ಪ್ರಧಾನ ಮಂತ್ರಿಯವರ ಕಛೇರಿ

ಮಧ್ಯಪ್ರದೇಶದ ಸಾಗರ್ ನಲ್ಲಿ ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನ ಮಂತ್ರಿ ಅವರಿಂದ ಶಂಕುಸ್ಥಾಪನೆ ಮತ್ತು ರಾಷ್ಟ್ರಕ್ಕೆ ಸಮರ್ಪಣೆ 


100 ಕೋಟಿ ರೂ.ಗೂ ಅಧಿಕ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಸಂತ ಶಿರೋಮಣಿ ಗುರುದೇವ್ ಶ್ರೀ ರವಿದಾಸ್ ಜೀ ಸ್ಮಾರಕಕ್ಕೆ ಶಂಕುಸ್ಥಾಪನೆ

1580 ಕೋಟಿ ರೂ.ಗಳಿಗೂ  ಅಧಿಕ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವ ಎರಡು ರಸ್ತೆ ಯೋಜನೆಗಳಿಗೆ ಶಂಕುಸ್ಥಾಪನೆ

2475 ಕೋಟಿ ರೂ.ಗೂ ಅಧಿಕ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾದ ಕೋಟಾ-ಬಿನಾ ದ್ವಿಪಥಗೊಳಿಸಿದ ರೈಲು ಮಾರ್ಗ ರಾಷ್ಟ್ರಕ್ಕೆ ಸಮರ್ಪಣೆ

"ಸಂತ ಶಿರೋಮಣಿ ಗುರುದೇವ್ ಶ್ರೀ ರವಿದಾಸ್ ಜಿ ಸ್ಮಾರಕವು ಭವ್ಯತೆ ಮತ್ತು ದೈವತ್ವವನ್ನು ಹೊಂದಿರುತ್ತದೆ"

 "ಸಂತ ರವಿದಾಸ್ ಜೀ ಅವರು ದಬ್ಬಾಳಿಕೆಯ ವಿರುದ್ಧ ಹೋರಾಡಲು ಸಮಾಜಕ್ಕೆ ಶಕ್ತಿಯನ್ನು ನೀಡಿದರು"

"ಇಂದು, ರಾಷ್ಟ್ರವು ಗುಲಾಮಗಿರಿಯ ಮನಸ್ಥಿತಿಯನ್ನು ತಿರಸ್ಕರಿಸುತ್ತಿದೆ ಮತ್ತು ವಿಮೋಚನೆಯ ಮನೋಭಾವದೊಂದಿಗೆ ಮುನ್ನಡೆಯುತ್ತಿದೆ.  

"ಅಮೃತ್ ಕಾಲದಲ್ಲಿ, ನಾವು ದೇಶದಿಂದ ಬಡತನ ಮತ್ತು ಹಸಿವನ್ನು ನಿರ್ಮೂಲನೆ ಮಾಡಲು ಪ್ರಯತ್ನಿಸುತ್ತಿದ್ದೇವೆ"

"ಬಡವರ ಹಸಿವು ಮತ್ತು ಸ್ವಾಭಿಮಾನದ ನೋವು ನನಗೆ ತಿಳಿದಿದೆ. ನಾನು ನಿಮ್ಮ ಕುಟುಂಬದ ಸದಸ್ಯ ಮತ್ತು ನಿಮ್ಮ ನೋವನ್ನು ಅರ್ಥಮಾಡಿಕೊಳ್ಳಲು ನಾನು ಪುಸ್ತಕಗಳನ್ನು ನೋಡುವ ಅಗತ್ಯವಿಲ್ಲ" 

" ಬಡವರ ಕಲ್ಯಾಣ ಮತ್ತು ಸಮಾಜದ ಪ್ರತಿಯೊಂದು ವರ್ಗದ ಸಬಲೀಕರಣದ ಮೇಲೆ ಇದೆ ನಾವು ಗಮನ ಇಟ್ಟಿದ್ದೇವೆ"

Posted On: 12 AUG 2023 4:53PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಮಧ್ಯಪ್ರದೇಶದ ಸಾಗರ್ ನಲ್ಲಿ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು ಮತ್ತು  ರಾಷ್ಟ್ರಕ್ಕೆ ಸಮರ್ಪಿಸಿದರು. 100 ಕೋಟಿ ರೂ.ಗಳಿಗಿಂತ ಅಧಿಕ  ವೆಚ್ಚದಲ್ಲಿ ನಿರ್ಮಿಸಲಾಗುವ ಸಂತ ಶಿರೋಮಣಿ ಗುರುದೇವ್ ಶ್ರೀ ರವಿದಾಸ್ ಜಿ ಸ್ಮಾರಕಕ್ಕೆ ಶಂಕುಸ್ಥಾಪನೆ, 1580 ಕೋಟಿ ರೂ.ಗಳಿಗಿಂತ ಹೆಚ್ಚು ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವ ಎರಡು ರಸ್ತೆ ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು 2475 ಕೋಟಿ ರೂ.ಗಳಿಗಿಂತ ಹೆಚ್ಚು ವೆಚ್ಚದಲ್ಲಿ ಅಭಿವೃದ್ಧಿಪಡಿಸಿದ ಕೋಟಾ-ಬಿನಾ ರೈಲು ಮಾರ್ಗ ರಾಷ್ಟ್ರಕ್ಕೆ ಸಮರ್ಪಣೆ ಈ ಯೋಜನೆಗಳಲ್ಲಿ ಸೇರಿವೆ.

ಸಭಿಕರನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಸಂತರ ಉಪಸ್ಥಿತಿ, ಸಂತ ರವಿದಾಸ್ ಅವರ ಆಶೀರ್ವಾದ ಮತ್ತು ಸಮಾಜದ ವಿವಿಧ ವರ್ಗಗಳನ್ನು ಒಳಗೊಂಡ ಬೃಹತ್ ಜನಸಮೂಹದಿಂದ ಇಂದು ಸಾಗರ ಭೂಮಿ ಸಾಮರಸ್ಯದ ಸಾಗರಕ್ಕೆ ಸಾಕ್ಷಿಯಾಗಿರುವುದನ್ನು ಯಾರೊಬ್ಬರೂ ಕಾಣಬಹುದಾಗಿದೆ ಎಂದರು. ಸಂತ ಶಿರೋಮಣಿ ಗುರುದೇವ್ ಶ್ರೀ ರವಿದಾಸ್ ಜೀ ಸ್ಮಾರಕಕ್ಕೆ ಇಂದು ಶಂಕುಸ್ಥಾಪನೆ ನೆರವೇರಿಸಲಾಗಿದ್ದು, ರಾಷ್ಟ್ರದ ಪರಸ್ಪರ ಹಂಚಿಕೆಯ ಸಮೃದ್ಧಿಯನ್ನು ಮತ್ತಷ್ಟು ಹೆಚ್ಚಿಸಲು ಇದು ಸಹಕಾರಿ  ಎಂದರು. ಸಂತರ ಆಶೀರ್ವಾದದೊಂದಿಗೆ, ಇಂದು ಮುಂಜಾನೆ ದೈವಿಕ ಸ್ಮಾರಕದ 'ಭೂಮಿ ಪೂಜೆ'ಯಲ್ಲಿ ಭಾಗವಹಿಸಿದ್ದನ್ನು ಸ್ಮರಿಸಿದ ಪ್ರಧಾನಮಂತ್ರಿಯವರು, ಕೆಲವೇ ವರ್ಷಗಳಲ್ಲಿ ದೇವಾಲಯ ಪೂರ್ಣಗೊಂಡಾಗ ಅದನ್ನು ಉದ್ಘಾಟಿಸಲು ತಾವು ಬರುವ ಬಗ್ಗೆ  ವಿಶ್ವಾಸ ವ್ಯಕ್ತಪಡಿಸಿದರು. ವಾರಣಾಸಿಯ ಸಂಸದರಾಗಿ ತಾವು, ಸಂತ ರವಿದಾಸ್ ಜೀ ಅವರ ಜನ್ಮಸ್ಥಳಕ್ಕೆ ಹಲವು ಸಂದರ್ಭಗಳಲ್ಲಿ ಭೇಟಿ ನೀಡಿದ ಬಗ್ಗೆ ಪ್ರಧಾನ ಮಂತ್ರಿ ಅವರು ಪ್ರಸ್ತಾಪಿಸಿದರು ಮತ್ತು ಮಧ್ಯಪ್ರದೇಶದ ಸಾಗರ್ ನಿಂದ ಇಂದು ಅವರಿಗೆ ಗೌರವ ನಮನವನ್ನೂ  ಸಲ್ಲಿಸಿದರು. 

ಸಂತ ಶಿರೋಮಣಿ ಗುರುದೇವ್ ಶ್ರೀ ರವಿದಾಸ್ ಜೀ ಸ್ಮಾರಕವು ಸಂತ ರವಿದಾಸ್ ಜೀ ಅವರ ಬೋಧನೆಯ  ಭವ್ಯತೆ ಮತ್ತು ದೈವತ್ವವನ್ನು ಹೊಂದಿರುತ್ತದೆ ಎಂದು ಪ್ರಧಾನಿ ಹೇಳಿದರು. 20,000 ಕ್ಕೂ ಹೆಚ್ಚು ಹಳ್ಳಿಗಳ ಮಣ್ಣು ಮತ್ತು 300 ನದಿಗಳ ಜಲವನ್ನು ಬಳಸಲಾಗಿರುವುದರಿಂದ ಸ್ಮಾರಕವು 'ಸಮ್ರಸ್ತ'ದ ಸ್ಫೂರ್ತಿಯನ್ನು ಹೊಂದಲಿದೆ ಎಂದು ಅವರು ಮಾಹಿತಿ ನೀಡಿದರು. ಮಧ್ಯಪ್ರದೇಶದ ಕುಟುಂಬಗಳು 'ಸಮ್ರಸ್ತ ಭೋಜ್' ಗಾಗಿ ಧಾನ್ಯವನ್ನು ಕಳುಹಿಸಿವೆ ಮತ್ತು ಐದು ಯಾತ್ರೆಗಳು ಇಂದು ಸಾಗರದಲ್ಲಿ ಸಮಾರೋಪಗೊಂಡಿವೆ. "ಈ ಯಾತ್ರೆಗಳು ಸಾಮಾಜಿಕ ಸಾಮರಸ್ಯದ ಹೊಸ ಯುಗವನ್ನು ಸಂಕೇತಿಸುತ್ತವೆ" ಎಂದು ಪ್ರಧಾನಿ ಹೇಳಿದರು. ಸ್ಫೂರ್ತಿ ಮತ್ತು ಪ್ರಗತಿ (ಪ್ರೇರಣೆ ಮತ್ತು ಪ್ರಗತಿ) ಜೊತೆ ಸೇರಿದಾಗ ಹೊಸ ಯುಗಕ್ಕೆ ನಾಂದಿ ಹಾಡಲಾಗುತ್ತದೆ ಎಂದೂ ಪ್ರಧಾನಿ ಹೇಳಿದರು. ಎರಡು ರಸ್ತೆ ಯೋಜನೆಗಳು ಮತ್ತು ಕೋಟಾ-ಬಿನಾ ರೈಲು ಮಾರ್ಗದ ಹಳಿ ದ್ವಿಗುಣಗೊಳಿಸುವಿಕೆಯನ್ನು ಪ್ರಸ್ತಾಪಿಸಿದ ಅವರು, ಈ ಅಭಿವೃದ್ಧಿ ಯೋಜನೆಗಳು ಸಾಗರ ಮತ್ತು ಹತ್ತಿರದ ಪ್ರದೇಶಗಳ ಜನರಿಗೆ ಉತ್ತಮ ಸೌಲಭ್ಯಗಳನ್ನು ಒದಗಿಸುತ್ತವೆ ಎಂದರು. 

