ಕೃಷಿ ಸಚಿವಾಲಯ
azadi ka amrit mahotsav

ಕೇಂದ್ರ ಕೃಷಿ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಭೇಟಿಯಾದ ನಂತರ ಎಥನಾಲ್ ಯೋಜನೆಗೆ ರೈತರಿಂದ ಬಲವಾದ ಬೆಂಬಲ ವ್ಯಕ್ತ


ಕೇಂದ್ರ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಅವರೊಂದಿಗಿನ ಸಭೆಯಲ್ಲಿ, ಎಥನಾಲ್ ರೈತರ ಆದಾಯವನ್ನು ಹೆಚ್ಚಿಸುತ್ತದೆ ಮತ್ತು ದೇಶದ ಇಂಧನ ಭದ್ರತೆಯನ್ನು ಕಾಯ್ದುಕೊಳ್ಳುತ್ತದೆ ಎಂದು ಎಐಕೆಸಿಸಿ (AIKCC) ಮುಖಂಡರ ಹೇಳಿಕೆ

ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರೊಂದಿಗಿನ ಸಭೆಯಲ್ಲಿ, “ಎಥನಾಲ್ ಕೃಷಿಗೆ ಒಂದು ಹೊಸ ಅವಕಾಶ” ಎಂದು ಅಭಿಪ್ರಾಯಪಟ್ಟ ರೈತರು

“ಎಥನಾಲ್ ಕುರಿತಾದ ತಪ್ಪು ವದಂತಿಗಳನ್ನು ಮತ್ತು ಭ್ರಮೆಗಳನ್ನು ಹೋಗಲಾಡಿಸಲು ರೈತರು ಮತ್ತು ಸರ್ಕಾರ ಒಟ್ಟಾಗಿ ಕೆಲಸ ಮಾಡಬೇಕು”: ಎಐಕೆಸಿಸಿ

“ಪೆಟ್ರೋಲ್ ಅಲ್ಲ, ಹೊಲಗಳಿಂದ ಬರುವ ಎಥನಾಲ್ ದೇಶದ ಭವಿಷ್ಯ,” ಎಂದು ಕೇಂದ್ರ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ತಿಳಿಸಿದ ವಿವಿಧ ರಾಜ್ಯಗಳ ರೈತ ಮುಖಂಡರು

ನವದೆಹಲಿಯ ಕೃಷಿ ಭವನದಲ್ಲಿ ದೇಶಾದ್ಯಂತದ ರೈತ ನಾಯಕರಿಂದ ಎಥನಾಲ್ ಮತ್ತು ರೈತರ ಆದಾಯದ ಕುರಿತು ಮುಕ್ತ ಚರ್ಚೆ

“ಕೃಷಿ ಭವನದ ಬಾಗಿಲುಗಳು ರೈತರಿಗೆ ಯಾವಾಗಲೂ ತೆರೆದಿರುತ್ತವೆ; ರೈತರು ದೇವರಿಗೆ ಸಮಾನ”: ಕೇಂದ್ರ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್

