ಪರಿಸರ ಮತ್ತು ಅರಣ್ಯ ಸಚಿವಾಲಯ
azadi ka amrit mahotsav

ಕೊಯಮತ್ತೂರಿನಲ್ಲಿ ನಡೆದ ಕೇಂದ್ರ ಮೃಗಾಲಯ ಪ್ರಾಧಿಕಾರದ 46ನೇ ಸಭೆಯ ಅಧ್ಯಕ್ಷತೆಯನ್ನು ಕೇಂದ್ರ ಪರಿಸರ ಸಚಿವರು ವಹಿಸಿದ್ದರು


ಭಾರತೀಯ ಮೃಗಾಲಯಗಳಲ್ಲಿ ಸಂರಕ್ಷಣಾ ಸಂತಾನೋತ್ಪತ್ತಿ, ವನ್ಯಜೀವಿ ಆರೋಗ್ಯ, ವೈಜ್ಞಾನಿಕ ನಿರ್ವಹಣೆ ಮತ್ತು ಸಾಮರ್ಥ್ಯ ವೃದ್ಧಿಯಲ್ಲಿನ ಸಾಧನೆಯಲ್ಲಿ ಮಹತ್ತರ ಮೈಲಿಗಲ್ಲುಗಳನ್ನು ಉಲ್ಲೇಖಿಸುವ ಸಿ.ಝೆಡ್.ಎ. ಯ ಸುದ್ದಿಪತ್ರವನ್ನು ಶ್ರೀ ಭೂಪೇಂದರ್ ಯಾದವ್ ಬಿಡುಗಡೆ ಮಾಡಿದರು

ಪ್ರಕಟಣಾ ದಿನಾಂಕ: 09 JUL 2026 4:54PM by PIB Bengaluru

ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವರಾದ ಶ್ರೀ ಭೂಪೇಂದರ್ ಯಾದವ್ ಅವರು ಇಂದು ಕೊಯಮತ್ತೂರಿನಲ್ಲಿ ನಡೆದ ಕೇಂದ್ರ ಮೃಗಾಲಯ ಪ್ರಾಧಿಕಾರದ (ಸಿ.ಝೆಡ್.ಎ.) 46ನೇ ಸಭೆಯ ಅಧ್ಯಕ್ಷತೆ ವಹಿಸಿದರು. 2026-27ರ ಹಣಕಾಸು ವರ್ಷದಲ್ಲಿ ಸಿ.ಝೆಡ್.ಎ.ಯ ಪ್ರಮುಖ ಸಾಧನೆಗಳು ಮತ್ತು ಕಾರ್ಯತಂತ್ರದ ಆದ್ಯತೆಗಳನ್ನು ಕೇಂದ್ರ ಮೃಗಾಲಯ ಪ್ರಾಧಿಕಾರದ ಆಡಳಿತ ಮಂಡಳಿಯ ಸಭೆಯಲ್ಲಿ ಮಂಡಿಸಲಾಯಿತು. 

ಮೃಗಾಲಯಗಳ ಆಧುನೀಕರಣ, ಹೊಸ ಪ್ರಾಣಿಶಾಸ್ತ್ರ ಸೌಲಭ್ಯಗಳ ಸ್ಥಾಪನೆ, ಸುಧಾರಿತ ಸಂದರ್ಶಕರ ಶಿಕ್ಷಣ, ವೈಜ್ಞಾನಿಕ ಯೋಜನೆ ಮತ್ತು ಮೂಲಸೌಕರ್ಯ ಅಭಿವೃದ್ಧಿಗಾಗಿ ಪ್ರಸ್ತಾವನೆಗಳನ್ನು ಸಭೆ ಪರಿಶೀಲಿಸಿತು. ಭಾರತೀಯ ಮೃಗಾಲಯಗಳು ಸಂರಕ್ಷಣೆ, ಶಿಕ್ಷಣ ಮತ್ತು ಸಂಶೋಧನೆಯ ಕೇಂದ್ರಗಳಾಗಿ ಕಾರ್ಯನಿರ್ವಹಿಸುವುದನ್ನು ಖಚಿತಪಡಿಸಿಕೊಳ್ಳಲು ಸಭೆಯು ಮೃಗಾಲಯಗಳ ಆಧುನೀಕರಣ, ಹೊಸ ಪ್ರಾಣಿಶಾಸ್ತ್ರ ಸೌಲಭ್ಯಗಳ ಸ್ಥಾಪನೆ, ಸುಧಾರಿತ ಸಂದರ್ಶಕರ ಶಿಕ್ಷಣ, ವೈಜ್ಞಾನಿಕ ಯೋಜನೆ ಮತ್ತು ಮೂಲಸೌಕರ್ಯ ಅಭಿವೃದ್ಧಿಗಾಗಿ ಪ್ರಸ್ತಾವನೆಗಳನ್ನು ಕೂಡಾ ಪರಿಶೀಲಿಸಿದೆ.

