ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav g20-india-2023

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ  ಶ್ರೀ ಅಮಿತ್ ಶಾ ಅವರು ಇಂದು ಗುಜರಾತ್ ನ ಗಾಂಧಿನಗರದಲ್ಲಿ 329 ಕೋಟಿ ರೂ.ಗಳ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಉದ್ಘಾಟಿಸಿದರು ಮತ್ತು ಶಂಕುಸ್ಥಾಪನೆ ನೆರವೇರಿಸಿದರು


ಭಾರತದಲ್ಲಿ ಮೊದಲ ಬಾರಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸ್ಥಳೀಯ ಭಾಷೆಗಳಲ್ಲಿ ವೈದ್ಯಕೀಯ ವಿಜ್ಞಾನ ಶಿಕ್ಷಣವನ್ನು ಆರಂಭಿಸಿದ್ದಾರೆ

244 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ 425 ಹಾಸಿಗೆಗಳ ಆಸ್ಪತ್ರೆ ಮುಂದಿನ 25 ವರ್ಷಗಳವರೆಗೆ ಮಾನ್ಸಾ ಜನರ ಆರೋಗ್ಯ ಸಂಬಂಧಿತ ಅಗತ್ಯಗಳನ್ನು ಪೂರೈಸುತ್ತದೆ

ಇತ್ತೀಚೆಗೆ, ದಿಲ್ಲಿ ಪೊಲೀಸರು 5600 ಕೋಟಿ ರೂ.ಗಳ ಮೌಲ್ಯದ ಮಾದಕವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ ಮತ್ತು ಅದರಲ್ಲಿ ಭಾಗಿಯಾಗಿರುವ ಅಂತರರಾಷ್ಟ್ರೀಯ ಡ್ರಗ್ ಸಿಂಡಿಕೇಟ್ ನ್ನು ನಾಶ ಮಾಡಿದ್ದಾರೆ.

ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ, ಜಮ್ಮು ಮತ್ತು ಕಾಶ್ಮೀರ, ಪಂಜಾಬ್, ಹರಿಯಾಣ ಮತ್ತು ದಿಲ್ಲಿ ಸೇರಿದಂತೆ ಇಡೀ ಉತ್ತರ ಭಾರತದಲ್ಲಿ ವೇಗವಾಗಿ ಬೆಳೆಯುತ್ತಿದ್ದ ಮಾದಕವಸ್ತು ವ್ಯಾಪಾರವನ್ನು ನಾಶಪಡಿಸಿತು

ನರೇಂದ್ರ ಮೋದಿ ಸರ್ಕಾರ ಮಾತ್ರ ನಶಾ ಮುಕ್ತ ಭಾರತದ ಸಂಕಲ್ಪವನ್ನು ಸಾಧಿಸಬಹುದು

ಗುಜರಾತ್ ಸರ್ಕಾರ ಕೇವಲ 3 ವರ್ಷಗಳಲ್ಲಿ 8500 ಕೋಟಿ ರೂ.ಗಳ ಮೌಲ್ಯದ ಮಾದಕವಸ್ತುಗಳನ್ನು ವಶಪಡಿಸಿಕೊಂಡಿದೆ

ಸಮಗ್ರ ವಿಧಾನದೊಂದಿಗೆ ಜನರನ್ನು ಆರೋಗ್ಯವಂತರನ್ನಾಗಿ ಮಾಡುವ ಅಭಿಯಾನವನ್ನು ಮೋದಿ ಜೀ  ಪ್ರಾರಂಭಿಸಿದ್ದಾರೆ

ಮಾನ್ಸಾ ವೈದ್ಯಕೀಯ ಕಾಲೇಜಿನಲ್ಲಿ ಗುಜರಾತಿ ಭಾಷೆಯಲ್ಲಿ ವೈದ್ಯಕೀಯ ಶಿಕ್ಷಣವನ್ನು ಪ್ರಾರಂಭಿಸಲಾಗುವುದು

ಗುಜರಾತಿನ ಮಕ್ಕಳು ತಮ್ಮ ಸ್ವಂತ ಭಾಷೆಯಲ್ಲಿ ವೈದ್ಯಕೀಯ ಶಿಕ್ಷಣ ಪಡೆದ ನಂತರ ವೈದ್ಯರಾಗುತ್ತಾರೆ ಮತ್ತು ಅದು ಮಾನ್ಸಾದಿಂದ ಪ್ರಾರಂಭವಾಗುತ್ತದೆ