प्रविष्टि तिथि: 04 AUG 2026 8:29PM by PIB Bengaluru

ಅಖಿಲ ಭಾರತ ಕಿಸಾನ್ ಸಮನ್ವಯ ಸಮಿತಿಯ (AIKCC) ನಿಯೋಗವು ಮಂಗಳವಾರ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಭೇಟಿಯಾಯಿತು. ಎಥನಾಲ್ ನೀತಿಯು ರೈತ-ಕೇಂದ್ರಿತವಾಗಿದ್ದರೆ ಮತ್ತು ಬೆಳೆಗೆ ಸರಿಯಾದ ಬೆಲೆ ನೇರವಾಗಿ ರೈತನಿಗೆ ತಲುಪಿದರೆ, ಎಥನಾಲ್ ಕೃಷಿ ಕ್ಷೇತ್ರಕ್ಕೆ ಒಂದು ದೊಡ್ಡ ಅವಕಾಶವಾಗಿದೆ ಎಂದು ನಿಯೋಗವು ಸ್ಪಷ್ಟವಾಗಿ ತಿಳಿಸಿತು. ಕೇಂದ್ರ ಕೃಷಿ ಸಚಿವ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು ರೈತ ನಾಯಕರ ಎಲ್ಲಾ ಸಲಹೆಗಳನ್ನು ಗಮನವಿಟ್ಟು ಆಲಿಸಿದರು ಮತ್ತು ಸೂಕ್ತ ಮಾರ್ಗದರ್ಶನ ನೀಡುತ್ತಾ, ಎಥನಾಲ್ ಕುರಿತು ರೈತರ ಅಭಿಪ್ರಾಯಗಳನ್ನು ಕೇಂದ್ರ ಸರ್ಕಾರವು ಗಂಭೀರವಾಗಿ ಪರಿಗಣಿಸುತ್ತದೆ ಎಂದು ಭರವಸೆ ನೀಡಿದರು. ರೈತರು ತಮಗೆ ದೇವರಿಗೆ ಸಮಾನ ಮತ್ತು ಕೃಷಿ ಭವನದ ಬಾಗಿಲುಗಳು ರೈತರಿಗೆ ಯಾವಾಗಲೂ ತೆರೆದಿರುತ್ತವೆ ಎಂದು ಶ್ರೀ ಶಿವರಾಜ್ ಸಿಂಗ್ ಹೇಳಿದರು.

ಕೃಷಿ ಭವನದಲ್ಲಿ ಎಥನಾಲ್ ಕುರಿತು ಮುಕ್ತವಾಗಿ ಮಾತನಾಡಿದ ದೇಶಾದ್ಯಂತದ ರೈತ ಮುಖಂಡರು

ನವದೆಹಲಿಯ ಕೃಷಿ ಭವನದಲ್ಲಿ ಎಐಕೆಸಿಸಿ (AIKCC) ನಿಯೋಗವು ಕೇಂದ್ರ ಕೃಷಿ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಭೇಟಿಯಾಯಿತು. ಈ ನಿಯೋಗದಲ್ಲಿ ಪಂಜಾಬ್, ಹರಿಯಾಣ, ಮಹಾರಾಷ್ಟ್ರ, ಉತ್ತರ ಪ್ರದೇಶ, ಮಧ್ಯಪ್ರದೇಶ, ತೆಲಂಗಾಣ, ತಮಿಳುನಾಡು ಮತ್ತು ದೇಶದ ಇತರ ಭಾಗಗಳ ರೈತ ನಾಯಕರು ಭಾಗವಹಿಸಿದ್ದರು. ಸಭೆಯ ಮುಖ್ಯ ವಿಷಯವು ಎಥನಾಲ್, ರೈತರ ಆದಾಯ, ಕನಿಷ್ಠ ಬೆಂಬಲ ಬೆಲೆ (MSP), ಮಾರುಕಟ್ಟೆಗಳು ಮತ್ತು ರಾಷ್ಟ್ರೀಯ ಕೃಷಿ ನೀತಿಯ ಮೇಲೆ ಕೇಂದ್ರೀಕೃತವಾಗಿತ್ತು. ಆದಾಗ್ಯೂ, ತಾವು ಎಥನಾಲ್ ಪರವಾಗಿದ್ದೇವೆ; ಆದರೆ ಈ ಯೋಜನೆಯ ನೈಜ ಪ್ರಯೋಜನವು ಕೇವಲ ಕಂಪನಿಗಳು ಅಥವಾ ಮಧ್ಯವರ್ತಿಗಳಿಗೆ ಮಾತ್ರ ತಲುಪದೆ, ರೈತನಿಗೆ ತಲುಪಬೇಕು ಎಂಬುದು ತಮ್ಮ ಅಪೇಕ್ಷೆಯಾಗಿದೆ ಎಂದು ರೈತರು ಸ್ಪಷ್ಟವಾಗಿ ಹೇಳಿದರು.

