ಹಣಕಾಸು ಆಯೋಗ

ಪ್ರಧಾನಿಯವರಿಗೆ ಹಣಕಾಸು ಆಯೋಗ ವರದಿ ಸಲ್ಲಿಕೆ

Posted On: 16 NOV 2020 5:37PM by PIB Bengaluru

15 ನೇ ಹಣಕಾಸು ಆಯೋಗದ ಅಧ್ಯಕ್ಷರು ಮತ್ತು ಸದಸ್ಯರು 2021-22 ರಿಂದ 2025-26 ಅವಧಿಯ ವರದಿಯ ಪ್ರತಿಯನ್ನು ಇಂದು ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರಿಗೆ ಸಲ್ಲಿಸಿದರು. ಆಯೋಗವು ತನ್ನ ವರದಿಯನ್ನು 4 ನವೆಂಬರ್ 2020 ರಂದು ರಾಷ್ಟ್ರಪತಿಯವರಿಗೆ ಸಲ್ಲಿಸಿತ್ತು.

ಆಯೋಗದ ಅಧ್ಯಕ್ಷ ಶ್ರೀ ಎನ್ ಕೆ ಸಿಂಗ್ ಮತ್ತು ಸದಸ್ಯರಾದ ಶ್ರೀ ಅಜಯ್ ನಾರಾಯಣ್ ಝಾ, ಪ್ರೊ.ಅನೂಪ್ ಸಿಂಗ್, ಡಾ.ಅಶೋಕ್ ಲಹಿರಿ ಮತ್ತು ಡಾ.ರಮೇಶ್ ಚಂದ್ ಮತ್ತು ಆಯೋಗದ ಕಾರ್ಯದರ್ಶಿ ಶ್ರೀ ಅರವಿಂದ್ ಮೆಹ್ತಾ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಆಯೋಗವು ತನ್ನ ವರದಿಯನ್ನು ನಾಳೆ ಕೇಂದ್ರ ಹಣಕಾಸು ಸಚಿವರಿಗೆ ಸಲ್ಲಿಸಲಿದೆ.

ಸಂವಿಧಾನದಡಿ ನಿಗದಿಪಡಿಸಿದಂತೆ ವರದಿಯನ್ನು ಕ್ರಮ ಕೈಗೊಂಡ ವರದಿ (ಎಟಿಆರ್) ರೂಪದ ವಿವರಣಾತ್ಮಕ ಜ್ಞಾಪಕ ಪತ್ರದೊಂದಿಗೆ ಸದನದಲ್ಲಿ ಮಂಡಿಸಲಾಗುವುದು.

https://static.pib.gov.in/WriteReadData/userfiles/image/image001WQEO.jpg

https://static.pib.gov.in/WriteReadData/userfiles/image/image0023RO7.jpg

https://static.pib.gov.in/WriteReadData/userfiles/image/image003SSLO.jpg

***



(Release ID: 1673226) Visitor Counter : 232