ಕಲ್ಲಿದ್ದಲು ಸಚಿವಾಲಯ
ಕಲ್ಲಿದ್ದಲು ಕೊರತೆ ಇಲ್ಲ; ಜೂನ್ 2023 ರವರೆಗೆ ದೇಶೀಯ ಉತ್ಪಾದನೆಯಲ್ಲಿ 8.51% ಹೆಚ್ಚಳ
Posted On:
24 JUL 2023 2:42PM by PIB Bengaluru
ಕಳೆದ ಮೂರು ವರ್ಷಗಳಿಂದ ದೇಶದಲ್ಲಿ ಕಲ್ಲಿದ್ದಲು ಉತ್ಪಾದನೆ, ಪೂರೈಕೆ ಮತ್ತು ಬೇಡಿಕೆ/ ಬಳಕೆಗಳ ವಿವರಗಳು ಈ ಕೆಳಗಿನಂತಿವೆ:
[ದಶಲಕ್ಷಗಳಲ್ಲಿ ಅಂಕಿಅಂಶಗಳು(ಎಂ.ಟಿ)]
|
ವರ್ಷ
|
2020-21
|
2021-22
|
2022-23*
|
ಒಟ್ಟು ದೇಶೀಯ ಕಲ್ಲಿದ್ದಲು ಪೂರೈಕೆ (ಎ)
|
690.88
|
819.21
|
877.36
|
ಒಟ್ಟು ಆಮದು (ಬಿ)
|
215.25
|
208.62
|
237.66
|
ಒಟ್ಟು ಬಳಕೆ / ಬೇಡಿಕೆ (ಎ+ಬಿ)
|
906.13
|
1027.83
|
1115.02
|
* ತಾತ್ಕಾಲಿಕ ಅಂದಾಜು
ಕಳೆದ ಕೆಲವು ವರ್ಷಗಳಲ್ಲಿ ಕಲ್ಲಿದ್ದಲು ಉತ್ಪಾದನೆಯಲ್ಲಿ ಉತ್ತಮ ಏರಿಕೆ ಕಂಡುಬಂದಿದೆ. ಅಖಿಲ ಭಾರತ ಮಟ್ಟದಲ್ಲಿ 2022-23 ರಲ್ಲಿ 893.19 ಎಂ.ಟಿ. ಕಲ್ಲಿದ್ದಲು ಉತ್ಪಾದನೆಯಾಗಿದ್ದು, 2013-14 ಸಾಲಿನ 565.77 ಎಂ.ಟಿ. ಕಲ್ಲಿದ್ದಲು ಉತ್ಪಾದನೆಗೆ ಹೋಲಿಸಿದರೆ ಇದು ಸುಮಾರು 58% ನಷ್ಟು ಹಚ್ಚಳದ ಬೆಳವಣಿಗೆಯಾಗಿದೆ.
ಪ್ರಸ್ತುತ ಇರುವ ಆಮದು ನೀತಿಯ ಪ್ರಕಾರ, ಕಲ್ಲಿದ್ದಲನ್ನು ಓಪನ್ ಜನರಲ್ ಲೈಸೆನ್ಸ್ (ಒಜಿಎಲ್) ಅಡಿಯಲ್ಲಿ ಇರಿಸಲಾಗುತ್ತದೆ, ಹಾಗಾಗಿ ಅನ್ವಯವಾಗುವ ಸೂಕ್ತ ಸುಂಕಗಳನ್ನು ಪಾವತಿಸಿ, ತಮ್ಮ ಒಪ್ಪಂದದ ಬೆಲೆಗಳ ಪ್ರಕಾರ ಗ್ರಾಹಕರು ತಮ್ಮ ಆಯ್ಕೆಯ ಮೂಲದಿಂದ ಕಲ್ಲಿದ್ದಲನ್ನು ಆಮದು ಮಾಡಿಕೊಳ್ಳಲು ಮುಕ್ತರಾಗಿದ್ದಾರೆ.
ದೇಶದಲ್ಲಿ ಕಲ್ಲಿದ್ದಲು ಕೊರತೆ ಇಲ್ಲ. ದೇಶದಲ್ಲಿ ಕಲ್ಲಿದ್ದಲಿನ ಬಹುಪಾಲು ಅಗತ್ಯವನ್ನು ಸ್ಥಳೀಯ ಉತ್ಪಾದನೆ / ಪೂರೈಕೆಯ ಮೂಲಕ ಪೂರೈಸಲಾಗುತ್ತದೆ. ಅಖಿಲ ಭಾರತ ಮಟ್ಟದಲ್ಲಿ 2021-2022 ರ 778.21 ಎಂ.ಟಿ. ಕಲ್ಲಿದ್ದಲು ಉತ್ಪಾದನೆಗೆ ಹೋಲಿಸಿದರೆ 2022-2023 ರಲ್ಲಿ ಕಲ್ಲಿದ್ದಲು ಉತ್ಪಾದನೆಯು 893.19 ಎಂ.ಟಿ. ಆಗಿದ್ದು, ಇದು ಸುಮಾರು 14.7 % ಹೆಚ್ಚಳದ ಬೆಳವಣಿಗೆಯಾಗಿದೆ. ಪ್ರಸಕ್ತ ವರ್ಷದಲ್ಲಿ ಜೂನ್ 2023 ರವರೆಗಿನ ದೇಶೀಯ ಕಲ್ಲಿದ್ದಲು ಉತ್ಪಾದನೆಯು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ 8.51% ಕ್ಕಿಂತ ಹೆಚ್ಚಾಗಿದೆ.
