ಗೃಹ ವ್ಯವಹಾರಗಳ ಸಚಿವಾಲಯ

90ನೇ ಇಂಟರ್ ಪೋಲ್ ಮಹಾಧಿವೇಶನದ ಸಮಾರೋಪದಲ್ಲಿ ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರ ಭಾಷಣದ ಪಠ್ಯ

Posted On: 21 OCT 2022 4:30PM by PIB Bengaluru

ಸ್ನೇಹಿತರೇ,
ಭಾರತದ ಸ್ವಾತಂತ್ರ್ಯದ  75ನೇ ವರ್ಷದ ಸಂದರ್ಭದಲ್ಲಿ ನವದೆಹಲಿಯಲ್ಲಿ ಆಯೋಜಿಸಲಾದಗಿದ್ದ ಇಂಟರ್ ಪೋಲ್ ನ  90ನೇ ಮಹಾಧಿವೇಶನದ ಸಮಾರೋಪವನ್ನುದ್ದೇಶಿಸಿ ಭಾಷಣ ಮಾಡಲು ನನಗೆ ಬಹಳ ಸಂತೋಷವಾಗುತ್ತಿದೆ.

ಅಕ್ಟೋಬರ್ 21, ಇಂದಿನ ದಿನಾಂಕ ಭಾರತೀಯ ಪೊಲೀಸರಿಗೆ ಬಹಳ ಮುಖ್ಯವಾದ ದಿನವಾಗಿದೆ.  ಭಾರತವು ಈ ದಿನವನ್ನು ಪೊಲೀಸ್ ಸಂಸ್ಮರಣಾ ದಿನವಾಗಿ ಆಚರಿಸುತ್ತದೆ.

ಭಾರತದ ಏಕತೆ ಮತ್ತು ಪ್ರಜಾಪ್ರಭುತ್ವವನ್ನು ರಕ್ಷಿಸಲು 35000 ಪೊಲೀಸರು ತಮ್ಮ ಪ್ರಾಣವನ್ನು ತ್ಯಾಗ ಮಾಡಿದ್ದಾರೆ.

ಇಂದು ಇಂಟರ್ ಪೋಲ್ ನ ಅಧ್ಯಕ್ಷರು ಮತ್ತು ಮಹಾ ಪ್ರಧಾನ ಕಾರ್ಯದರ್ಶಿಯವರೊಂದಿಗೆ ನಾನು ಪೊಲೀಸ್ ಸ್ಮಾರಕದಲ್ಲಿ ಆ ಎಲ್ಲ ಪೊಲೀಸರಿಗೆ ಗೌರವ ನಮನ ಸಲ್ಲಿಸಿದೆ.

ಕೋವಿಡ್ ಸಾಂಕ್ರಾಮಿಕದ ನಂತರ ಆಯೋಜಿಸಲಾದ ಇಂಟರ್ಪೋಲ್ ನ ಈ ಸಾಮಾನ್ಯ ಸಭೆಯು ಸ್ವತಃ ತುಂಬಾ ವಿಶೇಷವಾಗಿದೆ.

ಕೋವಿಡ್ ಸಮಯದಲ್ಲಿ, ಜಗತ್ತು ಪೊಲೀಸರ ಮಾನವೀಯ ಮುಖವನ್ನೂ ನೋಡಿತು ಮತ್ತು ಅನುಭವಿಸಿತು.

ಕಳೆದ 100 ವರ್ಷಗಳಲ್ಲಿ, ಇಂಟರ್ಪೋಲ್ 195 ದೇಶಗಳನ್ನು ಒಳಗೊಂಡ ಅತ್ಯಂತ ದೊಡ್ಡ ಮತ್ತು ಪರಿಣಾಮಕಾರಿ ವೇದಿಕೆಯಾಗಿದೆ, ಇದು ವಿಶ್ವದಾದ್ಯಂತ ಅಪರಾಧಗಳನ್ನು ನಿಯಂತ್ರಿಸುವಲ್ಲಿ ಬಹಳ ಪ್ರಮುಖ ಪಾತ್ರ ವಹಿಸುತ್ತಿದೆ.

ಭಾರತವು ಇಂಟರ್ ಪೋಲ್ ನ ಅತ್ಯಂತ ಹಳೆಯ ಸದಸ್ಯ ರಾಷ್ಟ್ರಗಳಲ್ಲಿ ಒಂದಾಗಿದೆ. ಇದು 1949 ರಲ್ಲಿ ಇಂಟರ್ ಪೋಲ್ ಗೆ ಸೇರಿತು.

ಇಂದಿನ ಜಗತ್ತಿನಲ್ಲಿ, ಇಂಟರ್ ಪೋಲ್ ನಂತಹ ಸಂಸ್ಥೆ, ಸಹಕಾರ ಮತ್ತು ಬಹುಪಕ್ಷೀಯತೆಗೆ ಅತ್ಯಂತ ಅಗತ್ಯವಾಗಿದೆ.

