ಭೂವಿಜ್ಞಾನ ಸಚಿವಾಲಯ
ನೈಸರ್ಗಿಕ ವಿಪತ್ತುಗಳಲ್ಲಿ ಮಾನವ ಪರಿಣಾಮಗಳನ್ನು ಕನಿಷ್ಠಗೊಳಿಸಲು ಕಾರ್ಯತಂತ್ರಗಳನ್ನು ರೂಪಿಸುವ ಅಗತ್ಯವನ್ನು ಒತ್ತಿ ಹೇಳಿದ ಕೇಂದ್ರ ಸಚಿವ ಡಾ. ಜಿತೇಂದ್ರ ಸಿಂಗ್
ದೆಹಲಿಯಲ್ಲಿ ನಡೆದ ಭಾರತ -ಯುಕೆ ಜಂಟಿ ಶೈಕ್ಷಣಿಕ ಕಾರ್ಯಾಗಾರದಲ್ಲಿ ಈ ಹೇಳಿಕೆ ನೀಡಿದ ಡಾ. ಜಿತೇಂದ್ರ ಸಿಂಗ್. ಇಲ್ಲಿ ಯುಕೆ ನಿಯೋಗದ ನೇತೃತ್ವವನ್ನು ಭಾರತದಲ್ಲಿನ ಬ್ರಿಟಿಷ್ ಡೆಪ್ಯುಟಿ ಹೈಕಮಿಷನರ್ ಶ್ರೀಮತಿ ಕ್ರಿಸ್ಟಿನಾ ಸ್ಕಾಟ್ ವಹಿಸಿದ್ದರು
"ಭೌಗೋಳಿಕ-ಅಪಾಯಗಳಿಗೆ ಸ್ಥಿತಿಸ್ಥಾಪಕತ್ವವನ್ನು ನಿರ್ಮಿಸುವುದು ಒಂದು ಪ್ರಮುಖ ಸವಾಲನ್ನು ಒಡ್ಡಿದ್ದು, ಇದಕ್ಕೆ ಸಂಶೋಧಕರು, ನೀತಿ ನಿರೂಪಕರು, ಸರ್ಕಾರಗಳು, ಖಾಸಗಿ ವಲಯ ಮತ್ತು ನಾಗರಿಕ ಸಮಾಜದಿಂದ ಸಹಯೋಗದ ಅಂತಾರಾಷ್ಟ್ರೀಯ ಕ್ರಮದ ಅಗತ್ಯವಿದೆ" ಎಂದ ಶ್ರೀಮತಿ ಕ್ರಿಸ್ಟಿನಾ ಸ್ಕಾಟ್
Posted On:
10 JAN 2023 3:13PM by PIB Bengaluru
ವಿಜ್ಞಾನ ಮತ್ತು ತಂತ್ರಜ್ಞಾನ (ಸ್ವತಂತ್ರ ನಿರ್ವಹಣೆ); ಭೂ ವಿಜ್ಞಾನ (ಸ್ವತಂತ್ರ ನಿರ್ವಹಣೆ); ಪ್ರಧಾನಮಂತ್ರಿ ಕಾರ್ಯಾಲಯ, ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು, ಪಿಂಚಣಿಗಳು, ಪರಮಾಣು ಇಂಧನ ಮತ್ತು ಬಾಹ್ಯಾಕಾಶ ಖಾತೆ ರಾಜ್ಯ ಸಚಿವ ಡಾ. ಜಿತೇಂದ್ರ ಸಿಂಗ್ ಅವರಿಂದು "ಭೂಮಿಯ ಅಪಾಯಗಳು" ಕುರಿತ 2 ದಿನಗಳ ಭಾರತ-ಯುಕೆ ಕಾರ್ಯಾಗಾರವನ್ನು ಉದ್ಘಾಟಿಸಿ, ನೈಸರ್ಗಿಕ ವಿಪತ್ತುಗಳಲ್ಲಿ ಮಾನವ ಪರಿಣಾಮಗಳನ್ನು ಕನಿಷ್ಠಗೊಳಿಸುವ ಕಾರ್ಯತಂತ್ರಗಳನ್ನು ರೂಪಿಸುವ ಅಗತ್ಯವನ್ನು ಒತ್ತಿ ಹೇಳಿದರು.
