ಗೃಹ ವ್ಯವಹಾರಗಳ ಸಚಿವಾಲಯ

ಧಾರವಾಡದಲ್ಲಿಂದು ರಾಷ್ಟ್ರೀಯ ವಿಧಿ ವಿಜ್ಞಾನ ವಿಶ್ವವಿದ್ಯಾಲಯದ ಕರ್ನಾಟಕ ಕ್ಯಾಂಪಸ್ ಗೆ ಶಂಕುಸ್ಥಾಪನೆ ನೆರವೇರಿಸಿದ ಕೇಂದ್ರ ಗೃಹ ಸಚಿವ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಪ್ರಯತ್ನದಿಂದಾಗಿ, ಮುಂದಿನ ಐದು ವರ್ಷಗಳಲ್ಲಿ ಭಾರತವು ವಿಶ್ವದಲ್ಲೇ ಗರಿಷ್ಠ ಸಂಖ್ಯೆಯ ವಿಧಿವಿಜ್ಞಾನ ವಿಜ್ಞಾನ ತಜ್ಞರನ್ನು ಹೊಂದಲಿದೆ

2002 ರಲ್ಲಿ, ಶ್ರೀ ನರೇಂದ್ರ ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾದಾಗ, 12 ನೇ ತರಗತಿಯ ನಂತರ ನೇರವಾಗಿ ಮಕ್ಕಳಿಗೆ ವಿಧಿವಿಜ್ಞಾನ ಕ್ಷೇತ್ರದಲ್ಲಿ ಶಿಕ್ಷಣವನ್ನು ಒದಗಿಸಲು ಗುಜರಾತ್ ನಲ್ಲಿ ಗುಜರಾತ್ ವಿಧಿವಿಜ್ಞಾನ ವಿಶ್ವವಿದ್ಯಾಲಯವನ್ನು ಸ್ಥಾಪಿಸಲು ನಿರ್ಧರಿಸಿದರು

ಅಪರಾಧ ಜಗತ್ತು ಬಹಳ ವೇಗವಾಗಿ ಬದಲಾಗುತ್ತಿದ್ದು, ಅಪರಾಧಿಗಳು ಪೊಲೀಸರಿಗಿಂತ ಎರಡು ಹೆಜ್ಜೆ ಮುಂದಿದ್ದಾರೆ. ಪೊಲೀಸರು ಅಪರಾಧಿಗಳಿಗಿಂತ ಎರಡು ಹೆಜ್ಜೆ ಮುಂದಿಲ್ಲದಿದ್ದರೆ  ಅಪರಾಧ ತಡೆ ಸಾಧ್ಯವಿಲ್ಲ 

6 ವರ್ಷಕ್ಕಿಂತ ಹೆಚ್ಚು ಕಾಲ ಶಿಕ್ಷೆ ವಿಧಿಸಬಹುದಾದ ಅಪರಾಧಗಳಿಗೆ ವಿಧಿವಿಜ್ಞಾನ ತನಿಖೆಯನ್ನು ಕಡ್ಡಾಯಗೊಳಿಸಿದ ದೆಹಲಿ ನಂತರ ಎರಡನೇ ರಾಜ್ಯ ಕರ್ನಾಟಕವಾಗಿದೆ

ಅಪರಾಧಿಗಳಿಗಿಂತ ಪೊಲೀಸರು ಎರಡು ಹೆಜ್ಜೆ ಮುಂದೆ ಇದ್ದಾಗ, ಶಿಕ್ಷೆಯಾಗುವ ದರ ಹೆಚ್ಚಾಗುತ್ತದೆ, ವೈಜ್ಞಾನಿಕ ತಂತ್ರಗಳನ್ನು ಬಳಸುವ ಮೂಲಕ ಎನ್ಎಫ್ಎಸ್.ಯು ಇದಕ್ಕೆ ನೆರವಾಗಬಹುದು.

ಕಾನೂನು ಮತ್ತು ಸುವ್ಯವಸ್ಥೆಯನ್ನು ಬಲಪಡಿಸಬೇಕಾದರೆ, ಅದರ ಮೂರು ಭಾಗಗಳನ್ನು ಬಲಪಡಿಸಬೇಕು: ಪೊಲೀಸರ ಕಾರ್ಯವ್ಯಾಪ್ತಿಯ ಕಾನೂನು ಮತ್ತು ಸುವ್ಯವಸ್ಥೆ, ಅಪರಾಧ ತನಿಖೆ, ಇದರಲ್ಲಿ ವಿಧಿವಿಜ್ಞಾನವೂ ಪ್ರಮುಖ ಪಾತ್ರ ವಹಿಸುತ್ತದೆ ಮತ್ತು ನ್ಯಾಯಾಂಗ ವ್ಯವಸ್ಥೆ ಬಲಪಡಿಸುವುದಾಗಿದೆ

