ಸಂಸ್ಕೃತಿ ಸಚಿವಾಲಯ

ಭಾರತದ ಜಿ-20 ಅಧ್ಯಕ್ಷತೆಯ ಅಡಿಯಲ್ಲಿ ಸಂಸ್ಕೃತಿ ಕಾರ್ಯಕಾರಿ ಗುಂಪು 'ಲಂಬಾಣಿ ವಸ್ತುಗಳ ಅತಿದೊಡ್ಡ ಪ್ರದರ್ಶನʼ ದ ಗಿನ್ನೆಸ್ ವಿಶ್ವ ದಾಖಲೆಯನ್ನು ಸ್ಥಾಪಿಸಿದೆ


ಇಂದು ಹಂಪಿಯ ಯಡೂರು ಬಸವಣ್ಣ ಸಂಕೀರ್ಣದಲ್ಲಿ ಕೇಂದ್ರ ಸಚಿವ ಶ್ರೀ ಪ್ರಹ್ಲಾದ ಜೋಶಿ ವಸ್ತುಪ್ರದರ್ಶನವನ್ನು ಉದ್ಘಾಟಿಸಿದರು

Posted On: 10 JUL 2023 7:22PM by PIB Bengaluru

ಹಂಪಿಯಲ್ಲಿ ನಡೆದ ಜಿ-20 3ನೇ ಸಂಸ್ಕೃತಿ ಕಾರ್ಯಕಾರಿ ಗುಂಪು ಸಭೆಯ ‘ಸಂಸ್ಕೃತಿ ಎಲ್ಲರನ್ನೂ ಒಂದುಗೂಡಿಸುತ್ತದೆ’ಅಭಿಯಾನದಡಿಯಲ್ಲಿ, ಸಂಸ್ಕೃತಿ ಸಚಿವಾಲಯದ ಸಂಸ್ಕೃತಿ ಕಾರ್ಯಕಾರಿ ಗುಂಪು, ‘ಲಂಬಾಣಿ ವಸ್ತುಗಳ ಅತಿದೊಡ್ಡ ಪ್ರದರ್ಶನʼಕ್ಕಾಗಿ ಗಿನ್ನೆಸ್ ವಿಶ್ವ ದಾಖಲೆ ಸ್ಥಾಪಿಸಿದೆ.

ಲಂಬಾಣಿ ಕಸೂತಿ ಕಲೆಗಳ ವಿಶಿಷ್ಟ ಪ್ರದರ್ಶನವನ್ನು ಹಂಪಿಯ ಯಡೂರು ಬಸವಣ್ಣ ಸಂಕೀರ್ಣದಲ್ಲಿ ಕೇಂದ್ರ ಸಂಸದೀಯ ವ್ಯವಹಾರಗಳು ಮತ್ತು ಕಲ್ಲಿದ್ದಲು ಮತ್ತು ಗಣಿ ಸಚಿವ ಶ್ರೀ ಪ್ರಹ್ಲಾದ ಜೋಶಿ ಅವರು ಇಂದು ಉದ್ಘಾಟಿಸಿದರು.

ಪ್ರದರ್ಶನದ ವಿಷಯವು 'ಸಂಸ್ಕೃತಿ ಎಲ್ಲವನ್ನು ಒಂದುಗೂಡಿಸುತ್ತದೆ'. ಈ ಪ್ರದರ್ಶನಕ್ಕೆ 'ಥ್ರೆಡ್ಸ್ ಆಫ್ ಯೂನಿಟಿ' ಎಂದು ಹೆಸರಿಸಲಾಗಿದೆ ಮತ್ತು ಇದು ಲಂಬಾಣಿ ಕಸೂತಿಯ ಸೌಂದರ್ಯದ ಅಭಿವ್ಯಕ್ತಿಗಳು ಮತ್ತು ವಿನ್ಯಾಸಗಳನ್ನು ಆಚರಿಸುತ್ತದೆ. 