ಸಾರ್ವಜನಿಕರ ಭದ್ರತೆ, ವಿಶ್ವ ಶಾಂತಿ ಮತ್ತು ಸ್ಥಿರತೆಗೆ ಇಂಟರ್ ಪೋಲ್ ನ ಅರ್ಥಪೂರ್ಣ ಪ್ರಯತ್ನಗಳು ಮತ್ತು ಕೊಡುಗೆಯನ್ನು ನಾನು ಭಾರತ ಸರ್ಕಾರ, ಭಾರತದ ಗೃಹ ಸಚಿವಾಲಯ ಮತ್ತು ಭಾರತದ ವಿವಿಧ ಪೊಲೀಸ್ ಪಡೆಗಳ ಪರವಾಗಿ, ಶ್ಲಾಘಿಸುತ್ತೇನೆ.

ಕ್ರಿಮಿನಲ್ ನ್ಯಾಯ ವ್ಯವಸ್ಥೆಯು ಭಾರತಕ್ಕೆ ಹೊಸದೇನಲ್ಲ. 'ರಾಜ್ಯ'ದ ಪರಿಕಲ್ಪನೆಯನ್ನು ಪರಿಚಯಿಸಿದಾಗಲೆಲ್ಲಾ, ಪೊಲೀಸ್ ವ್ಯವಸ್ಥೆ ರಾಜ್ಯದ ಮೊದಲ ಜವಾಬ್ದಾರಿಯಾಗಿ ಹೊರಹೊಮ್ಮಿರಬೇಕು. ಅದರ ನಾಗರಿಕರ ಸುರಕ್ಷತೆಯು ಯಾವುದೇ ರಾಜ್ಯಕ್ಕೆ, ಅದರ ಮೊದಲ ಜವಾಬ್ದಾರಿಯಾಗಿದೆ.

ಭಾರತೀಯ ಚಿಂತನೆಯಲ್ಲಿ, ಕಾನೂನು ಮತ್ತು ದಂಡನಾ ನೀತಿಯ ಬಗ್ಗೆ ಆಳವಾದ ವಿಚಾರಗಳು ಲಭ್ಯವಿವೆ.  ಸಾವಿರಾರು ವರ್ಷಗಳ ಹಿಂದಿನ ಪ್ರಾಚೀನ ಭಾರತೀಯ ಮಹಾಕಾವ್ಯಗಳಾದ ರಾಮಾಯಣದಲ್ಲಿ, ಇತಿಹಾಸದಲ್ಲಿ ವಿಧುರ, ಶುಕ್ರಾಚಾರ್ಯ, ಚಾಣಕ್ಯ, ತಿರುವಳ್ಳುವರ್ ಮುಂತಾದವರು ಸೌಹಾರ್ದಯುತ ನ್ಯಾಯ ಮತ್ತು ಸೂಕ್ತ ಶಿಕ್ಷೆಯ ತತ್ವವನ್ನು ಒಪ್ಪಿಕೊಂಡಿದ್ದರು.

ಮಹಾಕಾವ್ಯವಾದ ಮಹಾಭಾರತದಲ್ಲಿ, ಶಾಂತಿಯ ಪುಸ್ತಕದಲ್ಲಿ, 15ನೇ ಅಧ್ಯಾಯದಲ್ಲಿ ಒಂದು ಶ್ಲೋಕವಿದೆ, ಅದರ ಅರ್ಥ:

ಅಪರಾಧಿಗಳನ್ನು ನಿಯಂತ್ರಿಸುವ ಸಲುವಾಗಿ, ನ್ಯಾಯ ವ್ಯವಸ್ಥೆಯು ಯಾವುದೇ ಪರಿಣಾಮಕಾರಿ ಮತ್ತು ಯಶಸ್ವಿ ಆಡಳಿತ ವ್ಯವಸ್ಥೆಯ ಅಗತ್ಯ ಅಂಶವಾಗಿದೆ.

ಸಮಾಜದಲ್ಲಿ ಉತ್ತಮ ಆಡಳಿತವನ್ನು ಖಾತ್ರಿಪಡಿಸುವುದು ನ್ಯಾಯದಿಂದ ಮಾತ್ರ ಸಾಧ್ಯ.

ನ್ಯಾಯವು ಜಾಗೃತವಾದಾಗ ಮಾತ್ರ, ರಾತ್ರಿಯಲ್ಲಿಯೂ ಸಹ, ನಾಗರಿಕರು ಮತ್ತು ಸಮಾಜವು ನಿರ್ಭೀತವಾಗಿರುತ್ತದೆ ಮತ್ತು ಉತ್ತಮ ಸಮಾಜವನ್ನು ನಿರ್ಮಿಸಲು ಸಾಧ್ಯ.