ಇದು ಮೂರನೇ ಹಂತದ ಹಿಂಸೆ ನೀಡುವ ಯುಗವಲ್ಲ, ನಾವು ವೈಜ್ಞಾನಿಕ ಸಂಶೋಧನೆ ಮತ್ತು ತಂತ್ರಜ್ಞಾನದ ಆಧಾರದ ಮೇಲೆ ಮಾತ್ರ ತನಿಖೆ ಮಾಡಬೇಕು

ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿಯನ್ನು ಸುಧಾರಿಸಬೇಕಾದರೆ, ನಾವು ನಮ್ಮ ಶಿಕ್ಷೆಯಾಗುವ ಪ್ರಮಾಣವನ್ನು ಹೆಚ್ಚಿಸಬೇಕು ಮತ್ತು ಅಪರಾಧ ನ್ಯಾಯ ವ್ಯವಸ್ಥೆಯನ್ನು ವಿಧಿವಿಜ್ಞಾನ ನಡೆಸಿದ ತನಿಖೆಯೊಂದಿಗೆ ಸಂಯೋಜಿಸಬೇಕು.

ದೇಶದ ಎಲ್ಲಾ ರಾಜ್ಯಗಳಲ್ಲಿ ರಾಷ್ಟ್ರೀಯ ವಿಧಿವಿಜ್ಞಾನ ವಿಶ್ವವಿದ್ಯಾಲಯದ ಕ್ಯಾಂಪಸ್ ಗಳನ್ನು ತೆರೆದ ನಂತರ, ನಾವು 10,000 ತಜ್ಞರನ್ನು ಪಡೆಯುತ್ತೇವೆ, ಅವರು ಅನೇಕ ವರ್ಷಗಳವರೆಗೆ ಅಪರಾಧ ನ್ಯಾಯ ವ್ಯವಸ್ಥೆಯನ್ನು ಬಲಪಡಿಸುವಲ್ಲಿ ದೇಶಕ್ಕೆ ಸೇವೆ ಸಲ್ಲಿಸುತ್ತಾರೆ.

ವಿಧಿವಿಜ್ಞಾನ ವಿಶ್ವವಿದ್ಯಾಲಯವು ಮಕ್ಕಳಿಗೆ ಶಿಕ್ಷಣ ನೀಡಲು ಮತ್ತು ತರಬೇತಿ ಪಡೆದ ಮಾನವ ಸಂಪನ್ಮೂಲವನ್ನು ಸಿದ್ಧಪಡಿಸಲು ಮಾತ್ರ ಶ್ರಮಿಸುವುದಲ್ಲದೆ ವಿಧಿವಿಜ್ಞಾನ ಮೂಲಸೌಕರ್ಯವನ್ನು ಬಲಪಡಿಸಲೂ ಸಹಾಯ ಮಾಡುತ್ತದೆ.

Posted On: 28 JAN 2023 6:43PM by PIB Bengaluru

ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ಧಾರವಾಡದಲ್ಲಿಂದು ರಾಷ್ಟ್ರೀಯ ವಿಧಿ ವಿಜ್ಞಾನ ವಿಶ್ವವಿದ್ಯಾಲಯದ ಕರ್ನಾಟಕ ಕ್ಯಾಂಪಸ್ ಗೆ ಶಂಕುಸ್ಥಾಪನೆ ನೆರವೇರಿಸಿದರು. ಕರ್ನಾಟಕದ ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ ಮತ್ತು ಕೇಂದ್ರ ಸಚಿವ ಶ್ರೀ ಪ್ರಲ್ಹಾದ್ ಜೋಶಿ ಸೇರಿದಂತೆ ಹಲವಾರು ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

 Description: Description: C:\Users\raajeev\Desktop\HM\28.01.2023\1.jpeg

ತಮ್ಮ ಭಾಷಣದಲ್ಲಿ, ಶ್ರೀ ಅಮಿತ್ ಶಾ, ಕರ್ನಾಟಕದ ಪ್ರತಿಯೊಂದು ಜಿಲ್ಲೆಯೂ ಈ ರಾಜ್ಯಕ್ಕೆ ಮಾತ್ರವಲ್ಲದೆ ಇಡೀ ಭಾರತಕ್ಕೆ ಸಾಂಸ್ಕೃತಿಕ ಪರಂಪರೆಯಾಗಿದೆ ಎಂದು ಹೇಳಿದರು. 1857ಕ್ಕೂ ಮುಂಚೆಯೇ ಕರ್ನಾಟಕವು ಸ್ವಾತಂತ್ರ್ಯ ಹೋರಾಟಕ್ಕೆ ಕೊಡುಗೆ ನೀಡಿದೆ ಮತ್ತು ಇಲ್ಲಿಂದ ಅನೇಕ ವ್ಯಕ್ತಿಗಳು ಭಾರತದಾದ್ಯಂತದ ಸ್ವಾತಂತ್ರ್ಯ ಹೋರಾಟಗಾರರಿಗೆ ಸ್ಫೂರ್ತಿ ನೀಡಿದ್ದಾರೆ ಎಂದು ಅವರು ಹೇಳಿದರು. ಧಾರವಾಡದ ಅಕ್ಷರಶಃ ಅರ್ಥವೇನೆಂದರೆ ಸುದೀರ್ಘ ಪ್ರಯಾಣದ ಮಧ್ಯೆ ವಿಶ್ರಾಂತಿ ಪಡೆವ ಸ್ಥಳ  ಎಂದು. ಇಂದು ರಾಷ್ಟ್ರೀಯ ವಿಧಿವಿಜ್ಞಾನ ವಿಶ್ವವಿದ್ಯಾಲಯದ ಕ್ಯಾಂಪಸ್ ನ ಭೂಮಿಪೂಜೆಯೊಂದಿಗೆ, ಇದು ಎರಡು ಹೆಜ್ಜೆ ಮುಂದೆ ಹೋಗಿ ದೇಶದ ಶಿಕ್ಷಣ ಕ್ಷೇತ್ರದಲ್ಲಿ ಕರ್ನಾಟಕದ ಕೊಡುಗೆಗೆ ಹೆಚ್ಚಿನ ವೈಭವವನ್ನು ನೀಡುತ್ತದೆ ಎಂದು ಶ್ರೀ ಶಾ ಹೇಳಿದರು.