ರಾಷ್ಟ್ರವು ಸ್ವಾತಂತ್ರ್ಯದ 75 ವರ್ಷಗಳನ್ನು ಪೂರೈಸಿರುವ ಮತ್ತು ಅಮೃತಕಾಲದ ಮುಂದಿನ 25 ವರ್ಷಗಳು ನಮ್ಮ ಮುಂದೆ ಇರುವ ಸಮಯದಲ್ಲಿ ಸಂತ ರವಿದಾಸ್ ಜೀ ಸ್ಮಾರಕ ಮತ್ತು ವಸ್ತುಸಂಗ್ರಹಾಲಯದ ಅಡಿಪಾಯ ಆಗುತ್ತಿದೆ ಎಂದು ಪ್ರಧಾನಿ ಹೇಳಿದರು. ಅವರು ನಮ್ಮ ಗತಕಾಲದಿಂದ ಪಾಠಗಳನ್ನು ಕಲಿಯುವುದರ ಜೊತೆಗೆ ಈ ನೆಲದ  ಪರಂಪರೆಯನ್ನು ಮುಂದುವರಿಸಲು ಒತ್ತು ನೀಡಬೇಕು ಎಂದರು. ದೇಶವು ಸಾವಿರ ವರ್ಷಗಳ ಪ್ರಯಾಣವನ್ನು ಪೂರ್ಣಗೊಳಿಸಿದೆ ಎಂದು ಹೇಳಿದ ಪ್ರಧಾನಮಂತ್ರಿಯವರು, ಸಮಾಜದಲ್ಲಿ ದುಷ್ಟ ಶಕ್ತಿಗಳು  ಮೂಡಿ ಬರುವುದು  ಸ್ವಾಭಾವಿಕ ಘಟನೆ ಎಂದರು. ಇಂತಹ ದುಷ್ಕೃತ್ಯಗಳನ್ನು, ದುಷ್ಟ ಶಕ್ತಿಗಳನ್ನು  ತೊಡೆದುಹಾಕಲು ರವಿದಾಸ್ ಜೀ ಅವರಂತಹ ಸಂತ ಅಥವಾ ಮಹಾತ್ಮರು ಮತ್ತೆ ಮೂಡಿಬರುವುದು  ಭಾರತೀಯ ಸಮಾಜದ ಶಕ್ತಿ ಎಂದು ಅವರು ಒತ್ತಿ ಹೇಳಿದರು. ಸಂತ ರವಿದಾಸ್ ಜೀ ಅವರು ಮೊಘಲರು ಭೂಮಿಯನ್ನು ಆಳುತ್ತಿದ್ದ ಕಾಲದಲ್ಲಿ  ಜನಿಸಿದರು ಮತ್ತು ಸಮಾಜವು ಅಸಮತೋಲನ, ಹಿಂದುಳಿಯುವಿಕೆ  ಮತ್ತು ದಬ್ಬಾಳಿಕೆಯೊಂದಿಗೆ ಹೋರಾಡುತ್ತಿದ್ದ ಕಾಲಘಟ್ಟ ಅದಾಗಿತ್ತು ಎಂದು ಅವರು ಮಾಹಿತಿ ನೀಡಿದರು. ಇಂತಹ ಸಮಯದಲ್ಲಿ ಸಂತ ರವಿದಾಸ್ ಜೀ ಅವರು ಜಾಗೃತಿ ಮೂಡಿಸುತ್ತಿದ್ದರು ಮತ್ತು ಸಮಾಜದ ದುಷ್ಕೃತ್ಯಗಳನ್ನು, ದುಷ್ಟಶಕ್ತಿಗಳನ್ನು  ತೊಡೆದುಹಾಕುವ ಮಾರ್ಗಗಳನ್ನು ಬೋಧಿಸುತ್ತಿದ್ದರು ಎಂಬುದನ್ನೂ  ಅವರು ಉಲ್ಲೇಖಿಸಿದರು. ಸಂತ ರವಿದಾಸ್ ಜೀ ಅವರನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ಒಂದೆಡೆ ಜನರು ಜಾತಿ ಮತಗಳನ್ನು ನಿಭಾಯಿಸುತ್ತಿದ್ದರೆ, ಮತ್ತೊಂದೆಡೆ ದುಷ್ಟಶಕ್ತಿಗಳು ಕ್ರಮೇಣ ಮಾನವೀಯತೆಯನ್ನು ಕ್ಷೀಣಿಸುವಂತೆ ಮಾಡುತ್ತಿವೆ ಎಂದರು. ಸಂತ ರವಿದಾಸ್ ಜೀ ಅವರು ಸಮಾಜದಲ್ಲಿ ಚಾಲ್ತಿಯಲ್ಲಿದ್ದ ದುಷ್ಕೃತ್ಯಗಳ ವಿರುದ್ಧ ಧ್ವನಿ ಎತ್ತುತ್ತಿದ್ದರು ಮತ್ತು ರಾಷ್ಟ್ರದ ಆತ್ಮವನ್ನು ಪುನರುಜ್ಜೀವನಗೊಳಿಸುತ್ತಿದ್ದರು ಎಂದು ಪ್ರಧಾನಿ ಮಾಹಿತಿ ನೀಡಿದರು. ಮೊಘಲ್ ಆಳ್ವಿಕೆಯಲ್ಲಿ ಸಂತ ರವಿದಾಸ್ ಜೀ ಅವರ ಶೌರ್ಯ ಮತ್ತು ದೇಶಭಕ್ತಿಯನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಅವಲಂಬನೆ ದೊಡ್ಡ ಪಾಪವಾಗಿದೆ ಮತ್ತು ಅದನ್ನು ಅಂಗೀಕರಿಸುವವರು ಮತ್ತು ಅದರ ವಿರುದ್ಧ ನಿಲುವು ತೆಗೆದುಕೊಳ್ಳದವರನ್ನು ಯಾರೊಬ್ಬರೂ ಪ್ರೀತಿಸುವುದಿಲ್ಲ ಎಂದು ಹೇಳಿದರು. ಈ ಒಂದು ರೀತಿಯಲ್ಲಿ, ಸಂತ ರವಿದಾಸ್ ಜೀ ಅವರು ದಬ್ಬಾಳಿಕೆಯ ವಿರುದ್ಧ ಹೋರಾಡಲು ಸಮಾಜಕ್ಕೆ ಶಕ್ತಿಯನ್ನು ನೀಡಿದರು ಮತ್ತು ಛತ್ರಪತಿ ಶಿವಾಜಿ ಅದನ್ನು ಹಿಂದವಿ ಸ್ವರಾಜ್ಯದ ಅಡಿಪಾಯ ಹಾಕಲು ಸ್ಫೂರ್ತಿಯಾಗಿ ಬಳಸಿದರು ಎಂದೂ  ಪ್ರಧಾನಿ ಒತ್ತಿ ಹೇಳಿದರು. ಈ ಭಾವನೆಯೇ ಭಾರತದ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಲಕ್ಷಾಂತರ ಸ್ವಾತಂತ್ರ್ಯ ಹೋರಾಟಗಾರರ ಹೃದಯದಲ್ಲಿ ಸ್ಥಾನ ಪಡೆಯಿತು ಎಂದು ಅವರು ಹೇಳಿದರು. "ಇಂದು, ರಾಷ್ಟ್ರವು ಗುಲಾಮಗಿರಿಯ ಮನಸ್ಥಿತಿಯನ್ನು ತಿರಸ್ಕರಿಸಿ ಅದೇ ವಿಮೋಚನೆಯ ಮನೋಭಾವದೊಂದಿಗೆ ಮುನ್ನಡೆಯುತ್ತಿದೆ" ಎಂದೂ  ಪ್ರಧಾನಿ ನುಡಿದರು.