ಪ್ರಸ್ತುತ, ಪ್ರಧಾನಮಂತ್ರಿ ಮೋದಿಯವರ ನಾಯಕತ್ವದಲ್ಲಿ, ಭಾರತ ಸರ್ಕಾರವು, ನಮ್ಮ ಪೊಲೀಸ್ ಪಡೆ ಯಾವುದೇ ಸವಾಲನ್ನು ಎದುರಿಸಲು ಸದಾ ಸಿದ್ಧವಾಗಿದೆ ಎಂದು ಖಾತ್ರಿಪಡಿಸಿಕೊಳ್ಳಲು ಅಗತ್ಯ ಕ್ರಮಗಳನ್ನು ನಿರಂತರವಾಗಿ ತೆಗೆದುಕೊಳ್ಳುತ್ತಿದೆ.

ಭವಿಷ್ಯದ ಸವಾಲುಗಳನ್ನೂ ಎದುರಿಸಲು ಭಾರತ ಸರ್ಕಾರ ಇತ್ತೀಚೆಗೆ ಹಲವಾರು ಹೊಸ ಉಪಕ್ರಮಗಳನ್ನು ಕೈಗೊಂಡಿದೆ.

ಭಾರತ ಸರ್ಕಾರವು ರಾಷ್ಟ್ರೀಯ ವಿಧಿವಿಜ್ಞಾನ ವಿಶ್ವವಿದ್ಯಾಲಯವನ್ನು ಸ್ಥಾಪಿಸಿದೆ.

ಐಸಿಜೆಎಸ್ (ಇಂಟರ್ ಆಪರೇಬಲ್ ಕ್ರಿಮಿನಲ್ ಜಸ್ಟೀಸ್ ಸಿಸ್ಟಮ್) ಅಂದರೆ ಇ-ನ್ಯಾಯಾಲಯಗಳು, ಇ-ಕಾರಾಗೃಹಗಳನ್ನು ರೂಪಿಸುವ ಕ್ರಿಮಿನಲ್ ನ್ಯಾಯದ ಪ್ರಮುಖ ಆಧಾರ ಸ್ತಂಭಗಳಾಗಿವೆ,

ಇ-ವಿಧಿ ವಿಜ್ಞಾನ ಮತ್ತು ಇ-ಪ್ರಾಸಿಕ್ಯೂಶನ್ ಅನ್ನು ಅಪರಾಧ ಮತ್ತು ಅಪರಾಧಿಕರಣದ ಪತ್ತೆ ಜಾಲ ಮತ್ತು (ಸಿಸಿಟಿಎನ್ಎಸ್) ಗೆ ಸಂಪರ್ಕಿಸಲಾಗಿದೆ.

ಭಯೋತ್ಪಾದನೆ, ಮಾದಕವಸ್ತುಗಳು ಮತ್ತು ಆರ್ಥಿಕ ಅಪರಾಧಗಳಂತಹ ಅಪರಾಧಗಳ ಬಗ್ಗೆ ರಾಷ್ಟ್ರೀಯ ದತ್ತಾಂಶವನ್ನು ರೂಪಿಸಲು ಭಾರತ ಸರ್ಕಾರ ನಿರ್ಧರಿಸಿದೆ.  ಸೈಬರ್ ಅಪರಾಧಗಳನ್ನು ಸಮಗ್ರ ರೀತಿಯಲ್ಲಿ ಎದುರಿಸಲು ಭಾರತ ಸರ್ಕಾರವು ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರ, ಐ4ಸಿಯನ್ನು ಸ್ಥಾಪಿಸಿದೆ.

ದತ್ತಾಂಶ ಮತ್ತು ಮಾಹಿತಿಯಲ್ಲಿನ ಕ್ರಾಂತಿಯ ಲಕ್ಷಣವಾದ ಈ ಅವಧಿಯಲ್ಲಿ, ಅಪರಾಧ ಮತ್ತು ಅಪರಾಧಿಗಳ ಸ್ವರೂಪವು ಬದಲಾಗಿದೆ.

ಇಂದು ಅಪರಾಧವು ಗಡಿರಹಿತವಾಗಿದೆ, ಮತ್ತು ನಾವು ಈ ರೀತಿಯ ಅಪರಾಧಗಳನ್ನು ಮತ್ತು ಈ ಅಪರಾಧಿಗಳನ್ನು ನಿಗ್ರಹಿಸಲು ಬಯಸಿದರೆ, ನಾವೆಲ್ಲರೂ ಸಾಂಪ್ರದಾಯಿಕ ಭೌಗೋಳಿಕ ಗಡಿಗಳನ್ನು ಮೀರಿ ಯೋಚಿಸಬೇಕು.