 Description: Description: C:\Users\raajeev\Desktop\HM\28.01.2023\2.jpeg

ನಮ್ಮ ದೇಶದಲ್ಲಿ ವಿಧಿ ವಿಜ್ಞಾನ ವಿಭಾಗವನ್ನು ಪ್ರಾರಂಭಿಸಿದ ಕೀರ್ತಿ ಮಾಜಿ ಕೇಂದ್ರ ಗೃಹ ಸಚಿವ ಶ್ರೀ ಲಾಲ್ ಕೃಷ್ಣ ಅಡ್ವಾಣಿ ಅವರಿಗೆ ಸಲ್ಲುತ್ತದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. 2002 ರಲ್ಲಿ, ಶ್ರೀ ಅಡ್ವಾಣಿ ಅವರು ವಿಧಿ ವಿಜ್ಞಾನ ಸೇವೆಗಳ ನಿರ್ದೇಶನಾಲಯವನ್ನು ಸ್ಥಾಪಿಸಿದರು ಮತ್ತು ಈ ವಿಷಯದ ಮೇಲೆ ಗಮನಹರಿಸಿದರು. ಅದೇ ವೇಳೆ ಶ್ರೀ ನರೇಂದ್ರ ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದರು, ಅವರು ವಿಶ್ವದ ಅತ್ಯುತ್ತಮ ವಿಧಿವಿಜ್ಞಾನ ಪ್ರಯೋಗಾಲಯವನ್ನು ಸ್ಥಾಪಿಸಲು ಕ್ರಮ ಕೈಗೊಂಡರು ಎಂದು ಶ್ರೀ ಶಾ ಹೇಳಿದರು. ಈ ಕಲ್ಪನೆಯನ್ನು ಮುಂದಕ್ಕೆ ತೆಗೆದುಕೊಂಡು ಹೋದಾಗ, ಈ ವಿಷಯದಲ್ಲಿ ತಜ್ಞರ ದೊಡ್ಡ ಕೊರತೆ ಇತ್ತು ಎಂದು ಅವರು ಹೇಳಿದರು. ವಿಧಿವಿಜ್ಞಾನ ತಜ್ಞರು ಲಭ್ಯವಿಲ್ಲದಿದ್ದರೆ, ಅಪರಾಧ ನ್ಯಾಯ ವ್ಯವಸ್ಥೆಯಲ್ಲಿ ವಿಧಿವಿಜ್ಞಾನದ ಕೊಡುಗೆಯನ್ನು ಅರಿತುಕೊಳ್ಳಲು ಸಾಧ್ಯವಿಲ್ಲ ಎಂದು ಅವರು ಹೇಳಿದರು. ಆ ಸಮಯದಲ್ಲಿ 12ನೇ ತರಗತಿಯ ನಂತರ ಮಕ್ಕಳಿಗೆ ನೇರವಾಗಿ ವಿಧಿ ವಿಜ್ಞಾನ ಕ್ಷೇತ್ರದಲ್ಲಿ ಶಿಕ್ಷಣ ನೀಡಲು ಅನುಕೂಲವಾಗುವಂತೆ ಗುಜರಾತ್ ನಲ್ಲಿ ಶ್ರೀ ಮೋದಿ ಅವರು ಗುಜರಾತ್ ವಿಧಿ ವಿಜ್ಞಾನ ವಿಶ್ವವಿದ್ಯಾಲಯವನ್ನು ಸ್ಥಾಪಿಸಲು ನಿರ್ಧರಿಸಿದ್ದರು ಎಂದರು. 

