ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ
ಈ ಸಾಂಕ್ರಾಮಿಕ ಕಾಲದಲ್ಲಿ ಜನರಿಗೆ ಉಚಿತ ಆಹಾರ ಧಾನ್ಯಗಳನ್ನು ವಿತರಿಸುವ ಸುದೀರ್ಘ ಕಾರ್ಯವನ್ನು ಕೇಂದ್ರ ನಡೆಸುತ್ತಿದೆ: ಕಾರ್ಯದರ್ಶಿ, ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆ
ಪ್ರಧಾನ ಮಂತ್ರಿ ಗರಿಬ್ ಕಲ್ಯಾಣ್ ಯೋಜನೆ 3 ಮತ್ತು 4 ಗಾಗಿ 278.25 ಎಲ್ಎಂಟಿಯಷ್ಟು ಆಹಾರ ಧಾನ್ಯಗಳನ್ನು ಹೆಚ್ಚು ದುರ್ಬಲರ ಅನುಕೂಲಕ್ಕಾಗಿ ನಿಗದಿಪಡಿಸಲಾಗಿದೆ
ರಬಿ ಮಾರ್ಕೆಟ್ ಅವಧಿ 2021-22ರಲ್ಲಿ ಕೈಗೊಂಡ 433.24 ಎಲ್ಎಂಟಿಯ ಗೋಧಿ ಖರೀದಿಯ ದಾಖಲೆಯು ಹಿಂದಿನ 389.93 ಎಲ್ಎಂಟಿಯನ್ನು ಮೀರಿಸಿದೆ
ಭಾರತದಾದ್ಯಂತ 84,369.19 ಕೋಟಿ ರೂಪಾಯಿಗಳನ್ನು ನೇರವಾಗಿ ರೈತರ ಖಾತೆಗೆ ವರ್ಗಾಯಿಸಲಾಗಿದೆ: ಶ್ರೀ ಪಾಂಡೆ
ಒಎನ್ಒಆರ್ ಸಿ ಅಡಿಯಲ್ಲಿ 1.5 ಕೋಟಿ ಮಾಸಿಕ ಪೋರ್ಟಬಿಲಿಟಿ ವಹಿವಾಟುಗಳನ್ನು ದಾಖಲಿಸಲಾಗುತ್ತಿದೆ: ಶ್ರೀ ಪಾಂಡೆ
ಫಲಾನುಭವಿಗಳನ್ನು ಪಡಿತರ ಚೀಟಿಯಲ್ಲಿ ಸೇರಿಸಲು ಅಥವಾ ತೆಗೆಯಲು ಸಾಮಾನ್ಯ ಅಂಶಗಳ ಪಟ್ಟಿಯನ್ನು ಸಿದ್ಧಪಡಿಸುವುದಕ್ಕಾಗಿ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಿಂದ ಪಡೆದ ಸಲಹೆಗಳ ಆಧಾರದ ಮೇಲೆ ಒಂದು ಮಾದರಿ ಮಾರ್ಗಸೂಚಿಯನ್ನು ಕೇಂದ್ರವು ಶೀಘ್ರದಲ್ಲೇ ಅಂತಿಮಗೊಳಿಸುತ್ತದೆ: ಶ್ರೀ ಪಾಂಡೆ
ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯ ಕಾರ್ಯದರ್ಶಿಯವರು ಇಲಾಖೆಯ ಉಪಕ್ರಮಗಳು ಮತ್ತು ಸಾಧನೆಗಳ ಬಗ್ಗೆ ಮಾಧ್ಯಮಗಳಿಗೆ ವಿವರಿಸಿದರು
Posted On:
05 JUL 2021 5:48PM by PIB Bengaluru
ಪ್ರಧಾನ ಮಂತ್ರಿ ಗರಿಬ್ ಕಲ್ಯಾಣ್ ಅನ್ನ ಯೋಜನೆ (ಪಿಎಂಜಿಕೆಎ) ಅನುಷ್ಠಾನ ಮತ್ತು ಪ್ರಸಕ್ತ ಋತುವಿನಲ್ಲಿ ಆಹಾರ ಧಾನ್ಯಗಳ ಸಂಗ್ರಹದಲ್ಲಿ ಇಲಾಖೆಯ ಉಪಕ್ರಮಗಳು ಮತ್ತು ಸಾಧನೆಗಳ ಬಗ್ಗೆ ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯ ಕಾರ್ಯದರ್ಶಿ ಶ್ರೀ ಸುಧಾಂಶು ಪಾಂಡೆ ಇಂದು ಮಾಧ್ಯಮಗಳಿಗೆ ವಿವರಿಸಿದರು.