 ಸಾಮಾಜಿಕ ಸಮಾನತೆ ಮತ್ತು ಎಲ್ಲರಿಗೂ ಸೌಲಭ್ಯಗಳ ಲಭ್ಯತೆ ಕುರಿತು ಸಂತ ರವಿದಾಸ್ ಅವರನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ಅಮೃತ ಕಾಲದಲ್ಲಿ ನಾವು ದೇಶದಿಂದ ಬಡತನ ಮತ್ತು ಹಸಿವನ್ನು ನಿರ್ಮೂಲನೆ ಮಾಡಲು ಪ್ರಯತ್ನಿಸುತ್ತಿದ್ದೇವೆ ಎಂದರು. ಜಾಗತಿಕ  ಸಾಂಕ್ರಾಮಿಕ ಸಮಯದಲ್ಲಿ ಬಡ ಮತ್ತು ಅವಕಾಶ ವಂಚಿತ ವರ್ಗಗಳಿಗೆ ಆಹಾರವನ್ನು ಒದಗಿಸುವ ತಮ್ಮ ಸಂಕಲ್ಪವನ್ನು ಅವರು ನೆನಪಿಸಿಕೊಂಡರು. "ಬಡವರ ಹಸಿವಿನ ನೋವು  ಮತ್ತು ಸ್ವಾಭಿಮಾನದ ಬಗ್ಗೆ ನನಗೆ ತಿಳಿದಿದೆ. ನಾನು ನಿಮ್ಮ ಕುಟುಂಬದ ಸದಸ್ಯನಾಗಿದ್ದೇನೆ ಮತ್ತು ನಿಮ್ಮ ನೋವನ್ನು ಅರ್ಥಮಾಡಿಕೊಳ್ಳಲು ನಾನು ಪುಸ್ತಕಗಳನ್ನು ನೋಡುವ ಅಗತ್ಯವಿಲ್ಲ", ಎಂದು ಶ್ರೀ ಮೋದಿ ಹೇಳಿದರು. ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ ಅಡಿಯಲ್ಲಿ 80 ಕೋಟಿಗೂ ಹೆಚ್ಚು ಜನರಿಗೆ ಉಚಿತ ಪಡಿತರವನ್ನು ಖಾತ್ರಿಪಡಿಸಲಾಗಿದೆ, ಈ ಸಾಧನೆಯು ಜಾಗತಿಕವಾಗಿ ಮೆಚ್ಚುಗೆಗೆ ಪಾತ್ರವಾಗಿದೆ ಎಂದೂ  ಪ್ರಧಾನಿ ಹೇಳಿದರು. ದೇಶದಲ್ಲಿ ನಡೆಯುತ್ತಿರುವ ಗರೀಬ್ ಕಲ್ಯಾಣ್ ಯೋಜನೆಗಳ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿಯವರು, ಮೊದಲಿಗಿಂತ ಭಿನ್ನವಾಗಿ, ರಾಷ್ಟ್ರವು ಜೀವನದ ಪ್ರತಿಯೊಂದು ಹಂತದಲ್ಲೂ ದಲಿತರು, ಬಡವರು, ಬುಡಕಟ್ಟು ಜನಾಂಗದವರು ಮತ್ತು ಮಹಿಳೆಯರ ಪರವಾಗಿ  ನಿಂತಿದೆ ಎಂದರು. ನವಜಾತ ಶಿಶುಗಳ ಒಟ್ಟು ಲಸಿಕೆ ಸುರಕ್ಷತೆಗಾಗಿ ಮಾತೃ ವಂದನಾ ಯೋಜನೆ ಮತ್ತು ಮಿಷನ್ ಇಂದ್ರಧನುಷ್ ಜಾರಿಗೆ ತರಲಾಗಿದೆ, ಇದರಡಿ  5.5 ಕೋಟಿಗೂ ಹೆಚ್ಚು ತಾಯಂದಿರು ಮತ್ತು ಮಕ್ಕಳಿಗೆ ರೋಗನಿರೋಧಕ ಶಕ್ತಿಯನ್ನು ಒದಗಿಸಲಾಗಿದೆ.  ಕಾಂಡ ಕೋಶ ರಕ್ತಹೀನತೆಯಿಂದ 7 ಕೋಟಿ ಭಾರತೀಯರನ್ನು ರಕ್ಷಿಸುವ ಅಭಿಯಾನ ಮತ್ತು 2025 ರ ವೇಳೆಗೆ ಭಾರತವನ್ನು ಕ್ಷಯರೋಗದಿಂದ ಮುಕ್ತಗೊಳಿಸುವ ಅಭಿಯಾನ ನಡೆಯುತ್ತಿದೆ ಎಂದೂ ಅವರು ಮಾಹಿತಿ ನೀಡಿದರು. ಕಾಲಾ-ಅಜರ್ ಮತ್ತು ಎನ್ಸೆಫಾಲಿಟಿಸ್ ಪ್ರಕರಣಗಳು ಕಡಿಮೆಯಾಗುತ್ತಿರುವುದರತ್ತವೂ  ಶ್ರೀ ಮೋದಿ ಬೆಟ್ಟು ಮಾಡಿದರು. ಆಯುಷ್ಮಾನ್ ಕಾರ್ಡ್ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿಯವರು, "ಜನರು ತಮಗೆ ಮೋದಿ ಕಾರ್ಡ್ ಸಿಕ್ಕಿದೆ ಎಂದು ಹೇಳುತ್ತಾರೆ. 5 ಲಕ್ಷ ರೂ.ವರೆಗಿನ ಚಿಕಿತ್ಸೆಯ ಅಗತ್ಯಗಳಿಗಾಗಿ, ನಿಮ್ಮ ಮಗ (ಪ್ರಧಾನಿ) ಅಲ್ಲಿದ್ದಾರೆ" ಎಂದು ಅವರು ಹೇಳಿದರು. 

