ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
ಭಾರತದ ಉತ್ಪಾದನಾ ಬೆಳವಣಿಗಾಗಿ ಭವಿಷ್ಯಕ್ಕೆ ಸಿದ್ಧವಾಗಿರುವ ಕಾರ್ಮಿಕ ಪಡೆಯನ್ನು ನಿರ್ಮಾಣ ಮಾಡುವಂತೆ ಕೈಗಾರಿಕೆ ಮತ್ತು ಶೈಕ್ಷಣಿಕ ವಲಯಕ್ಕೆ ಕೇಂದ್ರ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಆಗ್ರಹ
ಎಂ.ಐ.ಟಿ. ನಿಯೋಗವನ್ನು ಸ್ವಾಗತಿಸಿದ ಕೇಂದ್ರ ಸಚಿವರು, ಎನ್.ಎ.ಎಂ.ಟಿ.ಇ.ಸಿ.ಎಚ್ (NAMTECH) ನಲ್ಲಿ ಉದ್ಯಮ-ಶೈಕ್ಷಣಿಕ ಸಂಯೋಜನೆಯನ್ನು ಎತ್ತಿ ತೋರಿಸಿದರು
ಸ್ಮಾರ್ಟ್ ಉತ್ಪಾದನೆ ಮತ್ತು ಸಾರಿಗೆಯಂತಹ ಕ್ಷೇತ್ರಗಳಲ್ಲಿ ಸಹಯೋಗಕ್ಕೆ ಎನ್.ಎ.ಎಂ.ಟಿ.ಇ.ಸಿ.ಎಚ್ (NAMTECH) ಮತ್ತು ಜಿ.ಎಸ್.ವಿ. (GSV), ವಡೋದರಾ ತಿಳುವಳಿಕಾ ಒಡಂಬಡಿಕೆಗೆ ಅಂಕಿತ
ಜ್ಞಾನ ಹಂಚಿಕೆಯನ್ನು ಸಕ್ರಿಯಗೊಳಿಸುವ ಸಹಯೋಗದ ವಾತಾವರಣವನ್ನು ಬೆಳೆಸುವ ಮೂಲಕ ಎಂ.ಇ.ಟಿ. (MET) ವೇದಿಕೆಯು ಈ ರಾಷ್ಟ್ರೀಯ ಆದ್ಯತೆಗಳಿಗೆ ಪೂರಕವಾಗಿದೆ
Posted On:
22 MAY 2025 9:52PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಕಲ್ಪನೆಯ ವಿಕಸಿತ ಭಾರತ 2047 ಮಿಷನ್ಗೆ ಬೆಂಬಲವಾಗಿ ಪ್ರತಿಭೆ ಮತ್ತು ಸಾಮರ್ಥ್ಯವನ್ನು ಬೆಳೆಸಲು ಸಂಘಟಿತ ಕ್ರಮ ಕೈಗೊಳ್ಳಬೇಕೆಂದು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಸಚಿವರಾದ (MeitY) ಶ್ರೀ ಅಶ್ವಿನಿ ವೈಷ್ಣವ್ ಇಂದು ಕರೆ ನೀಡಿದರು. ಉದ್ಯಮದ ಮುಖಂಡರು ಮತ್ತು ಶಿಕ್ಷಣ ಸಂಸ್ಥೆ ತಜ್ಞರನ್ನು ಒಳಗೊಂಡ ದುಂಡುಮೇಜಿನ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಭಾರತದ ಉತ್ಪಾದನಾ ಬೆಳವಣಿಗೆಯನ್ನು ಹೆಚ್ಚಿಸಲು ಭವಿಷ್ಯಕ್ಕೆ ಸಿದ್ಧವಾಗಿರುವ ಕಾರ್ಮಿಕಪಡೆಯ ಅಭಿವೃದ್ಧಿಯನ್ನು ವೇಗಗೊಳಿಸುವಂತೆ ಪಾಲುದಾರರನ್ನು/ಭಾಗೀದಾರರನ್ನು ಆಗ್ರಹಿಸಿದರು.
