ರಾಷ್ಟ್ರಪತಿಗಳ ಕಾರ್ಯಾಲಯ
ಐಟಿಎಸ್ ಸುವರ್ಣ ಮಹೋತ್ಸವದ ಅಂಗವಾಗಿ ಐಐಎಂ-ಬೆಂಗಳೂರಿನ ಸಂಸ್ಥಾಪನಾ ಸಪ್ತಾಹ ಉದ್ಘಾಟಿಸಿದ ರಾಷ್ಟ್ರಪತಿ ದ್ರೌಪತಿ ಮುರ್ಮು
ಐಎಂಎಂ-ಬೆಂಗಳೂರು ನೈಜ ಪ್ರತಿಭೆಗಳಿಗೆ ಆಕಾಂಕ್ಷೆಗಳನ್ನು ಮತ್ತು ಉತ್ತಮ ಉದ್ದೇಶಗಳನ್ನು ಪೂರೈಸುವ ನೆಲೆಯಾಗಿದೆ: ರಾಷ್ಟ್ರಪತಿ ಮುರ್ಮು
Posted On:
26 OCT 2023 5:51PM by PIB Bengaluru
ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಇಂದು (ಅಕ್ಟೋಬರ್ 26, 2023) ಕರ್ನಾಟಕದ ಬೆಂಗಳೂರಿನಲ್ಲಿಂದು ಭಾರತೀಯ ನಿರ್ವಹಣಾ(ಆಡಳಿತ) ಸಂಸ್ಥೆ(ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್)-ಬೆಂಗಳೂರಿನ ಸುವರ್ಣ ಮಹೋತ್ಸವದ ಅಂಗವಾಗಿ ಸಂಸ್ಥಾಪನಾ ಸಪ್ತಾಹ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಐಐಎಂ-ಬೆಂಗಳೂರು ನಿರ್ವಹಣೆ ಅಥವಾ ಆಡಳಿತ ಕ್ಷೇತ್ರದ ನೈಜ ಪ್ರತಿಭೆಗಳು ಮತ್ತು ಸಂಪನ್ಮೂಲಗಳನ್ನು ಪೋಷಿಸುತ್ತಿದೆ ಮತ್ತು ಉತ್ತೇಜಿಸುತ್ತಾ ಬಂದಿದೆ. ಕಳೆದ 50 ವರ್ಷಗಳಿಂದ ಇದು ವ್ಯವಸ್ಥಾಪಕರನ್ನು ಮಾತ್ರವಲ್ಲದೆ ಉದ್ಯಮ ನಾಯಕರು, ಅನುಶೋಧಕರು, ಉದ್ಯಮಶೀಲರು ಮತ್ತು ಬದಲಾವಣೆಯ ಹರಿಕಾರರನ್ನು ಸೃಜಿಸಿದೆ. ಈ ಸಂಸ್ಥೆಯ ಶಿಕ್ಷಣವು ನಿಯಮಿತ ಸಭೆ ಸಭಾಂಗಣಗಳು, ಕಾರ್ಯಕ್ಷೇತ್ರ ಮತ್ತು ಮಾರುಕಟ್ಟೆಗಳಿಗೆ ಮಾತ್ರವಲ್ಲದೆ, ಜೀವನದ ಪ್ರತಿಯೊಂದು ಕಲ್ಪಿತ ಮತ್ತು ಗ್ರಹಿಸಬಹುದಾದ ದೈನಂದಿನ ನಡಿಗೆಯ ಪ್ರತಿ ಹಂತದಲ್ಲೂ ಎದುರಾಗುವ ನಾನಾ ಸಮಸ್ಯೆಗಳು, ಸವಾಲುಗಳು ಮತ್ತು ವಿವಾದಗಳನ್ನು ಸಮರ್ಥವಾಗಿ ನಿಭಾಯಿಸಲು ಉತ್ತಮ ಮನಸ್ಸುಗಳನ್ನು ಸಿದ್ಧಪಡಿಸುತ್ತಿದೆ ಎಂದರು.
ಈ ಸಂಸ್ಥೆ ಆರಂಭವಾದ ದಿನದಿಂದಲೂ, ಇಲ್ಲಿರುವ ವೃತ್ತಿಪರತೆ, ದಕ್ಷತೆ ಮತ್ತು ಸಾಮರ್ಥ್ಯದಿಂದಾಗಿ, ಐಐಎಂ-ಬೆಂಗಳೂರು ಸದಾ ಎತ್ತರದಲ್ಲಿ ನಿಂತು ತನ್ನ ನೈಜ ಸಾಮರ್ಥ್ಯವನ್ನು ಸಾಬೀತುಪಡಿಸುತ್ತಾ ಬಂದಿರುವ ವಿಶಿಷ್ಟ ಲಕ್ಷಣ ಹೊಂದಿದೆ. ಇದು ನಾವೀನ್ಯತೆ ಮತ್ತು ಸಾಮರ್ಥ್ಯ ನಿರ್ಮಾಣದ ಪ್ರವರ್ತಕ ಸಂಸ್ಥೆಯಾಗಿದೆ. ಇದು ಶಿಕ್ಷಣ ಮತ್ತು ಸಂಶೋಧನೆಯ ಮೇಲೆ ಶಾಶ್ವತವಾದ ಪ್ರಭಾವ ಬೀರಿದೆ. ನಾವು ರೋಚಕ ಅಥವಾ ಉತ್ತೇಜನಕಾರಿ ಕಾಲಘಟ್ಟದಲ್ಲಿ ಬದುಕುತ್ತಿದ್ದೇವೆ, ಇದು 4ನೇ ಕೈಗಾರಿಕಾ ಕ್ರಾಂತಿಯ ಯುಗವಾಗಿದೆ. ಕೃತಕ ಬುದ್ಧಿಮತ್ತೆ, ಬಿಗ್ ಡೇಟಾ ಮತ್ತು ಮೆಷಿನ್ ಲರ್ನಿಂಗ್ ಮತ್ತಿತರ ತಂತ್ರಜ್ಞಾನ ಕ್ಷೇತ್ರದಲ್ಲಿ ಐಐಎಂ-ಬೆಂಗಳೂರು ಹೊಂದಿರುವ ದತ್ತಾಂಶ ಕೇಂದ್ರ ಮತ್ತು ವಿಶ್ಲೇಷಣಾ ಪ್ರಯೋಗಾಲಯವು ಮಾಡುತ್ತಿರುವ ಕೆಲಸವು ವ್ಯವಹಾರ ಮತ್ತು ಆರ್ಥಿಕತೆಯ ಭವಿಷ್ಯದ ಮೇಲೆ ಆಳವಾದ ಪ್ರಭಾವ ಬೀರುತ್ತಿದೆ ಎಂದು ರಾಷ್ಟ್ರಪತಿ ತಿಳಿಸಿದರು.
