ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
ಭಾರತ ಎಐ ಪ್ರಭಾವ ಶೃಂಗಸಭೆ 2026ರಲ್ಲಿ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ʻಎಐ ಇಂಪ್ಯಾಕ್ಟ್ ಸ್ಟಾರ್ಟ್ಅಪ್ʼ ಎನ್ನುವ ಪುಸ್ತಕವನ್ನು ಬಿಡುಗಡೆ ಮಾಡಿದೆ
ಸಂಕಲನವು ಭಾರತದಲ್ಲಿ ಅಭಿವೃದ್ಧಿಪಡಿಸಲಾಗುತ್ತಿರುವ ಎಐ ಪರಿಹಾರಗಳಲ್ಲೇ ಮೊದಲಾಗಿರುವ ಸಂಯೋಜಿತ ಭಂಡಾರವಾಗಿದೆ: ಶ್ರೀ ಅಭಿಷೇಕ್ ಸಿಂಗ್, ಹೆಚ್ಚುವರಿ ಕಾರ್ಯದರ್ಶಿ, ಸಚಿವಾಲಯ
ಮುಂದಿನ 12–18 ತಿಂಗಳುಗಳಲ್ಲಿ ಪ್ರಭಾವಶಾಲಿ ಬಳಕೆಯನ್ನು ಹೆಚ್ಚಿಸುವುದು ಭಾರತವು 'ಕೇಸ್- ಬಳಕೆಯ ರಾಜಧಾನಿʼ ಆಗಲು ನಿರ್ಣಾಯಕವಾಗಿದೆ
ಪ್ರಕಟಣಾ ದಿನಾಂಕ:
18 FEB 2026 5:05PM by PIB Bengaluru
ಭಾರತದ ಎಐ ಪ್ರಭಾವ ಶೃಂಗಸಭೆ 2026 ರ ಮೂರನೇ ದಿನವು ʻಎಐ ಇಂಪ್ಯಾಕ್ಟ್ ಸ್ಟಾರ್ಟ್ಅಪ್ʼ ಪುಸ್ತಕದ ಬಿಡುಗಡೆಗೆ ಸಾಕ್ಷಿಯಾಯಿತು. ಭಾರತದಲ್ಲಿ ಕೃತಕ ಬುದ್ಧಿಮತ್ತೆ ಮತ್ತು ಡೀಪ್-ಟೆಕ್ ನವೋದ್ಯಮ ಪರಿಸರ ವ್ಯವಸ್ಥೆಯ ಪ್ರಮಾಣ, ವೈವಿಧ್ಯತೆ ಮತ್ತು ಬೆಳೆಯುತ್ತಿರುವ ಅಂತರರಾಷ್ಟ್ರೀಯ ಮನ್ನಣೆಯ ಕುರಿತು ಸಮಗ್ರ ಅಧ್ಯಯನದ ಸಾರವನ್ನು ಪುಸ್ತಕವು ವಿವರಿಸುತ್ತದೆ. ದೊಡ್ಡ ನವೋದ್ಯಮಗಳ ಮಾದರಿಯನ್ನು ಆಧರಿಸಿ, ಪುಸ್ತಕವು ವಲಯಗಳು, ತಂತ್ರಜ್ಞಾನಗಳು ಮತ್ತು ಭೌಗೋಳಿಕ ಪ್ರದೇಶಗಳಲ್ಲಿ ಉದಯೋನ್ಮುಖ ಪ್ರವೃತ್ತಿಗಳ ಸಮಗ್ರ ತಿಳುವಳಿಕೆಯನ್ನು ಒದಗಿಸುತ್ತದೆ.
