ಉಪರಾಷ್ಟ್ರಪತಿಗಳ ಕಾರ್ಯಾಲಯ
azadi ka amrit mahotsav

ರಾಜಕೀಯ ಪಕ್ಷಗಳು ರಾಜಕೀಯ ತಾಪಮಾನವನ್ನು ಕಡಿಮೆ ಮಾಡಬೇಕು; ಮಾತುಕತೆಯು ಘರ್ಷಣೆಯಾಗಲು ಸಾಧ್ಯವಿಲ್ಲ: ಉಪರಾಷ್ಟ್ರಪತಿ


ಒಕ್ಕೂಟ ರಾಜಕೀಯಕ್ಕೆ ಕೇಂದ್ರ-ರಾಜ್ಯ ಕೈಜೋಡಿಸುವುದು ಅಗತ್ಯ, ಪಕ್ಷಪಾತವನ್ನು ಮೀರಿ ರಾಷ್ಟ್ರೀಯತೆ ಮೇಲುಗೈ ಸಾಧಿಸಬೇಕು, ಉಪರಾಷ್ಟ್ರಪತಿ ಅಭಿಮತ

ಹೊಸ ವಲಯದಲ್ಲಿ ಯೋಜನೆಗಳು ಅವು ನಡೆಯಬೇಕಾದ ವೇಗದಲ್ಲಿ ನಡೆಯುತ್ತಿಲ್ಲ ಎಂದು ಎಚ್ಚರಿಸಿದ ಉಪರಾಷ್ಟ್ರಪತಿ

ರೈತರ ಕೈಹಿಡಿಯಬೇಕು; ಕೃಷಿ ಉದ್ಯಮಿಗಳು ತಾವಾಗಿಯೇ ರೂಪುಗೊಳ್ಳಲು ಸಾಧ್ಯವಿಲ್ಲ, ಉಪರಾಷ್ಟ್ರಪತಿ

ಕಾರ್ಪೊರೇಟ್ಗಳು ತಮ್ಮ ಲಾಭದ ಭಾಗವನ್ನು ಕೃಷಿ ವಲಯದೊಂದಿಗೆ ಹಂಚಿಕೊಳ್ಳುವ ಸಮಯ ಬಂದಿದೆ, ಉಪರಾಷ್ಟ್ರಪತಿ

ಶಾಂತಿಯು ಬಲದಿಂದ ಬರುತ್ತದೆ; ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಸಂಶೋಧನೆ ನಿರ್ಣಾಯಕವಾಗಿದೆ, ಉಪರಾಷ್ಟ್ರಪತಿ

ಬೆಂಗಳೂರಿನಲ್ಲಿ ಕೈಗಾರಿಕಾ ಮುಖಂಡರು ಮತ್ತು ಉದ್ಯಮದ ನಾಯಕರೊಂದಿಗೆ ಉಪರಾಷ್ಟ್ರಪತಿ ಸಂವಾದ

Posted On: 07 JUN 2025 8:38PM by PIB Bengaluru

"ದೇಶದ ರಾಜಕೀಯ ಪಕ್ಷಗಳು ರಾಜಕೀಯ ತಾಪಮಾನವನ್ನು ತಗ್ಗಿಸಬೇಕಾಗುತ್ತದೆ" ಎಂದು ಭಾರತದ ಉಪರಾಷ್ಟ್ರಪತಿ ಶ್ರೀ ಜಗದೀಪ್ ಧನಕರ್‌ ಇಂದು ಹೇಳಿದರು. ರಾಜಕೀಯ ಪಕ್ಷಗಳ ನಡುವಿನ ಮಾತುಕತೆಯು ಸಂಘರ್ಷವಾಗಲು ಸಾಧ್ಯವಿಲ್ಲ – ಮಾತುಕತೆಯು  ಶಾಂತವಾಗಿರಬೇಕು. ಸ್ನೇಹಿತರೇ, ಪ್ರಜಾಪ್ರಭುತ್ವವನ್ನು ಮಾತುಕತೆ  ಮತ್ತು ಸಂವಾದದ ಮೂಲಕ ವ್ಯಾಖ್ಯಾನಿಸಲಾಗುತ್ತದೆ." ಎಂದರು.