ಜೀವನದಲ್ಲಿ ಶಿಕ್ಷಣದ ಮಹತ್ವವನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಬುಡಕಟ್ಟು ಪ್ರದೇಶಗಳಲ್ಲಿ ಪುಸ್ತಕಗಳು ಮತ್ತು ವಿದ್ಯಾರ್ಥಿವೇತನಗಳು ಹಾಗು  ದೃಢವಾದ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಹೊಂದಿರುವ 700 ಏಕಲವ್ಯ ಶಾಲೆಗಳನ್ನು ಉಲ್ಲೇಖಿಸಿದರು.  ಬಾಲಕಿಯರಿಗೆ ಸುಕನ್ಯಾ ಸಮೃದ್ಧಿ ಯೋಜನೆ, ಎಸ್ಸಿ, ಎಸ್ಟಿ ಮತ್ತು ಒಬಿಸಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, ಮುದ್ರಾ ಸಾಲಗಳ ಅಡಿಯಲ್ಲಿ ಹೆಚ್ಚಿನ ಸಂಖ್ಯೆಯ ಎಸ್ಸಿ, ಎಸ್ಟಿ ಸಮುದಾಯದ ಸದಸ್ಯರಿಗೆ ಸಾಲಗಳಂತಹ ಕ್ರಮಗಳನ್ನು ಅವರು ಪಟ್ಟಿ ಮಾಡಿದರು. ಸ್ಟ್ಯಾಂಡಪ್ ಇಂಡಿಯಾ ಅಡಿಯಲ್ಲಿ ಎಸ್ಸಿ, ಎಸ್ಟಿ ಯುವಕರಿಗೆ 8 ಸಾವಿರ ಕೋಟಿ ರೂ.ಗಳ ಸಂಚಿತ ಆರ್ಥಿಕ ನೆರವು ಮತ್ತು ವಿದ್ಯುತ್, ನೀರು ಹಾಗು ಅನಿಲ ಸಂಪರ್ಕಗಳೊಂದಿಗೆ ಪ್ರಧಾನ ಮಂತ್ರಿ ಆವಾಸ್ ಜೊತೆಗೆ 90 ಅರಣ್ಯ ಉತ್ಪನ್ನಗಳನ್ನು ಎಂಎಸ್ ಪಿ ಅಡಿಯಲ್ಲಿ ಸೇರ್ಪಡೆ ಬಗ್ಗೆಯೂ ಅವರು ಮಾತನಾಡಿದರು. "ಎಸ್ಸಿ-ಎಸ್ಟಿ ಸಮಾಜದ ಜನರು ಇಂದು ತಮ್ಮ ಕಾಲ ಮೇಲೆ ನಿಂತಿದ್ದಾರೆ. ಅವರು ಸಮಾನತೆಯೊಂದಿಗೆ ಸಮಾಜದಲ್ಲಿ ಸರಿಯಾದ ಸ್ಥಾನವನ್ನು ಪಡೆಯುತ್ತಿದ್ದಾರೆ" ಎಂದು ಅವರು ಹೇಳಿದರು. 

