ಸಂಪುಟ
azadi ka amrit mahotsav

ದೆಹಲಿ-ಎನ್‌ಸಿಆರ್ ಪ್ರದೇಶದಲ್ಲಿ ಹಳೆಯ ಟ್ರಕ್‌ಗಳು ಮತ್ತು ಬಸ್‌ಗಳನ್ನು ಬದಲಾಯಿಸಲು ಎನ್‌ಸಿಆರ್‌ಪಿಬಿಗೆ ಬೆಂಬಲ ನೀಡುವ ಯೋಜನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ

प्रविष्टि तिथि: 03 JUN 2026 3:17PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ದೆಹಲಿ-ಎನ್‌ಸಿಆರ್ ಪ್ರದೇಶದಲ್ಲಿ ವಾಯು ಮಾಲಿನ್ಯವನ್ನು ತಗ್ಗಿಸುವ ಮತ್ತು ಶುದ್ಧ ಸಾರಿಗೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿರುವ ಎರಡು ವರ್ಷಗಳ ಮಹತ್ವದ ಯೋಜನೆಗೆ ಅನುಮೋದನೆ ನೀಡಿದೆ.ಈ ಯೋಜನೆಗೆ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ (ಎಂ ಒ ಎಚ್ ಯು ಎ) ಅಡಿಯಲ್ಲಿ ಬರುವ ರಾಷ್ಟ್ರೀಯ ರಾಜಧಾನಿ ಪ್ರದೇಶ ಯೋಜನಾ ಮಂಡಳಿ (ಎನ್ ಸಿ ಆರ್ ಪಿ ಬಿ) ಮೂಲಕ ಆರ್ಥಿಕ ನೆರವು ಒದಗಿಸಲಾಗುವುದು ಮತ್ತು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಮತ್ತು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಇದನ್ನು ಜಾರಿಗೊಳಿಸಲಿದೆ. ಇದನ್ನು ದೆಹಲಿ, ಹರಿಯಾಣ, ರಾಜಸ್ಥಾನ ಮತ್ತು ಉತ್ತರ ಪ್ರದೇಶ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸಹಯೋಗದೊಂದಿಗೆ ಜಾರಿಗೆ ತರಲಾಗುವುದು.

ಕೇಂದ್ರ ಸರ್ಕಾರದಿಂದ 5,041 ಕೋಟಿ ರೂ. ಮತ್ತು ಯೋಜನೆಯಲ್ಲಿ ಭಾಗಿಯಾಗುವ ರಾಜ್ಯಗಳಿಂದ ಅಂದಾಜು 1,601 ಕೋಟಿ ರೂ. ತೆರಿಗೆ ರಿಯಾಯಿತಿಗಳು ಸೇರಿದಂತೆ ಒಟ್ಟು 9,585 ಕೋಟಿ ರೂ. ಆರ್ಥಿಕ ವೆಚ್ಚದೊಂದಿಗೆ ಈ ಯೋಜನೆಯು ದೆಹಲಿ-ಎನ್‌ಸಿಆರ್ ಪ್ರದೇಶದಲ್ಲಿ ನೋಂದಾಯಿಸಲಾದ ಟ್ರಕ್‌ಗಳು ಮತ್ತು ಬಸ್‌ಗಳ ಮಾಲೀಕರಿಗೆ ಬಿಎಸ್-IV ಅಥವಾ ಹಿಂದಿನ ಇಂಧನ ಹೊರಸೂಸುವಿಕೆ ಮಾನದಂಡಗಳನ್ನು ಅನುಸರಿಸುವವರಿಗೆ ಅವುಗಳನ್ನು ಬಿಎಸ್-VI ಅಥವಾ ಕಠಿಣ ಹೊರಸೂಸುವಿಕೆ-ಕಂಪ್ಲೈಂಟ್ ವಾಹನಗಳು ಅಥವಾ ಎಲೆಕ್ಟ್ರಿಕ್ ವಾಹನಗಳೊಂದಿಗೆ ಬದಲಾಯಿಸಲು ಪ್ರೋತ್ಸಾಹ ನೀಡಲು ಪ್ರಯತ್ನಿಸುತ್ತದೆ. ಸ್ವಚ್ಛ ಸಾರಿಗೆ ತಂತ್ರಜ್ಞಾನಗಳಿಗೆ ಪರಿವರ್ತನೆ ವೇಗಗೊಳಿಸುವ ಮೂಲಕ ಈ ಯೋಜನೆಯು ಇಂಧನ ಹೊರಸೂಸುವಿಕೆಯನ್ನು ಗಮನಾರ್ಹವಾಗಿ ಕಡಿಮೆ ತಗ್ಗಿಸುತ್ತದೆ ಮತ್ತು ದೆಹಲಿ-ಎನ್‌ಸಿಆರ್ ಪ್ರದೇಶದಾದ್ಯಂತ ಸುಧಾರಿತ ಗಾಳಿಯ ಗುಣಮಟ್ಟಕ್ಕೆ ಕೊಡುಗೆ ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ.