ಎಥನಾಲ್ ಪರವಾಗಿ ರೈತರು ಹೇಳಿದ್ದೇನು

ಸಭೆಯಲ್ಲಿ, ರೈತ ನಾಯಕರು ಎಥನಾಲ್ ಕುರಿತು ತಮ್ಮ ನಿಲುವನ್ನು ಸ್ಪಷ್ಟಪಡಿಸಿದರು ಮತ್ತು ಎಥನಾಲ್ ಬಳಕೆಯಿಂದಾಗಿ ಹೊಲದ ಉತ್ಪನ್ನಗಳು ಕೇವಲ ಮಂಡಿಗೆ (ಮಾರುಕಟ್ಟೆಗೆ) ಮಾತ್ರ ಸೀಮಿತವಾಗದೆ, ಪೆಟ್ರೋಲ್ ಬಂಕ್‌ಗಳು ಮತ್ತು ಇಂಧನ ಮಾರುಕಟ್ಟೆಯನ್ನು ತಲುಪುತ್ತವೆ ಎಂದು ಹೇಳಿದರು. ಇದು ರೈತರಿಗೆ ಹೊಸ ಮತ್ತು ಪ್ರಬಲ ಮಾರುಕಟ್ಟೆಯನ್ನು ಸೃಷ್ಟಿಸುತ್ತದೆ.

ಕಬ್ಬು, ಜೋಳ, ಅಕ್ಕಿ ಮತ್ತು ಇತರ ಕಚ್ಚಾ ವಸ್ತುಗಳಿಂದ ಎಥನಾಲ್ ತಯಾರಿಸಿದಾಗ, ರೈತರಿಗೆ ಹೆಚ್ಚಿನ ಖರೀದಿದಾರರು ಸಿಗುತ್ತಾರೆ ಮತ್ತು ಬೆಳೆ ಹಾಳಾಗುವ ಅಥವಾ ಸಂಗ್ರಹಣೆಯ ಸಮಸ್ಯೆ ಕಡಿಮೆಯಾಗುತ್ತದೆ.

ತಾವು ಎಥನಾಲ್ ವಿರುದ್ಧವಾಗಿಲ್ಲ, ಬದಲಿಗೆ ಅದರ ಸಂಪೂರ್ಣ ಬೆಂಬಲಕ್ಕಿದ್ದೇವೆ ಎಂದು ರೈತರು ಹೇಳಿದರು. ಆದರೆ ಜೋಳವಾಗಲಿ, ಕಬ್ಬಾಗಲಿ ಯಾವುದೇ ಬೆಳೆಯ ಸೂಕ್ತ ಬೆಲೆಯು ರೈತರಿಗೆ ತಲುಪುವುದು ಅಗತ್ಯವಾಗಿದೆ. ಎಥನಾಲ್ ನೀತಿಯು ಕೃಷಿಗೆ ಹೊಸ ಹಾದಿಯನ್ನು ಸೃಷ್ಟಿಸಬೇಕೇ ಹೊರತು ತಮಗೆ ಹೊಸ ಚಿಂತೆಯಾಗಬಾರದು ಎಂದು ರೈತ ಪ್ರತಿನಿಧಿಗಳು ತಿಳಿಸಿದರು. ಎಥನಾಲ್ ತಮ್ಮ ಜೊತೆಗಿದ್ದರೆ, ತಾವು ಕೂಡ ಎಥನಾಲ್ ಜೊತೆಗಿರುವುದಾಗಿ ಅವರು ಹೇಳಿದರು.

