ಕಲ್ಲಿದ್ದಲು ಸಚಿವಾಲಯ

​​​​​​​2025-26ರ ವೇಳೆಗೆ ಕಲ್ಲಿದ್ದಲು ಆಮದು ನಿಲ್ಲಿಸಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತಿದೆ; 2030ರ ವೇಳೆಗೆ ಸುರಂಗ ಗಣಿಗಳಿಂದ 100 ಮಿಲಿಯನ್ ಟನ್ ಉತ್ಪಾದನೆಗೆ ಒತ್ತು ನೀಡಲಾಗಿದೆ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ


ಕಲ್ಲಿದ್ದಲು ಸಚಿವಾಲಯವು 8ನೇ ಸುತ್ತಿನ ವಾಣಿಜ್ಯ ಕಲ್ಲಿದ್ದಲು ಗಣಿಗಳ ಹರಾಜನ್ನು ಪ್ರಾರಂಭಿಸಿದೆ

ಜಾರ್ಖಂಡ್, ಒಡಿಶಾ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ ಮತ್ತು ಬಿಹಾರದ 39 ಗಣಿಗಳನ್ನು ಹರಾಜು ಮಾಡಲಾಗುತ್ತದೆ

ಸಂರಕ್ಷಿತ ಪ್ರದೇಶಗಳು ಮತ್ತು ವನ್ಯಜೀವಿ ಅಭಯಾರಣ್ಯ ಅಡಿಯಲ್ಲಿ ಬರುವ ಗಣಿಗಳನ್ನು ಹರಾಜಿನಿಂದ ಹೊರಗಿಡಲಾಗಿದೆ

Posted On: 15 NOV 2023 5:39PM by PIB Bengaluru

ಕಲ್ಲಿದ್ದಲು ಸಚಿವಾಲಯವು ಎಂಟನೇ ಸುತ್ತಿನ ವಾಣಿಜ್ಯ ಕಲ್ಲಿದ್ದಲು ಗಣಿಗಳ ಹರಾಜು ಪ್ರಕ್ರಿಯೆಯನ್ನು ಇಂದು ಇಲ್ಲಿ ಪ್ರಾರಂಭಿಸಿತು. ಒಟ್ಟು 39 ಕಲ್ಲಿದ್ದಲು ಗಣಿಗಳು ಆಫರ್ ನಲ್ಲಿವೆ. ವರ್ಚುವಲ್ ಮೂಲಕ ಹರಾಜನ್ನು ಉದ್ಘಾಟಿಸಿದ ಕೇಂದ್ರ ಕಲ್ಲಿದ್ದಲು, ಗಣಿ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಶ್ರೀ ಪ್ರಲ್ಹಾದ್ ಜೋಶಿ, 2025-26ರ ವೇಳೆಗೆ ಕಲ್ಲಿದ್ದಲು ಆಮದನ್ನು ನಿಲ್ಲಿಸಲು ಎಲ್ಲಾ ಪ್ರಯತ್ನಗಳು ನಡೆಯುತ್ತಿವೆ ಎಂದು ಹೇಳಿದರು. ಸಾಮೂಹಿಕ ಉತ್ಪಾದನಾ ತಂತ್ರಜ್ಞಾನವನ್ನು ನಿಯೋಜಿಸುವ ಮೂಲಕ ಭೂಗತ ಗಣಿಗಳಿಂದ (ಯುಜಿ) ಕಲ್ಲಿದ್ದಲು ಉತ್ಪಾದನೆಯನ್ನು 2030 ರ ವೇಳೆಗೆ 100 ಮಿಲಿಯನ್ ಟನ್ (ಎಂಟಿ) ಗೆ ಹೆಚ್ಚಿಸಲಾಗುವುದು ಎಂದು ಅವರು ಹೇಳಿದ್ದಾರೆ.