2004 ರಿಂದ 2014 ರವರೆಗಿನ 10 ವರ್ಷಗಳಲ್ಲಿ 768 ಕೋಟಿ ರೂ.ಗಳ ಮೌಲ್ಯದ 1,52,000 ಕೆಜಿ ಮಾದಕವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ, 2014 ರಿಂದ 2024 ರವರೆಗೆ ಮೋದಿ ಸರ್ಕಾರದ 10 ವರ್ಷಗಳಲ್ಲಿ 27,600 ಕೋಟಿ ರೂ.ಗಳ ಮೌಲ್ಯದ 5,43,600 ಕೆಜಿ ಮಾದಕವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ

Posted On: 04 OCT 2024 9:36PM by PIB Bengaluru

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಇಂದು ಗುಜರಾತ್ ಗಾಂಧಿನಗರದಲ್ಲಿ 329 ಕೋಟಿ ರೂ.ಗಳ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದರು ಮತ್ತು ಶಂಕುಸ್ಥಾಪನೆ ನೆರವೇರಿಸಿದರು. ಗುಜರಾತ್ ಮುಖ್ಯಮಂತ್ರಿ ಶ್ರೀ ಭೂಪೇಂದ್ರ ಪಟೇಲ್ ಸೇರಿದಂತೆ ಹಲವಾರು ಗಣ್ಯರು ಸಂದರ್ಭದಲ್ಲಿ ಉಪಸ್ಥಿತರಿದ್ದರು.

9B7A0954.JPG

ಮಾನ್ಸಾ ನಿವಾಸಿಗಳಿಗಾಗಿ 244 ಕೋಟಿ ರೂ.ಗಳ ವೆಚ್ಚದಲ್ಲಿ 425 ಹಾಸಿಗೆಗಳ ಆಸ್ಪತ್ರೆಯನ್ನು ನಿರ್ಮಿಸಲು ಗುಜರಾತ್ ಸರ್ಕಾರ ಕಾರ್ಯೋನ್ಮುಖವಾಗಿದೆ ಎಂದು ಶ್ರೀ ಅಮಿತ್ ಶಾ ತಮ್ಮ ಭಾಷಣದಲ್ಲಿ ಒತ್ತಿ ಹೇಳಿದರು. 425 ಹಾಸಿಗೆಗಳ ಆಸ್ಪತ್ರೆ ಮುಂದಿನ 25 ವರ್ಷಗಳವರೆಗೆ ಮಾನ್ಸಾ ಜನರ ಆರೋಗ್ಯ ಅಗತ್ಯಗಳನ್ನು ಪೂರೈಸುತ್ತದೆ ಎಂದು ಅವರು ಉಲ್ಲೇಖಿಸಿದರು. ಇಂದು, ಮಾನ್ಸಾ ಪುರಸಭೆಯ 10 ಅಭಿವೃದ್ಧಿ ಯೋಜನೆಗಳ ಉದ್ಘಾಟನೆ, ಶಂಕುಸ್ಥಾಪನೆ ಮತ್ತು ಇ-ಉದ್ಘಾಟನೆ ನಡೆಯುತ್ತಿದೆ, ಜೊತೆಗೆ 329 ಕೋಟಿ ರೂ.ಗಳ ಇತರ ಅಭಿವೃದ್ಧಿ ಯೋಜನೆಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನಡೆಯುತ್ತಿದೆ ಎಂದು ಅವರು ಹೇಳಿದರು.