ದೆಹಲಿ-ಎನ್ ಸಿಆರ್ ನಲ್ಲಿ ವಾಯು ಮಾಲಿನ್ಯವು ಸಾರ್ವಜನಿಕ ಆರೋಗ್ಯಕ್ಕೆ ವಿಶೇಷವಾಗಿ ಚಳಿಗಾಲದ ತಿಂಗಳುಗಳಲ್ಲಿ ಭಾರಿ ಸವಾಲಾಗಿ ಪರಿಣಮಿಸಿದೆ. 2018ರ ಆಗಸ್ಟ್ ನಲ್ಲಿ ಭಾರತೀಯ ಆಟೋಮೋಟಿವ್ ರಿಸರ್ಚ್ ಅಸೋಸಿಯೇಷನ್ ​​(ಎ ಆರ್ ಎ ಐ) ಮತ್ತು ಇಂಧನ ಮತ್ತು ಸಂಪನ್ಮೂಲ ಸಂಸ್ಥೆ (ಟಿ ಇ ಆರ್ ಐ) ಸಿದ್ಧಪಡಿಸಿದ “ಎನ್ ಸಿಆರ್ ನಲ್ಲಿ ಕಣಗಳ ಮೂಲ ಹಂಚಿಕೆ (PM 2.5 ಮತ್ತು PM 10)” ವರದಿಯ ಪ್ರಕಾರ, ದೆಹಲಿ-ಎನ್ ಸಿಆರ್ ನಲ್ಲಿ ಸಾರಿಗೆ ವಲಯವು PM 2.5 ರ ಶೇ.14ರಷ್ಟು ಇಂಗಾಲ ಮಾನಾಕ್ಸೈಡ್ (CO) ನ ಶೇ.40 ಮತ್ತು ನೈಟ್ರೋಜನ್ ಆಕ್ಸೈಡ್ (NOx) ಹೊರಸೂಸುವಿಕೆಯ ಶೇ.63 ರಷ್ಟು ಕೊಡುಗೆ ನೀಡುತ್ತದೆ. ಸಾರಿಗೆ ವಲಯದಲ್ಲಿ ಟ್ರಕ್‌ಗಳು ಮತ್ತು ಬಸ್‌ಗಳು PM 2.5 ಹೊರಸೂಸುವಿಕೆಯ ಶೇ.36ರಷ್ಟಿದ್ದು, ಒಟ್ಟು ಫ್ಲೀಟ್‌ನ ಕೇವಲ ಶೇ.3 ರಷ್ಟಿದೆ. BS ಪೂರ್ವ ಹೆವಿ ಡ್ಯೂಟಿ ವಾಹನವು 14 BS-VI ಕಂಪ್ಲೈಂಟ್ ವಾಹನಗಳನ್ನು ಹೊರಸೂಸುತ್ತದೆ ಎಂದು ಅಂದಾಜಿಸಲಾಗಿದೆ. BS-IV ವಾಹನವು ಸಹ BS-VI ಪ್ರತಿರೂಪಕ್ಕಿಂತ 2.7 ಪಟ್ಟು ಹೆಚ್ಚು ಹೊರಸೂಸುತ್ತದೆ. ಆದ್ದರಿಂದ ಹೊಸ ಸಾರಿಗೆ ವಾಹನ ಮಾಲಿನ್ಯವನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ ಎಂದು ನಿರೀಕ್ಷಿಸಲಾಗಿದೆ.