ಹರಾಜು ಹಾಕಲಾಗುತ್ತಿರುವ ಗಣಿಗಳು ಕಲ್ಲಿದ್ದಲು ಹೊಂದಿರುವ ರಾಜ್ಯಗಳಾದ ಜಾರ್ಖಂಡ್, ಒಡಿಶಾ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ ಮತ್ತು ಬಿಹಾರದಲ್ಲಿ ಹರಡಿಕೊಂಡಿವೆ. ಈ ಗಣಿಗಳು ಸಿಎಂಎಸ್ಪಿ ಕಾಯ್ದೆ ಮತ್ತು ಎಂಎಂಡಿಆರ್ ಕಾಯ್ದೆಯಡಿ ಬರುತ್ತವೆ. 39 ಕಲ್ಲಿದ್ದಲು ಗಣಿಗಳ ಪೈಕಿ ನಾಲ್ಕು ಗಣಿಗಳನ್ನು ಸಿಎಂಎಸ್ಪಿ/ ಎಂಎಂಡಿಆರ್ ಕಾಯ್ದೆಯಡಿ 7ನೇಸುತ್ತಿನ2ನೇಪ್ರಯತ್ನದ ಅಡಿಯಲ್ಲಿನೀಡಲಾಗುತ್ತಿದೆ. 8ನೇಸುತ್ತಿನಲ್ಲಿನೀಡಲಾಗುತ್ತಿರುವ 35 ಕಲ್ಲಿದ್ದಲು ಗಣಿಗಳ ಪೈಕಿ 16 ಹೊಸ ಗಣಿಗಳಾಗಿದ್ದು, 19 ಗಣಿಗಳನ್ನು ಹಿಂದಿನ ಹಂತಗಳಿಂದ ಹೊರತೆಗೆಯಲಾಗುತ್ತಿದೆ. 
ಕಲ್ಲಿದ್ದಲು ವಲಯವು ವೇಗವಾಗಿ ಬೆಳೆಯುತ್ತದೆ ಮತ್ತು ದೇಶದ ಹೆಚ್ಚುತ್ತಿರುವ ಇಂಧನ ಬೇಡಿಕೆಯನ್ನು ಪೂರೈಸಲು ಸಾಧ್ಯವಾಗುತ್ತದೆ ಎಂದು ಖಚಿತಪಡಿಸಿಕೊಳ್ಳಲು ಕಲ್ಲಿದ್ದಲು ಸಚಿವಾಲಯವು ಸರಣಿ ಸುಧಾರಣೆಗಳನ್ನು ಕೈಗೊಂಡಿದೆ. 8ನೇ ಸುತ್ತಿನಲ್ಲಿಯೂ ಸಂರಕ್ಷಿತ ಪ್ರದೇಶಗಳು, ವನ್ಯಜೀವಿ ಅಭಯಾರಣ್ಯಗಳು, ನಿರ್ಣಾಯಕ ಆವಾಸಸ್ಥಾನಗಳು, 40% ಕ್ಕಿಂತ ಹೆಚ್ಚು ಅರಣ್ಯ ಪ್ರದೇಶವನ್ನು ಹೊಂದಿರುವ ಗಣಿಗಳು, ಹೆಚ್ಚು ನಿರ್ಮಿಸಲಾದ ಪ್ರದೇಶ ಇತ್ಯಾದಿಗಳನ್ನು ಹೊರಗಿಡಲಾಗಿದೆ. ಕಲ್ಲಿದ್ದಲು ಗಣಿಯ ಆರಂಭಿಕ ಅಭಿವೃದ್ಧಿಗಾಗಿ ದಟ್ಟವಾದ ಜನವಸತಿ, ಹೆಚ್ಚಿನ ಹಸಿರು ಹೊದಿಕೆ ಅಥವಾ ನಿರ್ಣಾಯಕ ಮೂಲಸೌಕರ್ಯ ಇತ್ಯಾದಿಗಳಿದ್ದ ಕೆಲವು ಕಲ್ಲಿದ್ದಲು ಗಣಿಗಳ ಬ್ಲಾಕ್ ಗಡಿಗಳನ್ನು ಮಾರ್ಪಡಿಸಲಾಗಿದೆ.

ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಕಲ್ಲಿದ್ದಲು ಸಚಿವಾಲಯದ ಕಾರ್ಯದರ್ಶಿ ಶ್ರೀ ಅಮೃತ್ ಲಾಲ್ ಮೀನಾ, ಕ್ಯಾಪ್ಟಿವ್ / ವಾಣಿಜ್ಯ ಕಲ್ಲಿದ್ದಲು ಗಣಿಗಳು ಒಟ್ಟಾರೆ ಉತ್ಪಾದನೆಗೆ ಗಮನಾರ್ಹ ಕೊಡುಗೆ ನೀಡುತ್ತಿವೆ ಎಂದು ಹೇಳಿದರು. ೩೯ ಗಣಿಗಳನ್ನು ಹರಾಜಿಗೆ ನೀಡುವ ಮೊದಲು ವ್ಯವಸ್ಥಿತ ಸಮೀಕ್ಷೆಗಳನ್ನು ನಡೆಸಲಾಗಿದೆ ಎಂದು ಅವರು ಹೇಳಿದರು. ಗಣಿಗಳಿಂದ ಕಲ್ಲಿದ್ದಲನ್ನು ತ್ವರಿತವಾಗಿ ಸ್ಥಳಾಂತರಿಸಲು, ರೈಲು ಸಂಪರ್ಕವನ್ನು ಹೆಚ್ಚಿಸಲಾಗುತ್ತಿದೆ ಮತ್ತು ಮತ್ತಷ್ಟು ಸೇರಿಸಲಾಗುತ್ತಿದೆ ಎಂದು ಶ್ರೀ ಮೀನಾ ಹೇಳಿದರು.

