ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ
azadi ka amrit mahotsav

ಪರೀಕ್ಷಾ ಪೇ ಚರ್ಚಾ 2025 ರ 8ನೇ ಸಂಚಿಕೆಯಲ್ಲಿ ಪರೀಕ್ಷೆಯಲ್ಲಿ ಅಗ್ರಸ್ಥಾನ ಪಡೆದ ವಿದ್ಯಾರ್ಥಿಗಳು ಭಾಗಿ

Posted On: 18 FEB 2025 9:00PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪರೀಕ್ಷಾ ಪೇ ಚರ್ಚಾದ 8ನೇ ಆವೃತ್ತಿಯ ಉದ್ಘಾಟನಾ ಸಂಚಿಕೆಯಲ್ಲಿ ಆರಂಭಿಸಿದ ಒಳನೋಟವುಳ್ಳ ಚರ್ಚೆಗಳು ಎಂಟನೇ ಮತ್ತು ಅಂತಿಮ ಸಂಚಿಕೆಯೊಂದಿಗೆ ಮುಕ್ತಾಯವಾದವು. ಆ ಸಂಚಿಕೆಯಲ್ಲಿ ಒಟ್ಟು ಎಂಟು ಯುವ ಸಾಧಕರು ವಿದ್ಯಾರ್ಥಿಗಳೊಂದಿಗೆ ಸಂವಾದದಲ್ಲಿ ತೊಡಗಿಸಿಕೊಂಡರು. ಅವರುಗಳೆಂದರೆ, ರಾಧಿಕಾ ಸಿಂಘಾಲ್ (ಸಿಬಿಎಸ್ಇ ಟಾಪರ್ 2022-23); ಶುಚಿಸ್ಮಿತಾ ಅಧಿಕಾರಿ (ಐಎಸ್ ಸಿ ಪರೀಕ್ಷೆ ಟಾಪರ್ 2024); ಬ್ರಹ್ಮಚಾರಿಮಾಯುಮ್ ನಿಸ್ಥಾ (ಪಿಪಿಸಿ ಆಂಕರ್ & ಎಂಬಿಬಿಎಸ್ ವಿದ್ಯಾರ್ಥಿ, ಮಣಿಪುರ ವಿಶ್ವವಿದ್ಯಾಲಯ); ಆಶಿಶ್ ಕುಮಾರ್ ವರ್ಮಾ (ಪಿಪಿಸಿ ಆಂಕರ್ & ಐಐಟಿ ದೆಹಲಿ ವಿದ್ಯಾರ್ಥಿ); ವಾವಿಲಾಲ ಚಿದ್ವಿಲಾಸ್ ರೆಡ್ಡಿ (ಐಐಟಿ ಜೆಇಇ ಅಡ್ವಾನ್ಸ್ಡ್ ಎಐಆರ್- 1, 2023); ಜೈ ಕುಮಾರ್ ಬೊಹರಾ (ಸಿಎಲ್ ಎಟಿ ಐಎಆರ್ - 1, 2024); ಅರ್ಮನ್‌ಪ್ರೀತ್ ಸಿಂಗ್ (ಎನ್ ಡಿಎ ಎಐಆರ್ - 1, 2024); ಮತ್ತು ಇಶಿತಾ ಕಿಶೋರ್ (ಯುಪಿಎಸ್ ಸಿ-ಸಿಎಸ್ಇ ಎಐಆರ್ - 1 2022).

ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುವಾಗ, ನಿಸ್ಥಾ ಹಿಂದಿನ ವರ್ಷಗಳ ಪ್ರಶ್ನೆಗಳನ್ನು ಪುನರ್‌ ಪರಿಶೀಲಿಸುವುದು ಮತ್ತು ಕಲಿಕೆಗೆ ಆದ್ಯತೆ ನೀಡಲು ಸಲಹೆ ನೀಡಿದರು. ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತಮ್ಮ ಪುಸ್ತಕದಲ್ಲಿ ಸಲಹೆ ನೀಡಿದ್ದಂತೆ, “ಹಿಂದಿನ ಪ್ರಶ್ನೆಪತ್ರಿಕೆಗಳ ಪುನರ್ ಪರಿಶೀಲನೆ ಮೂಲಕ ಬುದ್ಧಿವಂತರಾಗುವ" ಮಹತ್ವವನ್ನು ಒತ್ತಿ ಹೇಳಿದರು. ಶುಚಿಸ್ಮಿತಾ ಅವರು ಪೂರ್ವಭಾವಿ ಸಿದ್ಧತೆಯತ್ತ ಗಮನಹರಿಸಲು ಪ್ರೋತ್ಸಾಹಿಸಿದರು ಮತ್ತು ಕಲಿತ ಪರಿಕಲ್ಪನೆಗಳನ್ನು ಅಭಿವ್ಯಕ್ತಪಡಿಸಲು ಸಹಾಯ ಮಾಡಲು ಉತ್ತರಗಳನ್ನು ಬರೆಯಲು ಸಲಹೆ ನೀಡಿದರು.

ಜೈಕುಮಾರ್, ವೈಯಕ್ತಿಕವಾಗಿ ತಯಾರಿ ತಂತ್ರಗಳ ಅಗತ್ಯತೆಯನ್ನು ಪ್ರಮುಖವಾಗಿ ಪ್ರಸ್ತಾಪಿಸಿದರು ಮತ್ತು ಉತ್ತಮವಾದದ್ದನ್ನು ಕಂಡುಹಿಡಿಯಲು ವಿಭಿನ್ನ ವಿಧಾನಗಳನ್ನು ಪ್ರಯೋಗಿಸಲು ಶಿಫಾರಸು ಮಾಡಿದರು. 25 ನಿಮಿಷಗಳ ಕಾಲ ಅಧ್ಯಯನ ಮಾಡುವುದು, 5 ನಿಮಿಷಗಳ ವಿರಾಮ ತೆಗೆದುಕೊಳ್ಳುವುದು ಮತ್ತು ಈ ದಿನಚರಿಯಲ್ಲಿ ಶಿಸ್ತನ್ನು ಕಾಪಾಡಿಕೊಳ್ಳಬೇಕಂಬುದು ಅವರ ಸಲಹೆಯಾಗಿತ್ತು. ವಿದ್ಯಾರ್ಥಿಗಳಿಗೆ ಅವರು ನೀಡಿದ ಪ್ರಮುಖ ಸಲಹೆ ಎಂದರೆ,  ತಮ್ಮ ಗುರಿಗಳನ್ನು ಸಾಧಿಸಲು ತ್ಯಾಗಗಳನ್ನು ಮಾಡಲು ಸಿದ್ಧರಾಗಿರಬೇಕು ಎಂಬುದು.

ಅರ್ಮನ್‌ಪ್ರೀತ್, ವಿದ್ಯಾರ್ಥಿಗಳು ತಮ್ಮ ವೈಯಕ್ತಿಕ ಸಾಮರ್ಥ್ಯಗಳ ಹೆಚ್ಚಿನ ಗಮನ ಕೇಂದ್ರೀಕರಿಸಬೇಕು ಎಂದು ಒತ್ತಿ ಹೇಳಿದರು. ಆದರೆ ಇಶಿತಾ ಪ್ರಾಮಾಣಿಕತೆಯ ಮಹತ್ವವನ್ನು ಒತ್ತಿ ಹೇಳಿದರು ಮತ್ತು ಅಧಿಕ ಭಯಕ್ಕೆ ಒಳಗಾಗಬಾರದು ಎಂದರು. 7-8 ಗಂಟೆಗಳ ಕಾಲ ಅಧ್ಯಯನ ಮಾಡುವುದು, 1-2 ಗಂಟೆಗಳ ಕಾಲ ಹವ್ಯಾಸಗಳಲ್ಲಿ ತೊಡಗಿಕೊಳ್ಳುವುದು ಮತ್ತು ಸಾಕಷ್ಟು ನಿದ್ದೆ ಮಾಡುವುದು ಸೇರಿದಂತೆ ಸಮತೋಲಿತ ವೇಳಾಪಟ್ಟಿಯನ್ನು ಕಾಪಾಡಿಕೊಳ್ಳುವ ಮಹತ್ವವನ್ನು ಅವರು ವಿವರಿಸಿದರು.