ಎಥನಾಲ್ ಕುರಿತ ತಪ್ಪು ಕಲ್ಪನೆಗಳನ್ನು ನಿವಾರಿಸುವುದು ಅಗತ್ಯ’ – ರೈತ ನಾಯಕರು

ಸಭೆಯಲ್ಲಿ, ಹಲವು ರೈತ ನಾಯಕರು, ಎಥನಾಲ್ ಹೆಸರಿನಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಮತ್ತು ಕೆಲವು ವೇದಿಕೆಗಳಲ್ಲಿ ಗೊಂದಲವನ್ನು ಹಬ್ಬಿಸಲಾಗುತ್ತಿದೆ ಎಂದು ಹೇಳಿದರು - ಕೆಲವೊಮ್ಮೆ ಇದು ವಾಹನಗಳನ್ನು ಹಾನಿಗೊಳಿಸುತ್ತದೆ ಎಂದು, ಇನ್ನು ಕೆಲವೊಮ್ಮೆ ಇದು ರೈತರಿಗೆ ಹಾನಿ ಮಾಡುತ್ತದೆ ಎಂದು ಅಪಪ್ರಚಾರ ಮಾಡಲಾಗುತ್ತಿದೆ. ಕೇಂದ್ರ ಕೃಷಿ ಸಚಿವಾಲಯ ಮತ್ತು ರೈತ ಸಂಘಟನೆಗಳು ಒಟ್ಟಾಗಿ ಎಥನಾಲ್‌ನಿಂದ ಯಾವ ಬೆಳೆಗಳಿಗೆ ಹೇಗೆ ಪ್ರಯೋಜನವಾಗುತ್ತದೆ ಮತ್ತು ನೀರು ಹೆಚ್ಚು ತಗುಲುವ ಬೆಳೆಗಳಿಂದ ಬರ ನಿರೋಧಕ ಬೆಳೆಗಳತ್ತ ಹೇಗೆ ಬದಲಾವಣೆ ತರಬಹುದು ಎಂಬುದನ್ನು ಸ್ಪಷ್ಟವಾಗಿ ವಿವರಿಸಬೇಕು ಎಂದು ರೈತರು ಆಗ್ರಹಿಸಿದರು. ಯುವ ಪೀಳಿಗೆಯನ್ನು ತಲುಪಲು ರೀಲ್ಸ್‌ (reels), ಸಣ್ಣ ವೀಡಿಯೊಗಳು ಮತ್ತು ತಳಮಟ್ಟದ ಸಭೆಗಳ ಮೂಲಕ ಎಥನಾಲ್‌ನ ಸರಿಯಾದ ಚಿತ್ರಣವನ್ನು ತೋರಿಸುವುದು ಅಗತ್ಯವಾಗಿದೆ ಎಂದು ಹೇಳಿದರು.

ಸಲಹೆಗಳನ್ನು ಆಲಿಸಿ ಮಾರ್ಗದರ್ಶನ ನೀಡಿದ ಶ್ರೀ ಶಿವರಾಜ್ ಸಿಂಗ್ ಚೌಹಾಣ್

ಕೇಂದ್ರ ಕೃಷಿ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು ಸಭೆಯಲ್ಲಿ ರೈತರ ಎಲ್ಲಾ ಮಾತುಗಳನ್ನು ಆಲಿಸಿದರು ಮತ್ತು ತಳಮಟ್ಟದ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಮಧ್ಯದಲ್ಲಿ ಪ್ರಶ್ನೆಗಳನ್ನು ಕೇಳುತ್ತಿದ್ದರು. ಕೇಂದ್ರ ಸರ್ಕಾರದ ಚಿಂತನೆ ಸ್ಪಷ್ಟವಾಗಿದೆ ಎಂದು ಅವರು ಹೇಳಿದರು – ಎಥನಾಲ್ ಯೋಜನೆಯ ಪ್ರಯೋಜನವು ಹೊಲದಿಂದ ಇಂಧನ ಟ್ಯಾಂಕ್‌ವರೆಗೆ ಇಡೀ ಸರಪಳಿಗೆ ತಲುಪಬೇಕು, ಆದರೆ ಅತಿ ದೊಡ್ಡ ಪಾಲು ರೈತನ ಹಿತದೃಷ್ಟಿಗೆ ಹೋಗಬೇಕು. ಎಥನಾಲ್ ದೇಶದ ಇಂಧನ ಭದ್ರತೆಯೊಂದಿಗೆ ರೈತರ ಜೇಬನ್ನೂ ಬಲಪಡಿಸುತ್ತದೆ ಎಂದು ಶ್ರೀ ಶಿವರಾಜ್ ಚೌಹಾಣ್ ಹೇಳಿದರು. ಯಾವುದೇ ಬೆಳೆ ಮತ್ತು ಯಾವುದೇ ರಾಜ್ಯಕ್ಕೆ ಅನ್ಯಾಯವಾಗದಂತೆ ನೋಡಿಕೊಳ್ಳುವುದು ನಮ್ಮ ಆದ್ಯತೆಯಾಗಿದೆ ಎಂದರು.

