ಕಲ್ಲಿದ್ದಲು ಸಚಿವಾಲಯ
azadi ka amrit mahotsav

ಕಲ್ಲಿದ್ದಲು ಗಣಿ ಹರಾಜಿನಿಂದ ಬಂದ 704 ಕೋಟಿ ರೂ.ಗಳನ್ನು ರಾಜ್ಯ ಸರ್ಕಾರಗಳಿಗೆ ವರ್ಗಾಯಿಸಿದ ಕಲ್ಲಿದ್ದಲು ಸಚಿವಾಲಯ


ಛತ್ತೀಸ್ ಗಢ, ಜಾರ್ಖಂಡ್, ಮಧ್ಯಪ್ರದೇಶ, ಮಹಾರಾಷ್ಟ್ರ, ಒಡಿಶಾ ಮತ್ತು ಪಶ್ಚಿಮ ಬಂಗಾಳಕ್ಕೆ ಇದರ ಲಾಭ

ಮುಂದಿನ ಮೂರು ಕಂತುಗಳನ್ನು ಬಿಡ್ ದಾರರು ನೇರವಾಗಿ ರಾಜ್ಯಗಳಿಗೆ ನೀಡಬೇಕು

Posted On: 03 AUG 2023 12:32PM by PIB Bengaluru

ಕಲ್ಲಿದ್ದಲು ಸಚಿವಾಲಯವು ಕಲ್ಲಿದ್ದಲು ಗಣಿಗಳ ಹರಾಜಿನಿಂದ ಬಂದ 704 ಕೋಟಿ ರೂ.ಗಳನ್ನು ಛತ್ತೀಸ್ ಗಢ, ಜಾರ್ಖಂಡ್, ಮಧ್ಯಪ್ರದೇಶ, ಮಹಾರಾಷ್ಟ್ರ, ಒಡಿಶಾ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಿಗೆ ವರ್ಗಾಯಿಸಿದೆ. ಈ ಹಣಕಾಸು ವರ್ಗಾವಣೆಯು ಈ ರಾಜ್ಯಗಳ ಅಭಿವೃದ್ಧಿಯ ಬೆಳವಣಿಗೆಯನ್ನು ಸಬಲೀಕರಣಗೊಳಿಸಲು ಮತ್ತು ಬೆಂಬಲಿಸಲು ಗಣನೀಯ ಉಪಕ್ರಮವನ್ನು ಸೂಚಿಸುತ್ತದೆ.

ಹಂಚಿಕೆಯಾದ 704 ಕೋಟಿ ರೂ.ಗಳ ಮೊತ್ತವು 18 ಕಲ್ಲಿದ್ದಲು ಗಣಿಗಳಿಗೆ ಮುಂಗಡ ಮೊತ್ತದ ಮೊದಲ ಕಂತನ್ನು ಪ್ರತಿನಿಧಿಸುತ್ತದೆ. ಇದನ್ನು 6 ನೇ ಸುತ್ತು ಮತ್ತು 5 ನೇ ಸುತ್ತಿನ ವಾಣಿಜ್ಯ ಕಲ್ಲಿದ್ದಲು ಗಣಿ ಹರಾಜಿನ 2 ನೇ ಪ್ರಯತ್ನದಲ್ಲಿ ಯಶಸ್ವಿಯಾಗಿ ಹರಾಜು ಮಾಡಲಾಗಿದೆ.

ವರ್ಗಾವಣೆಯಾದ ಮೊತ್ತದ ರಾಜ್ಯವಾರು ವಿವರಗಳು ಈ ಕೆಳಗಿನಂತಿವೆ:

 