ನವದೆಹಲಿಯಲ್ಲಿನ ಬ್ರಿಟಿಷ್ ದೂತಾವಾಸದಲ್ಲಿ ಭಾರತದ ಬ್ರಿಟಿಷ್ ಡೆಪ್ಯುಟಿ ಹೈಕಮಿಷನರ್ ಆಗಿರುವ ಶ್ರೀಮತಿ ಕ್ರಿಸ್ಟಿನಾ ಸ್ಕಾಟ್ ಅವರು ನೇತೃತ್ವ ವಹಿಸಿದ್ದ ಯುಕೆ ನಿಯೋಗವಿದ್ದ ಹಾಗೂ ದೆಹಲಿಯಲ್ಲಿ ನಡೆದ ಭಾರತ-ಯುಕೆ ಜಂಟಿ ಶೈಕ್ಷಣಿಕ ಕಾರ್ಯಾಗಾರದಲ್ಲಿ ಡಾ. ಜಿತೇಂದ್ರ ಸಿಂಗ್ ಈ ಹೇಳಿಕೆ ನೀಡಿದರು.

ಸ್ಕಾಟ್ ಅವರೊಂದಿಗೆ ಯುಕೆಯ ಸಂಶೋಧನೆ ಮತ್ತು ನಾವೀನ್ಯತೆ (ಯುಕೆ.ಆರ್.ಐ.), ಸ್ಥಿತಿಸ್ಥಾಪಕ ಪರಿಸರ, ಸ್ವಾಭಾವಿಕ ಪರಿಸರ ಸಂಶೋಧನೆ ಮಂಡಳಿ (ಎನ್.ಇ.ಆರ್.ಸಿ.)ಯ ಮುಖ್ಯಸ್ಥೆ ಶ್ರೀಮತಿ ವಂಡೆ ಮ್ಯಾಚಮ್ ಮತ್ತು ಯು.ಕೆ. ಸಂಶೋಧನೆ ಮತ್ತು ನಾವೀನ್ಯ ಭಾರತದ ಹಂಗಾಮಿ ನಿರ್ದೇಶಕಿ ಶ್ರೀಮತಿ ಸುಕನ್ಯಾ ಕುಮಾರ್ ಅವರಿದ್ದರೆ, ಭಾರತದ ಕಡೆಯಿಂದ, ಭೂ ವಿಜ್ಞಾನ ಸಚಿವಾಲಯದ ಕಾರ್ಯದರ್ಶಿ ಡಾ. ಎಂ. ರವಿಚಂದ್ರನ್, ಭೂ ವಿಜ್ಞಾನ ಸಚಿವಾಲಯದ ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರದ ನಿರ್ದೇಶಕ ಡಾ. ಒ. ಪಿ. ಮಿಶ್ರಾ ಮತ್ತು ಯುಕೆ ಸೋಶೋಧನೆ ಮತ್ತು ನಾವೀನ್ಯ ಭಾರತದ ಹಂಗಾಮಿ ನಿರ್ದೇಶಕಿ ಶ್ರೀಮತಿ ಸುಕನ್ಯಾ ಕುಮಾರ್ ಚರ್ಚೆಯಲ್ಲಿ ಭಾಗವಹಿಸಿದ್ದರು.
