ಪಶು ಸಂಗೋಪನೆ, ಹೈನುಗಾರಿಕೆ ಮತ್ತು ಮೀನುಗಾರಿಕೆ ಸಚಿವಾಲಯ
azadi ka amrit mahotsav

ಗೌರವಾನ್ವಿತ ಉಪರಾಷ್ಟ್ರಪತಿ ಭಾರತದ ನೀಲಿ ಆರ್ಥಿಕತೆ ಬಲವರ್ಧನೆ ಕುರಿತಂತೆ ಲಕ್ಷದ್ವೀಪದ ಅಗಟ್ಟಿಯಲ್ಲಿ ನಡೆದ ಮೀನುಗಾರಿಕೆ ಜನಸಂಪರ್ಕ ಕಾರ್ಯಕ್ರಮದಲ್ಲಿ ಭಾಗಿ


ಟೂನ, ಕಡಲಕಳೆ ಮತ್ತು ಅಲಂಕಾರಿಕ ಮೀನುಗಾರಿಕೆ ಸೇರಿ ಹೆಚ್ಚಿನ ಮೌಲ್ಯದ ದ್ವೀಪ ಸಂಪನ್ಮೂಲಗಳ ಬಳಕೆಯಾಗದ ಸಾಮರ್ಥ್ಯವನ್ನು ಸುಸ್ಥಿರವಾಗಿ ಬಳಸಿಕೊಳ್ಳುವತ್ತ ಹೆಚ್ಚಿನ  ಗಮನ

ಪ್ರಕಟಣಾ ದಿನಾಂಕ: 31 AUG 2026 2:34PM by PIB Bengaluru

ಭಾರತ ಸರ್ಕಾರದ ಮೀನುಗಾರಿಕೆ ಇಲಾಖೆ, ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯವು 2026ರ ಆಗಸ್ಟ್ 31 ರಂದು ಲಕ್ಷದ್ವೀಪದ ಅಗಟ್ಟಿಯಲ್ಲಿ ಮೀನುಗಾರಿಕೆ ಜನಸಂಪರ್ಕ ಕಾರ್ಯಕ್ರಮವನ್ನು ಆಯೋಜಿಸಿತ್ತು. ಭಾರತ ಸರ್ಕಾರದ ಮೀನುಗಾರಿಕೆ ಇಲಾಖೆಯು ಟೂನ, ಕಡಲಕಳೆ ಮತ್ತು ಅಲಂಕಾರಿಕ ಮೀನುಗಾರಿಕೆ ಸಂಪನ್ಮೂಲಗಳಂತಹ ಅಧಿಕ ಮೌಲ್ಯದ ಜಾತಿಗಳನ್ನು ಸುಸ್ಥಿರವಾಗಿ ಬಳಸಿಕೊಳ್ಳುವುದರೊಂದಿಗೆ ಮೀನುಗಾರಿಕೆ ರೈತ ಉತ್ಪಾದಕ ಸಂಸ್ಥೆಗಳು (ಎಫ್ ಎಫ್ ಪಿಒ) ಮತ್ತು ಮೀನುಗಾರಿಕೆ ಸಹಕಾರಿ ಸಂಘಗಳನ್ನು ಬಲವರ್ಧನೆಗೊಳಿಸಲು ವಿಶೇಷ ಗಮನ ಹರಿಸಿದೆ. ಗೌರವಾನ್ವಿತ ಉಪರಾಷ್ಟ್ರಪತಿಗಳು ಅಲಂಕಾರಿಕ ಮೀನುಗಾರಿಕೆ ಅಭಿವೃದ್ಧಿಗಾಗಿ "ಮಿಷನ್ ರಂಗೀನ್ ಮಚ್ಲಿ 2031" ಕಾರ್ಯತಂತ್ರದ ಕ್ರಿಯಾ ಯೋಜನೆಯನ್ನು ಬಿಡುಗಡೆ ಮಾಡಿದರು.

  

ಈ ಜನಸಂಪರ್ಕ ಕಾರ್ಯಕ್ರಮದಲ್ಲಿ ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಮತ್ತು ಪಂಚಾಯತಿ ರಾಜ್ ಸಚಿವರಾದ ಶ್ರೀ ರಾಜೀವ್ ರಂಜನ್ ಸಿಂಗ್; ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಮತ್ತು ಪಂಚಾಯತ್ ರಾಜ್ ರಾಜ್ಯ ಸಚಿವರಾದ ಪ್ರೊ. ಎಸ್. ಪಿ. ಸಿಂಗ್ ಬಾಘೇಲ್ ಮತ್ತು ಲಕ್ಷದ್ವೀಪ ಮತ್ತು ದಾದ್ರಾ ಮತ್ತು ನಗರ ಹವೇಲಿ ಮತ್ತು ದಮನ್ ಮತ್ತು ದಿಯಾಸ್ ನ ಗೌರವಾನ್ವಿತ ಆಡಳಿತಾಧಿಕಾರಿ ಶ್ರೀ ಪ್ರಫುಲ್ ಖೋಡೆ ಪಟೇಲ್ ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಮಹಿಳಾ ಮೀನುಗಾರರು ಮತ್ತು ಮೀನುಗಾರರು, ಲಕ್ಷದ್ವೀಪ ಸರ್ಕಾರದ ಮೀನುಗಾರಿಕೆ ಇಲಾಖೆಯ ಅಧಿಕಾರಿಗಳು, ಮೀನುಗಾರಿಕೆ ಕ್ಲಸ್ಟರ್ ಮತ್ತು ಸಂಬಂಧಿಸಿದ ಸಚಿವಾಲಯಗಳು ಮತ್ತು ಇಲಾಖೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.