 

ಸಂಡೂರು ಕುಶಲ ಕಲಾ ಕೇಂದ್ರ (ಎಸ್ ಕೆ ಕೆ ಕೆ) ದೊಂದಿಗೆ ಸಂಯೋಜಿತವಾಗಿರುವ 450 ಕ್ಕೂ ಹೆಚ್ಚು ಲಂಬಾಣಿ ಮಹಿಳಾ ಕುಶಲಕರ್ಮಿಗಳು ಮತ್ತು ಸಾಂಸ್ಕೃತಿಕ ಅಭ್ಯಾಸಿಗಳು ಒಟ್ಟಾಗಿ ಜಿಐ-ಟ್ಯಾಗ್ ಮಾಡಿದ ಸಂಡೂರು ಲಂಬಾಣಿ ಕಸೂತಿ ಕಲೆಯನ್ನು ಬಳಸಿಕೊಂಡು 1755 ತುಣುಕುಗಳನ್ನು ಹೊಂದಿರುವ ಈ ವಸ್ತುಗಳನ್ನು ರಚಿಸಿದ್ದಾರೆ. ಈ ಗಿನ್ನೆಸ್ ವಿಶ್ವ ದಾಖಲೆಯ ಪ್ರಯತ್ನವು ಪ್ರಧಾನ ಮಂತ್ರಿಯವರ ಮಿಷನ್ ‘ಲೈಫ್ʼ(ಪರಿಸರಕ್ಕಾಗಿ ಜೀವನಶೈಲಿ) ಮತ್ತು ಪರಿಸರ ಪ್ರಜ್ಞೆಯ ಜೀವನಶೈಲಿ ಮತ್ತು ಸಂಸ್ಕೃತಿ ಕಾರ್ಯಕಾರಿ ಗುಂಪಿನ ‘ಜೀವನಕ್ಕಾಗಿ ಸಂಸ್ಕೃತಿʼ (ಕಲ್ಚರ್ ಫಾರ್ ಲೈಫ್) ಉಪಕ್ರಮವಾಗಿದೆ.  ಇದು ಸುಸ್ಥಿರತೆಯ ಕಡೆಗೆ ಒಂದು ಸಂಘಟಿತ ಕ್ರಮವಾಗಿದೆ.

 


 
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಪ್ರಹ್ಲಾದ್ ಜೋಶಿ ಅವರು ಲಂಬಾಣಿ ಕಲೆಯ ಕಸೂತಿ ಭಾರತದ ಅನೇಕ ಸಾಂಪ್ರದಾಯಿಕ ಸುಸ್ಥಿರ ಅಭ್ಯಾಸಗಳಿಗೆ ಉದಾಹರಣೆಯಾಗಿದೆ ಮತ್ತು ಈ ಸುಸ್ಥಿರ ಅಭ್ಯಾಸವು ಪ್ರಧಾನ ಮಂತ್ರಿಯವರ ಅಭಿಯಾನ, ಮಿಷನ್ 'ಲೈಫ್' (ಪರಿಸರಕ್ಕಾಗಿ ಜೀವನಶೈಲಿ) ಮತ್ತು ಸಂಸ್ಕೃತಿ ಕಾರ್ಯಕಾರಿ ಗುಂಪಿನ ʼಜೀವನಕ್ಕಾಗಿ ಸಂಸ್ಕೃತಿʼ ಉಪಕ್ರಮದೊಂದಿಗೆ ಹೊಂದಿಕೆಯಾಗುತ್ತದೆ. ಇದು ಪರಿಸರ ಪ್ರಜ್ಞೆಯ ಜೀವನಶೈಲಿಯನ್ನು ಉತ್ತೇಜಿಸುತ್ತದೆ ಮತ್ತು ಸುಸ್ಥಿರತೆಯ ಕಡೆಗೆ ಸಂಘಟಿತ ಕ್ರಮವನ್ನು ಉತ್ತೇಜಿಸುತ್ತದೆ ಎಂದು ಹೇಳಿದರು.