ಕ್ರಿಮಿನಲ್ ಸಿಂಡಿಕೇಟ್ ಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪರಸ್ಪರ ಕೈಜೋಡಿಸಲು ಆಧುನಿಕ ತಂತ್ರಜ್ಞಾನವನ್ನು ಬಳಸುತ್ತಿರುವುದರಿಂದ, ದೇಶಗಳು ತಮ್ಮ ನಡುವೆ ಸಹಕಾರ ಮತ್ತು ಸಮನ್ವಯವನ್ನು ಏಕೆ ಹೊಂದಬಾರದು ಎಂಬುದಕ್ಕೆ ಯಾವುದೇ ಕಾರಣವೂ ನನಗೆ ಕಾಣುವುದಿಲ್ಲ.

ಇದು ಪೊಲೀಸರಿಗೆ ಮತ್ತು ಕಾನೂನು ಜಾರಿ ಸಂಸ್ಥೆಗಳಿಗೆ ಒಂದು ರೀತಿಯ ದ್ವಂದ್ವ ಸವಾಲಾಗಿ ಪ್ರತಿನಿಧಿಸುತ್ತದೆ

1.    ಒಂದೆಡೆ ಕಾನೂನನ್ನು ರಾಷ್ಟ್ರಗಳ ಸಾರ್ವಭೌಮತ್ವದ ಪರಿಮಿತಿಯೊಳಗೆ ಜಾರಿಗೊಳಿಸಬೇಕು.
2.    ಮತ್ತೊಂದೆಡೆ, ನಾವು ಅಪರಾಧದ ಜಾಗತಿಕ ಸ್ವರೂಪವನ್ನು ಅರ್ಥಮಾಡಿಕೊಳ್ಳಬೇಕು, ಅಪರಾಧಿಗಳನ್ನು ಪತ್ತೆಹಚ್ಚಬೇಕು ಮತ್ತು ನ್ಯಾಯದ ಬಗ್ಗೆಯೂ ಚಿಂತಿಸಬೇಕು.

ಈ ಸವಾಲುಗಳ ನಡುವೆ, ಭದ್ರತಾ ಏಜೆನ್ಸಿಗಳ ಕೆಲಸವನ್ನು ಸುಲಭಗೊಳಿಸಲು, ಇಂಟರ್ಪೋಲ್ ನ ಪಾತ್ರವು ಬಹಳ ಮುಖ್ಯವಾಗಿದೆ ಮತ್ತು ಭವಿಷ್ಯದಲ್ಲಿ ಇನ್ನೂ ಹೆಚ್ಚು ಪ್ರಮುಖವಾಗುತ್ತದೆ.

ಈ ನಿಟ್ಟಿನಲ್ಲಿ, ನಾನು ಕೆಲವು ವಿಷಯಗಳ ಬಗ್ಗೆ ಮಹಾ ಸಭೆಯ ಗಮನವನ್ನು ಸೆಳೆಯಲು ಬಯಸುತ್ತೇನೆ.

ಇಂದು, ಭಯೋತ್ಪಾದನೆಯು ಒಂದು ಜಾಗತಿಕ ಸಮಸ್ಯೆಯಾಗಿದೆ ಮತ್ತು 2020-2025 ರ ಅವಧಿಯಲ್ಲಿ ಇಂಟರ್ಪೋಲ್ ನ 7 ಜಾಗತಿಕ ಪೊಲೀಸ್ ಗುರಿಗಳಲ್ಲಿ ಇದು ಪ್ರಥಮ ಮತ್ತು ಅತ್ಯಂತ ಪ್ರಮುಖವಾಗಿದೆ.

"ಭಯೋತ್ಪಾದನೆಯ ಬೆದರಿಕೆಯನ್ನು ಎದುರಿಸುವುದು"

'ಭಯೋತ್ಪಾದನೆಯು ಮಾನವ ಹಕ್ಕುಗಳ ಅತಿದೊಡ್ಡ ಉಲ್ಲಂಘನೆಯಾಗಿದೆ' ಎಂದು ನಾನು ದೃಢವಾಗಿ ನಂಬುತ್ತೇನೆ.

ಗಡಿಯಾಚೆಗಿನ ಭಯೋತ್ಪಾದನೆಯ ವಿರುದ್ಧ ಹೋರಾಡಲು, ಗಡಿಯಾಚೆಗಿನ ಸಹಕಾರವು ಬಹಳ ಮುಖ್ಯವಾಗಿದೆ, ಮತ್ತು ಇದಕ್ಕಾಗಿ ಇಂಟರ್ ಪೋಲ್ ಅತ್ಯುತ್ತಮ ವೇದಿಕೆಯಾಗಿದೆ.

ಮೊದಲನೆಯದಾಗಿ, ಭಯೋತ್ಪಾದನೆ ಮತ್ತು ಭಯೋತ್ಪಾದನೆಯ ವ್ಯಾಖ್ಯಾನವನ್ನು ಎಲ್ಲ ದೇಶಗಳು ಒಪ್ಪಬೇಕು.

