ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ
ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆ: ವರ್ಷಾಂತ್ಯದ ಪರಾಮರ್ಶೆ - 2025
प्रविष्टि तिथि:
31 DEC 2025 5:12PM by PIB Bengaluru
2025 ರಲ್ಲಿ ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯ ಚಟುವಟಿಕೆಗಳ ಪ್ರಮುಖ ಮುಖ್ಯಾಂಶಗಳು ಈ ಕೆಳಗಿನಂತಿವೆ:
1. ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ (ಪಿ.ಎಂ.ಜಿ.ಕೆ.ಎ.ವೈ.-PMGKAY)
ದೇಶದಲ್ಲಿ ಕೋವಿಡ್-19 ಹರಡುವಿಕೆಯಿಂದ ಉಂಟಾದ ಆರ್ಥಿಕ ಅಡಚಣೆಗಳಿಂದ ಬಡವರು ಮತ್ತು ನಿರ್ಗತಿಕರು ಎದುರಿಸುತ್ತಿರುವ ಕಷ್ಟಗಳನ್ನು ನಿವಾರಿಸುವ ನಿರ್ದಿಷ್ಟ ಉದ್ದೇಶದಿಂದ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ (ಪಿ.ಎಂ.ಜಿ.ಕೆ.ಎ.ವೈ) ಯನ್ನು ಪ್ರಾರಂಭಿಸಲಾಯಿತು. ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ, ಪಿ.ಎಂ.ಜಿ.ಕೆ.ಎ.ವೈ ಅಡಿಯಲ್ಲಿ ಉಚಿತ ಆಹಾರ ಧಾನ್ಯಗಳ ಹಂಚಿಕೆಯನ್ನು ನಿಯಮಿತ ಹಂಚಿಕೆಯ ಜೊತೆಗೆ ಮಾಡಲಾಯಿತು. ಪಿ.ಎಂ.ಜಿ.ಕೆ.ಎ.ವೈ (ಹಂತ I-VII) ಅಡಿಯಲ್ಲಿ 28 ತಿಂಗಳ ಅವಧಿಗೆ ಸುಮಾರು 1118 ಎಲ್.ಎಂ.ಟಿ. ಆಹಾರ ಧಾನ್ಯಗಳನ್ನು ಹಂಚಿಕೆ ಮಾಡಲಾಗಿದ್ದು, ಒಟ್ಟು ಯೋಜಿತ ಹಣಕಾಸು ವೆಚ್ಚ ಸುಮಾರು 3.91 ಲಕ್ಷ ಕೋಟಿ ರೂ. ಬಡ ಫಲಾನುಭವಿಗಳ ಆರ್ಥಿಕ ಹೊರೆಯನ್ನು ನಿವಾರಿಸಲು ಮತ್ತು ರಾಷ್ಟ್ರವ್ಯಾಪಿ ಏಕರೂಪತೆ ಮತ್ತು ಕಾಯ್ದೆಯ ಪರಿಣಾಮಕಾರಿ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಲು ಕೇಂದ್ರ ಸರ್ಕಾರವು, ಜನವರಿ 1, 2023 ರಿಂದ ಪ್ರಾರಂಭವಾಗುವ ಒಂದು ವರ್ಷದ ಅವಧಿಗೆ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ (ಪಿ.ಎಂ.ಜಿ.ಕೆ.ಎ.ವೈ) ಅಡಿಯಲ್ಲಿ ಎನ್.ಎಫ್.ಎಸ್.ಎ. ಫಲಾನುಭವಿಗಳಿಗೆ ಅಂದರೆ ಎ.ಎ.ವೈ ಮನೆಗಳು ಮತ್ತು ಪಿ.ಎಚ್.ಎಚ್. ಫಲಾನುಭವಿಗಳಿಗೆ ಉಚಿತವಾಗಿ ಆಹಾರ ಧಾನ್ಯಗಳನ್ನು ಒದಗಿಸಲು ನಿರ್ಧರಿಸಿತ್ತು. ಇದಕ್ಕೂ ಮೊದಲು, ಎನ್.ಎಫ್.ಎಸ್.ಎ. ಅಡಿಯಲ್ಲಿ, ಸಬ್ಸಿಡಿ ಆಹಾರ ಧಾನ್ಯಗಳನ್ನು ಪ್ರತಿ ಕೆಜಿ ಅಕ್ಕಿಗೆ 3 ರೂ, ಗೋಧಿಗೆ 2 ರೂ ಮತ್ತು ಬೇಳೆ ಕಾಳು ಧಾನ್ಯಗಳಿಗೆ ಪ್ರತಿ ಕೆಜಿಗೆ 1 ರೂ.ನಂತೆ ಫಲಾನುಭವಿಗಳಿಗೆ ವಿತರಿಸಲಾಗುತ್ತಿತ್ತು. ಪಿ.ಎಂ.ಜಿ.ಕೆ.ಎ.ವೈ ಅಡಿಯಲ್ಲಿ ಉಚಿತ ಆಹಾರ ಧಾನ್ಯಗಳ ವಿತರಣೆಯ ಅವಧಿಯನ್ನು ಜನವರಿ 1, 2024 ರಿಂದ ಅನ್ವಯವಾಗುವಂತೆ ಐದು ವರ್ಷಗಳವರೆಗೆ ವಿಸ್ತರಿಸಲಾಗಿದೆ.
ಪ್ರಸ್ತುತ, ಉದ್ದೇಶಿಸಲಾದ 81.35 ಕೋಟಿ ಜನರ ವ್ಯಾಪ್ತಿಗೆ ಬದಲಾಗಿ, ಸುಮಾರು 80 ಕೋಟಿ ಜನರು ಉಚಿತವಾಗಿ ಆಹಾರ ಧಾನ್ಯಗಳನ್ನು ಪಡೆಯುತ್ತಿದ್ದಾರೆ.
2. 2025-26ನೇ ಸಾಲಿಗೆ ಟಿ.ಪಿ.ಡಿ.ಎಸ್., ಒ.ಡಬ್ಲ್ಯು.ಎಸ್. ಮತ್ತು ಹೆಚ್ಚುವರಿ ಹಂಚಿಕೆ (ಪ್ರವಾಹ, ಹಬ್ಬ ಇತ್ಯಾದಿ) ಅಡಿಯಲ್ಲಿ ವಾರ್ಷಿಕ ಆಹಾರ ಧಾನ್ಯಗಳ ಹಂಚಿಕೆ
ಆಹಾರ ಮತ್ತು ಪಿ.ಡಿ. ಇಲಾಖೆಯು ಎನ್.ಎಫ್.ಎಸ್.ಎ. {ಅಂತ್ಯೋದಯ ಅನ್ನ ಯೋಜನೆ (ಎ.ಎ.ವೈ.), ಆದ್ಯತಾ ಮನೆ (ಪಿ.ಎಚ್.ಎಚ್.), ಟೈಡ್ ಓವರ್, ಪಿ.ಎಂ. ಪೋಷಣ್ ಯೋಜನೆ, ಗೋಧಿ ಆಧಾರಿತ ಪೌಷ್ಟಿಕಾಂಶ ಕಾರ್ಯಕ್ರಮ [ಐ.ಸಿ.ಡಿ.ಎಸ್.ಗುಚ್ಛದ ಒಂದು ಘಟಕ/ಅಂಶ]} ಮತ್ತು ಹದಿಹರೆಯದ ಬಾಲಕಿಯರ ಯೋಜನೆ, ಅನ್ನಪೂರ್ಣ ಯೋಜನೆ ಹಾಗು ಕಲ್ಯಾಣ ಸಂಸ್ಥೆಗಳು ಮತ್ತು ಹಾಸ್ಟೆಲ್ ಯೋಜನೆ (ಡಬ್ಯು.ಐ.ಎಚ್.) ನಂತಹ ಇತರ ಕಲ್ಯಾಣ ಯೋಜನೆಗಳ ಅಡಿಯಲ್ಲಿ ಆಹಾರ ಧಾನ್ಯಗಳ ಹಂಚಿಕೆಯನ್ನು ಮಾಡುತ್ತದೆ. 2025-26ನೇ ಸಾಲಿಗೆ ಯೋಜನೆವಾರು ಹಂಚಿಕೆ ಈ ಕೆಳಗಿನಂತಿದೆ:
2025-26ನೇ ಸಾಲಿಗೆ ಆಹಾರ ಧಾನ್ಯದ ವಾರ್ಷಿಕ ಹಂಚಿಕೆ:-
ಲಕ್ಷ ಟನ್ಗಳಲ್ಲಿ
|
|
ಯೋಜನೆಯ ಹೆಸರು
|
ಅಕ್ಕಿ
|
ಗೋಧಿ
|
ಪೋಷಕ ಧಾನ್ಯಗಳು
|
ಒಟ್ಟು
|
|
|
|
|
|
|
|
|
ಎ
|
ಟಿ.ಪಿ.ಡಿ.ಎಸ್. (ಎನ್.ಎಫ್.ಎಸ್.ಎ. ಮಂಜೂರಾತಿ.)
|
|
|
ಅಂತ್ಯೋದಯ ಅನ್ನ ಯೋಜನಾ (AAY)
|
71.66
|
27.75
|
0.01
|
99.42
|
|
|
ಆದ್ಯತೆಯ ಕುಟುಂಬಗಳು (PHH)
|
277.70
|
143.96
|
7.83
|
429.48
|
|
|
ಟಿ.ಪಿ.ಡಿ.ಎಸ್.(ಟೈಡ್ ಓವರ್)
|
21.18
|
4.91
|
0.00
|
26.09
|
|
|
ಒಟ್ಟು
|
370.53
|
176.62
|
7.83
|
554.99
|
|
|
|
|
|
|
|
|
ಬಿ
|
ಇತರ ಕಲ್ಯಾಣ ಯೋಜನೆಗಳು
|
|
|
ಪಿ.ಎಂ. ಪೋಷಣ್
|
18.14
|
3.87
|
0.30
|
22.31
|
|
|
ಡಬ್ಲ್ಯು.ಬಿ.ಎನ್.ಪಿ. (ಐ.ಸಿ.ಡಿ.ಎಸ್.)
|
11.86
|
10.97
|
0.22
|
23.05
|
|
|
ಕಲ್ಯಾಣ ಸಂಸ್ಥೆಗಳು ಮತ್ತು ಹಾಸ್ಟೆಲ್ ಗಳು
|
4.76
|
0.96
|
0.00
|
5.72
|
|
|
ಹದಿಕರೆಯದ ಹೆಣ್ಣು ಮಕ್ಕಳಿಗೆ ಯೋಜನೆ (ಎಸ್.ಎ.ಜಿ.)
|
0.27
|
0.28
|
0.02
|
0.58
|
|
|
ಅನ್ನಪೂರ್ಣ
|
0.00
|
0.00
|
0.00
|
0.00
|
|
|
ಒಟ್ಟು
|
35.03
|
16.08
|
0.54
|
51.65
|
|
|
|
|
|
|
|
|
ಸಿ
|
ಹೆಚ್ಚುವರಿ ಮಂಜೂರಾತಿ (ಹಬ್ಬಗಳು, ವಿಕೋಪಗಳು, ಹೆಚ್ಚುವರಿ ಟಿ.ಪಿ.ಡಿ.ಎಸ್. ಇತ್ಯಾದಿ.)
|
|
|
ಪ್ರಾಕೃತಿಕ ವಿಕೋಪ ಇತ್ಯಾದಿ
(ಎಂ.ಎಸ್.ಪಿ.ದರ )
|
0.00
|
0.01
|
0.00
|
0.01
|
|
|
ಹಬ್ಬ/ಹೆಚ್ಚುವರಿ ಬೇಡಿಕೆ ಇತ್ಯಾದಿ
(ಆರ್ಥಿಕ ವೆಚ್ಚ)
|
0.92
|
0.60
|
0.00
|
1.52
|
|
|
ಒಟ್ಟು
|
0.92
|
0.61
|
0.00
|
1.52
|
|
|
|
|
|
|
|
|
ಎ+ಬಿ+ಸಿ
|
ಒಟ್ಟು ಮೊತ್ತ
|
406.48
|
193.32
|
8.37
|
608.16
|
3. ಗುರಿ ಕೇಂದ್ರಿತ ಸಾರ್ವಜನಿಕ ವಿತರಣಾ ವ್ಯವಸ್ಥೆ (ಟಿ.ಪಿ.ಡಿ.ಎಸ್.-TPDS) ಸುಧಾರಣೆಗಳು
ಎಲ್ಲಾ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಎನ್.ಎಫ್.ಎಸ್.ಎ. ಅಡಿಯಲ್ಲಿ 100% ಪಡಿತರ ಚೀಟಿಗಳು/ಫಲಾನುಭವಿಗಳ ಡೇಟಾವನ್ನು ಡಿಜಿಟಲೀಕರಣಗೊಳಿಸಲಾಗಿದೆ. ಸುಮಾರು 79.8 ಕೋಟಿ ಫಲಾನುಭವಿಗಳನ್ನು ಒಳಗೊಂಡ ಸುಮಾರು 20.55 ಕೋಟಿ ಪಡಿತರ ಚೀಟಿಗಳ ವಿವರಗಳು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಪಾರದರ್ಶಕತೆ ಪೋರ್ಟಲ್ಗಳಲ್ಲಿ ಲಭ್ಯವಿವೆ.
99.9% ಕ್ಕಿಂತ ಹೆಚ್ಚು ಪಡಿತರ ಚೀಟಿಗಳ ಆಧಾರ್ ಜೋಡಣೆ ಆಗಿದೆ. (ಕನಿಷ್ಠ ಒಬ್ಬ ಸದಸ್ಯ).
ದೇಶದಲ್ಲಿ ಸುಮಾರು 99.8% (ಒಟ್ಟು 5.51 ಲಕ್ಷಗಳಲ್ಲಿ 5.50 ಲಕ್ಷ) ನ್ಯಾಯ ಬೆಲೆ ಅಂಗಡಿಗಳಲ್ಲಿ (ಎಫ್.ಪಿ.ಎಸ್.-FPS ಗಳು) ಎಲೆಕ್ಟ್ರಾನಿಕ್ ಪಾಯಿಂಟ್ ಆಫ್ ಸೇಲ್ (ePoS) ಸಾಧನಗಳು ಬಳಸಿಕೊಂಡು, ಸ್ವಯಂಚಾಲಿತಗೊಳಿಸಲಾಗಿದೆ. ಇವು ಫಲಾನುಭವಿಗಳಿಗೆ ಪಾರದರ್ಶಕ ರೀತಿಯಲ್ಲಿ ಮತ್ತು ಖಚಿತವಾದ ಸಬ್ಸಿಡಿ ಆಹಾರ ಧಾನ್ಯಗಳ ವಿತರಣೆಯನ್ನು ಮಾಡುತ್ತವೆ.
ಆಹಾರ ಧಾನ್ಯಗಳ ವಿತರಣೆಯ ಅಡಿಯಲ್ಲಿ, ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ 98% ಕ್ಕಿಂತ ಹೆಚ್ಚು ವಹಿವಾಟುಗಳನ್ನು ಬಯೋಮೆಟ್ರಿಕ್ ಮೂಲಕ/ಆಧಾರ್ ಮೂಲಕ ದೃಢೀಕರಿಸಿ ನಡೆಸಲಾಗುತ್ತಿದೆ.