ಲಂಬಾಣಿ ಗಿನ್ನೆಸ್ ವಿಶ್ವ ದಾಖಲೆಯ ಈ ಯೋಜನೆಯು ಸಿಡಬ್ಲ್ಯೂಜಿ ಅಭಿಯಾನದ 'ಕಲ್ಚರ್ ಯುನೈಟ್ಸ್ ಆಲ್' ನ ಫಲಿತಾಂಶವಾಗಿದೆ, ಇದು ಮಾನವಕುಲದ ವೈವಿಧ್ಯಮಯ ಮತ್ತು ಕ್ರಿಯಾತ್ಮಕ ಸಾಂಸ್ಕೃತಿಕ ಅಭಿವ್ಯಕ್ತಿಗಳನ್ನು ಆಚರಿಸುತ್ತದೆ ಎಂದು ಅವರು ಹೇಳಿದರು,  ಕಸೂತಿಯಲ್ಲಿರುವಂತೆ, ದೊಡ್ಡ ವಸ್ತ್ರ ರೂಪಿಸಲು ವಿವಿಧ ತುಣುಕುಗಳು ಒಟ್ಟಾಗಿ ಸೇರುತ್ತವೆ, 'ಸಂಸ್ಕೃತಿಯು ಎಲ್ಲವನ್ನು ಒಂದುಗೂಡಿಸುತ್ತದೆ' ಎಂಬುದು ಪ್ರಪಂಚದ ಸಂಸ್ಕೃತಿಗಳು ವಿಭಿನ್ನವಾಗಿದ್ದರೂ ಪರಸ್ಪರ ಬೆಸೆದಿದೆ ಎಂಬುದನ್ನು ಪ್ರತಿಪಾದಿಸುತ್ತದೆ ಎಂದು ಅವರು ಹೇಳಿದರು.

ಲಂಬಾಣಿ ಕಸೂತಿಯು ವರ್ಣರಂಜಿತ ಎಳೆಗಳು, ಕನ್ನಡಿ ಕೆಲಸ ಮತ್ತು ಹೊಲಿಗೆ ಮಾದರಿಗಳ ಸಮೃದ್ಧ ಶ್ರೇಣಿಯಿಂದ ನಿರೂಪಿಸಲ್ಪಟ್ಟ ವಸ್ತ್ರಾಲಂಕಾರದ ರೋಮಾಂಚಕ ಮತ್ತು ಸಂಕೀರ್ಣವಾದ ರೂಪವಾಗಿದೆ. ಕರ್ನಾಟಕದ ಸಂಡೂರು, ಕೇರಿ ತಾಂಡಾ, ಮರಿಯಮ್ಮನಹಳ್ಳಿ, ಕದಿರಾಂಪುರ, ಸೀತಾರಾಮ ತಾಂಡಾ, ಬಿಜಾಪುರ ಮತ್ತು ಕಮಲಾಪುರದಂತಹ ಹಲವಾರು ಹಳ್ಳಿಗಳಲ್ಲಿ ಈ ಕಲಾ ಪದ್ಧತಿ ಇದೆ. ಲಂಬಾಣಿ ಸಮುದಾಯದ ನುರಿತ ಮಹಿಳೆಯರು ಪ್ರಧಾನವಾಗಿ ಎತ್ತಿಹಿಡಿಯುವ ಈ ಶ್ರೀಮಂತ ಕಸೂತಿ ಸಂಪ್ರದಾಯವು ಜೀವನೋಪಾಯ ಮತ್ತು ಪೋಷಣೆಯ ಪ್ರಮುಖ ಮೂಲವಾಗಿ ಕಾರ್ಯನಿರ್ವಹಿಸುತ್ತದೆ, ಇದು ಆರ್ಥಿಕ ಸಬಲೀಕರಣದೊಂದಿಗೆ ಜೀವನ ಪದ್ಧತಿಗಳನ್ನು ಹೆಣೆದುಕೊಂಡಿದೆ.

ಈ ಕರಕುಶಲತೆಯ ಪ್ರಚಾರವು ಭಾರತದ ಜೀವಂತ ಪರಂಪರೆಯ ಪದ್ಧತಿಯನ್ನು ಸಂರಕ್ಷಿಸುವುದಲ್ಲದೆ ಮಹಿಳೆಯರ ಆರ್ಥಿಕ ಸ್ವಾತಂತ್ರ್ಯವನ್ನು ಬೆಂಬಲಿಸುತ್ತದೆ. ಈ ಉಪಕ್ರಮವು ಸಿಡಬ್ಲ್ಯೂಜಿಯ ಮೂರನೇ ಆದ್ಯತೆಯಾದ 'ಸಾಂಸ್ಕೃತಿಕ ಮತ್ತು ಸೃಜನಾತ್ಮಕ ಉದ್ದಿಮೆಗಳ ಪ್ರಚಾರ ಮತ್ತು ಸೃಜನಾತ್ಮಕ ಆರ್ಥಿಕತೆ'ಗೆ ಸೂಕ್ತವಾಗಿದೆ, ಏಕೆಂದರೆ ಇದು ಲಂಬಾಣಿ ಕಸೂತಿಯ ಶ್ರೀಮಂತ ಕಲಾತ್ಮಕ ಸಂಪ್ರದಾಯವನ್ನು ಗುರುತಿಸುತ್ತದೆ, ಕರ್ನಾಟಕ ಮತ್ತು ಭಾರತದ ಸೃಜನಶೀಲ ಆರ್ಥಿಕತೆಯನ್ನು ಉತ್ತೇಜಿಸುತ್ತದೆ.