ಮಾನ್ಸಾದಲ್ಲಿ ಸುಂದರವಾದ ಚಂದ್ರಸರ್ ಸರೋವರವನ್ನು ಅಭಿವೃದ್ಧಿಪಡಿಸಲಾಗಿದೆ ಮತ್ತು ನರ್ಮದಾ ನದಿಯಿಂದ ಸರೋವರಕ್ಕೆ ನೀರನ್ನು ಪೂರೈಸುವ ಪ್ರಯತ್ನಗಳನ್ನು ಮಾಡಲಾಗಿದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ರಾಜ್ಯದಲ್ಲಿ ಹಿಂದೆ ನಿರ್ಮಿಸಲಾದ 13 ಕೆರೆಗಳು ಸೇರಿದಂತೆ ಚಂದ್ರಡು, ಮಲನ್, ಮಲೈ ಸೇರಿದಂತೆ ಒಟ್ಟು 16 ಕೆರೆಗಳನ್ನು ಸಂಪರ್ಕಿಸುವ ಮತ್ತು ಅವುಗಳಿಗೆ ನರ್ಮದಾ ನೀರನ್ನು ಪೂರೈಸುವ ಕಾರ್ಯವು ಮಳೆಗಾಲದಲ್ಲಿ ಪೂರ್ಣಗೊಂಡಿದೆ ಎಂದು ಅವರು ಉಲ್ಲೇಖಿಸಿದರು. ಇದು ಸುತ್ತಮುತ್ತಲಿನ ಎಲ್ಲಾ ಪ್ರದೇಶಗಳಲ್ಲಿ ನೀರಿನ ಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ಕೃಷಿ ಇಳುವರಿಯನ್ನು ಸುಧಾರಿಸುತ್ತದೆ, ಇದು ರೈತರ ಸಮೃದ್ಧಿಗೆ ಕಾರಣವಾಗುತ್ತದೆ ಎಂದು ಅವರು ವಿವರಿಸಿದರು.

ಸಿವಿಲ್ ಆಸ್ಪತ್ರೆ, ಮಲನ್ ಸರೋವರದ ಸೌಂದರ್ಯೀಕರಣ, ಸಾಸ್ನಿ ಮತ್ತು ಮಲನ್ ಸರೋವರಗಳ ಕಾರ್ಯಕ್ರಮಗಳು, ರಣ್ಯಪುರದಲ್ಲಿ ಸಮುದಾಯ ಭವನ, ಪಿಲ್ವಾಯಿ-ಮಹುದಿ ರಸ್ತೆಯನ್ನು ದ್ವಿಪಥಗೊಳಿಸುವುದು ಮತ್ತು ಒಣ ತ್ಯಾಜ್ಯ ವಿಂಗಡಣೆ ಘಟಕ ಶಂಕುಸ್ಥಾಪನೆ ಯೋಜನೆಗಳಲ್ಲಿ ಸೇರಿವೆ ಎಂದು ಶ್ರೀ ಅಮಿತ್ ಶಾ ಉಲ್ಲೇಖಿಸಿದರು. ಇದಲ್ಲದೆ, ಹೊಸ ಆಸ್ಪತ್ರೆಯು ಕ್ರಿಟಿಕಲ್ ಕೇರ್ ಟ್ರಾಮಾ ಸೆಂಟರ್, ಮೂಳೆ ಕೀಲುಗಳ ಶಸ್ತ್ರಚಿಕಿತ್ಸಾ ವಿಭಾಗ (ಆರ್ಥೋಪೆಡಿಕ್ ಸರ್ಜರಿ), ಮಕ್ಕಳ ಚಿಕಿತ್ಸಾ ವಿಭಾಗ (ಪೀಡಿಯಾಟ್ರಿಕ್ ವಿಭಾಗ), ಮೆಡಿಸಿನ್, ಗೈನಕಾಲಜಿ (ಸ್ತ್ರಿ ರೋಗ ಚಿಕಿತ್ಸಾ ವಿಭಾಗ) , ಫಿಸಿಯೋಥೆರಪಿ, ಡಯಾಲಿಸಿಸ್, ಎಕ್ಸ್-ರೇ, ಸಿಟಿ ಸ್ಕ್ಯಾನ್ ಮತ್ತು ಎಂಆರ್ ಐ ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ಎಲ್ಲರಿಗೂ ಒಂದೇ ಕಟ್ಟಡದಲ್ಲಿ ಒದಗಿಸುತ್ತದೆ ಎಂದೂ ಅವರು ಹೇಳಿದರು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಾರತದಲ್ಲಿ ಮೊದಲ ಬಾರಿಗೆ ಸ್ಥಳೀಯ ಭಾಷೆಗಳಲ್ಲಿ ವೈದ್ಯಕೀಯ ವಿಜ್ಞಾನದ ಬೋಧನೆಗೆ ಚಾಲನೆ ನೀಡಿದ್ದಾರೆ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವರು ಹೇಳಿದರು. ಮಧ್ಯಪ್ರದೇಶದಲ್ಲಿ ಈಗಾಗಲೇ ಹಿಂದಿಯಲ್ಲಿ ವೈದ್ಯಕೀಯ ಕೋರ್ಸ್ಗಳು ಪ್ರಾರಂಭವಾಗಿವೆ, ಅಲ್ಲಿ 40 ಕ್ಕೂ ಹೆಚ್ಚು ವೈದ್ಯಕೀಯ ಕಾಲೇಜುಗಳು ಈಗ ಹಿಂದಿಯಲ್ಲಿ ವೈದ್ಯಕೀಯ ವಿಜ್ಞಾನ ಶಿಕ್ಷಣವನ್ನು ನೀಡುತ್ತಿವೆ ಎಂದು ಅವರು ಉಲ್ಲೇಖಿಸಿದರು. ಮಾನ್ಸಾದಲ್ಲಿ ವೈದ್ಯಕೀಯ ಕಾಲೇಜು ಪೂರ್ಣಗೊಂಡ ನಂತರ, ವೈದ್ಯಕೀಯ ವಿಜ್ಞಾನ ಶಿಕ್ಷಣವನ್ನು ಗುಜರಾತಿ ಭಾಷೆಯಲ್ಲೂ ಪ್ರಾರಂಭಿಸಲು ವ್ಯವಸ್ಥೆ ಮಾಡಲಾಗುವುದು ಎಂದು ಶ್ರೀ ಶಾ ಹೇಳಿದರು. ಈ ವ್ಯವಸ್ಥೆಯ ಅನುಷ್ಠಾನದೊಂದಿಗೆ, ಗುಜರಾತ್ ನಮ್ಮ ಮಕ್ಕಳು ತಮ್ಮ ಭಾಷೆಯಲ್ಲಿ ಶಿಕ್ಷಣ ಪಡೆಯಲು ಮತ್ತು ವೈದ್ಯರಾಗಲು ಸಾಧ್ಯವಾಗುತ್ತದೆ, ಈ ಉಪಕ್ರಮವು ಮಾನ್ಸಾದಲ್ಲಿ ಪ್ರಾರಂಭವಾಗುತ್ತದೆ ಎಂದು ಅವರು ಹೇಳಿದರು.