ಭಯೋತ್ಪಾದನೆಯ ವಿರುದ್ಧ ಒಟ್ಟಾಗಿ ಹೋರಾಡುವ ಬದ್ಧತೆ ಇರಬೇಕು, ಒಳ್ಳೆ ಭಯೋತ್ಪಾದನೆ, ಕೆಟ್ಟ ಭಯೋತ್ಪಾದನೆ ಮತ್ತು ಸಣ್ಣ ಮತ್ತು ದೊಡ್ಡ ದಾಳಿ ಎಂಬಂತಹ ನಿರೂಪಣೆಗಳು ಒಟ್ಟಿಗೆ ಇರಲು ಸಾಧ್ಯವಿಲ್ಲ.

ಆನ್ಲೈನ್ ಮೂಲಭೂತವಾದದ ಮೂಲಕ ಭಯೋತ್ಪಾದಕ ಸಿದ್ಧಾಂತಗಳ ಗಡಿಯಾಚೆಗಿನ ಪ್ರಚಾರದ ಬಗ್ಗೆ ನಾವು ಒಮ್ಮತವನ್ನು ಸಾಧಿಸಬೇಕಾಗಿದೆ.

ನಾವು ಇದನ್ನು ರಾಜಕೀಯ ಸಮಸ್ಯೆ ಎಂದು ಪರಿಗಣಿಸಲು ಸಾಧ್ಯವಿಲ್ಲ. ಭಯೋತ್ಪಾದನೆಯ ವಿರುದ್ಧ ಪರಿಣಾಮಕಾರಿ ಹೋರಾಟವು ದೀರ್ಘಕಾಲೀನ, ಸಮಗ್ರ ಮತ್ತು ಸುಸ್ಥಿರವಾಗಿರಬೇಕು ಎಂದು ಖಚಿತಪಡಿಸಿಕೊಳ್ಳಲು ನಾವೆಲ್ಲರೂ ಬದ್ಧರಾಗಿರಬೇಕು.

ಎಲ್ಲಾ ರೀತಿಯ ಭಯೋತ್ಪಾದನೆಯ ವಿರುದ್ಧ ಹೋರಾಡಲು ಮತ್ತು ತಾಂತ್ರಿಕ ನೆರವು ಮತ್ತು ಮಾನವ ಸಂಪನ್ಮೂಲವನ್ನು ಒದಗಿಸಲು ಇಂಟರ್ ಪೋಲ್ ನೊಂದಿಗೆ ಶ್ರಮಿಸಲು ಭಾರತ ಬದ್ಧವಾಗಿದೆ.

ಇಂಟರ್ ಪೋಲ್ ನೋಡಲ್ ಸಂಸ್ಥೆ ಮತ್ತು ಭಯೋತ್ಪಾದನಾ ನಿಗ್ರಹ ಸಂಸ್ಥೆಗಳು ವಿಭಿನ್ನವಾಗಿರುವುದನ್ನು ನಾವು ಅನೇಕ ದೇಶಗಳಲ್ಲಿ ನೋಡಿದ್ದೇವೆ. ಈ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಭಯೋತ್ಪಾದನೆಯ ವಿರುದ್ಧ ಹೋರಾಡಲು, ನಾವು ವಿಶ್ವದ ಎಲ್ಲ ಭಯೋತ್ಪಾದನಾ ನಿಗ್ರಹ ಸಂಸ್ಥೆಗಳನ್ನು ಒಟ್ಟುಗೂಡಿಸಬೇಕಾಗುತ್ತದೆ.

ಈ ನಿಟ್ಟಿನಲ್ಲಿ, ಎಲ್ಲ ಸದಸ್ಯ ರಾಷ್ಟ್ರಗಳ ಭಯೋತ್ಪಾದನಾ ನಿಗ್ರಹ ಸಂಸ್ಥೆಗಳ ನಡುವೆ ಸಕಾಲಿಕ ಮಾಹಿತಿ ವಿನಿಮಯ ರೇಖೆಗಾಗಿ ಶಾಶ್ವತ ಕಾರ್ಯವಿಧಾನವನ್ನು ಸ್ಥಾಪಿಸಲು ಒಂದು ಉಪಕ್ರಮವನ್ನು ಪ್ರಾರಂಭಿಸಲು ನಾನು ಇಂಟರ್ ಪೋಲ್ ಅನ್ನು ವಿನಂತಿಸುತ್ತೇನೆ.

ಭಾರತದ ಸ್ವಾತಂತ್ರ್ಯದ 75 ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಾದಕದ್ರವ್ಯ ಮುಕ್ತ ಭಾರತದ ತಮ್ಮ ದೃಷ್ಟಿಕೋನವನ್ನು ಮುಂದಿಟ್ಟಿದ್ದಾರೆ.