"ಭೂಮಿಯ ಅಪಾಯಗಳು" ಕುರಿತ ಜಂಟಿ ಭೂವಿಜ್ಞಾನ ಕಾರ್ಯಾಗಾರವು ಉತ್ತರಾಖಂಡದ ಜೋಶಿಮಠ ಘಟನೆಯನ್ನು ಭಾರತವು ನಿರ್ವಹಿಸುತ್ತಿರುವ ಸಮಯದಲ್ಲಿ ನಡೆಯುತ್ತಿರುವುದು ಕಾಕತಾಳೀಯವಾಗಿದೆ ಎಂದು ಡಾ. ಜಿತೇಂದ್ರ ಸಿಂಗ್ ಹೇಳಿದರು, ಜೋಶಿ ಮಠದಲ್ಲಿ ಭೂ ವಿಜ್ಞಾನಗಳ ಸಚಿವಾಲಯವು ಇತರ ಸಂಸ್ಥೆಗಳೊಂದಿಗೆ ಸಮಸ್ಯೆಯನ್ನು ಪರಿಹರಿಸುವ ಕಾರ್ಯದಲ್ಲಿ ತೊಡಗಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸೂಚನೆಯಂತೆ, ಭೂ ವಿಜ್ಞಾನ ಸಚಿವಾಲಯವು ಕಳೆದ ಎರಡು ವರ್ಷಗಳಲ್ಲಿ 37 ಹೊಸ ಭೂಕಂಪನಶಾಸ್ತ್ರ ಕೇಂದ್ರಗಳನ್ನು (ವೀಕ್ಷಣಾಲಯಗಳು) ಸ್ಥಾಪಿಸಿದೆ ಮತ್ತು ಈಗ ಭಾರತವು ವ್ಯಾಪಕ ವೀಕ್ಷಣಾ ಸೌಲಭ್ಯಗಳಿಗಾಗಿ ಅಂತಹ 152 ಕೇಂದ್ರಗಳನ್ನು ಹೊಂದಿದೆ, ಇದು ಫಲಶ್ರುತಿ ಆಧಾರಿತ ವಿಶ್ಲೇಷಣೆಗೆ ಬೃಹತ್ ದತ್ತಾಂಶ ನೆಲೆಯನ್ನು ಸೃಷ್ಟಿಸುತ್ತದೆ ಎಂದು ಡಾ. ಜಿತೇಂದ್ರ ಸಿಂಗ್ ಹೇಳಿದರು. ಮುಂದಿನ 5 ವರ್ಷಗಳಲ್ಲಿ, ಸಕಾಲಿಕ ದತ್ತಾಂಶ ಮೇಲ್ವಿಚಾರಣೆ ಮತ್ತು ದತ್ತಾಂಶ ಸಂಗ್ರಹಣೆಯನ್ನು ಸುಧಾರಿಸಲು ದೇಶಾದ್ಯಂತ ಇಂತಹ ಇನ್ನೂ 100 ಭೂಕಂಪಶಾಸ್ತ್ರ ಕೇಂದ್ರಗಳನ್ನು ತೆರೆಯಲಾಗುವುದು ಎಂದು ಅವರು ಮಾಹಿತಿ ನೀಡಿದರು. ಭಾರತವು ಭೂಕಂಪನಶಾಸ್ತ್ರದ ಪ್ರಗತಿ ಮತ್ತು ತಿಳಿವಳಿಕೆಯಲ್ಲಿ ನಿರ್ಣಾಯಕ ಪಾತ್ರ ವಹಿಸುವ ಸಮೀಪಕ್ಕೆ ಹೋಗುತ್ತಿದೆ ಎಂದು ಸಚಿವರು ಹೇಳಿದರು.

ಗಟ್ಟಿಯಾದ ಮೇಲ್ಪದರ ಮತ್ತು ಉಪ-ಮೇಲ್ಪದರದ ಕೆಳಗಿರುವ ದುರ್ಬಲ ಪದರಗಳ ವೈಫಲ್ಯಕ್ಕೆ ಕಾರಣವಾಗುವ ಭೌತಿಕ ಪ್ರಕ್ರಿಯೆಗಳ ಮೇಲೆ ಮೂಲಭೂತ ಸಂಶೋಧನೆಯ ನಿರ್ಣಾಯಕ ಅಗತ್ಯವಿದೆ ಎಂದು ಒತ್ತಿ ಹೇಳಿದ ಡಾ. ಜಿತೇಂದ್ರ ಸಿಂಗ್, ವಿಶಾಲವಾದ ಪ್ರದೇಶಗಳಲ್ಲಿ ಭೌಗೋಳಿಕ-ಅಪಾಯಗಳನ್ನು ಗುರುತಿಸಲು ಮತ್ತು ಪ್ರಮಾಣೀಕರಿಸಲು ಅಗ್ಗದ ಪರಿಹಾರಗಳನ್ನು ಅಭಿವೃದ್ಧಿಪಡಿಸಲು ಮತ್ತು ವ್ಯಾಪಕವಾಗಿ ಬದಲಾಗುವ ಮತ್ತು ತ್ವರಿತವಾಗಿ ವಿಕಸನಗೊಳ್ಳುತ್ತಿರುವ - ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ಸಂದರ್ಭಗಳು. ವಿಪತ್ತುಗಳ ಹಿಂದಿನ ಪ್ರಕ್ರಿಯೆಗಳ ವೈಜ್ಞಾನಿಕ ತಿಳಿವಳಿಕೆಯು ಕಳೆದ 50 ವರ್ಷಗಳಲ್ಲಿ ಅಗಾಧವಾಗಿ ಬೆಳೆದಿದೆ ಮತ್ತು ಭವಿಷ್ಯದಲ್ಲಿ ಅಂತಹ ವಿಪತ್ತುಗಳ ವಿರುದ್ಧ ಹೋರಾಡಲು ಭಾರತ-ಯುಕೆ ಉಪಕ್ರಮದಂತಹ ಮತ್ತಷ್ಟು ಅಂತಾರಾಷ್ಟ್ರೀಯ ಸಹಯೋಗಗಳನ್ನು ಬಲಪಡಿಸುವ ಅಗತ್ಯವಿದೆ ಎಂದು ಅವರು ಹೇಳಿದರು.