ಭಾರತದ ಗೌರವಾನ್ವಿತ ಉಪರಾಷ್ಟ್ರಪತಿ ಶ್ರೀ ಸಿ.ಪಿ. ರಾಧಾಕೃಷ್ಣನ್ ಅವರು ಲಕ್ಷದ್ವೀಪವನ್ನು ರಾಷ್ಟ್ರದ ಅಮೂಲ್ಯ ಸಮುದ್ರ ಆಸ್ತಿ ಎಂದು ಬಣ್ಣಿಸಿದರು ಮತ್ತು 4,200 ಚದರ ಕಿ.ಮೀ. ಲಗೂನ್ ಪ್ರದೇಶ ಮತ್ತು ಸುಮಾರು 4 ಲಕ್ಷ ಚದರ ಕಿ.ಮೀ.ನ ವಿಶೇಷ ಆರ್ಥಿಕ ವಲಯದಿಂದ ಕೂಡಿರುವ ಅದರ ಅಪಾರ ಮೀನುಗಾರಿಕೆ ಸಾಮರ್ಥ್ಯವನ್ನು ಪ್ರಮುಖವಾಗಿ ಪ್ರಸ್ತಾಪಿಸಿದರು. ನೀಲಿ ಆರ್ಥಿಕತೆಯ ಮೂಲಕ ಸುಸ್ಥಿರ ಬೆಳವಣಿಗೆ ಮತ್ತು ಸಮೃದ್ಧಿಯ ಹೊಸ ಯುಗವನ್ನು ಆರಂಭಿಸುವ ನಿಟ್ಟಿನಲ್ಲಿ ಭಾರತ ಸರ್ಕಾರ, ಲಕ್ಷದ್ವೀಪ ಆಡಳಿತ, ವೈಜ್ಞಾನಿಕ ಸಂಸ್ಥೆಗಳು ಮತ್ತು ಮೀನುಗಾರಿಕಾ ಸಮುದಾಯಗಳ ಸಾಮೂಹಿಕ ಬದ್ಧತೆಯನ್ನು ಈ ಜನಸಂಪರ್ಕ ಕಾರ್ಯಕ್ರಮವು ಪ್ರತಿಬಿಂಬಿಸುತ್ತದೆ ಎಂದು ಅವರು ಹೇಳಿದರು. ಆರ್ಥಿಕತೆಯ ಸೂರ್ಯೋದಯ ವಲಯವಾಗಿ ಮೀನುಗಾರಿಕೆ ಮತ್ತು ಜಲಚರ ಸಾಕಣೆಯನ್ನು ಉಲ್ಲೇಖಿಸಿದ ಅವರು, ಲಕ್ಷದ್ವೀಪಕ್ಕಾಗಿ ಪಿಎಂಎಂಎಸ್ ವೈ ಅಡಿಯಲ್ಲಿ 62 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಮೀನುಗಾರಿಕೆ ಅಭಿವೃದ್ಧಿ ಯೋಜನೆಗಳ ಅನುಮೋದನೆಯನ್ನು ಶ್ಲಾಘಿಸಿದರು. ಇಇಝಡ್  ಮತ್ತು ಹೈ ಸೀಸ್‌ನಿಂದ ಮೀನುಗಾರಿಕಾ ಸಂಪನ್ಮೂಲಗಳ ಸುಸ್ಥಿರ ಕೊಯ್ಲುಗಾಗಿ ಸರ್ಕಾರ ಘೋಷಿಸಿದ ಸಕ್ರಿಯಗೊಳಿಸುವ ಚೌಕಟ್ಟನ್ನು ಉಪರಾಷ್ಟ್ರಪತಿಗಳು ಉಲ್ಲೇಖಿಸಿದರು. ಇದು ಮೀನುಗಾರರಿಗೆ ಆಳ ಸಮುದ್ರದ ಸಂಪನ್ಮೂಲಗಳನ್ನು ಜವಾಬ್ದಾರಿಯುತವಾಗಿ ಪ್ರವೇಶಿಸಲು ಮತ್ತು ಹೊಸ ಅವಕಾಶಗಳಿಂದ ಪ್ರಯೋಜನ ಪಡೆಯಲು ಅಧಿಕಾರ ನೀಡುತ್ತದೆ ಎಂದು ಹೇಳಿದರು. ಲಕ್ಷದ್ವೀಪವು ಸುಮಾರು 94,000 ಟನ್ ಟ್ಯೂನ ಮತ್ತು ಟ್ಯೂನ ತರಹದ ಜಾತಿಗಳನ್ನು ಒಳಗೊಂಡಂತೆ 1 ಲಕ್ಷ ಟನ್‌ಗಳಿಗಿಂತ ಹೆಚ್ಚು ಮೀನುಗಾರಿಕೆ ಸಾಮರ್ಥ್ಯವನ್ನು ಹೊಂದಿದೆ ಎಂದು ಅವರು ಒತ್ತಿ ಹೇಳಿದರು ಮತ್ತು ಮೀನುಗಾರರ ಆದಾಯವನ್ನು ವೃದ್ಧಿಸಲು ಮತ್ತು ಜಾಗತಿಕ ಸಮುದ್ರಾಹಾರ ಮಾರುಕಟ್ಟೆಗಳಲ್ಲಿ ಭಾರತದ ಸ್ಥಾನವನ್ನು ಬಲಪಡಿಸಲು ವೈಜ್ಞಾನಿಕ ಕೊಯ್ಲು, ಡಿಜಿಟಲ್ ಅಧಿಕಾರ ವ್ಯವಸ್ಥೆಗಳು, ಹಡಗು ಮೇಲ್ವಿಚಾರಣೆ, ಅಂತಾರಾಷ್ಟ್ರೀಯ ಪ್ರಮಾಣೀಕರಣ ಮತ್ತು ಸುಸ್ಥಿರ ಮೀನುಗಾರಿಕೆ ಪದ್ಧತಿಗಳ ಮಹತ್ವವನ್ನು ಬಲವಾಗಿ ಪ್ರತಿಪಾಸಿದಿದರು. ಮೀನುಗಾರಿಕೆ ಕ್ಷೇತ್ರದ ದೀರ್ಘಕಾಲೀನ ಸಮೃದ್ಧಿಯನ್ನು ಖಾತ್ರಿಪಡಿಸಿಕೊಳ್ಳಲು ಮತ್ತು ವಿಕಸಿತ ಭಾರತ 2047 ರ ದೂರದೃಷ್ಟಿಯನ್ನು ಮುನ್ನಡೆಸಲು ಸಮುದ್ರ ಸಂಪನ್ಮೂಲಗಳ ಸಂರಕ್ಷಣೆ ಮತ್ತು ಜವಾಬ್ದಾರಿಯುತ ಮೀನುಗಾರಿಕೆ ಪದ್ಧತಿಗಳ ಅನುಸರಣೆ ಅತ್ಯಗತ್ಯ ಎಂದು ಅವರು ಒತ್ತಿ ಹೇಳಿದರು.

