ಪ್ರಧಾನ ಮಂತ್ರಿಯವರ ಕಛೇರಿ

ಫೆಬ್ರವರಿ 27-28ರಂದು ಕೇರಳ, ತಮಿಳುನಾಡು ಮತ್ತು ಮಹಾರಾಷ್ಟ್ರಕ್ಕೆ ಭೇಟಿ ನೀಡಲಿರುವ ಪ್ರಧಾನಮಂತ್ರಿ


ತಿರುವನಂತಪುರಂನ ವಿಕ್ರಮ್‌ ಸಾರಾಭಾಯ್‌ ಬಾಹ್ಯಾಕಾಶ ಕೇಂದ್ರಕ್ಕೆ (ವಿಎಸ್‌ಎಸ್‌ಸಿ) ಭೇಟಿ ನೀಡಲಿರುವ ಪ್ರಧಾನಮಂತ್ರಿ ಮತ್ತು ಸುಮಾರು 1800 ಕೋಟಿ ರೂಪಾಯಿ ಮೌಲ್ಯದ ಮೂರು ಪ್ರಮುಖ ಬಾಹ್ಯಾಕಾಶ ಮೂಲಸೌಕರ್ಯ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ
 
ಯೋಜನೆಗಳಲ್ಲಿ ಶ್ರೀಹರಿಕೋಟಾದ ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದಲ್ಲಿ‘ಪಿಎಸ್‌ಎಲ್‌ವಿ ಏಕೀಕರಣ ಸೌಲಭ್ಯ’ ಸೇರಿದೆ; ಮಹೇಂದ್ರಗಿರಿಯ ಇಸ್ರೋ ಪ್ರೊಪಲ್ಷನ್‌ ಕಾಂಪ್ಲೆಕ್ಸ್‌ನಲ್ಲಿ‘ಸೆಮಿ-ಕ್ರಯೋಜೆನಿಕ್ಸ್‌ ಇಂಟಿಗ್ರೇಟೆಡ್‌ ಎಂಜಿನ್‌ ಮತ್ತು ಸ್ಟೇಜ್‌ ಟೆಸ್ಟ್‌ ಸೌಲಭ್ಯ’; ಮತ್ತು ವಿಎಸ್‌ಎಸ್‌ಸಿಯಲ್ಲಿ‘ಟ್ರೈಸಾನಿಕ್‌ ವಿಂಡ್‌ ಟನಲ್‌’
 
ಗಂಗಾಯಾನದ ಪ್ರಗತಿ ಪರಿಶೀಲನೆ ನಡೆಸಲಿರುವ ಪ್ರಧಾನಮಂತ್ರಿ
 
ತಮಿಳುನಾಡಿನಲ್ಲಿ17,300 ಕೋಟಿ ರೂ.ಗೂ ಅಧಿಕ ಮೌಲ್ಯದ ಹಲವು ಮೂಲಸೌಕರ್ಯ ಯೋಜನೆಗಳ ಉದ್ಘಾಟನೆ, ರಾಷ್ಟ್ರಕ್ಕೆ ಸಮರ್ಪಣೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿರುವ ಪ್ರಧಾನಮಂತ್ರಿ
 
ದೇಶದ ಪೂರ್ವ ಕರಾವಳಿಗೆ ಟ್ರಾನ್ಸ್‌ಶಿಪ್‌ ಮೆಂಟ್‌ ಹಬ್‌ ಸ್ಥಾಪಿಸುವ ನಿಟ್ಟಿನಲ್ಲಿಪ್ರಧಾನಮಂತ್ರಿ ಅವರು ವಿ.ಒ.ಚಿದಂಬರನಾರ್‌ ಬಂದರಿನಲ್ಲಿಹೊರ ಬಂದರು ಕಂಟೇನರ್‌ ಟರ್ಮಿನಲ್‌ಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
 
ಭಾರತದ ಮೊದಲ ಸ್ಥಳೀಯ ಹಸಿರು ಹೈಡ್ರೋಜನ್‌ ಇಂಧನ ಕೋಶ ಒಳನಾಡಿನ ಜಲಮಾರ್ಗ ಹಡಗನ್ನು ಉದ್ಘಾಟಿಸಲಿರುವ ಪ್ರಧಾನಮಂತ್ರಿ
 
ಮಧುರೈನಲ್ಲಿಆಟೋಮೋಟಿವ್‌ ವಲಯದಲ್ಲಿಕೆಲಸ ಮಾಡುತ್ತಿರುವ ಸಾವಿರಾರು ಎಂಎಸ್‌ಎಂಇ ಉದ್ಯಮಿಗಳನ್ನು ಉದ್ದೇಶಿಸಿ ಪ್ರಧಾನಿ ಭಾಷಣ

ಮಹಾರಾಷ್ಟ್ರದಲ್ಲಿ4900 ಕೋಟಿ ರೂ.ಗೂ ಅಧಿಕ ಮೌಲ್ಯದ ರೈಲು, ರಸ್ತೆ ಮತ್ತು ನೀರಾವರಿಗೆ ಸಂಬಂಧಿಸಿದ ಹಲವು ಮೂಲಸೌಕರ್ಯ ಯೋಜನೆಗಳನ್ನು ಉದ್ಘಾಟಿಸಲಿರುವ ಮತ್ತು ರಾಷ್ಟ್ರಕ್ಕೆ ಸಮರ್ಪಿಸಲಿರುವ ಪ್ರಧಾನಮಂತ್ರಿ

ಪಿಎಂ-ಕಿಸಾನ್‌ ಅಡಿಯಲ್ಲಿಸುಮಾರು 21,000 ಕೋಟಿ ರೂ.ಗಳ 16 ನೇ ಕಂತಿನ ಮೊತ್ತ ಮತ್ತು ‘ನಮೋ ಶೆಟ್ಕರಿ ಮಹಾಸಮ್ಮಾನ್‌ ನಿಧಿ’ ಅಡಿಯಲ್ಲಿ ಸುಮಾರು 3800 ಕೋಟಿ ರೂ.ಗಳ 2 ಮತ್ತು 3 ನೇ ಕಂತುಗಳನ್ನು ಪ್ರಧಾನಿ ಬಿಡುಗಡೆ ಮಾಡಲಿದ್ದಾರೆ.