ಘನ ಭೂಮಿಯ ಅಪಾಯಗಳ ಬಗ್ಗೆ ಯು.ಕೆ.ಆರ್.ಐ. ಸಹವರ್ತಿಗಳೊಂದಿಗೆ ಭಾರತೀಯ ವಿಜ್ಞಾನಿಗಳ ಆಳವಾದ ಸಹಯೋಗವು ಭೂಕಂಪಗಳು, ಭೂಕುಸಿತಗಳು ಮತ್ತು ಸುನಾಮಿ ಮುಂತಾದ ನೈಸರ್ಗಿಕ ವಿಪತ್ತುಗಳಿಗೆ ಸಂಬಂಧಿಸಿದ ಅಪಾಯವನ್ನು ತಗ್ಗಿಸುವ ಮಾರ್ಗವನ್ನು ಮತ್ತಷ್ಟು ಅಭಿವೃದ್ಧಿಪಡಿಸಲು ನಮ್ಮ ತಿಳಿವಳಿಕೆಯನ್ನು ಸಮೃದ್ಧಗೊಳಿಸುತ್ತದೆ ಎಂದು ಸಚಿವರು ಒತ್ತಿ ಹೇಳಿದರು.
ಜಂಟಿ ಕಾರ್ಯಾಗಾರಕ್ಕಾಗಿ ಬ್ರಿಟಿಷ್ ಹೈಕಮಿಷನರ್ ಅವರಿಗೆ ಧನ್ಯವಾದ ಅರ್ಪಿಸಿದ ಡಾ. ಜಿತೇಂದ್ರ ಸಿಂಗ್, ಭಾರತದಲ್ಲಿನ ಇಂತಹ ಶೈಕ್ಷಣಿಕ ಕಾರ್ಯಕ್ರಮಗಳು ಯುವ ಸಂಶೋಧಕರಲ್ಲಿ ಹೊಸ ಉತ್ಸಾಹವನ್ನು ಬೆಳೆಸುತ್ತವೆ ಮತ್ತು ಸಹಯೋಗಗಳನ್ನು ರೂಪಿಸಲು ಮತ್ತು ಬಹು-ಶಿಸ್ತಿನ ವಿಜ್ಞಾನ ಪ್ರಸ್ತಾವನೆಗಳನ್ನು ರೂಪಿಸಲು ಅವರಿಗೆ ಅನುವು ಮಾಡಿಕೊಡುತ್ತವೆ ಎಂದು ಹೇಳಿದರು, ಇದರ ಫಲಿತಾಂಶಗಳು ಹೊಸ ವೈಜ್ಞಾನಿಕ ಪರಿಹಾರಗಳೊಂದಿಗೆ ಶಸ್ತ್ರಸಜ್ಜಿತವಾಗಿ, ನಮ್ಮ ಗ್ರಹದ ಬಗ್ಗೆ ಉತ್ತಮ ತಿಳಿವಳಿಕೆಯೊಂದಿಗೆ ಭವಿಷ್ಯತ್ತಿನತ್ತ ಸಾಗಲು ನಮಗೆ ಸಹಾಯ ಮಾಡುತ್ತದೆ ಎಂದು ಹೇಳಿದರು. ಭೂಮಿಯ ಪ್ರಕ್ರಿಯೆಗಳು ಮತ್ತು ಅದರ ಆಂತರಿಕ ಚಲನಶಾಸ್ತ್ರದ ಹಿಂದೆ ಪರಸ್ಪರ ಸಂಪರ್ಕಿತ ಭೌತಶಾಸ್ತ್ರದ ಪ್ರಜ್ಞೆ ಹೆಚ್ಚುತ್ತಿರುವುದರಿಂದ, ವಿಜ್ಞಾನಿಗಳು ಭೂವಿಜ್ಞಾನದ ವಿವಿಧ ಕ್ಷೇತ್ರಗಳಲ್ಲಿ ಜಂಟಿ ಸಂಶೋಧನೆಯ ಗಡಿಗಳನ್ನು ಉತ್ಸಾಹದಿಂದ ದಾಟುತ್ತಿದ್ದಾರೆ ಎಂದೂ ಸಚಿವರು ಹೇಳಿದರು.