ಇದಕ್ಕೂ ಮುನ್ನ ಅತಿಥಿಗಳು ಮತ್ತು ಸಂಭಾವ್ಯ ಬಿಡ್ಡು ದಾರರನ್ನು ಸ್ವಾಗತಿಸಿದ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಮತ್ತು ನಾಮನಿರ್ದೇಶಿತ ಅಧಿಕಾರಿ ಶ್ರೀ ಎಂ.ನಾಗರಾಜು ಅವರು ದೇಶೀಯ ಕಲ್ಲಿದ್ದಲು ಉತ್ಪಾದನೆಯನ್ನು ಮತ್ತಷ್ಟು ಹೆಚ್ಚಿಸುವ ಅಗತ್ಯವನ್ನು ಒತ್ತಿ ಹೇಳಿದರು. ಸಚಿವಾಲಯವು ಇತ್ತೀಚೆಗೆ ಸರಣಿ ಸುಧಾರಣೆಗಳನ್ನು ಪ್ರಾರಂಭಿಸಿದೆ ಎಂದು ಅವರು ಒತ್ತಿ ಹೇಳಿದರು. ಮುಂಬರುವ ದಶಕಗಳಲ್ಲಿಯೂ ದೇಶೀಯ ಕಲ್ಲಿದ್ದಲು ಬೇಡಿಕೆ ಹೆಚ್ಚಾಗಲಿದೆ.  ಆದ್ದರಿಂದ, ಕಲ್ಲಿದ್ದಲು ಕ್ಷೇತ್ರದಲ್ಲಿನ ಹೂಡಿಕೆಯು ಉತ್ತಮ ಆದಾಯವನ್ನು ನೀಡುತ್ತದೆ ಎಂದು ಅವರು ಹೇಳಿದರು.

ಹರಾಜಿಗಾಗಿ ಟೆಂಡರ್ ದಾಖಲೆಗಳ ಮಾರಾಟದ ಪ್ರಾರಂಭವು ಇಂದಿನಿಂದ ಅಂದರೆ ನವೆಂಬರ್ 15, 2023 ರಿಂದ ಪ್ರಾರಂಭವಾಗಲಿದೆ. ಗಣಿಗಳ ವಿವರಗಳು, ಹರಾಜು ನಿಯಮಗಳು, ಕಾಲಮಿತಿ ಇತ್ಯಾದಿಗಳನ್ನು ಎಂಎಸ್ ಟಿಸಿ ಹರಾಜು ವೇದಿಕೆಯಲ್ಲಿ ಪಡೆಯಬಹುದು. ಶೇಕಡಾವಾರು ಆದಾಯದ ಪಾಲು ಆಧಾರದ ಮೇಲೆ ಪಾರದರ್ಶಕ ಎರಡು ಹಂತದ ಪ್ರಕ್ರಿಯೆಯ ಮೂಲಕ ಆನ್ ಲೈನ್ ನಲ್ಲಿ ಹರಾಜು ನಡೆಯಲಿದೆ.

ವಾಣಿಜ್ಯ ಕಲ್ಲಿದ್ದಲು ಗಣಿ ಹರಾಜಿಗಾಗಿ ಕಲ್ಲಿದ್ದಲು ಸಚಿವಾಲಯದ ಏಕೈಕ ವಹಿವಾಟು ಸಲಹೆಗಾರರಾಗಿರುವ ಎಸ್ಬಿಐ ಕ್ಯಾಪಿಟಲ್ ಮಾರ್ಕೆಟ್ಸ್ ಲಿಮಿಟೆಡ್ ಹರಾಜು ಪ್ರಕ್ರಿಯೆಯನ್ನು ನಡೆಸಲು ಸಚಿವಾಲಯಕ್ಕೆ ಸಹಾಯ ಮಾಡುತ್ತಿದೆ.

*****



(Release ID: 1977354) Visitor Counter : 64


Read this release in: Hindi , Punjabi , English , Urdu