ಮಹಾರಾಷ್ಟ್ರದಾದ್ಯಂತ 5.5 ಲಕ್ಷ ಮಹಿಳಾ ಸ್ವಸಹಾಯ ಗುಂಪುಗಳಿಗೆ 825 ಕೋಟಿ ರೂ.ಗಳ ಆವರ್ತ ನಿಧಿಯನ್ನು ವಿತರಿಸಲಿರುವ ಪ್ರಧಾನಮಂತ್ರಿ

ಮಹಾರಾಷ್ಟ್ರದಾದ್ಯಂತ ಒಂದು ಕೋಟಿ ಆಯುಷ್ಮಾನ್‌ ಕಾರ್ಡ್‌ಗಳ ವಿತರಣೆಗೆ ಚಾಲನೆ ನೀಡಲಿರುವ ಪ್ರಧಾನಮಂತ್ರಿ

ನರೇಂದ್ರ ಮೋದಿ ಆವಾಸ್‌ ಘರ್ಕುಲ್‌ ಯೋಜನೆಗೆ ಚಾಲನೆ ನೀಡಲಿರುವ ಪ್ರಧಾನಮಂತ್ರಿ

Posted On: 26 FEB 2024 2:18PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2024ರ ಫೆಬ್ರವರಿ 27-28ರಂದು ಕೇರಳ, ತಮಿಳುನಾಡು ಮತ್ತು ಮಹಾರಾಷ್ಟ್ರಗಳಿಗೆ ಭೇಟಿ ನೀಡಲಿದ್ದಾರೆ.
ಫೆಬ್ರವರಿ 27ರಂದು ಬೆಳಗ್ಗೆ 10.45ಕ್ಕೆ ಪ್ರಧಾನಮಂತ್ರಿ ಅವರು ಕೇರಳದ ತಿರುವನಂತಪುರಂನಲ್ಲಿರುವ ವಿಕ್ರಮ್‌ ಸಾರಾಭಾಯ್‌ ಬಾಹ್ಯಾಕಾಶ ಕೇಂದ್ರಕ್ಕೆ (ವಿಎಸ್‌ಎಸ್‌ಸಿ) ಭೇಟಿ ನೀಡಲಿದ್ದಾರೆ. ಸಂಜೆ 5:15 ಕ್ಕೆ ತಮಿಳುನಾಡಿನ ಮಧುರೈನಲ್ಲಿನಡೆಯಲಿರುವ ‘ಭವಿಷ್ಯವನ್ನು ಸೃಷ್ಟಿಸುವುದು - ಆಟೋಮೋಟಿವ್‌ ಎಂಎಸ್‌ಎಂಇ ಉದ್ಯಮಿಗಳಿಗೆ ಡಿಜಿಟಲ್‌ ಮೊಬಿಲಿಟಿ’ ಕಾರ್ಯಕ್ರಮದಲ್ಲಿಪ್ರಧಾನಿ ಭಾಗವಹಿಸಲಿದ್ದಾರೆ.

ಫೆಬ್ರವರಿ 28 ರಂದು ಬೆಳಗ್ಗೆ 9:45 ಕ್ಕೆ ಪ್ರಧಾನಮಂತ್ರಿ ಅವರು ತಮಿಳುನಾಡಿನ ತೂತುಕುಡಿಯಲ್ಲಿಸುಮಾರು 17,300 ಕೋಟಿ ರೂ.ಗಳ ಬಹು ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಸಂಜೆ 4:30 ರ ಸುಮಾರಿಗೆ ಮಹಾರಾಷ್ಟ್ರದ ಯವತ್ಮಾಲ್‌ನಲ್ಲಿ ಸಾರ್ವಜನಿಕ ಕಾರ್ಯಕ್ರಮದಲ್ಲಿಭಾಗವಹಿಸಲಿರುವ ಪ್ರಧಾನಿ, ಮಹಾರಾಷ್ಟ್ರದ ಯವತ್ಮಾಲ್‌ನಲ್ಲಿ4900 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಅನೇಕ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ ಮತ್ತು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಕಾರ್ಯಕ್ರಮದಲ್ಲಿಅವರು ಪಿಎಂ ಕಿಸಾನ್‌ ಮತ್ತು ಇತರ ಯೋಜನೆಗಳ ಅಡಿಯಲ್ಲಿ ಪ್ರಯೋಜನಗಳನ್ನು ಬಿಡುಗಡೆ ಮಾಡಲಿದ್ದಾರೆ.