ಶ್ರೀ ನರೇಂದ್ರ ಮೋದಿ ಅವರು ಪ್ರಧಾನಮಂತ್ರಿಯಾದ ನಂತರ, ಈ ವಿಶ್ವವಿದ್ಯಾಲಯವನ್ನು ರಾಷ್ಟ್ರಮಟ್ಟದಲ್ಲಿ ಮಾಡುವ ಆಲೋಚನೆ ಮುನ್ನೆಲೆಗೆ ಬಂತು ಎಂದು ಶ್ರೀ ಅಮಿತ್ ಶಾ ಹೇಳಿದರು. ರಾಷ್ಟ್ರೀಯ ವಿಧಿ ವಿಜ್ಞಾನ ವಿಶ್ವವಿದ್ಯಾಲಯದ ಒಂಬತ್ತನೇ ಕ್ಯಾಂಪಸ್ ನ ಭೂಮಿಪೂಜೆಯನ್ನು ಇಂದು ಮಾಡಲಾಗಿದೆ ಎಂದು ಅವರು ಹೇಳಿದರು. ಸೈಬರ್ ಭದ್ರತೆ, ಡಿಜಿಟಲ್ ವಿಧಿ ವಿಜ್ಞಾನ, ಕೃತಕ ಬುದ್ಧಿಮತ್ತೆ,, ಡಿಎನ್ಎ ವಿಧಿ ವಿಜ್ಞಾನ, ಆಹಾರ ಸಂಸ್ಕರಣೆ, ಪರಿಸರ ವಿಧಿವಿಜ್ಞಾನ, ಕೃಷಿ ವಿಧಿವಿಜ್ಞಾನ ಮುಂತಾದ ವಿಧಿವಿಜ್ಞಾನಕ್ಕೆ ಸಂಬಂಧಿಸಿದ ವಿಷಯಗಳನ್ನು ಈ ಕ್ಯಾಂಪಸ್ ನಲ್ಲಿ ಕಲಿಸಲಾಗುವುದು ಎಂದು ಅವರು ಹೇಳಿದರು. ವಿಧಿವಿಜ್ಞಾನದ ಪ್ರತಿಯೊಂದು ಕ್ಯಾಂಪಸ್ ವಿದ್ಯಾರ್ಥಿಗಳಿಗೆ ವಿಧಿ ವಿಜ್ಞಾನದ ಎಲ್ಲಾ ವಿಭಾಗಗಳ ಜ್ಞಾನವನ್ನು ನೀಡುತ್ತದೆ ಮತ್ತು ಐದು ವರ್ಷಗಳ ನಂತರ ಭಾರತವು ವಿಶ್ವದ ಗರಿಷ್ಠ ಸಂಖ್ಯೆಯ ವಿಧಿವಿಜ್ಞಾನ ತಜ್ಞರನ್ನು ಹೊಂದಿರುತ್ತದೆ. ವಿಧಿವಿಜ್ಞಾನ ವಿಶ್ವವಿದ್ಯಾಲಯವು ಇಡೀ ವಿಶ್ವದಲ್ಲೇ ವಿಶಿಷ್ಟವಾಗಿದ್ದು, ನಾವು ಪ್ರಾರಂಭಿಸಿರುವುದರಿಂದ ಜಗತ್ತು ಖಂಡಿತವಾಗಿಯೂ ಪ್ರಯೋಜನ ಪಡೆಯುತ್ತದೆ ಎಂದು ಅವರು ಹೇಳಿದರು.