ಮೂಲಮಾದರಿಗಳು, ದತ್ತಾಂಶಗಳು ಮತ್ತು ತ್ಯಾಜ್ಯ ನಿರ್ವಹಣಾ ತಂತ್ರಜ್ಞಾನಗಳು ಸೇರಿದಂತೆ ವಲಯಗಳಲ್ಲಿ ತ್ವರಿತ ವಿಸ್ತರಣೆಯೊಂದಿಗೆ, ಆರೋಗ್ಯ ರಕ್ಷಣೆಯಂತಹ ಪ್ರಮುಖ ಕ್ಷೇತ್ರಗಳಲ್ಲಿ ಎಐ ನಾವೀನ್ಯತೆಗಳ ಬಲವಾದ ಉಪಸ್ಥಿತಿಯನ್ನು ಪುಸ್ತಕವು ತಿಳಿಸುತ್ತದೆ. ಭಾರತದ ಧ್ವನಿ-ದೃಷ್ಟಿ ಆಧಾರಿತ ಅಪ್ಲಿಕೇಶನ್ಗಳನ್ನು ರೂಪಿಸುವಲ್ಲಿ, ಪ್ರಮುಖ ಮಹಾನಗರ ಕೇಂದ್ರಗಳನ್ನು ಮೀರಿ ನವೋದ್ಯಮಗಳನ್ನು ಹೆಚ್ಚಿಸುವಲ್ಲಿ ಮತ್ತು ಅವುಗಳ ಅಳವಡಿಕೆಯನ್ನು ವೇಗಗೊಳಿಸುವಲ್ಲಿ ಸರ್ಕಾರಿ ಪಾಲುದಾರಿಕೆಯ ಪಾತ್ರವನ್ನು ಇದು ಉಲ್ಲೇಖಿಸುತ್ತದೆ. ಸ್ಥಳೀಯ ಎಐ ಮೂಲಸೌಕರ್ಯದ ಹೊರಹೊಮ್ಮುವಿಕೆ, ಹಾರ್ಡ್ವೇರ್ ಸಾಮರ್ಥ್ಯಗಳೊಂದಿಗೆ ಎಡ್ಜ್ ಎಐ ನ ಹೆಚ್ಚುತ್ತಿರುವ ಕ್ರೋಡೀಕರಣ ಮತ್ತು ಆರಂಭಿಕ ಹಂತದ ಪ್ರಭಾವದಿಂದ ಜಾಗತಿಕ ಬೆಳವಣಿಗೆಗೆ ಹಲವಾರು ನವೋದ್ಯಮಗಳ ಪರಿವರ್ತನೆಯನ್ನು ಪುಸ್ತಕವು ಮತ್ತಷ್ಟು ವಿವರಿಸುತ್ತದೆ.

ಈ ಸಂದರ್ಭದಲ್ಲಿ ಮಾತನಾಡಿದ ಎನ್ ಐ ಸಿ ಯ ಮಹಾನಿರ್ದೇಶಕ ಮತ್ತು ವಿದ್ಯುನ್ಮಾನ, ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಮತ್ತು ಇಂಡಿಯಾ ಎಐನ ಸಿಇಒ ಶ್ರೀ ಅಭಿಷೇಕ್ ಸಿಂಗ್ ಮಾತನಾಡಿ, ದತ್ತಾಂಶ ಕೇಂದ್ರಗಳು ಮತ್ತು ಮಾಹಿತಿ ಸ್ಟ್ಯಾಕ್ಗಳಿಂದ ಮೂಲ ಮಾದರಿಗಳವರೆಗೆ ಎಐ ಮೂಲಸೌಕರ್ಯದ ಅಭಿವೃದ್ಧಿ ಬಹಳ ನಿರ್ಣಾಯಕವಾಗಿದೆ ಎಂದು ಹೇಳಿದರು. ಆದರೂ ಯಶಸ್ಸಿನ ನಿಜವಾದ ಅಳತೆಯು ಸೇವೆಗಳಿಗೆ ಪ್ರವೇಶಾವಕಾಶವನ್ನು ಸುಧಾರಿಸುವ ಮತ್ತು ನಾಗರಿಕರಿಗೆ, ವಿಶೇಷವಾಗಿ ಆರೋಗ್ಯ ರಕ್ಷಣೆ, ಕೃಷಿ, ಶಿಕ್ಷಣ ಮತ್ತು ಉದ್ಯೋಗದಂತಹ ಕ್ಷೇತ್ರಗಳಲ್ಲಿ ಸ್ಪಷ್ಟವಾದ ಪ್ರಯೋಜನಗಳನ್ನು ನೀಡುವ ಸಾಮರ್ಥ್ಯದಲ್ಲಿದೆ ಎಂದು ಹೇಳಿದರು. ಈ ಕ್ಷೇತ್ರಗಳಲ್ಲಿ ಹೆಚ್ಚಿನ ಸಂಖ್ಯೆಯ ಭಾರತೀಯ ನವೋದ್ಯಮಗಳು ಈಗಾಗಲೇ ಪರಿಣಾಮಕಾರಿ ಪರಿಹಾರಗಳನ್ನು ನಿರ್ಮಿಸುತ್ತಿವೆ ಮತ್ತು ಸರ್ಕಾರಿ ಹಾಗು ಸಾರ್ವಜನಿಕ ವ್ಯವಸ್ಥೆಗಳಲ್ಲಿ ಅಂತಹ ನಾವೀನ್ಯತೆಗಳನ್ನು ಗುರುತಿಸಲು, ಮೌಲ್ಯಮಾಪನ ಮಾಡಲು ಮತ್ತು ಅಳೆಯಲು ರಚನಾತ್ಮಕ ಕಾರ್ಯವಿಧಾನದ ಅಗತ್ಯ ಹೆಚ್ಚುತ್ತಿದೆ ಎಂದು ಅವರು ಹೇಳಿದರು.
ಸಂಕಲನದ ಪ್ರಕಟಣೆಯ ಹಿಂದಿನ ಉದ್ದೇಶವನ್ನು ಉಲ್ಲೇಖಿಸುತ್ತಾ, ಸಂಕಲನವು ಭಾರತದಲ್ಲಿ ಅಭಿವೃದ್ಧಿಪಡಿಸಲಾಗುತ್ತಿರುವ ಎಐ ಪರಿಹಾರಗಳಲ್ಲೇ ಮೊದಲಾಗಿರುವ ಸಂಯೋಜಿತ ಭಂಡಾರವಾಗಿದ್ದು, ಕೇಂದ್ರ ಸಚಿವಾಲಯಗಳು, ರಾಜ್ಯಗಳು ಮತ್ತು ಸಂಸ್ಥೆಗಳು ಅಂತಹ ಪರಿಹಾರಗಳ ಪರಿಪಕ್ವತೆಯನ್ನು ನಿರ್ಣಯಿಸಲು ಮತ್ತು ಅವುಗಳ ನಿಜವಾದ ಕಾರ್ಯಕ್ಷಮತೆಯನ್ನು ಅರಿಯಲು ಇದು ಒಂದು ಸಾಧನವಾಗಿದೆ ಎಂದು ಅವರು ಹೇಳಿದರು. ಇದು ಅವುಗಳನ್ನು ಜನಸಂಖ್ಯಾ ಮಟ್ಟದಲ್ಲಿ ಕಾರ್ಯಗತಗೊಳಿಸಲು ಅನುವು ಮಾಡಿಕೊಡುತ್ತದೆ ಎಂದು ಅವರು ಹೇಳಿದರು. ಭಾಷಾ ಆಧಾರಿತ ಕೃಷಿ ಸಲಹಾ ಸೇವೆಗಳಂತಹ ಉಪಕ್ರಮಗಳ ಜೊತೆಗೆ, ಬಹು ಭಾರತೀಯ ಭಾಷೆಗಳು ಮತ್ತು ಉಪಭಾಷೆಗಳಲ್ಲಿ ಸಂಪೂರ್ಣ ಮಾಹಿತಿ ಲಭ್ಯತೆಯತ್ತ ಎಐನ ಸಾಮರ್ಥ್ಯವನ್ನು ಇವು ಪ್ರದರ್ಶಿಸುತ್ತವೆ ಎಂದು ಅವರು ಹೇಳಿದರು. ಇದಕ್ಕಾಗಿ, ಉತ್ಕೃಷ್ಟ ದತ್ತಾಂಶ ಮೂಲ ಮತ್ತು ಅನುಷ್ಠಾನಕ್ಕಾಗಿ ಸಂಘಟಿತ ಅನುಷ್ಠಾನ ಪ್ರಯತ್ನಗಳ ಅಗತ್ಯವಿದೆ ಎಂದು ಅವರು ಹೇಳಿದರು.