ಕೇರಳದಲ್ಲಿ ಪ್ರಧಾನಮಂತ್ರಿ

ತಿರುವನಂತಪುರಂನ ವಿಕ್ರಮ್‌ ಸಾರಾಭಾಯ್‌ ಬಾಹ್ಯಾಕಾಶ ಕೇಂದ್ರಕ್ಕೆ ಭೇಟಿ ನೀಡುವ ಸಂದರ್ಭದಲ್ಲಿಮೂರು ಪ್ರಮುಖ ಬಾಹ್ಯಾಕಾಶ ಮೂಲಸೌಕರ್ಯ ಯೋಜನೆಗಳನ್ನು ಉದ್ಘಾಟಿಸುವುದರಿಂದ ದೇಶದ ಬಾಹ್ಯಾಕಾಶ ಕ್ಷೇತ್ರವನ್ನು ಅದರ ಪೂರ್ಣ ಸಾಮರ್ಥ್ಯ‌ವನ್ನು ಅರಿತುಕೊಳ್ಳಲು ಸುಧಾರಿಸುವ ಪ್ರಧಾನಿಯವರ ದೃಷ್ಟಿಕೋನ ಮತ್ತು ಈ ವಲಯದಲ್ಲಿತಾಂತ್ರಿಕ ಮತ್ತು ಆರ್‌ ಮತ್ತು ಡಿ ಸಾಮರ್ಥ್ಯ‌ವನ್ನು ಹೆಚ್ಚಿಸುವ ಅವರ ಬದ್ಧತೆಗೆ ಉತ್ತೇಜನ ಸಿಗಲಿದೆ. ಈ ಯೋಜನೆಗಳಲ್ಲಿ ಶ್ರೀಹರಿಕೋಟಾದ ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದಲ್ಲಿಪಿಎಸ್‌ಎಲ್‌ವಿ ಏಕೀಕರಣ ಸೌಲಭ್ಯ (ಪಿಐಎಫ್‌) ಸೇರಿದೆ; ಮಹೇಂದ್ರಗಿರಿಯ ಇಸ್ರೋ ಪ್ರೊಪಲ್ಷನ್‌ ಕಾಂಪ್ಲೆಕ್ಸ್‌ನಲ್ಲಿ ಹೊಸ ‘ಸೆಮಿ-ಕ್ರಯೋಜೆಕ್ಸ್‌ ಇಂಟಿಗ್ರೇಟೆಡ್‌ ಎಂಜಿನ್‌ ಮತ್ತು ಸ್ಟೇಜ್‌ ಟೆಸ್ಟ್‌ ಸೌಲಭ್ಯ’; ಮತ್ತು ತಿರುವನಂತಪುರಂನ ವಿಎಸ್‌ಎಸ್‌ಸಿಯಲ್ಲಿ‘ಟ್ರೈಸಾನಿಕ್‌ ವಿಂಡ್‌ ಟನಲ್‌’. ಬಾಹ್ಯಾಕಾಶ ಕ್ಷೇತ್ರಕ್ಕೆ ವಿಶ್ವದರ್ಜೆಯ ತಾಂತ್ರಿಕ ಸೌಲಭ್ಯಗಳನ್ನು ಒದಗಿಸುವ ಈ ಮೂರು ಯೋಜನೆಗಳನ್ನು ಸುಮಾರು 1800 ಕೋಟಿ ರೂ.ಗಳ ಸಂಚಿತ ವೆಚ್ಚದಲ್ಲಿಅಭಿವೃದ್ಧಿಪಡಿಸಲಾಗಿದೆ.

ಶ್ರೀಹರಿಕೋಟಾದ ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದಲ್ಲಿನ ಪಿಎಸ್‌ಎಲ್‌ವಿ ಏಕೀಕರಣ ಸೌಲಭ್ಯ (ಪಿಐಎಫ್‌) ಪಿಎಸ್‌ಎಲ್‌ವಿ ಉಡಾವಣೆಗಳ ಆವರ್ತನವನ್ನು ವರ್ಷಕ್ಕೆ 6 ರಿಂದ 15 ಕ್ಕೆ ಹೆಚ್ಚಿಸಲು ಸಹಾಯ ಮಾಡುತ್ತದೆ. ಈ ಅತ್ಯಾಧುನಿಕ ಸೌಲಭ್ಯವು ಖಾಸಗಿ ಬಾಹ್ಯಾಕಾಶ ಕಂಪನಿಗಳು ವಿನ್ಯಾಸಗೊಳಿಸಿದ ಎಸ್‌ಎಸ್‌ಎಲ್‌ವಿ ಮತ್ತು ಇತರ ಸಣ್ಣ ಉಡಾವಣಾ ವಾಹನಗಳ ಉಡಾವಣೆಯನ್ನು ಸಹ ಪೂರೈಸುತ್ತದೆ.

ಐಪಿಆರ್‌ಸಿ ಮಹೇಂದ್ರಗಿರಿಯಲ್ಲಿಹೊಸ ‘ಸೆಮಿ-ಕ್ರಯೋಜೆನಿಕ್ಸ್‌ ಇಂಟಿಗ್ರೇಟೆಡ್‌ ಎಂಜಿನ್‌ ಮತ್ತು ಸ್ಟೇಜ್‌ ಟೆಸ್ಟ್‌ ಸೌಲಭ್ಯ’ ಸೆಮಿ ಕ್ರಯೋಜೆನಿಕ್‌ ಎಂಜಿನ್‌ಗಳು ಮತ್ತು ಹಂತಗಳನ್ನು ಅಭಿವೃದ್ಧಿಪಡಿಸಲು ಅನುವು ಮಾಡಿಕೊಡುತ್ತದೆ, ಇದು ಪ್ರಸ್ತುತ ಉಡಾವಣಾ ವಾಹನಗಳ ಪೇಲೋಡ್‌ ಸಾಮರ್ಥ್ಯ‌ವನ್ನು ಹೆಚ್ಚಿಸುತ್ತದೆ. ಈ ಸೌಲಭ್ಯವು 200 ಟನ್‌ ವರೆಗಿನ ಎಂಜಿನ್‌ಗಳನ್ನು ಪರೀಕ್ಷಿಸಲು ದ್ರವ ಆಮ್ಲಜನಕ ಮತ್ತು ಸೀಮೆಎಣ್ಣೆ ಸರಬರಾಜು ವ್ಯವಸ್ಥೆಗಳನ್ನು ಹೊಂದಿದೆ.
ವಾತಾವರಣದ ಹಾರಾಟದ ಸಮಯದಲ್ಲಿರಾಕೆಟ್‌ಗಳು ಮತ್ತು ವಿಮಾನಗಳ ಗುಣಲಕ್ಷ ಣಕ್ಕಾಗಿ ವಾಯುಬಲವೈಜ್ಞಾನಿಕ ಪರೀಕ್ಷೆಗೆ ಗಾಳಿ ಸುರಂಗಗಳು ಅತ್ಯಗತ್ಯ. ವಿಎಸ್‌ಎಸ್‌ಯಲ್ಲಿಉದ್ಘಾಟಿಸಲಾಗುತ್ತಿರುವ ಟ್ರೈಸಾನಿಕ್‌ ವಿಂಡ್‌ ಟನಲ್‌ ಸಂಕೀರ್ಣ ತಾಂತ್ರಿಕ ವ್ಯವಸ್ಥೆಯಾಗಿದ್ದು, ಇದು ನಮ್ಮ ಭವಿಷ್ಯದ ತಂತ್ರಜ್ಞಾನ ಅಭಿವೃದ್ಧಿ ಅಗತ್ಯಗಳನ್ನು ಪೂರೈಸುತ್ತದೆ.