"ಸಾಗರ ಎಂತಹ  ಜಿಲ್ಲೆ ಎಂದರೆ, ಅದರ ಹೆಸರಿನಲ್ಲಿ ಸಾಗರವಿದೆ ಮತ್ತು ಇದನ್ನು 400 ಎಕರೆ ಲಖಾ ಬಂಜಾರಾ ಸರೋವರದೊಂದಿಗೆ ಗುರುತಿಸಲಾಗುತ್ತಿದೆ" ಎಂದು ಪ್ರಧಾನಿ ಹೇಳಿದರು. ಈ ಪ್ರದೇಶದೊಂದಿಗೆ ಸಂಬಂಧ ಹೊಂದಿರುವ ಲಖಾ ಬಂಜಾರಾ ಅವರನ್ನು ಪ್ರಸ್ತಾಪಿಸಿದ ಪ್ರಧಾನ ಮಂತ್ರಿ ಅವರು ಲಖಾ ಬಂಜಾರ ಅನೇಕ ವರ್ಷಗಳ ಹಿಂದೆಯೇ ನೀರಿನ ಮಹತ್ವವನ್ನು ಅರ್ಥಮಾಡಿಕೊಂಡಿದ್ದರು ಎಂದೂ ನುಡಿದರು. ಹಿಂದಿನ ಸರ್ಕಾರಗಳು ಬಡವರಿಗೆ ಕುಡಿಯುವ ನೀರನ್ನು ಒದಗಿಸಬೇಕಿತ್ತು,  ಇಂದು ಈ ಕಾರ್ಯವನ್ನು ಜಲ ಜೀವನ್ ಮಿಷನ್ ಸಾಧಿಸುತ್ತಿದೆ ಎಂದರು. ದಲಿತ ಜನವಸತಿಗಳು, ಹಿಂದುಳಿದ ಪ್ರದೇಶಗಳು ಮತ್ತು ಬುಡಕಟ್ಟು ಪ್ರದೇಶಗಳಿಗೆ ಕೊಳವೆ ನೀರು ತಲುಪುತ್ತಿದೆ ಎಂದು ಅವರು ಮಾಹಿತಿ ನೀಡಿದರು. ಲಖಾ ಬಂಜಾರ ಸಂಪ್ರದಾಯವನ್ನು ಅನುಸರಿಸಿ ಅದನ್ನು ಮುಂದಕ್ಕೆ ಕೊಂಡೊಯ್ದು ಪ್ರತಿ ಜಿಲ್ಲೆಯಲ್ಲಿ 75 ಅಮೃತ ಸರೋವರಗಳನ್ನು ನಿರ್ಮಿಸಲಾಗುತ್ತಿದೆ ಎಂದು ಪ್ರಧಾನಿ ಹೇಳಿದರು. "ಈ ಸರೋವರಗಳು ಸ್ವಾತಂತ್ರ್ಯದ ಸ್ಫೂರ್ತಿಯ ಸಂಕೇತವಾಗಲಿವೆ, ಸಾಮಾಜಿಕ ಸಾಮರಸ್ಯದ ಕೇಂದ್ರವಾಗಲಿವೆ" ಎಂದೂ  ಶ್ರೀ ಮೋದಿ ಹೇಳಿದರು.