ಜೋಳ, ಅಕ್ಕಿ, ಕಬ್ಬು ಮತ್ತು ಇತರ ಕಚ್ಚಾ ವಸ್ತುಗಳ ಬೆಲೆಗಳು ಮತ್ತು ಬೇಡಿಕೆಯ ಸಮತೋಲನವನ್ನು ಕಾಯ್ದುಕೊಳ್ಳಲು ನೀತಿಯನ್ನು ಮರುಪರಿಶೀಲಿಸಲಾಗುವುದು ಎಂದು ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಸಭೆಯಲ್ಲಿ ಭರವಸೆ ನೀಡಿದರು. ರೈತರ ಹಿತಾಸಕ್ತಿಯಿಂದ, ವಿಶೇಷವಾಗಿ ಜೋಳದ ರೈತರ ಪ್ರಯೋಜನದ ದೃಷ್ಟಿಯಿಂದ ಮಾತ್ರ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತದೆ. ಎಥನಾಲ್ ಕುರಿತು ಲಭ್ಯವಿರುವ ವೈಜ್ಞಾನಿಕ ಅಧ್ಯಯನಗಳು ಮತ್ತು ತಾಂತ್ರಿಕ ವರದಿಗಳ ಮೂಲಕ, ನಕಾರಾತ್ಮಕ ವದಂತಿಗಳಿಗೆ ಉತ್ತರಿಸಲಾಗುವುದು ಮತ್ತು ರೈತರೊಂದಿಗೆ ಒಟ್ಟಾಗಿ ಸತ್ಯಾಧಾರಿತ ಸಂವಾದವನ್ನು ಮುಂದುವರಿಸಲಾಗುವುದು ಎಂದು ಹೇಳಿದರು.