ಹಸಿರು ಕಲ್ಲಿದ್ದಲು ಗಣಿಗಾರಿಕೆಯನ್ನು ಉತ್ತೇಜಿಸಲು ಕಲ್ಲಿದ್ದಲು ಕಂಪನಿಗಳು ಈ ಕೆಳಗಿನ ಕ್ರಮಗಳನ್ನು ತೆಗೆದುಕೊಳ್ಳುತ್ತಿವೆ:
i. ಮಾಲಿನ್ಯದ ಪರಿಣಾಮವನ್ನು ಕಡಿಮೆ ಮಾಡಲು ಆಧುನಿಕ ತಂತ್ರಜ್ಞಾನದ ಅಳವಡಿಕೆ.
ii ಕಲ್ಲಿದ್ದಲು ಕಂಪನಿಗಳು ಪ್ರತಿ ವರ್ಷ ವ್ಯಾಪಕವಾದ ಮರ ನೆಡುವ ಕಾರ್ಯಕ್ರಮವನ್ನು ಕೈಗೊಳ್ಳುತ್ತವೆ. ಅರಣ್ಯೀಕರಣವು ಹೊಸ ಜೈವಿಕ ವೈವಿಧ್ಯತೆ ಮತ್ತು ಪರಿಸರ ವ್ಯವಸ್ಥೆಯ ಜೊತೆಗೆ ಹೊಸ ಅರಣ್ಯ ಪ್ರದೇಶದ ಸ್ಥಾಪನೆಗೆ ಕಾರಣವಾಗಿದೆ.
iii ಪರಿಸರ ಉದ್ಯಾನವನಗಳ ರಚನೆಯಿಂದ ಜೈವಿಕ ವೈವಿಧ್ಯತೆಯನ್ನು ಸಂರಕ್ಷಿಸುವ ಪ್ರಯತ್ನಗಳು.
iv. ಕೈಗಾರಿಕಾ ಮತ್ತು ಸಮುದಾಯದ ಬಳಕೆಗಾಗಿ ಗಣಿ ನೀರಿನ ಗರಿಷ್ಠ ಬಳಕೆ.
v. ಕಲ್ಲಿದ್ದಲು ಸಾಗಣೆ ಮತ್ತು ಲೋಡಿಂಗ್ ವ್ಯವಸ್ಥೆಗಾಗಿ ಗಣಿಗಾರಿಕೆಯಿಂದ ರವಾನೆ ತನಕದ ಸಂಪರ್ಕ (ಫಸ್ಟ್ ಮೈಲ್ ಕನೆಕ್ಟಿವಿಟಿ) ಯೋಜನೆಗಳ ಪರಿಚಯ.
vi. ಸಂಸ್ಕರಣೆ ಮತ್ತು ಮರಳು ತೆಗೆಯುವ ಮೂಲಕ ಅಧಿಕ ಹೊರೆಯ (ಒಬಿ) ಲಾಭದಾಯಕ ಬಳಕೆಗಾಗಿ ಮರಳು ಬೇರ್ಪಡಿಸುವ ಘಟಕಗಳ ಸ್ಥಾಪನೆ. ಇದು ಮರಳಿನ ವಾಣಿಜ್ಯ ಮತ್ತು ಆಂತರಿಕ ಬಳಕೆಯನ್ನು ಸುಗಮಗೊಳಿಸುತ್ತದೆ ಮತ್ತು ನದಿಯಿಂದ ಮರಳು ತೆಗೆಯುವಿಕೆಯನ್ನು ಸರಾಗಗೊಳಿಸುವ ಮೂಲಕ ಪರಿಸರವನ್ನು ರಕ್ಷಿಸುತ್ತದೆ.