ಕಸೂತಿ ಕಲೆಯ ಸುಸ್ಥಿರ ಅಭ್ಯಾಸವು ಭಾರತ ಮತ್ತು ಪ್ರಪಂಚದಾದ್ಯಂತದ ಅನೇಕ ಜವಳಿ ಸಂಪ್ರದಾಯಗಳಲ್ಲಿ ಕಂಡುಬರುತ್ತದೆ. ಲಂಬಾಣಿ ಕರಕುಶಲ ಸಂಪ್ರದಾಯವು ಸುಂದರವಾದ ಬಟ್ಟೆಯನ್ನು ರಚಿಸಲು ತಿರಸ್ಕರಿಸಿದ ಬಟ್ಟೆಯ ಸಣ್ಣ ತುಂಡುಗಳನ್ನು ಕೌಶಲ್ಯದಿಂದ ಒಟ್ಟಿಗೆ ಹೊಲಿಯುವುದನ್ನು ಒಳಗೊಂಡಿರುತ್ತದೆ.

ಲಂಬಾಣಿಗಳ ಕಸೂತಿ ಸಂಪ್ರದಾಯಗಳನ್ನು ಪೂರ್ವ ಯುರೋಪ್, ಪಶ್ಚಿಮ ಮತ್ತು ಮಧ್ಯ ಏಷ್ಯಾದಾದ್ಯಂತ ಜವಳಿ ಸಂಪ್ರದಾಯಗಳೊಂದಿಗೆ ತಂತ್ರ ಮತ್ತು ಸೌಂದರ್ಯಶಾಸ್ತ್ರದ ವಿಷಯದಲ್ಲಿ ಹಂಚಿಕೊಳ್ಳಲಾಗಿದೆ. ಇದು ಐತಿಹಾಸಿಕವಾಗಿ ಅಂತಹ ಪ್ರದೇಶಗಳಲ್ಲಿ ಅಲೆಮಾರಿ ಸಮುದಾಯಗಳ ಚಲನೆಯನ್ನು ಸೂಚಿಸುತ್ತದೆ, ಇದು ಹಂಚಿಕೆಯ ಕಲಾತ್ಮಕ ಸಂಸ್ಕೃತಿಯನ್ನು ರೂಪಿಸುತ್ತದೆ. ಕರಕುಶಲತೆಯ ಮೂಲಕ ಸಂಸ್ಕೃತಿಗಳ ಈ ಅಂತರ್ ರ್ಸಂಪರ್ಕವು 'ಸಂಸ್ಕೃತಿಯು ಎಲ್ಲರನ್ನು ಒಂದುಗೂಡಿಸುತ್ತದೆ' ಎಂಬ ಅಭಿಯಾನಕ್ಕೆ ಆದರ್ಶಪ್ರಾಯವಾದ ಸಂಕೇತವಾಗಿದೆ. ಈ ಕಲಾ ಪ್ರಕಾರದ ಮೂಲಕ, ನಾವು ನಮ್ಮ ಹಂಚಿಕೆಯ ಪರಂಪರೆಯನ್ನು ಆಚರಿಸುತ್ತೇವೆ ಮತ್ತು ವೈವಿಧ್ಯಮಯ ಸಮುದಾಯಗಳ ನಡುವೆ ಸಂವಾದ ಮತ್ತು ತಿಳುವಳಿಕೆಯನ್ನು ಉತ್ತೇಜಿಸುತ್ತೇವೆ.

