ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಆಪರೇಷನ್ ಸಿಂದೂರ್ ಸಮಯದಲ್ಲಿ ಭಾರತೀಯ ಸಶಸ್ತ್ರ ಪಡೆಗಳು ತೋರಿಸಿದ ಶೌರ್ಯವನ್ನು ಶ್ಲಾಘಿಸುವ ಸಂಸ್ಕೃತ ಸುಭಾಷಿತ ಹಂಚಿಕೊಂಡಿರುವ ಪ್ರಧಾನಮಂತ್ರಿ

ಪ್ರಕಟಣಾ ದಿನಾಂಕ: 07 MAY 2026 10:20AM by PIB Bengaluru

ಆಪರೇಷನ್ ಸಿಂದೂರ್ ಸಮಯದಲ್ಲಿ ಭಾರತ ದೇಶದ ಅಭೂತಪೂರ್ವ ವಿಜಯವು ದೇಶದ ವೀರ ಸೈನಿಕರ ಅಪೂರ್ವ ಶೌರ್ಯ ಮತ್ತು ದೇಶಭಕ್ತಿಗೆ ಪ್ರೇರಣಾದಾಯಕ ಉದಾಹರಣೆಯಾಗಿದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಹೇಳಿದ್ದಾರೆ. ಯೋಧರ ಅಜೇಯ ಧೈರ್ಯ, ದೃಢ ಸಂಕಲ್ಪ ಮತ್ತು ಅಚಲ ಕರ್ತವ್ಯನಿಷ್ಠೆಗೆ ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆ ಇದೆ ಎಂದು ಅವರು ತಿಳಿಸಿದ್ದಾರೆ.

ಪ್ರಧಾನಮಂತ್ರಿಗಳು ಈ ಸಂಸ್ಕೃತ ಸುಭಾಷಿತವನ್ನು ಹಂಚಿಕೊಂಡಿದ್ದಾರೆ- 

“उदीर्णमनसो योधा वाहनानि च भारत।
यस्यां भवन्ति सेनायां ध्रुवं तस्यां जयं वदेत्।। ” 

#OperationSindoor”

ಈ ಸುಭಾಷಿತದ ಅರ್ಥವೆಂದರೆ — ಯಾವ ಸೇನೆಯಲ್ಲಿ ಉತ್ಸಾಹಭರಿತ, ಧೈರ್ಯಶಾಲಿ ಮತ್ತು ಉನ್ನತ ಮನೋಬಲ ಹೊಂದಿದ ಯೋಧರು ಹಾಗೂ ಶಕ್ತಿಶಾಲಿ ಸೈನಿಕ ಸಂಪನ್ಮೂಲಗಳು ಇರುತ್ತವೋ, ಆ ಸೇನೆಗೆ ಜಯ ಖಚಿತ.

ಈ ಕುರಿತು ಪ್ರಧಾನಮಂತ್ರಿ ಅವರು ಎಕ್ಸ್ ಖಾತೆಯಲ್ಲಿ ಹೀಗೆ ಬರೆದುಕೊಂಡಿದ್ದಾರೆ:

“ऑपरेशन सिंदूर में भारत को मिली असाधारण विजय हमारे वीर सैनिकों के अद्भुत पराक्रम और देशभक्ति की प्रेरक मिसाल है। उनके अदम्य साहस, दृढ़ संकल्प और कर्तव्यनिष्ठा पर हर देशवासी को गर्व है।

उदीर्णमनसो योधा वाहनानि च भारत।

यस्यां भवन्ति सेनायां ध्रुवं तस्यां जयं वदेत्।

#OperationSindoor”

 

*****

 


(ಪ್ರಕಟಣೆ ಐ.ಡಿ.: 2258643) ವಿಸಿಟರ್ ಕೌಂಟರ್ : 7
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , Marathi , हिन्दी , Assamese , Manipuri , Bengali , Punjabi , Gujarati , Tamil , Telugu , Malayalam