4. ಕುಂದುಕೊರತೆ ನಿವಾರಣಾ ವೇದಿಕೆ
ಇಲಾಖೆಯು ಇಂಡಿಯಾ ಎಐ ಮಿಷನ್ ಅಡಿಯಲ್ಲಿ ಆಶಾ (ASHA) ಎಂಬ ಕೃತಕ ಬುದ್ಧಿಮತ್ತೆ (ಎ.ಐ.-AI) -ಚಾಲಿತ ನಾಗರಿಕ ತೊಡಗಿಸಿಕೊಳ್ಳುವಿಕೆ ಮತ್ತು ಕುಂದುಕೊರತೆ ನಿವಾರಣಾ ವೇದಿಕೆಯನ್ನು ಪ್ರಾರಂಭಿಸಿದೆ. ಭಾಷಿಣಿಯ ಬಹುಭಾಷಾ ಸಾಮರ್ಥ್ಯವಾದ WhatsApp ಮತ್ತು IVRS ಅನ್ನು ಬಳಸಿಕೊಂಡು, ಇದು ಪಡಿತರ ವಿತರಣೆಯ ನಂತರ ಫಲಾನುಭವಿಗಳ ಪ್ರತಿಕ್ರಿಯೆಯನ್ನು ಸೆರೆಹಿಡಿಯುತ್ತದೆ, ಭಾವನೆಗಳ ವಿಶ್ಲೇಷಣೆಯನ್ನು ನಡೆಸುತ್ತದೆ ಮತ್ತು ಕುಂದುಕೊರತೆಗಳನ್ನು ಸ್ವಯಂ-ತಿಳಿಗೊಳಿಸುತ್ತದೆ, ದಕ್ಷತೆಯನ್ನು ಹೆಚ್ಚಿಸುತ್ತದೆ. ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿ ಸ್ಪಂದಿಸುವ/ಜವಾಬ್ದಾರಿಯುತ ಮತ್ತು ನಾಗರಿಕ-ಕೇಂದ್ರಿತ ಆಡಳಿತವನ್ನು ಖಚಿತಪಡಿಸುತ್ತದೆ.
5. ಒಂದು ರಾಷ್ಟ್ರ ಒಂದು ಪಡಿತರ ಚೀಟಿ ಯೋಜನೆಯ ಪ್ರಗತಿ
ಆಗಸ್ಟ್ 2019 ರಲ್ಲಿ ಕೇವಲ 4 ರಾಜ್ಯಗಳಲ್ಲಿ ಅಂತರ-ರಾಜ್ಯ ಪೋರ್ಟಬಿಲಿಟಿಯೊಂದಿಗೆ ಪ್ರಾರಂಭಿಸಿ, ಇಲ್ಲಿಯವರೆಗೆ, ಒ.ಎನ್.ಒ.ಆರ್.ಸಿ. (ONORC) ಯೋಜನೆಯನ್ನು ಎಲ್ಲಾ 36 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ (ದೇಶಾದ್ಯಂತ) ಸಕ್ರಿಯಗೊಳಿಸಲಾಗಿದೆ, ಇದು ಸುಮಾರು 79.8 ಕೋಟಿ ಎನ್.ಎಫ್.ಎಸ್.ಎ. ಫಲಾನುಭವಿಗಳನ್ನು ಒಳಗೊಂಡಿದೆ, ಅಂದರೆ, ದೇಶದ ಬಹುತೇಕ 100% ಎನ್.ಎಫ್.ಎಸ್.ಎ. ಜನಸಂಖ್ಯೆ.
ಆಗಸ್ಟ್ 2019 ರಲ್ಲಿ ಒ.ಎನ್.ಒ.ಆರ್.ಸಿ. ಯೋಜನೆ ಪ್ರಾರಂಭವಾದಾಗಿನಿಂದ, ದೇಶದಲ್ಲಿ ಒ.ಎನ್.ಒ.ಆರ್.ಸಿ. ಯೋಜನೆಯಡಿಯಲ್ಲಿ 195.9 ಕೋಟಿಗೂ ಹೆಚ್ಚು ಪೋರ್ಟಬಿಲಿಟಿ ವಹಿವಾಟುಗಳನ್ನು ದಾಖಲಿಸಲಾಗಿದೆ, ಇದು ಅಂತರ-ರಾಜ್ಯ ಮತ್ತು ರಾಜ್ಯದೊಳಗಿನ ವಹಿವಾಟುಗಳನ್ನು ಒಳಗೊಂಡಿದೆ.
2025ರ ವರ್ಷದಲ್ಲಿ, ಎನ್.ಎಫ್.ಎಸ್.ಎ. ಮತ್ತು ಪಿ.ಎಂ.ಜಿ.ಕೆ.ವೈ. (PMGKAY) ನ ಅಂತರ-ರಾಜ್ಯ ಮತ್ತು ರಾಜ್ಯದೊಳಗೆ ಪೋರ್ಟಬಿಲಿಟಿ ವಹಿವಾಟುಗಳನ್ನು ಒಳಗೊಂಡಂತೆ ಸುಮಾರು 64 ಎಲ್.ಎಂ.ಟಿ. ಆಹಾರ ಧಾನ್ಯಗಳನ್ನು ವಿತರಿಸಲಾಗಿದೆ. ಪ್ರಸ್ತುತ, ಪಿ.ಎಂ.ಜಿ.ಕೆ.ವೈ. ಆಹಾರ ಧಾನ್ಯ ವಿತರಣೆಯಡಿಯಲ್ಲಿ ಪ್ರತಿ ತಿಂಗಳು 3.2 ಕೋಟಿಗೂ ಹೆಚ್ಚು ಪೋರ್ಟಬಿಲಿಟಿ ವಹಿವಾಟುಗಳು ದಾಖಲಾಗುತ್ತಿವೆ.
6. ಆಹಾರ ಧಾನ್ಯಗಳ ಸಾಗಣೆ
i. ಎನ್.ಎಫ್.ಎಸ್.ಎ./ವಿವಿಧ ಇತರ ಯೋಜನೆಗಳ ಅಗತ್ಯವನ್ನು ಪೂರೈಸಲು ಎಫ್.ಸಿ.ಐ. ಒಟ್ಟು 9527 ರೇಕ್ಗಳ ಆಹಾರ ಧಾನ್ಯಗಳನ್ನು ಸರಿಸುಮಾರು 283.30 ಎಲ್.ಎಂ.ಟಿ. ಗಳಷ್ಟು ಸಾಗಿಸಿದೆ.
ii. ನೆರೆಯ ಗ್ರಾಹಕ ಕೇಂದ್ರಗಳ ಅಗತ್ಯಗಳನ್ನು ಪೂರೈಸಲು ಸುಮಾರು 63.69 ಎಲ್.ಎಂ.ಟಿ. ಗಳಷ್ಟು ಆಹಾರ ಧಾನ್ಯಗಳನ್ನು ರಸ್ತೆ ಸಂಚಾರದ ಮೂಲಕ ಸಾಗಿಸಲಾಗಿದೆ.
iii. 206 ಕಂಟೇನರೀಕೃತ ರೇಕ್ಗಳನ್ನು ಸಾಗಿಸಲಾಗಿದ್ದು, ಸುಮಾರು 3.01 ಕೋಟಿ ರೂ. ಸರಕು ಸಾಗಣೆ ವೆಚ್ಚ ಉಳಿತಾಯವಾಗಿದೆ.
iv. ಆಂಧ್ರಪ್ರದೇಶದ ಗೊತ್ತುಪಡಿಸಿದ ಡಿಪೋಗಳಿಂದ ಕೇರಳ ಮತ್ತು ಅಂಡಮಾನ್ ಹಾಗು ನಿಕೋಬಾರ್ ದ್ವೀಪಗಳ ಗೊತ್ತುಪಡಿಸಿದ ಡಿಪೋಗಳಿಗೆ ಮತ್ತು ಕರ್ನಾಟಕದಿಂದ ಲಕ್ಷದ್ವೀಪಕ್ಕೆ ಕರಾವಳಿ ಹಡಗು ಮೂಲಕ ಸಾಗಣೆ ಮತ್ತು ರಸ್ತೆ ಸಂಚಾರವನ್ನು ಒಳಗೊಂಡಂತೆ ಅಕ್ಕಿಯ ಬಹು-ಮಾದರಿ ಸಾಗಣೆಯನ್ನು ೀಫ್.ಸಿ.ಐ. ಕೈಗೊಳ್ಳುತ್ತಿದೆ. ಸಾಂಪ್ರದಾಯಿಕ ಸಾರಿಗೆ ವಿಧಾನವನ್ನು ಪರಿಗಣಿಸಿ, 0.22 LMT ಆಹಾರ ಧಾನ್ಯಗಳ ದಾಸ್ತಾನುಗಳನ್ನು ಈ ವಿಧಾನದ ಮೂಲಕ ಸಾಗಿಸಲಾಗಿದೆ.
7. ರೈತರಿಗೆ ಬೆಂಬಲ
ಖರೀದಿ ಕಾರ್ಯಾಚರಣೆ: ಆಹಾರ ನಿರ್ವಹಣೆಯ ಮುಖ್ಯ ಉದ್ದೇಶಗಳು ರೈತರಿಂದ ಲಾಭದಾಯಕ ಬೆಲೆಯಲ್ಲಿ ಆಹಾರ ಧಾನ್ಯಗಳನ್ನು ಖರೀದಿಸುವುದು, ಗ್ರಾಹಕರಿಗೆ, ವಿಶೇಷವಾಗಿ ಸಮಾಜದ ದುರ್ಬಲ ವರ್ಗಗಳಿಗೆ ಕೈಗೆಟುಕುವ ಬೆಲೆಯಲ್ಲಿ ಆಹಾರ ಧಾನ್ಯಗಳ ವಿತರಣೆ ಮತ್ತು ಆಹಾರ ಭದ್ರತೆ ಹಾಗು ಬೆಲೆ ಸ್ಥಿರತೆಗಾಗಿ ಬಫರ್ ಸ್ಟಾಕ್ ಅನ್ನು ನಿರ್ವಹಿಸುವುದು. ಕೇಂದ್ರ ಸರ್ಕಾರವು ಎಫ್.ಸಿ.ಐ. ಮತ್ತು ರಾಜ್ಯ ಏಜೆನ್ಸಿಗಳ ಮೂಲಕ ಭತ್ತ, ದ್ವಿದಳ ಧಾನ್ಯಗಳು ಮತ್ತು ಗೋಧಿಗೆ ಬೆಲೆ ಬೆಂಬಲವನ್ನು ನೀಡುತ್ತದೆ. ನಿರ್ದಿಷ್ಟ ಕೇಂದ್ರಗಳಲ್ಲಿ ಮಾರಾಟಕ್ಕೆ ಬರುವ ನಿಗದಿತ ಮಾನದಂಡಗಳಿಗೆ ಅನುಗುಣವಾಗಿರುವ ಎಲ್ಲಾ ಆಹಾರ ಧಾನ್ಯಗಳನ್ನು (ಗೋಧಿ ಮತ್ತು ಭತ್ತ) ಸಾರ್ವಜನಿಕ ಖರೀದಿ ಏಜೆನ್ಸಿಗಳು ಬೋನಸ್ ಘೋಷಿಸಿದ್ದರೆ, ಅದನ್ನೊಳಗೊಂಡಂತೆ ಕನಿಷ್ಠ ಬೆಂಬಲ ಬೆಲೆಯಲ್ಲಿ (ಎಂ.ಎಸ್.ಪಿ-MSP) ಖರೀದಿಸುತ್ತವೆ. ರೈತರು ತಮ್ಮ ಉತ್ಪನ್ನಗಳನ್ನು ಎಫ್.ಸಿ.ಐ./ರಾಜ್ಯ ಏಜೆನ್ಸಿಗಳಿಗೆ ಎಂ.ಎಸ್.ಪಿ. ದರದಲ್ಲಿ ಅಥವಾ ಮುಕ್ತ ಮಾರುಕಟ್ಟೆಯಲ್ಲಿ ತಮಗೆ ಅನುಕೂಲಕರವಾಗಿ ಮಾರಾಟ ಮಾಡುವ ಆಯ್ಕೆಯನ್ನು ಹೊಂದಿರುತ್ತಾರೆ.
2025-26 ರ ರಬಿ ಮಾರುಕಟ್ಟೆ ಋತುವಿನಲ್ಲಿ, 300.35 ಎಲ್.ಎಂ.ಟಿ. ಗೋಧಿಯನ್ನು ಖರೀದಿಸಲಾಯಿತು, ಇದರ ಮೂಲಕ 2513143 ರೈತರು ಪ್ರಯೋಜನ ಪಡೆದರು.
2024-25ರ ಖಾರಿಫ್ ಮಾರುಕಟ್ಟೆ ಋತುವಿನಲ್ಲಿ, 832.17 ಲಕ್ಷ ಮೆಟ್ರಿಕ್ ಟನ್ ಭತ್ತವನ್ನು ಖರೀದಿಸಲಾಗಿದ್ದು, ಇದರ ಮೂಲಕ 11858507 ರೈತರು ಪ್ರಯೋಜನ ಪಡೆದಿದ್ದಾರೆ. ಚಾಲ್ತಿಯಲ್ಲಿರುವ ಕೆಎಂಎಸ್ 2025-26 ರಲ್ಲಿ, 243.48 ಲಕ್ಷ ಮೆಟ್ರಿಕ್ ಟನ್ ಭತ್ತವನ್ನು ಖರೀದಿಸಲಾಗಿದ್ದು, 17.11.2025 ರವರೆಗೆ 2122273 ರೈತರು ಪ್ರಯೋಜನ ಪಡೆದಿದ್ದಾರೆ.