ಈ ಸಂದರ್ಭದಲ್ಲಿ, ಗೌರವಾನ್ವಿತ ಉಪರಾಷ್ಟ್ರಪತಿ ಪಿಎಂಎಂಎಸ್ ವೈ ಅಡಿಯಲ್ಲಿ ಫಲಾನುಭವಿಗಳಿಗೆ ಸವಲತ್ತುಗಳನ್ನು ವಿತರಿಸಿದರು, ಅದರಲ್ಲಿ ಸಾಂಪ್ರದಾಯಿಕ ಮೀನುಗಾರರಿಗೆ ಆಳ ಸಮುದ್ರ ಮೀನುಗಾರಿಕೆ ಹಡಗುಗಳ (DSFVs) ಸ್ವಾಧೀನಕ್ಕೆ ಬೆಂಬಲ, ದ್ವೀಪಗಳ ಪ್ರವಾಸೋದ್ಯಮ ಸಾಮರ್ಥ್ಯಕ್ಕೆ ಅನುಗುಣವಾಗಿ ಮನರಂಜನಾ ಮೀನುಗಾರಿಕೆಯ ಪ್ರಚಾರ, ಸಾಂಪ್ರದಾಯಿಕ ಮತ್ತು ಮೋಟಾರೀಕೃತ ಮೀನುಗಾರಿಕಾ ಹಡಗುಗಳಿಗೆ ಸುರಕ್ಷತಾ ಕಿಟ್‌ಗಳನ್ನು ಒದಗಿಸುವುದು, ಮೀನುಗಾರರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್‌ಗಳ (KCC) ಸೌಲಭ್ಯ, ಹಳೆಯ ಮೀನುಗಾರಿಕೆ ದೋಣಿಗಳು ಮತ್ತು ಬಲೆಗಳ ಬದಲಿಗಾಗಿ ಸಹಾಯ ಮತ್ತು ಸಂವಹನ ಮತ್ತು ಟ್ರ್ಯಾಕಿಂಗ್ ಸಾಧನಗಳ ಪೂರೈಕೆ ಸೇರಿವೆ. ಫಲಾನುಭವಿಗಳಲ್ಲಿ ಆಂಡ್ರೋತ್ ದ್ವೀಪದ ಮಾಲ್ಸ್ಯಾಮ್ ಮೀನುಗಾರರ ಸಹಕಾರಿ ಸಂಘ ಲಿಮಿಟೆಡ್‌ನ ಅಧ್ಯಕ್ಷರಾದ ಶ್ರೀ ಹಲೀಮಾ ಕೆ ಚೆರಿಯಡಮ್; ಖಾಸಗಿ ಉದ್ಯಮಿಗಳಾದ ಶ್ರೀ ಅಲ್ತಾಫ್ ಮುನವ್ವರ್ ತನ್ವೀರ್, ಶ್ರೀ ನೂರ್ ಮೊಹಮ್ಮದ್, ಶ್ರೀ ಅಮೀನ್ ಬಿನ್ ಮೊಹಮ್ಮದ್ ಸಿಎನ್; ದೋಣಿ ಮಾಲೀಕರಾದ ಶ್ರೀ ಸಾದಿಕ್ ಎಸ್, ಶ್ರೀ ನೌಶಾದ್ ಖಾನ್ ನಶೀದಾ ಮಹಲ್, ಶ್ರೀ ಆಶಿಕ್, ಶ್ರೀ ಕಿಡವೆ ಕುಂಞಿಕಾಡಿಯಪದ ಮತ್ತು ಫಿಚರ್‌ಮೆನ್‌ಗಳಾದ ಶ್ರೀ ಅಬೂಬಕರ್ ಉರಿಯೋಡಾ ಮತ್ತು ಶ್ರೀ ಸಬೀಹ್ ಮುಬಾರಕ್ ಸೇರಿದ್ದಾರೆ.

ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಮತ್ತು ಪಂಚಾಯತ್ ರಾಜ್ ಸಚಿವರಾದ ಶ್ರೀ ರಾಜೀವ್ ರಂಜನ್ ಸಿಂಗ್ , ಲಕ್ಷದ್ವೀಪದ ಮೀನುಗಾರಿಕಾ ಸಮುದಾಯಗಳ ಅಗತ್ಯಗಳನ್ನು ಅರ್ಥಮಾಡಿಕೊಳ್ಳುವುದು ಮತ್ತು ಮೀನುಗಾರರ ಆದಾಯ ವೃದ್ಧಿಸಲು, ಮೂಲಸೌಕರ್ಯ ಬಲಪಡಿಸಲು, ಸಮುದ್ರದಲ್ಲಿ ಸುರಕ್ಷತೆ ಸುಧಾರಿಸಲು, ಮೌಲ್ಯವರ್ಧನೆಯನ್ನು ಉತ್ತೇಜಿಸಲು ಮತ್ತು ಮಾರುಕಟ್ಟೆ ಪ್ರವೇಶವನ್ನು ವಿಸ್ತರಿಸಲು ಸಮಗ್ರ ಮಾರ್ಗಸೂಚಿಯನ್ನು ಸಿದ್ಧಪಡಿಸುವ ಸರ್ಕಾರದ ಬದ್ಧತೆಯನ್ನು ಈ ಸಂಪರ್ಕ ಕಾರ್ಯಕ್ರಮವು ಪ್ರತಿಬಿಂಬಿಸುತ್ತದೆ ಎಂದು ಹೇಳಿದ್ದಾರೆ. ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಕೈಗೊಂಡ ನೀಲಿ ಕ್ರಾಂತಿ, ಎಫ್ ಐಡಿಇ, ಪಿಎಂಎಂಎಸ್ ವೈ, ಮತ್ತು ಪಿಎಂಎಂಕೆಎಸ್ ಎಸ್ ವೈ ಸೇರಿದಂತೆ ಹಲವು ಗಮನಾರ್ಹ ಉಪಕ್ರಮಗಳನ್ನು ಅವರು ಪ್ರಮುಖವಾಗಿ  ಉಲ್ಲೇಖಿಸಿದರು. ಅವು ಮೀನುಗಾರಿಕೆ ವಲಯದ ಬೆಳವಣಿಗೆಯನ್ನು ಗಮನಾರ್ಹವಾಗಿ ವೇಗಗೊಳಿಸಿವೆ. ಭಾರತದ ಮೀನು ಉತ್ಪಾದನೆಯು 2013-14ರಲ್ಲಿ 95.7 ಲಕ್ಷ ಟನ್‌ಗಳಿಂದ 2024-25ರಲ್ಲಿ 197.75 ಲಕ್ಷ ಟನ್‌ಗಳಿಗೆ ಏರಿಕೆಯಾಗಿದೆ ಮತ್ತು ಸಮುದ್ರಾಹಾರ ರಫ್ತು ವ್ಯಾಪಾರ ಸವಾಲುಗಳ ಹೊರತಾಗಿಯೂ 2025-26ರಲ್ಲಿ ದಾಖಲೆಯ ರೂ. 73,890 ಕೋಟಿಯಷ್ಟು ಗಣನೀಯ ಬೆಳವಣಿಗೆಯನ್ನು ಕಂಡಿದೆ ಎಂದು ಸಚಿವರು ಉಲ್ಲೇಖಿಸಿದರು. ಲಕ್ಷದ್ವೀಪದ ಬಳಕೆಯಾಗದ ಅಗಾಧ ಮೌಲ್ಯದ ಟೂನ ಸಂಪನ್ಮೂಲಗಳನ್ನು ವಿಷಯ ಪ್ರಸ್ತಾಪಿಸಿದ ಅವರು, ಮೀನುಗಾರರು, ಸಹಕಾರಿಗಳು, ಎಫ್‌ಪಿಒಗಳು ಮತ್ತು ಮಹಿಳಾ ನೇತೃತ್ವದ ಉದ್ಯಮಗಳಿಗೆ ಹೊಸ ಜೀವನೋಪಾಯದ ಅವಕಾಶಗಳನ್ನು ಸೃಷ್ಟಿಸಲು ದ್ವೀಪ ಸಂಪನ್ಮೂಲಗಳನ್ನು ಸುಸ್ಥಿರವಾಗಿ ಬಳಸಿಕೊಳ್ಳುವ ಅಗತ್ಯವನ್ನು ಒತ್ತಿ ಹೇಳಿದರು. ವಿಶೇಷ ಆರ್ಥಿಕ ವಲಯ ನಿಯಮಗಳು, 2025 ರಲ್ಲಿ ಮೀನುಗಾರಿಕೆಯ ಸುಸ್ಥಿರ ಬಳಕೆ ಮತ್ತು 2025 ರಲ್ಲಿ ಎತ್ತರದ ಸಮುದ್ರಗಳಲ್ಲಿ ಮೀನುಗಾರಿಕೆಯ ಸುಸ್ಥಿರ ಬಳಕೆಗಾಗಿ ಮಾರ್ಗಸೂಚಿಗಳು ಸೇರಿದಂತೆ ಸರ್ಕಾರದ ನೀತಿ ಉಪಕ್ರಮಗಳನ್ನು ಅವರು ಪ್ರಸ್ತಾಪಿಸಿ, ಇದು ಜವಾಬ್ದಾರಿಯುತ ಕಡಲಾಚೆಯ ಮೀನುಗಾರಿಕೆ ಅಭಿವೃದ್ಧಿಗೆ ಸಕ್ರಿಯಗೊಳಿಸುವ ಚೌಕಟ್ಟನ್ನು ಒದಗಿಸುತ್ತದೆ, ಇದರಲ್ಲಿ ಪ್ರವೇಶ ಪಾಸ್ ಮತ್ತು ಅಧಿಕಾರ ಪತ್ರವನ್ನು ಆರಂಭಿಸುವುದು ಸೇರಿದೆ ಎಂದರು.

ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಮತ್ತು ಪಂಚಾಯತಿ ರಾಜ್ ರಾಜ್ಯ ಸಚಿವರಾದ ಗೌರವಾನ್ವಿತ ಪ್ರೊ. ಎಸ್.ಪಿ. ಸಿಂಗ್ ಬಾಘೇಲ್, ಭಾರತದ ನೀಲಿ ಆರ್ಥಿಕತೆಯಲ್ಲಿ ಲಕ್ಷದ್ವೀಪದ ಕಾರ್ಯತಂತ್ರದ ಪ್ರಾಮುಖ್ಯತೆಯನ್ನು ಪ್ರಮುಖವಾಗಿ ಪ್ರಸ್ತಾಪಿಸಿದರು. ಒಟ್ಟಾರೆ ಭೂಪ್ರದೇಶದಲ್ಲಿ ಚಿಕ್ಕದಾಗಿದ್ದರೂ, ದ್ವೀಪಗಳು ಭಾರತದ ವಿಶೇಷ ಆರ್ಥಿಕ ವಲಯದ ಸುಮಾರು ಶೇ. 17 ರಷ್ಟಿದೆ ಎಂದು ಉಲ್ಲೇಖಿಸಿದರು. ಅಂತಾರಾಷ್ಟ್ರೀಯ ಸುಸ್ಥಿರತೆ ಪ್ರಮಾಣೀಕರಣವನ್ನು ಪಡೆಯಲು ಮತ್ತು ರಫ್ತು ಸ್ಪರ್ಧಾತ್ಮಕತೆ ಮತ್ತು ಮೀನುಗಾರರ ಆದಾಯ ವೃದ್ಧಿಸಲು ಜಾಗತಿಕ "ಲಕ್ಷದ್ವೀಪ ಸುಸ್ಥಿರ ಟೂನ" ಬ್ರ್ಯಾಂಡ್ ಅನ್ನು ಅಭಿವೃದ್ಧಿಪಡಿಸಲು ಸರ್ಕಾರ ಕೆಲಸ ಮಾಡುತ್ತಿದೆ ಎಂದು ಹೇಳಿದರು. ಲಕ್ಷದ್ವೀಪವನ್ನು ಸೀವೀಡ್ ಕ್ಲಸ್ಟರ್ ಎಂದು ಸೂಚಿಸಲಾಗಿದೆ ಮತ್ತು ಐಸಿಎಆರ್-ಸಿಎಂಎಫ್‌ಆರ್‌ಐ ಸಹಯೋಗದೊಂದಿಗೆ ಸೀವೀಡ್ ಬ್ಯಾಂಕ್ ಅನ್ನು ಅನುಮೋದಿಸಲಾಗಿದೆ ಎಂದು ಸಚಿವರು ತಿಳಿಸಿದರು. ಮಹಿಳೆಯರು, ಯುವಕರು ಮತ್ತು ಸ್ವಸಹಾಯ ಗುಂಪುಗಳಿಗೆ ಜೀವನೋಪಾಯದ ಅವಕಾಶಗಳನ್ನು ಸೃಷ್ಟಿಸಲು ಸುಮಾರು 2 ಕೋಟಿ ರೂ. ಹೂಡಿಕೆಯ ನೆರವಿನಿಂದ 575 ಸೀವೀಡ್ ಕೃಷಿ ಘಟಕಗಳನ್ನು ಉತ್ತೇಜಿಸಲಾಗುತ್ತಿದೆ ಎಂದರು. ಅಲಂಕಾರಿಕ ಮೀನುಗಾರಿಕೆಯ ಸಾಮರ್ಥ್ಯವನ್ನು ಎತ್ತಿ ತೋರಿಸಿದ ಅವರು, ಲಕ್ಷದ್ವೀಪವು 300 ಕ್ಕೂ ಅಧಿಕ ಅಲಂಕಾರಿಕ ಮೀನು ಪ್ರಭೇದಗಳಿಗೆ ನೆಲೆಯಾಗಿದೆ ಮತ್ತು ಅಗಟ್ಟಿಯಲ್ಲಿ ಅಲಂಕಾರಿಕ ಮೀನು ಮರಿ ಮಾಡುವ ಕೇಂದ್ರವನ್ನು ಸ್ಥಾಪಿಸಲಾಗಿದೆ ಮತ್ತು ಪಿಎಂಎಂಎಸ್‌ವೈ ಅಡಿಯಲ್ಲಿ ಮೂರು ಸಾಕಣೆ ಘಟಕಗಳನ್ನು ಅನುಮೋದಿಸಲಾಗಿದೆ ಎಂದು ಹೇಳಿದರು. ಮೀನುಗಾರಿಕೆ ಆಧಾರಿತ ಪ್ರವಾಸೋದ್ಯಮವನ್ನು ಉತ್ತೇಜಿಸಲು ಮತ್ತು ದ್ವೀಪ ಸಮುದಾಯಗಳಿಗೆ ಹೆಚ್ಚುವರಿ ಆದಾಯದ ಅವಕಾಶಗಳನ್ನು ಸೃಷ್ಟಿಸಲು ಪಿಎಂಎಂಎಸ್‌ವೈ ಅಡಿಯಲ್ಲಿ 19 ಮನರಂಜನಾ ಮೀನುಗಾರಿಕೆ ಘಟಕಗಳನ್ನು ಮಂಜೂರು ಮಾಡಲಾಗಿದೆ ಎಂದು ತಿಳಿಸಿದರು.