ಈ ಯೋಜನೆಯು ದೆಹಲಿ-ಎನ್ ಸಿಆರ್ ನಲ್ಲಿ (ದೆಹಲಿ, ಹರಿಯಾಣ, ರಾಜಸ್ಥಾನ ಮತ್ತು ಉತ್ತರ ಪ್ರದೇಶ ಸೇರಿದಂತೆ) ಸುಮಾರು 2.07 ಲಕ್ಷ (1.91 ಲಕ್ಷ ಟ್ರಕ್‌ಗಳು ಮತ್ತು 16,329 ಬಸ್‌ಗಳು) ಮಾಲೀಕರಿಗೆ ಪ್ರಯೋಜನವನ್ನು ನೀಡುತ್ತದೆ.

BS III ಅಥವಾ ಹಳೆಯ ವಾಹನಗಳಿಗೆ, ನೋಂದಾಯಿತ ವಾಹನ ಸ್ಕ್ರ್ಯಾಪಿಂಗ್ ಸೌಲಭ್ಯಗಳಲ್ಲಿ ಸ್ಕ್ರ್ಯಾಪಿಂಗ್ ಕಡ್ಡಾಯವಾಗಿದೆ. ಆದರೆ BS IV ವಾಹನಗಳನ್ನು NCAP ಅಲ್ಲದ ನಗರಗಳು / ಪಟ್ಟಣಗಳಲ್ಲಿ ಎನ್ ಸಿ ಆರ್ ಹೊರಗೆ ಸ್ಕ್ರ್ಯಾಪ್ ಮಾಡಬಹುದು ಅಥವಾ ಮಾರಾಟ ಮಾಡಬಹುದು. ನಂತರ ಮಾಲೀಕರು ಎನ್ ಸಿಆರ್ ಒಳಗೆ BS VI ಅಥವಾ ಕಠಿಣ ಮಾನದಂಡಗಳಿಗೆ ಅನುಗುಣವಾಗಿ ಅಥವಾ ಎಲೆಕ್ಟ್ರಿಕ್ ವಾಹನವನ್ನು ಖರೀದಿಸಿ ನೋಂದಾಯಿಸಬೇಕು.ಆದರೂ ದೆಹಲಿಯಲ್ಲಿ ಯೋಜನೆಯಡಿಯಲ್ಲಿ ಖರೀದಿಸಿದ ಲಘು ಸರಕು ವಾಹನಗಳು ವಿದ್ಯುತ್ ಆಗಿರಬೇಕು, ಆದರೆ ಬಸ್‌ಗಳು BS VI CNG ಅಥವಾ ವಿದ್ಯುತ್ ಮಾತ್ರ ಆಗಿರಬೇಕು. ಸರ್ಕಾರಿ ವಾಹನಗಳನ್ನು ಯೋಜನೆಯಿಂದ ಹೊರಗಿಡಲಾಗಿದೆ.

ಯೋಜನೆಯಡಿ ಪ್ರಯೋಜನಗಳು:

ಕೇಂದ್ರವು ಐದು ವರ್ಷಗಳ ಸಾಲಗಳ ಮೇಲೆ ಶೇ.5ರ ಬಡ್ಡಿ ವಿನಾಯ್ತಿ (ಸಬ್ವೆನ್ಷನ್) ವಾಹನ ವರ್ಗವನ್ನು ಅವಲಂಬಿಸಿ 4,800 ರೂ. ವರೆಗಿನ ಮಾಸಿಕ ಇಂಧನ ವೋಚರ್‌ಗಳು ಮತ್ತು ಇವಿ ಖರೀದಿಗಳು ಅಥವಾ ಠೇವಣಿ ವ್ಯಾಪಾರದ ಪ್ರಮಾಣಪತ್ರಕ್ಕಾಗಿ ಒಟ್ಟು ಮೊತ್ತದ ಪ್ರಯೋಜನಗಳನ್ನು ಒದಗಿಸುತ್ತದೆ.

ರಾಜ್ಯ ಸರ್ಕಾರಗಳು ನೋಂದಣಿ ಶುಲ್ಕವನ್ನು ಮನ್ನಾ ಮಾಡುತ್ತವೆ ಮತ್ತು ಹೊಸ ವಾಹನಗಳಿಗೆ ಶೇ.100 ವರೆಗೆ ಮೋಟಾರು ವಾಹನ ತೆರಿಗೆ ರಿಯಾಯಿತಿಗಳನ್ನು ಮತ್ತು ಬಳಸಿದ ವಾಹನಗಳಿಗೆ ಶೇ.50 ವರೆಗೆ 10 ವರ್ಷಗಳವರೆಗೆ ನೀಡುತ್ತವೆ. ರಾಜ್ಯ ಸರ್ಕಾರವು ಯೋಜನೆಯಲ್ಲಿ ಭಾಗವಹಿಸುವ ಹಳೆಯ ವಾಹನಗಳ ಮೇಲಿನ ಬಾಕಿ ಇರುವ ಹೊಣೆಗಾರಿಕೆಗಳನ್ನು ಸಹ ಮನ್ನಾ ಮಾಡುತ್ತದೆ.