8. ಬೇಳೆ-ಕಾಳು ಧಾನ್ಯಗಳು/ ಸಿರಿಧಾನ್ಯಗಳ ಖರೀದಿ
ಕಳೆದ ಮೂರು ವರ್ಷಗಳಲ್ಲಿ ಮತ್ತು ಪ್ರಸ್ತುತ ವರ್ಷದಲ್ಲಿ ಬೇಳೆ-ಕಾಳು ಧಾನ್ಯಗಳು/ ಸಿರಿಧಾನ್ಯಗಳ ಖರೀದಿ ಈ ಕೆಳಗಿನಂತಿದೆ:
ಅಂಕಿ ಅಂಶಗಳು ಮೆಟ್ರಿಕ್ ಟನ್ಗಳಲ್ಲಿ
|
ಕೆ.ಎಂ.ಎಸ್.
|
ಸಾಮಗ್ರಿ
|
ಒಟ್ಟು
|
|
|
2022-23
|
ಜೋಳ
|
85197
|
|
|
ಸಜ್ಜೆ/ಬಾಜ್ರಾ
|
182005
|
|
|
ಮುಸುಕಿನ ಜೋಳ/ಮೆಕ್ಕೆ ಜೋಳ
|
13122
|
|
|
ರಾಗಿ
|
456745
|
|
|
ಒಟ್ಟು
|
737069
|
|
|
2023-24
|
ಜೋಳ
|
323163
|
|
|
ಸಜ್ಜೆ/ಬಾಜ್ರಾ
|
696457
|
|
|
ಮುಸುಕಿನ ಜೋಳ/ಮೆಕ್ಕೆ ಜೋಳ
|
4532
|
|
|
ರಾಗಿ
|
230920
|
|
|
ಒಟ್ಟು
|
1255073
|
|
|
2024-25
|
ಜೋಳ
|
414855
|
|
|
ಸಜ್ಜೆ/ಬಾಜ್ರಾ
|
343352
|
|
|
ಮುಸುಕಿನ ಜೋಳ/ಮೆಕ್ಕೆ ಜೋಳ
|
19482
|
|
|
ರಾಗಿ
|
394613
|
|
|
ಒಟ್ಟು
|
1172302
|
|
|
2025-26*
|
ಜೋಳ
|
3878
|
|
|
ಸಜ್ಜೆ/ಬಾಜ್ರಾ
|
57225
|
|
|
ಮುಸುಕಿನ ಜೋಳ/ಮೆಕ್ಕೆ ಜೋಳ
|
2823
|
|
|
ರಾಗಿ
|
438
|
|
|
ಕಿರು ಸಿರಿ ಧಾನ್ಯಗಳು
|
-
|
|
|
ಒಟ್ಟು
|
64365
|
|
* ಕೆಎಂಎಸ್ 2025-26 (ಖಾರಿಫ್) ಅವಧಿಯಲ್ಲಿ ಖರೀದಿ ಇನ್ನೂ ನಡೆಯುತ್ತಿದೆ (ಅಂಕಿಅಂಶಗಳು 16.11.2025 ರಂತೆ)
9. ಆಹಾರ ಧಾನ್ಯ ಪ್ಯಾಕೇಜಿಂಗ್ ಸಾಮಗ್ರಿ:
ಸೆಣಬಿನ ಗಿರಣಿಗಳ ಉತ್ಪಾದನಾ ಸಾಮರ್ಥ್ಯ ಮತ್ತು ರಾಜ್ಯಗಳು/ಎಫ್ಸಿಐಗಳ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು, ಈ ಇಲಾಖೆಯು ಕೆಎಂಎಸ್ 2025-26 (ಕೇಂದ್ರ ಪೂಲ್) ರಲ್ಲಿ 20.95 ಲಕ್ಷ ಸೆಣಬಿನ ಬೇಲ್ಗಳನ್ನು ಮತ್ತು ಆರ್ಎಂಎಸ್ 2026-27 / ಕೆಎಂಎಸ್ 2025-26 (ರಬಿ ಬೆಳೆ) ರಲ್ಲಿ 5.20 ಲಕ್ಷ ಸೆಣಬಿನ ಬೇಲ್ಗಳನ್ನು (ಡಿಸೆಂಬರ್ ವರೆಗೆ) ರಾಜ್ಯ ಖರೀದಿ ಸಂಸ್ಥೆಗಳು ಮತ್ತು ಎಫ್ಸಿಐಗೆ ಹಂಚಿಕೆ ಮಾಡಿದೆ.
10. ಗೋಧಿ ದಾಸ್ತಾನು ಮಿತಿ ಹೇರಿಕೆ:
ಒಟ್ಟಾರೆ ಆಹಾರ ಭದ್ರತೆಯನ್ನು ನಿರ್ವಹಿಸಲು ಮತ್ತು ಸಂಗ್ರಹಣೆ/ದಾಸ್ತಾನು ಮತ್ತು ನ್ಯಾಯಯುತವಲ್ಲದ ಆಧಾರರಹಿತ ಊಹಾಪೋಹಗಳನ್ನು ತಡೆಗಟ್ಟಲು, ಭಾರತ ಸರ್ಕಾರವು ಮೇ 27, 2025 ರಂದು ಗೋಧಿ ದಾಸ್ತಾನು ಮಿತಿಗಳನ್ನು ವಿಧಿಸಿದೆ, ಇದನ್ನು ಆಗಸ್ಟ್ 26, 2025 ರಂದು ಪರಿಷ್ಕರಿಸಲಾಗಿದೆ, ಇದು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಏಪ್ರಿಲ್ 30, 2026 ರವರೆಗೆ ವ್ಯಾಪಾರಗಳು/ಸಗಟು ವ್ಯಾಪಾರಿಗಳು, ಚಿಲ್ಲರೆ ವ್ಯಾಪಾರಿಗಳು, ದೊಡ್ಡ ಸರಪಳಿ ಚಿಲ್ಲರೆ ವ್ಯಾಪಾರಿಗಳು ಮತ್ತು ಸಂಸ್ಕಾರಣೆಗಾರರಿಗೆ ಅನ್ವಯಿಸುತ್ತದೆ. ವಿವರ ಈ ಕೆಳಗಿನಂತಿದೆ.
| ಘಟಕಗಳು |
ಗೋಧಿ ದಾಸ್ತಾನು ಮಿತಿ
|
|
ಟ್ರೇಡರ್/ಸಗಟು ವ್ಯಾಪಾರಿಗಳು
|
2000 ಎಂ.ಟಿ.
|
|
ಚಿಲ್ಲರೆ ವ್ಯಾಪಾರಿಗಳು
|
ಪ್ರತೀ ಚಿಲ್ಲರೆ ವ್ಯಾಪಾರಿ ಅಂಗಡಿಗಳಿಗೆ 8 ಎಂ.ಟಿ.
|
|
ದೊಡ್ಡ ಮಟ್ಟದ ಸರಣಿ ವ್ಯಾಪಾರಿ ಮಳಿಗೆಗಳನ್ನು ಹೊಂದಿರುವ ಚಿಲ್ಲರೆ ವ್ಯಾಪಾರಿಗಳು
|
ಪ್ರತಿ ಚಿಲ್ಲರೆ ಮಾರಾಟ ಮಳಿಗೆಗೆ 8 ಎಂ.ಟಿ. ವರೆಗೆ ಗರಿಷ್ಠ ಪ್ರಮಾಣ (8 ನ್ನು ಒಟ್ಟು ಮಳಿಗೆಗಳ ಸಂಖ್ಯೆಯಿಂದ ಗುಣಿಸಿದಾಗ ಲಭಿಸುವಷ್ಟು ಎಂ.ಟಿ.). ಇದು ಅವರ ಎಲ್ಲಾ ಚಿಲ್ಲರೆ ಮಾರಾಟ ಮಳಿಗೆಗಳು ಮತ್ತು ಡಿಪೋಗಳಲ್ಲಿ ಒಟ್ಟಾಗಿ ಇರಿಸಬಹುದಾದ ಗರಿಷ್ಠ ದಾಸ್ತಾನು ಪ್ರಮಾಣ ಆಗಿರುತ್ತದೆ.
|
|
ಸಂಸ್ಕರಣೆಗಾರರು
|
ಮಾಸಿಕ ಸ್ಥಾಪಿತ ಸಾಮರ್ಥ್ಯದ (ಎಂ.ಐ.ಸಿ.-MIC) 60% ನ್ನು 2025-26 ನೇ ಹಣಕಾಸು ವರ್ಷದ ಉಳಿದ ತಿಂಗಳುಗಳಿಂದ ಗುಣಿಸಿದಾಗ ಸಿಗುವ ಮೊತ್ತದಷ್ಟು.
|
11 ಆಹಾರ ಸಬ್ಸಿಡಿ:
ಕೇಂದ್ರ ಯೋಜನೆಗಳ ಫಲಾನುಭವಿಗಳಿಗೆ ಭಾರತ ಸರಕಾರ ಮಂಜೂರು ಮಾಡಿರುವ ಆಹಾರ ಧಾನ್ಯಗಳ ಖರೀದಿ/ವಿತರಣೆಗಾಗಿ ವಿಕೇಂದ್ರೀಕೃತ ಸಂಗ್ರಹಣೆ (ಡಿ.ಸಿ.ಪಿ.) ವಿಧಾನವನ್ನು ಆಯ್ಕೆ ಮಾಡಿಕೊಂಡಿರುವ ರಾಜ್ಯಗಳಿಗೆ ಖರ್ಚುಗಳನ್ನು ಡಿ.ಎಫ್.ಪಿ.ಡಿ. (DFPD) ಮರುಪಾವತಿ ಮಾಡುತ್ತದೆ. ಇದಲ್ಲದೆ, ಕೇಂದ್ರ ಪೂಲ್ಗಾಗಿ ಅಂದರೆ ಕೇಂದ್ರ ಸಂಗ್ರಹಣೆಗಾಗಿ ರಾಜ್ಯಗಳು ಹಸ್ತಾಂತರಿಸುವ ಆಹಾರ ಧಾನ್ಯಗಳ ಪ್ರಮಾಣಕ್ಕಾಗಿ ಭಾರತೀಯ ಆಹಾರ ನಿಗಮ (FCI) ರಾಜ್ಯಗಳಿಗೆ ಹಣವನ್ನು ಬಿಡುಗಡೆ ಮಾಡುತ್ತದೆ. ಎಂ.ಒ.ಎಫ್.(MoF) ಮಾಡಿದ ಬಜೆಟ್ ಹಂಚಿಕೆಯ ಪ್ರಕಾರ ಡಿ.ಸಿ.ಪಿ. ರಾಜ್ಯಗಳು ಮತ್ತು ಎಫ್.ಸಿ.ಐ. ಗೆ ಮೇಲೆ ತಿಳಿಸಿದ ಆಹಾರ ಸಬ್ಸಿಡಿಯನ್ನು ಮಾಡಲಾಗುತ್ತದೆ. 2024-25ನೇ ಹಣಕಾಸು ವರ್ಷ ಮತ್ತು ಪ್ರಸ್ತುತ 2025-26ನೇ ಹಣಕಾಸು ವರ್ಷ (26.11.2025 ರಲ್ಲಿದ್ದಂತೆ) ಅವಧಿಯಲ್ಲಿ ಎಫ್.ಸಿ.ಐ. ಮತ್ತು ಡಿ.ಸಿ.ಪಿ. ರಾಜ್ಯಗಳಿಗೆ ಬಿಡುಗಡೆಯಾದ ಆಹಾರ ಸಬ್ಸಿಡಿಯ ವಿವರಗಳು ಈ ಕೆಳಗಿನಂತಿವೆ: (ಕೋಟಿ ರೂ.ಗಳಲ್ಲಿ)
|
ಯೋಜನೆ
|
2024-25
|
2025-26*
|
|
ಎಫ್.ಸಿ.ಐ.
|
129089.4
|
86517
|
|
ಡಿ.ಸಿ.ಪಿ.ರಾಜ್ಯಗಳು( ಡಿ.ಬಿ.ಟಿ.ಸಹಿತ)
|
70410.6
|
50391.67
|
|
ಒಟ್ಟು
|
199500.00
|
136908.67
|
* 2025-26ನೇ ಹಣಕಾಸು ವರ್ಷದಲ್ಲಿ ಹಣಕಾಸು ಸಚಿವಾಲಯವು ಎಫ್.ಸಿ.ಐ. ಮತ್ತು ಡಿ.ಸಿ.ಪಿ. ರಾಜ್ಯಗಳಿಗೆ ಆಹಾರ ಸಬ್ಸಿಡಿ ಬಿಡುಗಡೆ ಮಾಡಲು ರೂ. 2,03,000 ಕೋಟಿಗಳನ್ನು ನಿಗದಿಪಡಿಸಿದೆ (ಎಫ್.ಸಿ.ಐ. ಗೆ ರೂ. 1,29,080.90 ಕೋಟಿ ಮತ್ತು ಡಿ.ಸಿ.ಪಿ. ರಾಜ್ಯಗಳಿಗೆ ರೂ. 73,919.10 ಕೋಟಿ).ಇದಲ್ಲದೆ, ಡಿ.ಸಿ.ಪಿ. ರಾಜ್ಯಗಳಿಗೆ ಬಿಡುಗಡೆಯಾದ ಆಹಾರ ಸಬ್ಸಿಡಿಯ ವಿವರಗಳು ಅನುಬಂಧ-I ರಲ್ಲಿವೆ.
2025-26ನೇ ಹಣಕಾಸು ವರ್ಷದಲ್ಲಿನ ಸಾಧನೆಗಳು ಈ ಕೆಳಗಿನಂತಿವೆ:-
(ಎ) ಸ್ಕ್ಯಾನ್ –ಎಫ್.ಸಿ.ಎಸ್. ಮಾದರಿ ಅನುಷ್ಠಾನ (SCAN- FCS ಮಾಡ್ಯೂಲ್ ಅನುಷ್ಠಾನ): - ಅಂತಿಮ ಆಹಾರ ಸಬ್ಸಿಡಿ ಕ್ಲೇಮ್ ಅನ್ನು ಇತ್ಯರ್ಥಪಡಿಸುವ ದೃಷ್ಟಿಯಿಂದ ಅಂತಿಮ ಪ್ರಾಸಂಗಿಕ ದರಗಳನ್ನು ನಿಗದಿಪಡಿಸುವ ರಾಜ್ಯದ ಪ್ರಸ್ತಾವನೆಗಳ ಪ್ರಕ್ರಿಯೆಯನ್ನು ವೇಗಗೊಳಿಸಲು, ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯು ವರ್ಷದಲ್ಲಿ ಸ್ಕ್ಯಾನ್ –ಎಫ್.ಸಿ.ಎಸ್. ಮಾಡ್ಯೂಲ್ ಜಾರಿಗೆ ತಂದಿದೆ. ಇದು ಅಂತಿಮ ಇತ್ಯರ್ಥವನ್ನು ಖಚಿತಪಡಿಸಿಕೊಳ್ಳಲು ಸಮಯಕ್ಕೆ ಅನುಗುಣವಾಗಿ ಎಫ್.ಸಿ.ಎಸ್. ಸಲ್ಲಿಕೆ ಮತ್ತು ವಿತರಣೆಯನ್ನು ಸುಗಮಗೊಳಿಸುತ್ತದೆ. ಸ್ಕ್ಯಾನ್ ಡಿಜಿಟಲ್ ಇಂಡಿಯಾದ ಉತ್ಸಾಹ/ ಚೈತನ್ಯವನ್ನು ಸಾಕಾರಗೊಳಿಸುತ್ತದೆ, ದಕ್ಷತೆ, ಪಾರದರ್ಶಕತೆ ಮತ್ತು ಸಬಲೀಕರಣದ ಭರವಸೆಯನ್ನು ನೀಡುತ್ತದೆ.