ಲಕ್ಷದ್ವೀಪ ಮತ್ತು ದಾದ್ರಾ ಮತ್ತು ನಗರ ಹವೇಲಿ ಮತ್ತು ದಮನ್ ಮತ್ತು ಡಿಯುಗಳ ಗೌರವಾನ್ವಿತ ಆಡಳಿತಾಧಿಕಾರಿ ಶ್ರೀ ಪ್ರಫುಲ್ ಖೋಡಾ ಪಟೇಲ್, ದ್ವೀಪಗಳ ಮೀನುಗಾರಿಕೆಯ ಅಪಾರ ಸಾಮರ್ಥ್ಯವನ್ನು ಪ್ರಮುಖವಾಗಿ ಪ್ರಸ್ತಾಪಿಸಿ, ಅಂದಾಜು ವಾರ್ಷಿಕ ಸುಮಾರು 1 ಲಕ್ಷ ಮೆಟ್ರಿಕ್ ಟನ್‌ಗಳ ಮೀನುಗಾರಿಕೆ ಸಾಮರ್ಥ್ಯ, ವಿಶೇಷವಾಗಿ ಹೆಚ್ಚಿನ ಮೌಲ್ಯದ ಯೆಲ್ಲೊಫಿನ್ ಮತ್ತು ಸ್ಕಿಪ್‌ಜಾಕ್ ಟ್ಯೂನಾದಲ್ಲಿ, ಪ್ರಸ್ತುತ ಕೊಯ್ಲು ಕೇವಲ 15,000 ಮೆಟ್ರಿಕ್ ಟನ್‌ಗಳಷ್ಟಿದೆ ಎಂದು ಹೇಳಿದರು. ಟ್ಯೂನ ಮೀನುಗಾರಿಕೆ, ಆಳ ಸಮುದ್ರ ಮೀನುಗಾರಿಕೆ, ಕಡಲಕಳೆ ಕೃಷಿ ಮತ್ತು ಮೀನು ಸಂಸ್ಕರಣೆಯಲ್ಲಿ ಉದ್ದೇಶಿತ ಮಧ್ಯಸ್ಥಿಕೆಗಳ ಮೂಲಕ ಈ ಅಂತರವನ್ನು ತುಂಬಲು ಸರ್ಕಾರ ದೃಢನಿಶ್ಚಯದ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಅವರು ಒತ್ತಿ ಹೇಳಿದರು. ಭಾರತ ಸರ್ಕಾರದ ಬೆಂಬಲದಡಿಯಲ್ಲಿ, ಸುಮಾರು 1.2 ಕೋಟಿ ರೂ. ವೆಚ್ಚದ 16 ಆಳ ಸಮುದ್ರ ಮೀನುಗಾರಿಕೆ ಹಡಗುಗಳನ್ನು ಪೂರ್ಣ ಆರ್ಥಿಕ ನೆರವಿನೊಂದಿಗೆ ಮೀನುಗಾರರಿಗಾಗಿ ಮಂಜೂರು ಮಾಡಲಾಗಿದೆ ಮತ್ತು ಅವುಗಳ ನಿರ್ಮಾಣವು ಈಗಾಗಲೇ ನಡೆಯುತ್ತಿದೆ ಎಂದು ಅವರು ಮಾಹಿತಿ ನೀಡಿದರು. ದ್ವೀಪಗಳಾದ್ಯಂತ ಕಡಲಕಳೆ ಕೃಷಿಯ ವಿಶಾಲ ಸಾಮರ್ಥ್ಯವನ್ನು ಆಡಳಿತಾಧಿಕಾರಿ ಮತ್ತಷ್ಟು ಎತ್ತಿ ತೋರಿಸಿದರು ಮತ್ತು ಲಕ್ಷದ್ವೀಪದ ಮುಂಬರುವ ಮೀನುಗಾರಿಕೆ ನೀತಿಯೊಂದಿಗೆ ಮೀನುಗಾರಿಕೆ ಮೂಲಸೌಕರ್ಯ, ಮೌಲ್ಯವರ್ಧನೆ ಮತ್ತು ಸಂಸ್ಕರಣೆಯಲ್ಲಿ ಹೊಸ ಉಪಕ್ರಮಗಳು ಗಣನೀಯ ಜೀವನೋಪಾಯದ ಅವಕಾಶಗಳನ್ನು ಸೃಷ್ಟಿಸುವ ಮತ್ತು ಸ್ಥಳೀಯ ಮೀನುಗಾರರ ಆದಾಯವನ್ನು ಗಮನಾರ್ಹವಾಗಿ ಹೆಚ್ಚಿಸುವ ನಿರೀಕ್ಷೆಯಿದೆ ಎಂದು ಹೇಳಿದರು. ಮುಂಬರುವ ವರ್ಷಗಳಲ್ಲಿ ಮೀನುಗಾರಿಕೆ ಆಧಾರಿತ ನೀಲಿ ಆರ್ಥಿಕ ಅಭಿವೃದ್ಧಿಗೆ ಲಕ್ಷದ್ವೀಪವು ಮಾದರಿ ಪ್ರದೇಶವಾಗಿ ಹೊರಹೊಮ್ಮಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಮೀನುಗಾರಿಕೆ ಇಲಾಖೆಯ ಕಾರ್ಯದರ್ಶಿ ಡಾ. ಅಭಿಲಕ್ಷ್ ಲಿಖಿ, ಭಾರತದ ಮೀನುಗಾರಿಕೆ ಮತ್ತು ಜಲಚರ ಸಾಕಣೆ ಆಯಾಮದಲ್ಲಿ ಲಕ್ಷದ್ವೀಪವು ಕಾರ್ಯತಂತ್ರದ ಸ್ಥಾನವನ್ನು ಹೊಂದಿದೆ ಎಂದು ಅವರು ಹೈಲೈಟ್ ಮಾಡಿದರು, ಲಕ್ಷದ್ವೀಪ ಮತ್ತು ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಪ್ರದೇಶಗಳು ಒಟ್ಟಾಗಿ ದೇಶದ ವಿಶೇಷ ಆರ್ಥಿಕ ವಲಯದ ಸುಮಾರು ಶೇ.50 ರಷ್ಟನ್ನು ಹೊಂದಿವೆ. ದ್ವೀಪಗಳನ್ನು ಸುತ್ತುವರೆದಿರುವ ಸಂಪನ್ಮೂಲ-ಸಮೃದ್ಧ ನೀರು ಟ್ಯೂನ ಮೀನುಗಾರಿಕೆ, ಆಳ ಸಮುದ್ರ ಮೀನುಗಾರಿಕೆ, ಸಾಗರ ಕೃಷಿ, ಕಡಲಕಳೆ ಕೃಷಿ ಮತ್ತು ಇಇಝಡ್ ನಿಯಮಗಳು, 2025 ಮತ್ತು ಹೈ ಸೀಸ್ ಮಾರ್ಗಸೂಚಿಗಳು, 2025 ರ ಮೂಲಕ ಸುಸ್ಥಿರ ಕಡಲಾಚೆಯ ಮೀನುಗಾರಿಕೆಗೆ ಸಕ್ರಿಯಗೊಳಿಸುವ ಚೌಕಟ್ಟನ್ನು ರಚಿಸಿದೆ ಮತ್ತು ಪಿಎಂಎಂಎಸ್ ವೈ ಅಡಿಯಲ್ಲಿ ಗಣನೀಯ ಬೆಂಬಲವನ್ನು ನೀಡಿದೆ ಎಂದು ಅವರು ಉಲ್ಲೇಖಿಸಿದರು..  ಮೀನುಗಾರರ ಆದಾಯ, ಕೌಶಲ್ಯ, ಸುರಕ್ಷತೆ, ಮಾರುಕಟ್ಟೆ ಪ್ರವೇಶ ಮತ್ತು ಆಧುನಿಕ ತಂತ್ರಜ್ಞಾನಗಳ ಅಳವಡಿಕೆಯನ್ನು ಹೆಚ್ಚಿಸುವತ್ತ ನಿರಂತರ ಗಮನಹರಿಸುವ ಮೂಲಕ, ಕಡಲಕಳೆ ಬ್ಯಾಂಕ್ ಸ್ಥಾಪನೆ ಹಾಗೂ ಲಕ್ಷದ್ವೀಪವನ್ನು ಕಡಲಕಳೆ ಸಮೂಹ (Seaweed Cluster) ಎಂದು ಘೋಷಿಸುವುದು ಹೊಸ ಜೀವನೋಪಾಯದ ಅವಕಾಶಗಳನ್ನು ಸೃಷ್ಟಿಸಲಿದೆ ಮತ್ತು 'ನೀಲಿ ಆರ್ಥಿಕತೆ'ಯನ್ನು (blue economy) ಬಲಪಡಿಸಲಿದೆ ಎಂದು ಅವರು ತಿಳಿಸಿದರು.