9B7A0983.JPG

ಕೇವಲ ಎರಡು ದಿನಗಳ ಹಿಂದೆ ದಿಲ್ಲಿ ಪೊಲೀಸರು 5,600 ಕೋಟಿ ರೂ. ಮೌಲ್ಯದ ಮಾದಕವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ ಮತ್ತು ಇದರಲ್ಲಿ ಭಾಗಿಯಾಗಿರುವ ಅಂತರರಾಷ್ಟ್ರೀಯ ಡ್ರಗ್ ಸಿಂಡಿಕೇಟ್ ಅನ್ನು ನಿರ್ಮೂಲನೆ ಮಾಡಿದ್ದಾರೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2014ರಲ್ಲಿ 'ಮಾದಕ ದ್ರವ್ಯ ಮುಕ್ತ ಭಾರತ' ಅಭಿಯಾನವನ್ನು ಆರಂಭಿಸಿದ್ದು, ಇದು ಅತ್ಯುತ್ತಮ ಫಲಿತಾಂಶಗಳನ್ನು ನೀಡಿದೆ ಎಂದರು. 2004 ರಿಂದ 2014 ರವರೆಗೆ 768 ಕೋಟಿ ರೂ. ಮೌಲ್ಯದ ಒಟ್ಟು 1,52,000 ಕೆಜಿ ಮಾದಕವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ, ಆದರೆ 2014 ರಿಂದ 2024 ರವರೆಗೆ ಮೋದಿ ಸರ್ಕಾರದ 10 ವರ್ಷಗಳಲ್ಲಿ 5,43,600 ಕೆಜಿ ತೂಕದ 27,600 ಕೋಟಿ ರೂ. ಮೌಲ್ಯದ ಮಾದಕವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂಬುದರತ್ತ  ಅವರು ಬೆಟ್ಟು ಮಾಡಿದರು.