(ಬಿ) ಗೋಧಿ ಸಂಗ್ರಹಣೆಯಲ್ಲಿ ಪಂಚಾಯತ್ ಗೆ ಅಧಿಕಾರ: - ಖರೀದಿ ಕಾರ್ಯಾಚರಣೆಗಳನ್ನು ವೇಗಗೊಳಿಸುವ ಮತ್ತು 2025-26 ರ ಆರ್ಎಂಎಸ್ ಅವಧಿಯಲ್ಲಿ ಗೋಧಿ ಸಂಗ್ರಹಣೆಯ ಅಂದಾಜು ಗುರಿಗಳನ್ನು ಸಮಯಕ್ಕೆ ಸರಿಯಾದ ರೀತಿಯಲ್ಲಿ ಸಾಧಿಸುವ ಉದ್ದೇಶದಿಂದ ಮತ್ತು ಕೆಲವು ರಾಜ್ಯ ಸರ್ಕಾರಗಳು ಮಾಡಿದ ವಿನಂತಿಗಳನ್ನು ಪರಿಗಣಿಸಿ, ಸಹಕಾರ ಸಂಘಗಳಿಗೆ ಪಾವತಿಸಲಾಗುತ್ತಿರುವಂತೆ ಕ್ವಿಂಟಾಲ್ಗೆ ರೂ. 27/- ರಂತೆ ಕಮಿಷನ್ ಅನ್ನು ರಾಜ್ಯ ಸರ್ಕಾರಗಳ ಇಲಾಖಾ ವ್ಯವಸ್ಥೆಯ ಮೂಲಕ, ಎಫ್ಪಿಒಗಳು/ಸ್ವಸಹಾಯ ಗುಂಪುಗಳು/ಪಂಚಾಯತ್ಗಳು ಸೇರಿದಂತೆ, ಅವುಗಳ ಮೂಲಕ ಗೋಧಿ ಸಂಗ್ರಹಣೆಯನ್ನು ಮಾಡಿದರೆ ಮತ್ತು 2025-26 ರ ಆರ್ಎಂಎಸ್ಗಾಗಿ ಸಹಕಾರ ಸಂಘಗಳಿಗೆ ಉದ್ದೇಶಿಸಲಾದ ಚಟುವಟಿಕೆಗಳನ್ನು ನಿರ್ವಹಿಸಿದರೆ, ಅವುಗಳಿಗೆ ಪಾವತಿಸಲಾಗುತ್ತದೆ ಎಂದು ಸ್ಪಷ್ಟಪಡಿಸಲಾಯಿತು.
12. ಮುಕ್ತ ಮಾರುಕಟ್ಟೆ ಮಾರಾಟ ಯೋಜನೆ (ದೇಶೀಯ) [ಒ.ಎಂ.ಎಸ್.ಎಸ್. (ಡಿ) -OMSS(D)]
ಭಾರತ್ ಅಟ್ಟಾ ಮತ್ತು ಭಾರತ್ ಅಕ್ಕಿಯನ್ನು ಕ್ರಮವಾಗಿ 06.11.2023 ಮತ್ತು 06.02.2024 ರಂದು ಮುಕ್ತ ಮಾರುಕಟ್ಟೆ ಮಾರಾಟ ಯೋಜನೆ (ದೇಶೀಯ) [ಒ.ಎಂ.ಎಸ್.ಎಸ್. (ಡಿ)] ಅಡಿಯಲ್ಲಿ ಪ್ರಾರಂಭಿಸಲಾಯಿತು. ಸಾಮಾನ್ಯ ಗ್ರಾಹಕರಿಗೆ ಸಬ್ಸಿಡಿ ದರದಲ್ಲಿ ಅಟ್ಟಾ (ಗೋಧಿ ಹಿಟ್ಟು) ಮತ್ತು ಅಕ್ಕಿ ಲಭ್ಯವಾಗುವಂತೆ ಮಾಡಲು ಇದನ್ನು ಮಾಡಲಾಯಿತು. ಭಾರತ್ ಅಟ್ಟಾ ಮತ್ತು ಭಾರತ್ ಅಕ್ಕಿಯನ್ನು ಮೂರು ಕೇಂದ್ರ ಸಹಕಾರಿ ಸಂಸ್ಥೆಗಳ ಮೂಲಕ ಮಾರಾಟ ಮಾಡಲಾಗುತ್ತಿದೆ. ಅವುಗಳೆಂದರೆ-ರಾಷ್ಟ್ರೀಯ ಕೃಷಿ ಸಹಕಾರಿ ಮಾರುಕಟ್ಟೆ ಒಕ್ಕೂಟ ಲಿಮಿಟೆಡ್ (ನಫೇಡ್-NAFED), ಕೇಂದ್ರೀಯ ಭಂಡಾರ್ ಮತ್ತು ರಾಷ್ಟ್ರೀಯ ಸಹಕಾರಿ ಗ್ರಾಹಕರ ಒಕ್ಕೂಟ ಆಫ್ ಇಂಡಿಯಾ ಲಿಮಿಟೆಡ್ (ಎನ್.ಸಿ.ಸಿ.ಎಫ್.-NCCF).
30.06.2025 ರವರೆಗಿನ ಎರಡನೇ ಹಂತದಲ್ಲಿ, ಭಾರತ್ ಅಟ್ಟಾ ಮತ್ತು ಭಾರತ್ ಅಕ್ಕಿಯನ್ನು ಕೆಜಿಗೆ ರೂ. 30 ಮತ್ತು ಕೆಜಿಗೆ ರೂ. 34 ರ ಎಂಆರ್ಪಿಯಲ್ಲಿ ಮಾರಾಟ ಮಾಡಲಾಯಿತು. ಭಾರತ್ ಬ್ರಾಂಡ್ನ ಎರಡನೇ ಹಂತದಲ್ಲಿ ಭಾರತ್ ಅಟ್ಟಾ 3.34 ಎಲ್.ಎಂ.ಟಿ. ಮತ್ತು 2.15 ಎಲ್.ಎಂ.ಟಿ. ಭಾರತ್ ಅಕ್ಕಿಯನ್ನು ಮಾರಾಟ ಮಾಡಲಾಯಿತು. ಭಾರತ್ ಅಟ್ಟಾ ಮತ್ತು ಭಾರತ್ ಅಕ್ಕಿಯ ಮಾರಾಟದ ಹಂತ-III 30.06.2026 ರವರೆಗೆ ಇರುತ್ತದೆ. ಈ ಹಂತದಲ್ಲಿ, ಭಾರತ್ ಅಟ್ಟಾಗೆ ಪ್ರತಿ ಕೆಜಿಗೆ ರೂ.31.50 ಎಂಆರ್ಪಿ ನಿಗದಿಪಡಿಸಲಾಗಿದೆ, ಮತ್ತು ಭಾರತ್ ಅಕ್ಕಿಗೆ 5 ಕೆಜಿ ಮತ್ತು 10 ಕೆಜಿ ಪ್ಯಾಕ್ಗಳಿಗೆ ಪ್ರತಿ ಕೆಜಿಗೆ ರೂ.34 ಎಂಆರ್ಪಿ ನಿಗದಿಪಡಿಸಲಾಗಿದೆ ಮತ್ತು 31.10.2025 ರವರೆಗೆ 30 ಕೆಜಿ ಪ್ಯಾಕ್ಗೆ ರೂ.32 ಎಂಆರ್ಪಿ ನಿಗದಿಪಡಿಸಲಾಗಿತ್ತು. 01.11.2025 ರಿಂದ ಜಾರಿಗೆ ಬರುವಂತೆ, ಭಾರತ್ ಅಕ್ಕಿಯ ಎಂಆರ್ಪಿಯನ್ನು 5 ಕೆಜಿ ಮತ್ತು 10 ಕೆಜಿ ಪ್ಯಾಕ್ಗಳಿಗೆ ಪ್ರತಿ ಕೆಜಿಗೆ ರೂ.35 ಮತ್ತು 30 ಕೆಜಿ ಪ್ಯಾಕ್ಗೆ ರೂ.33 ಎಂಆರ್ಪಿ ನಿಗದಿಪಡಿಸಲಾಗಿದೆ. ಭಾರತ್ ಅಟ್ಟಾ ಮಾರಾಟಕ್ಕೆ 5 ಎಲ್ಎಂಟಿ ಗೋಧಿ ಮತ್ತು ಭಾರತ್ ಅಕ್ಕಿ ಮಾರಾಟಕ್ಕೆ 5 ಎಲ್ಎಂಟಿ ಅಕ್ಕಿಯನ್ನು ಪ್ರಸ್ತುತ ಈ ಹಂತದಲ್ಲಿ ನಿಗದಿಪಡಿಸಲಾಗಿದೆ.
ಇದಲ್ಲದೆ, ಎಫ್.ಸಿ.ಐ.18.11.2025 ರವರೆಗೆ 'ಖಾಸಗಿಯವರು/ ಖಾಸಗಿ ಪಕ್ಷಗಳು, ಸಹಕಾರಿ/ಸಹಕಾರಿ ಒಕ್ಕೂಟಗಳಿಗೆ ಇ-ಹರಾಜಿನ ಮೂಲಕ ಮತ್ತು ಒ.ಎಂ.ಎಸ್.ಎಸ್. (ಡಿ) ಅಡಿಯಲ್ಲಿ ಸಣ್ಣ ಖಾಸಗಿ ವ್ಯಾಪಾರಿಗಳು/ಉದ್ಯಮಿಗಳು/ವ್ಯಕ್ತಿಗಳಿಗೆ ಎಫ್.ಸಿ.ಐ. ಡಿಪೋಗಳಿಂದ 23.44 ಎಲ್.ಎಂ.ಟಿ. ಅಕ್ಕಿಯನ್ನು ಮಾರಾಟ ಮಾಡಿದೆ.
18.11.2025 ರ ಹೊತ್ತಿಗೆ, ವರ್ಷದಲ್ಲಿ 31.71 ಎಲ್.ಎಂ.ಟಿ. ಅಕ್ಕಿಯನ್ನು ಇ-ಹರಾಜಿನಲ್ಲಿ ಭಾಗವಹಿಸದೆ ರಾಜ್ಯ ಸರ್ಕಾರಗಳು/ರಾಜ್ಯ ಸರ್ಕಾರದ ನಿಗಮಗಳಿಗೆ ಮತ್ತು ಸಮುದಾಯ ಅಡುಗೆಮನೆಗಳಿಗೆ ಮಾರಾಟ ಮಾಡಲಾಗಿದೆ.
2025 ರಲ್ಲಿ 18.11.2025 ರ ಹೊತ್ತಿಗೆ, ಎಥೆನಾಲ್ ಉತ್ಪಾದನೆಗಾಗಿ 33.06 ಎಲ್.ಎಂ.ಟಿ. ಅಕ್ಕಿಯನ್ನು ಎಥೆನಾಲ್ ಡಿಸ್ಟಿಲರಿಗಳಿಗೆ ಮಾರಾಟ ಮಾಡಲಾಗಿದೆ.
10% ತುಂಡು ಅಕ್ಕಿಯೊಂದಿಗೆ 50 ಎಲ್.ಎಂ.ಟಿ. ಕಸ್ಟಮ್ ಮಿಲ್ಡ್ ರೈಸ್ (CMR) ಅಂದರೆ ಭತ್ತದಿಂದ ಅಕ್ಕಿ ತಯಾರಿಕೆಗೆ ಸರಕಾರದಿಂದ ಮಾನ್ಯತೆ ಪಡೆದ ಗಿರಣಿದಾರ ತಯಾರಿಸಿದ ಅಕ್ಕಿ ಮತ್ತು ಅಕ್ಕಿ ಮಿಲ್ಲಿಂಗ್ ಟ್ರಾನ್ಸ್ಫರ್ಮೇಷನ್ ಯೋಜನೆಯಡಿಯಲ್ಲಿ ಉತ್ಪಾದಿಸಲಾದ 10 ಎಲ್.ಎಂ.ಟಿ. ಮುರಿದ ಅಕ್ಕಿಯನ್ನು ಒ.ಎಂ.ಎಸ್.ಎಸ್. (ಡಿ) 2025-26 ರ ಅಡಿಯಲ್ಲಿ ಇ-ಹರಾಜಿನ ಮೂಲಕ ಖಾಸಗಿ ಪಕ್ಷಗಳಿಗೆ ಮಾರಾಟ ಮಾಡಲು ಹಂಚಿಕೆ ಮಾಡಲಾಗಿದೆ.
2025 ರಲ್ಲಿ 18.11.2025 ರವರೆಗೆ 24.45 ಎಲ್.ಎಂ.ಟಿ. ಗೋಧಿಯನ್ನು ಖಾಸಗಿ ಪಕ್ಷಗಳಿಗೆ ಇ-ಹರಾಜಿನ ಮೂಲಕ ಮತ್ತು ಭಾರತ್ ಅಟ್ಟಾ ಎಂದು ಮಾರಾಟ ಮಾಡಲು ಕೇಂದ್ರ ಸಹಕಾರಿ ಸಂಸ್ಥೆಗಳಿಗೆ ಮಾರಾಟ ಮಾಡಲಾಗಿದೆ.
13. ಇ-ಎನ್ಡಬ್ಲ್ಯೂಆರ್ ಆಧಾರಿತ ಒತ್ತೆ ಹಣಕಾಸು (ಸಿಜಿಎಸ್-ಎನ್ಪಿಎಫ್) ಗಾಗಿ ಕ್ರೆಡಿಟ್ ಗ್ಯಾರಂಟಿ ಯೋಜನೆ
ಇ-ಎನ್ಡಬ್ಲ್ಯೂಆರ್ ಆಧಾರಿತ ಒತ್ತೆ ಹಣಕಾಸು (ಸಿಸಿಎಸ್-ಎನ್ಪಿಎಫ್) ಗಾಗಿ ಕ್ರೆಡಿಟ್ ಗ್ಯಾರಂಟಿ ಯೋಜನೆಗೆ 1000 ಕೋಟಿ ರೂ.ಗಳ ಕಾರ್ಪಸ್ನೊಂದಿಗೆ ಅನುಮೋದನೆ ನೀಡಲಾಗಿದೆ. ಈ ಯೋಜನೆಯು ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆ (ಡಿಎಫ್ಪಿಡಿ) 2024-25 ರಿಂದ 16 ನೇ ಹಣಕಾಸು ಆಯೋಗದ ವೃತ್ತ ಅಂತ್ಯದವರೆಗೆ ಅಂದರೆ 2030-31 ರವರೆಗೆ ಜಾರಿಗೆ ತರಲಿರುವ ಕೇಂದ್ರ ವಲಯ ಯೋಜನೆಯಾಗಿದೆ. ಮಾನ್ಯತೆ ಪಡೆದ ಗೋದಾಮುಗಳಲ್ಲಿ ಸರಕುಗಳನ್ನು ಠೇವಣಿ ಮಾಡಿದ ನಂತರ ಎಲೆಕ್ಟ್ರಾನಿಕ್ ನೆಗೋಶಬಲ್ ವೇರ್ಹೌಸ್ ರಶೀದಿಗಳ (ಇ-ಎನ್ಡಬ್ಲ್ಯೂಆರ್) ಮೇಲೆ ರೈತರು ಪಡೆಯುವ ಒತ್ತೆ ಹಣಕಾಸುಗಾಗಿರುವ ಕ್ರೆಡಿಟ್ ಗ್ಯಾರಂಟಿ ಯೋಜನೆ ಇದಾಗಿದೆ.