ಮುಂದುವರೆದು ಮಾತನಾಡಿದ ಅವರು, "ಭಾರತವು ಅಭಿವೃದ್ಧಿ ಹೊಂದುತ್ತಿರುವ ಒಕ್ಕೂಟ  ಸಮಾಜವಾಗಿದ್ದು, ಅಲ್ಲಿ ಕೇಂದ್ರ ಮತ್ತು ರಾಜ್ಯಗಳ ನಡುವೆ ಸಂಯೋಜನೆಯ, ಕೈಜೋಡಿಸುವಿಕೆ  ಇರಬೇಕು. ನಾಯಕರು ಮತ್ತು ರಾಜಕೀಯ ಪಕ್ಷಗಳ ನಡುವೆ ಮಾತುಕತೆ  ಬಹಳ ಅಗತ್ಯ – ಮಾತುಕತೆಯ  ಅನುಪಸ್ಥಿತಿಯು ನಮ್ಮ ರಾಷ್ಟ್ರೀಯ ಮನೋಭಾವಕ್ಕೆ  ಒಳ್ಳೆಯದಲ್ಲ." ಎಂದರು.

ಬೆಂಗಳೂರಿನಲ್ಲಿ ಇಂದು ಕೈಗಾರಿಕಾ ಮುಖಂಡರು ಮತ್ತು ಉದ್ಯಮಿಗಳೊಂದಿಗೆ ಸಂವಾದ ನಡೆಸಿದ ಅವರು, "ರಾಷ್ಟ್ರೀಯ ಭದ್ರತೆಯ ಸಮಸ್ಯೆಗಳು, ನಮ್ಮ ರಾಷ್ಟ್ರೀಯತೆಗೆ ಸಂಬಂಧಿಸಿದ ಸಮಸ್ಯೆಗಳು ಮತ್ತು ನಮ್ಮ ಅಭಿವೃದ್ಧಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪಕ್ಷಪಾತದಿಂದ ನೋಡದೆ, ರಾಷ್ಟ್ರೀಯ ದೃಷ್ಟಿಕೋನದಿಂದ ನೋಡಬೇಕು ಎಂದು ಹೇಳಿದರು.  ರಾಜಕೀಯ ಕ್ಷೇತ್ರದಾದ್ಯಂತ ರಾಜಕೀಯ ದೃಢ ನಿರ್ಧಾರ ಕೈಗೊಳ್ಳುವ  ಜನರ ಚಾತುರ್ಯದ ಬಗ್ಗೆ ನನಗೆ ಸಂದೇಹವಿಲ್ಲ - ಎಲ್ಲಾ ರಾಜಕೀಯ ಪಕ್ಷಗಳಲ್ಲೂ ಅದು ಇದೆ”  ಎಂದರು.

ಅಭಿವ್ಯಕ್ತಿ ಸ್ವಾತಂತ್ರ್ಯದ ಕುರಿತಾದ ವೇದಾಂತದ  ತತ್ವವನ್ನು ಉಲ್ಲೇಖಿಸಿದ, ಉಪರಾಷ್ಟ್ರಪತಿಗಳು, "ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಚರ್ಚೆಯ ಸ್ವಾತಂತ್ರ್ಯವಿಲ್ಲದೆ ಪ್ರಜಾಪ್ರಭುತ್ವ ಮೌಲ್ಯಗಳನ್ನು ವಿವರಿಸಲು ಸಾಧ್ಯವಿಲ್ಲ. ಯಾರಾದರೂ ನಿಮ್ಮ ಅಭಿವ್ಯಕ್ತಿ ಹಕ್ಕನ್ನು ಅತಿಕ್ರಮಣ ಮಾಡಿದರೆ, ನಿರಾಶೆಗೊಳಿಸಿದರೆ ಅಥವಾ ನಿಯಂತ್ರಿಸಿದರೆ, ಅಗ  ಪ್ರಜಾಪ್ರಭುತ್ವದಲ್ಲಿ ಕೊರತೆಯಿರುತ್ತದೆ" ಎಂದು ಹೇಳಿದರು.