ಮಾದಕವಸ್ತುಗಳ ಜಾಗತಿಕ ವ್ಯಾಪಾರದ ಹೊರಹೊಮ್ಮುವ ಪ್ರವೃತ್ತಿಗಳು ಮತ್ತು ಮಾದಕವಸ್ತು ಭಯೋತ್ಪಾದನೆಯಂತಹ ಸವಾಲುಗಳನ್ನು ಗಮನದಲ್ಲಿಟ್ಟುಕೊಂಡು, ಎಲ್ಲ ದೇಶಗಳ ನಡುವೆ ನಿಕಟ ಸಹಕಾರದ ಅಗತ್ಯವಿದೆ,

ಅವುಗಳೆಂದರೆ
1.         ಮಾಹಿತಿ ಮತ್ತು ಬೇಹುಗಾರಿಕೆ ವಿನಿಮಯಕ್ಕೆ ವೇದಿಕೆಗಳು
2.         ಗುಪ್ತಚರ ಆಧಾರಿತ ಜಂಟಿ ಅಭಿಯಾನಗಳು
3.         ಪ್ರಾದೇಶಿಕ ಕಡಲ ಭದ್ರತಾ ಸಹಕಾರ
4.         ಪರಸ್ಪರ ಕಾನೂನು ನೆರವು
5.        ಅಕ್ರಮ ಹಣ ವರ್ಗಾವಣೆ ವಿರುದ್ಧ ಹೋರಾಡಲು ಪರಿಣಾಮಕಾರಿ ಕಾರ್ಯವಿಧಾನ.

ಭಾರತದ ಮಾದಕದ್ರವ್ಯ ನಿಗ್ರಹ ಶಾಖೆ ಮಾದಕವಸ್ತುಗಳನ್ನು ವಶಪಡಿಸಿಕೊಳ್ಳುವಲ್ಲಿ, ಅವುಗಳನ್ನು ನಾಶಪಡಿಸುವಲ್ಲಿ ಮತ್ತು ಪ್ರಕರಣಗಳನ್ನು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗುವಲ್ಲಿ ಸಾಕಷ್ಟು ಯಶಸ್ಸನ್ನು ಸಾಧಿಸಿದೆ.

ನಾನು ಇಂಟರ್ ಪೋಲ್ ನ ಕಾರ್ಯಾಚರಣೆಯನ್ನು ಸಹ ಉಲ್ಲೇಖಿಸಲು ಬಯಸುತ್ತೇನೆ

ಲಯನ್ ಫಿಶ್ ಮತ್ತು ಭಾರತದ ಆಪರೇಷನ್ ಗರುಡ. ಮತ್ತು ಆಪರೇಶನ್ ಲಯನ್ ಫಿಶ್ ಅಡಿಯಲ್ಲಿ, ಭಾರತದಲ್ಲಿ ಅತಿದೊಡ್ಡ ವಶಪಡಿಸಿಕೊಳ್ಳಲಾಗಿದೆ ಎಂದು ನಾನು ನಿಮಗೆ ಹೇಳಲು ಬಯಸುತ್ತೇನೆ.

ಎಲ್ಲಾ ಸದಸ್ಯ ರಾಷ್ಟ್ರಗಳ ಮಾದಕದ್ರವ್ಯ-ವಿರೋಧಿ ಏಜೆನ್ಸಿಗಳ ನಡುವೆ ನೈಜ ಸಮಯದ ಮಾಹಿತಿ ವಿನಿಮಯ ಜಾಲವನ್ನು ಸ್ಥಾಪಿಸಲು ಮತ್ತು ವ್ಯಾಪಕವಾದ ನಾರ್ಕೋ ಡೇಟಾಬೇಸ್ ಅನ್ನು ಸ್ಥಾಪಿಸಲು ಅವರು ಉಪಕ್ರಮವನ್ನು ಕೈಗೊಳ್ಳಬೇಕೆಂದು ಇಂಟರ್ಪೋಲ್ಗೆ ನನ್ನ ವಿನಂತಿಯಾಗಿದೆ.

ಇಂಟರ್ ಪೋಲ್ ತನ್ನ ಶತಮಾನೋತ್ಸವದ ಆಚರಣೆಗಳನ್ನು ಪ್ರಾರಂಭಿಸಿದ್ದು, ನಾನು ಅದಕ್ಕೆ ಸಾಕ್ಷಿಯಾಗಿರುವುದು ನನ್ನ  ಸೌಭಾಗ್ಯವಾಗಿದೆ. 

ಈ 4 ದಿನಗಳಲ್ಲಿ, ನೀವು ಇಂಟರ್ಪೋಲ್ ನ ಜಾಗತಿಕ ಅಪರಾಧ ಪ್ರವೃತ್ತಿ ವರದಿ 2022 ಮತ್ತು ಇಂಟರ್ಪೋಲ್ ನ ಮುನ್ನೋಟ 2030 ಕುರಿತು ಸಹ ಚರ್ಚಿಸಿದ್ದೀರಿ ಎಂದು ನನಗೆ ತಿಳಿಸಲಾಗಿದೆ.