ಶ್ರೀಮತಿ ಕ್ರಿಸ್ಟಿನಾ ಸ್ಕಾಟ್ ತಮ್ಮ ಹೇಳಿಕೆಯಲ್ಲಿ, ಭೌಗೋಳಿಕ-ಅಪಾಯಗಳಿಗೆ ಸ್ಥಿತಿಸ್ಥಾಪಕತ್ವವನ್ನು ನಿರ್ಮಿಸುವುದು ಪ್ರಮುಖ ಸವಾಲಾಗಿದ್ದು, ಇದಕ್ಕೆ ಸಂಶೋಧಕರು, ನೀತಿ ನಿರೂಪಕರು, ಸರ್ಕಾರಗಳು, ಖಾಸಗಿ ವಲಯ ಮತ್ತು ನಾಗರಿಕ ಸಮಾಜಗಳಿಂದ ಸಹಯೋಗದ ಅಂತಾರಾಷ್ಟ್ರೀಯ ಕ್ರಮದ ಅಗತ್ಯವಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ, ಯುಕೆ ಭೂ ವಿಜ್ಞಾನಿಗಳು ಟೆಕ್ಟೋನಿಕ್ ಚಟುವಟಿಕೆಯ ಪ್ರಸ್ತುತ ತಿಳಿವಳಿಕೆ ಮತ್ತು ಭಾರತದಲ್ಲಿನ ಭೌಗೋಳಿಕ-ಅಪಾಯಗಳೊಂದಿಗೆ ಅದರ ಸಂಬಂಧವನ್ನು ಅರ್ಥಮಾಡಿಕೊಳ್ಳಲು ಗಮನಾರ್ಹವಾಗಿ ಕೊಡುಗೆ ನೀಡಬಹುದು ಎಂದು ಅವರು ಹೇಳಿದರು. ಕಾರ್ಯಾಗಾರದ ಫಲಿತಾಂಶವು ಸಮಾಜಕ್ಕೆ ಹೆಚ್ಚು ಪ್ರಸ್ತುತವಾದ ನಿರ್ದಿಷ್ಟ ವೈಜ್ಞಾನಿಕ ಸಮಸ್ಯೆಗಳಿಗೆ ಕಾರಣವಾಗುತ್ತದೆ, ಇದು ಭಾರತ ಎದುರಿಸುತ್ತಿರುವ ಸವಾಲುಗಳನ್ನು ಅರ್ಥಮಾಡಿಕೊಳ್ಳಲು ಯುಕೆ ಸಹವರ್ತಿಯೊಂದಿಗೆ ಜಂಟಿಯಾಗಿ ಅಧ್ಯಯನ ಮಾಡಲಾಗುವುದು ಎಂದು ಸ್ಕಾಟ್ ಹೇಳಿದರು.