ಕ್ರೆಡಿಟ್ ಗ್ಯಾರಂಟಿ ಯೋಜನೆಯು ಇ-ಎನ್ಡಬ್ಲ್ಯೂಆರ್ಗಳ ಮೇಲೆ ಕೊಯ್ಲು ನಂತರದ ಸಾಲವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಮತ್ತು ಆ ಮೂಲಕ ರೈತರ ಆದಾಯವನ್ನು ಸುಧಾರಿಸುವಲ್ಲಿ ಪಾತ್ರವಹಿಸುತ್ತದೆ. ಕ್ರೆಡಿಟ್ ಗ್ಯಾರಂಟಿ ಯೋಜನೆಯು ಸಾಲದಾತರಲ್ಲಿ ವಿಶ್ವಾಸವನ್ನು ಹುಟ್ಟುಹಾಕುತ್ತದೆ ಮತ್ತು ಇ-ಎನ್ಡಬ್ಲ್ಯೂಆರ್ಗಳ ಮೂಲಕ ಕೊಯ್ಲು ನಂತರದ ಹಣಕಾಸು ಹೆಚ್ಚಿಸಲು ಗೋದಾಮಿನ ಮೇಲೆ ನಂಬಿಕೆಯನ್ನು ಸುಧಾರಿಸುತ್ತದೆ.
ಈ ಯೋಜನೆಯು ಮುಖ್ಯವಾಗಿ ಸಣ್ಣ ಮತ್ತು ಅಲ್ಪ ಪ್ರಮಾಣ ಭೂಮಿ ಹೊಂದಿದ ರೈತರು, ಮಹಿಳೆಯರು, ಎಸ್ಸಿ, ಎಸ್ಟಿ ಮತ್ತು ದಿವ್ಯಾಂಗ (ಪಿಡಬ್ಲ್ಯೂಡಿ) ರೈತರಿಗೆ ಕನಿಷ್ಠ ಗ್ಯಾರಂಟಿ ಶುಲ್ಕದೊಂದಿಗೆ ಅವರನ್ನು ಒಳಗೊಳ್ಳುವಿಕೆ ಬಗ್ಗೆ ಗಮನ ಕೇಂದ್ರೀಕರಿಸುತ್ತದೆ. ಇದಲ್ಲದೆ, ಸಣ್ಣ ವ್ಯಾಪಾರೋದ್ಯಮಗಳು (ಎಂಎಸ್ಎಂಇಗಳು) ಸಹ ಈ ಯೋಜನೆಯಡಿಯಲ್ಲಿ ಪ್ರಯೋಜನ ಪಡೆಯುತ್ತವೆ. ಕೃಷಿ ಮತ್ತು ತೋಟಗಾರಿಕಾ ಸರಕುಗಳ ಮೇಲೆ ನೀಡಲಾದ ಎನ್.ಡಬ್ಲ್ಯು.ಆರ್.(NWR) ಗಳ ಮೇಲೆ ವಿಸ್ತರಿಸಲಾದ ಅಡಮಾನ/ಒತ್ತೆ ಸಾಲಗಳನ್ನು ಈ ಯೋಜನೆ ಒಳಗೊಳ್ಳುತ್ತದೆ. ಸಾಲ ಮತ್ತು ಗೋದಾಮಿನಲ್ಲಿ ಸಂಭವಿಸಬಹುದಾದ ಹಾನಿ/ಅಪಾಯದಿಂದ ಬ್ಯಾಂಕ್ಗೆ ಉಂಟಾಗುವ ನಷ್ಟವನ್ನು ಕೂಡಾ ತುಂಬಿಕೊಳ್ಳುವ ಅಂಶವನ್ನು ಯೋಜನೆ ಒಳಗೊಂಡಿದೆ.
ಇತರ ಅಳೆಯಲಾಗದ ಸ್ಥೂಲ-ಆರ್ಥಿಕ ಫಲಿತಾಂಶಗಳಲ್ಲಿ ಗೋದಾಮಿನ ಮೇಲ್ದರ್ಜೆೀಕರಣ ಮತ್ತು ಪ್ರಮಾಣೀಕರಣ, ಕೊಯ್ಲಿನ ನಂತರದ ನಷ್ಟಗಳಲ್ಲಿ ಕಡಿತ, ಕೃಷಿ ಸರಕುಗಳ ವೈಜ್ಞಾನಿಕ ದಾಸ್ತಾನು/ಸಂಗ್ರಹಣೆ, ಗ್ರಾಮೀಣ ಪ್ರದೇಶಗಳಲ್ಲಿ ಹಣಕಾಸು ಹರಿವಿನ/ದ್ರವ್ಯತೆ ಸುಧಾರಣೆ, ಗೋದಾಮಿನ ವಲಯದ ಸಮಾನ ಬೆಳವಣಿಗೆ ಮತ್ತು ಸರಕು ವ್ಯಾಪಾರದಲ್ಲಿ ಸುಧಾರಣೆ ಸೇರಿವೆ.
ಈ ಯೋಜನೆಯನ್ನು 13.02.2025 ರಂದು ಗೆಜೆಟ್ ಅಧಿಸೂಚನೆಯಲ್ಲಿ ಪ್ರಕಟಿಸಲಾಗಿದೆ. ಎನ್.ಸಿ.ಜಿ.ಟಿ.ಸಿ.(NCGTC) ಯೊಂದಿಗೆ ಬ್ಯಾಂಕುಗಳ ಆನ್-ಬೋರ್ಡಿಂಗ್ ಪ್ರಾರಂಭವಾಗಿದೆ ಮತ್ತು 30.11.2025 ರ ಹೊತ್ತಿಗೆ, 40 ಬ್ಯಾಂಕುಗಳು ಆನ್-ಬೋರ್ಡ್ ಆಗಿವೆ.
30.11.2025 ರಂತೆ ಇ-ಎನ್ಡಬ್ಲ್ಯೂಆರ್ ಆಧಾರಿತ ಅಡಮಾನ/ಒತ್ತೆ ಹಣಕಾಸು (ಸಿಜಿಎಸ್-ಎನ್ಪಿಎಫ್) ಗಾಗಿ ಕ್ರೆಡಿಟ್ ಗ್ಯಾರಂಟಿ ಯೋಜನೆಯ ನವೀಕರಿಸಿದ ಸಕಾಲಿಕ ಸ್ಥಿತಿ ಈ ಕೆಳಗಿನಂತಿದೆ:-
• ಲಭ್ಯವಿರುವ ಬ್ಯಾಂಕುಗಳ ಸಂಖ್ಯೆ : 40
• ನೀಡಲಾದ ಖಾತರಿಗಳ ಸಂಖ್ಯೆ : 95
• ನೀಡಲಾದ ಖಾತರಿಗಳ ಮೊತ್ತ : ರೂ. 22.88 ಕೋಟಿಗಳು
14. ಪಿಡಿಎಸ್ ಪೂರೈಕೆ ಸರಪಳಿಯಲ್ಲಿ ಅನ್ನ ಚಕ್ರ (ಮಾರ್ಗ ಆಪ್ಟಿಮೈಸೇಶನ್/ಅತ್ಯುತ್ತಮಗೊಳಿಸುವಿಕೆ) ಅನುಷ್ಠಾನ
ಭಾರತದಲ್ಲಿ ಪಿಡಿಎಸ್ ಪೂರೈಕೆ ಸರಪಳಿಯ ದಕ್ಷತೆ ಮತ್ತು ವೆಚ್ಚ-ಪರಿಣಾಮಕಾರಿತ್ವವನ್ನು ಹೆಚ್ಚಿಸಲು ಮಾರ್ಗ ಆಪ್ಟಿಮೈಸೇಶನ್ ಒಂದು ಕಾರ್ಯತಂತ್ರದ ವಿಧಾನವಾಗಿದೆ. ಸಾರ್ವಜನಿಕ ವಿತರಣಾ ವ್ಯವಸ್ಥೆ (ಪಿಡಿಎಸ್) ಸಂದರ್ಭದಲ್ಲಿ, ಇದು ಐಐಟಿ-ದಿಲ್ಲಿ ಮತ್ತು ವಿಶ್ವಸಂಸ್ಥೆಯ ವಿಶ್ವ ಆಹಾರ ಕಾರ್ಯಕ್ರಮವು ಅಭಿವೃದ್ಧಿಪಡಿಸಿದ ಆಪ್ಟಿಮೈಸೇಶನ್ ಅಲ್ಗಾರಿದಮ್ಗಳನ್ನು ಬಳಸಿಕೊಂಡು ಅತ್ಯುತ್ತಮ ಗೋದಾಮುಗಳಿಂದ-ಗೋದಾಮುಗಳಿಗೆ ಮತ್ತು ಎಫ್ಪಿಎಸ್ (ನ್ಯಾಯ ಬೆಲೆ ಅಂಗಡಿ) ಮ್ಯಾಪಿಂಗ್ಗಳನ್ನು ವ್ಯಾಖ್ಯಾನಿಸುತ್ತದೆ, ಇದು ಸಾರಿಗೆ ವೆಚ್ಚವನ್ನು ಕಡಿಮೆ ಮಾಡುತ್ತದೆ ಮತ್ತು ಸುಧಾರಿತ ಕಾರ್ಯಾಚರಣೆಯ ದಕ್ಷತೆಯನ್ನು ಖಚಿತಪಡಿಸುತ್ತದೆ, ಇದರಿಂದಾಗಿ ಫಲಾನುಭವಿಗಳಿಗೆ ಆಹಾರ ಧಾನ್ಯಗಳ ವೆಚ್ಚ-ಪರಿಣಾಮಕಾರಿ ಮತ್ತು ಸಕಾಲಿಕ ವಿತರಣೆಯನ್ನು ಸಕ್ರಿಯಗೊಳಿಸುತ್ತದೆ.
ಆಹಾರ ಧಾನ್ಯಗಳ ಸಾಗಣೆಗೆ ಅತ್ಯಂತ ಪರಿಣಾಮಕಾರಿ ಮ್ಯಾಪಿಂಗ್ಗಳನ್ನು ಆಯ್ಕೆ ಮಾಡುವುದು, ಇದರಿಂದಾಗಿ ಸಮಯವನ್ನು ಉಳಿಸುವುದು ಮತ್ತು ಕಾರ್ಯಾಚರಣೆ ಸಂಶೋಧನೆಯನ್ನು ಬಳಸಿಕೊಂಡು ವೆಚ್ಚವನ್ನು ಕಡಿಮೆ ಮಾಡುವುದು ಅತ್ಯುತ್ತಮೀಕರಣದ ಕ್ರಮವಾಗಿತ್ತು. ಈ ವಿಧಾನವು ಹೆಚ್ಚು ಪರಿಣಾಮಕಾರಿ ಮತ್ತು ವೆಚ್ಚ-ಪರಿಣಾಮಕಾರಿ ಆಹಾರ ಪೂರೈಕೆ ಸರಪಳಿಯನ್ನು ನಿರ್ಮಿಸುವತ್ತ ಒಂದು ಪರಿವರ್ತಕ ಹೆಜ್ಜೆಯನ್ನು ದಾಖಲಿಸುತ್ತದೆ.
ಆಪ್ಟಿಮೈಸೇಶನ್ ಕ್ರಮದ ಒಂದು ವರ್ಷ ಪೂರ್ಣಗೊಂಡ ನಂತರ, ನಿಗದಿತ ಗುರಿಯಾದ 31 ರಾಜ್ಯಗಳಲ್ಲಿ ಮಾರ್ಗ ಆಪ್ಟಿಮೈಸೇಶನ್ ಮೌಲ್ಯಮಾಪನಗಳು ಪೂರ್ಣಗೊಂಡಿವೆ. ಫಲಿತಾಂಶಗಳು ಅದ್ಭುತ ಭರವಸೆಯನ್ನು ತೋರಿಸುತ್ತವೆ, ಸಾರಿಗೆ ವೆಚ್ಚವು ವರ್ಷಕ್ಕೆ ಸುಮಾರು 250 ಕೋಟಿ ರೂ.ಗಳಷ್ಟು ಕಡಿಮೆಯಾಗುವ ನಿರೀಕ್ಷೆಯಿದೆ, ಇದರಲ್ಲಿ 238 ಕೋಟಿ ರೂ.ಗಳ ಉಳಿತಾಯವಾಗಿದೆ ಎಂದು ರಾಜ್ಯಗಳು ವರದಿ ಮಾಡಿವೆ.
ಹೆಚ್ಚುವರಿ ಇರುವ ರಾಜ್ಯಗಳಿಂದ ಕೊರತೆಯಿರುವ ರಾಜ್ಯಗಳಿಗೆ ಆಹಾರ ಧಾನ್ಯಗಳ ಸಾಗಣೆಯ ಅಂತರ-ರಾಜ್ಯ ಮಾರ್ಗದ ಅತ್ಯುತ್ತಮೀಕರಣವನ್ನು ರೈಲ್ವೆಯ ಸರಕು ನಿರ್ವಹಣಾ ಮಾಹಿತಿ ವ್ಯವಸ್ಥೆ (ಎಫ್.ಒ.ಐ.ಎಸ್.-FOIS) ಯೊಂದಿಗೆ ಸಂಯೋಜಿಸುವ ಮೂಲಕ ಪೂರ್ಣಗೊಳಿಸಲಾಗಿದೆ. ಸ್ಥಳೀಯ ಗತಿ ಶಕ್ತಿ ಮಾಸ್ಟರ್ ಪ್ಲಾನ್ ಪ್ಲಾಟ್ಫಾರ್ಮ್ ಮೂಲಕ ಅತ್ಯುತ್ತಮೀಕರಣಕ್ಕಾಗಿ ಮಾರ್ಗದೂರವನ್ನು ಒದಗಿಸಲಾಗಿದೆ ಎಂಬುದನ್ನು ಗಮನಾರ್ಹ ಸಂಗತಿ.
ಸೂಕ್ತ ಸಂಚಾರ ಮಾರ್ಗಗಳನ್ನು ಆಯ್ಕೆ ಮಾಡುವ ಮೂಲಕ, ರಾಜ್ಯಗಳು ಸರಾಸರಿ ದೂರವನ್ನು ಶೇಕಡಾ 50 ರಷ್ಟು ಕಡಿಮೆ ಮಾಡಿ ಸಿ.ಒ.2 ಹೊರಸೂಸುವಿಕೆಯನ್ನು 35% ರಷ್ಟು ಕಡಿಮೆ ಮಾಡಿವೆ.