Description: Description: C:\Users\raajeev\Desktop\HM\28.01.2023\107A1687.jpeg

ಅಪರಾಧ ಜಗತ್ತು ಬಹಳ ವೇಗವಾಗಿ ಬದಲಾಗುತ್ತಿದೆ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವರು ಹೇಳಿದರು. ಖೋಟಾ ನೋಟುಗಳ ವ್ಯಾಪಾರ, ಹವಾಲಾ ವಹಿವಾಟು, ಗಡಿ ಒಳ ನುಸುಳುವಿಕೆ, ಮಾದಕ ದ್ರವ್ಯಗಳು, ಸೈಬರ್ ಅಪರಾಧ ಮತ್ತು ಮಹಿಳೆಯರ ವಿರುದ್ಧದ ಅಪರಾಧಗಳು ಹೆಚ್ಚುತ್ತಿವೆ. ಅಪರಾಧಿಗಳು ಪೊಲೀಸರಿಗಿಂತ ಮುಂದಿದ್ದಾರೆ ಮತ್ತು ಪೊಲೀಸರು ಅಪರಾಧಿಗಳಿಗಿಂತ ಎರಡು ಹೆಜ್ಜೆ ಮುಂದಿರದ ಹೊರತು, ಅಪರಾಧವನ್ನು ತಡೆಗಟ್ಟಲು ಸಾಧ್ಯವಿಲ್ಲ ಎಂದರು. ಪೊಲೀಸರು ಎರಡು ಹೆಜ್ಜೆ ಮುಂದೆ ಇರಬೇಕಾದರೆ, ಶಿಕ್ಷೆಯಾಗುವ ಪ್ರಮಾಣವನ್ನು ಹೆಚ್ಚಿಸಬೇಕು ಮತ್ತು ವೈಜ್ಞಾನಿಕ ತಂತ್ರಗಳ ಬಳಕೆಯೊಂದಿಗೆ, ಎನ್ಎಫ್ಎಸ್.ಯು ಈ ಕ್ಷೇತ್ರದಲ್ಲಿ ಸಹಾಯ ಮಾಡಬಹುದು ಎಂದು ಅವರು ಹೇಳಿದರು. ತನಿಖೆಯು ವೈಜ್ಞಾನಿಕವಾಗಿ ವಿಧಿವಿಜ್ಞಾನವನ್ನು ಆಧರಿಸಿರದಿದ್ದರೆ, ಅಪರಾಧಿಗೆ ನ್ಯಾಯಾಲಯದಲ್ಲಿ ಶಿಕ್ಷೆ ವಿಧಿಸಲಾಗುವುದಿಲ್ಲ ಎಂದು ಶ್ರೀ ಶಾ ಹೇಳಿದರು. ಇದಕ್ಕಾಗಿ, ವಿಧಿವಿಜ್ಞಾನ ವಿಜ್ಞಾನದ ಅಧಿಕಾರಿಗಳು 6 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಶಿಕ್ಷೆ ವಿಧಿಸಬಹುದಾದ ಎಲ್ಲಾ ಅಪರಾಧಗಳಲ್ಲಿ ಅಪರಾಧದ ಸ್ಥಳವನ್ನು ಮೊದಲು ತಲುಪಬೇಕು ಎಂಬುದು ಬಹಳ ಮುಖ್ಯ. ದೆಹಲಿ ನಂತರ 6 ವರ್ಷಕ್ಕಿಂತ ಹೆಚ್ಚು ಶಿಕ್ಷೆ ವಿಧಿಸಬಹುದಾದ ಎಲ್ಲಾ ಅಪರಾಧಗಳಲ್ಲಿ ನಗರ ಪ್ರದೇಶಗಳಲ್ಲಿ ವಿಧಿವಿಜ್ಞಾನ ತಜ್ಞರ ಭೇಟಿಯನ್ನು ಕಡ್ಡಾಯಗೊಳಿಸಿದ ಎರಡನೇ ರಾಜ್ಯ ಕರ್ನಾಟಕವಾಗಿದೆ ಎಂದು ಅವರು ಹೇಳಿದರು. ಭಾರತವು ಪ್ರತಿಯೊಂದು ಕ್ಷೇತ್ರದಲ್ಲೂ ಪ್ರಗತಿ ಸಾಧಿಸುತ್ತಿರುವಾಗ, ನಮ್ಮ ಸವಾಲುಗಳು ಸಹ ಹೆಚ್ಚಿವೆ ಮತ್ತು ಈ ಸವಾಲುಗಳಿಗೆ ಅನುಗುಣವಾಗಿ, ನಾವು ನಮ್ಮ ತಜ್ಞರನ್ನು ಸಹ ಸಿದ್ಧಪಡಿಸಬೇಕಾಗಿದೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು ಎಂದು ಶ್ರೀ ಶಾ ಹೇಳಿದರು.