ತಮ್ಮ ಭೇಟಿಯ ಸಮಯದಲ್ಲಿ, ಪ್ರಧಾನಮಂತ್ರಿ ಅವರು ಗಗನಯಾನ ಮಿಷನ್‌ನ ಪ್ರಗತಿಯನ್ನು ಪರಿಶೀಲಿಸಲಿದ್ದಾರೆ ಮತ್ತು ಗಗನಯಾತ್ರಿಗಳಿಗೆ ‘ಗಗನಯಾತ್ರಿ ರೆಕ್ಕೆಗಳನ್ನು’ ನೀಡಲಿದ್ದಾರೆ. ಗಗನಯಾನ ಮಿಷನ್‌ ಭಾರತದ ಮೊದಲ ಮಾನವ ಬಾಹ್ಯಾಕಾಶ ಹಾರಾಟ ಕಾರ್ಯಕ್ರಮವಾಗಿದ್ದು, ಇದಕ್ಕಾಗಿ ವಿವಿಧ ಇಸ್ರೋ ಕೇಂದ್ರಗಳಲ್ಲಿವ್ಯಾಪಕ ಸಿದ್ಧತೆಗಳು ನಡೆಯುತ್ತಿವೆ.

ತಮಿಳುನಾಡಿನಲ್ಲಿ ಪ್ರಧಾನಮಂತ್ರಿ

ಮಧುರೈನಲ್ಲಿ ಪ್ರಧಾನಮಂತ್ರಿಯವರು ‘ಆಟೋಮೋಟಿವ್‌ ಎಂಎಸ್‌ಎಂಇ ಉದ್ಯಮಿಗಳಿಗೆ ಭವಿಷ್ಯವನ್ನು ರಚಿಸುವುದು - ಡಿಜಿಟಲ್‌ ಮೊಬಿಲಿಟಿ’ ಕಾರ್ಯಕ್ರಮದಲ್ಲಿಭಾಗವಹಿಸಲಿದ್ದಾರೆ ಮತ್ತು ಆಟೋಮೋಟಿವ್‌ ವಲಯದಲ್ಲಿಕೆಲಸ ಮಾಡುವ ಸಾವಿರಾರು ಸೂಕ್ಷ ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳನ್ನು (ಎಂಎಸ್‌ಎಂಇಗಳ)ಉದ್ದೇಶಿಸಿ ಮಾತನಾಡಲಿದ್ದಾರೆ. ಭಾರತೀಯ ವಾಹನ ಉದ್ಯಮದಲ್ಲಿಎಂಎಸ್‌ಎಂಇಗಳನ್ನು ಬೆಂಬಲಿಸಲು ಮತ್ತು ಉನ್ನತೀಕರಿಸಲು ವಿನ್ಯಾಸಗೊಳಿಸಲಾದ ಎರಡು ಪ್ರಮುಖ ಉಪಕ್ರಮಗಳಿಗೆ ಪ್ರಧಾನಿ ಚಾಲನೆ ನೀಡಲಿದ್ದಾರೆ. ಈ ಉಪಕ್ರಮಗಳಲ್ಲಿ ಟಿವಿಎಸ್‌ ಓಪನ್‌ ಮೊಬಿಲಿಟಿ ಪ್ಲಾಟ್‌ ಫಾರ್ಮ್‌ ಮತ್ತು ಟಿವಿಎಸ್‌ ಮೊಬಿಲಿಟಿ-ಸಿಐಐ ಸೆಂಟರ್‌ ಆಫ್‌ ಎಕ್ಸಲೆಲ್ಸ್‌ ಸೇರಿವೆ. ಈ ಉಪಕ್ರಮಗಳು ದೇಶದಲ್ಲಿಎಂಎಸ್‌ಎಂಇಗಳ ಬೆಳವಣಿಗೆಯನ್ನು ಬೆಂಬಲಿಸುವ ಮತ್ತು ಕಾರ್ಯಾಚರಣೆಗಳನ್ನು ಔಪಚಾರಿಕಗೊಳಿಸಲು, ಜಾಗತಿಕ ಮೌಲ್ಯ ಸರಪಳಿಗಳೊಂದಿಗೆ ಸಂಯೋಜಿಸಲು ಮತ್ತು ಸ್ವಾವಲಂಬಿಗಳಾಗಲು ಸಹಾಯ ಮಾಡುವ ಪ್ರಧಾನ ಮಂತ್ರಿಯವರ ದೃಷ್ಟಿಕೋನವನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿಒಂದು ಹೆಜ್ಜೆಯಾಗಿದೆ.

ತೂತುಕುಡಿಯಲ್ಲಿನಡೆಯಲಿರುವ ಸಾರ್ವಜನಿಕ ಕಾರ್ಯಕ್ರಮದಲ್ಲಿಪ್ರಧಾನಮಂತ್ರಿ ಅವರು ವಿ.ಒ.ಚಿದಂಬರನಾರ್‌ ಬಂದರಿನಲ್ಲಿಹೊರ ಬಂದರು ಕಂಟೇನರ್‌ ಟರ್ಮಿನಲ್‌ ಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಈ ಕಂಟೇನರ್‌ ಟರ್ಮಿನಲ್‌ ವಿ.ಒ.ಚಿದಂಬರನಾರ್‌ ಬಂದರನ್ನು ಪೂರ್ವ ಕರಾವಳಿಯ ಟ್ರಾನ್ಸ್‌ಶಿಪ್‌ ಮೆಂಟ್‌ ಕೇಂದ್ರವಾಗಿ ಪರಿವರ್ತಿಸುವ ನಿಟ್ಟಿನಲ್ಲಿಒಂದು ಹೆಜ್ಜೆಯಾಗಿದೆ. ಈ ಯೋಜನೆಯು ಭಾರತದ ದೀರ್ಘ ಕರಾವಳಿ ಮತ್ತು ಅನುಕೂಲಕರ ಭೌಗೋಳಿಕ ಸ್ಥಳವನ್ನು ಬಳಸಿಕೊಳ್ಳುವ ಗುರಿಯನ್ನು ಹೊಂದಿದೆ ಮತ್ತು ಜಾಗತಿಕ ವ್ಯಾಪಾರ ರಂಗದಲ್ಲಿಭಾರತದ ಸ್ಪರ್ಧಾತ್ಮಕತೆಯನ್ನು ಬಲಪಡಿಸುತ್ತದೆ. ಪ್ರಮುಖ ಮೂಲಸೌಕರ್ಯ ಯೋಜನೆಯು ಈ ಪ್ರದೇಶದಲ್ಲಿಉದ್ಯೋಗ ಸೃಷ್ಟಿ ಮತ್ತು ಆರ್ಥಿಕ ಬೆಳವಣಿಗೆಗೆ ಕಾರಣವಾಗುತ್ತದೆ.

ವಿ.ಒ. ಚಿದಂಬರನಾರ್‌ ಬಂದರನ್ನು ದೇಶದ ಮೊದಲ ಹಸಿರು ಹೈಡ್ರೋಜನ್‌ ಹಬ್‌ ಬಂದರನ್ನಾಗಿ ಮಾಡುವ ಗುರಿಯನ್ನು ಹೊಂದಿರುವ ವಿವಿಧ ಯೋಜನೆಗಳನ್ನು ಪ್ರಧಾನಮಂತ್ರಿ ಅವರು ಉದ್ಘಾಟಿಸಲಿದ್ದಾರೆ. ಈ ಯೋಜನೆಗಳಲ್ಲಿಉಪ್ಪುನೀರು ಶುದ್ಧೀಕರಣ ಘಟಕ, ಹೈಡ್ರೋಜನ್‌ ಉತ್ಪಾದನೆ ಮತ್ತು ಬಂಕರ್‌ ಸೌಲಭ್ಯ ಇತ್ಯಾದಿಗಳು ಸೇರಿವೆ.

ಹರಿತ್‌ ನೌಕಾ ಉಪಕ್ರಮದ ಅಡಿಯಲ್ಲಿ ಭಾರತದ ಮೊದಲ ಸ್ಥಳೀಯ ಹಸಿರು ಹೈಡ್ರೋಜನ್‌ ಇಂಧನ ಕೋಶ ಒಳನಾಡಿನ ಜಲಮಾರ್ಗ ಹಡಗನ್ನು ಪ್ರಧಾನಮಂತ್ರಿ ಅವರು ಉದ್ಘಾಟಿಸಲಿದ್ದಾರೆ. ಈ ಹಡಗನ್ನು ಕೊಚ್ಚಿನ್‌ ಶಿಪ್‌ ಯಾರ್ಡ್‌ ತಯಾರಿಸಿದೆ ಮತ್ತು ಶುದ್ಧ ಇಂಧನ ಪರಿಹಾರಗಳನ್ನು ಅಳವಡಿಸಿಕೊಳ್ಳಲು ಮತ್ತು ರಾಷ್ಟ್ರದ ನಿವ್ವಳ ಶೂನ್ಯ ಬದ್ಧತೆಗಳಿಗೆ ಹೊಂದಿಕೆಯಾಗಲು ಪ್ರವರ್ತಕ ಹೆಜ್ಜೆಯನ್ನು ಒತ್ತಿಹೇಳುತ್ತದೆ. ಅಲ್ಲದೆ, ಈ ಕಾರ್ಯಕ್ರಮದಲ್ಲಿಪ್ರಧಾನಮಂತ್ರಿಯವರು ಹತ್ತು ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳ 75 ಲೈಟ್‌ ಹೌಸ್‌ಗಳಲ್ಲಿಪ್ರವಾಸಿ ಸೌಲಭ್ಯಗಳನ್ನು ಸಮರ್ಪಿಸಲಿದ್ದಾರೆ.

