ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ
azadi ka amrit mahotsav

ಕರ್ನಾಟಕದ ಬಳ್ಳಾರಿ ಜಿಲ್ಲೆಯಿಂದ ಅನಂತಪುರ ಜಿಲ್ಲೆಯವರೆಗೆ 13.087 ಕಿಮೀ ಉದ್ದ ವ್ಯಾಪಿಸಿರುವ ರಾಷ್ಟ್ರೀಯ ಹೆದ್ದಾರಿ 150ಎ ಅಭಿವೃದ್ಧಿಗಾಗಿ ರೂ.626.01 ಕೋಟಿ ಮಂಜೂರು ಮಾಡಿದ ಶ್ರೀ ನಿತಿನ್ ಗಡ್ಕರಿ.

प्रविष्टि तिथि: 12 MAR 2024 12:46PM by PIB Bengaluru

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ಶ್ರೀ ನಿತಿನ್ ಗಡ್ಕರಿ ಅವರು ಕರ್ನಾಟಕದಲ್ಲಿ ಬಳ್ಳಾರಿ ಬೈಪಾಸ್‌ ನ 4-ಲೇನಿಂಗ್ ಪೂರ್ಣಗೊಳಿಸಲು ರೂ. 626.01 ಕೋಟಿ ಮಂಜೂರು ಮಾಡಿದ್ದಾರೆ.

ಇದು ಬಳ್ಳಾರಿಯಿಂದ ಬೈರಾಪುರದ ವರೆಗಿನ ರಾಷ್ಟ್ರೀಯ ಹೆದ್ದಾರಿ 150ಎ ಯ ವ್ಯಾಪ್ತಿಯನ್ನು ಒಳಗೊಳ್ಳುತ್ತದೆ ಹಾಗೂ ಬಳ್ಳಾರಿ ಮತ್ತು ಅನಂತಪುರ ಜಿಲ್ಲೆಗಳಾದ್ಯಂತ 13.087 ಕಿಮೀ ಉದ್ದ ವ್ಯಾಪಿಸಿದೆ.

ಬಳ್ಳಾರಿ ನಗರದಲ್ಲಿ ಸಂಚಾರ ದಟ್ಟಣೆಯನ್ನು ನಿವಾರಿಸುವ ಮತ್ತು ತರುವಾಯ ರಸ್ತೆ ಸುರಕ್ಷತೆಯನ್ನು ಹೆಚ್ಚಿಸುವ ಗುರಿಯನ್ನು ಈ ಉಪಕ್ರಮವು ಹೊಂದಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ಶ್ರೀ ನಿತಿನ್ ಗಡ್ಕರಿ ಅವರು ಹೇಳಿದರು.  ಹೆಚ್ಚುವರಿಯಾಗಿ, ಬಳ್ಳಾರಿ ಯೋಜನೆಯ ಭಾಗವಾಗಿ ವಿಶಾಲವಾದ ಹೊಸಪೇಟೆಯಿಂದ ದಕ್ಷಿಣ ಭಾಗದಲ್ಲಿ 28ಕಿಮೀ ಬೈಪಾಸ್ ಅಭಿವೃದ್ಧಿ ಕಾರ್ಯ ಈಗಾಗಲೇ ಪ್ರಗತಿಯಲ್ಲಿದೆ.


*****


(रिलीज़ आईडी: 2013745) आगंतुक पटल : 91
इस विज्ञप्ति को इन भाषाओं में पढ़ें: English , Urdu , हिन्दी , Tamil , Telugu , Telugu