Description: Description: C:\Users\raajeev\Desktop\HM\28.01.2023\107A1726.jpeg 

ಕಾನೂನು ಮತ್ತು ಸುವ್ಯವಸ್ಥೆಗೆ ಮೂರು ಭಾಗಗಳಿವೆ ಎಂದು ಶ್ರೀ ಅಮಿತ್ ಶಾ ಹೇಳಿದರು,  ಅವು– ಪೊಲೀಸರ ಕಾರ್ಯವ್ಯಾಪ್ತಿಯ ಪ್ರಾಯೋಗಿಕ ಕಾನೂನು ಮತ್ತು ಸುವ್ಯವಸ್ಥೆ, ಅಪರಾಧ ತನಿಖೆಯಲ್ಲಿ ವಿಧಿವಿಜ್ಞಾನ ದೊಡ್ಡ ಪಾತ್ರ ವಹಿಸುವುದು ಮತ್ತು ಮೂರನೆಯದಾಗಿ, ಅಪರಾಧ ನ್ಯಾಯ ವ್ಯವಸ್ಥೆಯನ್ನು ಬಲಪಡಿಸುವುದು ಎಂದು ಶ್ರೀ ಅಮಿತ್ ಶಾ ಹೇಳಿದರು. ಸರ್ಕಾರ ಶೀಘ್ರದಲ್ಲೇ ಸಾಕ್ಷ್ಯ ಕಾಯ್ದೆಯನ್ನು ತಿದ್ದುಪಡಿ ಮಾಡಲಿದೆ ಎಂದು ಹೇಳಿದರು. ಐಪಿಸಿ, ಸಿಆರ್.ಪಿ.ಸಿ ಮತ್ತು ಸಾಕ್ಷ್ಯ ಕಾಯ್ದೆಗೆ ತಿದ್ದುಪಡಿ ಮಾಡುವ ಮೂಲಕ, ವೈಜ್ಞಾನಿಕ ಆಧಾರದ ಮೇಲೆ ಶಿಕ್ಷೆಯ ಕಾರ್ಯವಿಧಾನಕ್ಕಾಗಿ ಅವುಗಳನ್ನು ಮತ್ತಷ್ಟು ಬಲಪಡಿಸಲಾಗುವುದು, ಇದರಿಂದ ವಿಧಿವಿಜ್ಞಾನದ ಎಲ್ಲಾ ಅವಲೋಕನಗಳನ್ನು ಅಪರಾಧಿಯನ್ನು ಶಿಕ್ಷಿಸಲು ಬಳಸಬಹುದು.. ಇದು ಮೂರನೇ ಹಂತದ ಹಿಂಸೆ ನೀಡುವ ಯುಗವಲ್ಲ, ನಾವು ವೈಜ್ಞಾನಿಕ ಸಂಶೋಧನೆ ಮತ್ತು ತಂತ್ರಜ್ಞಾನದ ಆಧಾರದ ಮೇಲೆ ಮಾತ್ರ ತನಿಖೆ ನಡೆಸಬೇಕು ಎಂದು ಶ್ರೀ ಶಾ ಹೇಳಿದರು. ಶಿಕ್ಷೆಯಾಗುವ ದರ ಕೆನಡಾದಲ್ಲಿ ಶೇ.62, ಇಸ್ರೇಲ್ ನಲ್ಲಿ ಶೇ.93, ಇಂಗ್ಲೆಂಡ್ ನಲ್ಲಿ ಶೇ.80 ಮತ್ತು ಅಮೆರಿಕದಲ್ಲಿ ಶೇ.90ರಷ್ಟು ಇದೆ. ಭಾರತದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿಯನ್ನು ಸುಧಾರಿಸಬೇಕಾದರೆ, ನಾವು ನಮ್ಮ ಶಿಕ್ಷೆಯ ಪ್ರಮಾಣವನ್ನು ಹೆಚ್ಚಿಸಬೇಕು ಮತ್ತು ನಮ್ಮ ಅಪರಾಧ ನ್ಯಾಯ ವ್ಯವಸ್ಥೆಯನ್ನು ವಿಧಿವಿಜ್ಞಾನ ನಡೆಸಿದ ತನಿಖೆಯೊಂದಿಗೆ ಸಂಯೋಜಿಸಬೇಕು ಮತ್ತು ಕೆಲವು ಘೋರ ಅಪರಾಧಗಳಿಗೆ ವಿಧಿವಿಜ್ಞಾನ ತನಿಖೆಯನ್ನು ಕಡ್ಡಾಯಗೊಳಿಸಬೇಕಾಗಿದೆ ಎಂದು ಅವರು ಹೇಳಿದರು. ದೇಶಾದ್ಯಂತ ಪ್ರತಿ ಪೊಲೀಸ್ ಠಾಣೆಯಲ್ಲಿ ವಿಧಿವಿಜ್ಞಾನದ ತನಿಖೆಯನ್ನು ನಾವು ಕಡ್ಡಾಯಗೊಳಿಸಬೇಕಾದರೆ, ನಮಗೆ 9 ವರ್ಷಗಳಲ್ಲಿ 8000 ರಿಂದ 10,000 ವಿಧಿವಿಜ್ಞಾನ ತಜ್ಞರ ಅಗತ್ಯವಿದೆ ಎಂದು ಶ್ರೀ ಶಾ ಹೇಳಿದರು. ರಾಷ್ಟ್ರೀಯ ವಿಧಿ ವಿಜ್ಞಾನ ವಿಶ್ವವಿದ್ಯಾಲಯ ಸ್ಥಾಪನೆಯಾಗುವ ಮೊದಲು, ಗುಜರಾತ್ ವಿಧಿವಿಜ್ಞಾನ ವಿಶ್ವವಿದ್ಯಾಲಯವು 500 ಸಾಮರ್ಥ್ಯವನ್ನು ಹೊಂದಿತ್ತು ಮತ್ತು ಈ ಗುರಿಯನ್ನು ಸಾಧಿಸಲು ಸಾಧ್ಯವಾಗುತ್ತಿರಲಿಲ್ಲ. ದೇಶದ ಎಲ್ಲಾ ರಾಜ್ಯಗಳಲ್ಲಿ ರಾಷ್ಟ್ರೀಯ ವಿಧಿವಿಜ್ಞಾನ ವಿಶ್ವವಿದ್ಯಾಲಯದ ಕ್ಯಾಂಪಸ್ ಗಳನ್ನು ಕ್ರಮೇಣ ತೆರೆದ ನಂತರ, ಅಪರಾಧ ನ್ಯಾಯ ವ್ಯವಸ್ಥೆಯನ್ನು ಬಲಪಡಿಸುವಲ್ಲಿ ದೇಶಕ್ಕೆ ಸೇವೆ ಸಲ್ಲಿಸುವ 10,000 ತಜ್ಞರನ್ನು ನಾವು ಖಂಡಿತವಾಗಿಯೂ ಪಡೆಯುತ್ತೇವೆ ಎಂದು ಅವರು ಹೇಳಿದರು. 