ಡಾ.ಎಂ.ರವಿಚಂದ್ರ ಮಾತನಾಡಿ, ಈ ಜಂಟಿ ಕಾರ್ಯಾಗಾರವು ಎರಡೂ ದೇಶಗಳು ತಮ್ಮ ಗೂಡಿನಲ್ಲಿ ಕೈಕುಲುಕಲು ಮತ್ತು ಮುಂದೆ ಸಂಶೋಧನೆ ನಡೆಸಲು ಮತ್ತು ಬಹುಶಿಸ್ತೀಯ ತನಿಖೆಗಳ ಹೊಸ ಮಾರ್ಗಗಳನ್ನು ಅನುಸರಿಸಲು ಸೂಕ್ತವಾದ ವಾತಾವರಣವಾಗಿದೆ ಎಂದು ಹೇಳಿದರು. ಭಾರತ ಮತ್ತು ಬ್ರಿಟನ್ ನ ತಜ್ಞರು/ ಶಿಕ್ಷಣತಜ್ಞರು ಒಗ್ಗೂಡಿ ಭಾರತೀಯ ಪ್ರದೇಶಕ್ಕೆ ಘನ ಭೂಮಿಯ ಅಪಾಯಗಳ ವಿವಿಧ ಆಯಾಮಗಳಲ್ಲಿ ಮೂಲಭೂತ ಸಂಶೋಧನೆಯ ನಿರ್ಣಾಯಕ ಅಗತ್ಯವನ್ನು ಚರ್ಚಿಸಲು ಇದು ನಿಜವಾಗಿಯೂ ಒಂದು ಅವಕಾಶವನ್ನು ಒದಗಿಸುತ್ತದೆ ಎಂದು ಅವರು ಹೇಳಿದರು.
ಯುಕೆಯ ಸಂಶೋಧನೆ ಮತ್ತು ನಾವೀನ್ಯತೆ (ಯುಕೆ.ಆರ್.ಐ.), ಸ್ಥಿತಿಸ್ಥಾಪಕ ಪರಿಸರ, ಸ್ವಾಭಾವಿಕ ಪರಿಸರ ಸಂಶೋಧನೆ ಮಂಡಳಿ (ಎನ್.ಇ.ಆರ್.ಸಿ.)ಯ ಮುಖ್ಯಸ್ಥೆ ಶ್ರೀಮತಿ ವಂಡೆ ಮ್ಯಾಚಮ್ ಅವರು ತಮ್ಮ ಹೇಳಿಕೆಯಲ್ಲಿ, ಈ ಕಾರ್ಯಾಗಾರದ ಉದ್ದೇಶವು ಯುಕೆ ಮತ್ತು ಭಾರತದ ನಡುವೆ ಸಂಶೋಧನೆಯ ಗಮನ ಕೇಂದ್ರೀಕರಿಸುವ ಸಂಭಾವ್ಯ ಕ್ಷೇತ್ರಗಳನ್ನು ವಿಸ್ತರಿಸುವುದಾಗಿದೆ ಎಂದು ಹೇಳಿದರು. ವಾತಾವರಣ ವಿಜ್ಞಾನ ಮತ್ತು ಜಲವಿಜ್ಞಾನಕ್ಕೆ ಸಂಬಂಧಿಸಿದ ಎಂ.ಓ.ಇ.ಎಸ್.ನ ಚಟುವಟಿಕೆಗಳ ಬಗ್ಗೆ ಯುಕೆಆರ್.ಐ ಈಗಾಗಲೇ ಇದೇ ರೀತಿಯ ಸಹಭಾಗಿತ್ವದಲ್ಲಿ ತಮ್ಮನ್ನು ತೊಡಗಿಸಿಕೊಂಡಿದೆ ಎಂದು ಉಲ್ಲೇಖಿಸುವುದು ಗಮನಾರ್ಹವಾಗಿದೆ ಎಂದು ಅವರು ಹೇಳಿದರು.
