ಕೃಷಿ ಸಚಿವಾಲಯ
azadi ka amrit mahotsav

2024–25ನೇ ಹಣಕಾಸು ವರ್ಷಕ್ಕೆ ಅಗ್ರಿನೋವೇಟ್ ಇಂಡಿಯಾ ಲಿಮಿಟೆಡ್ ₹3.39 ಕೋಟಿ ಲಾಭಾಂಶವನ್ನು ಕೇಂದ್ರ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಪ್ರದಾನ

ಪ್ರಕಟಣಾ ದಿನಾಂಕ: 13 MAR 2026 5:25PM by PIB Bengaluru

ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಮತ್ತು ಗ್ರಾಮೀಣಾಭಿವೃದ್ಧಿ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಇಂದು ದೆಹಲಿಯಲ್ಲಿ ಅಗ್ರಿನೋವೇಟ್ ಇಂಡಿಯಾ ಲಿಮಿಟೆಡ್ ₹3,39,97,362 ಲಾಭಾಂಶವನ್ನು ಪ್ರದಾನ ಮಾಡಿದೆ. ಭಾರತ ಸರ್ಕಾರದ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ಕೃಷಿ ಸಂಶೋಧನೆ ಮತ್ತು ಶಿಕ್ಷಣ ಇಲಾಖೆ (DARE) ಅಡಿಯಲ್ಲಿ ನವರತ್ನ ಉದ್ಯಮವಾದ ಅಗ್ರಿನೋವೇಟ್ ಇಂಡಿಯಾ ಲಿಮಿಟೆಡ್, ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣಾ ಇಲಾಖೆಯ (DIPAM) ಮಾರ್ಗಸೂಚಿಗಳಿಗೆ ಅನುಗುಣವಾಗಿ ಈ ವಿತರಣೆಯನ್ನು ಮಾಡಿದೆ.

ಈ ಸಂದರ್ಭದಲ್ಲಿ, ಅಗ್ರಿನೋವೇಟ್ ಇಂಡಿಯಾ ಭಾರತೀಯ ಕೃಷಿ ಸಂಶೋಧನಾ ಮಂಡಳಿಯ (ICAR) ಸೃಜನಶೀಲ ಸಾಮರ್ಥ್ಯಗಳು ಮತ್ತು ರೈತರ ಪ್ರಾಯೋಗಿಕ ಅಗತ್ಯಗಳ ನಡುವೆ ಬಲವಾದ ಸೇತುವೆಯಾಗಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಕೇಂದ್ರ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಹೇಳಿದ್ದಾರೆ. ಕೃಷಿ ನಾವೀನ್ಯತೆಗಳನ್ನು ವರ್ಗಾಯಿಸುವಲ್ಲಿ ಮತ್ತು ತಾಂತ್ರಿಕ ಉದ್ಯಮಶೀಲತೆಯನ್ನು ಉತ್ತೇಜಿಸುವಲ್ಲಿ ಸಂಸ್ಥೆಯ ಕೊಡುಗೆ ಶ್ಲಾಘನೀಯ. ಈ ಉಪಕ್ರಮವು ಆತ್ಮನಿರ್ಭರ ಭಾರತದ ಕೃಷಿ ಗುರಿಗಳನ್ನು ಸಬಲೀಕರಣಗೊಳಿಸುತ್ತಿದೆ. ಈ ಲಾಭಾಂಶವು ಕಂಪನಿಯ ಆರ್ಥಿಕ ದೃಢತೆ, ಉತ್ತಮ ಆಡಳಿತ ಮತ್ತು ನಿರಂತರ ನಾವೀನ್ಯತೆಗೆ ಅದರ ಅಚಲ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಪ್ರವೀಣ್ ಮಲಿಕ್ ಹೇಳಿದರು.

ಕಾರ್ಯಕ್ರಮದಲ್ಲಿ ಅಗ್ರಿನ್ನೋವೇಟ್ ಇಂಡಿಯಾ ಲಿಮಿಟೆಡ್‌ನ ಅಧ್ಯಕ್ಷರು ಮತ್ತು ಭಾರತೀಯ ಕೃಷಿ ಸಂಶೋಧನಾ ಮಂಡಳಿಯ (ICAR) ಮಹಾನಿರ್ದೇಶಕ ಡಾ. ಎಂ.ಎಲ್. ಜಾಟ್ ಹಾಗೂ ಅನಧಿಕೃತ ನಿರ್ದೇಶಕ ಶ್ರೀ ಆನಂದ್ ಮೋಹನ್ ಅವಸ್ಥಿ ಭಾಗವಹಿಸಿದ್ದರು.

2011ರಲ್ಲಿ ಸ್ಥಾಪನೆಯಾದ ಅಗ್ರಿನ್ನೋವೇಟ್ ಇಂಡಿಯಾ ಲಿಮಿಟೆಡ್, ICAR ನ ವಾಣಿಜ್ಯ ವಿಭಾಗವಾಗಿ ಕಾರ್ಯನಿರ್ವಹಿಸುತ್ತದೆ. ಕೃಷಿ ಸಂಶೋಧನೆ, ತಂತ್ರಜ್ಞಾನ ಮತ್ತು ನಾವೀನ್ಯತೆಯನ್ನು ಪ್ರಾಯೋಗಿಕ ವಾಣಿಜ್ಯ ಬಳಕೆಗೆ ತರುವುದು ಸಂಸ್ಥೆಯ ಉದ್ದೇಶವಾಗಿದೆ, ಇದರಿಂದಾಗಿ ರೈತರು, ನವೋದ್ಯಮಗಳು ಮತ್ತು ಉದ್ಯಮಿಗಳಿಗೆ ಪ್ರಯೋಜನವಾಗುತ್ತದೆ. ಈ ಲಾಭಾಂಶ ವಿತರಣೆಯು ಅಗ್ರಿನ್ನೋವೇಟ್ ಇಂಡಿಯಾದ ಆರ್ಥಿಕ ಶಿಸ್ತು, ಪಾರದರ್ಶಕತೆ ಮತ್ತು ಭಾರತದ ಕೃಷಿ ನಾವೀನ್ಯತೆಯ ಪರಿಸರ ವ್ಯವಸ್ಥೆಯನ್ನು ಸಬಲೀಕರಣಗೊಳಿಸುವ ಅದರ ನಿರಂತರ ಬದ್ಧತೆಯನ್ನು ಮತ್ತಷ್ಟು ಬಲಪಡಿಸುತ್ತದೆ.

 

*****


(ಪ್ರಕಟಣೆ ಐ.ಡಿ.: 2239736) ವಿಸಿಟರ್ ಕೌಂಟರ್ : 7
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Gujarati