ಕೈಗಾರಿಕಾ ಪ್ರವೃತ್ತಿಗಳ ಕುರಿತು ಪ್ರತಿಕ್ರಿಯಿಸಿದ, ಅವರು ಈ ಬಗ್ಗೆ ತೀಕ್ಷ್ಣವಾದ ಅವಲೋಕನವನ್ನು ಮಾಡಿದರು, "ರಾಜಕೀಯಕ್ಕಿಂತ ಭಿನ್ನವಾಗಿ, ಉದ್ಯಮದಲ್ಲಿರುವ ಜನರು ಬ್ಯಾಲೆನ್ಸ್ ಶೀಟ್‌ಗಳಿಂದ ತೃಪ್ತರಾಗುತ್ತಾರೆ. ಆದರೆ ಹಸಿರು ಕ್ಷೇತ್ರದ ಯೋಜನೆಗಳು ಸಾಗಬೇಕಾದ ವೇಗದಲ್ಲಿ ಸಾಗುತ್ತಿಲ್ಲ. ದಯವಿಟ್ಟು ಯೋಚಿಸಿ, ಸಮಾನ ಉದ್ಯೋಗ ಮತ್ತು ಬೆಳವಣಿಗೆಯನ್ನು ಖಚಿತಪಡಿಸಿಕೊಳ್ಳಲು ಗುಚ್ಛಗಳನ್ನು ಸಮೂಹವಾಗಿಸಿ” ಎಂದರು.

 

ಕಾರ್ಪೊರೇಟ್ ವಲಯವು ತನ್ನ ಲಾಭವನ್ನು ಕೃಷಿ ವಲಯದೊಂದಿಗೆ ಹಂಚಿಕೊಳ್ಳುವಂತೆ ಕರೆ ನೀಡಿದ ಶ್ರೀ ಧನಕರ್‌, "ಕಾರ್ಪೊರೇಟ್‌ಗಳು ತಮ್ಮ ಲಾಭವನ್ನು ಕೃಷಿ ವಲಯದೊಂದಿಗೆ ಹಂಚಿಕೊಳ್ಳುವ ಸಮಯ ಬಂದಿದೆ. ಸಂಶೋಧನೆ ಅಥವಾ ಕೃಷಿಭೂಮಿಯಲ್ಲಿ ನಿಮ್ಮ ಹೂಡಿಕೆ ದಾನವಲ್ಲ - ಇದು ಲಾಭದಾಯಕ ಹೂಡಿಕೆಯಾಗಿದೆ." ಎಂದರು.

ಕೃಷಿ-ಕ್ಷೇತ್ರವನ್ನು ಕೈಗಾರಿಕೆಯೊಂದಿಗೆ ಸಂಯೋಜಿಸುವ ಕುರಿತು ಮಾತನಾಡಿದ ಉಪರಾಷ್ಟ್ರಪತಿಗಳು, ತಮ್ಮದೇ ಹಿನ್ನೆಲೆಯನ್ನು ಉಲ್ಲೇಖಿಸಿದರು. "ನಾನು ಕೃಷಿ ಸಮುದಾಯದಿಂದ ಬಂದಿದ್ದೇನೆ. ಕೃಷಿ ವಲಯವು ದೇಶದ ಬೆಳವಣಿಗೆಯ ಪಥದಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ. ಆದರೆ ಪ್ರಸ್ತುತ, ಅದು ಕೃಷಿ ಉತ್ಪನ್ನಗಳನ್ನು ಮಾತ್ರ ಉತ್ಪಾದಿಸುತ್ತಿದೆ - ಇದು ಮಾರುಕಟ್ಟೆ ಸರಪಳಿಯ ಭಾಗವಾಗಿಲ್ಲ." ಎಂದರು.