ಭಾರತ ಸರ್ಕಾರವು ವಿಧಿವಿಜ್ಞಾನ ಕ್ಷೇತ್ರದಲ್ಲಿ ಅನೇಕ ಉಪಕ್ರಮಗಳನ್ನು ಕೈಗೊಂಡಿದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಚಂಡೀಗಢದಲ್ಲಿ ಅತ್ಯಾಧುನಿಕ ಡಿಎನ್.ಎ ವಿಶ್ಲೇಷಣಾ ಪ್ರಯೋಗಾಲಯವನ್ನು ಸ್ಥಾಪಿಸಲಾಗಿದೆ, ಇದರೊಂದಿಗೆ ಪುಣೆ ಸಿಎಫ್.ಎಸ್.ಎಲ್ ಅನ್ನು 62 ಕೋಟಿ ರೂ.ಗಳ ವೆಚ್ಚದಲ್ಲಿ, ಗುವಾಹಟಿ ಸಿಎಫ್.ಎಸ್.ಎಲ್ ಅನ್ನು 50 ಕೋಟಿ ರೂ.ಗಳ ವೆಚ್ಚದಲ್ಲಿ, ಭೋಪಾಲ್ ಸಿಎಫ್.ಎಸ್.ಎಲ್ ಅನ್ನು 53 ಕೋಟಿ ರೂ.ಗಳ ವೆಚ್ಚದಲ್ಲಿ ಮತ್ತು ಕೋಲ್ಕತಾ ಸಿಎಫ್.ಎಸ್.ಎಲ್ ಅನ್ನು ಪ್ರಸ್ತುತ 88 ಕೋಟಿ ರೂ.ಗಳ ವೆಚ್ಚದಲ್ಲಿ ಮೇಲ್ದರ್ಜೆಗೇರಿಸಲಾಗುತ್ತಿದೆ. ದೆಹಲಿ, ಭೋಪಾಲ್, ಗೋವಾ, ತ್ರಿಪುರಾ, ಪುಣೆ, ಮಣಿಪುರ ಮತ್ತು ಗುವಾಹಟಿಯಲ್ಲಿ ಎನ್ಎಫ್ಎಸ್.ಯು. ದೇಶಾದ್ಯಂತ ಕ್ಯಾಂಪಸ್ ಗಳನ್ನು ತೆರೆದಿದೆ ಮತ್ತು ಇಂದು ಧಾರವಾಡದಲ್ಲಿ ಕ್ಯಾಂಪಸ್ ಅನ್ನು ಸಹ ಪ್ರಾರಂಭಿಸಲಾಗಿದೆ, ಇದು ಕರ್ನಾಟಕದ ಯುವಕರಿಗೆ ಉದ್ಯೋಗಾವಕಾಶಗಳನ್ನು ಒದಗಿಸುತ್ತದೆ ಮತ್ತು ಕರ್ನಾಟಕದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಮೂಲಕ ಸಾರ್ವಜನಿಕರನ್ನು ಅಪರಾಧಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು. ಎನ್ಎಫ್ಎಸ್.ಯು 70 ಕ್ಕೂ ಹೆಚ್ಚು ದೇಶಗಳು ಮತ್ತು ವಿವಿಧ ಸಂಸ್ಥೆಗಳೊಂದಿಗೆ 158 ಕ್ಕೂ ಹೆಚ್ಚು ತಿಳಿವಳಿಕೆ ಒಪ್ಪಂದಗಳಿಗೆ ಸಹಿ ಹಾಕಿದೆ, ಇದರಿಂದಾಗಿ ಎನ್ಎಫ್ಎಸ್.ಯು ವಿಶ್ವದಾದ್ಯಂತ ಅಪರಾಧ ಪತ್ತೆಹಚ್ಚುವಿಕೆಯಲ್ಲಿ ಸೇವೆ ಸಲ್ಲಿಸಬಹುದು ಎಂದು ಅವರು ಹೇಳಿದರು. ವಿಧಿವಿಜ್ಞಾನ ವಿಶ್ವವಿದ್ಯಾಲಯವು ಮಕ್ಕಳಿಗೆ ಶಿಕ್ಷಣ ನೀಡಲು ಮತ್ತು ತರಬೇತಿ ಪಡೆದ ಮಾನವ ಶಕ್ತಿಯನ್ನು ರೂಪಿಸಲು ಮಾತ್ರವಲ್ಲದೆ ವಿಧಿವಿಜ್ಞಾನ ಮೂಲಸೌಕರ್ಯವನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಎನ್ಎಫ್ಎಸ್.ಯು ತರಬೇತಿ ಪಡೆದ ಮಾನವಶಕ್ತಿಯನ್ನು ಸೃಷ್ಟಿಸುವುದಷ್ಟೇ ಅಲ್ಲದೆ, ತನಿಖೆಯಲ್ಲಿ ತಂತ್ರಜ್ಞಾನದ ಬಳಕೆಯನ್ನು ಹೆಚ್ಚಿಸುತ್ತದೆ ಮತ್ತು ಸಂಶೋಧನೆ ಮತ್ತು ಅಭಿವೃದ್ಧಿಯ ಮೂಲಕ ವಿಧಿವಿಜ್ಞಾನ ಕ್ಷೇತ್ರದಲ್ಲಿ ಭಾರತವನ್ನು ವಿಶ್ವದ ಮುಂಚೂಣಿಗೆ ಕೊಂಡೊಯ್ಯಲು ಪ್ರಯತ್ನಿಸುತ್ತದೆ. ಸುಮಾರು 1.5 ಕೋಟಿ ಬೆರಳಚ್ಚಿನ ದತ್ತಾಂಶವನ್ನು ಹೊಂದಿರುವ ಎನ್.