ಈ ದುಂಡುಮೇಜಿನ ಚರ್ಚೆಯು ಪ್ರತಿಭಾ ಅಭಿವೃದ್ಧಿ ಮತ್ತು ಸುಸ್ಥಿರ ಉತ್ಪಾದನೆಗಾಗಿ ಸಾಮರ್ಥ್ಯ ವರ್ಧನೆಯ ಮೇಲೆ ಗಮನ ಕೇಂದ್ರೀಕರಿಸಿದ್ದು, ಜಾಗತಿಕ ದೃಷ್ಟಿಕೋನವನ್ನು ಸ್ಥಳೀಯ ಕ್ರಮಗಳೊಂದಿಗೆ ಸಂಯೋಜಿಸುತ್ತದೆ. ಎನ್.ಎ.ಎಂ.ಟಿ.ಇ.ಸಿ.ಎಚ್. (NAMTECH -ನ್ಯೂ ಏಜ್ ಮೇಕರ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ)ಯ ನೂತನ ಉಪಕ್ರಮವಾದ, ಉತ್ಪಾದನೆ, ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ (MET) ಎಂಬ ಹೊಸ ವಲಯದ ರೂಪುಗೊಳ್ಳುವಿಕೆಯನ್ನು ಸಚಿವರು ಶ್ಲಾಘಿಸಿದರು. ಈ ಉಪಕ್ರಮವು ಉದ್ಯಮ 4.0 ಮತ್ತು ಅದರಾಚೆಯ ಬೇಡಿಕೆಗಳನ್ನು ಪೂರೈಸುವ ಗುರಿಯನ್ನು ಹೊಂದಿದೆ, ನಿರ್ದಿಷ್ಟವಾಗಿ ಉದಯೋನ್ಮುಖ ತಂತ್ರಜ್ಞಾನಗಳಲ್ಲಿನ ಪ್ರತಿಭೆಯ ಕಂದಕವನ್ನು ಪರಿಹರಿಸುವ ಮೂಲಕ ಮತ್ತು ಭಾರತದಲ್ಲಿ ಪರಿವರ್ತನಾತ್ಮಕ ಬದಲಾವಣೆಯನ್ನು ತರಲು ಸಮರ್ಥವಾಗಿರುವ ಹೆಚ್ಚು ಕೌಶಲ್ಯಪೂರ್ಣ ಕಾರ್ಮಿಕಪಡೆ ಹಾಗು ಭವಿಷ್ಯದ ನಾಯಕರನ್ನು ಸಿದ್ಧಪಡಿಸುವ ಮೂಲಕ ಅದು ಕೊಡುಗೆ ನೀಡಲಿದೆ.

ಭಾರತ ಸರ್ಕಾರದ 'ವಿಕಸಿತ ಭಾರತ @2047' ಎಂಬ ಚಿಂತನೆಯಲ್ಲಿ ಅಡಕವಾಗಿರುವ ಮತ್ತು ಡಿಜಿಟಲ್ ಇಂಡಿಯಾ, ಸ್ಕಿಲ್ ಇಂಡಿಯಾ, ನ್ಯಾಷನಲ್ ಮ್ಯಾನುಫ್ಯಾಕ್ಚರಿಂಗ್ ಮಿಷನ್ ಹಾಗು ವಲಯ-ನಿರ್ದಿಷ್ಟ ಪ್ರೊಡಕ್ಷನ್-ಲಿಂಕ್ಡ್ ಇನ್ಸೆಂಟಿವ್ (ಪಿಎಲ್ಐ) ಯೋಜನೆಗಳಂತಹ ಪ್ರಮುಖ ಕಾರ್ಯಕ್ರಮಗಳಿಂದ ಬೆಂಬಲಿತವಾದ ಈ ಉಪಕ್ರಮವು, ಭಾರತವನ್ನು ಉತ್ಪಾದನೆ ಮತ್ತು ಉದಯೋನ್ಮುಖ ತಂತ್ರಜ್ಞಾನಗಳಲ್ಲಿ ಜಾಗತಿಕ ನಾಯಕನನ್ನಾಗಿಸುವ ರಾಷ್ಟ್ರೀಯ ಬದ್ಧತೆಯನ್ನು ಬಲಪಡಿಸುತ್ತದೆ.