ಅದೇ ಸಮಯದಲ್ಲಿ, ಚುರುಕಾದ ಪೊಲೀಸಿಂಗ್, ಮೆಟಾವರ್ಸ್ ಮತ್ತು ಸೈಬರ್ ಬೆದರಿಕೆಗಳ ಕ್ಷೇತ್ರದಲ್ಲಿ ಆಗುತ್ತಿರುವ ಬದಲಾವಣೆಗಳ ಬಗ್ಗೆಯೂ ನೀವು ಚರ್ಚಿಸಿದ್ದೀರಿ.

ಇದಲ್ಲದೆ, ಐ ಫ್ಯಾಮಿಲಿಯಾ ದತ್ತಾಂಶ ಮತ್ತು ಅಂತಾರಾಷ್ಟ್ರೀಯ ಮಕ್ಕಳ ಲೈಂಗಿಕ ಶೋಷಣೆ ದತ್ತಾಂಶದ ಬಳಕೆಯನ್ನು ಹೆಚ್ಚಿಸಲು 2 ಪ್ರಮುಖ ಪ್ರಸ್ತಾಪಗಳನ್ನು ಸಹ ಅಂಗೀಕರಿಸಲಾಗಿದೆ.

1923ರಲ್ಲಿ ಇಂಟರ್ ಪೋಲ್ ಸ್ಥಾಪನೆಯಾದಾಗ, ಆ ಸಮಯದಲ್ಲಿ ಅಪರಾಧ ಮತ್ತು ಪೊಲೀಸ್ ಸವಾಲುಗಳು ಮತ್ತು ಇಂದು ಅಪರಾಧದ ಸ್ವರೂಪ ಮತ್ತು ವಿಧಾನಗಳು ಬಹಳ ಭಿನ್ನವಾಗಿವೆ, ಸಾಕಷ್ಟು ಬದಲಾವಣೆಗಳು ಸಂಭವಿಸಿವೆ, ಮತ್ತು ಮುಂಬರುವ ದಶಕಗಳಲ್ಲಿ, ಇನ್ನೂ ಹೆಚ್ಚಿನ ಬದಲಾವಣೆಗಳು ಸಂಭವಿಸುವುದು ಸ್ವಾಭಾವಿಕವಾಗಿದೆ.

ಅಪರಾಧಿಕ ಮನೋಸ್ಥಿತಿಗಳು ಬದಲಾಗಿಲ್ಲ, ಆದರೆ ಅಪರಾಧದ ಮಾರ್ಗಗಳು ಬದಲಾಗುತ್ತಿವೆ. ಈ ನಿಟ್ಟಿನಲ್ಲಿ, ಕಳೆದ 100 ವರ್ಷಗಳಲ್ಲಿನ ತನ್ನ ಅನುಭವ ಮತ್ತು ಸಾಧನೆಗಳ ಆಧಾರದ ಮೇಲೆ ಇಂಟರ್ ಪೋಲ್ ಮುಂದಿನ 50 ವರ್ಷಗಳ ಭವಿಷ್ಯದ ಯೋಜನೆಯನ್ನು ಸಿದ್ಧಪಡಿಸಬೇಕು ಎಂಬುದು ನನ್ನ ಸಲಹೆಯಾಗಿದೆ.

ಇಂಟರ್ ಪೋಲ್ ತನ್ನ ಆಶ್ರಯದಲ್ಲಿ ಒಂದು ಅಧ್ಯಯನ ಗುಂಪನ್ನು ಸಹ ಸ್ಥಾಪಿಸಬಹುದು, ಇದು ಮುಂದಿನ 35-50 ವರ್ಷಗಳಲ್ಲಿ ಎದುರಾಗಬಹುದಾದ ಸವಾಲುಗಳು ಮತ್ತು ಅವುಗಳಿಗೆ ಪರಿಹಾರಗಳ ಬಗ್ಗೆ ವಿವರವಾದ ಸಂಶೋಧನೆಯನ್ನು ನಡೆಸಬಹುದು. ಇದು 2048 ಮತ್ತು 2073 ರ ನಡುವೆ ವಿಶ್ವ ಪೊಲೀಸಿಂಗ್ ಎಂಬ ವರದಿಯನ್ನು ಸಹ ತಯಾರಿಸಬಹುದು.

ಮತ್ತು ಪ್ರತಿ 5 ವರ್ಷಗಳಿಗೊಮ್ಮೆ ಈ ಯೋಜನೆಯನ್ನು ಪರಾಮರ್ಶಿಸುವುದು ಸಹ ಪ್ರಸ್ತುತವಾಗಿರುತ್ತದೆ.

ಈ ಸಂಶೋಧನೆಯು ಸದಸ್ಯ ರಾಷ್ಟ್ರಗಳ ಕಾನೂನು ಜಾರಿ ಏಜೆನ್ಸಿಗಳಿಗೆ ಬಹಳ ಉಪಯುಕ್ತವೆಂದು ಸಾಬೀತುಪಡಿಸುತ್ತದೆ ಎಂದು ನಾನು ನಂಬುತ್ತೇನೆ.