ಶ್ರೀ ನರೇಂದ್ರ ಮೋದಿ ಅವರು ಪ್ರಧಾನಿಯಾಗುವ ಮೊದಲು, ಜಮ್ಮು ಮತ್ತು ಕಾಶ್ಮೀರ, ಪಂಜಾಬ್, ಹರಿಯಾಣ ಮತ್ತು ದಿಲ್ಲಿ ಸೇರಿದಂತೆ ಉತ್ತರ ಭಾರತದಾದ್ಯಂತ ಮಾದಕವಸ್ತು ವ್ಯಾಪಾರವು ವೇಗವಾಗಿ ವಿಸ್ತರಿಸುತ್ತಿತ್ತು ಎಂದು ಹೇಳಿದ ಕೇಂದ್ರ ಗೃಹ ಸಚಿವರು, ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಹಿಂದಿನದಕ್ಕಿಂತ 36 ಪಟ್ಟು ಹೆಚ್ಚು ಮೌಲ್ಯದ ಅಕ್ರಮ ಮಾದಕವಸ್ತುಗಳನ್ನು ವಶಪಡಿಸಿಕೊಳ್ಳುವ ಮೂಲಕ ಪಿಡುಗಿಗೆ ತೀವ್ರ ಹೊಡೆತ ನೀಡಿದೆ ಎಂದರು. ದೇಶಾದ್ಯಂತ ವಶಪಡಿಸಿಕೊಳ್ಳಲಾದ ಮಾದಕವಸ್ತುಗಳಲ್ಲಿ, ಗುಜರಾತ್ ಸರ್ಕಾರವೇ  ಕೇವಲ ಮೂರು ವರ್ಷಗಳಲ್ಲಿ 8,500 ಕೋಟಿ ರೂ.ಗಳ ಮಾದಕವಸ್ತುಗಳನ್ನು ವಶಪಡಿಸಿಕೊಂಡಿದೆ ಎಂಬುದನ್ನು  ಅವರು ಉಲ್ಲೇಖಿಸಿದರು. ನರೇಂದ್ರ ಮೋದಿ ಸರ್ಕಾರ ಮಾತ್ರ ಮಾದಕ ದ್ರವ್ಯ ಮುಕ್ತ ಭಾರತದ ಸಂಕಲ್ಪವನ್ನು ಈಡೇರಿಸಬಲ್ಲದು ಎಂದೂ ಶ್ರೀ ಶಾ ಒತ್ತಿ ಹೇಳಿದರು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಕೇಂದ್ರ ಸರ್ಕಾರ ಕಳೆದ 10 ವರ್ಷಗಳಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಹಲವಾರು ಬದಲಾವಣೆಗಳನ್ನು ಮಾಡಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಜನರನ್ನು ಆರೋಗ್ಯವಂತರನ್ನಾಗಿ ಮಾಡಲು ಪಿಎಂ ಮೋದಿ ಸಮಗ್ರ ವಿಧಾನವನ್ನು ಪ್ರಾರಂಭಿಸಿದ್ದಾರೆ ಎಂದು ಅವರು ನುಡಿದರು. ಪಿಎಂ ಮೋದಿ ಅವರು ಔಷಧಿಗಳು, ಆಸ್ಪತ್ರೆಗಳು ಅಥವಾ ಆರ್ಥಿಕ ಸಹಾಯವನ್ನು ಒದಗಿಸುವುದರ ಬಗ್ಗೆ ಮಾತ್ರ ಗಮನ ಹರಿಸಿದ್ದಲ್ಲ, ಸ್ವಚ್ಛತೆ, ಪ್ರತಿ ಮನೆಯಲ್ಲೂ ಶೌಚಾಲಯಗಳನ್ನು ನಿರ್ಮಿಸುವುದು, ಶುದ್ಧ ಕುಡಿಯುವ ನೀರನ್ನು ಖಚಿತಪಡಿಸಿಕೊಳ್ಳುವುದು ಮತ್ತು ಯೋಗವನ್ನು ಪ್ರೋತ್ಸಾಹಿಸುವಂತಹ ಪ್ರಯತ್ನಗಳನ್ನು ಉತ್ತೇಜಿಸಿದರು ಎಂದು ಶ್ರೀ ಶಾ ಒತ್ತಿ ಹೇಳಿದರು. "ಖೇಲೋ ಇಂಡಿಯಾ" ಮಕ್ಕಳು, ಯುವಜನರು ಮತ್ತು ಹದಿಹರೆಯದವರನ್ನು ಬಲಪಡಿಸಲು ಪ್ರಾರಂಭಿಸಿದೆ, ಯೋಗದ ಮೂಲಕ ಜನರ ಆರೋಗ್ಯವನ್ನು ಸುಧಾರಿಸುವ ಪ್ರಯತ್ನಗಳನ್ನು ಮಾಡಲಾಗಿದೆ ಮತ್ತು 5 ಲಕ್ಷ ರೂ.ಗಳವರೆಗೆ ಉಚಿತ ವೈದ್ಯಕೀಯ ಚಿಕಿತ್ಸೆಯನ್ನು ಒದಗಿಸುವ ಆಯುಷ್ಮಾನ್ ಭಾರತ್ ಯೋಜನೆಯಿಂದ ಲಕ್ಷಾಂತರ ಬಡ ಜನರು ಪ್ರಯೋಜನ ಪಡೆದಿದ್ದಾರೆ ಎಂದು ಅವರು ವಿವರಿಸಿದರು. ಈ ಸೌಲಭ್ಯವು ಗುಜರಾತ್ ನಲ್ಲಿ ₹ 10 ಲಕ್ಷದವರೆಗೆ ಲಭ್ಯವಿದೆ ಎಂದು ಅವರು ಹೇಳಿದರು. 70 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರಿಗೆ, ಭಾರತ ಸರ್ಕಾರ ಮತ್ತು ಗುಜರಾತ್ ಸರ್ಕಾರವು 10 ಲಕ್ಷ ರೂ.ಗಳ ಬದಲು 15 ಲಕ್ಷ ರೂ.ಗಳವರೆಗಿನ ಸಂಪೂರ್ಣ ಆರೋಗ್ಯ ವೆಚ್ಚವನ್ನು ಭರಿಸುತ್ತದೆ ಎಂದೂ ಅವರು ನುಡಿದರು.