ಸರ್ಕಾರವು ದೇಶದ ದಲಿತರು, ವಂಚಿತರು, ಹಿಂದುಳಿದವರು ಮತ್ತು ಬುಡಕಟ್ಟು ಜನರಿಗೆ ಸೂಕ್ತ ಗೌರವವನ್ನು ನೀಡಿ, ಹೊಸ ಅವಕಾಶಗಳನ್ನು ಒದಗಿಸುತ್ತಿದೆ ಎಂದು ಪ್ರಧಾನಿ ಒತ್ತಿ ಹೇಳಿದರು. "ಈ ಸಮಾಜದ ಜನರು ದುರ್ಬಲರಲ್ಲ, ಮಾತ್ರವಲ್ಲ ಅವರ ಇತಿಹಾಸವೂ ದುರ್ಬಲವಾದುದಲ್ಲ" ಎಂದು ಹೇಳಿದ ಪ್ರಧಾನಮಂತ್ರಿಯವರು, ಈ ಸಮಾಜದಿಂದ ರಾಷ್ಟ್ರ ನಿರ್ಮಾಣದಲ್ಲಿ ಅಸಾಧಾರಣ ಪಾತ್ರ ವಹಿಸಿದ ಮಹಾನ್ ವ್ಯಕ್ತಿಗಳು ಒಬ್ಬರ ನಂತರ ಒಬ್ಬರಂತೆ ಹೊರಹೊಮ್ಮಿದ್ದಾರೆ ಎಂದು ಒತ್ತಿ ಹೇಳಿದರು. ಅದಕ್ಕಾಗಿಯೇ ದೇಶವು ಅವರ ಪರಂಪರೆಯನ್ನು ಹೆಮ್ಮೆಯಿಂದ ಸಂರಕ್ಷಿಸುತ್ತಿದೆ ಎಂದು ಪ್ರಧಾನಿ ಹೇಳಿದರು. ಬನಾರಸ್ ನಲ್ಲಿ ಸಂತ ರವಿದಾಸ್ ಜೀ ಅವರ ಜನ್ಮಸ್ಥಳದಲ್ಲಿ ದೇವಾಲಯದ ಸೌಂದರ್ಯೀಕರಣ,  ಸಂತ ರವಿದಾಸ್ ಅವರ ಹೆಸರಿನಲ್ಲಿ ಭೋಪಾಲ್ ನ ಗೋವಿಂದಪುರದಲ್ಲಿ ನಿರ್ಮಿಸಲಾಗುತ್ತಿರುವ ಗ್ಲೋಬಲ್ ಸ್ಕಿಲ್ ಪಾರ್ಕ್, ಬಾಬಾ ಸಾಹೇಬ್ ಅವರ ಜೀವನಕ್ಕೆ ಸಂಬಂಧಿಸಿದ ಪ್ರಮುಖ ಸ್ಥಳಗಳನ್ನು ಪಂಚ ತೀರ್ಥವಾಗಿ ಅಭಿವೃದ್ಧಿಪಡಿಸುವುದು ಮತ್ತು ಬುಡಕಟ್ಟು ಸಮಾಜದ ಭವ್ಯ ಇತಿಹಾಸವನ್ನು ಅಮರಗೊಳಿಸಲು ಅನೇಕ ರಾಜ್ಯಗಳಲ್ಲಿ ವಸ್ತುಸಂಗ್ರಹಾಲಯಗಳ ಅಭಿವೃದ್ಧಿಯ ಉದಾಹರಣೆಗಳನ್ನು ಅವರು ನೀಡಿದರು. ಭಗವಾನ್ ಬಿರ್ಸಾ ಮುಂಡಾ ಅವರ ಜನ್ಮ ದಿನಾಚರಣೆಯನ್ನು ರಾಷ್ಟ್ರವು ಜನಜಾತೀಯ ಗೌರವ್ ದಿವಸ್ ಎಂದು ಆಚರಿಸಲು ಪ್ರಾರಂಭಿಸಿದೆ ಎಂದು ಪ್ರಧಾನಿ ಮಾಹಿತಿ ನೀಡಿದರು. ಮಧ್ಯಪ್ರದೇಶದ ಹಬೀಬ್ಗಂಜ್ ರೈಲ್ವೆ ನಿಲ್ದಾಣಕ್ಕೆ ಗೊಂಡ್ ಸಮುದಾಯದ ರಾಣಿ ಕಮಲಾಪತಿ ಅವರ ಹೆಸರನ್ನು ಇಡಲಾಗಿದೆ ಮತ್ತು ಪಾತಲ್ಪಾನಿ ನಿಲ್ದಾಣಕ್ಕೆ ತಾಂತ್ಯ ಮಾಮಾ ಅವರ ಹೆಸರನ್ನು ಇಡಲಾಗಿದೆ ಎಂದು ಅವರು ಹೇಳಿದರು. ತಮ್ಮ ಭಾಷಣವನ್ನು ಮುಕ್ತಾಯಗೊಸುವಾಗ ಪ್ರಧಾನಮಂತ್ರಿಯವರು, ದೇಶದಲ್ಲಿ ಮೊದಲ ಬಾರಿಗೆ ದಲಿತರು, ಹಿಂದುಳಿದ ಮತ್ತು ಬುಡಕಟ್ಟು ಸಂಪ್ರದಾಯಗಳಿಗೆ ಸೂಕ್ತ ಗೌರವ ದೊರೆಯುತ್ತಿದೆ ಎಂದು ಒತ್ತಿ ಹೇಳಿದರು. 'ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್ ಮತ್ತು ಸಬ್ ಕಾ ಪ್ರಯಾಸ್' ಸಂಕಲ್ಪದೊಂದಿಗೆ ಮುಂದುವರಿಯುವಂತೆ ಅವರು ರಾಷ್ಟ್ರದ ಜನತೆಯನ್ನು ಆಗ್ರಹಿಸಿದರು ಮತ್ತು ಸಂತ ರವಿದಾಸ್ ಜೀ ಅವರ ಬೋಧನೆಗಳು ಭಾರತದ ನಾಗರಿಕರನ್ನು ಅದರ ಪ್ರಯಾಣದಲ್ಲಿ ಒಗ್ಗೂಡಿಸುವುದನ್ನು ಮುಂದುವರಿಸುತ್ತವೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು. 

ಮಧ್ಯಪ್ರದೇಶದ ರಾಜ್ಯಪಾಲ ಶ್ರೀ ಮಂಗುಭಾಯ್ ಪಟೇಲ್, ಮಧ್ಯಪ್ರದೇಶದ ಮುಖ್ಯಮಂತ್ರಿ ಶ್ರೀ ಶಿವರಾಜ್ ಸಿಂಗ್ ಚೌಹಾಣ್, ಕೇಂದ್ರ ಸಚಿವರಾದ ಶ್ರೀ ಜ್ಯೋತಿರಾದಿತ್ಯ ಸಿಂಧಿಯಾ ಮತ್ತು ಶ್ರೀ ವೀರೇಂದ್ರ ಕುಮಾರ್, ಕೇಂದ್ರ ಸಹಾಯಕ ಸಚಿವ ಶ್ರೀ ಪ್ರಹ್ಲಾದ್ ಸಿಂಗ್ ಪಟೇಲ್, ಸಂಸತ್ ಸದಸ್ಯ ಶ್ರೀ ವಿ.ಡಿ.ಶರ್ಮಾ ಮತ್ತು ಮಧ್ಯಪ್ರದೇಶ ಸರ್ಕಾರದ ಸಚಿವರು ಇತರ ಗಣ್ಯರೊಂದಿಗೆ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಹಿನ್ನೆಲೆ:

ಪ್ರಮುಖ ಸಂತರು ಮತ್ತು ಸಮಾಜ ಸುಧಾರಕರನ್ನು ಗೌರವಿಸುವುದು ಪ್ರಧಾನ ಮಂತ್ರಿಯವರು ಮಾಡುತ್ತಿರುವ ಕೆಲಸದ ಒಂದು ವಿಶೇಷ ಲಕ್ಷಣವಾಗಿದೆ. ಸಂತ ಶಿರೋಮಣಿ ಗುರುದೇವ್ ಶ್ರೀ ರವಿದಾಸ್ ಜೀ ಸ್ಮಾರಕವನ್ನು 11.25 ಎಕರೆ ಪ್ರದೇಶದಲ್ಲಿ 100 ಕೋಟಿ ರೂ.ಗಿಂತ ಹೆಚ್ಚು ವೆಚ್ಚದಲ್ಲಿ ನಿರ್ಮಿಸಲಾಗುವುದು. ಭವ್ಯವಾದ ಸ್ಮಾರಕವು ಸಂತ ಶಿರೋಮಣಿ ಗುರುದೇವ್ ಶ್ರೀ ರವಿದಾಸ್ ಜೀ ಅವರ ಜೀವನ, ತತ್ವಶಾಸ್ತ್ರ ಮತ್ತು ಬೋಧನೆಗಳನ್ನು ಪ್ರದರ್ಶಿಸಲು ಆಕರ್ಷಕ ಕಲಾ ವಸ್ತುಸಂಗ್ರಹಾಲಯ ಮತ್ತು ಗ್ಯಾಲರಿಯನ್ನು ಹೊಂದಿರುತ್ತದೆ. ಇದು ಸ್ಮಾರಕಕ್ಕೆ ಭೇಟಿ ನೀಡುವ ಭಕ್ತರಿಗೆ ಭಕ್ತ ನಿವಾಸ್, ಭೋಜನಾಲಯ ಮುಂತಾದ ಸೌಲಭ್ಯಗಳನ್ನು ಸಹ ಹೊಂದಿರುತ್ತದೆ.

ಪ್ರಧಾನಮಂತ್ರಿಯವರು ಕೋಟಾ-ಬಿನಾ ರೈಲು ಮಾರ್ಗದ ಡಬ್ಲಿಂಗ್ ಪೂರ್ಣಗೊಳಿಸುವ ಯೋಜನೆಯನ್ನು ರಾಷ್ಟ್ರಕ್ಕೆ ಸಮರ್ಪಿಸಿದರು. 2475 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ನಿರ್ಮಾಣವಾದ  ಈ ಯೋಜನೆಯು ರಾಜಸ್ಥಾನದ ಕೋಟಾ ಮತ್ತು ಬರಾನ್ ಜಿಲ್ಲೆಗಳು ಮತ್ತು ಮಧ್ಯಪ್ರದೇಶದ ಗುನಾ, ಅಶೋಕನಗರ ಮತ್ತು ಸಾಗರ್ ಜಿಲ್ಲೆಯ ಮೂಲಕ ಹಾದುಹೋಗುತ್ತದೆ. ಹೆಚ್ಚುವರಿ ರೈಲು ಮಾರ್ಗವು ಉತ್ತಮ ಸಂಚಾರದ/ಚಲನಶೀಲತೆಯ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಮತ್ತು ಮಾರ್ಗದಲ್ಲಿ ರೈಲು ವೇಗವನ್ನು ಸುಧಾರಿಸಲು ಸಹಾಯ ಮಾಡುತ್ತದೆ.

ಪ್ರಧಾನಮಂತ್ರಿಯವರು 1580 ಕೋಟಿ ರೂ.ಗೂ ಅಧಿಕ ವೆಚ್ಚದ ಎರಡು ರಸ್ತೆ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು. ಇವುಗಳಲ್ಲಿ ಮೊರಿಕೋರಿ - ವಿದಿಶಾ - ಹಿನೋಟಿಯಾವನ್ನು ಸಂಪರ್ಕಿಸುವ ಚತುಷ್ಪಥ ರಸ್ತೆ ಯೋಜನೆ ಮತ್ತು ಹಿನೋಟಿಯಾವನ್ನು ಮೆಹ್ಲುವಾಗೆ ಸಂಪರ್ಕಿಸುವ ರಸ್ತೆ ಯೋಜನೆ ಸೇರಿವೆ

 

मध्य प्रदेश के सागर में संत रविदास जी के मंदिर तथा स्मारक के भूमिपूजन एवं अन्य विकास कार्यों के लिए राज्य के लोगों को कोटि-कोटि शुभकामनाएं। https://t.co/L8Iil0Fmc6

— Narendra Modi (@narendramodi) August 12, 2023

Sant Ravidas Ji awakened the society. pic.twitter.com/hOMaxWJf1m

— PMO India (@PMOIndia) August 12, 2023

आज आजादी के अमृतकाल में हम देश को गरीबी और भूख से मुक्त करने के लिए प्रयास कर रहे हैं। pic.twitter.com/SiaVrgoNU6

— PMO India (@PMOIndia) August 12, 2023

Our focus is on welfare of the poor and empowerment of every section of society. pic.twitter.com/BNDtQwKZ5b

— PMO India (@PMOIndia) August 12, 2023

आज देश का दलित हो, वंचित हो, पिछड़ा और आदिवासी हो, हमारी सरकार इन्हें उचित सम्मान दे रही है, नए अवसर दे रही है। pic.twitter.com/bRnkImOI8h

— PMO India (@PMOIndia) August 12, 2023

 

***



(Release ID: 1948290) Visitor Counter : 126