ರಾಧಿಕಾ ಆತ್ಮವಿಶ್ವಾಸವನ್ನು ಬೆಳೆಸುವಲ್ಲಿ ಪಠ್ಯೇತರ ಚಟುವಟಿಕೆಗಳ ಮೌಲ್ಯವನ್ನು ಒತ್ತಿ ಹೇಳಿದರು. ಪರೀಕ್ಷೆಗೆ ಸಂಬಂಧಿಸಿದ ಒತ್ತಡವನ್ನು ನಿರ್ವಹಿಸುವ ಸಲಹೆಗಳನ್ನು ಚಿದ್ವಿಲಾಸ್ ಹಂಚಿಕೊಂಡರು, ಒಳಾಂಗಣ ಮತ್ತು ಹೊರಾಂಗಣ ಆಟಗಳು, ಓದುವುದು ಅಥವಾ ಅಧ್ಯಯನದ ನಡುವೆ ಸಂಗೀತವನ್ನು ಕೇಳುವುದು ಮುಂತಾದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಸೂಚಿಸಿದರು. ಅವರು ವಿದ್ಯಾರ್ಥಿಗಳು ಸದಾ ಸಂತೋಷವಾಗಿರಬೇಕು, ಆದರೆ  ಎಂದಿಗೂ ಗೊಂದಕ್ಕೆ ಒಳಗಾಗಬಾರದೆಂದರು.

ನಿಸ್ಥಾ ಪರೀಕ್ಷಾ ಪೆ ಚರ್ಚಾವನ್ನು ಆಧಾರವಾಗಿಟ್ಟುಕೊಂಡು ತನ್ನ ಅನುಭವ ಹಂಚಿಕೊಂಡರು, ಇದು ಅವರ ಸಂವಹನ ಮತ್ತು ತಯಾರಿ ಕೌಶಲ್ಯಗಳನ್ನು ಹೇಗೆ ಹೆಚ್ಚಿಸಿತು, ಅವರ ಪರೀಕ್ಷಾ ಸಿದ್ಧತೆಗೆ ಹೇಗೆ ಪ್ರಯೋಜನವನ್ನು ನೀಡಿತು ಎಂಬುದನ್ನು ವಿವರಿಸಿದರು. ಆಶಿಶ್ ತಮ್ಮ "ಮೂರು ಗೆಲುವುಗಳ" - ಆಧ್ಯಾತ್ಮಿಕ, ಮಾನಸಿಕ ಮತ್ತು ದೈಹಿಕ - ಮಂತ್ರವನ್ನು ಹಂಚಿಕೊಂಡರು.

ಅಲ್ಲದೆ, ಇಶಿತಾ ಮತ್ತು ಜೈ ವಿದ್ಯಾರ್ಥಿಗಳಿಗೆ ಸಂದರ್ಶನ ಮಾಸ್ಟರ್‌ಕ್ಲಾಸ್ ಮೂಲಕ ಮಾರ್ಗದರ್ಶನ ಮಾಡಿದರು, ಆದರೆ ಆಶಿಶ್ ಪ್ರಶ್ನೆ ಪತ್ರಿಕೆ ತಂತ್ರಗಳ ಕುರಿತು ಗೋಷ್ಠಿಯನ್ನು ನಡೆಸಿ, ರಚನಾತ್ಮಕ ಸಮಯ ನಿರ್ವಹಣೆಯ ಮೂಲಕ ವಿದ್ಯಾರ್ಥಿಗಳು ಜೀವನ ಎದುರಿಸಲು ಸಿದ್ಧವಾಗಲು ಸಹಾಯ ಮಾಡಿದರು.