ಶ್ರೇಷ್ಠತೆ ಮತ್ತು ಸಾಮರ್ಥ್ಯಕ್ಕೆ ಹೆಸರಾಗಿರುವ ಐಐಎಂ-ಬೆಂಗಳೂರನ್ನು ರಾಷ್ಟ್ರೀಯ ಪ್ರಾಮುಖ್ಯತೆಯ ಸಂಸ್ಥೆ ಎಂದು ಘೋಷಿಸಲಾಗಿದೆ. ಈ ಸಂಸ್ಥೆಯಲ್ಲಿ ಟ್ರಸ್ಟ್ ಅನ್ನು ಮರುಸ್ಥಾಪಿಸಲಾಗಿದೆ. ಇದು ಬಹಳಷ್ಟು ಭರವಸೆ ಮತ್ತು ಆಶಾವಾದದಿಂದ ಕಾಣುತ್ತಿದೆ. ಈ ಸಂಸ್ಥೆಯು ನೈಜ ಪ್ರತಿಭೆಗಳ ಆಕಾಂಕ್ಷೆಗಳು ಮತ್ತು ಒಳ್ಳೆಯ ಉದ್ದೇಶಗಳನ್ನು ಪೂರೈಸುವ ಸೂಕ್ತ ನೆಲೆಯಾಗಿದೆ ಎಂದು ಅವರು ಹೇಳಿದರು.
ಭವಿಷ್ಯದ ಸಂಪತ್ತು ಸೃಷ್ಟಿಕರ್ತರು ಮಹಾತ್ಮ ಗಾಂಧಿ ಅವರ ಜೀವನದ ಪಾಠಗಳನ್ನು ಅಳವಡಿಸಿಕೊಳ್ಳಬೇಕೆಂದು ರಾಷ್ಟ್ರಪತಿ ಕರೆ ನೀಡಿದರು. ಅವರ ಪಾಠಗಳು ವ್ಯವಹಾರದ ನೀತಿಗಳಿಗೆ ಹೊಂದಿಕೆ ಆಗುವುದಿಲ್ಲ. ನೈತಿಕತೆ ಇಲ್ಲದಿದ್ದರೆ, ಯಶಸ್ಸು ಪಾಪಕರ ಎಂದು ಗಾಂಧೀಜಿ ಒತ್ತಿ ಹೇಳಿದ್ದರು. ವಿದ್ಯಾರ್ಥಿಗಳು ವೃತ್ತಿಪರ ಮತ್ತು ವೈಯಕ್ತಿಕ ಜೀವನದಲ್ಲಿ ಉತ್ಕೃಷ್ಟತೆಯನ್ನೇ ಗುರಿಯಾಗಿಟ್ಟುಕೊಳ್ಳಬೇಕು. ಐಐಎಂ-ಬೆಂಗಳೂರು ಜತೆಗಿನ ತಮ್ಮ ಒಡನಾಟದೊಂದಿಗೆ, ಶ್ರೇಷ್ಠ ಪರಂಪರೆಗೆ ತಕ್ಕಂತೆ ಬದುಕಬೇಕು ಎಂದು ಮುರ್ಮು ಸಲಹೆ ನೀಡಿದರು. ಪೂರ್ವಜರಿಂದ ಅಥವಾ ಪರಂಪರಾನುಗತವಾಗಿ ಬಂದಿರುವ ಜಗತ್ತಿನ ಬಗ್ಗೆ ದೂರದೆ, ಮುಂದಿನ ಪೀಳಿಗೆ ದೂರಲು ಏನೂ ಇಲ್ಲದಂತೆ ಸೌಹಾರ್ದತೆ, ಆಶಾವಾದ, ಸಮೃದ್ಧಿ, ಸಮಾನತೆಯಿಂದ ಬದುಕುವ ಜಗತ್ತನ್ನು ಸೃಜಿಸಿ, ಬಿಟ್ಟು ಹೋಗಬೇಕು ಎಂದು ರಾಷ್ಟ್ರಪತಿ ಕಿವಿಮಾತು ಹೇಳಿದರು.
ರಾಷ್ಟ್ರಪತಿ ಅವರ ಭಾಷಣವನ್ನು ಆಲಿಸಲು ದಯವಿಟ್ಟು ಇಲ್ಲಿ ಕ್ಲಿಕ್ ಮಾಡಿ.
*****
(Release ID: 1971813)