ಈ ಉಪಕ್ರಮವು ಆರ್ಥಿಕ ಗೆಲುವು ಮಾತ್ರವಲ್ಲದೆ ಪರಿಸರ ಸ್ನೇಹಿಯೂ ಆಗಿದೆ. ಜಾಗತಿಕ ಆಹಾರ ಮೈಲುಗಳು –ಉತ್ಪಾದನೆಯಿಂದ ಬಳಕೆಗೆ ಆಹಾರ ಪ್ರಯಾಣಿಸುವ ದೂರವನ್ನು ಪ್ರತಿನಿಧಿಸುತ್ತವೆ – ಇದು ಒಟ್ಟು ಆಹಾರ ವ್ಯವಸ್ಥೆಯ ಹೊರಸೂಸುವಿಕೆಯ ಸುಮಾರು ಐದನೇ ಒಂದು ಭಾಗದಷ್ಟಿದೆ. ಭಾರತದ ಆಹಾರ ವಿತರಣಾ ಮಾರ್ಗಗಳನ್ನು ಅತ್ಯುತ್ತಮವಾಗಿಸುವುದರಿಂದ CO2 ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಗಮನಾರ್ಹವಾಗಿ ಕೊಡುಗೆ ನೀಡಬಹುದು, ಇದು ಪ್ಯಾರಿಸ್ ಒಪ್ಪಂದ ಮತ್ತು ಅದರ ಪಕ್ಷಗಳ ಸಮ್ಮೇಳನ (ಸಿ.ಒ.ಪಿ-COP) ಗುರಿಗಳ ಅಡಿಯಲ್ಲಿ ದೇಶದ ಹವಾಮಾನ ಬದಲಾವಣೆ ಬದ್ಧತೆಗಳೊಂದಿಗೆ ಹೊಂದಿಕೆಯಾಗುತ್ತದೆ. ಇಂಧನ ಬಳಕೆಯಲ್ಲಿನ ಕಡಿತವು ಕಾರ್ಯತಂತ್ರದ ವಿದೇಶಿ ವಿನಿಮಯ ಮೀಸಲುಗಳನ್ನು ಸಂರಕ್ಷಿಸಲು ಸಹಾಯ ಮಾಡುತ್ತದೆ. ಈ ಹಂತವು ಹವಾಮಾನ-ಸ್ಮಾರ್ಟ್ ಪೂರೈಕೆ ಸರಪಳಿಗೆ ಭಾರತದ ಬದ್ಧತೆಯನ್ನು ಬಲಪಡಿಸುವುದಲ್ಲದೆ, ಆರ್ಥಿಕ ಪ್ರಯೋಜನಗಳನ್ನು ಒದಗಿಸುತ್ತದೆ.
ಪಿಡಿಎಸ್ ವಿತರಣಾ ಸರಬರಾಜು ಸರಪಳಿಯ ಅತ್ಯುತ್ತಮೀಕರಣದ ಕಲಿಕೆಯ ಆಧಾರದ ಮೇಲೆ, ಐಐಟಿ ದಿಲ್ಲಿ ಮತ್ತು ವಿಶ್ವ ಆಹಾರ ಕಾರ್ಯಕ್ರಮದ ತಂಡವು 10 ಭತ್ತ ಖರೀದಿ ರಾಜ್ಯಗಳಿಗೆ ಚಾಲ್ತಿಯಲ್ಲಿರುವ ಖಾರಿಫ್ ಮಾರುಕಟ್ಟೆ ಋತು 2025-26 ಗಾಗಿ ಅತ್ಯುತ್ತಮೀಕರಣ ಯೋಜನೆಗಳನ್ನು ಅಭಿವೃದ್ಧಿಪಡಿಸಿದೆ. ಭತ್ತ ಮತ್ತು ಗೋಧಿ ಖರೀದಿ ಮಾಡುವ ಹೆಚ್ಚಿನ ರಾಜ್ಯಗಳಲ್ಲಿ ಖರೀದಿ ಸರಬರಾಜು ಸರಪಳಿಗೆ ದಕ್ಷತೆಯನ್ನು ತರುವಲ್ಲಿ ತಂಡವು ಕೆಲಸ ಮಾಡುತ್ತದೆ.
ಪಿಡಿಎಸ್ ಸರಬರಾಜು ಸರಪಳಿಯಲ್ಲಿ ಕಾರ್ಯಾಚರಣೆಯ ದಕ್ಷತೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ , ಹೆಚ್ಚುವರಿ ಲಾಜಿಸ್ಟಿಕ್ಸ್ ವೆಚ್ಚ ಮತ್ತು ಸೋರಿಕೆ ಮೇಲೆ ಪರಿಣಾಮ ಬೀರುವ ಮಾನವ ಹಸ್ತಕ್ಷೇಪಗಳನ್ನು ಮಿತಿಗೊಳಿಸುವ ಗುರಿಯನ್ನು ಈ ಕ್ರಮ ಹೊಂದಿದೆ. ದೇಶಾದ್ಯಂತ ಧಾನ್ಯ ಸರಬರಾಜು ಸರಪಳಿಯನ್ನು ಅತ್ಯುತ್ತಮವಾಗಿಸಲು ರಾಜ್ಯ ಸರ್ಕಾರಗಳಿಗೆ ಅನ್ನ ಚಕ್ರ ಆಪ್ಟಿಮೈಸೇಶನ್ ಪರಿಕರಗಳನ್ನು ಮತ್ತು ಎಫ್ಸಿಐಗೆ ರೇಕ್ ಆಪ್ಟಿಮೈಸೇಶನ್ ಪರಿಕರವನ್ನು ಒದಗಿಸಲಾಗಿದೆ. ಸರಬರಾಜು ಸರಪಳಿ ನಿರ್ಧಾರಗಳ ಯಾಂತ್ರೀಕರಣವು ಗೌರವಾನ್ವಿತ ಪ್ರಧಾನಿಯವರ ಗತಿ ಶಕ್ತಿ ಉಪಕ್ರಮಕ್ಕೆ ಅನುಗುಣವಾಗಿ ಒಂದು ದೈತ್ಯ ಹೆಜ್ಜೆಯಾಗಿದೆ.
15. ಉಕ್ಕಿನ ಸಿಲೋಗಳ ಕುರಿತು ಸಂಕ್ಷಿಪ್ತ ಮಾಹಿತಿ
ಆಹಾರ ಧಾನ್ಯಗಳ ಸಂಗ್ರಹಣಾ ಮೂಲಸೌಕರ್ಯವನ್ನು ಆಧುನೀಕರಿಸುವ ಮತ್ತು ನವೀಕರಿಸುವ ಉದ್ದೇಶದಿಂದ ಮತ್ತು ಭಾರತದಲ್ಲಿ ಸಂಗ್ರಹಣಾ ಸಾಮರ್ಥ್ಯವನ್ನು ಹೆಚ್ಚಿಸುವ ಉದ್ದೇಶದಿಂದ, ಪಿಪಿಪಿ ಮಾದರಿಯಲ್ಲಿ ಉಕ್ಕಿನ ದಾಸ್ತಾನುಗಾರಗಳನ್ನು (ಸಿಲೋಗಳನ್ನು) ರಚಿಸಲಾಗುತ್ತಿದೆ.
ಸರ್ಕ್ಯೂಟ್ ಮಾದರಿಯಡಿಯಲ್ಲಿ, 5.50 ಲಕ್ಷ ಮೆಟ್ರಿಕ್ ಟನ್ ಸಾಮರ್ಥ್ಯದ ದಾಸ್ತಾನುಗಾರಗಳು ಕಾರ್ಯನಿರ್ವಹಿಸುತ್ತಿವೆ. ರೈಲ್ವೆ ಬದಿಗಳಲ್ಲಿ (ಸೈಡಿಂಗ್) ಮತ್ತು ರಸ್ತೆ ಸಂಪರ್ಕ ಆಧಾರಿತ ಮಾದರಿಯಡಿಯಲ್ಲಿ, 20.25 ಲಕ್ಷ ಮೆಟ್ರಿಕ್ ಟನ್ ಸಾಮರ್ಥ್ಯದ ದಾಸ್ತಾನುಗಾರಗಳು ಕಾರ್ಯನಿರ್ವಹಿಸುತ್ತಿವೆ ಮತ್ತು 4.00 ಲಕ್ಷ ಮೆಟ್ರಿಕ್ ಟನ್ ನಿರ್ಮಾಣ ಹಂತದಲ್ಲಿವೆ.
ಈಗ, ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯು ಹಬ್ ಮತ್ತು ಸ್ಪೋಕ್ ಮಾದರಿ ದಾಸ್ತಾನುಗಾರಗಳ ಅಡಿಯಲ್ಲಿ ಸಾಮರ್ಥ್ಯವನ್ನು ರಚಿಸುತ್ತಿದೆ, ಅಲ್ಲಿ "ಹಬ್" ಸಿಲೋಗಳು ಮೀಸಲಾದ ರೈಲ್ವೆ ಸೈಡಿಂಗ್ ಮತ್ತು ಕಂಟೇನರ್ ಡಿಪೋ ಸೌಲಭ್ಯವನ್ನು ಹೊಂದಿವೆ. "ಸ್ಪೋಕ್" ಸಿಲೋಸ್ನಿಂದ ಹಬ್ ಸಿಲೋಸ್ಗೆ ಸಾಗಣೆಯನ್ನು ರಸ್ತೆಯ ಮೂಲಕ ಕೈಗೊಳ್ಳಲಾಗಿದ್ದರೆ, ಹಬ್ನಿಂದ ಹಬ್ಗೆ ಸಾಗಣೆಯನ್ನು ರೈಲು ಮೂಲಕ ಕೈಗೊಳ್ಳಲಾಗುತ್ತದೆ. ಈ ಮಾದರಿಯಡಿಯಲ್ಲಿ, ಹಂತ-I ರಲ್ಲಿ 34.875 ಲಕ್ಷ ಮೆಟ್ರಿಕ್ ಟನ್ ಸಾಮರ್ಥ್ಯದೊಂದಿಗೆ 80 ಸ್ಥಳಗಳಲ್ಲಿ ಸಿಲೋಗಳ ನಿರ್ಮಾಣಕ್ಕಾಗಿ ಟೆಂಡರ್ಗಳನ್ನು ನೀಡಲಾಗಿದೆ. ಇದರಲ್ಲಿ, 05 ಸ್ಥಳಗಳಲ್ಲಿ 3.75 ಲಕ್ಷ ಮೆಟ್ರಿಕ್ ಟನ್ ಸಾಮರ್ಥ್ಯದ ದಾಸ್ತಾನುಗಾರಗಳು ಪೂರ್ಣಗೊಂಡಿದ್ದು, 75 ಸ್ಥಳಗಳಲ್ಲಿ 31.125 ಲಕ್ಷ ಮೆಟ್ರಿಕ್ ಟನ್ ನಿರ್ಮಾಣ ಹಂತದಲ್ಲಿದೆ.
ಇದಲ್ಲದೆ, ಹಬ್ & ಸ್ಪೋಕ್ ಹಂತ-II ಅಡಿಯಲ್ಲಿ, 54 ಸ್ಥಳಗಳಲ್ಲಿ 25.125 ಲಕ್ಷ ಮೆಟ್ರಿಕ್ ಟನ್ ಸಾಮರ್ಥ್ಯದ ದಾಸ್ತಾನುಗಾರ ನಿರ್ಮಾಣಕ್ಕೆ ಟೆಂಡರ್ಗಳನ್ನು ನೀಡಲಾಗಿದೆ.
ಉಕ್ಕಿನ ದಾಸ್ತಾನುಗಾರಗಳು ಸಾಂಪ್ರದಾಯಿಕವಾಗಿ ಗೋಧಿ ಸಂಗ್ರಹಣೆಗೆ ಸೂಕ್ತವಾಗಿದೆ. ಪ್ರಾಯೋಗಿಕ ಆಧಾರದ ಮೇಲೆ, ಬಿಹಾರದ ಕೈಮೂರ್ ಮತ್ತು ಬಕ್ಸಾರ್ನಲ್ಲಿ ಅಕ್ಕಿ ಸಂಗ್ರಹಣೆಗಾಗಿ ಉಕ್ಕಿನ ದಾಸ್ತಾನುಗಾರಗಳನ್ನು ನಿರ್ಮಿಸಲಾಗಿದೆ (ತಲಾ 12,500 ಮೆಟ್ರಿಕ್ ಟನ್) ಮತ್ತು ಫಲಿತಾಂಶಗಳ ಆಧಾರದ ಮೇಲೆ, ಭವಿಷ್ಯದಲ್ಲಿ ಹೆಚ್ಚಿನ ಅಕ್ಕಿ ದಾಸ್ತಾನುಗಾರಗಳನ್ನು ರಚಿಸಲಾಗುವುದು.
16. ಡಿಪೋ ದರ್ಪಣ್ ಪೋರ್ಟಲ್
ಡಿಪೋ ದರ್ಪಣ್ ಪೋರ್ಟಲ್ ಎಂಬುದು ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆ (ಡಿ.ಎಫ್.ಪಿ.ಡಿ-DFPD) ಪ್ರಾರಂಭಿಸಿದ ಡಿಜಿಟಲ್ ವೇದಿಕೆಯಾಗಿದ್ದು, ಇದನ್ನು ಸಾರ್ವಜನಿಕ ವಿತರಣಾ ವ್ಯವಸ್ಥೆ (ಪಿ.ಡಿ.ಎಸ್.-PDS) ಅಡಿಯಲ್ಲಿ ಭಾರತೀಯ ಆಹಾರ ನಿಗಮ (ಎಫ್.ಸಿ.ಐ.-FCI) ಮತ್ತು ಕೇಂದ್ರ ಗೋದಾಮು ನಿಗಮ (ಸಿ.ಡಬ್ಲ್ಯು.ಸಿ-CWC) ದ ಆಹಾರ-ಧಾನ್ಯ ಸಂಗ್ರಹಣಾ ಡಿಪೋಗಳ ಮೇಲ್ವಿಚಾರಣೆ, ಪಾರದರ್ಶಕತೆ ಮತ್ತು ಕಾರ್ಯಾಚರಣೆಯ ದಕ್ಷತೆಯನ್ನು ಸುಧಾರಿಸುವುದಕ್ಕಾಗಿ ಪ್ರಾರಂಭಿಸಲಾಗಿದೆ.ಪೋರ್ಟಲ್ ಮೂಲಕ, ಡಿಪೋ ಮತ್ತು ಗೋದಾಮಿನ ವ್ಯವಸ್ಥಾಪಕರು ಪ್ರತಿ ಡಿಪೋದ ಮೂಲಸೌಕರ್ಯ, ಕಾರ್ಯಾಚರಣೆಗಳು ಮತ್ತು ಆರ್ಥಿಕ ಕಾರ್ಯಕ್ಷಮತೆಗೆ ಸಂಬಂಧಿಸಿದ ಜಿಯೋ-ಟ್ಯಾಗ್ ಮಾಡಲಾದ ಡೇಟಾವನ್ನು ಅಪ್ಲೋಡ್ ಮಾಡುತ್ತಾರೆ.