ವಿದ್ಯಾರ್ಥಿಗಳು ಬೋರ್ಡ್ ಪರೀಕ್ಷೆಯ ತಯಾರಿ, ಸಾಮಾಜಿಕ ಬೆಂಬಲ ಮತ್ತು ಜೀವನ ಕೌಶಲ್ಯಗಳನ್ನು ಕರಗತ ಮಾಡಿಕೊಳ್ಳುವ ಬಗ್ಗೆ ಪ್ರಶ್ನೆಗಳನ್ನು ಕೇಳಿದರು. ಜಪಾನ್ ಮತ್ತು ದುಬೈನಿಂದಲೂ ಭಾಗವಹಿಸಿದ್ದ ವಿದ್ಯಾರ್ಥಿಗಳು ಅತಿಥಿಗಳಿಗೆ ಪ್ರಶ್ನೆಗಳನ್ನು ಕೇಳಿದರು. ಗೋಷ್ಠಿಯ ನಂತರ, ವಿದ್ಯಾರ್ಥಿಗಳು ಪ್ಯಾನೆಲಿಸ್ಟ್‌ಗಳೊಂದಿಗಿನ ಸಂವಾದದ ಮೂಲಕ ತಮ್ಮ ಕಲಿಕೆಯನ್ನು ತೆರೆದಿಟ್ಟರು.

ಸಮಗ್ರ ಅಭಿವೃದ್ಧಿಖಾತರಿಪಡಿಸಿಕೊಳ್ಳಲುಯ ಕ್ರೀಡಾ ಐಕಾನ್ ಗಳು, ತಾಂತ್ರಿಕ ತಜ್ಞರು, ಸ್ಪರ್ಧಾತ್ಮಕ ಪರೀಕ್ಷೆಗಳ ಟಾಪರ್ ಗಳು, ಮನೋರಂಜನಾ ಉದ್ಯಮದ ವೃತ್ತಿಪರರು ಮತ್ತು ಧಾರ್ಮಿಕ ನಾಯಕರು ಸೇರಿದಂತೆ ವಿವಿಧ ವಲಯಗಳ ಗಣ್ಯ ವ್ಯಕ್ತಿಗಳು ಪಠ್ಯಗಳನ್ನು ಹೊರತುಪಡಿಸಿದಂತೆ ವಿದ್ಯಾರ್ಥಿಗಳಿಗೆ ತಮ್ಮ ಒಳನೋಟಗಳ ಮೂಲಕ ಸಾಕಷ್ಟು ಉತ್ಕೃಷ್ಟ ಸಂಗತಿಯನ್ನು ತಿಳಿಸಿಕೊಡುತ್ತಿದ್ದಾರೆ. ಈಗಾಗಲೇ ಮೂರು ಸಂಚಿಕೆಗಳು ಪ್ರಸಾರವಾಗಿದ್ದು, ಪ್ರತಿಯೊಂದು ಆವೃತ್ತಿಯಲ್ಲೂ ವಿದ್ಯಾರ್ಥಿಗಳಿಗೆ ತಮ್ಮ ಶೈಕ್ಷಣಿಕ ಹಾಗೂ ವೈಯಕ್ತಿಕ ಜೀವನದಲ್ಲಿ ಶ್ರೇಷ್ಠತೆಯನ್ನು ಸಾಧಿಸಲು ಅಗತ್ಯ ಸಾಧನಗಳು ಮತ್ತು ಕಾರ್ಯತಂತ್ರಗಳನ್ನು ಕಲಿಸುತ್ತಿದ್ದಾರೆ.

8ನೇ ಆವೃತ್ತಿಯ ಪರೀಕ್ಷಾ ಪೇ ಚರ್ಚಾ (ಪಿಪಿಸಿ) 2025 ಅನ್ನು ಹೊಸ ಸ್ವರೂಪದಲ್ಲಿ ಮತ್ತು ಸಂವಾದಾತ್ಮಕ ರೂಪದಲ್ಲಿ ನೀಡಲಾಗುತ್ತಿದ್ದು, ಅದಕ್ಕೆ ದೇಶಾದ್ಯಂತ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪೋಷಕರಿಂದ ವ್ಯಾಪಕ ಸ್ಪಂದನೆ ವ್ಯಕ್ತವಾಗುತ್ತಿದೆ. ಸಾಂಪ್ರದಾಯಿಕ ಟೌನ್ ಹಾಲ್ ವಿಧಾನವನ್ನು ಹೊರತುಪಡಿಸಿ, ಈ ವರ್ಷ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2025ರ ಫೆಬ್ರವರಿ 10ರಂದು ನವದೆಹಲಿಯ ಸೀನಿಕ್ ಸುಂದರ್ ನರ್ಸರಿಯಲ್ಲಿ ಸಂವಾದ ನಡೆಸುವ ಮೂಲಕ ಈ ವರ್ಷದ ಆವೃತ್ತಿಗೆ ಚಾಲನೆ ನೀಡಿದರು.