ಈ ಕಾರ್ಯಕ್ರಮದಲ್ಲಿಪ್ರಧಾನಮಂತ್ರಿ ಅವರು ವಾಂಚಿ ಮಣಿಯಾಚ್ಚಿ - ತಿರುನೆಲ್ವೇಲಿ ವಿಭಾಗ ಮತ್ತು ಮೇಳಪ್ಪಾಲಯಂ - ಅರಳ್ವಮೋಲಿ ವಿಭಾಗ ಸೇರಿದಂತೆ ವಾಂಚಿ ಮಣಿಯಾಚ್ಚಿ - ನಾಗರಕೋಯಿಲ್‌ ರೈಲು ಮಾರ್ಗವನ್ನು ದ್ವಿಗುಣಗೊಳಿಸುವ ರೈಲು ಯೋಜನೆಗಳನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಸುಮಾರು 1,477 ಕೋಟಿ ರೂ.ಗಳ ವೆಚ್ಚದಲ್ಲಿಅಭಿವೃದ್ಧಿಪಡಿಸಲಾದ ಈ ಡಬ್ಲಿಂಗ್‌ ಯೋಜನೆಯು ಕನ್ಯಾಕುಮಾರಿ, ನಾಗರಕೋಯಿಲ್‌ ಮತ್ತು ತಿರುನೆಲ್ವೇಲಿಯಿಂದ ಚೆನ್ನೈಗೆ ಹೋಗುವ ರೈಲುಗಳ ಪ್ರಯಾಣದ ಸಮಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ತಮಿಳುನಾಡಿನಲ್ಲಿಸುಮಾರು 4,586 ಕೋಟಿ ರೂ.ಗಳ ಒಟ್ಟು ವೆಚ್ಚದಲ್ಲಿಅಭಿವೃದ್ಧಿಪಡಿಸಲಾದ ನಾಲ್ಕು ರಸ್ತೆ ಯೋಜನೆಗಳನ್ನು ಪ್ರಧಾನಮಂತ್ರಿ ಅವರು ಸಮರ್ಪಿಸಲಿದ್ದಾರೆ. ಈ ಯೋಜನೆಗಳಲ್ಲಿಎನ್‌ಎಚ್‌ -844 ರ ಜಿಟ್ಟಂಡಹಳ್ಳಿ-ಧರ್ಮಪುರಿ ವಿಭಾಗವನ್ನು ಚತುಷ್ಪಥಗೊಳಿಸುವುದು, ಎನ್‌ಎಚ್‌ -81 ರ ಮೀನ್ಸುರುತ್ತಿ-ಚಿದಂಬರಂ ವಿಭಾಗದ ಎರಡು ಪಥದ ಮಾರ್ಗಗಳು, ಎನ್‌ಎಚ್‌ -83 ರ ಓಡಂಚತ್ರಂ-ಮಡತುಕುಲಂ ವಿಭಾಗವನ್ನು ಚತುಷ್ಪಥಗೊಳಿಸುವುದು ಮತ್ತು ಎನ್‌ಎಚ್‌ -83 ರ ನಾಗಪಟ್ಟಿಣಂ-ತಂಜಾವೂರು ವಿಭಾಗದ ಎರಡು ಪಥದ ಭುಜಗಳನ್ನು ನಿರ್ಮಿಸುವುದು ಸೇರಿವೆ. ಈ ಯೋಜನೆಗಳು ಸಂಪರ್ಕವನ್ನು ಸುಧಾರಿಸುವುದು, ಪ್ರಯಾಣದ ಸಮಯವನ್ನು ಕಡಿಮೆ ಮಾಡುವುದು, ಸಾಮಾಜಿಕ-ಆರ್ಥಿಕ ಬೆಳವಣಿಗೆಯನ್ನು ಹೆಚ್ಚಿಸುವುದು ಮತ್ತು ಈ ಪ್ರದೇಶದಲ್ಲಿ ತೀರ್ಥಯಾತ್ರೆಗೆ ಅನುಕೂಲ ಮಾಡಿಕೊಡುವ ಗುರಿಯನ್ನು ಹೊಂದಿವೆ.

ಮಹಾರಾಷ್ಟ್ರದಲ್ಲಿ ಪ್ರಧಾನಮಂತ್ರಿ

ರೈತರ ಕಲ್ಯಾಣಕ್ಕಾಗಿ ಪ್ರಧಾನಮಂತ್ರಿಯವರ ಬದ್ಧತೆಯ ಮತ್ತೊಂದು ಉದಾಹರಣೆಯನ್ನು ಪ್ರದರ್ಶಿಸುವ ಒಂದು ಹೆಜ್ಜೆಯಾಗಿ, ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ (ಪಿಎಂ-ಕಿಸಾನ್‌) ಅಡಿಯಲ್ಲಿ16 ನೇ ಕಂತಿನ ಮೊತ್ತವಾದ 21,000 ಕೋಟಿ ರೂ.ಗಳನ್ನು ಯವತ್ಮಾಲ್‌ನಲ್ಲಿನಡೆಯುವ ಸಾರ್ವಜನಿಕ ಕಾರ್ಯಕ್ರಮದಲ್ಲಿಫಲಾನುಭವಿಗಳಿಗೆ ನೇರ ಲಾಭ ವರ್ಗಾವಣೆ ಮೂಲಕ ಬಿಡುಗಡೆ ಮಾಡಲಾಗುವುದು. ಈ ಬಿಡುಗಡೆಯೊಂದಿಗೆ, 3 ಲಕ್ಷ  ಕೋಟಿಗೂ ಹೆಚ್ಚು ಮೊತ್ತವನ್ನು 11 ಕೋಟಿಗೂ ಹೆಚ್ಚು ರೈತರ ಕುಟುಂಬಗಳಿಗೆ ವರ್ಗಾಯಿಸಲಾಗುತ್ತದೆ.

ಪ್ರಧಾನಮಂತ್ರಿ ಅವರು ಸುಮಾರು 3800 ಕೋಟಿ ರೂ.ಗಳ ಮೌಲ್ಯದ ‘ನಮೋ ಶೆಟ್ಕರಿ ಮಹಾಸಮ್ಮಾನ್‌ ನಿಧಿ’ಯ 2 ಮತ್ತು 3 ನೇ ಕಂತುಗಳನ್ನು ವಿತರಿಸಲಿದ್ದಾರೆ ಮತ್ತು ಮಹಾರಾಷ್ಟ್ರದಾದ್ಯಂತ ಸುಮಾರು 88 ಲಕ್ಷ  ಫಲಾನುಭವಿ ರೈತರಿಗೆ ಪ್ರಯೋಜನವಾಗಲಿದೆ. ಈ ಯೋಜನೆಯು ಮಹಾರಾಷ್ಟ್ರದ ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆಯ ಫಲಾನುಭವಿಗಳಿಗೆ ವರ್ಷಕ್ಕೆ 6000 ರೂ.ಗಳ ಹೆಚ್ಚುವರಿ ಮೊತ್ತವನ್ನು ಒದಗಿಸುತ್ತದೆ.