ದ್ವೀಪ ಸಮುದಾಯಗಳು ಟ್ಯೂನ ಮತ್ತು ಟ್ಯೂನ ತರಹದ ಜಾತಿಗಳು, ಕಡಲಕಳೆ, ಅಲಂಕಾರಿಕ ಮೀನುಗಾರಿಕೆ ಮತ್ತು ಆಳ ಸಮುದ್ರ ಮೀನುಗಾರಿಕೆಯಂತಹ ಹೆಚ್ಚಿನ ಮೌಲ್ಯದ ಸಂಪನ್ಮೂಲಗಳನ್ನು ಸುಸ್ಥಿರವಾಗಿ ಬಳಸಿಕೊಳ್ಳಲು ಅನುವು ಮಾಡಿಕೊಡಲು ಸರ್ಕಾರವು ಮೀನು ರೈತ ಉತ್ಪಾದಕ ಸಂಸ್ಥೆಗಳು (FFPOs) ಮತ್ತು ಮೀನುಗಾರಿಕೆ ಸಹಕಾರಿ ಸಂಸ್ಥೆಗಳನ್ನು ಹಣಕಾಸು, ತಾಂತ್ರಿಕ ಮತ್ತು ಸಾಮರ್ಥ್ಯವರ್ಧನೆ ಬೆಂಬಲದ ಮೂಲಕ ಬಲವರ್ಧನೆಗೊಳಿಸುತ್ತಿದೆ. ಈ ಮಧ್ಯಸ್ಥಿಕೆಗಳು ಮೀನುಗಾರರು ಮತ್ತು ಇತರ ಮೀನುಗಾರಿಕೆ ಪಾಲುದಾರರಿಗೆ ಒಟ್ಟುಗೂಡಿಸುವಿಕೆ, ಮೌಲ್ಯವರ್ಧನೆ, ಮಾರುಕಟ್ಟೆ ಪ್ರವೇಶ ಮತ್ತು ಆದಾಯದ ಅವಕಾಶಗಳನ್ನು ಸುಧಾರಿಸುವ ಗುರಿಯನ್ನು ಹೊಂದಿವೆ.

ಹಿನ್ನೆಲೆ

ಭಾರತವು ವಿಶಾಲ ಮತ್ತು ವೈವಿಧ್ಯಮಯ ಸಾಗರ ಸಂಪನ್ಮೂಲ ನೆಲೆಯನ್ನು ಹೊಂದಿದ್ದು, ಸುಮಾರು 11,099 ಕಿ.ಮೀ. ಕರಾವಳಿ ಮತ್ತು ಸುಮಾರು 24 ಲಕ್ಷ ಚದರ ಕಿ.ಮೀ.ನ ವಿಶೇಷ ಆರ್ಥಿಕ ವಲಯದಿಂದ ಆವರಿಸಿದೆ. ಭಾರತದ EEZ ನಲ್ಲಿನ ಸಮುದ್ರ ಮೀನುಗಾರಿಕೆ ಸಾಮರ್ಥ್ಯವು 58.6 ಲಕ್ಷ MT ಎಂದು ಅಂದಾಜಿಸಲಾಗಿದೆ, ಇದು ಸುಮಾರು 50 ಲಕ್ಷ ಮೀನುಗಾರರ ಜೀವನೋಪಾಯ ಬೆಂಬಲಿಸುತ್ತದೆ ಮತ್ತು ಆಹಾರ ಭದ್ರತೆ, ಪೋಷಣೆ, ಉದ್ಯೋಗ, ಆದಾಯ ಉತ್ಪಾದನೆ ಮತ್ತು ರಫ್ತು ಆದಾಯಕ್ಕೆ ಗಮನಾರ್ಹವಾಗಿ ಕೊಡುಗೆ ನೀಡುತ್ತದೆ. ಭಾರತವು ಸದ್ಯ ಜಾಗತಿಕವಾಗಿ ಪ್ರಮುಖ ಮೀನುಗಾರಿಕೆ ಮತ್ತು ಜಲಚರ ಸಾಕಣೆ ಉತ್ಪಾದಿಸುವ ದೇಶಗಳಲ್ಲಿ ಒಂದಾಗಿದೆ ಮತ್ತು 2025-26ರ ಹಣಕಾಸು ವರ್ಷದಲ್ಲಿ ಸುಮಾರು 73,890 ಕೋಟಿ ರೂಪಾಯಿ ಮೌಲ್ಯದ ಸಮುದ್ರಾಹಾರವನ್ನು ರಫ್ತು ಮಾಡಿದೆ.