ಉದ್ಘಾಟನಾ ಸಂಚಿಕೆಯಲ್ಲಿ ಪ್ರಧಾನಮಂತ್ರಿ ಅವರು, ದೇಶಾದ್ಯಂತ 36 ವಿದ್ಯಾರ್ಥಿಗಳ ಜತೆ ಸಂವಾದ ನಡೆಸಿದರು ಮತ್ತು ಪೌಷ್ಠಿಕಾಂಶ ಮತ್ತು ಯೋಗಕ್ಷೇಮ, ಒತ್ತಡ ನಿರ್ವಹಣೆ, ಸವಾಲುಗಳನ್ನು ಎದುರಿಸುವುದು, ನಾಯಕತ್ವ ಕಲೆ, ಬಿಯಾಂಡ್ ಬುಕ್ಸ್ - 360º ಗ್ರೋತ್, ಸಕಾರಾತ್ಮಕ ಅಂಶಗಳನ್ನು ಗುರುತಿಸುವುದು ಸೇರಿದಂತೆ ಹಲವು ಒಳನೋಟಗಳ ಅಂಶಗಳ ಬಗ್ಗೆ ಸಂವಾದ ನಡೆಸಿದರು. ಅವರ ಮೌಲ್ಯಯುತ ಮಾರ್ಗದರ್ಶನ, ವಿದ್ಯಾರ್ಥಿಗಳಿಗೆ ಅತ್ಯಂತ ಧೈರ್ಯದಿಂದ ಶೈಕ್ಷಣಿಕ ಸವಾಲುಗಳನ್ನು ಎದುರಿಸಲು ವಾಸ್ತವಿಕ ಕಾರ್ಯತಂತ್ರಗಳನ್ನು ಒದಗಿಸಿದ್ದಲ್ಲದೆ, ಬೆಳವಣಿಗೆ ಮನಸ್ಥಿತಿ ಹಾಗೂ ಸಮಗ್ರ ಕಲಿಕೆಗೆ ಉತ್ತೇಜನ ನೀಡಿತು.

ಪರೀಕ್ಷಾ ಪೇ ಚರ್ಚಾ-2025 ವಿದ್ಯಾರ್ಥಿಗಳಿಗೆ ಸ್ಫೂರ್ತಿಯ ದಾರಿದೀಪವಾಗಿದೆ. ಅವರಲ್ಲಿ ಶೈಕ್ಷಣಿಕ ಮತ್ತು ಜೀವನದ ಸವಾಲುಗಳನ್ನು ಎದುರಿಸಲು ಸಕಾರಾತ್ಮಕ ಮನೋಭಾವದೊಂದಿಗೆ ವಿಶ್ವಾಸ ಮತ್ತು ಚೈತನ್ಯವನ್ನು ತುಂಬುತ್ತಿದೆ. 

 

Link to watch the 1st episode: https://www.youtube.com/watch?v=G5UhdwmEEls

Link to watch the 2nd episode: https://www.youtube.com/watch?v=DrW4c_ttmew

Link to watch the 3rd episode: https://www.youtube.com/watch?v=wgMzmDYShXw

Link to watch the 4th episode: https://www.youtube.com/watch?v=3CfR4-5v5mk

Link to watch the 5th episode: https://www.youtube.com/watch?v=3GD_SrxsAx8

Link to watch the 6th episode: https://www.youtube.com/watch?v=uhI6UbZJgEQ

Link to watch the 7th episode: https://www.youtube.com/watch?v=y9Zg7B_o8So

Link to watch the 8th episode: https://www.youtube.com/watch?v=hR9BazO6Vfo

 

*****


(Release ID: 2104663) Visitor Counter : 18