ಮಹಾರಾಷ್ಟ್ರದಾದ್ಯಂತ 5.5 ಲಕ್ಷ  ಮಹಿಳಾ ಸ್ವಸಹಾಯ ಗುಂಪುಗಳಿಗೆ (ಎಸ್‌ಎಚ್‌ಜಿ) 825 ಕೋಟಿ ರೂ.ಗಳ ಆವರ್ತ ನಿಧಿಯನ್ನು ಪ್ರಧಾನಿ ವಿತರಿಸಲಿದ್ದಾರೆ. ಈ ಮೊತ್ತವು ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್‌ (ಎನ್‌ ಆರ್‌ಎಲ್‌ಎಂ) ಅಡಿಯಲ್ಲಿಭಾರತ ಸರ್ಕಾರ ಒದಗಿಸುವ ಆವರ್ತ ನಿಧಿಗೆ ಹೆಚ್ಚುವರಿಯಾಗಿದೆ. ಗ್ರಾಮ ಮಟ್ಟದಲ್ಲಿಮಹಿಳಾ ನೇತೃತ್ವದ ಸೂಕ್ಷ ್ಮ ಉದ್ಯಮಗಳನ್ನು ಉತ್ತೇಜಿಸುವ ಮೂಲಕ ಎಸ್‌ಎಚ್‌ಜಿಗಳಲ್ಲಿಸರದಿ ಆಧಾರದ ಮೇಲೆ ಹಣವನ್ನು ಸಾಲ ನೀಡುವುದನ್ನು ಉತ್ತೇಜಿಸಲು ಮತ್ತು ಬಡ ಕುಟುಂಬಗಳ ವಾರ್ಷಿಕ ಆದಾಯವನ್ನು ಹೆಚ್ಚಿಸಲು ಎಸ್‌ಎಚ್‌ಜಿಗಳಿಗೆ ರಿವಾಲ್ವಿಂಗ್‌ ಫಂಡ್‌ (ಆರ್‌ಎಫ್‌) ನೀಡಲಾಗುತ್ತದೆ.

ಪ್ರಧಾನಮಂತ್ರಿ ಅವರು ಮಹಾರಾಷ್ಟ್ರದಾದ್ಯಂತ ಒಂದು ಕೋಟಿ ಆಯುಷ್ಮಾನ್‌ ಕಾರ್ಡ್‌ಗಳ ವಿತರಣೆಗೆ ಚಾಲನೆ ನೀಡಲಿದ್ದಾರೆ. ಎಲ್ಲಾ ಸರ್ಕಾರಿ ಯೋಜನೆಗಳ ಶೇಕಡಾ 100 ರಷ್ಟು ಪರಿಪೂರ್ಣತೆಯ ಪ್ರಧಾನ ಮಂತ್ರಿಯವರ ದೃಷ್ಟಿಕೋನವನ್ನು ಸಾಕಾರಗೊಳಿಸಲು ಕಲ್ಯಾಣ ಯೋಜನೆಗಳ ಫಲಾನುಭವಿಗಳನ್ನು ತಲುಪಲು ಇದು ಮತ್ತೊಂದು ಹೆಜ್ಜೆಯಾಗಿದೆ. ಪ್ರಧಾನಮಂತ್ರಿ ಅವರು ಮಹಾರಾಷ್ಟ್ರದಲ್ಲಿಒಬಿಸಿ ವರ್ಗದ ಫಲಾನುಭವಿಗಳಿಗಾಗಿ ನರೇಂದ್ರ ಮೋದಿ ಆವಾಸ್‌ ಘರ್‌ಕುಲ್‌ ಯೋಜನೆಗೆ ಚಾಲನೆ ನೀಡಲಿದ್ದಾರೆ. ಈ ಯೋಜನೆಯು 2023-24ರಿಂದ 2025-26ರ ಹಣಕಾಸು ವರ್ಷದವರೆಗೆ ಒಟ್ಟು 10 ಲಕ್ಷ  ಮನೆಗಳನ್ನು ನಿರ್ಮಿಸಲು ಉದ್ದೇಶಿಸಿದೆ. ಪ್ರಧಾನಮಂತ್ರಿ ಅವರು ಯೋಜನೆಯ ಮೊದಲ ಕಂತಿನ 375 ಕೋಟಿ ರೂ.ಗಳನ್ನು 2.5 ಲಕ್ಷ  ಫಲಾನುಭವಿಗಳಿಗೆ ವರ್ಗಾಯಿಸಲಿದ್ದಾರೆ.

ಪ್ರಧಾನಮಂತ್ರಿ ಅವರು ಮಹಾರಾಷ್ಟ್ರದ ಮರಾಠಾವಾಡಾ ಮತ್ತು ವಿದರ್ಭ ಪ್ರದೇಶಕ್ಕೆ ಪ್ರಯೋಜನವಾಗುವ ಅನೇಕ ನೀರಾವರಿ ಯೋಜನೆಗಳನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಈ ಯೋಜನೆಗಳನ್ನು ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ (ಪಿಎಂಕೆಎಸ್‌ವೈ) ಮತ್ತು ಬಲಿರಾಜ ಜಲ ಸಂಜೀವಿನಿ ಯೋಜನೆ (ಬಿಜೆಎಸ್‌ವೈ) ಅಡಿಯಲ್ಲಿ2750 ಕೋಟಿ ರೂ.ಗಿಂತ ಹೆಚ್ಚು ಸಂಚಿತ ವೆಚ್ಚದಲ್ಲಿಅಭಿವೃದ್ಧಿಪಡಿಸಲಾಗಿದೆ.