ಸಭೆಯಲ್ಲಿ ನಡೆದ ಪ್ರಮುಖ ಚರ್ಚೆಗಳು ಈ ಕೆಳಗಿನಂತಿವೆ:

  • ನಿರ್ವಹಣಾ ಪರಿಣಾಮಕಾರಿತ್ವದ ಎರಡನೇ ಚಕ್ರ ಆರು ಮೌಲ್ಯಮಾಪನ ತಂಡಗಳಿಂದ ಮೃಗಾಲಯಗಳ ಮೌಲ್ಯಮಾಪನ.
  • ಭಾರತೀಯ ಮೃಗಾಲಯಗಳಲ್ಲಿ ಸಂರಕ್ಷಣಾ ಸಂತಾನೋತ್ಪತ್ತಿ ಕಾರ್ಯಕ್ರಮಗಳನ್ನು ಪೂರೈಸಲು ಸಂತಾನೋತ್ಪತ್ತಿ ತಂತ್ರಜ್ಞಾನಗಳೊಂದಿಗೆ ಪ್ರಾಣಿ ಬಯೋಬ್ಯಾಂಕ್ಗಳ ಜಾಲವನ್ನು ಅಭಿವೃದ್ಧಿಪಡಿಸಲು ಸಿಸಿಎಂಬಿ-ಲಾಕೋನ್ಸ್ ನಿಂದ ಪ್ರಸ್ತಾವನೆಯ ಕುರಿತು ಪರಿಕಲ್ಪನಾ ಟಿಪ್ಪಣಿ.
  • ರಾಷ್ಟ್ರೀಯ ಪ್ರಾಣಿಶಾಸ್ತ್ರ ಉದ್ಯಾನವನದ ಆಧುನೀಕರಣಕ್ಕೆ ಸಂಬಂಧಿಸಿದ ಸಮಸ್ಯೆಗಳು.
  • ಭಾರತೀಯ ಮೃಗಾಲಯಗಳಲ್ಲಿ ಮೃಗಾಲಯದ ಪಶುವೈದ್ಯರು ಮತ್ತು ಪ್ರಾಣಿ ನಿರ್ವಾಹಕರಿಗೆ ಪ್ರಮಾಣಿತ ಕಾರ್ಯಾಚರಣಾ ಕಾರ್ಯವಿಧಾನಗಳು.
  • ವನ್ಯಜೀವಿ ಆರೋಗ್ಯ ನಿರ್ವಹಣೆಯಲ್ಲಿ ಉದಯೋನ್ಮುಖ ಸವಾಲುಗಳನ್ನು ಪರಿಹರಿಸುವ ಪ್ರಯತ್ನದಲ್ಲಿ ರಾಷ್ಟ್ರೀಯ ವನ್ಯಜೀವಿ ಆರೋಗ್ಯ ನೀತಿ ಪರಿಕಲ್ಪನಾ ಪತ್ರವನ್ನು ಪ್ರಸ್ತಾಪಿಸಲಾಗಿದೆ.
  • ಮೃಗಾಲಯಗಳಿಗೆ ಸಿ.ಎಸ್.ಆರ್.  ನಿಧಿಗಳು ಮತ್ತು ಸಂಪನ್ಮೂಲಗಳ ಕ್ರೋಢೀಕರಣದ ಬಳಕೆ ಕುರಿತು ಸಮಿತಿಯ ವರದಿ.
  • ಸಿ.ಐ.ಟಿ.ಇ.ಎಸ್. ನ ಅನುಬಂಧಗಳಲ್ಲಿ ಪಟ್ಟಿ ಮಾಡಲಾದ ಸ್ಥಳೀಯವಲ್ಲದ ಜಾತಿಯ ಕಾಡು ಪ್ರಾಣಿಗಳ ಅನಧಿಕೃತ ಸ್ವಾಧೀನ ಮತ್ತು ಪ್ರದರ್ಶನ - ಕಾನೂನು ನಿಬಂಧನೆಗಳ ಜಾರಿ.

ಇದರ ಜೊತೆಗೆ ಸಭೆಯಲ್ಲಿ, ಭಾರತೀಯ ಮೃಗಾಲಯಗಳಾದ್ಯಂತ ಸಂರಕ್ಷಣಾ ಸಂತಾನೋತ್ಪತ್ತಿ, ವನ್ಯಜೀವಿ ಆರೋಗ್ಯ, ವೈಜ್ಞಾನಿಕ ನಿರ್ವಹಣೆ ಮತ್ತು ಸಾಮರ್ಥ್ಯ ವೃದ್ಧಿಯಲ್ಲಿ ಮಹತ್ತರ ಮೈಲಿಗಲ್ಲುಗಳನ್ನು ಉಲ್ಲೇಖಿಸುವ ಕೇಂದ್ರ ಮೃಗಾಲಯ ಪ್ರಾಧಿಕಾರದ ಸುದ್ದಿಪತ್ರವನ್ನು ಕೇಂದ್ರ ಸಚಿವರು ಬಿಡುಗಡೆ ಮಾಡಿದರು.

 

*****


(ಪ್ರಕಟಣೆ ಐ.ಡಿ.: 2282951) ವಿಸಿಟರ್ ಕೌಂಟರ್ : 74
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Tamil