ಮೂಲಸೌಕರ್ಯ (ಸುರಕ್ಷತೆ, ಶೇಖರಣಾ ಪರಿಸ್ಥಿತಿಗಳು, ತಂತ್ರಜ್ಞಾನ ಅಳವಡಿಕೆ ಮತ್ತು ಅನುಸರಣೆ ಸೇರಿದಂತೆ) ಮತ್ತು ಕಾರ್ಯಾಚರಣೆಯ ನಿಯತಾಂಕಗಳು (ಸ್ಟಾಕ್ ವಹಿವಾಟು, ನಷ್ಟಗಳು, ಸ್ಥಳ ಬಳಕೆ ಮತ್ತು ಮಾನವಶಕ್ತಿ ವೆಚ್ಚಗಳಂತಹ) - ಎರಡು ವಿಶಾಲ ವರ್ಗಗಳಲ್ಲಿ ಡಿಪೋಗಳನ್ನು ಮೌಲ್ಯಮಾಪನ ಮಾಡುವ ಸಂಯೋಜಿತ ಸ್ಕೋರಿಂಗ್ ಕಾರ್ಯವಿಧಾನವನ್ನು ಪೋರ್ಟಲ್ ಬಳಸುತ್ತದೆ. ಈ ಮೌಲ್ಯಮಾಪನಗಳ ಆಧಾರದ ಮೇಲೆ, ಪ್ರತಿ ಡಿಪೋ ಸ್ಟಾರ್ ರೇಟಿಂಗ್ ಪಡೆಯುತ್ತದೆ, ಇದು ಅದರ ಕಾರ್ಯಕ್ಷಮತೆಯ ತ್ವರಿತ ಮತ್ತು ಸಮಗ್ರ ಮಾಪನವನ್ನು ಒದಗಿಸುತ್ತದೆ.
ಈ ಪೋರ್ಟಲ್ ಐ.ಒ.ಟಿ.(IoT) ಸಂವೇದಕಗಳು, ಸಿ.ಸಿ.ಟಿ.ವಿ. ವ್ಯವಸ್ಥೆಗಳು, ನೈಜ-ಸಮಯದ ಡ್ಯಾಶ್ಬೋರ್ಡ್ಗಳು ಮತ್ತು ಕೃತಕ ಬುದ್ಧಿಮತ್ತೆ-ಆಧಾರಿತ ಪರಿಕರಗಳೊಂದಿಗೆ ಸಂಯೋಜಿಸಲ್ಪಟ್ಟಿದೆ, ಇದು ತಾಪಮಾನ, ಆರ್ದ್ರತೆ, CO₂ ಮತ್ತು ಫಾಸ್ಫೈನ್ ಅನಿಲ ಮಟ್ಟಗಳು, ಅನಧಿಕೃತ ಪ್ರವೇಶ, ವಾಹನ ಚಲನೆಗಳು ಮತ್ತು ಚೀಲ ಎಣಿಕೆಗಳಂತಹ ನಿರ್ಣಾಯಕ ನಿಯತಾಂಕಗಳ ನಿರಂತರ ಮೇಲ್ವಿಚಾರಣೆಯನ್ನು ಸಕ್ರಿಯಗೊಳಿಸುತ್ತದೆ.
ವಿಶ್ವಾಸಾರ್ಹತೆಯನ್ನು ಖಚಿತಪಡಿಸಿಕೊಳ್ಳಲು, ಯಾದೃಚ್ಛಿಕ ಮೂರನೇ ವ್ಯಕ್ತಿಯ ಲೆಕ್ಕಪರಿಶೋಧನೆಗಳೊಂದಿಗೆ ಮೇಲ್ವಿಚಾರಣಾ ಅಧಿಕಾರಿಗಳಿಂದ 100% ಪರಿಶೀಲನೆಯ ಮೂಲಕ ಮೌಲ್ಯೀಕರಣ ಕಾರ್ಯವಿಧಾನಗಳನ್ನು ಸಂಯೋಜಿಸಲಾಗಿದೆ. ಹೆಚ್ಚುವರಿಯಾಗಿ, ಮೊಬೈಲ್ ಅಪ್ಲಿಕೇಶನ್ ಘಟಕವು ಹಿರಿಯ ಅಧಿಕಾರಿಗಳಿಗೆ ಡಿಪೋ ರೇಟಿಂಗ್ಗಳು, ಡ್ಯಾಶ್ಬೋರ್ಡ್ಗಳು ಮತ್ತು ಕಾರ್ಯಕ್ಷಮತೆಯ ಮೆಟ್ರಿಕ್ಗಳನ್ನು ಯಾವುದೇ ಸಮಯದಲ್ಲಿ ಮತ್ತು ಎಲ್ಲಿಯಾದರೂ ಅನುಕೂಲಕರವಾಗಿ ಪ್ರವೇಶಿಸಲು ಅನುಮತಿಸುತ್ತದೆ.
17. ಭಂಡಾರನ್ 360
ಸೆಂಟ್ರಲ್ ವೇರ್ಹೌಸಿಂಗ್ ಕಾರ್ಪೊರೇಷನ್ (ಸಿ.ಡಬ್ಲ್ಯು.ಸಿ.-CWC) ನಲ್ಲಿ ಪ್ರಾರಂಭಿಸಲಾದ ಹೊಸ ಇ.ಆರ್.ಪಿ. ಪ್ಲಾಟ್ಫಾರ್ಮ್ ಭಂಡಾರನ್ 360, ಮಾನವ ಸಂಪನ್ಮೂಲ, ಹಣಕಾಸು, ಮಾರ್ಕೆಟಿಂಗ್, ಗೋದಾಮಿನ ನಿರ್ವಹಣೆ ಮತ್ತು ಯೋಜನಾ ಮೇಲ್ವಿಚಾರಣೆಯಲ್ಲಿ 41 ಕ್ರಿಯಾತ್ಮಕ ಮಾಡ್ಯೂಲ್ಗಳನ್ನು ಸಂಯೋಜಿಸುತ್ತದೆ, ಕಸ್ಟಮ್ಸ್ ಮತ್ತು ಬಂದರು ಗೇಟ್ವೇಗಳು, ಎಫ್.ಸಿ.ಐ. ಮತ್ತು ನಫೇದ್ (NAFED) ಸೇರಿದಂತೆ 35 ಬಾಹ್ಯ ವ್ಯವಸ್ಥೆಗಳೊಂದಿಗೆ ಸಂಪರ್ಕ ಸಾಧಿಸುತ್ತದೆ. ಇದು ದೇಶಾದ್ಯಂತ ಗೋದಾಮಿನ ಕಾರ್ಯಾಚರಣೆಗಳನ್ನು ಪ್ರಮಾಣೀಕರಿಸುತ್ತದೆ, ಪಾರದರ್ಶಕ, ಸುವ್ಯವಸ್ಥಿತ ಮತ್ತು ದೋಷ-ಮುಕ್ತ ಪ್ರಕ್ರಿಯೆಗಳನ್ನು ಖಚಿತಪಡಿಸುತ್ತದೆ.
18. ಸಕ್ಕರೆ ವಲಯ
ಭಾರತೀಯ ಸಕ್ಕರೆ ಉದ್ಯಮವು ಒಂದು ಪ್ರಮುಖ ಕೃಷಿ ಆಧಾರಿತ ಉದ್ಯಮವಾಗಿದ್ದು, ಇದು ಸುಮಾರು 5 ಕೋಟಿ ಕಬ್ಬು ರೈತರು ಮತ್ತು ಅವರ ಕುಟುಂಬಗಳು ಮತ್ತು ಸಕ್ಕರೆ ಕಾರ್ಖಾನೆಗಳಲ್ಲಿ ನೇರವಾಗಿ ಕೆಲಸ ಮಾಡುವ ಸುಮಾರು 5 ಲಕ್ಷ ಕಾರ್ಮಿಕರ ಗ್ರಾಮೀಣ ಜೀವನೋಪಾಯದ ಮೇಲೆ ಪರಿಣಾಮ ಬೀರುತ್ತದೆ. ಸಾಗಣೆ, ಯಂತ್ರೋಪಕರಣಗಳ ವ್ಯಾಪಾರ ಸೇವೆ ಮತ್ತು ಕೃಷಿ ಒಳಹರಿವಿನ ಪೂರೈಕೆಗೆ ಸಂಬಂಧಿಸಿದ ವಿವಿಧ ಚಟುವಟಿಕೆಗಳಲ್ಲಿಯೂ ಉದ್ಯೋಗವನ್ನು ಉತ್ಪಾದಿಸುತ್ತದೆ. ಭಾರತವು ಸಕ್ಕರೆಗೆ ಸಂಬಂಧಿಸಿದ ವಿಶ್ವದ ಎರಡನೇ ಅತಿದೊಡ್ಡ ಉತ್ಪಾದಕ ಮತ್ತು ಸಕ್ಕರೆಯ ಅತಿದೊಡ್ಡ ಗ್ರಾಹಕ. ಇಂದು, ಭಾರತೀಯ ಸಕ್ಕರೆ ಉದ್ಯಮದ ವಾರ್ಷಿಕ ಉತ್ಪಾದನೆ ₹1 ಲಕ್ಷ ಕೋಟಿಗಿಂತ ಹೆಚ್ಚು
2024-25ರ ಸಕ್ಕರೆ ಋತುವಿನಲ್ಲಿ ದೇಶದಲ್ಲಿ 534 ಕಾರ್ಯನಿರ್ವಹಿಸುವ ಸಕ್ಕರೆ ಕಾರ್ಖಾನೆಗಳು ಇದ್ದವು. ಕಬ್ಬಿನ ಸರಾಸರಿ ವಾರ್ಷಿಕ ಉತ್ಪಾದನೆಯು ಈಗ ಸುಮಾರು 4500-5000 ಲಕ್ಷ ಮೆಟ್ರಿಕ್ ಟನ್ಗಳಿಗೆ (ಎಲ್.ಎಂ.ಟಿ.-LMT) ಹೆಚ್ಚಿದೆ, ಇದರಲ್ಲಿ ಸುಮಾರು 30-40 ಎಲ್.ಎಂ.ಟಿ. ಸಕ್ಕರೆಯನ್ನು ಎಥೆನಾಲ್ ಉತ್ಪಾದನೆಗೆ ತಿರುಗಿಸಿದ ನಂತರ ಇತರ ಬಳಕೆಯ ಸುಮಾರು 260-300 ಎಲ್.ಎಂ.ಟಿ. ಸಕ್ಕರೆಯನ್ನು ಉತ್ಪಾದಿಸಲು ಬಳಸಲಾಗುತ್ತದೆ.
ಸರ್ಕಾರ ತೆಗೆದುಕೊಂಡ ರೈತ ಪರ ಕ್ರಮಗಳ ಪರಿಣಾಮವಾಗಿ, ಹಿಂದಿನ ಸಕ್ಕರೆ ಋತುಗಳ ಸುಮಾರು 99.9% ಕಬ್ಬಿನ ಬಾಕಿಯನ್ನು ಪಾವತಿಸಲಾಗಿದೆ. ಹಿಂದಿನ ಸಕ್ಕರೆ ಋತುವಿನಲ್ಲಿ 2024-25 (ಅಕ್ಟೋಬರ್-ಸೆಪ್ಟೆಂಬರ್) ರೂ. 102687 ಕೋಟಿಗಳಷ್ಟು ಕಬ್ಬಿನ ಬಾಕಿಗೆ ಪ್ರತಿಯಾಗಿ, ಸುಮಾರು ರೂ. 100501 ಕೋಟಿಗಳನ್ನು ಪಾವತಿಸಲಾಗಿದೆ ಮತ್ತು ರೂ. 2186 ಕೋಟಿ ಬಾಕಿಯನ್ನು ಮಾತ್ರ ಪಾವತಿಸಬೇಕಾಗಿದೆ. ಹೀಗಾಗಿ, ಸುಮಾರು 98% ಕಬ್ಬಿನ ಬಾಕಿಯನ್ನು ರೈತರಿಗೆ ಪಾವತಿಸಲಾಗಿದೆ.
19 ಎಥೆನಾಲ್ ಮಿಶ್ರಿತ ಪೆಟ್ರೋಲ್ ಕಾರ್ಯಕ್ರಮ
ಎಥೆನಾಲ್ ಒಂದು ಕೃಷಿ ಆಧಾರಿತ ಉತ್ಪನ್ನವಾಗಿದ್ದು, ಇದನ್ನು ಪೆಟ್ರೋಲ್ನೊಂದಿಗೆ ಇಂಧನವಾಗಿ ಮಿಶ್ರಣ ಮಾಡಲು ಮತ್ತು ಹ್ಯಾಂಡ್ ಸ್ಯಾನಿಟೈಸರ್ಗಳನ್ನು ತಯಾರಿಸಲು ಸೇರಿದಂತೆ ಇತರ ಅನೇಕ ಕೈಗಾರಿಕಾ ಬಳಕೆಗಳಿಗೆ ಬಳಸಲಾಗುತ್ತದೆ. ಇದನ್ನು ಸಕ್ಕರೆ ಉದ್ಯಮದ ಉಪ ಉತ್ಪನ್ನಗಳಿಂದ ಉತ್ಪಾದಿಸಲಾಗುತ್ತದೆ, ಅಂದರೆ ಮೊಲಾಸಸ್ ಮತ್ತು ಪಿಷ್ಟ ಆಹಾರ ಧಾನ್ಯಗಳಿಂದ. ಕಬ್ಬಿನ ಹೆಚ್ಚುವರಿ ಉತ್ಪಾದನೆಯ ವರ್ಷಗಳಲ್ಲಿ, ಬೆಲೆಗಳು ಕುಸಿದಾಗ, ಸಕ್ಕರೆ ಉದ್ಯಮವು ರೈತರಿಗೆ ಕಬ್ಬಿನ ಬೆಲೆಯನ್ನು ಸಕಾಲಿಕವಾಗಿ ಪಾವತಿಸಲು ಸಾಧ್ಯವಾಗುವುದಿಲ್ಲ ಮತ್ತು ಹೆಚ್ಚುವರಿ ಸಕ್ಕರೆಯ ಸಮಸ್ಯೆಯನ್ನು ಪರಿಹರಿಸಲು ಮತ್ತು ಸಕ್ಕರೆ ಕಾರ್ಖಾನೆಗಳ ನಗದು ದ್ರವ್ಯತೆಯನ್ನು ಸುಧಾರಿಸಲು ಶಾಶ್ವತ ಪರಿಹಾರವನ್ನು ಕಂಡುಹಿಡಿಯಲು ಸರ್ಕಾರವು ಸಕ್ಕರೆ ಕಾರ್ಖಾನೆಗಳು ತಮ್ಮ ಕಬ್ಬಿನ ಬಾಕಿಗಳನ್ನು ಸಮಯಕ್ಕೆ ಸರಿಯಾಗಿ ಪಾವತಿಸಲು ಸಹಾಯ ಮಾಡುವ ಮೂಲಕ ಹೆಚ್ಚುವರಿ ಕಬ್ಬನ್ನು ಎಥೆನಾಲ್ಗೆ ತಿರುಗಿಸಲು ಪ್ರೋತ್ಸಾಹಿಸುತ್ತಿದೆ. ಭಾರತ ಸರ್ಕಾರವು ದೇಶಾದ್ಯಂತ ಎಥೆನಾಲ್ ಮಿಶ್ರಿತ ಪೆಟ್ರೋಲ್ (ಇಬಿಪಿ) ಕಾರ್ಯಕ್ರಮವನ್ನು ಜಾರಿಗೆ ತರುತ್ತಿದೆ, ಇದರಲ್ಲಿ ತೈಲ ಮಾರುಕಟ್ಟೆ ಕಂಪನಿಗಳು (ಒಎಂಸಿಗಳು) ಮಿಶ್ರಿತ ಪೆಟ್ರೋಲ್ ಅನ್ನು ಮಾರಾಟ ಮಾಡುತ್ತವೆ. ಇಬಿಪಿ ಕಾರ್ಯಕ್ರಮದಡಿಯಲ್ಲಿ, ಎಥೆನಾಲ್ ಸರಬರಾಜು ವರ್ಷ (ಇಎಸ್ವೈ) 2025-26 ರೊಳಗೆ 20% ಎಥೆನಾಲ್ ಅನ್ನು ಪೆಟ್ರೋಲ್ನೊಂದಿಗೆ ಮಿಶ್ರಣ ಮಾಡುವ ಗುರಿಯನ್ನು ಸರ್ಕಾರ ನಿಗದಿಪಡಿಸಿದೆ.