ಈ ವೇದಿಕೆಯಲ್ಲಿ ಇಂಟರ್ ಪೋಲ್ ಧ್ವಜವನ್ನು ಆಸ್ಟ್ರಿಯಾಕ್ಕೆ ಹಸ್ತಾಂತರಿಸಲು ನನಗೆ ಬಹಳ ಸಂತೋಷವಾಗುತ್ತದೆ.  ವಿಯೆನ್ನಾ ಮಹಾಧಿವೇಶನದ ಆಯೋಜನೆಗೆ ನನ್ನ ಶುಭ ಹಾರೈಕೆಗಳು.

ಅಂತಿಮವಾಗಿ. ನಾನು ಭಾರತದ ಪರವಾಗಿ, ನಮ್ಮ ಬದ್ಧತೆಯನ್ನು ಪುನರುಚ್ಚರಿಸಲು ಬಯಸುತ್ತೇನೆ.

ಮಾದಕವಸ್ತು ಭಯೋತ್ಪಾದನೆ, ಆನ್ಲೈನ್ ಮೂಲಭೂತವಾದ, ಸಂಘಟಿತ ಸಿಂಡಿಕೇಟ್ ಗಳು ಮತ್ತು ಅಕ್ರಮ ಹಣ ವರ್ಗಾವಣೆಯಂತಹ ಎಲ್ಲ ಸ್ವರೂಪದ ಭಯೋತ್ಪಾದನೆಯ ವಿರುದ್ಧ ಹೋರಾಡಲು ಇಂಟರ್ಪೋಲ್ ನ ಸಹಯೋಗದಲ್ಲಿ ಶ್ರಮಿಸಲು ಭಾರತ ಬದ್ಧವಾಗಿದೆ.

ಈ ನಿಟ್ಟಿನಲ್ಲಿ, ಸಮರ್ಪಿತ ಕೇಂದ್ರ ಅಥವಾ ಸಮಾವೇಶವನ್ನು ಸ್ಥಾಪಿಸಲು ಇಂಟರ್ ಪೋಲ್ ಅನ್ನು ಬೆಂಬಲಿಸಲು ಮತ್ತು ವಿಶ್ವದ ಭಯೋತ್ಪಾದನಾ ನಿಗ್ರಹ ಮತ್ತು ಮಾದಕದ್ರವ್ಯ ವಿರೋಧಿ ಸಂಸ್ಥೆಗಳಿಗಾಗಿ ಸಮರ್ಪಿತವಾದ ಸಂವಹನ ಜಾಲವನ್ನು ಪ್ರಾರಂಭಿಸಲು ಭಾರತ ಬದ್ಧವಾಗಿದೆ.

ಆತಿಥೇಯ ರಾಷ್ಟ್ರದ ಪರವಾಗಿ, ನವದೆಹಲಿ ಇಂಟರ್ ಪೋಲ್ ಮಹಾಧಿವೇಶನದಲ್ಲಿ ಭಾಗವಹಿಸಿದ್ದಕ್ಕಾಗಿ ನಾನು ಎಲ್ಲ ನಿಯೋಗಗಳಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ.

ನಿಮ್ಮ ಈ ಭಾರತ ಭೇಟಿ, ವಿವಿಧ ಸ್ಥಳಗಳಲ್ಲಿನ ಪ್ರವಾಸೋದ್ಯಮ ಮತ್ತು ದೀಪಾವಳಿಯ ಹಬ್ಬವು ನಿಮಗೆ ಸದಾ ಸ್ಮರಣೀಯವಾಗಿರುತ್ತದೆ ಎಂಬ ಖಾತ್ರಿ ನನಗಿದೆ.

ಮಹಾಧಿವೇಶನ ಅತ್ಯುತ್ತಮ ಸಂಯೋಜನೆಗಾಗಿ ಇಂಟರ್ ಪೋಲ್ ಮತ್ತು ಸಿಬಿಐ ಅನ್ನು ನಾನು ಶ್ಲಾಘಿಸುತ್ತೇನೆ.

ನೀವೆಲ್ಲರೂ ತುಂಬಾ ಆಹ್ಲಾದಕರ ಮತ್ತು ಸುರಕ್ಷಿತವಾಗಿ ಮನೆಗೆ ಮರಳಬೇಕೆಂದು ನಾನು ಹಾರೈಸುತ್ತೇನೆ ಮತ್ತು ಈ ಮಾತುಗಳೊಂದಿಗೆ, ನಾನು ನನ್ನ ಭಾಷಣಕ್ಕೆ ಪೂರ್ಣ ವಿರಾಮ ಹಾಕುತ್ತೇನೆ.

******



(Release ID: 1870647) Visitor Counter : 159


Read this release in: Tamil , English , Urdu