ಭಾರತದ ಎಐ ಪ್ರಯಾಣದಲ್ಲಿ ಮುಂದಿನ ಹಂತದ ಪ್ರಗತಿಯು ಪರಿಹಾರ ಪೂರೈಕೆದಾರರೊಂದಿಗೆ ಅನುಷ್ಠಾನಗೊಳಿಸುವ ಸಂಸ್ಥೆಗಳ ವ್ಯವಸ್ಥಿತ ಸಂವಹನ ಮತ್ತು ವಿವಿಧ ವಲಯಗಳಲ್ಲಿ ನಾವೀನ್ಯತೆಯ ಪ್ರಾಯೋಗಿಕ ಹಂತದಿಂದ ದೊಡ್ಡ ಪ್ರಮಾಣದ ಅಳವಡಿಕೆಯ ಕಡೆಗೆ ಸಾಗುವುದರ ಮೇಲೆ ಅವಲಂಬಿತವಾಗಿರುತ್ತದೆ ಎಂದು ಅವರು ಹೇಳಿದರು..
ತಮ್ಮ ಭಾಷಣದಲ್ಲಿ, ಭಾರತವು ʻಯೂಸ್-ಕೇಸ್ ರಾಜಧಾನಿʼಯಾಗಬೇಕಾದರೆ, ಅದು ತನ್ನ ಪ್ರಭಾವಶಾಲಿ ಪರಿಹಾರಗಳನ್ನು ಹೆಚ್ಚಿಸುವ ಅಗತ್ಯವಿದೆ ಎಂದು ಅವರು ಹೇಳಿದರು. ಇಲ್ಲಿ ನೂರು ಪರಿಹಾರಗಳನ್ನು ಪಟ್ಟಿ ಮಾಡಲಾಗಿದೆ ಮತ್ತು ಮುಂದಿನ 12 ರಿಂದ 18 ತಿಂಗಳುಗಳಲ್ಲಿ, ನಾವು ಅವುಗಳಲ್ಲಿ ಹತ್ತನ್ನು ವಿಸ್ತರಿಸಿದರೂ, ಅದು ಒಂದು ಮಹತ್ವದ ಹೆಜ್ಜೆಯಾಗಲಿದೆ ಎಂದು ಅವರು ಹೇಳಿದರು.
