ಪ್ರಧಾನ ಮಂತ್ರಿಯವರ ಕಛೇರಿ
ಹುಲ್ ದಿವಸದ ಸಂದರ್ಭದಲ್ಲಿ ಬುಡಕಟ್ಟು ವೀರರಿಗೆ ಗೌರವ ಸಲ್ಲಿಸಿದ ಪ್ರಧಾನಮಂತ್ರಿ
Posted On:
30 JUN 2025 2:28PM by PIB Bengaluru
ಹುಲ್ ದಿವಸದ ಸಂದರ್ಭದಲ್ಲಿ, ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ಭಾರತದ ಬುಡಕಟ್ಟು ಸಮುದಾಯದ ಅದಮ್ಯ ಧೈರ್ಯ ಮತ್ತು ಅಸಾಧಾರಣ ಶೌರ್ಯಕ್ಕೆ ಹೃತ್ಪೂರ್ವಕವಾಗಿ ಗೌರವ ಸಲ್ಲಿಸಿದರು. ಐತಿಹಾಸಿಕವಾದ ಸಂತಾಲ್ ದಂಗೆಯನ್ನು ಸ್ಮರಿಸುವ ಮೂಲಕ, ಪ್ರಧಾನ ಮಂತ್ರಿಯವರು ಪೂಜ್ಯ ಸ್ವಾತಂತ್ರ್ಯ ಹೋರಾಟಗಾರರಾದ ಸಿಡೋ-ಕನ್ಹು, ಚಾಂದ್-ಭೈರವ ಮತ್ತು ಫುಲೋ-ಜಾನೋ ಅವರ ಪರಂಪರೆಯನ್ನು ಮುಂದುವರೆಸಿ ವಸಾಹತುಶಾಹಿ ದಬ್ಬಾಳಿಕೆಯನ್ನು ಧಿಕ್ಕರಿಸಿ ತಮ್ಮ ಪ್ರಾಣವನ್ನೇ ಅರ್ಪಿಸಿದ ಅಸಂಖ್ಯಾತ ಇತರ ಧೈರ್ಯಶಾಲಿ ಬುಡಕಟ್ಟು ಹುತಾತ್ಮರಿಗೂ ಗೌರವಸಲ್ಲಿಸಿದರು.
Xನ ಪೋಸ್ಟ್ ನಲ್ಲಿ:
“ಹುಲ್ ದಿನವು ನಮಗೆ ನಮ್ಮ ಆದಿವಾಸಿ ಸಮುದಾಯದ ನಿರಂತರ ಧೈರ್ಯ ಮತ್ತು ಅದಮ್ಯ ಶಕ್ತಿಯನ್ನು ನೆನಪಿಸುತ್ತದೆ. ಐತಿಹಾಸಿಕ ಸಂತಾಲ್ ಕ್ರಾಂತಿಗೆ ಸಂಬಂಧಿಸಿದ ಈ ವಿಶೇಷ ಸಂದರ್ಭದಲ್ಲಿ ಸಿದೋ-ಕಾನ್ಹು, ಚಾಂದ್-ಭೈರವಿ ಮತ್ತು ಪುಲೋ-ಜ್ಹಾನೋ ಅವರಲ್ಲದೆ ಇತರ ಶೂರರನ್ನು ಹೃದಯಮೂರ್ವಕವಾಗಿ ನಮಿಸುತ್ತೇನೆ. ಈ ಶೂರರು ವಿದೇಶಿ ಶಾಹಿಯ ದುರಾಚಾರದ ವಿರುದ್ದ ಹೋರಾಡುತ್ತಾ ತಮ್ಮ ಜೀವನವನ್ನು ಬಲಿದಾನ ಮಾಡಿದ್ದಾರೆ. ಅವರ ಶೂರ್ಯಗಾಥೆ ದೇಶದ ಎಲ್ಲಾ ಪೀಳಿಗೆಯವರನ್ನೂ ತಮ್ಮ ತಾಯ್ನಾಡಿನ ಗೌರವವನ್ನು ರಕ್ಷಿಸಲು ಪ್ರೇರೇಪಿಸುತ್ತದೆ” ಎಂದು ಪೋಸ್ಟ್ ಮಾಡಿದ್ದಾರೆ.
“ᱦᱩᱞ ᱢᱟᱦᱟ ᱫᱚ ᱟᱵᱚ ᱟᱹᱫᱤᱵᱟ.ᱥᱤ ᱥᱟᱶᱛᱟ ᱨᱮᱭᱟᱜ ᱫᱤᱞ ᱫᱟᱲᱮ ᱟᱨ ᱦᱟᱦᱟᱲᱟᱜ ᱵᱤᱨᱚᱛᱛᱚ ᱨᱮᱭᱟᱜ ᱠᱟᱛᱷᱟᱭ ᱩᱭᱦᱟᱹᱨ ᱟᱵᱚᱱᱟ ᱾ ᱱᱟᱜᱟᱢᱟᱱᱟᱜ ᱥᱟᱱᱛᱟᱞ ᱦᱩᱞ ᱥᱟᱶᱛᱮ ᱥᱟᱹᱜᱟᱹᱭ ᱟᱱ ᱱᱚᱣᱟ ᱟᱠᱷᱲᱟ ᱨᱮ ᱟᱞᱮ ᱥᱤᱫᱩ,ᱠᱟᱱᱦᱩ,ᱪᱟᱸᱫᱽ ᱵᱷᱟᱭᱨᱳ ᱟᱨ ᱯᱷᱩᱞᱳᱼᱡᱷᱟᱱᱳ ᱛᱮᱠᱚ ᱤᱝᱨᱮᱡᱽ ᱵᱤᱨᱩᱫᱷ ᱨᱮ ᱡᱤᱣᱤ ᱠᱚ ᱟᱞᱟᱭ ᱞᱮᱫ ᱥᱟᱱᱟᱢ ᱥᱟᱦᱚᱥᱟᱱ ᱵᱤᱨᱵᱟᱱᱴᱟ ᱟᱨ ᱦᱩᱞᱜᱟᱹᱨᱤᱭᱟᱹ ᱠᱚ ᱜᱩᱱᱢᱟᱱ ᱥᱟᱞᱟᱜ ᱜᱚᱰ ᱟᱨ ᱡᱚᱦᱟᱨ ᱞᱮ ᱪᱟᱞ ᱟᱠᱚ ᱠᱟᱱᱟ ᱾ ᱩᱱᱠᱩ ᱠᱚᱣᱟᱜ ᱠᱟ.ᱦᱱᱤ ᱛᱟᱭᱚᱢ ᱫᱟᱨᱟᱢ ᱫᱤᱥᱚᱢᱨᱮᱱ ᱥᱟᱱᱟᱢ ᱯᱚᱯᱚᱝᱲᱟ ᱜᱮ ᱫᱤᱥᱚᱢ ᱨᱮᱭᱟᱜ ᱢᱟᱹᱱ ᱨᱩᱠᱷᱤᱭᱟᱹ ᱞᱟᱜᱤᱫ ᱵᱷᱚᱨᱥᱟᱭ ᱡᱚᱜᱟᱣ ᱟᱠᱚᱣᱟ ᱾”
*****
(Release ID: 2141131)
Read this release in:
English
,
Urdu
,
Marathi
,
Hindi
,
Manipuri
,
Bengali
,
Assamese
,
Punjabi
,
Gujarati
,
Odia
,
Tamil
,
Telugu
,
Malayalam