆಧಾರಿತ ವಿಧಾನಗಳಿಂದ ಜ್ಞಾನ, ಕೌಶಲ್ಯ, ನಡವಳಿಕೆ ಮತ್ತು ಮನೋಭಾವವನ್ನು ಸಂಯೋಜಿಸುವ ಸಾಮರ್ಥ್ಯ-ಆಧಾರಿತ ಚೌಕಟ್ಟಿಗೆ ರಚನಾತ್ಮಕ ಬದಲಾವಣೆಯನ್ನು ಗುರುತಿಸುತ್ತದೆ. ಡಿಜಿಟಲ್ ಪ್ಲಾಟ್ಫಾರ್ಮ್ಗಳ ಮೂಲಕ ಕಲಿಕೆಗೆ ದೊಡ್ಡ ಪ್ರಮಾಣದ ಲಭ್ಯತೆವನ್ನು ಸಕ್ರಿಯಗೊಳಿಸುವ ಮೂಲಕ ಮತ್ತು ಕಾರ್ಯಕ್ಷಮತೆ ಮತ್ತು ಆಡಳಿತದ ಫಲಿತಾಂಶಗಳೊಂದಿಗೆ ತರಬೇತಿಯನ್ನು ಜೋಡಿಸುವ ಮೂಲಕ ಮಿಷನ್ ಸರ್ಕಾರದಾದ್ಯಂತ ನಿರಂತರ ಸಾಮರ್ಥ್ಯ ಸೃಷ್ಟಿಗೆ ಬಲವಾದ ಅಡಿಪಾಯವನ್ನು ಹಾಕಿದೆ. ಸಾಧನಾ ಸಪ್ತಾಹವು ಈ ಅಡಿಪಾಯದ ಮೇಲೆ ನಿರ್ಮಿಸುತ್ತದೆ ಮತ್ತು ವಿಕಸಿತ ಭಾರತ 2047 ರ ದೂರದೃಷ್ಟಿಗೆ ಅನುಗುಣವಾಗಿ ಕೌಶಲ್ಯಪೂರ್ಣ, ಸ್ಪಂದಿಸುವ ಮತ್ತು ನಾಗರಿಕ ಸ್ನೇಹಿ ನಾಗರಿಕ ಸೇವೆಯ ಸೃಷ್ಟಿಯನ್ನು ಮತ್ತಷ್ಟು ವೇಗಗೊಳಿಸುವ ನಿರೀಕ್ಷೆಯಿದೆ.
ಉದ್ಘಾಟನಾ ಗೋಷ್ಠಿಯಲ್ಲಿ ಹಿರಿಯ ಅಧಿಕಾರಿಗಳು, ಸಚಿವಾಲಯಳು, ಇಲಾಖೆಗಳು, ತರಬೇತಿ ಸಂಸ್ಥೆಗಳು, ರಾಜ್ಯಗಳು ಮತ್ತು ದೇಶಾದ್ಯಂತದ ಇತರ ಪಾಲುದಾರರ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಸಾಮರ್ಥ್ಯ ಸೃಷ್ಟಿ ಆಯೋಗದ ಸದಸ್ಯರು ಮತ್ತು ಕರ್ಮಯೋಗಿ ಭಾರತ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಉಪಸ್ಥಿತರಿದ್ದರು.






*****
(ಪ್ರಕಟಣೆ ಐ.ಡಿ.: 2248474)
ವಿಸಿಟರ್ ಕೌಂಟರ್ : 17