ಎಎಫ್ಐಎಸ್ ಆ್ಯಪ್ ಅನ್ನು ಇತ್ತೀಚೆಗೆ ಪ್ರಾರಂಭಿಸಲಾಗಿದೆ ಎಂದು ಅವರು ಹೇಳಿದರು. ಇದು ಪ್ರಾರಂಭವಾದ ಮೂರು ತಿಂಗಳಲ್ಲಿ, 22 ವರ್ಷಗಳ ಹಳೆಯ ಪ್ರಕರಣ ಸೇರಿದಂತೆ 10,000 ಪ್ರಕರಣಗಳನ್ನು ತಕ್ಷಣವೇ ಪರಿಹರಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು. ಇದನ್ನು ಮತ್ತಷ್ಟು ಬಲಪಡಿಸಲಾಗುವುದು, ಇದಕ್ಕಾಗಿ ಎಲ್ಲಾ ಕೈದಿಗಳ ಬೆರಳಚ್ಚುಗಳನ್ನು ಸಂಗ್ರಹಿಸಲು ರಾಷ್ಟ್ರೀಯ ಅಪರಾಧ ದಾಖಲೆಗಳ ಶಾಖೆಯಲ್ಲಿ ವೈಜ್ಞಾನಿಕ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ಹೇಳಿದರು. ಕರ್ನಾಟಕದ ಮಾದರಿಯಲ್ಲಿಯೇ ದೇಶಾದ್ಯಂತ ವಿಧಿವಿಜ್ಞಾನ ಸೇವೆಗಳಿಗೆ ಪ್ರಾಮುಖ್ಯತೆ ನೀಡಲಾಗುವುದು ಎಂದು ಶ್ರೀ ಶಾ ವಿಶ್ವಾಸ ವ್ಯಕ್ತಪಡಿಸಿದರು. ಕರ್ನಾಟಕ ಮುಖ್ಯಮಂತ್ರಿಗಳು 206 ಅಪರಾಧ ಪತ್ತೆ ಅಧಿಕಾರಿಗಳನ್ನು (ಎಸ್ಒಸಿಒ) ನೇಮಿಸಿದ್ದಾರೆ ಮತ್ತು ಮುಂಬರುವ ದಿನಗಳಲ್ಲಿ ಕರ್ನಾಟಕದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಇಂತಹ ಉಪಕ್ರಮಗಳು ಬಹಳ ದೂರ ಸಾಗುತ್ತವೆ ಎಂದು ಅವರು ಹೇಳಿದರು. ಎನ್ಎಫ್ಎಸ್.ಯು ಕರ್ನಾಟಕದ ಬೆಂಗಳೂರಿನಲ್ಲಿ ವನ್ಯಜೀವಿ ವಿಧಿವಿಜ್ಞಾನಕ್ಕಾಗಿ ಉತ್ಕೃಷ್ಟತೆಯ ಕೇಂದ್ರವನ್ನು ಸ್ಥಾಪಿಸುತ್ತಿದೆ ಎಂದು ಅವರು ಹೇಳಿದರು. ಈ ಕ್ಷೇತ್ರದಲ್ಲೂ ಭಾರತವು ವಿಶ್ವದಲ್ಲಿ ಅಗ್ರಗಣ್ಯವಾಗಬೇಕು ಎಂಬುದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಗುರಿಯಾಗಿದೆ ಎಂದು ಶ್ರೀ ಶಾ ಹೇಳಿದರು. ಧಾರವಾಡದಲ್ಲಿ ಆರಂಭವಾಗುತ್ತಿರುವ ಈ ವಿಶ್ವವಿದ್ಯಾಲಯವು ಧಾರವಾಡದ ಯುವಕರಿಗೆ ಮಾತ್ರವಲ್ಲದೆ ಇಡೀ ಉತ್ತರ ಕರ್ನಾಟಕದ ಯುವಕರಿಗೆ ಉದ್ಯೋಗಾವಕಾಶಗಳನ್ನು ಒದಗಿಸುತ್ತದೆ, ಇಡೀ ಕರ್ನಾಟಕದ ಕಾನೂನು ಮತ್ತು ಸುವ್ಯವಸ್ಥೆಯನ್ನು ನಿರ್ವಹಿಸಲು ನೆರವಾಗುತ್ತದೆ ಎಂದು ಅವರು ಹೇಳಿದರು.

***



(Release ID: 1894369) Visitor Counter : 283