 

ಕೈಗಾರಿಕೆ-ಕೃಷಿ ಕ್ಷೇತ್ರದ ಸಂಯೋಜನೆಗೆ ಕರೆ ನೀಡಿದ ಅವರು, "ಕೃಷಿ ವಲಯದೊಂದಿಗೆ ಹೆಚ್ಚಿನ ಸಂಯೋಜನೆ  ತರಲು ಉದ್ಯಮವು ಗಂಭೀರ ಚಿಂತನೆ ನಡೆಸಬೇಕು. ರೈತರ  ಕೈಹಿಡಿಯಬೇಕು; ಕೃಷಿ ಉದ್ಯಮಿಗಳು ರೂಪುಗೊಳ್ಳಬೇಕು, ಆದರೆ ಬೆಂಬಲವಿಲ್ಲದೆ ಅವರು ಹಾಗೆ ಮಾಡಲು ಸಾಧ್ಯವಿಲ್ಲ." ಎಂದರು.

ಭಾರತದ ಬೆಳವಣಿಗೆಯ ಭವಿಷ್ಯದ ಕುರಿತು, ಮಾತನಾಡಿದ ಶ್ರೀ ಧನಕರ್‌ ಸಂಶೋಧನೆ ಮತ್ತು ನಾವೀನ್ಯತೆಯ ಪಾತ್ರವನ್ನು ಒತ್ತಿ ಹೇಳಿದರು, "ನಾವು ಅತ್ಯುನ್ನತ ಶ್ರೇಣಿಯ ಸಂಶೋಧನೆಯಲ್ಲಿ ತೊಡಗಿಸಿಕೊಳ್ಳಬೇಕು. ನಮ್ಮ ಸಂಶೋಧನಾ ಸಾಮರ್ಥ್ಯವು ಭಾರತದ ಜಾಗತಿಕ ಸ್ಥಾನವನ್ನು ವ್ಯಾಖ್ಯಾನಿಸುತ್ತದೆ. ನಮ್ಮ ತಾಂತ್ರಿಕ ನಾವೀನ್ಯತೆಯು ನಾವು ಎಷ್ಟು ಸುರಕ್ಷಿತರಾಗಿದ್ದೇವೆ ಎಂಬುದನ್ನು ವ್ಯಾಖ್ಯಾನಿಸುತ್ತದೆ." ಎಂದೂ ಹೇಳಿದರು.

 

ವ್ಯೂಹಾತ್ಮಕ ಶಾಂತಿಯ ಬಗ್ಗೆ ಮಾತನಾಡಿದ ಅವರು, "ಶಾಂತಿಯು ವ್ಯವಹಾರ ಮತ್ತು ಜನರ ಸಾಮರಸ್ಯಕ್ಕೆ ಮೂಲಭೂತವಾದ ಸಂಗತಿಯಾಗಿದೆ. ಆದರೆ ಶಾಂತಿಯನ್ನು ಎಂದಿಗೂ ಚೌಕಾಶಿಯಿಂದ  ಸಾಧಿಸಲಾಗದು - ಅದು ಬಲದಿಂದ/ಶಕ್ತಿಯಿಂದ ಬರುತ್ತದೆ. ನಾವು ಯುದ್ಧಕ್ಕೆ ಸಿದ್ಧರಾಗಿದ್ದಾಗೆಲ್ಲ ಅತ್ಯಂತ ದೊಡ್ಡ ಶಾಂತಿ ಸಾಧಿತವಾಗುತ್ತದೆ" ಎಂದು ಹೇಳಿದರು.