ಸರ್ಕಾರವು ಭಾರತ ಸೆಮಿಕಂಡಕ್ಟರ್ ಮಿಷನ್, ಎಐ ಮಿಷನ್, ನ್ಯಾಷನಲ್ ರೊಬೊಟಿಕ್ಸ್ ಸ್ಟ್ರಾಟಜಿ, ಮೊಬಿಲಿಟಿ ಮ್ಯಾನುಫ್ಯಾಕ್ಚರಿಂಗ್ ಮಿಷನ್ ಮತ್ತು ನ್ಯಾಷನಲ್ ಹೈಡ್ರೋಜನ್ ಮಿಷನ್ ಸೇರಿದಂತೆ ಹಲವಾರು ಪ್ರವರ್ತಕ ಕಾರ್ಯಗಳನ್ನು ಪ್ರಾರಂಭಿಸಿದೆ, ಇದು ಮುಂದುವರಿದ ಆಧುನಿಕ ತಂತ್ರಜ್ಞಾನ ಅಭಿವೃದ್ಧಿ ಹಾಗು ಅಳವಡಿಕೆಯ ಮೇಲೆ ಇರಿಸಲಾದ ಆದ್ಯತೆಯನ್ನು ಪ್ರತಿಬಿಂಬಿಸುತ್ತದೆ. ಭಾರತದ ರಾಷ್ಟ್ರೀಯ ಶಿಕ್ಷಣ ನೀತಿ 2020 ಸಮಗ್ರ ಅಭಿವೃದ್ಧಿ ಮತ್ತು ವೃತ್ತಿಪರ ಹಾಗು ಡಿಜಿಟಲ್ ಶಿಕ್ಷಣವನ್ನು ಮುಖ್ಯವಾಹಿನಿಯ ಶಾಲಾ ಶಿಕ್ಷಣದಲ್ಲಿ ಏಕೀಕರಣಗೊಳಿಸುವುದನ್ನು ಸಹ ಒತ್ತಿಹೇಳುತ್ತದೆ.
ಸ್ಕಿಲ್ ಇಂಡಿಯಾ ಡಿಜಿಟಲ್ ಹಬ್, ಐಟಿಐ ಮೇಲ್ದರ್ಜೆಗೇರಿಸುವ ಯೋಜನೆ, ಚಿಪ್ ಟು ಸ್ಟಾರ್ಟ್ಅಪ್ ಮತ್ತು ನ್ಯಾಷನಲ್ ಅಪ್ರೆಂಟಿಸ್ಶಿಪ್ ಪ್ರಮೋಷನ್ ಸ್ಕೀಮ್ (ಎನ್ಎಪಿಎಸ್) ನಂತಹ ಪ್ರತಿಭಾ-ಆಧಾರಿತ ಚೌಕಟ್ಟುಗಳು – ಇವೆಲ್ಲದಕ್ಕೂ ಪೂರಕವಾಗಿ ಉದ್ಯಮಕ್ಕೆ ಅನುಗುಣವಾಗಿ ಅಂತರ್ಗತ ಕೌಶಲ್ಯ ಮಾದರಿಗಳಿಗೆ ಒತ್ತು ನೀಡುತ್ತವೆ.
ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಕೇಂದ್ರ ಸಚಿವರಾದ ಅಶ್ವಿನಿ ವೈಷ್ಣವ್, ಎಂಐಟಿ ತಂಡವನ್ನು ಸ್ವಾಗತಿಸಿದರು, ಅವರ ಸಂಸ್ಥೆಯನ್ನು ಜಾಗತಿಕವಾಗಿ ಅತ್ಯುತ್ತಮ ಸಂಸ್ಥೆಗಳಲ್ಲಿ ಒಂದೆಂದು ಶ್ಲ್ಯಾಘಿಸಿದರು. ಇದು ಆಧುನಿಕ ಉತ್ಪಾದನೆಗಾಗಿ ವಿಶ್ವ ದರ್ಜೆಯ ಸಂಸ್ಥೆಯಾಗಿ ಗುರುತಿಸಲ್ಪಟ್ಟಿದೆ. ಸುಜುಕಿ, ಸೀಮೆನ್ಸ್, ಎಬಿಬಿ, ಐನಾಕ್ಸ್ ಮತ್ತು ಇತರ ಭಾರತೀಯ ಉದ್ಯಮ ನಾಯಕರನ್ನು ಅವರು ಉಲ್ಲೇಖಿಸಿದರು, ಎನ್.ಎ.ಎಂ.ಟಿ.ಇ.ಸಿ.ಎಚ್. ಅನ್ನು ನಿಜವಾಗಿಯೂ ಪರಿಣಾಮಕಾರಿಯಾಗಿ ಮಾಡಲು ಮತ್ತು ಪ್ರಧಾನಮಂತ್ರಿಯವರ ದೃಷ್ಟಿಕೋನಕ್ಕೆ ಹೊಂದಿಕೆಯಾಗುವಂತೆ ರೂಪಿಸಲು ಉದ್ಯಮದ ಭಾಗವಹಿಸುವಿಕೆ ಅತ್ಯಗತ್ಯ ಎಂದು ಒತ್ತಿ ಹೇಳಿದರು.