ಭೂ ವಿಜ್ಞಾನಗಳ ಸಚಿವಾಲಯ (ಎಂಒಇಎಸ್)ವು ಯುಕೆಯಿಂದ ಆಗಮಿಸಿರುವ ತಜ್ಞರು/ವಿಜ್ಞಾನಿಗಳ ತಂಡದೊಂದಿಗೆ ಈ ಕಾರ್ಯಾಗಾರದ ವೇಳೆ ಘನ ಭೂ ಅಪಾಯ ಕುರಿತ ಅನನ್ಯ ಸಂಶೋಧನಾ ಯೋಜನೆಗಳ ಚೌಕಟ್ಟು ಮತ್ತು ಸಹಯೋಗ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಸಮಾಲೋಚಿಸಲು ನವದೆಹಲಿಯ ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್.ಸಿ.ಎಸ್), ಬೋರೆಹೊಳೆ ಭೂಭೌತಿಕ ಸಂಶೋಧನಾ ಪ್ರಯೋಗಾಲಯ (ಬಿಜಿಆರ್.ಎಲ್) ಕರಾಡ್, ತಿರುವನಂತಪುರದ ರಾಷ್ಟ್ರೀಯ ಭೂ ವಿಜ್ಞಾನ ಅಧ್ಯಯನ ಕೇಂದ್ರ (ಎನ್.ಸಿ.ಇಎಸ್ಎಸ್) ಮತ್ತು ಗೋವಾದ ರಾಷ್ಟ್ರೀಯ ಧ್ರುವೀಯ ಮತ್ತು ಸಾಗರ ಸಂಶೋಧನಾ ಕೇಂದ್ರ (ಎನ್.ಸಿ.ಪಿಒಆರ್)ನ್ನು ಪ್ರತಿನಿಧಿಸುವ ವಿಜ್ಞಾನಿಗಳ ತಂಡವನ್ನು ರಚಿಸಿದೆ.

ಎರಡು ದಿನಗಳ ಕಾರ್ಯಾಗಾರದಲ್ಲಿ ಎರಡೂ ದೇಶಗಳ ತಜ್ಞರು/ ವಿಜ್ಞಾನಿಗಳು ಘನ ಭೂಮಿಯ ಅಪಾಯಗಳ ವಿವಿಧ ಆಯಾಮಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಈ ಸಂಶೋಧನಾ ಕಾರ್ಯಕ್ರಮಕ್ಕೆ ಗಮನ ಕೇಂದ್ರೀಕರಿಸಲು ಗುರುತಿಸಲಾದ ಸಂಭಾವ್ಯ ಕ್ಷೇತ್ರಗಳಲ್ಲಿ ಶಿಲಾ ವೈಫಲ್ಯದ ಭೌತಶಾಸ್ತ್ರ: ಭೂಕಂಪಗಳು, ಭೂಕುಸಿತಗಳು, ಪ್ರಯೋಗಾಲಯದಿಂದ ದತ್ತಾಂಶ ಸೆಟ್ ಗಳನ್ನು ಸಂಯೋಜಿಸುವುದು, ದೂರಸಂವೇದಿ ಮತ್ತು ಕ್ಷೇತ್ರ ನಿಗಾ; ಭೂ-ಅಪಾಯಗಳನ್ನು ಗುರುತಿಸಲು, ದೌರ್ಬಲ್ಯಗಳನ್ನು ನಕ್ಷೆ ಮಾಡಲು, ನಿವಾರಣಾ ತಂತ್ರಗಳನ್ನು ಅನ್ವೇಷಿಸಲು ಮತ್ತು ವಿಪತ್ತುಗಳ ಸ್ಪಂದನೆಗೆ ಮಾರ್ಗದರ್ಶನ ನೀಡಲು ಭೂ ಅವಲೋಕನ ಮತ್ತು ಎಐ ತಂತ್ರಗಳ ಅಭಿವೃದ್ಧಿ; ಕ್ರಸ್ಟಲ್ ವಿರೂಪತೆಯ ದಟ್ಟವಾದ ಮೇಲ್ವಿಚಾರಣೆಗಾಗಿ ಸಂವೇದಕ ತಂತ್ರಜ್ಞಾನಗಳು; ಅಪಾಯಗಳು ಮತ್ತು ಅಪಾಯಗಳ ಸುಧಾರಿತ ಪ್ರಮಾಣೀಕರಣ; ಕ್ರಿಯಾತ್ಮಕ ಸನ್ನಿವೇಶಗಳು - ಭೌಗೋಳಿಕ-ಅಪಾಯಗಳಿಗೆ ಸ್ಪಂದನೆಗಾಗಿ ನಗರಗಳು ಮತ್ತು ಪ್ರದೇಶಗಳ ದೀರ್ಘಕಾಲೀನ ಅಭಿವೃದ್ಧಿಗೆ ಮಾರ್ಗದರ್ಶನ ನೀಡುವುದು; ಸುನಾಮಿ-ಜೆನಿಕ್ ವಲಯಗಳ ಅಪಾಯದ ಸಾಮರ್ಥ್ಯ; ಜಿಪಿಎಸ್ ಬಳಸಿ ಟಿಇಸಿಯನ್ನು ಅಧ್ಯಯನ ಮಾಡುವ ಮೂಲಕ ಅಯೋನೋಸ್ಫಿರಿಕ್ ತೊಡಕಿನ ಅಧ್ಯಯನ ಮತ್ತು ಸಕಾಲಿಕ ಜಿಪಿಎಸ್ ಮತ್ತು ಎಸ್ಎಂಎ ಸತ್ತಾಂಶವನ್ನು ಬಳಸಿಕೊಂಡು ಫೋಕಲ್ ವ್ಯವಸ್ಥೆಯ ಅಧ್ಯಯನವನ್ನು ಒಳಗೊಂಡಿದ್ದು, ಇದಷ್ಟಕ್ಕೇ ಸೀಮಿತವಾಗಿರುವುದಿಲ್ಲ.