ಭಾಗವಹಿಸುವ ಆಟೋ ಒಇಎಂಗಳು ಎಕ್ಸ್ ಶೋ ರೂಂ ಬೆಲೆಗಳಲ್ಲಿ ಶೇ.8 ರಷ್ಟು ರಿಯಾಯಿತಿಗಳನ್ನು ನೀಡುತ್ತವೆ.

ಯೋಜನೆ ಜಾರಿಯು ಸಮಗ್ರ ಪೋರ್ಟಲ್ ಮೂಲಕ ಸಂಪೂರ್ಣವಾಗಿ ಡಿಜಿಟಲ್ ಆಗಿರುತ್ತದೆ. ಇದು ನೈಜ ಸಮಯದ ಅರ್ಹತಾ ಪರಿಶೀಲನೆಗಳು, ಸ್ವಯಂಚಾಲಿತ ಬಡ್ಡಿ ಸಬ್ವೆನ್ಷನ್ ಕ್ಲೈಮ್‌ಗಳು, ಮಾಸಿಕ ಇಂಧನ ವೋಚರ್ ಕ್ರೆಡಿಟ್‌ಗಳು ಮತ್ತು ಮಾಲಿನ್ಯ ಕಡಿತ ಫಲಿತಾಂಶಗಳ ಮೇಲ್ವಿಚಾರಣೆಯನ್ನು ಸಕ್ರಿಯಗೊಳಿಸುತ್ತದೆ. ಕೇಂದ್ರ ಸರ್ಕಾರದ ಪ್ರಯೋಜನಗಳು ಹೊಸ ವಾಹನದ ನೋಂದಣಿ ದಿನಾಂಕದಿಂದ 5 ವರ್ಷಗಳವರೆಗೆ ಮುಂದುವರಿಯುತ್ತದೆ, ಎರಡು ವರ್ಷಗಳ ದಾಖಲಾತಿ ಅವಧಿಯನ್ನು ಮೀರಿ ನಿರಂತರ ಪರಿಣಾಮವನ್ನು ಖಚಿತಪಡಿಸುತ್ತದೆ.

ಈ ಯೋಜನೆಯನ್ನು ಸಂಪುಟ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಒಂದು ಸಬಲೀಕೃತ ಸಮಿತಿಯು ಮೇಲ್ವಿಚಾರಣೆ ಮಾಡುತ್ತದೆ. ಅದರಲ್ಲಿ ನೀತಿ ಆಯೋಗದ ಸಿಸಿಒ, MoHUA, MoRT&H, MoPNG, DFS ಕಾರ್ಯದರ್ಶಿಗಳು, ದೆಹಲಿ ಎನ್ ಸಿಅರ್ ನಲ್ಲಿರುವ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು ಸದಸ್ಯರಾಗಿದ್ದಾರೆ ಮತ್ತು ಎನ್ ಸಿಆರ್ ಪಿಆರ್ ಸದಸ್ಯ ಕಾರ್ಯದರ್ಶಿಗಳು ಸದಸ್ಯ ಸಂಚಾಲಕರಾಗಿದ್ದಾರೆ. ಜಿಲ್ಲಾ ಮಟ್ಟದಲ್ಲಿ, ಜಿಲ್ಲಾಧಿಕಾರಿಗಳು/ಜಿಲ್ಲಾ ಮ್ಯಾಜಿಸ್ಟ್ರೇಟ್‌ಗಳು ಯೋಜನೆಯನ್ನು ಅನುಷ್ಠಾನಗೊಳಿಸುತ್ತಾರೆ ಮತ್ತು ಮೇಲ್ವಿಚಾರಣೆ ಮಾಡುತ್ತಾರೆ.

 

*****


(रिलीज़ आईडी: 2268384) आगंतुक पटल : 18
इस विज्ञप्ति को इन भाषाओं में पढ़ें: English , Urdu , हिन्दी , Marathi , Bengali , Assamese , Manipuri , Gujarati , Odia , Tamil , Telugu , Malayalam