ಉದ್ಯಮ-ಶೈಕ್ಷಣಿಕ ಸಹಯೋಗಕ್ಕೆ ಮಾದರಿಯಾಗಿ ಗತಿ ಶಕ್ತಿ ವೇದಿಕೆಯ ಯಶಸ್ಸನ್ನು ಅವರು ಎತ್ತಿ ತೋರಿಸಿದರು, ಅಲ್ಲಿ ಕಂಪನಿಗಳು ಜ್ಞಾನವನ್ನು ಹಂಚಿಕೊಳ್ಳುವ ಮೂಲಕ ಯಾವುದೇ ಹಣಕಾಸಿನ ಹೂಡಿಕೆಯಿಲ್ಲದೆ ಉದ್ಯೋಗ-ಸಿದ್ಧ ಪಠ್ಯಕ್ರಮಗಳನ್ನು ಸಹ-ರಚಿಸುತ್ತವೆ. ಮೊದಲ ದಿನದಿಂದಲೇ ಉದ್ಯೋಗಾವಕಾಶವನ್ನು ಖಚಿತಪಡಿಸಿಕೊಳ್ಳಲು ಎಲ್ಲ ವಲಯಗಳಲ್ಲಿ ಅಂತಹ ಮಾದರಿಗಳನ್ನು ಪುನರಾವರ್ತಿಸಲು ಅವರು ಕರೆ ನೀಡಿದರು. ಎನ್.ಎ.ಎಂ.ಟಿ.ಇ.ಸಿ.ಎಚ್. ಅನ್ನು ಸಂಪೂರ್ಣ ಸರ್ಕಾರಿ ಬೆಂಬಲ ಮತ್ತು ಎಂಐಟಿಯ ಮಾರ್ಗದರ್ಶನದೊಂದಿಗೆ ಮಳಿಗೆ, ವಿನ್ಯಾಸ, ಸಂಶೋಧನೆ ಸಹಿತ ಎಲ್ಲಾ ಹಂತಗಳಲ್ಲಿ ಪ್ರತಿಭೆಗಳನ್ನು ಕೌಶಲ್ಯಪೂರ್ಣಗೊಳಿಸುವ ಗುರಿಯನ್ನು ಮತ್ತು ಆ ಮೂಲಕ ನಾವಿನ್ಯತೆ ಹಾಗು ಮನಸ್ಥಿತಿ ಬದಲಾವಣೆಯನ್ನು ಉತ್ತೇಜಿಸುವ ಇರಾದೆಯನ್ನು ಹೊಂದಿರುವುದನ್ನು ಅವರು ಗಮನಿಸಿದರು. ನಿಜವಾಗಿಯೂ ಪರಿವರ್ತಕವಾದದ್ದನ್ನು ನಿರ್ಮಿಸುವ ಅವಕಾಶ ಈಗ ಬಂದಿದೆ ಎಂದು ಹೇಳುವ ಮೂಲಕ ಶ್ರೀ ವೈಷ್ಣವ್ ಎಲ್ಲಾ ಪಾಲುದಾರರು/ಭಾಗೀದಾರರು ಮುಂದಿನ ಹಂತಗಳಿಗೆ ಹೋಗುವಂತೆಯೂ ಆಗ್ರಹಿಸಿದರು.
ಜ್ಞಾನ ಹಂಚಿಕೆ, ಸಾಮರ್ಥ್ಯ ವರ್ಧನೆ ಮತ್ತು ಮೂಲಸೌಕರ್ಯ ಅಭಿವೃದ್ಧಿಯನ್ನು ಸಕ್ರಿಯಗೊಳಿಸುವ ಸಹಯೋಗದ ವಾತಾವರಣವನ್ನು ಬೆಳೆಸುವ ಮೂಲಕ ಎಂ.ಇ.ಟಿ. (MET) ವೇದಿಕೆಯು ಈ ರಾಷ್ಟ್ರೀಯ ಆದ್ಯತೆಗಳಿಗೆ ಪೂರಕವಾಗಿದೆ.
ನಿರ್ಣಾಯಕ ಕೌಶಲ್ಯಗಳ ಕಂದಕ/ ಅಂತರವನ್ನು ನಿವಾರಿಸುವ, ಸುಧಾರಿತ ತಂತ್ರಜ್ಞಾನ ಶಿಕ್ಷಣಕ್ಕೆ ಪ್ರವೇಶವನ್ನು ಪ್ರಜಾಪ್ರಭುತ್ವೀಕರಣಗೊಳಿಸುವ ಮತ್ತು ಎಲೆಕ್ಟ್ರಾನಿಕ್ಸ್ ಹಾಗು ಉತ್ಪಾದನಾ ಕ್ಷೇತ್ರಗಳಲ್ಲಿ ಭಾರತದ ಜಾಗತಿಕ ಸ್ಪರ್ಧಾತ್ಮಕತೆಗೆ ಕೊಡುಗೆ ನೀಡುವ ಇಂತಹ ಪರಿಸರ ವ್ಯವಸ್ಥೆ-ಚಾಲಿತ ಉಪಕ್ರಮಗಳಿಗೆ ಎಂ.ಇ.ಐ.ಟಿ. ವೈ. ನಿರಂತರ ಬೆಂಬಲವನ್ನು ನೀಡುತ್ತದೆ.