ಹೆಚ್ಚಿನ ಮೀನುಗಾರಿಕೆ ಚಟುವಟಿಕೆಗಳು ಕರಾವಳಿಯಿಂದ 40-50 ನಾಟಿಕಲ್ ಮೈಲುಗಳ ಒಳಗೆ ಕೇಂದ್ರೀಕೃತವಾಗಿವೆ, ಆದರೆ ಆಳವಾದ ನೀರು ಮತ್ತು ರಾಷ್ಟ್ರೀಯ ವ್ಯಾಪ್ತಿಯನ್ನು ಮೀರಿದ ಪ್ರದೇಶಗಳು ಹೆಚ್ಚಿನ ಮೌಲ್ಯದ ಪ್ರಭೇದಗಳನ್ನು, ವಿಶೇಷವಾಗಿ ಟ್ಯೂನ ಮತ್ತು ಟ್ಯೂನ ತರಹದ ಸಂಪನ್ಮೂಲಗಳನ್ನು ಕೊಯ್ಲು ಮಾಡಲು ಗಣನೀಯ ಅವಕಾಶಗಳನ್ನು ನೀಡುತ್ತವೆ. ಸುಸ್ಥಿರ ಸಮುದ್ರ ಮೀನುಗಾರಿಕೆಯ ಕಾರ್ಯತಂತ್ರದ ಪ್ರಾಮುಖ್ಯತೆಯನ್ನು ಗುರುತಿಸಿದ ಭಾರತ ಸರ್ಕಾರವು, ಭಾರತೀಯ-ಫ್ಲ್ಯಾಗ್ಡ್ ಮೀನುಗಾರಿಕಾ ಹಡಗುಗಳಿಂದ ಎತ್ತರದ ಸಮುದ್ರಗಳಲ್ಲಿ ಮೀನುಗಾರಿಕೆಯ ಸುಸ್ಥಿರ ಸಜ್ಜುಗೊಳಿಸುವಿಕೆಗಾಗಿ ಮಾರ್ಗಸೂಚಿಗಳು, 2025 ಸೇರಿದಂತೆ ಭಾರತೀಯ EEZ ಮತ್ತು ಎತ್ತರದ ಸಮುದ್ರಗಳಿಂದ ಮೀನುಗಾರಿಕೆಯ ಸುಸ್ಥಿರ ಸಜ್ಜುಗೊಳಿಸುವಿಕೆಗೆ ಸಕ್ರಿಯಗೊಳಿಸುವ ಚೌಕಟ್ಟನ್ನು ಸೂಚಿಸಿದೆ.

ಲಕ್ಷದ್ವೀಪವು ಶ್ರೀಮಂತ ಸಾಗರ ಮೀನುಗಾರಿಕೆ ಸಂಪನ್ಮೂಲಗಳನ್ನು ಹೊಂದಿದೆ, ವಿಶೇಷವಾಗಿ ದ್ವೀಪದ ಸಮುದ್ರ ಮೀನುಗಾರಿಕೆ ವಲಯದ ಬೆನ್ನೆಲುಬಾಗಿರುವ ಯೆಲ್ಲೊಫಿನ್ ಟ್ಯೂನ ಮತ್ತು ಸ್ಕಿಪ್‌ಜಾಕ್ ಟ್ಯೂನದಂತಹ ಹೆಚ್ಚಿನ ಮೌಲ್ಯದ ಟ್ಯೂನ ಜಾತಿಗಳು. ವಿಶಾಲ ಮತ್ತು ಉತ್ಪಾದಕ ನೀರಿನಿಂದ ಆವರಿಸಿರುವ ಈ ವಾಣಿಜ್ಯಿಕವಾಗಿ ಪ್ರಮುಖವಾದ ಪ್ರಭೇದಗಳು ಸುಸ್ಥಿರ ಕೊಯ್ಲು, ಮೌಲ್ಯವರ್ಧನೆ, ರಫ್ತು ಬೆಳವಣಿಗೆ ಮತ್ತು ಜೀವನೋಪಾಯ ಉತ್ಪಾದನೆಗೆ ಗಮನಾರ್ಹ ಅವಕಾಶಗಳನ್ನು ನೀಡುತ್ತವೆ, ಲಕ್ಷದ್ವೀಪವನ್ನು ಟ್ಯೂನ ಆಧಾರಿತ ಮೀನುಗಾರಿಕೆ ಮತ್ತು ನೀಲಿ ಆರ್ಥಿಕ ಅಭಿವೃದ್ಧಿಗೆ ಪ್ರಮುಖ ಕೇಂದ್ರವಾಗಿರಿಸುತ್ತದೆ.

 

*****


(ಪ್ರಕಟಣೆ ಐ.ಡಿ.: 2304978) ವಿಸಿಟರ್ ಕೌಂಟರ್ : 19
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Tamil , Malayalam