ರಾಷ್ಟ್ರಪತಿಗಳ ಕಾರ್ಯಾಲಯ
2023ರ ನವೆಂಬರ್ 20ರಿಂದ 22ರವರೆಗೆ ಒಡಿಶಾ ಮತ್ತು ಆಂಧ್ರಪ್ರದೇಶಕ್ಕೆ ರಾಷ್ಟ್ರಪತಿ ಭೇಟಿ
प्रविष्टि तिथि:
19 NOV 2023 2:01PM by PIB Bengaluru
ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು 2023ರ ನವೆಂಬರ್ 20ರಿಂದ 22ರವರೆಗೆ ಒಡಿಶಾ ಮತ್ತು ಆಂಧ್ರಪ್ರದೇಶಕ್ಕೆ ಭೇಟಿ ನೀಡಲಿದ್ದಾರೆ.
ನವೆಂಬರ್ 20 ರಂದು ಬರಿಪಾಡಾದಲ್ಲಿ ಅಖಿಲ ಭಾರತ ಸಂತಾಲಿ ಬರಹಗಾರರ ಸಂಘದ 36ನೇ ವಾರ್ಷಿಕ ಸಮ್ಮೇಳನ ಮತ್ತು ಸಾಹಿತ್ಯ ಉತ್ಸವದ ಉದ್ಘಾಟನಾ ಅಧಿವೇಶನದಲ್ಲಿ ರಾಷ್ಟ್ರಪತಿಗಳು ಭಾಗವಹಿಸಲಿದ್ದಾರೆ. ಅದೇ ದಿನ ಕುಲಿಯಾನದಲ್ಲಿ ಏಕಲವ್ಯ ಮಾದರಿ ವಸತಿ ಶಾಲೆಯನ್ನು ಉದ್ಘಾಟಿಸಲಿದ್ದಾರೆ.
ನವೆಂಬರ್ 21 ರಂದು ರಾಷ್ಟ್ರಪತಿಗಳು ಪಹಾದ್ಪುರ ಗ್ರಾಮದಲ್ಲಿ ಕೌಶಲ್ಯ ತರಬೇತಿ ಕೇಂದ್ರವನ್ನು ಉದ್ಘಾಟಿಸಲಿದ್ದಾರೆ. ನಂತರ, ಅವರು ಬಾದಂಪಹಾರ್ ರೈಲ್ವೆ ನಿಲ್ದಾಣಕ್ಕೆ ಭೇಟಿ ನೀಡಲಿದ್ದು, ಅಲ್ಲಿಂದ ಅವರು ಮೂರು ಹೊಸ ರೈಲುಗಳಿಗೆ (ಬಾದಂಪಹಾರ್ - ಟಾಟಾನಗರ ಮೆಮು) ಹಸಿರು ನಿಶಾನೆ ತೋರಲಿದ್ದಾರೆ.
ಬಾದಂಪಹಾರ್-ರೂರ್ಕೆಲಾ ಸಾಪ್ತಾಹಿಕ ಎಕ್ಸ್ಪ್ರೆಸ್; ಮತ್ತು ಬಾದಂಪಹಾರ್ - ಶಾಲಿಮಾರ್ ವೀಕ್ಲಿ ಎಕ್ಸ್ಪ್ರೆಸ್; ಹೊಸ ರಾಯರಂಗಪುರ ಅಂಚೆ ವಿಭಾಗವನ್ನು ಉದ್ಘಾಟಿಸಲಿದ್ದಾರೆ; ರಾಯರಂಗಪುರ ಅಂಚೆ ವಿಭಾಗದ ಸ್ಮರಣಾರ್ಥ ಲಕೋಟೆ ಬಿಡುಗಡೆ; ಮತ್ತು ಬಾದಂಪಹಾರ್ ರೈಲ್ವೆ ನಿಲ್ದಾಣದ ಪುನರಾಭಿವೃದ್ಧಿಗೆ ಶಂಕುಸ್ಥಾಪನೆ ನೆರವೇರಿಸಿದರು. ಅವರು ಬಾದಂಪಹಾರ್-ಶಾಲಿಮಾರ್ ಎಕ್ಸ್ಪ್ರೆಸ್ನಲ್ಲಿ ಬಾದಂಪಹಾರ್ ನಿಂದ ರಾಯರಂಗಪುರಕ್ಕೆ ಪ್ರಯಾಣಿಸಲಿದ್ದಾರೆ. ಅದೇ ದಿನ ಸಂಜೆ ಬುರ್ಲಾದ ವೀರ್ ಸುರೇಂದ್ರ ಸಾಯಿ ಯುನಿವರ್ಸಿಟಿ ಆಫ್ ಟೆಕ್ನಾಲಜಿಯ 15ನೇ ವಾರ್ಷಿಕ ಘಟಿಕೋತ್ಸವದಲ್ಲಿ ರಾಷ್ಟ್ರಪತಿಗಳು ಭಾಗವಹಿಸಲಿದ್ದಾರೆ.
ನವೆಂಬರ್ 22 ರಂದು ಸಂಬಲ್ಪುರದಲ್ಲಿ ಬ್ರಹ್ಮ ಕುಮಾರಿಸ್ ಆಯೋಜಿಸಿರುವ ರಾಷ್ಟ್ರೀಯ ಶಿಕ್ಷಣ ಅಭಿಯಾನ - ನವ ಭಾರತಕ್ಕಾಗಿ ಹೊಸ ಶಿಕ್ಷಣ ಅಭಿಯಾನಕ್ಕೆ ರಾಷ್ಟ್ರಪತಿಗಳು ಚಾಲನೆ ನೀಡಲಿದ್ದಾರೆ. ನಂತರ ರಾಷ್ಟ್ರಪತಿಗಳು ಪುಟ್ಟಪರ್ತಿಗೆ ಭೇಟಿ ನೀಡಲಿದ್ದು, ಅಲ್ಲಿ ಅವರು ಶ್ರೀ ಸತ್ಯ ಸಾಯಿ ಉನ್ನತ ಶಿಕ್ಷಣ ಸಂಸ್ಥೆಯ 42ನೇ ಘಟಿಕೋತ್ಸವದಲ್ಲಿ ಭಾಗವಹಿಸಲಿದ್ದಾರೆ.
****
(रिलीज़ आईडी: 1978043)
आगंतुक पटल : 148