ಕೃಷಿ ಸಚಿವಾಲಯ
ಭಾರತೀಯ ಕೃಷಿ ಸಂಶೋಧನಾ ಮಂಡಳಿಯ ಸಂಶೋಧನಾ ಪ್ರಯತ್ನಗಳನ್ನು ಮರುಸಂಘಟಿಸಲು ಉನ್ನತ ಅಧಿಕಾರ ಸಮಿತಿ ರಚನೆ
Posted On:
09 AUG 2024 6:00PM by PIB Bengaluru
ಭಾರತೀಯ ಕೃಷಿ ಸಂಶೋಧನಾ ಮಂಡಳಿಯ (ಐಸಿಎಆರ್) ಸಂಶೋಧನಾ ಕಾರ್ಯಕ್ರಮಗಳು ಮತ್ತು ಪ್ರಯತ್ನಗಳನ್ನು ಪರಿಶೀಲಿಸಲು ಮತ್ತು ಐಸಿಎಆರ್ ನ ಸಂಶೋಧನಾ ಫಲಿತಾಂಶಗಳನ್ನು ಹೆಚ್ಚಿಸುವ ಮಾರ್ಗಗಳನ್ನು ಸೂಚಿಸಲು ಸರ್ಕಾರವು ಕಾಲಕಾಲಕ್ಕೆ ವಿಶೇಷ ಕೃಷಿ ತಂತ್ರಜ್ಞರು ಮತ್ತು ಇತರ ತಜ್ಞರ ಉನ್ನತ ಅಧಿಕಾರ ಸಮಿತಿಗಳನ್ನು ರಚಿಸುತ್ತದೆ. 12 ನೇ ಪಂಚವಾರ್ಷಿಕ ಯೋಜನಾ ಅವಧಿಗೆ ಐಸಿಎಆರ್ ನ ವಿವಿಧ ಯೋಜನೆಗಳ ಫಲಿತಾಂಶ ಪರಿಶೀಲನೆಯನ್ನು ಕೈಗೊಳ್ಳಲು 2017 ರಲ್ಲಿ ಅಂತಹ ಕೊನೆಯ ಸಮಿತಿಯನ್ನು ರಚಿಸಲಾಯಿತು.
ಭಾರತೀಯ ಕೃಷಿ ಸಂಶೋಧನಾ ಮಂಡಳಿಯು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಒಳಗೊಂಡ ಎಂಟು ಪ್ರಾದೇಶಿಕ ಸಮಿತಿಗಳನ್ನು ಹೊಂದಿದೆ. ಪ್ರಾದೇಶಿಕ ಸಮಿತಿಗಳ ಸಭೆಗಳನ್ನು ನಿಯತಕಾಲಿಕವಾಗಿ ಆಯೋಜಿಸಲಾಗುತ್ತದೆ. ರಾಜ್ಯ ಸರ್ಕಾರದ ಅಧಿಕಾರಿಗಳು ಮತ್ತು ಪ್ರದೇಶದಲ್ಲಿರುವ ಐಸಿಎಆರ್ ನ ಎಲ್ಲಾ ಸಂಶೋಧನಾ ಸಂಸ್ಥೆಗಳು ಈ ಸಭೆಗಳಲ್ಲಿ ಭಾಗವಹಿಸುತ್ತವೆ. ಈ ಸಭೆಗಳಲ್ಲಿ, ಆ ನಿರ್ದಿಷ್ಟ ರಾಜ್ಯದ ರೈತರು ಎದುರಿಸುತ್ತಿರುವ ಎಲ್ಲಾ ಸಮಸ್ಯೆಗಳು ಅಥವಾ ವಿಷಯಗಳನ್ನು ರಾಜ್ಯ ಸರ್ಕಾರದ ಅಧಿಕಾರಿಗಳು ಪ್ರಸ್ತಾಪಿಸುತ್ತಾರೆ ಮತ್ತು ಪರಿಹಾರಗಳನ್ನು ಐಸಿಎಆರ್ ಸಂಶೋಧನಾ ಸಂಸ್ಥೆಗಳು ಒದಗಿಸುತ್ತವೆ. ಈ ಸಭೆಗಳಲ್ಲಿ ರಾಜ್ಯಗಳು ಮಂಡಿಸಿದ ಕೆಲವು ಸಮಸ್ಯೆಗಳು ಮತ್ತು ವಿಷಯಗಳ ಕುರಿತು ಐಸಿಎಆರ್ ಸಂಶೋಧನೆಯನ್ನು ಪ್ರಾರಂಭಿಸುತ್ತದೆ. ಐಸಿಎಆರ್ ಕೃಷಿ ವಿಜ್ಞಾನ ಕೇಂದ್ರಗಳಿಂದ (ಕೆವಿಕೆ) ರೈತರ ಸಮಸ್ಯೆಗಳ ಬಗ್ಗೆ ನಿಯಮಿತವಾಗಿ ಪ್ರತಿಕ್ರಿಯೆಯನ್ನು ಪಡೆಯುತ್ತದೆ ಮತ್ತು ಸಂಶೋಧನೆ ಮತ್ತು ವಿಸ್ತರಣೆಯ ಮೂಲಕ ಈ ಸಮಸ್ಯೆಗಳನ್ನು ಪರಿಹರಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತದೆ.