ರಾಷ್ಟ್ರೀಯ ಭದ್ರತೆಯಲ್ಲಿ ಉದ್ಯಮದ ಪಾತ್ರದ ವಿಕಸನವನ್ನು ಎತ್ತಿ ತೋರಿಸಿದ ಅವರು, "ಉದ್ಯಮವು ಕೇವಲ ಶಸ್ತ್ರಾಸ್ತ್ರಗಳನ್ನು ಮಾತ್ರ ತಯಾರಿಸುತ್ತಿದ್ದ ಕಾಲವಿತ್ತು. ಈಗ, ಅದು ತಂತ್ರಜ್ಞಾನವನ್ನು ಮುನ್ನಡೆಸಬೇಕು. ಸಂಶೋಧನೆಯು ದೀರ್ಘಕಾಲೀನ ಬೆಳವಣಿಗೆಯ ಬೆನ್ನೆಲುಬಾಗಿದೆ" ಎಂದು ಹೇಳಿದರು.

ಭಾರತವು ನಿರ್ಬಂಧಿಸಲಾಗದ ಪ್ರಗತಿಯಲ್ಲಿದೆ ಎಂದು ಘೋಷಿಸಿದ ಉಪರಾಷ್ಟ್ರಪತಿಗಳು, "ಭಾರತವು ಇನ್ನು ಮುಂದೆ ಸಾಮರ್ಥ್ಯದ ದೇಶವಲ್ಲ - ಅದು ಪ್ರಗತಿಯತ್ತ ಸಾಗುತ್ತಿರುವ ದೇಶ. 'ವಿಕಸಿತ ಭಾರತ' ಇನ್ನು ಮುಂದೆ ನಮ್ಮ ಕನಸಲ್ಲ - ಅದು ನಮ್ಮ ಉದ್ದೇಶ. ಆದರೆ ತಲಾ ಆದಾಯವನ್ನು ಹಲವು ಪಟ್ಟು ಹೆಚ್ಚಿಸುವ ಮೂಲಕ ನಾವು ಕ್ವಾಂಟಮ್ ಜಿಗಿತವನ್ನು ಕೈಗೊಳ್ಳಬೇಕು" ಎಂದು ಹೇಳಿದರು.

 

ಪ್ರಾಯೋಗಿಕ ದೃಷ್ಟಿಕೋನವನ್ನು ರೂಢಿಸಿಕೊಳ್ಳಬೇಕು ಎಂದು ಆಗ್ರಹಿಸಿದ ಅವರು, "ನಾವು ನಮ್ಮ ಆರ್ಥಿಕ ಸ್ಥಿತಿಯನ್ನು ನಮ್ಮ ಜನಸಂಖ್ಯಾ ಗಾತ್ರದೊಂದಿಗೆ - 1.4 ಶತಕೋಟಿ ಜನರೊಂದಿಗೆ ಸರಿಹೊಂದಿಸಿಕೊಳ್ಳಬೇಕು. ಈ ಹಿಂದಿನ ಪ್ರಾಯೋಗಿಕ ಅಂದಾಜಿನ ಪ್ರಕಾರ, ತಲಾ ಆದಾಯದಲ್ಲಿ ಎಂಟು ಪಟ್ಟು ಹೆಚ್ಚಳವಾಗಬೇಕು." ಎಂದೂ ಅವರು ಅಭಿಪ್ರಾಯಪಟ್ಟರು.

ಕರ್ನಾಟಕದ ರಾಜ್ಯಪಾಲ ಶ್ರೀ ಥಾವರ್‌ಚಂದ್ ಗೆಹ್ಲೋಟ್, ಕರ್ನಾಟಕದ ಉಪಮುಖ್ಯಮಂತ್ರಿ ಶ್ರೀ ಡಿ.ಕೆ. ಶಿವಕುಮಾರ್, ಸಂಸದರಾದ ಶ್ರೀ ಲಹರ್ ಸಿಂಗ್, ಕರ್ನಾಟಕ ಸರ್ಕಾರದ ಸಚಿವರಾದ ಡಾ. ಎಂ.ಸಿ. ಸುಧಾಕರ್ ಮತ್ತು ಇತರ ಗಣ್ಯರು ಉಪಸ್ಥಿತರಿದ್ದರು.

 

*****


(Release ID: 2134947)
Read this release in: English , Marathi