vii. ಕೋಲ್ ಇಂಡಿಯಾ ಲಿಮಿಟೆಡ್ ಸಂಸ್ಥೆಯು ಮುಂಬರುವ ವರ್ಷಗಳಲ್ಲಿ 3000 ದಶಲಕ್ಷವಾಟ್ ಸೌರ ವಿದ್ಯುತ್ ಉತ್ಪಾದನಾ ಯೋಜನೆಗಳನ್ನು ಸ್ಥಾಪಿಸಲು ಕಾರ್ಯಯೋಜನೆ ರೂಪಿಸಿದೆ ಮತ್ತು ಈಗಾಗಲೇ 11 ದಶಲಕ್ಷವಾಟ್ ಗಿಂತ ಹೆಚ್ಚು ಸೌರ ವಿದ್ಯುತ್ ಉತ್ಪಾದನೆಯ ಸ್ಥಾವರಗಳನ್ನು ಸ್ಥಾಪಿಸಿದೆ. ಎಸ್.ಸಿ.ಸಿ.ಎಲ್. ತನ್ನ ಗಣಿಗಾರಿಕಾ ಪ್ರದೇಶದಲ್ಲಿ 224 ದಶಲಕ್ಷವಾಟ್ ಸಾಮರ್ಥ್ಯದ ಸೌರ ವಿದ್ಯುತ್ ಉತ್ಪಾದನಾ ಸ್ಥಾವರಗಳನ್ನು ಸ್ಥಾಪಿಸಿದೆ ಮತ್ತು 556 ದಶಲಕ್ಷವಾಟ್ ಗಳ ಸಂಚಿತ ಸೌರ ವಿದ್ಯುತ್ ಸ್ಥಾವರಗಳನ್ನು ಸ್ಥಾಪಿಸುವ ಮೂಲಕ 2025-26 ರಲ್ಲಿ "ನೆಟ್ ಜೀರೋ ಎನರ್ಜಿ" ಆಗಲು ಯೋಜಿಸಿದೆ.
viii. ಕೋಲ್ ಇಂಡಿಯಾ ಲಿಮಿಟೆಡ್ ಕಂಪನಿಯ ಅಸ್ತಿತ್ವದಲ್ಲಿರುವ ಡೀಸೆಲ್ ಡಂಪರ್ಗಳಲ್ಲಿ ಡ್ಯುಯಲ್ ಇಂಧನ (ಡೀಸೆಲ್ - ಎಲ್ಎನ್ಜಿ) ಕಾರ್ಯಾಚರಣೆಯನ್ನು ಪರಿಚಯಿಸಲು ಉಪಕ್ರಮವನ್ನು ತೆಗೆದುಕೊಂಡಿದೆ.
ix. ಕೋಲ್ ಇಂಡಿಯಾ ಲಿಮಿಟೆಡ್ ಮತ್ತು ಅದರ ಅಂಗಸಂಸ್ಥೆಗಳು ಮುಂದಿನ 5 ವರ್ಷಗಳಲ್ಲಿ (ಅಂದರೆ 2021-2026) ಇತರ ಇಂಧನ ದಕ್ಷ ಕ್ರಮಗಳನ್ನು ಯೋಜಿಸಿವೆ, ಇದರಲ್ಲಿ ಎಲ್.ಇ.ಡಿ. ದೀಪಗಳಿಂದ ಸಾಂಪ್ರದಾಯಿಕ ಬೆಳಕನ್ನು ಬದಲಾಯಿಸುವುದು, ಶಕ್ತಿ ದಕ್ಷ ಎಸಿಗಳು, ಸೂಪರ್ ಫ್ಯಾನ್, ಸಮರ್ಥ ವಾಟರ್ ಹೀಟರ್ಗಳು, ಪಂಪ್ಗಳಿಗೆ ಶಕ್ತಿ ದಕ್ಷ ಮೋಟಾರ್ಗಳು, ಬೀದಿ ದೀಪಗಳಲ್ಲಿ ಆಟೋ-ಟೈಮರ್ ಮತ್ತು ಇ-ವಾಹನಗಳ ಬಳಕೆಯನ್ನು ಅನುಷ್ಠಾನಗೊಳಿಸುವುದರಿಂದಾಗಿ ವರ್ಷಕ್ಕೆ ಸುಮಾರು 2.36 ಲಕ್ಷ ಟನ್ ಇಂಗಾಲದ ಹೊಗೆಯನ್ನು (ಕಾರ್ಬನ್ ಡೈಆಕ್ಸೈಡ್) ತಡೆಯುವುದಕ್ಕೆ ಸರಿದೂಗಿಸುತ್ತದೆ.
ಕೇಂದ್ರ ಕಲ್ಲಿದ್ದಲು, ಗಣಿ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಶ್ರೀ ಪ್ರಲ್ಹಾದ್ ಜೋಶಿ ಅವರು ಇಂದು ರಾಜ್ಯಸಭೆಯಲ್ಲಿ ಲಿಖಿತ ಉತ್ತರದಲ್ಲಿ ಈ ಮಾಹಿತಿ ನೀಡಿದ್ದಾರೆ.
****
(Release ID: 1942078)