ಭಾರತೀಯ ಕೃಷಿ ಸಂಶೋಧನಾ ಮಂಡಳಿಯು ವಿವಿಧ ಕೃಷಿ ಪರಿಸರ ವಲಯಗಳಲ್ಲಿನ ತಂತ್ರಜ್ಞಾನಗಳ ಸೂಕ್ತತೆ, ಮಣ್ಣಿನ ಪ್ರಕಾರಗಳು, ಹವಾಮಾನ ಪ್ರಕಾರ ಮತ್ತು ಬೆಳೆಗಳ ಸೂಕ್ತತೆಗಾಗಿ ಸ್ಥಳೀಯ ಹವಾಮಾನ ಮತ್ತು ಭೂಭೌತ ಪರಿಸ್ಥಿತಿಗಳಿಗೆ ನಿರ್ದಿಷ್ಟವಾದ ಸಂಶೋಧನೆಯನ್ನು ನಡೆಸುತ್ತದೆ, ಇದು ನಿರ್ದಿಷ್ಟ ಪ್ರದೇಶd ಸಂಶೋಧನೆ ಮತ್ತು ತಂತ್ರಜ್ಞಾನದ ಅಭಿವೃದ್ಧಿಗೆ ಅವಕಾಶ ನೀಡುತ್ತದೆ. ಬಹು ರಾಜ್ಯಗಳಾದ್ಯಂತ ಪ್ರಾದೇಶಿಕ ಕೃಷಿ ಸವಾಲುಗಳನ್ನು ಎದುರಿಸಲು ಬೆಳೆಗಳು, ಜಾನುವಾರುಗಳು, ಮೀನುಗಾರಿಕೆ ಮತ್ತು ಕೃಷಿ ಪದ್ಧತಿಗಳ ಮೇಲೆ ಸ್ಥಳೀಯ ಸಂಶೋಧನೆಗಾಗಿ ಅಖಿಲ ಭಾರತ ಸಂಯೋಜಿತ ಸಂಶೋಧನಾ ಯೋಜನೆಗಳ (ಎಐಸಿಆರ್ಪಿ) ಮೂಲಕ ಐಸಿಎಆರ್ ರಾಜ್ಯ ಕೃಷಿ ವಿಶ್ವವಿದ್ಯಾಲಯಗಳೊಂದಿಗೆ (ಎಸ್ ಎ ಯು) ಸಹಯೋಗ ಹೊಂದಿದೆ. ಐಸಿಎಆರ್ ಹವಾಮಾನ ನಿರೋಧಕ ಕೃಷಿ, ಬರ ನಿರೋಧಕ ಬೆಳೆ ಪ್ರಭೇದಗಳ ಅಭಿವೃದ್ಧಿ, ಸಮರ್ಥ ನೀರು ನಿರ್ವಹಣೆ ಅಭ್ಯಾಸಗಳು ಮತ್ತು ಸ್ಥಳೀಯ ಹವಾಮಾನ ಒತ್ತಡಗಳಿಗೆ ಸೂಕ್ತವಾದ ಸುಸ್ಥಿರ ಕೃಷಿ ತಂತ್ರಗಳನ್ನು ಉತ್ತೇಜಿಸುತ್ತದೆ. ಕೃಷಿ ವಿಜ್ಞಾನ ಕೇಂದ್ರಗಳು (ಕೆವಿಕೆಗಳು) ಸ್ಥಳೀಯ ಸಂಶೋಧನೆ, ತರಬೇತಿ ಮತ್ತು ವಿಸ್ತರಣಾ ಸೇವೆಗಳನ್ನು ಒದಗಿಸುವ ಜಿಲ್ಲಾ ಮಟ್ಟದ ಕೇಂದ್ರಗಳಾಗಿ ಕಾರ್ಯನಿರ್ವಹಿಸುತ್ತವೆ. ರೈತರಿಗೆ ಅಭಿವೃದ್ಧಿ ಹೊಂದಿದ ತಂತ್ರಜ್ಞಾನಗಳು ರೈತರಿಗೆ ಯಶಸ್ವಿಯಾಗಿ ತಲುಪಲು ಮುಂಚೂಣಿ ಪ್ರಾತ್ಯಕ್ಷಿಕೆಗಳು, ಆನ್ ಫಾರ್ಮ್ ಪ್ರಯೋಗಗಳು ಮತ್ತು ವಿಸ್ತರಣಾ ಚಟುವಟಿಕೆಗಳ ಮೂಲಕ ತಂತ್ರಜ್ಞಾನ ಪ್ರದರ್ಶನ ಮತ್ತು ಪ್ರಸರಣವನ್ನು ಈ ಸಂಸ್ಥೆಗಳು ಖಚಿತಪಡಿಸುತ್ತವೆ.
ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವರಾದ ಶ್ರೀ ಭಗೀರಥ ಚೌಧರಿ ಅವರು ಇಂದು ಲೋಕಸಭೆಯಲ್ಲಿ ಲಿಖಿತ ಉತ್ತರದಲ್ಲಿ ಈ ಮಾಹಿತಿಯನ್ನು ನೀಡಿದರು.
*****
(Release ID: 2044128)