ಮುಂದಿನ ಐದು ವರ್ಷಗಳಲ್ಲಿ 75,000 ಹೆಚ್ಚುವರಿ ಸೀಟುಗಳನ್ನು ಒದಗಿಸುವ ಮೂಲಕ ವೈದ್ಯಕೀಯ ಸೀಟುಗಳ ಸಂಖ್ಯೆಯನ್ನು ದ್ವಿಗುಣಗೊಳಿಸುವುದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಗುರಿಯಾಗಿದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಭಾರತದಂತಹ ದೊಡ್ಡ ದೇಶದಲ್ಲಿ ಆರೋಗ್ಯ ಮೂಲಸೌಕರ್ಯವನ್ನು ಬಲಪಡಿಸಲು ಸಮಗ್ರ ವಿಧಾನದ ಅಗತ್ಯವಿದೆ ಎಂದು ಒತ್ತಿ ಹೇಳಿದ ಅವರು, ಅಪೌಷ್ಟಿಕತೆಯನ್ನು ನಿರ್ಮೂಲನೆ ಮಾಡುವುದು, ಶುದ್ಧ ಕುಡಿಯುವ ನೀರನ್ನು ಒದಗಿಸುವುದು, ಯೋಗವನ್ನು ಜನರ ದೈನಂದಿನ ಜೀವನದ ಭಾಗವನ್ನಾಗಿ ಮಾಡುವುದು, ಕೈಗೆಟುಕುವ ದರದಲ್ಲಿ ಔಷಧಿಗಳ ಲಭ್ಯತೆಯನ್ನು ಖಚಿತಪಡಿಸಿಕೊಳ್ಳುವುದು ಮತ್ತು ಆರೋಗ್ಯ ರಕ್ಷಣೆಗಾಗಿ ಸಂಪೂರ್ಣ ವ್ಯವಸ್ಥೆಯನ್ನು ಸ್ಥಾಪಿಸುವಂತಹ ಕೆಲಸವನ್ನು ಪ್ರಧಾನಿ ಮೋದಿಯವರು ಮಾಡಿದ್ದಾರೆಂದರು.

 

*****



(Release ID: 2062324) Visitor Counter : 7


Read this release in: English , Gujarati