ಈ ಸಂದರ್ಭದಲ್ಲಿ ಎನ್.ಎ.ಎಂ.ಟಿ.ಇ.ಸಿ.ಎಚ್. (NAMTECH) ಮತ್ತು ವಡೋದರಾದ ಗತಿ ಶಕ್ತಿ ವಿಶ್ವವಿದ್ಯಾಲಯ (GSV) ನಡುವೆ ತಿಳುವಳಿಕಾ ಒಡಂಬಡಿಕೆಗೆ (MoU)ಕ್ಕೆ ಸಹಿ ಹಾಕಲಾಯಿತು. ಜಿ.ಎಸ್.ವಿ. ಯ ಉಪಕುಲಪತಿ ಪ್ರೊ. ಮನೋಜ್ ಚೌಧರಿ ಅವರ ಸಮ್ಮುಖದಲ್ಲಿ ಸಹಿ ಹಾಕಲಾದ ಈ ಒಡಂಬಡಿಕೆಯು, ಸ್ಮಾರ್ಟ್ ಉತ್ಪಾದನೆ, ಸಾರಿಗೆ ವ್ಯವಸ್ಥೆಗಳು, ಲಾಜಿಸ್ಟಿಕ್ಸ್ ನಾವೀನ್ಯತೆ ಮತ್ತು ಭವಿಷ್ಯಕ್ಕೆ ಸಿದ್ಧವಾದ ಕೌಶಲ್ಯದಲ್ಲಿ ಜಂಟಿ ಉಪಕ್ರಮಗಳನ್ನು ಅನ್ವೇಷಿಸಲು ಮತ್ತು ಕೈಗೊಳ್ಳಲು ಸಹಯೋಗಕ್ಕಾಗಿ ಚೌಕಟ್ಟನ್ನು ಸ್ಥಾಪಿಸುವ ಗುರಿಯನ್ನು ಹೊಂದಿದೆ.
ಸೆಮಿಕಂಡಕ್ಟರ್ಗಳು, ಸ್ಮಾರ್ಟ್ ಉತ್ಪಾದನೆ ಮತ್ತು ರೊಬೊಟಿಕ್ಸ್ನಂತಹ ಆದ್ಯತೆಯ ವಲಯಗಳಲ್ಲಿ ಪ್ರಯೋಗಾಲಯಗಳು, ತರಬೇತಿ ಕೇಂದ್ರಗಳು, ಕೌಶಲ್ಯ ಮೂಲಸೌಕರ್ಯ ಮತ್ತು ವಿದ್ಯಾರ್ಥಿವೇತನಗಳನ್ನು ಅಭಿವೃದ್ಧಿಪಡಿಸಲು ಎನ್.ಎ.ಎಂ.ಟಿ.ಇ.ಸಿ.ಎಚ್. (NAMTECH), ಸೀಮೆನ್ಸ್ ಇಂಡಿಯಾ, ಅನಲಾಗ್ ಡಿವೈಸಸ್ ಇಂಕಾರ್ಪೋರೇಟೆಡ್ ಮತ್ತು ಅಪ್ಲೈಡ್ ಮೆಟೀರಿಯಲ್ಸ್ ಇಂಕಾರ್ಪೋರೇಟೆಡ್ ನಂತಹ ಸಂಸ್ಥೆಗಳೊಂದಿಗೆ ಪಾಲುದಾರಿಕೆಯ ತಿಳುವಳಿಕಾ ಒಡಂಬಡಿಕೆಗಳಿಗೆ ಸಹಿ ಹಾಕಿದೆ. ಎಲ್ಲಾ ಪ್ರಮುಖ ಉದ್ಯಮ ನಾಯಕರು ಮತ್ತು ಶಿಕ್ಷಣ ತಜ್ಞರು ಪ್ರಧಾನಮಂತ್ರಿಯವರ ವಿಕಸಿತ ಭಾರತ 2047 ರ ದೃಷ್ಟಿಕೋನಕ್ಕಾಗಿ ಒಟ್ಟಾಗಿ ಕೆಲಸ ಮಾಡುವುದನ್ನು ಖಚಿತಪಡಿಸಲಾಗಿದೆ.
*****
(Release ID: 2130725)