ಸಭೆಯನ್ನುದ್ದೇಶಿಸಿ ಮಾತನಾಡಿದ ಕಲ್ಪ ಇಂಪ್ಯಾಕ್ಟ್ ನ ಸಂಸ್ಥಾಪಕ ಮತ್ತು ಸಿಇಒ ಶ್ರೀ ಸುಶಾಂತ್ ಕುಮಾರ್, ಈ ಸಂಪೂರ್ಣ ಮಾದರಿಯಲ್ಲಿ ಎಂಟು ವಿಚಾರಗಳನ್ನು ಪಡೆಯಲಾಗಿದೆ ಎಂದು ಹೇಳಿದರು. “ನಮಗೆ ಎದ್ದು ಕಾಣುವ ಎಂಟು ಒಳನೋಟಗಳನ್ನು ನಾನು ಹೊರತೆಗೆಯಲು ಬಯಸುತ್ತೇನೆ. ಮೊದಲನೆಯದಾಗಿ, ಆರೋಗ್ಯದಂತಹ ಕ್ಷೇತ್ರಗಳನ್ನು ನೀವು ಪ್ರತಿನಿಧಿಸುವುದನ್ನು ನೀವು ನೋಡಿದ್ದೀರಿ, ಆದರೆ ನಾವು ಈಗ ಅಡಿಪಾಯ ಮಾದರಿಗಳು ಮತ್ತು ದತ್ತಾಂಶಗಳ ಆಧಾರದ ಮೇಲೆ ನವೀನ ವಲಯಗಳ ವಿಸ್ತಾರವನ್ನು ನೋಡುತ್ತಿದ್ದೇವೆ. ನಮ್ಮ ಆರಂಭಿಕ ಹಂತದ ಉದ್ಯಮಗಳಲ್ಲಿ ಸುಮಾರು 47% ಸ್ಥಳೀಯ ಮೂಲದ್ದಾಗಿವೆ. ಸುಮಾರು 68% ಅಂತರರಾಷ್ಟ್ರೀಯ ಪ್ರಮಾಣದಲ್ಲಿವೆ. ಈ ಸಂದರ್ಭದಲ್ಲಿ, ಭಾರತವು ಆರಂಭಿಕ ಮೂಲಮಾದರಿಗಳನ್ನು ನಿರ್ಮಿಸುತ್ತಿದೆ ಮತ್ತು ಮೂಲಸೌಕರ್ಯವನ್ನು ಒದಗಿಸುತ್ತಿದೆ. ಕೊನೆಯದಾಗಿ ಆದರೆ ಮುಖ್ಯವಾಗಿ, ಅತ್ಯಂತ ಮುಖ್ಯವಾದದ್ದು 'ಅಂಚಿನ ನಾವೀನ್ಯತೆ – ಎಡ್ಜ್ ಇನೋವೇಷನ್'... ಈ ಪುಸ್ತಕವನ್ನು ಓದಲು ನಾನು ಪ್ರತಿಯೊಬ್ಬರನ್ನು ಒತ್ತಾಯಿಸುತ್ತೇನೆ," ಎಂದು ಅವರು ಹೇಳಿದರು.
ಪುಸ್ತಕ ಬಿಡುಗಡೆಯು ಭಾರತದ ಕೃತಕ ಬುದ್ಧಿಮತ್ತೆಯ ಪರಿಸರ ವ್ಯವಸ್ಥೆಯ ಬೆಳವಣಿಗೆಯನ್ನು ಪರಿಶೋಧಿಸುತ್ತದೆ, ಪ್ರಾಯೋಗಿಕ ಹಂತದಿಂದ ನೀತಿಯನ್ನು ಸಕ್ರಿಯಗೊಳಿಸುವ ಪರಿಸರದಿಂದ ಅದರ ವಿಕಸನದವರೆಗೆ, ಸಾರ್ವತ್ರಿಕ ಡಿಜಿಟಲ್ ಮೂಲಸೌಕರ್ಯದ ಲಭ್ಯತೆ ಮತ್ತು ಜಾಗತಿಕವಾಗಿ ಸ್ಪರ್ಧಾತ್ಮಕ ನಾವೀನ್ಯತೆಗಳಿಗೆ ಜಾಗತಿಕ ಮಾರುಕಟ್ಟೆ ಸಂಪರ್ಕವನ್ನು ವಿಸ್ತರಿಸುವುದನ್ನು ಇದು ಒಳಗೊಂಡಿದೆ.
******
(ಪ್ರಕಟಣೆ ಐ.ಡಿ.: 2230124)
ವಿಸಿಟರ್ ಕೌಂಟರ್ : 3