ರೈತರ ಅಭಿಪ್ರಾಯಗಳು, ಸಚಿವರ ಮಾರ್ಗದರ್ಶನ ಸಹಭಾಗಿತ್ವದ ಸಂದೇಶ

ಸಭೆಯ ಕೊನೆಯಲ್ಲಿ, ಎಐಕೆಸಿಸಿ (AIKCC) ಪ್ರತಿನಿಧಿಗಳು ಎಥನಾಲ್ ಕುರಿತ ಗೊಂದಲಗಳನ್ನು ವಾಸ್ತವಾಂಶಗಳು ಮತ್ತು ಕ್ಷೇತ್ರದ ನೈಜ ಅನುಭವದ ಆಧಾರದ ಮೇಲೆ ನಿವಾರಿಸಲಾಗುವುದು ಮತ್ತು ಸರ್ಕಾರದೊಂದಿಗೆ ಒಟ್ಟಾಗಿ ಕೆಲಸ ಮಾಡುವ ಮೂಲಕ ರೈತರ ಹಿತದೃಷ್ಟಿಯಿಂದ ನೀತಿ ರೂಪಿಸುವ ಪ್ರಕ್ರಿಯೆಯನ್ನು ಬಲಪಡಿಸಲಾಗುವುದು ಎಂಬ ಸಂದೇಶವನ್ನು ಗ್ರಾಮಗಳಿಗೆ ಕೊಂಡೊಯ್ಯುವುದಾಗಿ ತಿಳಿಸಿದರು. ರೈತ ಸಂಘಟನೆಗಳು ಸರ್ಕಾರದ ವಿರೋಧಿಗಳಲ್ಲ, ಬದಲಿಗೆ ನೀತಿ ನಿರೂಪಣೆಯಲ್ಲಿ ಪಾಲುದಾರರು ಎಂಬ ಸ್ಪಷ್ಟ ಸಂದೇಶವನ್ನು ಶ್ರೀ ಶಿವರಾಜ್ ಸಿಂಗ್ ಚೌಹಾಣ್ ನೀಡಿದರು. ಎಥನಾಲ್ ಕುರಿತು ರೈತರ ಅಭಿಪ್ರಾಯಗಳನ್ನು ನಾವು ಗಮನವಿಟ್ಟು ಆಲಿಸಿದ್ದೇವೆ; ಈಗ ಈ ಸಲಹೆಗಳ ಆಧಾರದ ಮೇಲೆ ರೈತ, ದೇಶ ಮತ್ತು ಇಂಧನ – ಮೂರೂ ಬಲಗೊಳ್ಳುವಂತಹ ಚೌಕಟ್ಟನ್ನು ರಚಿಸುವುದು ನಮ್ಮ ಕೆಲಸ ಎಂದು ಅವರು ಹೇಳಿದರು.