ಪ್ರಧಾನಮಂತ್ರಿ ಅವರು ಮಹಾರಾಷ್ಟ್ರದಲ್ಲಿ1300 ಕೋಟಿ ರೂ.ಗೂ ಅಧಿಕ ಮೌಲ್ಯದ ಹಲವು ರೈಲು ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ. ಈ ಯೋಜನೆಗಳಲ್ಲಿವಾರ್ಧಾ-ಕಲಾಂಬ್‌ ಬ್ರಾಡ್‌ ಗೇಜ್‌ ಮಾರ್ಗ (ವಾರ್ಧಾ-ಯವತ್ಮಾಲ್‌-ನಾಂದೇಡ್‌ ಹೊಸ ಬ್ರಾಡ್‌ ಗೇಜ್‌ ಮಾರ್ಗ ಯೋಜನೆಯ ಭಾಗ) ಮತ್ತು ನ್ಯೂ ಅಶ್ತಿ-ಅಮಲ್ನರ್‌ ಬ್ರಾಡ್‌ ಗೇಜ್‌ ಮಾರ್ಗ (ಅಹ್ಮದ್‌ನಗರ-ಬೀಡ್‌-ಪಾರ್ಲಿ ಹೊಸ ಬ್ರಾಡ್‌ ಗೇಜ್‌ ಮಾರ್ಗ ಯೋಜನೆಯ ಭಾಗ) ಸೇರಿವೆ. ಹೊಸ ಬ್ರಾಡ್‌ ಗೇಜ್‌ ಮಾರ್ಗಗಳು ವಿದರ್ಭ ಮತ್ತು ಮರಾಠಾವಾಡಾ ಪ್ರದೇಶಗಳ ಸಂಪರ್ಕವನ್ನು ಸುಧಾರಿಸುತ್ತವೆ ಮತ್ತು ಸಾಮಾಜಿಕ-ಆರ್ಥಿಕ ಅಭಿವೃದ್ಧಿಗೆ ಉತ್ತೇಜನ ನೀಡುತ್ತವೆ. ಕಾರ್ಯಕ್ರಮದ ಸಂದರ್ಭದಲ್ಲಿಪ್ರಧಾನಮಂತ್ರಿ ಅವರು ಎರಡು ರೈಲು ಸೇವೆಗಳಿಗೆ ವರ್ಚುವಲ್‌ ಮೂಲಕ ಹಸಿರು ನಿಶಾನೆ ತೋರಲಿದ್ದಾರೆ. ಇದು ಕಲಂಬ್‌ ಮತ್ತು ವಾರ್ಧಾವನ್ನು ಸಂಪರ್ಕಿಸುವ ರೈಲು ಸೇವೆಗಳನ್ನು ಒಳಗೊಂಡಿದೆ; ಮತ್ತು ಅಮಲ್ನರ್‌ ಮತ್ತು ನ್ಯೂ ಅಶ್ತಿಯನ್ನು ಸಂಪರ್ಕಿಸುವ ರೈಲು ಸೇವೆ. ಈ ಹೊಸ ರೈಲು ಸೇವೆಯು ರೈಲು ಸಂಪರ್ಕವನ್ನು ಸುಧಾರಿಸಲು ಸಹಾಯ ಮಾಡುತ್ತದೆ ಮತ್ತು ವಿದ್ಯಾರ್ಥಿಗಳು, ವ್ಯಾಪಾರಿಗಳು ಮತ್ತು ಈ ಪ್ರದೇಶದ ದೈನಂದಿನ ಪ್ರಯಾಣಿಕರಿಗೆ ಪ್ರಯೋಜನವನ್ನು ನೀಡುತ್ತದೆ.

ಮಹಾರಾಷ್ಟ್ರದಲ್ಲಿರಸ್ತೆ ವಲಯವನ್ನು ಬಲಪಡಿಸುವ ಹಲವಾರು ಯೋಜನೆಗಳನ್ನು ಪ್ರಧಾನಮಂತ್ರಿ ಅವರು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಈ ಯೋಜನೆಗಳಲ್ಲಿಎನ್‌ಎಚ್‌ -930 ರ ವಾರೋರಾ-ವಾನಿ ವಿಭಾಗವನ್ನು ಚತುಷ್ಪಥಗೊಳಿಸುವುದು ಸೇರಿದೆ; ಸಕೋಲಿ-ಭಂಡಾರ ಮತ್ತು ಸಲೈಖುರ್ದ್‌-ತಿರೋರಾವನ್ನು ಸಂಪರ್ಕಿಸುವ ಪ್ರಮುಖ ರಸ್ತೆಗಳ ರಸ್ತೆ ಮೇಲ್ದರ್ಜೆಗೇರಿಸುವ ಯೋಜನೆಗಳು. ಈ ಯೋಜನೆಗಳು ಸಂಪರ್ಕವನ್ನು ಸುಧಾರಿಸುತ್ತವೆ, ಪ್ರಯಾಣದ ಸಮಯವನ್ನು ಕಡಿಮೆ ಮಾಡುತ್ತವೆ ಮತ್ತು ಈ ಪ್ರದೇಶದಲ್ಲಿಸಾಮಾಜಿಕ-ಆರ್ಥಿಕ ಅಭಿವೃದ್ಧಿಯನ್ನು ಹೆಚ್ಚಿಸುತ್ತವೆ. ಪ್ರಧಾನಮಂತ್ರಿಯವರು ಯವತ್ಮಾಲ್‌ ನಗರದಲ್ಲಿ ಪಂಡಿತ್‌ ದೀನ್‌ ದಯಾಳ್‌ ಉಪಾಧ್ಯಾಯ ಅವರ ಪ್ರತಿಮೆಯನ್ನು ಉದ್ಘಾಟಿಸಲಿದ್ದಾರೆ.

****



(Release ID: 2009673) Visitor Counter : 58