ಕಲ್ಲಿದ್ದಲು ಗಣಿ ಅಭಿವೃದ್ಧಿ ಮತ್ತು ಉತ್ಪಾದನಾ ಒಪ್ಪಂದದ (ಸಿಎಂಡಿಪಿಎ) ಸುಧಾರಣೆಯು ಈ ಮಹತ್ವದ ಬೆಳವಣಿಗೆಗೆ ದಾರಿ ಮಾಡಿಕೊಟ್ಟಿತು. ಸಿಎಂಡಿಪಿಎ ಪ್ರಕಾರ, ಯಶಸ್ವಿ ಬಿಡ್ ದಾರರು ಮುಂಗಡ ಮೊತ್ತದ ಮೊದಲ ಕಂತನ್ನು ಕಲ್ಲಿದ್ದಲು ಸಚಿವಾಲಯಕ್ಕೆ ಸಲ್ಲಿಸಿದ್ದಾರೆ. ವಿಶೇಷವೆಂದರೆ, ಉಳಿದ ಮೂರು ಕಂತುಗಳನ್ನು ಬಿಡ್ ದಾರರು ನೇರವಾಗಿ ಆಯಾ ರಾಜ್ಯ ಸರ್ಕಾರಗಳಿಗೆ ಸಲ್ಲಿಸುತ್ತಾರೆ.  ಇದು ಈ ರಾಜ್ಯಗಳ ಅಭಿವೃದ್ಧಿಗೆ ಅವರ ಕೊಡುಗೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ.

ಈ ಗಣನೀಯ ಪ್ರಮಾಣದ ಆರ್ಥಿಕ ಒಳಹರಿವನ್ನು ರಾಜ್ಯ ಸರ್ಕಾರಗಳು ತಮ್ಮ ಪ್ರದೇಶಗಳಲ್ಲಿ ಅಭಿವೃದ್ಧಿಗೆ ಇಂಧನವಾಗಿ ಬಳಸುತ್ತವೆ. ಇದು ಮೂಲಸೌಕರ್ಯ ಅಭಿವೃದ್ಧಿ, ಶೈಕ್ಷಣಿಕ ಸೌಲಭ್ಯಗಳು, ಆರೋಗ್ಯ ಸೇವೆಗಳು ಮತ್ತು ವಿವಿಧ ಕಲ್ಯಾಣ ಉಪಕ್ರಮಗಳಲ್ಲಿ ಕಾರ್ಯತಂತ್ರದ ಹೂಡಿಕೆಗಳನ್ನು ಶಕ್ತಗೊಳಿಸುತ್ತದೆ, ಸಮುದಾಯಗಳನ್ನು ಉನ್ನತೀಕರಿಸುತ್ತದೆ ಮತ್ತು ಒಟ್ಟಾರೆ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.

ವಾಣಿಜ್ಯ ಕಲ್ಲಿದ್ದಲು ಗಣಿಗಾರಿಕೆಯ ಪ್ರಾರಂಭದಿಂದಲೂ, ಕಲ್ಲಿದ್ದಲು ವಲಯವು ರಾಜ್ಯ ಸರ್ಕಾರಗಳಿಗೆ ಗಮನಾರ್ಹವಾಗಿ ಆದಾಯವನ್ನು ನೀಡುತ್ತಿದೆ. ಇದಲ್ಲದೆ, ಕಲ್ಲಿದ್ದಲು ಗಣಿಗಳು ಕಾರ್ಯರೂಪಕ್ಕೆ ಬಂದ ನಂತರ, ಅವು ರಾಯಧನ ಮತ್ತು ಮಾಸಿಕ ಪ್ರೀಮಿಯಂಗಳ ಮೂಲಕ ರಾಜ್ಯಗಳ ಸಮೃದ್ಧಿಗೆ ಕೊಡುಗೆ ನೀಡುತ್ತವೆ. ಈ ಗಣಿಗಳಿಂದ ಉತ್ಪತ್ತಿಯಾಗುವ ಆದಾಯವನ್ನು ರಾಜ್ಯಗಳು ಅಗತ್ಯ ಕಲ್ಯಾಣ ಕಾರ್ಯಕ್ರಮಗಳಿಗೆ ತಮ್ಮ ಆರ್ಥಿಕ ಸಾಮರ್ಥ್ಯವನ್ನು ಬಲಪಡಿಸಲು, ಅಂಚಿನಲ್ಲಿರುವ ಸಮುದಾಯಗಳನ್ನು ಮೇಲೆತ್ತಲು ಮತ್ತು ಇತರ ಪ್ರಮುಖ ಅಭಿವೃದ್ಧಿ ಯೋಜನೆಗಳನ್ನು ಬೆಂಬಲಿಸಲು ಬಳಸಬಹುದು.

****

 


(Release ID: 1945373)