ರಾಷ್ಟ್ರಪತಿಗಳ ಕಾರ್ಯಾಲಯ
ಮಹಾವೀರ ಜಯಂತಿ ಮುನ್ನಾದಿನದಂದು ಭಾರತದ ರಾಷ್ಟ್ರಪತಿ ಅವರಿಂದ ಶುಭ ಹಾರೈಕೆ
ಪ್ರಕಟಣಾ ದಿನಾಂಕ:
30 MAR 2026 5:21PM by PIB Bengaluru
ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಮಹಾವೀರ ಜಯಂತಿಯ ಮುನ್ನಾದಿನದಂದು ತಮ್ಮ ಸಂದೇಶದಲ್ಲಿ ಹೀಗೆ ಹೇಳಿದ್ದಾರೆ: -
“ಮಹಾವೀರ ಜಯಂತಿಯ ಶುಭ ಸಂದರ್ಭದಲ್ಲಿ, ದೇಶದ ನಾಗರಿಕರಿಗೆ, ವಿಶೇಷವಾಗಿ ಜೈನ ಸಹೋದರ ಸಹೋದರಿಯರಿಗೆ ನನ್ನ ಶುಭಾಶಯಗಳು.
ಭಗವಾನ್ ಮಹಾವೀರರ ಐದು ತತ್ವಗಳಾದ ಅಹಿಂಸೆ, ಸತ್ಯ, ಆಸ್ತೇಯ (ಕಳ್ಳತನ ಮಾಡದಿರುವುದು), ಬ್ರಹ್ಮಚರ್ಯ (ಸ್ವಯಂ ನಿಯಂತ್ರಣ) ಮತ್ತು ಅಪರಿಗ್ರಹ (ಯಾವುದರ ಸ್ವಾಧೀನ ಹೊಂದದೇ ಇರುವುದು), ಇವು ಜೀವನದಲ್ಲಿ ಸರಿಯಾದ ಹಾದಿಯಲ್ಲಿ ನಡೆಯಲು ನಮಗೆ ಸ್ಫೂರ್ತಿ ನೀಡಲಿವೆ. ಈ ತತ್ವಗಳನ್ನು ಅಳವಡಿಸಿಕೊಳ್ಳುವ ಮೂಲಕ, ನಾವು ನಮ್ಮ ಜೀವನವನ್ನು ಅರ್ಥಪೂರ್ಣಗೊಳಿಸಿಕೊಳ್ಳಬಹುದು ಮತ್ತು ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ತರಬಲ್ಲದಾಗಿದೆ. ಭಗವಾನ್ ಮಹಾವೀರರು ಸಮಾಜದಲ್ಲಿ ಪ್ರಚಲಿತದಲ್ಲಿರುವ ದುಷ್ಟತನದ ವಿರುದ್ಧ ಧ್ವನಿ ಎತ್ತಿದರು ಮತ್ತು ಉತ್ತಮ ಜೀವನಕ್ಕೆ ದಾರಿ ತೋರಿಸಿದರು. ಅವರ ಬೋಧನೆಗಳು ಸದಾ ಪ್ರಸ್ತುತವಾಗಿರಲಿವೆ.
ಈ ಶುಭ ಸಂದರ್ಭದಲ್ಲಿ, ಮಹಾವೀರರ ಸಂದೇಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮತ್ತು ರಾಷ್ಟ್ರದ ಪ್ರಗತಿಗಾಗಿ ನಿರಂತರವಾಗಿ ಶ್ರಮಿಸುವ ಪ್ರತಿಜ್ಞೆ ಮಾಡೋಣ.”
ರಾಷ್ಟ್ರಪತಿಗಳ ಸಂದೇಶ ನೋಡಲು ಇಲ್ಲಿ ಕ್ಲಿಕ್ ಮಾಡಿ
*****
(ಪ್ರಕಟಣೆ ಐ.ಡಿ.: 2247051)
ವಿಸಿಟರ್ ಕೌಂಟರ್ : 9