ಎಐಕೆಸಿಸಿ (AIKCC) ನಿಯೋಗದಲ್ಲಿ ಎಐಕೆಸಿಸಿ ರಾಷ್ಟ್ರೀಯ ಅಧ್ಯಕ್ಷರು ಮತ್ತು ಭಾರತೀಯ ಕಿಸಾನ್ ಯೂನಿಯನ್ (ಮಾನ್) ಮಾಜಿ ಸಂಸದರಾದ ಶ್ರೀ ಭೂಪಿಂದರ್ ಸಿಂಗ್ ಮಾನ್, ಎಐಕೆಸಿಸಿ ರಾಷ್ಟ್ರೀಯ ಉಪಾಧ್ಯಕ್ಷರು ಮತ್ತು ನ್ಯಾಷನಲ್ ಅಸೋಸಿಯೇಷನ್ ಫಾರ್ ಫಾರ್ಮರ್ ಪ್ರೊಡ್ಯೂಸರ್ ಆರ್ಗನೈಸೇಷನ್ಸ್ (NAFPO) ಅಧ್ಯಕ್ಷರಾದ ಶ್ರೀ ಬಿನೋದ್ ಆನಂದ್, ಎಐಕೆಸಿಸಿ ರಾಷ್ಟ್ರೀಯ ಉಪಾಧ್ಯಕ್ಷರಾದ ಶ್ರೀ ಗುರುಸಾಹಿಬ್ ಸಿಂಗ್ ಮಾನ್, ಎಐಕೆಸಿಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಮಹಾರಾಷ್ಟ್ರದ ಶೇತ್ಕರಿ ಸಂಘಟನೆಯ (ಶರದ್ ಜೋಶಿ) ತರಬೇತುದಾರ ಶ್ರೀ ಗುಣವತ್ ಪಾಟೀಲ್, ಎಐಕೆಸಿಸಿ ಸದಸ್ಯ ಮತ್ತು ಭಾರತೀಯ ಕಿಸಾನ್ ಯೂನಿಯನ್ ಮಾನ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಕಿಸಾನ್ ಯೂನಿಯನ್ ಮಾನ್ (ಯುಪಿ) ಅಧ್ಯಕ್ಷ ಶ್ರೀ ಅಜಯ್ ಅನ್ಮೋಲ್, ಎಐಕೆಸಿಸಿ ಸದಸ್ಯ ಮತ್ತು ಮಹಾರಾಷ್ಟ್ರದ ಶೇತ್ಕರಿ ಸಂಘಟನೆಯ (ಶರದ್ ಜೋಶಿ) ಉಪಾಧ್ಯಕ್ಷ ಶ್ರೀ ಲಲಿತ್ ಬಹಾಲೆ ಪಾಟೀಲ್, ಎಐಕೆಸಿಸಿ ಸದಸ್ಯ ಮತ್ತು ಭಾರತೀಯ ಕಿಸಾನ್ ಯೂನಿಯನ್ ಮಾನ್ (ಹರಿಯಾಣ) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಶ್ರೀ ಬಲ್‌ರಾಜ್ ಸಿಂಗ್ ಸಂಧು, ಎಐಕೆಸಿಸಿ ಸದಸ್ಯರಾದ ಮತ್ತು ಬಿಕೆಯು ಮಾನ್ (ಹರಿಯಾಣ) ಅಧ್ಯಕ್ಷರಾದ ಶ್ರೀ ಸುರ್ಜಿತ್ ಸಿಂಗ್ ಮಣಿ ಗುರ್ಜರ್, ಎಐಕೆಸಿಸಿ ಸದಸ್ಯ ಮತ್ತು ಬಿಕೆಯು ಮಾನ್ (ಹರಿಯಾಣ) ರಾಜ್ಯ ಉಪಾಧ್ಯಕ್ಷರಾದ ಶ್ರೀ ಜುಗ್ನು ರಾಣಾ, ಎಐಕೆಸಿಸಿ ಸದಸ್ಯರಾದ ಮತ್ತು ಬಿಕೆಯು ಮಾನ್ (ಹರಿಯಾಣ) ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀ ಮನ್‌ಫೂಲ್ ಸಿಂಗ್, ಎಐಕೆಸಿಸಿ ಸದಸ್ಯರಾದ ಮತ್ತು ತಮಿಳುನಾಡಿನ ವ್ಯಮಲನ್ ಕಿಸಾನ್ ಸಂಘಟನೆಯ ಅಧ್ಯಕ್ಷರಾದ ಶ್ರೀ ವಿ. ಮಾಣಿಕ್ಕಂ, ಎಐಕೆಸಿಸಿ ಸದಸ್ಯರಾದ ಮತ್ತು ತೆಲಂಗಾಣದ ಕಿಸಾನ್ ಜಾಗರಣ ಅಧ್ಯಕ್ಷರಾದ ಶ್ರೀ ಸುಗುಣಾಕರ್ ರಾವ್, ಎಐಕೆಸಿಸಿ ಸದಸ್ಯರಾದ ಮತ್ತು ಬಿಕೆಯು ಮಾನ್ (ಚಂಡೀಗಢ) ಅಧ್ಯಕ್ಷರಾದ ಶ್ರೀ ಬಲ್ವಂತ್ ಸಿಂಗ್ ನಡಿಯಾಲಿ, ಎಐಕೆಸಿಸಿ ಸದಸ್ಯರಾದ ಮತ್ತು ಮಹಾರಾಷ್ಟ್ರದ ಶೇತ್ಕರಿ ಸಂಘಟನೆಯ (ಶರದ್ ಜೋಶಿ) ವಕ್ತಾರರಾದ ಶ್ರೀ ದಿನೇಶ್ ಶರ್ಮಾ, ಎಐಕೆಸಿಸಿ ಸದಸ್ಯರಾದ ಮತ್ತು ಮಾಳ್ವಾ ಬಿಕೆಯು ಮಾನ್ ಅಧ್ಯಕ್ಷರಾದ ಶ್ರೀ ಬಲ್ವೀರ್ ಸಿಂಗ್, ಹಾಗೂ ಎಐಕೆಸಿಸಿ ಸದಸ್ಯರಾದ ಶ್ರೀ ಶಿವರಾಜ್ ಸಿಂಗ್ ಭಾಗವಹಿಸಿದ್ದರು.

 

*****


(रिलीज़ आईडी: 2294644) आगंतुक पटल : 21
इस विज्ञप्ति को इन भाषाओं में पढ़ें: English , हिन्दी , Marathi , Gujarati