ಭಾರತದಲ್ಲಿ ಭೂಕಂಪನದ ನಿಗಾಕ್ಕೆ ಕಾರಣವಾದ ಇತಿಹಾಸ 1898ರಷ್ಟು ಹಿಂದೆ ಹೋಗುತ್ತದೆ. 1897ರಲ್ಲಿ ಬೃಹತ್ ಶಿಲ್ಲಾಂಗ್ ಪ್ರಸ್ಥಭೂಮಿಯಲ್ಲಿ ಭಾರತೀಯ ಇತಿಹಾಸದಲ್ಲಿ ದಾಖಲಾದ ಅತ್ಯಂತ ಮಾರಕ ಮತ್ತು ಭಾರೀ ತೀವ್ರತೆಯ ಅಂದರೆ 8.7ರ ತೀವ್ರತೆಯ ಭೂಕಂಪದ ನಂತರ 1898ರ ಡಿಸೆಂಬರ್ 1ರಂದು ಅಲಿಪೋರ್ (ಕಲ್ಕತ್ತಾ)ದಲ್ಲಿ ದೇಶದ ಮೊದಲ ಭೂಕಂಪ ವೀಕ್ಷಣಾಲಯವನ್ನು ಸ್ಥಾಪಿಸಲಾಯಿತು.
ದೇಶಾದ್ಯಂತ ಮತ್ತು ಅದರ ಸುತ್ತಮುತ್ತಲಿನ ಭೂಕಂಪಗಳ ಮೇಲ್ವಿಚಾರಣೆಗಾಗಿ, ಭಾರತ ಸರ್ಕಾರ (ಜಿ.ಓ.ಐ.)ದ ಭೂ ವಿಜ್ಞಾನ ಸಚಿವಾಲಯದ ಅಧೀನದಲ್ಲಿರುವ ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರವು ನೋಡಲ್ ಸಂಸ್ಥೆಯಾಗಿದ್ದು, ಇದು ಈ ಉದ್ದೇಶಕ್ಕಾಗಿ, ಎನ್.ಸಿ.ಎಸ್, ದೇಶಾದ್ಯಂತ ಹರಡಿರುವ 152 ವೀಕ್ಷಣಾಲಯಗಳನ್ನು ಒಳಗೊಂಡ ರಾಷ್ಟ್ರೀಯ ಭೂಕಂಪಶಾಸ್ತ್ರ ಜಾಲವನ್ನು (ಎನ್.ಎಸ್.ಎನ್) ನಿರ್ವಹಿಸುತ್ತದೆ. ಎನ್.ಸಿ.ಎಸ್ ವರದಿ ಮಾಡಿದ ಭೂಕಂಪಗಳ ಮಾಹಿತಿಯನ್ನು ಎಷ್ಟು ಸಾಧ್ಯವೋ ಅಷ್ಟು ಕಡಿಮೆ ಅವಧಿಯಲ್ಲಿ ಸಂಬಂಧಪಟ್ಟ ಕೇಂದ್ರ ಮತ್ತು ರಾಜ್ಯ ವಿಪತ್ತು ಅಧಿಕಾರಿಗಳೊಂದಿಗೆ ಹಂಚಿಕೊಳ್ಳುವ ಮೂಲಕ ವಿಪತ್ತಿನ ಹಾನಿಯನ್ನು ತಗ್ಗಿಸುವ ಕ್ರಮ ಕೈಗೊಳ್ಳಲಾಗುತ್ತಿದೆ.
*****
(Release ID: 1890060)