2014 ರವರೆಗೆ, ಮೊಲಾಸಸ್ ಆಧಾರಿತ ಡಿಸ್ಟಿಲರಿಗಳ ಎಥೆನಾಲ್ ಭಟ್ಟಿ ಇಳಿಸುವ ಸಾಮರ್ಥ್ಯವು 200 ಕೋಟಿ ಲೀಟರ್ಗಳಿಗಿಂತ ಕಡಿಮೆಯಿತ್ತು. 2013-14 ರ ಎಥೆನಾಲ್ ಪೂರೈಕೆ ವರ್ಷ (ಇ.ಎಸ್.ವೈ.-ESY) ರಲ್ಲಿ ಒಎಂಸಿ.ಗಳಿಗೆ ಎಥೆನಾಲ್ ಪೂರೈಕೆ ಕೇವಲ 38 ಕೋಟಿ ಲೀಟರ್ ಆಗಿದ್ದು, ಮಿಶ್ರಣ ಮಟ್ಟವು ಕೇವಲ 1.53% ಮಾತ್ರ. ಆದಾಗ್ಯೂ, ಕಳೆದ 10 ವರ್ಷಗಳಲ್ಲಿ ಸರ್ಕಾರವು ಮಾಡಿದ ಸಕಾರಾತ್ಮಕ ನೀತಿ ಮಧ್ಯಸ್ಥಿಕೆಗಳಿಂದಾಗಿ, ದೇಶದಲ್ಲಿ ಎಥೆನಾಲ್ ಉತ್ಪಾದನೆಯ ಅಸ್ತಿತ್ವದಲ್ಲಿರುವ ಸಾಮರ್ಥ್ಯವು (31.10.2025 ರಂತೆ) 1953 ಕೋಟಿ ಲೀಟರ್ಗಳಿಗೆ (980 ಕೋಟಿ ಲೀಟರ್ ಧಾನ್ಯ ಆಧಾರಿತ ಮತ್ತು 973 ಕೋಟಿ ಲೀಟರ್ ಮೊಲಾಸಸ್/ಡ್ಯುಯಲ್-ಫೀಡ್ ಆಧಾರಿತ ಡಿಸ್ಟಿಲರಿಗಳು) ಹೆಚ್ಚಾಗಿದೆ. ಎಥೆನಾಲ್ ಸರಬರಾಜು ವರ್ಷ (ನವೆಂಬರ್-ಅಕ್ಟೋಬರ್) 2024-25 ರಲ್ಲಿ, 19.24% ಮಿಶ್ರಣವನ್ನು ಯಶಸ್ವಿಯಾಗಿ ಸಾಧಿಸಲಾಗಿದೆ. ಎಥೆನಾಲ್ ಮಿಶ್ರಿತ ಪೆಟ್ರೋಲ್ (ಇ.ಬಿ.ಪಿ.-EBP) ಕಾರ್ಯಕ್ರಮದ ಯಶಸ್ವಿ ಅನುಷ್ಠಾನವು ವಿವಿಧ ಅಂಶಗಳಲ್ಲಿ ಬಹು ಪ್ರಯೋಜನಗಳಿಗೆ ಕಾರಣವಾಗಿದೆ:
• ಎಥೆನಾಲ್ ಮಾರಾಟವು ಸಕ್ಕರೆ ಕಾರ್ಖಾನೆಗಳಿಗೆ ಉತ್ತಮ ನಗದು ಹರಿವನ್ನು ನೀಡಿದೆ, ಇದರ ಪರಿಣಾಮವಾಗಿ ಕಬ್ಬಿನ ರೈತರಿಗೆ ತ್ವರಿತ ಪಾವತಿ ಸಾಧ್ಯವಾಗಿದೆ. ಕಳೆದ 10 ವರ್ಷಗಳಲ್ಲಿ (2014-15 ರಿಂದ 2024-25), ಸಕ್ಕರೆ ಕಾರ್ಖಾನೆಗಳು ಎಥೆನಾಲ್ ಮಾರಾಟದಿಂದ ₹ 1.29 ಲಕ್ಷ ಕೋಟಿಗಳಿಗಿಂತ ಹೆಚ್ಚು ಆದಾಯವನ್ನು ಗಳಿಸಿವೆ, ಇದು ಸಕ್ಕರೆ ಕಾರ್ಖಾನೆಗಳ ಆರ್ಥಿಕ ಸ್ಥಿತಿಯನ್ನು ಸುಧಾರಿಸಿದೆ.
• ಈ ಪರಿಣಾಮಕಾರಿ ಸರ್ಕಾರಿ ನೀತಿಯ ಪರಿಣಾಮವಾಗಿ, ₹ 42,000/- ಕೋಟಿಗೂ ಹೆಚ್ಚು ಹೂಡಿಕೆ ಅವಕಾಶಗಳು ಹೊರಹೊಮ್ಮಿದವು, ಇದು ಗ್ರಾಮೀಣ ಪ್ರದೇಶಗಳಲ್ಲಿ ಹೊಸ ಡಿಸ್ಟಿಲರಿಗಳ ಸ್ಥಾಪನೆಗೆ ಕಾರಣವಾಯಿತು ಮತ್ತು ನೇರ ಹಾಗು ಪರೋಕ್ಷ ಉದ್ಯೋಗ ಸೃಷ್ಟಿಗೆ ಕೊಡುಗೆ ನೀಡಿತು.
20. ಸಕ್ಕರೆ ವಲಯದಲ್ಲಿ ಡಿಜಿಟಲೀಕರಣ
ವ್ಯವಹಾರವನ್ನು ಸುಲಭಗೊಳಿಸಲು, ಪಾರದರ್ಶಕತೆಯನ್ನು ತರಲು ಮತ್ತು ಸಕ್ಕರೆ ಕಾರ್ಖಾನೆಗಳು ಹಾಗು ಎಥೆನಾಲ್ ಉದ್ಯಮದ ಎಲ್ಲಾ ಸಂಬಂಧಿತ ಡೇಟಾವನ್ನು ಒಂದೇ ಸ್ಥಳದಲ್ಲಿ ಲಭ್ಯ ಮಾಡಲು, ರಾಷ್ಟ್ರೀಯ ಏಕ ಗವಾಕ್ಷ ವ್ಯವಸ್ಥೆ (NSWS) ಗಾಗಿ ಮೀಸಲಾದ ಮಾಡ್ಯೂಲ್ ಅನ್ನು ಅಭಿವೃದ್ಧಿಪಡಿಸಲಾಗಿದೆ. ಇನ್ವೆಸ್ಟ್ ಇಂಡಿಯಾ ಸಹಯೋಗದೊಂದಿಗೆ ಡಿ.ಎಫ್.ಪಿ.ಡಿ. (DFPD) ಯು ಎನ್.ಎಸ್.ಡಬ್ಲ್ಯು.ಎಸ್. (NSWS) ಪೋರ್ಟಲ್ನಲ್ಲಿ ಸಕ್ಕರೆ ಕಾರ್ಖಾನೆಗಳ ವಿವಿಧ ಅನುಸರಣೆಯನ್ನು ಸ್ವಯಂಚಾಲಿತಗೊಳಿಸಿತು. ಮಾತ್ರಲ್ಲದೆ, ಮಾಸಿಕ ಮಾಹಿತಿಯನ್ನು ಸಹ ಡಿಜಿಟಲೀಕರಣಗೊಳಿಸಲಾಗಿದೆ ಮತ್ತು ಸುಮಾರು 535 ಸಕ್ಕರೆ ಕಾರ್ಖಾನೆಗಳು ಮಾಸಿಕ ಆಧಾರದ ಮೇಲೆ ಅದನ್ನು ಸಲ್ಲಿಸುತ್ತಿವೆ. ಇದಲ್ಲದೆ, ನೈಜ-ಸಮಯದ ಡೇಟಾ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು, ಡೇಟಾ ನಿಖರತೆಯನ್ನು ಸುಧಾರಿಸಲು ಮತ್ತು ಅನಗತ್ಯ ಡೇಟಾ ಮತ್ತು ಹಸ್ತಚಾಲಿತ ಮಧ್ಯಪ್ರವೇಶವನ್ನು ತೆಗೆದುಹಾಕಲು, ರಾಷ್ಟ್ರೀಯ ಏಕ ಗವಾಕ್ಷ ವ್ಯವಸ್ಥೆ (NSWS) ಯಲ್ಲಿ ಅಪ್ಲಿಕೇಶನ್ ಪ್ರೋಗ್ರಾಮಿಂಗ್ ಇಂಟರ್ಫೇಸ್ಗಳ (ಎ.ಪಿ.ಐ. ಗಳು) ಮೂಲಕ ಮಾಸಿಕ ಡೇಟಾವನ್ನು ಡಿಜಿಟಲೀಕೃತ ರೂಪದಲ್ಲಿ ಹಂಚಿಕೊಳ್ಳುವ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದೆ. ಮೇಲಿನವುಗಳ ಜೊತೆಗೆ, ಮಾಸಿಕ ಸಕ್ಕರೆ ಮಾರಾಟ ಕೋಟಾ ಬಿಡುಗಡೆಗಾಗಿ ಎಂ.ಐ.ಎಸ್. ಡ್ಯಾಶ್ಬೋರ್ಡ್, ಅಂದರೆ 'ಚಿನಿ ದರ್ಪಣ್' ಪೋರ್ಟಲ್ ಅನ್ನು ಸಹ ಅಭಿವೃದ್ಧಿಪಡಿಸಲಾಗಿದೆ. ಇದು ಸಕ್ಕರೆ ಮಾರಾಟ ದತ್ತಾಂಶದಲ್ಲಿ ಪಾರದರ್ಶಕತೆ ಮತ್ತು ನಿಖರತೆಯನ್ನು ಖಚಿತಪಡಿಸುತ್ತದೆ.
ಅನುಬಂಧ I
ಡಿಸಿಪಿ ರಾಜ್ಯಗಳಿಗೆ ಬಿಡುಗಡೆಯಾದ ಆಹಾರ ಸಬ್ಸಿಡಿಯ ರಾಜ್ಯವಾರು ವಿಂಗಡಣೆ ಈ ಕೆಳಗಿನಂತಿದೆ:
(ಕೋಟಿ ರೂ.ಗಳಲ್ಲಿ)
|
ವರ್ಷ
|
2024-25
|
2025-26 (31.10.2025 ದಿನಾಂಕದವರೆಗೆ )
|
|
ಅಸ್ಸಾಂ#
|
|
9.36
|
|
ಬಿಹಾರ
|
9725.40
|
7393.98
|
|
ಪಂಜಾಬ್
|
2572.72
|
1816.19
|
|
ಮಧ್ಯಪ್ರದೇಶ
|
10189.04
|
7079.00
|
|
ಆಂಧ್ರಪ್ರದೇಶ
|
8398.98
|
4702.22
|
|
ತೆಲಂಗಾಣ
|
4178.27
|
2822.66
|
|
ಉತ್ತರ ಪ್ರದೇಶ
|
9.09
|
119.92
|
|
ಪಶ್ಚಿಮ ಬಂಗಾಳ
|
8899.88
|
9352.14
|
|
ಛತ್ತೀಸ್ ಗಢ
|
5695.55
|
1958.15
|
|
ಉತ್ತರಾಖಂಡ
|
1159.26
|
80.75
|
|
ತಮಿಳುನಾಡು
|
6033.90
|
5620.42
|
|
ಒಡಿಶಾ
|
9948.83
|
6140.07
|
|
ಕರ್ನಾಟಕ
|
1281.18
|
935.79
|
|
ಗುಜರಾತ್
|
138.87
|
|
|
ಕೇರಳ
|
1062.36
|
471.23
|
|
ಮಹಾರಾಷ್ಟ್ರ
|
327.74
|
1458.49
|
|
ಜಾರ್ಖಂಡ @
|
502.99
|
233.76
|
|
ತ್ರಿಪುರಾ
|
64.26
|
|
|
ಡಿ.ಬಿ.ಟಿ. *
|
221.95
|
197.54
|
|
ಒಟ್ಟು (ಡಿ.ಸಿ.ಪಿ. , ಡಿ.ಬಿ.ಟಿ.)
|
70410.60
|
50391.67
|
ಗಮನಿಸಿ:-
• ಜಾರ್ಖಂಡ್ 2016-17 (ಕೇವಲ 1 ಜಿಲ್ಲೆಗೆ) 2017-18 (ಕೇವಲ 5 ಜಿಲ್ಲೆಗೆ), 2018-19 (ಕೇವಲ 6 ಜಿಲ್ಲೆಗಳಿಗೆ) ಕೆ.ಎಂ.ಎಸ್. ಗೆ ಡಿ.ಸಿ.ಪಿ. ಆಗಿತ್ತು. ಅದು 2019-20 ರಲ್ಲಿ ಕೆ.ಎಂ.ಎಸ್. ನಲ್ಲಿ ನಾನ್-ಡಿ.ಸಿ.ಪಿ. ಯನ್ನು ಅಳವಡಿಸಿಕೊಂಡಿದೆ.. 2023-24 ಹಣಕಾಸು ವರ್ಷದಲ್ಲಿ ಡಿ.ಸಿ.ಪಿ. ಯನ್ನು ಅಳವಡಿಸಿಕೊಂಡಿದೆ.
*ಡಿ.ಬಿ.ಟಿ. ಯೋಜನೆಯಡಿಯಲ್ಲಿ, 2015-16 ರಿಂದ ಅನ್ವಯವಾಗುವಂತೆ ಚಂಡೀಗಢ, ಪುದುಚೇರಿ ಹಾಗು ದಾದ್ರಾ ಮತ್ತು ನಗರ ಹವೇಲಿಯ ಯು.ಟಿ. ಗಳಿಗೆ ಸಬ್ಸಿಡಿಯನ್ನು ಬಿಡುಗಡೆ ಮಾಡಲಾಗಿದೆ.
#ಅಸ್ಸಾಂ 2 ಜಿಲ್ಲೆಗಳಿಗೆ ಡಿ.ಸಿ.ಪಿ. ರಾಜ್ಯವಾಗಿದೆ.
*****
(रिलीज़ आईडी: 2212399)
आगंतुक पटल : 33