ನಮ್ಮ ಹಂಚಿಕೆಯ ಪರಂಪರೆಯನ್ನು ಆಚರಿಸುವ ಮೂಲಕ ಮತ್ತು ಸುಸ್ಥಿರ ಆಚರಣೆಗಳನ್ನು ಉತ್ತೇಜಿಸುವ ಮೂಲಕ, ಈ ಪ್ರದರ್ಶನವು ಸಂಸ್ಕೃತಿಗಳ ನಡುವಿನ ಏಕತೆ, ವೈವಿಧ್ಯತೆ, ಪರಸ್ಪರ ಸಂಬಂಧ ಮತ್ತು ಸಾಮರಸ್ಯದ ಸಹಬಾಳ್ವೆಗೆ ಸಾಕ್ಷಿಯಾಗಿದೆ, ಇದು ‘ವಸುಧೈವ ಕುಟುಂಬಕಂ’ ತತ್ವವನ್ನು ಒಳಗೊಂಡಿದೆ.

ಸಂಡೂರು ಕುಶಲ ಕಲಾ ಕೇಂದ್ರ (ಎಸ್ ಕೆ ಕೆ ಕೆ) ಕುರಿತು

1988 ರಲ್ಲಿ ಸೊಸೈಟಿಯಾಗಿ ನೋಂದಾಯಿಸಲ್ಪಟ್ಟ ಸಂಡೂರು ಕುಶಲ ಕಲಾ ಕೇಂದ್ರ (ಎಸ್ ಕೆ ಕೆ ಕೆ), ಸಾಂಪ್ರದಾಯಿಕ ಕರಕುಶಲ ಕಲೆಗಳನ್ನು ಪುನರುಜ್ಜೀವನಗೊಳಿಸುವ ಮತ್ತು ಕುಶಲಕರ್ಮಿಗಳ ಜೀವನೋಪಾಯವನ್ನು ಅವರ ಕೌಶಲ್ಯಗಳನ್ನು ಪೋಷಿಸುವ ಮೂಲಕ, ಅವರ ಉತ್ಪನ್ನಗಳನ್ನು ಉತ್ತೇಜಿಸುವ ಮತ್ತು ಸ್ಥಿರವಾದ ಆದಾಯವನ್ನು ಖಾತ್ರಿಪಡಿಸುವ ಗುರಿಯನ್ನು ಹೊಂದಿದೆ. ಪ್ರಸ್ತುತ, ಎಸ್ ಕೆ ಕೆ ಕೆ ಸರಿಸುಮಾರು 600 ಕುಶಲಕರ್ಮಿಗಳೊಂದಿಗೆ ಕೆಲಸ ಮಾಡುತ್ತಿದೆ ಮತ್ತು ಇಪ್ಪತ್ತು ಸ್ವ-ಸಹಾಯ ಗುಂಪುಗಳನ್ನು ಪೋಷಿಸಿದೆ. ಇದು ಹಲವಾರು ವರ್ಷಗಳಲ್ಲಿ ವಿಕಸನಗೊಂಡಿದೆ ಮತ್ತು ಲಂಬಾಣಿ ಕರಕುಶಲತೆಗೆ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆಯನ್ನು ತಂದುಕೊಟ್ಟಿದೆ.

ಹಲವು ವರ್ಷಗಳಲ್ಲಿ, ಎಸ್ ಕೆ ಕೆ ಕೆ ಲಂಬಾಣಿ ಕರಕುಶಲತೆಗೆ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮನ್ನಣೆಯನ್ನು ಗಳಿಸಿದೆ, 2004 ಮತ್ತು 2012 ರಲ್ಲಿ ದಕ್ಷಿಣ ಏಷ್ಯಾದಲ್ಲಿ ಕರಕುಶಲತೆಗಾಗಿ ಪ್ರತಿಷ್ಠಿತ ಯುನೆಸ್ಕೊ ಸೀಲ್ ಆಫ್ ಎಕ್ಸಲೆನ್ಸ್ ಅನ್ನು ಗಳಿಸಿದೆ. 2008 ರಲ್ಲಿ 'ಸಂಡೂರು ಲಂಬಾಣಿ ಕೈ ಕಸೂತಿ' ಕಲೆಗಾಗಿ ಜಿಐ (ಭೌಗೋಳಿಕ ಗುರುತು) ಟ್ಯಾಗ್ ಅನ್ನು ಪಡೆದುಕೊಂಡಿತು.

****



(Release ID: 1938532) Visitor Counter : 196


Read this release in: English , Urdu , Hindi , Marathi